Tag: Nata Sarvabhouma

  • ಹುಬ್ಬಳ್ಳಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರು ನಟ ಯಶ್

    ಹುಬ್ಬಳ್ಳಿ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ರು ನಟ ಯಶ್

    ಬೆಂಗಳೂರು: ನಟಸಾರ್ವಭೌಮ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ನಟ ಯಶ್ ಹುಬ್ಬಳ್ಳಿ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೋರಿರುವ ಯಶ್, ಅನಿವಾರ್ಯ ಕಾರಣಗಳಿಂದ ಇಂದು ವಿಮಾನ ಕೈತಪ್ಪಿದ್ದು, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ನನ್ನ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವ ಹುಬ್ಬಳ್ಳಿ ಭಾಗದ ಅಭಿಮಾನಿಗಳ ಕ್ಷಮೆ ಕೋರುತ್ತೇನೆ. ಪವರ್ ಸ್ಟಾರ್ ಅಪ್ಪು ರವರು, ಸಹೃದಯಿ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ರವರು, ನಿರ್ದೇಶಕರಾದ ಸಹೋದರ ಪವನ್ ಒಡೆಯರ್, ಛಾಯಾಗ್ರಾಹಕರಾದ ವೈದಿ ಸೇರಿದಂತೆ ನಟಸಾರ್ವಭೌಮ ಇಡೀ ಚಿತ್ರತಂಡಕ್ಕೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಅಪ್ಪು ರವರ ಮೇಲಿನ ನಿಮ್ಮ ಪ್ರೀತಿ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ತುಂಬಲಿ ಎಂದು ಹಾರೈಸಿದ್ದಾರೆ.

    ಗಂಡು ಮೆಟ್ಟಿದ ನಾಡು ಎಂದೇ ಖ್ಯಾತಿ ಪಡೆದಿರುವ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದೆ. ಕ್ರೀಡಾಂಗಣದಲ್ಲಿ ತುಂಬಿ ತುಳುಕಿರುವ ಜನ ಸಾಗರದ ನಡುವೆ ಪುನೀತ್ ರಾಜಕುಮಾರ್, ನಟಿ ರಜಿತಾ ರಾಮ್, ಚಿತ್ರದ ಮತ್ತೊಬ್ಬ ನಾಯಕಿ ಅನುಪಮಾ ಪರಮೇಶ್ವರ ಸೇರಿದಂತೆ ಖ್ಯಾತ ಗಾಯಕ ವಿಜಯ ಪ್ರಕಾಶ್, ಜಯಂತಿ ಕಾಯ್ಕಿಣಿ, ಯೋಗರಾಜ್ ಭಟ್, ಸಾಧು ಕೋಕಿಲಾ, ರವಿಶಂಕರ್, ಕಾಮಿಡಿ ನಟ ಚಿಕ್ಕಣ್ಣ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಯಿಂದ ಹೊರ ಹೋಗ್ತಿದ್ದಂತೆ ಪುನೀತ್‍ರಿಂದ ಎಫ್‍ಬಿ ಲೈವ್

    ಮನೆಯಿಂದ ಹೊರ ಹೋಗ್ತಿದ್ದಂತೆ ಪುನೀತ್‍ರಿಂದ ಎಫ್‍ಬಿ ಲೈವ್

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅವರು ಐಟಿ ದಾಳಿ ಮುಗಿದ ತಕ್ಷಣ ಮನೆಯಿಂದ ಹೊರ ಬಂದು ಅಭಿಮಾನಿಗಳನ್ನು ಮಾತನಾಡಿಸಿ ಹುಬ್ಬಳ್ಳಿಗೆ ತೆರಳಿದ್ದಾರೆ. ಈ ವೇಳೆ ಕಾರಿನಲ್ಲಿಯೇ ಫೇಸ್‍ಬುಕ್ ಲೈವ್ ಮಾಡಿ ಮಾತನಾಡಿದ್ದಾರೆ.

