Tag: National Highways Authority of India

  • ಗರಿಷ್ಠ ಮಟ್ಟ ತಲುಪಿದ ಫಾಸ್ಟ್‌ಟ್ಯಾಗ್  ಟೋಲ್ – ಏಪ್ರಿಲ್‍ನಲ್ಲಿ 193.15 ಕೋಟಿ ಸಂಗ್ರಹ

    ಗರಿಷ್ಠ ಮಟ್ಟ ತಲುಪಿದ ಫಾಸ್ಟ್‌ಟ್ಯಾಗ್  ಟೋಲ್ – ಏಪ್ರಿಲ್‍ನಲ್ಲಿ 193.15 ಕೋಟಿ ಸಂಗ್ರಹ

    ನವದೆಹಲಿ: ಫಾಸ್ಟ್‌ಟ್ಯಾಗ್ (FASTag) ದೈನಂದಿನ ಟೋಲ್ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (National Highways Authority of India) ಮಂಗಳವಾರ ತಿಳಿಸಿದೆ.

    ಫಾಸ್ಟ್‌ಟ್ಯಾಗ್  ವ್ಯವಸ್ಥೆಯ ಮೂಲಕ ದೈನಂದಿನ ಟೋಲ್ ಸಂಗ್ರಹವು ಏ. 29 ರಂದು ಸಾರ್ವಕಾಲಿಕ ಗರಿಷ್ಠ 193.15 ಕೋಟಿ ರೂ. ತಲುಪಿದೆ. ಒಂದೇ ದಿನದಲ್ಲಿ 1.16 ಕೋಟಿ ವಹಿವಾಟುಗಳು ದಾಖಲಾಗಿದೆ. ಭಾರತದಲ್ಲಿ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯ ಅನುಷ್ಠಾನ ಉತ್ತಮ ಬೆಳವಣಿಗೆಯೊಂದಿಗೆ ಯಶಸ್ಸನ್ನು ಕಂಡಿದೆ ಎಂದು ಪ್ರಾಧಿಕಾರ (NHAI) ಹೇಳಿಕೊಂಡಿದೆ. ಇದನ್ನೂ ಓದಿ: ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೇಡ್ – ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ

    ದೇಶದಾದ್ಯಂತ 50 ಕ್ಕೂ ಹೆಚ್ಚು ನಗರಗಳಲ್ಲಿ 140 ಕ್ಕೂ ಹೆಚ್ಚು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕ ಪಾವತಿಗೆ ಫಾಸ್ಟ್‍ಟ್ಯಾಗ್ ವ್ಯವಸ್ಥೆ ಮಾಡಿದೆ. ಅಲ್ಲದೆ ತಡೆರಹಿತ ಪ್ರಯಾಣ ಮತ್ತು ಸುರಕ್ಷಿತ ಪಾವತಿಯನ್ನು ಸುಗಮಗೊಳಿಸಿದೆ. ಫಾಸ್ಟ್‌ಟ್ಯಾಗ್ ಕಾರ್ಯಕ್ರಮದ ಅಡಿಯಲ್ಲಿ ಟೋಲ್ ಪ್ಲಾಜಾಗಳ (Toll Plazas) ಸಂಖ್ಯೆಯು 339 ರಾಜ್ಯ ಟೋಲ್ ಪ್ಲಾಜಾಗಳನ್ನು ಒಳಗೊಂಡಂತೆ 770 ರಿಂದ 1,228 ಕ್ಕೆ ಏರಿಕೆ ಮಾಡಲಾಗಿದೆ.

    ಹೆದ್ದಾರಿ‌ (Expressways) ಬಳಕೆದಾರರಿಂದ ಫಾಸ್ಟ್‌ಟ್ಯಾಗ್‌ನ ಅಳವಡಿಕೆ ಟೋಲ್ ಕಾರ್ಯಾಚರಣೆಗಳ ದಕ್ಷತೆಯನ್ನು ಹೆಚ್ಚಿಸಿದೆ. ಭಾರತದ ಹೆದ್ದಾರಿ ಮೂಲಸೌಕರ್ಯದಲ್ಲಿ ಮತ್ತಷ್ಟು ಹೂಡಿಕೆ ಅಗತ್ಯವಿದೆ ಎಂದು ಪ್ರಾಧಿಕಾರ ಹೇಳಿದೆ.

    ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣಾ ಬೂತ್‍ಗಳಲ್ಲಿ ವಾಹನ ಸವಾರಾರು ನಿಲ್ಲಿಸದೆಯೇ ಟೋಲ್ ಶುಲ್ಕವನ್ನು ಪಾವತಿಸಲು ಫಾಸ್ಟ್‌ಟ್ಯಾಗ್ ಅನುಕೂಲವಾಗಿದೆ. ಫೆ.2021 ರಲ್ಲಿ ಸರ್ಕಾರ ಕಮರ್ಶಿಯಲ್ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿತು.

    ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಿರುವ ಕಾರಣ ಟೋಲ್ ಸಂಗ್ರಹ ಹೆಚ್ಚಾಗುತ್ತಿದೆ. 2019 ರಲ್ಲಿ ಒಂದು ದಿನದಲ್ಲಿ 70 ಕೋಟಿ ರೂ. ಸಂಗ್ರಹವಾಗುತ್ತಿದ್ದರೆ 2020ರಲ್ಲಿ ಇದು 92 ಕೋಟಿ ರೂಗಳಿಗೆ ಏರಿಕೆಯಾಗಿತ್ತು.  ಇದನ್ನೂ ಓದಿ: ಹಾರಾಟ ನಿಲ್ಲಿಸಿದ ಗೋ ಫಸ್ಟ್ – ಕಂಪನಿ ದಿವಾಳಿಯಾಗಿದ್ದು ಯಾಕೆ?

  • ಆಕ್ಸಿಜನ್ ಟ್ಯಾಂಕರ್‌ಗಳಿಗೆ ಟೋಲ್ ವಿನಾಯಿತಿ- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಘೋಷಣೆ

    ಆಕ್ಸಿಜನ್ ಟ್ಯಾಂಕರ್‌ಗಳಿಗೆ ಟೋಲ್ ವಿನಾಯಿತಿ- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಘೋಷಣೆ

    ನವದೆಹಲಿ: ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಹಾಗೂ ಕಂಟೇರ್ ಗಳಿಗೆ ಎಲ್ಲ ರಾಷ್ಟ್ರೀಯ ಹೆದ್ದಾರಿ ಟೋಲ್‍ಗಳಲ್ಲಿ ಶುಲ್ಕ ವಿನಾಯಿತಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ.

    ಈ ಕುರಿತು ಪ್ರಕಟಣೆ ಹೊರಡಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ಸ್ ಹಾಗೂ ಕಂಟೇನರ್‍ಗಳನ್ನು ಅಂಬುಲೆನ್ಸ್ ಸೇರಿದಂತೆ ಇತರೆ ತುರ್ತು ವಾಹನಗಳಂತೆ ಪರಿಗಣಿಸಬೇಕು. ಇನ್ನು ಎರಡು ತಿಂಗಳುಗಳ ಕಾಲ ಅಥವಾ ಮುಂದಿನ ಆದೇಶದವರೆಗೆ ಟೋಲ್ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

    ಕೊರೊನಾ ಮಹಾಮಾರಿ ತಾಂಡವಾಡುತ್ತಿರುವ ಹಿನ್ನೆಲೆ ದೇಶಾದ್ಯಂತ ಆಕ್ಸಿಜನ್‍ಗೆ ಬೇಡಿಕೆ ಹೆಚ್ಚಿದೆ. ಹೀಗಾಗಿ ಈ ವಾಹನಗಳಿಗೆ ಯಾವುದೇ ರೀತಿಯ ಅಡ್ಡಿಯಾಗದಂತೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

