Tag: National Highway Authority

  • ಡಾಬಸ್ ಪೇಟೆ-ಹೊಸಕೋಟೆ ರಸ್ತೆ ಚತುಷ್ಪತ ಹೆದ್ದಾರಿ ಎರಡು ವರ್ಷದಲ್ಲಿ ಪೂರ್ಣ

    ಡಾಬಸ್ ಪೇಟೆ-ಹೊಸಕೋಟೆ ರಸ್ತೆ ಚತುಷ್ಪತ ಹೆದ್ದಾರಿ ಎರಡು ವರ್ಷದಲ್ಲಿ ಪೂರ್ಣ

    -ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ

    ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸಕೋಟೆಯಿಂದ ಡಾಬಸ್ ಪೇಟೆ ವರೆಗಿನ ರಾಷ್ಟ್ರೀಯ ಹೆದ್ದಾರಿ 207 ರ ನಾಲ್ಕುಪಥದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಡಿಯಲ್ಲಿ ಎರಡು ಪ್ಯಾಕೇಜ್ ಗಳಲ್ಲಿ ಸುಮಾರು ರೂ. 2.8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ದೊಡ್ಡಬಳ್ಳಾಪುರ ಬೈಪಾಸ್ ನಿಂದ ಹೊಸಕೋಟೆ ವರೆಗೆ 42 ಕಿ.ಮೀ ಸುಮಾರು 1317.74 ಕೋಟಿ ರೂ. ಅಂದಾಜು ವೆಚ್ಚ ಹಾಗೂ ಡಾಬಸ್ ಪೇಟೆಯಿಂದ ದೊಡ್ಡಬಳ್ಳಾಪುರ ಬೈಪಾಸ್ ವರೆಗೆ ಸುಮಾರು 67 ರಿಂದ 80 ಕಿ.ಮೀ 1438.14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ವಾಗುತ್ತಿದೆ. ಬಹುದಿನಗಳ ಕನಸು ನನಾಸಾಗಲು ಎರಡು ವರ್ಷ ಬೇಕಾಗಿದೆ.

    ಇನ್ನೂ ಎರಡು ದ್ವಿಪಥ ರಸ್ತೆ ಚತುಷ್ಪತ ರಸ್ತೆಯಾಗಲೂ 24 ತಿಂಗಳು ಎರಡು ವರ್ಷ ಕಾಮಗಾರಿ ಸಮಯವಿದ್ದು, ಅವಳಿ ಕಾಮಗಾರಿಯನ್ನು ಶಂಕರನಾರಾಯಣ ಡಾಬಸ್ ಪೇಟೆ ಎಕ್ಸ್ ಪ್ರೆಸ್ ಹೈವೇ, ದೊಡ್ಡಬಳ್ಳಾಪುರ ಹೊಸಕೋಟೆ ಹೈವೇ ಪ್ರೈ.ಲಿಮಿಟೆಡ್ ಕಾಮಗಾರಿ ಗುತ್ತಿಗೆ ಪಡೆದಿದ್ದು, ದೇವನಹಳ್ಳಿಯ ನಲ್ಲೂರು ಹಾಗೂ ತ್ಯಾಮಗೊಂಡ್ಲು ಬಳಿಯ ಹುಲಿಕುಂಟೆಯಲ್ಲಿ ಎರಡು ಟೋಲ್ ಫ್ಲಾಜ ಸಿದ್ದವಾಗಲಿದೆ ಎಂದು  ಸೋಮಶೇಖರ್ ಮಾಹಿತಿ ನೀಡಿದ್ದಾರೆ.

    ಚತುಷ್ಪತ ರಸ್ತೆ ಈ ಮೊದಲು ಏಕಪಥವಾಗಿತ್ತು. ಇದೀಗ ಈ ಕಾಮಗಾರಿ ಶೇಕಡ 10 ರಷ್ಟು ಮುಗಿದಿದ್ದು, ಉಳಿದ ತೊಂಬತ್ತು ಭಾಗ ನಿರ್ಮಾಣವಾಗುತ್ತಿದೆ. ಒಟ್ಟಾರೆ 122 ಕಿ.ಮೀ ರಸ್ತೆ 3,972 ಸುಮಾರು ನಾಲ್ಕು ಸಾವಿರ ಮರಗಳ ಮಾರಣಹೋಮವಾಗಿರುವುದು ದುಃಖದ ಸಂಗತಿಯೇ, ಆದರೆ ಇದೀಗ ರಸ್ತೆ ಇಕ್ಕೆಲಗಳಲ್ಲಿ ಸುಮಾರು 16,000 ಸಸಿಗಳನ್ನು ರಸ್ತೆ ನಿರ್ಮಾಣದ ನಂತರ ಹಾಕಲು ಅರಣ್ಯ ಇಲಾಖೆಯ ಅನುಮತಿಯನ್ನು ಹೆದ್ದಾರಿ ಪ್ರಾಧಿಕಾರ ಪಡೆದಿದೆ.