    ನಟ ಪುನೀತ್ ಮನೆಯಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳ ಜೊತೆ ಕೆಲವು ಕ್ಷಣ ಮಾತನಾಡಿದ್ದು, ಐಟಿ ಅಧಿಕಾರಿಗಳು ಬಂದು ಅವರ ಕೆಲಸ ಏನು ಅದನ್ನು ಮಾಡಿದ್ದಾರೆ. ಅವರಿಗೆ ನಾವು ಸಹಕರಿಸಿದ್ದೇವೆ. ಐಟಿ ಅಧಿಕಾರಿಗಳು ತುಂಬಾ ಪ್ರೊಫೆಶನಲ್ ಆಗಿ ಕೆಲಸ ಮಾಡಿದ್ದಾರೆ. ಏನು ತೊಂದರೆ ಆಗಿಲ್ಲ ಎಂದು ಕಾರು ಹತ್ತಿ ಹೊರಟ್ಟಿದ್ದಾರೆ.

    ಕಾರ ಹತ್ತಿದ ತಕ್ಷಣ ಪುನೀತ್ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಎಲ್ಲರಿಗೂ ನಮಸ್ಕಾರ, ಇಂದು ಸಂಜೆ ನಮ್ಮ ಸಿನಿಮಾ ‘ನಟಸಾರ್ವಭೌಮ’ ಆಡಿಯೋ ರಿಲೀಸ್ ಹುಬ್ಬಳ್ಳಿಯಲ್ಲಿ ಆಗುತ್ತಿದೆ. ಆದ್ದರಿಂದ ನಾವೆಲ್ಲ ಬರುತ್ತಿದ್ದೇವೆ. ನಿಮ್ಮನ್ನು ಅಲ್ಲಿಯೇ ಭೇಟಿ ಮಾಡುತ್ತೇವೆ. ಎಲ್ಲರೂ ಬನ್ನಿ ಕಾರ್ಯಕ್ರಮವನ್ನು ಎಂಜಾಯ್ ಮಾಡಿ” ಎಂದು ಹೇಳಿದ್ದಾರೆ.

    ಇಂದು ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಪುನೀತ್ ಅಭಿನಯದ `ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ರಾತ್ರಿ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪುನೀತ್ ಹುಬ್ಬಳ್ಳಿಗೆ ಹೊರಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    ತೆರಿಗೆ ಇಲಾಖೆಗೆ ನಾವು ನಾಗರಿಕರಾಗಿ ಸಹಕಾರ ನೀಡಿದ್ದೇವೆ – ಪುನೀತ್ ಮೊದಲ ಪ್ರತಿಕ್ರಿಯೆ

    – 1984ರಲ್ಲಿಯೇ ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು
    – ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇವೆ

    ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಐಟಿ ರೇಡ್ ಶುಕ್ರವಾರ ರಾತ್ರಿ 11.30ಕ್ಕೆ ಅಂತ್ಯವಾಗಿದ್ದು, ಈ ಬಗ್ಗೆ ಮೊದಲ ಬಾರಿಗೆ ನಟ ಪುನೀತ್ ಪ್ರತಿಕ್ರಿಯೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತೆರಿಗೆ ಇಲಾಖೆ ಅವರು ಬಂದು ನಮ್ಮ ಮನೆಯನ್ನು ರೇಡ್ ಮಾಡಿದ್ದಾರೆ. ನಾವು ನಾಗರಿಕರಾಗಿ ಅವರಿಗೆ ಸಹಕರಿಸಬೇಕು. ಈಗ ರೇಡ್ ಮುಗಿದಿದ್ದು, ಅದರ ಪ್ರಕ್ರಿಯೆ ಇನ್ನೂ ಒಂದು ಗಂಟೆ ನಡೆಯುತ್ತದೆ. ನಾವು ಅವರಿಗೆ ಏನು ತೊಂದರೆ ಕೊಟ್ಟಿಲ್ಲ. ಅದೇ ರೀತಿ ಅವರು ಕೂಡ ನಮಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ. ತೆರಿಗೆ ಇಲಾಖೆಗೆ ನಾಗರಿಕರಾಗಿ ಸಹಕರಿಸಿದ್ದೇವೆ ಅಷ್ಟೇ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಂತಿಮ ಹಂತಕ್ಕೆ ತಲುಪಿದ ಪುನೀತ್, ಶಿವಣ್ಣ ಮನೆ ರೇಡ್

