Tag: naresh

  • 46ನೇ ವಯಸ್ಸಿಗೆ ಸಿಹಿ ಸುದ್ದಿ ಕೊಟ್ರು ತೆಲುಗಿನ ನಟಿ ಪ್ರಗತಿ

    46ನೇ ವಯಸ್ಸಿಗೆ ಸಿಹಿ ಸುದ್ದಿ ಕೊಟ್ರು ತೆಲುಗಿನ ನಟಿ ಪ್ರಗತಿ

    ಟಾಲಿವುಡ್‌ನಲ್ಲಿ (Tollywood) ಸದ್ಯ ಚಾಲ್ತಿಯಲ್ಲಿರುವ ಸುದ್ದಿ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ (Pavitra Lokesh)  ಕಿಸ್ಸಿಂಗ್ ವೀಡಿಯೋ ವಿಚಾರ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನನಗೂ ಸಂಗಾತಿ ಬೇಕು ಎಂದು ನಟಿ ಪ್ರಗತಿ ಹೇಳಿದ್ದಾರೆ.

    ತೆಲುಗು ಸಿನಿಮಾರಂಗದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಿಸ್ಸಿಂಗ್ ವೀಡಿಯೋ 9Kissing Video) ಭಾರಿ ಸದ್ದು ಮಾಡಿದ ಬೆನ್ನಲ್ಲೇ ನಟಿ ಪ್ರಗತಿ (Actress Pragathi) ತಮ್ಮ ಮಹಾದಾಸೆಯನ್ನ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ಸಂಗತಿ(Partner) ಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ತೆಲುಗಿನ ನಟಿ ಪ್ರಗತಿ 46ನೇ ವಯಸ್ಸಿಗೆ ಮರುಮದುವೆಗೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಆಪ್ತ ವಲಯದಲ್ಲಿ ನನಗೂ ಜೋಡಿ ಬೇಕು ಎಂದು ಹೇಳಿರುವ ಮಾತು ಈಗ ಎಲ್ಲಾ ಕಡೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ. ಪ್ರಗತಿ ಅವರ ಹೇಳಿಕೆ ಕೇಳಿ, ಎಲ್ಲಾ ಪವಿತ್ರಾ ಮತ್ತು ನರೇಶ್ ಮಹಿಮೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.

    ನಟಿ ಪ್ರಗತಿ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳ ಹಿಂದೆ ಇಬ್ಬರು ಡಿವೋರ್ಸ್ ಪಡೆದಿದ್ದರು. ಇದೀಗ ಮತ್ತೆ ಮರುಮದುವೆಗೆ ನಟಿ ಮನಸ್ಸು ಮಾಡಿದ್ದಾರಂತೆ. ಅಷಕ್ಕೂ ಈಗ ಹಬ್ಬಿರುವ ಸುದ್ದಿ ನಿಜಾನಾ, ಸುಳ್ಳಾ ಎಂಬುದನ್ನ ನಟಿಯೇ ಸ್ಪಷ್ಟಪಡಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಯ್ ಫ್ರೆಂಡ್ ಗೆ ಕಿಸ್ ಕೊಟ್ಟು ನ್ಯೂ ಯಿಯರ್ ಬರಮಾಡಿಕೊಂಡ ಸಿಲೆಬ್ರಿಟಿಗಳು