    ಬಹುತೇಕ 2022 ರ ಡಿಸೆಂಬರ್ ವೇಳೆಗೆ ಹೆದ್ದಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕೂಡ ಗಣನೀಯವಾಗಿ ಇಳಿಕೆಯಾಗಲಿದೆ.

  • ಚರಂಡಿ ಕಾಮಗಾರಿ ವಿಳಂಬ, ಕೊಪ್ಪಳದಲ್ಲಿ ಹೋಟೆಲ್‍ಗಳು ಬಂದ್ – ವ್ಯಾಪಾರಸ್ಥರು, ಸಾರ್ವಜನಿಕರ ಪರದಾಟ

    ಚರಂಡಿ ಕಾಮಗಾರಿ ವಿಳಂಬ, ಕೊಪ್ಪಳದಲ್ಲಿ ಹೋಟೆಲ್‍ಗಳು ಬಂದ್ – ವ್ಯಾಪಾರಸ್ಥರು, ಸಾರ್ವಜನಿಕರ ಪರದಾಟ

    ಕೊಪ್ಪಳ: ನಗರದಲ್ಲಿ ಒಂದಲ್ಲ ಒಂದು ಸಮಸ್ಯೆ ಜನರನ್ನು ಕಾಡುತ್ತಿದ್ದು, ದೂಳಿನ ಸಮಸ್ಯೆಯಿಂದ ಕೊಪ್ಪಳ ಜನತೆ ಕಂಗೆಟ್ಟಿದ್ದರು. ಇದೀಗ ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ.

    ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರಿಂದ ಸಿಸಿ ರಸ್ತೆ ಆಯಿತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಇದೀಗ ಚರಂಡಿ ಕಾಮಗಾರಿ ಪ್ರಾರಂಭವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದೆ ಚರಂಡಿಗಳು ಹಳ್ಳಹಿಡಿದಿವೆ. ಸದ್ಯ ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಚರಂಡಿ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರದವರು ಕೈಗೆತ್ತಿಕೊಂಡಿದ್ದು, ನಾನಾ ಸಮಸ್ಯೆಯಿಂದ ಚರಂಡಿ ಕಾಮಗಾರಿ ವಿಳಂಬವಾಗುತ್ತಿದೆ.

    ಇದರಿಂದ ಸಾರ್ವಜನಿಕರು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಚರಂಡಿಯ ದುರ್ವಾಸನೆಯಿಂದ ರಸ್ತೆ ಮೇಲೆ ಓಡಾಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು, ವ್ಯಾಪಾರಸ್ಥರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಮನೆಯಲ್ಲೇ ಕೂರುವಂತಾಗಿದೆ. ಇದಕ್ಕೆ ಕೊಪ್ಪಳ ನಗರಸಭೆ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದೂರುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಚರಂಡಿ ಕಾಮಗಾರಿಗೆ ಸಹಾಯ ಸಹಕಾರ ನೀಡುತ್ತಿಲ್ಲ. ಹೀಗಾಗಿ ಚರಂಡಿ ಕಾಮಗಾರಿಗೆ ತೊಂದರೆಯಾಗುತ್ತಿದೆ ದೂರಿದ್ದಾರೆ.

    ಈ ಬಗ್ಗೆ ಕೊಪ್ಪಳ ನಗರಸಭೆ ಪೌರಾಯುಕ್ತ ಮಂಜುನಾಥ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಯವರಿಗೆ ಈ ಕೆಲಸ ವಹಿಸಲಾಗಿದೆ. ಅದು ಅವರ ಕೆಲಸ ಸಾಕಷ್ಟು ಬಾರಿ ಅವರಿಗೆ ಸಹಕಾರ ನೀಡಲಾಗಿತ್ತು. ಈಗಲೂ ನಗರಸಭೆಯಿಂದ ಸಹಾಯ ಮಾಡುತ್ತಿದ್ದೇವೆ. ಅವರೇ ಸರಿಯಾದ ಸಮಯದಲ್ಲಿ ಕಾಮಗಾರಿ ಮಾಡುತ್ತಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ದೂರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