    ಯಾರೇ ಆಗಲಿ ಅವರ ಅಕೌಂಟ್ ವಿಚಾರದಲ್ಲಿ ವ್ಯತ್ಯಾಸ ಕಂಡು ಬಂದರೆ ತೆರಿಗೆ ಇಲಾಖೆ ಅವರು ರೇಡ್ ಮಾಡುತ್ತಾರೆ. ಅವರಿಗೆ ಬಂದಿದ್ದ ಮಾಹಿತಿ ಮೇರೆಗೆ ನಮ್ಮ ಮನೆಯ ಮೇಲೆ ರೇಡ್ ಮಾಡಿದ್ದಾರೆ. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ನಾವು ಸಂಪೂರ್ಣವಾಗಿ ಉತ್ತರ ಕೊಟ್ಟಿದ್ದೇವೆ. ನಮ್ಮ ಮನೆಯ ಮೇಲೆ 1984ರಲ್ಲಿ ಚೆನ್ನೈ, ಬೆಂಗಳೂರು ಮತ್ತು ನಮ್ಮ ಫಾರ್ಮ್ ಹೌಸ್ ನಲ್ಲಿ ನಡೆದಿತ್ತು. ಅದೇ ರೀತಿ ಈಗಲೂ ಮಾಡಿದ್ದಾರೆ ಅಷ್ಟೇ ಎಂದು ಪುನೀತ್ ಐಟಿ ದಾಳಿಯ ಬಗ್ಗೆ ಹೇಳಿದ್ದಾರೆ. ಇದನ್ನೂ ಓದಿ: ಐಟಿ ಅಧಿಕಾರಿಗಳ ಬಳಿ ಕಾಲಾವಕಾಶ ಕೇಳಿದ ಪುನೀತ್

    ಇಂದು ಹುಬ್ಬಳ್ಳಿಯಲ್ಲಿ ಪುನೀತ್ ಅಭಿನಯದ ‘ನಟಸಾರ್ವಭೌಮ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ. ಪುನೀತ್ ಮನೆಯ ಐಟಿ ದಾಳಿ ಶುಕ್ರವಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಇಂದು ಕಾರ್ಯಕ್ರಮಕ್ಕೆ ಹೋಗಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಹುಬ್ಬಳ್ಳಿಯ ನೆಹರು ಕ್ರೀಡಾಂಗಣದಲ್ಲಿ ಸಂಜೆ ಸುಮಾರು 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

    ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್ ಮತ್ತು ಪವನ್ ವಡೆಯರ್ ಅವರ ಸಾಹಿತ್ಯದಲ್ಲಿ ಹಾಡುಗಳು ಮೂಡಿಬಂದಿವೆ. ಹೀಗಾಗಿ ಧ್ವನಿ ಸುರುಳಿ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನು ಕಾರ್ಯವನ್ನು ಕಣ್ತುಂಬಿಕೊಳ್ಳಲು ಇಡೀ ಹುಬ್ಬಳ್ಳಿಯ ಜನತೆ ಕಾದು ಕುಳಿತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ದೊಡ್ಡ ಕಾಣಿಕೆ ಎಂದ್ರು ಪುನೀತ್- ನಟಸಾರ್ವಭೌಮ ಚಿಂದಿ ಅಂದ ಯಶ್

    ಕೆಜಿಎಫ್ ದೊಡ್ಡ ಕಾಣಿಕೆ ಎಂದ್ರು ಪುನೀತ್- ನಟಸಾರ್ವಭೌಮ ಚಿಂದಿ ಅಂದ ಯಶ್

    ಬೆಂಗಳೂರು: ವಿಶ್ವಾದ್ಯಂತ ತೆರೆಕಂಡು ಸಾಕಷ್ಟು ಸದ್ದು ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ದೊಡ್ಡ ಕಾಣಿಕೆ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಈ ವೇಳೆ ಯಶ್ ನಟಸಾರ್ವಭೌಮ ಚಿತ್ರ ಚಿಂದಿ ಎಂದು ಪ್ರತಿಕ್ರಿಯಿಸಿದ್ದಾರೆ.