    ಬಾಯ್ ಫ್ರೆಂಡ್ ಗೆ ಕಿಸ್ ಕೊಟ್ಟು ನ್ಯೂ ಯಿಯರ್ ಬರಮಾಡಿಕೊಂಡ ಸಿಲೆಬ್ರಿಟಿಗಳು

    ಮೊನ್ನೆ ಮೊನ್ನೆಯಷ್ಟೇ ಪವಿತ್ರಾ ಲೋಕೇಶ್ ಅವರಿಗೆ ಟಾಲಿವುಡ್ ನಟ ನರೇಶ್ ಮುತ್ತಿಡುವ ಮೂಲಕ ಮದುವೆ ವಿಷಯವನ್ನು ಬಹಿರಂಗಪಡಿಸಿದ್ದರು. ನಮ್ಮಿಬ್ಬರ ಮಧ್ಯ ಏನೂ ಇಲ್ಲ, ನಾವು ಕೇವಲ ವೃತ್ತಿ ಬಂಧುಗಳು ಎನ್ನುತ್ತಿದ್ದ ಈ ಜೋಡಿ ಕಿಸ್ ಮಾಡುವ ಮೂಲಕ ಮದುವೆ ವಿಷಯ ಮಾತ್ರವಲ್ಲ, ಹೊಸ ವರ್ಷವನ್ನೂ ಬರಮಾಡಿಕೊಂಡಿದ್ದರು. ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂತೆಯೇ ಬಾಲಿವುಡ್ ನಲ್ಲೂ ಮತ್ತೊಂದು ಜೋಡಿ ಹೀಗೆಯೇ ಹೊಸ ವರ್ಷವನ್ನು ಸ್ವಾಗತಿಸಿದೆ.

    ಬಾಲಿವುಡ್ ನಟ ಅರ್ಜುನ್ ಕಪೂರ್ ಮತ್ತು ಬಾಲಿವುಡ್ ನಟಿ ಮಲೈಕಾ ಅರೋರ್ ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಹೊಸದೇನೂ ಅಲ್ಲ. ಅನೇಕ ಸಲ ವಿದೇಶಕ್ಕೂ ಈ ಜೋಡಿ ಹೋಗಿ ಬಂದಿದೆ. ಒಟ್ಟೊಟ್ಟಿಗೆ ಅನೇಕ ಪಾರ್ಟಿಗಳನ್ನೂ ಮಾಡಿದ್ದಾರೆ. ಮದುವೆ ವಿಚಾರದಲ್ಲಿ ಮುಂದೂಡುತ್ತಲೇ ಬಂದಿರುವ ಮಲೈಕಾ, ತಮ್ಮ ಬಾಯ್ ಫ್ರೆಂಡ್ ಅರ್ಜುನ್ ಕಪೂರ್ ಗೆ ಮುತ್ತಿಡುವ ಮೂಲಕ ನ್ಯೂ ಯಿಯರ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಆ ಫೋಟೋವೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಮಲೈಕಾ ಡಿವೋರ್ಸ್ ಆದ ನಂತರ ತಮಗಿಂತ ಚಿಕ್ಕ ವಯಸ್ಸಿನ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. ಆಳೆತ್ತೆರದ ಮಗನನ್ನು ಹೊಂದಿರುವ ಮಲೈಕಾ ಈ ಹೊತ್ತಿಗೂ ವಿಶೇಷ ಕಾಸ್ಟ್ಯೂಮ್ ಮತ್ತು ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ಈ ವಿಚಾರವಾಗಿ ಅವರು ಹಲವಾರು ಬಾರಿ ಟ್ರೋಲ್ ಕೂಡ ಆಗಿದ್ದಾರೆ. ಇಂದು ಕಿಸ್ ಕೊಟ್ಟಿರುವ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಪವಿತ್ರಾ ಲೋಕೇಶ್-ನರೇಶ್ ತಂಟೆಗೆ ಹೋದ್ರೆ ಹುಷಾರ್

    ಪವಿತ್ರಾ ಲೋಕೇಶ್-ನರೇಶ್ ತಂಟೆಗೆ ಹೋದ್ರೆ ಹುಷಾರ್

    ಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ತಮ್ಮ ಮೇಲಿನ ಗಾಸಿಪ್ ಗಳನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ನಾನಾ ಆರೋಪಗಳನ್ನು ಹೊತ್ತ  ಅವರು ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ಬಗ್ಗೆ ಕ್ರಮ ತಗೆದುಕೊಳ್ಳಲು ಮುಂದಾಗಿದ್ದಾರೆ. ತಮ್ಮ ಮೇಲಿನ  ಅತಿರಂಜಿತ ವರದಿಗಳ ಬಗ್ಗೆ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ.