  • ಫಾಸ್ಟ್ ಟ್ಯಾಗ್ ಅಳವಡಿಕೆ- ವಾಹನ ಸವಾರರು ಸ್ವಲ್ಪ ನಿರಾಳ

    ಫಾಸ್ಟ್ ಟ್ಯಾಗ್ ಅಳವಡಿಕೆ- ವಾಹನ ಸವಾರರು ಸ್ವಲ್ಪ ನಿರಾಳ

    – ಸದ್ಯ ಶೇ.75 ಗೇಟ್‍ಗಳಲ್ಲಿ ಮಾತ್ರ ಫಾಸ್ಟ್ ಟ್ಯಾಗ್
    – ಉಳಿದ ಶೇ.25 ಗೇಟ್‍ಗಳಿಗೆ ಹಂತ ಹಂತವಾಗಿ ವಿಸ್ತರಣೆ

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿ.15ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇದಕ್ಕೀಗ ಕೊಂಚ ಸಡಿಲಿಕೆ ನೀಡಿದ್ದು, ಸದ್ಯ ಎಲ್ಲ ಟೋಲ್‍ಗಳ ಶೇ.75 ಗೇಟ್‍ಗಳು ಮಾತ್ರ ಫಾಸ್ಟ್ ಟ್ಯಾಗ್ ವ್ಯವಸ್ಥೆ ಹೊಂದಲಿವೆ. ಉಳಿದ ಶೇ.25ರಷ್ಟನ್ನು ಹಂತ ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಗಿದೆ.

    ಟೋಲ್‍ನ ಎಲ್ಲ ಗೇಟ್‍ಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಲು ಕೇಂದ್ರ ಸರ್ಕಾರ ಸಮಯಾವಕಾಶ ನೀಡಿದ್ದು, ಶೇ.75 ರಷ್ಟು ಗೇಟ್‍ಗಳಿಗೆ ಮಾತ್ರ ಫಾಸ್ಟ್‍ಟ್ಯಾಗ್ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಉಳಿದ ಶೇ.25ರಷ್ಟನ್ನು ಹಂತ ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಗಿದೆ.

    ಜುಲೈನಲ್ಲಿ ಹೆದ್ದಾರಿ ಸಚಿವಾಲಯದಿಂದ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ(ಎನ್‍ಎಚ್‍ಎಐ)ಕ್ಕೆ ಪತ್ರ ಬರೆದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳ, ತುರ್ತು ನಿರ್ವಹಣೆಗಾಗಿ ಒಂದು ಗೇಟ್ ಹೊರತುಪಡಿಸಿ, ಉಳಿದೆಲ್ಲ ಟೋಲ್ ಗೇಟ್‍ಗಳಿಗೆ ಡಿಸೆಂಬರ್ 1ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಸೂಚಿಸಿತ್ತು. ಆದರೆ ನಂತರ ನವೆಂಬರ್ 29ರಂದು ಆದೇಶ ಹೊರಡಿಸಿ, ಈ ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಿತ್ತು. ಇದನ್ನೂ ಓದಿ:  ಡಿಸೆಂಬರಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ – ಎಲ್ಲಿ ಸಿಗುತ್ತೆ? ಶುಲ್ಕ ಎಷ್ಟು? ಈ ವಿಚಾರಗಳನ್ನು ತಿಳಿದಿರಿ

    ಇದೀಗ ಮತ್ತೆ ಈ ಕುರಿತು ನಿರ್ಧಾರ ಕೈಗೊಂಡಿದ್ದು, ಮೊದಲ ಹಂತದಲ್ಲಿ ಪ್ರತಿ ಟೋಲ್‍ನ ಶೇ.75ರಷ್ಟು ಗೇಟ್ ಗಳಿಕೆ ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಸಿ, ಶೇ.25ರಷ್ಟು ಗೇಟ್ ಗಳಲ್ಲಿ ನಗದು ಸ್ವೀಕರಿಸುವಂತೆ ತಿಳಿಸಿದೆ. ಅಲ್ಲದೆ ಈ ಶೇ.25ರಷ್ಟು ಗೇಟ್‍ಗಳನ್ನು ಹಂತ ಹಂತವಾಗಿ ಫಾಸ್ಟ್ ಟ್ಯಾಗ್ ಗೆ ಒಳಪಡಿಸಲಾಗುವುದು ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.