    “ಕನ್ನಡ ಚಿತ್ರರಂಗಕ್ಕೆ ಕೆಜಿಎಫ್ ಮೂಲಕ ದೊಡ್ಡ ಕಾಣಿಕೆಯನ್ನು ಕೊಟ್ಟ ಹೊಂಬಾಳೆ ಫಿಲ್ಮ್ ಹಾಗೂ ಕೆಜಿಎಫ್ ತಂಡಕ್ಕೆ ನನ್ನ ಶುಭಾಶಯಗಳು. ಯಶ್, ಪ್ರಶಾಂತ್ ನೀಲ್ ನಿಮಗೆ ಶುಭಾಶಯಗಳು ಹಾಗೂ ಕನ್ನಡ ಚಿತ್ರರಂಗದ ಸಾಮಥ್ರ್ಯ ಮತ್ತು ಅದರ ವ್ಯಾಪ್ತಿಯನ್ನು ತೋರಿಸಿದ ವಿಜಯ್ ಸರ್ ನಿಮ್ಮ ಮೇಲೆ ನನಗೆ ಹೆಮ್ಮೆಯಿದೆ” ಎಂದು ಪುನೀತ್ ರಾಜ್‍ಕುಮಾರ್ ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.

    ಈ ಟ್ವೀಟ್‍ಗೆ ಯಶ್ ಪ್ರತಿಕ್ರಿಯಿಸಿ, “ಧನ್ಯವಾದಗಳು ಸರ್. ಈ ಮಾತುಗಳು ನನಗೆ ತುಂಬಾ ಮುಖ್ಯವಾಗುತ್ತದೆ. ನಿಮ್ಮ ನಟಸಾರ್ವಭೌಮ ಚಿತ್ರದ ಟೀಸರ್ ನೋಡಿದೆ. ಚಿಂದಿ ಉಡಾಯಿಸುವ ಆಗಿದೆ. ಈ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೇನೆ” ಎಂದು ಯಶ್ ರೀ-ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

    ಕೆಜಿಎಫ್ ಸಿನಿಮಾ ಬಿಡುಗಡೆ ದಿನ ಪುನೀತ್ ರಾಜ್‍ಕುಮಾರ್ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಲೈವ್ ವಿಡಿಯೋ ಮಾಡಿ “ಕೆಜಿಎಫ್ ಚಿತ್ರತಂಡಕ್ಕೆ ಶುಭಾಶಯ. ಅಲ್ಲದೇ ನನ್ನ ಗೆಳೆಯ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ವಿಜಯ್ ಸರ್ ಗೂ ಶುಭಾಶಯ ಕೆಜಿಎಫ್ ಗೆ ಒಳ್ಳೆದಾಗಲಿ” ಎಂದು ಚಿತ್ರಕ್ಕೆ ಶುಭಹಾರೈಸಿದ್ದರು.