    ಇತ್ತೀಚೆಗಷ್ಟೇ ನಿಧನರಾದ ನರೇಶ್ ಅವರ ಮಲತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಅಂತಿಮ ದರ್ಶನಕ್ಕೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಹೋಗಿದ್ದರು. ಈ ಸಮಯದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಣ್ ಸನ್ನೆಯಲ್ಲೇ ಮಾತನಾಡಿದ್ದರು. ಅದನ್ನು ಕೆಲವರು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರಂತೆ. ಇದರಿಂದಾಗಿ ಪವಿತ್ರಾ ಮತ್ತು ನರೇಶ್‍ ಗೆ ನೋವುಂಟಾಗಿದ್ದು, ತಮ್ಮ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಮಾಡುವವರ ವಿರುದ್ಧ ತೆಲಂಗಾಣ ಸೈಬರ್ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಇದನ್ನೂ ಓದಿ: ಸಾಹಸ ಸಿಂಹ ವಿಷ್ಣುವರ್ಧನ್ ಮನೆ ಗೃಹಪ್ರವೇಶ: ನಾನಾ ಗಣ್ಯರು ಭಾಗಿ

    ತಮ್ಮ ಬಗ್ಗೆ ಕೆಟ್ಟದಾಗಿ ಬರೆದ ಹಾಗೂ ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ತಗೆದುಕೊಳ್ಳಬೇಕೆಂದು ಅವರು ದೂರಿನಲ್ಲಿ ಬರೆದಿದ್ದು, ಮಾನಹಾನಿ ಮಾಡುವಂತಹ ಮನಸ್ಸುಗಳನ್ನು ಹೆಡೆಮುರಿ ಕಟ್ಟಿ ಎಂದು ಒತ್ತಾಯ ಕೂಡ ಮಾಡಿದ್ದಾರೆ. ತಮ್ಮ ಮೇಲಿನ ದ್ವೇಷದಿಂದ ಅವರು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತಮ್ಮದೇ ಕಥೆಯನ್ನ ತೆರೆಯ ಮೇಲೆ ಬಿಚ್ಚಿಡಲಿದ್ದಾರೆ ನರೇಶ್- ಪವಿತ್ರಾ ಲೋಕೇಶ್

    ತಮ್ಮದೇ ಕಥೆಯನ್ನ ತೆರೆಯ ಮೇಲೆ ಬಿಚ್ಚಿಡಲಿದ್ದಾರೆ ನರೇಶ್- ಪವಿತ್ರಾ ಲೋಕೇಶ್

    ಟಾಲಿವುಡ್‌ನಲ್ಲಿ(Tollywood) ಮತ್ತೆ ಸುದ್ದಿಯಲ್ಲಿದ್ದಾರೆ ನರೇಶ್ ಮತ್ತು ಪವಿತ್ರಾ ಲೋಕೇಶ್(Pavitra Lokesh), ಇಷ್ಟು ದಿನ ತಮ್ಮ ಸ್ನೇಹ ಸಂಬಂಧ ವಿಚಾರವಾಗಿ ಸಖತ್ ಸದ್ದು ಮಾಡಿದ್ದರು. ಇದೀಗ ತಮ್ಮದೇ ಕಥೆಯನ್ನ ತೆರೆಯ ಮೇಲೆ ಹೇಳುವುದಕ್ಕೆ ಈ ಜೋಡಿ ಸಜ್ಜಾಗಿದ್ದಾರೆ.

    ತೆಲುಗು ಅಂಗಳದ ಹಿರಿಯ ನಟ ನರೇಶ್ (Actor Naresh) ಇತ್ತೀಚೆ ತಂದೆ ಕೃಷ್ಣ ನಿಧನ ನಂತರ ಮತ್ತೊಮ್ಮೆ ಚಾಲ್ತಿಯಲ್ಲಿದ್ದಾರೆ. ರಮ್ಯಾ ರಘುಪತಿ ಜೊತೆಗಿನ ಡಿವೋರ್ಸ್‌ ರಣರಂಗದ ಮಧ್ಯೆ ಪವಿತ್ರಾ ಲೋಕೇಶ್ ಹೆಸರು ಸಿಕ್ಕಾಪಟ್ಟೆ ಸಂಚಲನ ಮೂಡಿಸಿತ್ತು. ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇಷ್ಟೇಲ್ಲಾ ಸದ್ದು ಗದ್ದಲದ ನಡುವೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ತಮ್ಮ ಬಾಂಧವ್ಯ ಕಥೆಯನ್ನ ತೆರೆಯ ಮೇಲೆ ತೋರಿಸಲು ನರೇಶ್ ಪ್ಲ್ಯಾನ್ ಮಾಡಿದ್ದಾರೆ.