    ಮೆಡಿಕಲ್ ಆಕ್ಸಿಜನ್ ಕೊಂಡೊಯ್ಯುವ ಟ್ಯಾಂಕರ್ ಹಾಗೂ ಕಂಟೇನರ್‍ಗಳಿಗೆ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಮಾರ್ಗವನ್ನು ಒದಗಿಸಲಾಗಿದೆ. ಆಕ್ಸಿಜನ್ ಟ್ಯಾಂಕರ್‍ಗಳು ಟೋಲ್ ಹಣ ನೀಡದೆ ಉಚಿತವಾಗಿ ಸಂಚರಿಸಬಹುದಾಗಿದೆ. ಅಲ್ಲದೆ ಹೆದ್ದಾರಿ ಸಿಬ್ಬಂದಿ ಸೇರಿ ಎಲ್ಲ ರೀತಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಸಹ ಮೆಡಿಕಲ್ ಆಕ್ಸಿಜನ್ ವಾಹನಗಳ ಸಂಚಾರಕ್ಕೆ ತಡೆಯಾಗದಂತೆ ದಾರಿ ಮಾಡಿಕೊಡಬೇಕು ಎಂದು ಹೆದ್ದಾರಿ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • ವಕೀಲರಿಗೆ ಟೋಲ್ ವಿನಾಯತಿ- ವೈರಲ್ ಸುದ್ದಿಯ ಸತ್ಯ

    ವಕೀಲರಿಗೆ ಟೋಲ್ ವಿನಾಯತಿ- ವೈರಲ್ ಸುದ್ದಿಯ ಸತ್ಯ

    ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ವಕೀಲರಿಗೆ ದೇಶಾದ್ಯಂತ ಟೋಲ್ ಫೀ ವಿನಾಯತಿ ನೀಡಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

    ಈ ಸಂಬಂಧ ಐಎಎಸ್ ಅಧಿಕಾರಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಲಾಯದ ಖಾಸಗಿ ಕಾರ್ಯದರ್ಶಿ ಸಂಕೇತ್ ಭೋಂಡ್ವೆ ಅವರು ವಕೀಲ ರವಿಗೌಡ ಅವರಿಗೆ ಡಿಸೆಂಬರ್ 3ರಂದು ಪತ್ರ ಬರೆದಿದ್ದಾರೆ. ಈ ಮೂಲಕ ಡಿಸೆಂಬರ್ 1ರಿಂದ ಅನ್ವಯವಾಗುವಂತೆ ಭಾರತದ ಎಲ್ಲಾ ರಾಜ್ಯಗಳ ವಕೀಲರಿಗೆ ದೇಶಾದ್ಯಂತ ಟೋಲ್ ಫೀ ವಿನಾಯತಿ ನೀಡಲಾಗಿದೆ. ಹೀಗಾಗಿ ವಕೀಲರು ಟೋಲ್ ಪ್ಲಾಜಾಗಳಲ್ಲಿ ತಮ್ಮ ಐಡಿ ಕಾರ್ಡ್ ತೋರಿಸಿದರೆ ಸಾಕು ಎಂದು ಪತ್ರದಲ್ಲಿ ಬರೆಯಲಾಗಿತ್ತು.

    ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪತ್ರ ಎನ್ನಲಾಗಿದ್ದ ಪತ್ರವು ವಾಟ್ಸಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಅಸಲಿಗೆ ಇದು ಸುಳ್ಳು ಪತ್ರವಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟ್ವೀಟ್ ಮೂಲಕ ಡಿಸೆಂಬರ್ 11ರಂದು ಸ್ಪಷ್ಟನೆ ನೀಡಿದ್ದು, ವಕೀಲರಿಗೆ ಟೋಲ್ ಪ್ಲಾಜಾಗಳಲ್ಲಿ ಯಾವುದೇ ರೀತಿಯ ಶುಲ್ಕ ವಿನಾಯತಿ ನೀಡಿಲ್ಲ ಎಂದು ತಿಳಿಸಿದೆ.

    ಈ ಕುರಿತು ಉತ್ತರ ನೀಡುವಂತೆ ಭೋಂಡ್ವೆ ಅವರು ಡಿಸೆಂಬರ್ 3ರಂದು ವಕೀಲ ಆರ್.ಬಾಸ್ಕರದಾಸ್ ಅವರಿಗೆ ಪತ್ರ ಬರೆದಿದ್ದರು. ಸಚಿವಾಲಯ ಕೇಳಿದ್ದ ಪ್ರಶ್ನೆಗಳಿಗೆ ಬಾಸ್ಕರದಾಸ್ ಅವರು ಉತ್ತರಿಸಿದ ಪತ್ರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ರವಾನಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಮುಂದಿನ ಕ್ರಮ ಜರುಗಿಸಲಿದೆ ಎಂದು ಭೋಡ್ವೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.