    ಕೆಜಿಎಫ್ ಸಿನಿಮಾ ಒಟ್ಟು 5 ಭಾಷೆಯಲ್ಲಿ ಶುಕ್ರವಾರ ಬರೋಬ್ಬರಿ 2000ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ತೆರೆಕಂಡಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ ಸುಮಾರು 30 ಕೋಟಿ ಹಣವನ್ನು ಬಾಕ್ಸ್ ಆಫೀಸ್‍ನಲ್ಲಿ ತುಂಬಿಸಿಕೊಂಡಿದ್ದು, ಕೇವಲ ಮೂರು ದಿನದಲ್ಲಿ 60 ಕೋಟಿ ಗೂ ಹೆಚ್ಚು ಕಲೆಕ್ಷನ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಎಂಬ ಕಾಯಿಲೆ ಎಲ್ಲ ಚಿತ್ರರಂಗಗಳನ್ನೂ ಸಾಂಕ್ರಾಮಿಕವೆಂಬಂತೆ ಆವರಿಸಿಕೊಂಡಿರೋದು ದುರಂತ ಸತ್ಯ. ಆಗಾಗ ಯಾರೋ ನಟಿ ಬೀದಿಯಲ್ಲಿ ನಿಂತು ಮಾತಾಡಿದಾಗ, ಅನಾಹುತಗಳಾದಾಗ ಮಾತ್ರವೇ ಈ ಬಗ್ಗೆ ಚರ್ಚೆಗಳಾಗಿ ತಣ್ಣಗಾಗುತ್ತಿತ್ತು. ಆದರೆ ಈ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನೇ ಅದುರುವಂತೆ ಮಾಡಿರೋದು ತೆಲುಗು ನಟಿ ಶ್ರೀರೆಡ್ಡಿಯ ದೆಸೆಯಿಂದ!

    ಇದೀಗ ಎಲ್ಲ ಭಾಷೆಗಳ ನಟಿಯರೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಈಗಿನ ಸರದಿ ನಟಸಾರ್ವಭೌಮನ ಬೆಡಗಿ ಅನುಪಮಾ ಪರಮೇಶ್ವರನ್ ಅವರದ್ದು!

    ಆದರೆ ಅನುಪಮಾ ಕಾಸ್ಟಿಂಗ್ ಕೌಚಿಂಗ್ ವಿಚಾರವಾಗಿ ಯಾರ ವಿರುದ್ಧವೂ ದೂರು ಹೇಳಿಲ್ಲ. ಅಂಥಾದ್ದೊಂದು ಇದ್ದರೂ ಇದ್ದೀತೆಂಬ ಮಾತನ್ನೂ ಆಡಿಲ್ಲ. ತನಗೆ ಇದುವರೆಗೂ ಅಂಥಾ ಅನುಭವಗಳಾಗಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇವರ ಈ ಅಭಿಪ್ರಾಯ ಯಾಕೆ ಮುಖ್ಯವೆಂದರೆ, ಅನುಪಮಾ 2016ರಿಂದಲೇ ತೆಲುಗು ಚಿತ್ರರಂಗದಲ್ಲಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬ ಹೆಮ್ಮಾರಿ ಸದ್ಯ ವಿರಾಟ್ ರೂಪ ತಾಳಿರೋದು ಕೂಡಾ ತೆಲುಗಿನಲ್ಲಿಯೇ ಆದ್ದರಿಂದ ಅನುಪಮಾ ಹೇಳಿಕೆ ಮುಖ್ಯವಾಗುತ್ತದೆ.

    ಈಗಲೂ ಕೂಡಾ ಅನುಪಮಾ ನಟಿಸಿರೋ ತೆಲುಗು ಚಿತ್ರ ಹಲೋ ಗುರು ಪ್ರೇಮಂ ಕೋಸಮೇ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾನು ನಟಿಸಿರೋ ತೆಲುಗು ಚಿತ್ರಕ್ಕೆ ಹಿನ್ನಡೆಯಾಗುತ್ತದೆ ಎಂಬ ಮುಲಾಜಿನಿಂದ ಅನುಪಮಾ ಕಾಸ್ಟಿಂಗ್ ಕೌಚ್ ಬಗ್ಗೆ ಇಂಥಾ ಅಭಿಪ್ರಾಯ ಹೇಳಿರಬಹುದೆಂಬ ಮಾತುಗಳೂ ಕೇಳಿ ಬರುತ್ತಿರೋದು ಸುಳ್ಳಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಟಸಾರ್ವಭೌಮ ಚಿತ್ರತಂಡವನ್ನು ವಿಶೇಷವಾಗಿ ಗೌರವಿಸಿದ ಪವರ್ ಸ್ಟಾರ್!

    ನಟಸಾರ್ವಭೌಮ ಚಿತ್ರತಂಡವನ್ನು ವಿಶೇಷವಾಗಿ ಗೌರವಿಸಿದ ಪವರ್ ಸ್ಟಾರ್!