    ನರೇಶ್‌ಗೆ ರಮ್ಯಾ ರಘುಪತಿ ಮೂರನೇ ಹೆಂಡತಿಯಾಗಿದ್ದರು. ಮದುವೆಯಾಗಿ ಕೆಲವೇ ರ‍್ಷಗಳಲ್ಲಿ ಈ ಸಂಬಂಧಕ್ಕೂ ಫುಲ್ ಸ್ಟಾಪ್ ಇಡಲು ನಟ ತಯಾರಿ ನಡೆಸಿದ ಬೆನ್ನಲ್ಲೇ ಸೈಲೆಂಟ್ ಆಗಿ ಪವಿತ್ರಾ ಎಂಟ್ರಿ ಅಗಿದ್ದರು. ಗಂಡ ಹೆಂಡತಿ ಜಗಳ ದಶದಿಕ್ಕುಗಳಲ್ಲೂ ಸುದ್ದಿ ಮಾಡಿತ್ತು. ಆದರೆ ಯಾರದ್ದು ತಪ್ಪು, ಸರಿ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಈ ಬೆನ್ನಲ್ಲೇ ನರೇಶ್, ತಮ್ಮ ಬಾಂದವ್ಯದ ಕಥೆಯನ್ನ ಸಿನಿಮಾ ರೂಪ ಕೊಡಲು ಮುಂದಾಗಿದ್ದಾರೆ. ಇದನ್ನೂ ಓದಿ:ರೂಪೇಶ್ ರಾಜಣ್ಣ ಸ್ವಾರ್ಥ ಬುದ್ದಿಗೆ ಶಿಕ್ಷೆ ಕೊಟ್ರು ಸುದೀಪ್‌

    ತಮ್ಮ ಕಥೆಗೆ ತಾವೇ ನಾಯಕ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಾ ಅಥವಾ ಬೇರೇ ಕಲಾವಿದರು ಅವರ ಪಾತ್ರಕ್ಕೆ ಜೀವತುಂಬಲಿದ್ದಾರಾ ಎಂಬುದಕ್ಕೆ ಮುಂದೆ ಸ್ಪಷ್ಟನೆ ಸಿಗಲಿದೆ. ಆಡುವವರ ಬಾಯಿಗೆ ಈ ಸಿನಿಮಾ ಉತ್ತರವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪವಿತ್ರಾ ಲೋಕೇಶ್ ಮತ್ತು ನರೇಶ್ ರೊಮ್ಯಾಂಟಿಕ್ ವಿಡಿಯೋ ರಿಲೀಸ್

    ಪವಿತ್ರಾ ಲೋಕೇಶ್ ಮತ್ತು ನರೇಶ್ ರೊಮ್ಯಾಂಟಿಕ್ ವಿಡಿಯೋ ರಿಲೀಸ್

    ನ್ನಡದ ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ (Naresh) ಸಂಬಂಧದ ಬಗ್ಗೆ ಏನೆಲ್ಲ ಸುದ್ದಿಗಳು ಹರಿದಾಡಿದವು. ನರೇಶ್ ಪತ್ನಿ ರಮ್ಯಾ ರಘುಪತಿ (Ramya Raghupathi) ದೊಡ್ಡ ಗಲಾಟೆಯೇ ಮಾಡಿದರು. ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಮೈಸೂರು ಹೋಟೆಲ್ ವೊಂದರಲ್ಲಿ ಸಿಕ್ಕಾಕಿಕೊಂಡು ಈ ಘಟನೆಗೆ ಬೇರೆಯದ್ದೇ ದಿಕ್ಕು ತೋರಿಸಿದರು. ಈ ಘಟನೆ ಅಲ್ಲಿಗೆ ನಾನಾ ರೂಪ ಪಡೆದುಕೊಂಡಿತು.

    ಅಷ್ಟಾಗಿಯೂ ನರೇಶ್ ಮತ್ತು ಪವಿತ್ರಾ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಿನ್ನೆಯಷ್ಟೇ ಇಬ್ಬರೂ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ (Video) ಸಖತ್ ವೈರಲ್ ಕೂಡ ಹಾಕಿದೆ. ಪವಿತ್ರಾ ಲೋಕೇಶ್ ಭುಜದ ಮೇಲೆ ಕೈ ಇಟ್ಟು ಸಖತ್ ರೊಮ್ಯಾಂಟಿಕ್ (Romantic) ಆಗಿ ನರೇಶ್ ಮಾತನಾಡಿದ್ದಾರೆ. ತಾವಿಬ್ಬರೂ ಗಂಡ ಹೆಂಡತಿಯಾಗಿ ನಟಿಸಿರುವ ಕುರಿತು ಮತ್ತು ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಬಂದಿರುವ ಕುರಿತು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ತಮಗಿಂತ 33 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ ಪೃಥ್ವಿರಾಜ್

    ಖ್ಯಾತ ತೆಲುಗು ನಟ ಅಲಿ ಆಲಿ ನಿರ್ಮಿಸಿ, ನಟಿಸಿರುವ  ‘ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ’ ಸಿನಿಮಾ ಆಹಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರು ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪವಿತ್ರಾ ಲೋಕೇಶ್ ಪಾತ್ರವನ್ನು ಮೆಚ್ಚಿ ತುಂಬಾ ಜನರು ಸಂದೇಶ ಕಳುಹಿಸಿದ್ದಾರಂತೆ. ಅದಕ್ಕಾಗಿ ನರೇಶ್ ಮತ್ತು ಪವಿತ್ರಾ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

    ಈ ವಿಡಿಯೋ ನೋಡಿದ ಅನೇಕರು ಈ ಜೋಡಿಯ ರಿಲೇಶನ್ ಶಿಪ್ ಬಗ್ಗೆ ಮತ್ತೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ಇಷ್ಟೊಂದು ಕ್ಲೋಸ್ ಆಗಿ, ರೊಮ್ಯಾಂಟಿಕ್ ಆಗಿ ಇರುವ ಜೋಡಿಯನ್ನು ಕಂಡರೆ ಎಲ್ಲರಿಗೂ ಹಾಗೆಯೇ ಅನಿಸುತ್ತದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ಜೋಡಿಯ ಬಗ್ಗೆ ನೆಗೆಟಿವ್ ಕಾಮೆಂಟ್ ಗಳನ್ನು ಕೂಡ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ನರೇಶ್ ಅವರಿಂದ ಪವಿತ್ರಾ ಲೋಕೇಶ್ ಕೂಡ ದೂರ ದೂರ