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಾವು ನಟಿಸುತ್ತಿರುವ ‘ನಟಸಾರ್ವಭೌಮ’ ಚಿತ್ರತಂಡವನ್ನು ತಮ್ಮ ಮನೆಗೆ ಕರೆಸಿ ವಿಶೇಷವಾಗಿ ಗೌರವಿಸಿದ್ದಾರೆ. ಪುನೀತ್ ತನ್ನ ಪತ್ನಿ ಜೊತೆ ಸೇರಿ ಚಿತ್ರತಂಡಕ್ಕೆ ವಿಶೇಷ ಔತಣ ನೀಡಿದ್ದಾರೆ.

    ಗುರುವಾರ ಚಿತ್ರದ ನಿರ್ದೇಶಕರ ತಂಡ ಪುನೀತ್ ಅವರ ಮನೆಗೆ ವಿಶೇಷ ಔತಣಕ್ಕೆಂದು ಹೋಗಿದ್ದರು. ನಿರ್ದೇಶಕರಾದ ಪವನ್ ಒಡೆಯರ್, ಕುಮಾರ್ ಹಾಗೂ ಹಾಸ್ಯ ನಟ ಚಿಕ್ಕಣ್ಣ ಅವರು ಒಟ್ಟಿಗೆ ಊಟ ಮಾಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರ ಮನೆಯಲ್ಲಿ ಊಟ ಮಾಡಿ ಬಳಿಕ ಚಿತ್ರತಂಡದ ಸದಸ್ಯರು ಒಂದು ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಆ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ,”ಇಂದು ನಾನು ಪುನೀತ್ ಸರ್ ಮನೆಯಲ್ಲಿ ಊಟ ಮಾಡಿದೆ. ಅಶ್ವಿನಿ ಮೆಡಮ್ ಸಾಂಬರ್, ಪೂರಿ ಡೆಸರ್ಟ್ಸ್ ಹಾಗೂ ಅದ್ಭುತ ಊಟಕ್ಕೆ ಧನ್ಯವಾದಗಳು. ಇಡೀ ನಿರ್ದೇಶಕರ ತಂಡ ಊಟವನ್ನು ಆನಂದಿಸಿದೆ” ಎಂದು ಬರೆದು ಪವನ್ ಒಡೆಯರ್ ಪೋಸ್ಟ್ ಮಾಡಿದ್ದಾರೆ.

    ಸದ್ಯ ಪುನೀತ್ ರಾಜ್‍ಕುಮಾರ್ ನಟಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ ‘ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.

  • ಟ್ರೋಲ್ ಮಾಡಿದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ರಚಿತಾ ರಾಮ್!

    ಟ್ರೋಲ್ ಮಾಡಿದವರಿಗೆ ಫೋಟೋ ಮೂಲಕ ಉತ್ತರ ಕೊಟ್ಟ ರಚಿತಾ ರಾಮ್!

    ಬೆಂಗಳೂರು: ಕಾಲೆಳೆಯೋರ ಮಧ್ಯೆ ಮಾತನಾಡಿದರೆ ಆಡಿಕೊಳ್ಳೋರು ಇನ್ನೂ ಜಾಸ್ತಿಯಾಗ್ತಾರೆ ಎಂಬ ನೀತಿಯನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಅನುಸರಿಸುತ್ತಾರೆ. “ರಚಿತಾ ಹಠಾವೋ” ಆಂದೋಲನಕ್ಕೆ ಮಾತಿನ ಮೂಲಕವಲ್ಲ ಫೋಟೋ ಮೂಲಕ ರಚಿತಾ ಉತ್ತರ ಕೊಟ್ಟಿದ್ದಾರೆ.