    ನಟ ನರೇಶ್ ಅವರಿಂದ ಪವಿತ್ರಾ ಲೋಕೇಶ್ ಕೂಡ ದೂರ ದೂರ

    ವಿತ್ರಾ ಲೊಕೇಶ್ ಹಾಗೂ ನರೇಶ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಹಲವಾರು ತಿಂಗಳಿಂದ ಇವರಿಬ್ಬರ ಕುರಿತು ಅನೇಕ ವಿಷಯ ಕೇಳಿ ಬರುತ್ತಿವೆ. ಅದಕ್ಕೆ ಉತ್ತರವನ್ನು ಇಬ್ಬರೂ ಕೊಡುತ್ತಾ ಬಂದಿದ್ದಾರೆ. ಈಗ ಹೊಸ ವಿವಾದ ಅಖಾಡಕ್ಕೆ ಇಳಿದಿದೆ. ಇಷ್ಟು ದಿನ ಆಪ್ತ ಮಿತ್ರರಾಗಿದ್ದ ನರೇಶ್ ಹಾಗೂ ಪವಿತ್ರ ದೂರವಾಗಿದ್ದಾರಂತೆ. ಅದ್ಯಾವ ಕಾರಣಕ್ಕೆ ಹೀಗಾಯಿತು, ಏಕಾಏಕಿ ಇಬ್ಬರೂ ಮುನಿಸಿಕೊಂಡಿದ್ದು ನಿಜವಾ, ಇದಕ್ಕೆ ಯಾರು ಕಾರಣ, ಏನಿದರ ಹಿಂದಿನ ರಹಸ್ಯ ? ಇದರ ಬಗ್ಗೆ ಪವಿತ್ರಾ ಲೋಕೇಶ್ ಮಾತಾಡಿದರಾ ಅಥವಾ ಇಲ್ಲವಾ ? ಅದರ ಎಕ್ಸ್ಕ್ಲೂಸಿವ್ ಕಥನ  ಇಲ್ಲಿದೆ.

    ಹಲವಾರು ತಿಂಗಳಿಂದ ಪವಿತ್ರಾ ಹಾಗೂ ಗೆಳೆಯ ನರೇಶ್ ವಿವಾದದಿಂದಲೇ ಲೈಮ್‌ಲೈಟಿನಲ್ಲಿದ್ದರು. ಇದನ್ನು ಅವರು ಬೇಕಾಗಿ ಮಾಡಿಕೊಂಡಿರಲಿಲ್ಲ. ಆದರೆ ಇಂಥ ವಿಷಯ ಬಂದಾಗ ಸಹಜವಾಗಿ ಎಲ್ಲರೂ ಕೇಳುತ್ತಾರೆ. ಸುಳ್ಳು ಯಾವುದು ನಿಜ ಯಾವುದು ಎಂದು ತಿಳಿಯದೆ ಮಾತಾಡುತ್ತಾರೆ. ಹೀಗಾಗಿಯೇ ನರೇಶ್ ಮತ್ತು ಪವಿತ್ರಾ ನಡುವಿನ ಸಂಬಂಧ ಹೆಚ್ಚೆಚ್ಚು ಚರ್ಚೆಗೆ ಒಳಗಾಗುತ್ತಾ ಬಂದಿತು. ಈ ನಡುವೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಕೂಡ ಕೆಲವು ಆಪಾದನೆ ಮಾಡಿದರು. ಅದರಿಂದಲೂ ಪವಿತ್ರಾ ಲೋಕೇಶ್ ಸದ್ದು ಮಾಡಿದರು. ಈಗ ನರೇಶ್ ಹಾಗೂ ಪವಿತ್ರಾ ಮಧ್ಯೆ ಸಂಬಂಧವೇ ಕಡಿದ ಸಮಾಚಾರ ಬಂದಿದೆ.

    ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನರೇಶ್ (Naresh) ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರೂ ಅನೇಕ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸೂಪರ್ ಜೋಡಿಯಾಗಿ ಮಿಂಚಿದ್ದಾರೆ. ಟಾಲಿವುಡ್‌ನಲ್ಲಿ ಇಬ್ಬರಿಗೂ ದೊಡ್ಡ ಸ್ಥಾನ ಇದೆ. ಹೀಗಾಗಿಯೇ ಇಬ್ಬರ ಸ್ನೇಹಕ್ಕೆ ಹೆಚ್ಚು ತೂಕ ಬಂತು. ಸ್ನೇಹ ಮತ್ತೊಂದು ಮಗ್ಗುಲಿಗೆ ತಿರುಗಿತು. ಅದನ್ನು ಇಬ್ಬರೂ ಒಪ್ಪಿಕೊಂಡರು. ಇಷ್ಟೆಲ್ಲ ನಡೆಯುತ್ತಿರುವಾಗಲೇ ನರೇಶ್ ಮೂರನೇ ಪತ್ನಿ ರಮ್ಯಾ ಎಂಟ್ರಿಯಾಯಿತು. `ನಾನು ನರೇಶ್‌ಗೆ ಡಿವೋರ್ಸ್ ಕೊಡಲ್ಲ…’ ಎಂದು ಬೀದಿಯಲ್ಲಿ ನಿಂತು ಕೂಗಿದರು. ಪವಿತ್ರಾ ಲೋಕೇಶ್ ಮೇಲೆ ಎಲ್ಲ ಅಪಾದನೆ ಹೊರಿಸಿದರು ರಮ್ಯಾ. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

    ರಮ್ಯಾ ರಘುಪತಿ (Ramya Raghapathi) ಬೆಂಗಳೂರು ಹೆಣ್ಣು ಮಗಳು. ನರೇಶ್ ಅದಾಗಲೇ ಎರಡು ಮದುವೆ ಮಾಡಿಕೊಂಡಿದ್ದರು. ಅವೆಲ್ಲ ಮುರಿದುಬಿದ್ದಿದ್ದವು. ಆಮೇಲೆ ನರೇಶ್ ಹಾಗೂ ರಮ್ಯಾ ಹತ್ತಿರವಾದರು. ಹಿರಿಯರ ಸಮ್ಮುಖದಲ್ಲಿ ದಂಪತಿಗಳಾದರು. ಕೆಲವು ವರ್ಷ ಎಲ್ಲವೂ ಚೆನ್ನಾಗಿತ್ತು. ಅಥವಾ ಲೋಕ ಹಾಗೆ ನಂಬಿತ್ತು. ನೋಡ ನೋಡುತ್ತಿದ್ದಂತೆಯೇ ಇಬ್ಬರ ನಡುವೆ ಕಿತ್ತಾಟ ಆರಂಭವಾಯಿತು. ಇನ್ನು ಸಹಿಸಲು ಸಾಧ್ಯ ಇಲ್ಲ ಎಂದಾಗ ರಮ್ಯಾ ಬೆಂಗಳೂರಿಗೆ ಮರಳಿದರು. ತವರು ಮನೆಯಲ್ಲಿ ನೆಲೆಸಿದರು. ಈ ನಡುವೆ ಪವಿತ್ರಾ ಲೋಕೇಶ್ ಕೂಡ ಪತಿ ಸುಚೇಂದ್ರ ಪ್ರಸಾದ್‌ರನ್ನು ಬಿಟ್ಟು ನರೇಶ್ ಜೊತೆ ಹೆಜ್ಜೆ ಹಾಕಿದರು. ನೆನಪಿಡಿ, ಇಬ್ಬರ ಸಂಬಂಧಕ್ಕೆ ಕಾನೂನಿನ ಅಧಿಕೃತ ಮುದ್ರೆ ಬಿದ್ದಿರಲಿಲ್ಲ.

    ಒಂದು ಕಡೆ ರಮ್ಯಾ ಹಾಗೂ ನರೇಶ್ ನಡುವಿನ ಜಗಳ, ಇನ್ನೊಂದು ಕಡೆ ಪವಿತ್ರಾ ಮತ್ತು ಸುಚೇಂದ್ರ ಪ್ರಸಾದ್ ನಡುವಿನ ಹಾಕ್ಯಾಟ. ಅವರು ಇವರ ಮೇಲೆ, ಇವರು ಅವರ ಮೇಲೆ. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿದರು. ಅಸಲಿಗೆ ತಪ್ಪು ಯಾರದ್ದು ? ಉತ್ತರ ಸಿಗುವುದು ದುಸ್ತರವಾಯಿತು. ಯಾಕೆಂದರೆ ಇಂಥ ಸಂಸಾರದಲ್ಲಿ ಮಂತ್ರಕ್ಕಿಂತ ಉಗುಳೇ ಹೆಚ್ಚಾಗಿರುತ್ತದೆ. ಇನ್ನೆಲ್ಲಿ ಉತ್ತರ ಇನ್ನೆಲ್ಲಿ ಸಮಾಧಾನ ಇನ್ನೆಲ್ಲಿ ತಾರ್ಕಿಕ ಅಂತ್ಯ ? ರಮ್ಯಾ, ನಾನು ನರೇಶ್‌ಗೆ ಡಿವೋರ್ಸ್ ಕೊಡಲ್ಲ ಎನ್ನುವಲ್ಲಿಗೆ ಅಲ್ಪವಿರಾಮ ಬಿತ್ತು.