    ರಚಿತಾ ರಾಮ್ ಕಾಲೆಳೆದು ಟ್ರೋಲ್ ಮಾಡೋ ಮಂದಿಗೆ ಏನೂ ಹೇಳದೆ ಸುಮ್ಮನಿರುತ್ತಿದ್ದರು. ನಂತರ ರಚಿತಾ `ನಟಸಾರ್ವಭೌಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ “ರಚಿತಾ ಹಠಾವೋ” ಆಂದೋಲನವೇ ಶುರುವಾಗಿತ್ತು. ಕಾಲೆಳೆಯೋರ ಮಧ್ಯೆ ಬೆಳೆದು ನಿಲ್ಲುತ್ತೀನಿ ಎಂದು ರಚಿತಾ ತನ್ನ ಪಾಡಿಗೆ ಶೂಟಿಂಗ್ ಹೋಗಿ ಈಗ ಕಾಲೆಳೆದೋರಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ.

    ಚಕ್ರವ್ಯೂಹ ಸಿನಿಮಾದ ನಂತರ ರಚಿತಾ ಹಾಗೂ ಪುನೀತ್ ನಟಸಾರ್ವಭೌಮದಲ್ಲಿ ಮತ್ತೆ ಜೋಡಿಯಾಗುತ್ತಿದ್ದಾರೆ. ಹೀಗಾಗಿ ಪುನೀತ್ ಪರಿಚಯ, ಸ್ನೇಹ ರಚಿತಾಗೆ ಹೊಸತೇನಲ್ಲ. ಆದರೆ ಪುನೀತ್ ಅಭಿಮಾನಿ ಬಳಗದ ಹೆಸರಲ್ಲಿ ಅನೇಕ ಅಭಿಮಾನಿಗಳು ಮತ್ತೆ ನಮ್ಮ ಅಪ್ಪು ಜೊತೆ ನಟಿಸಬೇಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಹರಿದು ಬಿಡುತ್ತಿದ್ದಾರೆ. ಕಾರಣ ಇಲ್ಲದೆ ಕಾಲೆಳೆದ ಆ ಅಭಿಮಾನಿಗಳಿಗೆ ರಚಿತಾ ಟಾಂಗ್ ನೀಡಿದ್ದಾರೆ.

    ಚಿತ್ರತಂಡ ಹಾಗೂ ಪುನೀತ್ ಅವರೇ ನನ್ನನ್ನು ಬೇಡ ಅಂದಿಲ್ಲ. ರಿಯಲ್ ಫ್ಯಾನ್ಸ್ ಗಳೂ ಬೇಡ ಎನ್ನುವುದಿಲ್ಲ. ಫೇಕ್ ಫ್ಯಾನ್ಸ್ ಗಳು ಮಾತ್ರ ಈ ರೀತಿ ಮಾಡುತ್ತಿರೋದು ಎಂದು ರಚಿತಾ ರಾಮ್ ಪುನೀತ್ ಮತ್ತು ತಾನು ಅದೆಷ್ಟು ಕ್ಲೋಸ್ ಫ್ರೆಂಡ್ಸ್ ಎನ್ನುವುದನ್ನು ಒಂದೇ ಒಂದು ಸೆಲ್ಫಿ ಮೂಲಕ ತೋರಿಸಿ ಉತ್ತರಿಸಿದ್ದಾರೆ.

    ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ತೆಗೆದ ಫೋಟೋ ಇನ್ಯಾರೊ ತೆಗೆದ ಫೋಟೋ ಅಲ್ಲ, ಇದು ಉದ್ದೇಶಪೂರ್ವಕವಾಗಿ ತೆಗೆದ ಸೆಲ್ಫಿ ಫೋಟೋ ಎಂದು ಹೇಳಲಾಗಿದೆ. ಇಲ್ಲಿ ನಿರ್ದೇಶಕ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಮತ್ತು ರಚಿತಾ ಕಾಣಿಸುತ್ತಿದ್ದಾರೆ. ಆದರೆ ರಚಿತಾ ರಾಮ್ ಪುನೀತ್ ಹೆಗಲ ಮೇಲೆ ಕೈ ಹಾಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರಿಗೆ ಟಾಂಗ್ ಕೊಡೋಕೆ ಕ್ಲಿಕ್ ಮಾಡಿದಂತಿದೆ ಎಂದು ಹೇಳಲಾಗ್ತಿದೆ.