    ಈ ಮಧ್ಯೆ ರಮ್ಯಾ ಮತ್ತೊಂದು ಹೊಗೆ ಎಬ್ಬಿಸಿದರು. ನರೇಶ್ ಮನೆಯಲ್ಲಿ ರಮ್ಯಾ ಮತ್ತೆ ನೆಲೆಸಿದ್ದಾರೆ, ಡಿವೋರ್ಸ್ ಕೊಡಲು ಒಪ್ಪುತ್ತಿಲ್ಲ. ಮಕ್ಕಳಿಗಾಗಿ ನರೇಶ್‌ರನ್ನು ನಾನು ಬಿಡಲ್ಲ. ಇಂಥ ಮಾತು ಕೇಳಿ ಬಂದವು. ಕೊನೆಗೆ ಖುದ್ದು ನರೇಶ್ ಇದಕ್ಕೆ ಸ್ಪಷ್ಠಿಕರಣ ಕೊಟ್ಟರು. `ಈಗಾಗಲೇ ನಾನು ರಮ್ಯಾರಿಂದ ದೂರವಾಗಲು ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಹೀಗಿರುವಾಗ ರಮ್ಯಾ ಹೇಗೆ ನಮ್ಮ ಮನೆಯಲ್ಲಿ ಬಂದಿರಲು ಸಾಧ್ಯ ? ಅದೆಲ್ಲವೂ ಸುಳ್ಳೇ ಸುಳ್ಳು…’ ಹೀಗಂತ ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡರು.

    ಇನ್ನೇನು ಎಲ್ಲವೂ ಮುಗಿದ ಹಾಗಾಯಿತು, ರಮ್ಯಾರಿಂದ ನರೇಶ್ ಡಿವೋರ್ಸ್ ಪಡೆದುಕೊಳ್ಳುವುದೊಂದು ಬಾಕಿ. ಅಲ್ಲಿವರೆಗೆ ನೋ ಡ್ರಾಮಾ…ನೋ ಹಂಗಾಮ. ಹೀಗಂತ ಎಲ್ಲರೂ ತಿಳಿದುಕೊಂಡಿದ್ದರು. ಈಗ ನೋಡಿದರೆ ಮತ್ತೊಂದು ಬಾಂಬು ಸಿಡಿದಿದೆ. ನರೇಶ್ ಹಾಗೂ ಪವಿತ್ರಾ ನಡುವಿನ ಸಂಬಂಧ ಹದಗೆಟ್ಟಿದೆಯಂತೆ, ಯಾವ್ಯಾವುದೋ ಕಾರಣಕ್ಕೆ ಕಿತ್ತಾಟ ಮಾಡಿಕೊಂಡಿದ್ದಾರಂತೆ. ಇಬ್ಬರೂ ಈಗ ಜೊತೆಯಲ್ಲಿ ಇಲ್ಲವಂತೆ ಹೀಗೆ ಅನೇಕ ವಿಷಯಗಳು ಹರಿದಾಡುತ್ತಿವೆ. ಉತ್ತರ ಹೇಳಬೇಕಾದ ನರೇಶ್ ಅಂಡ್ ಪವಿತ್ರಾ ಮಾತ್ರ ಮೌನಕ್ಕೆ ಜಾರಿದ್ದಾರೆ.

    ಈ ಇಬ್ಬರ ಸಂಬಂಧ ಹಳಸಿದೆ ಎನ್ನುವ ವಿಷಯ ಈಗಾಗಲೇ ಟಾಲಿವುಡ್‌ನ ಅನೇಕ ಮಾಧ್ಯಮಗಳಲ್ಲಿ ಹರಿದಾಡಿದೆ. ಇಬ್ಬರನ್ನೂ ಸಂಪರ್ಕಿಸಿ ಉತ್ತರ ಪಡೆಯಲು ಪ್ರುಯತ್ನ ಕೂಡ ನಡೆದಿದೆ. ಆದರೆ ಅವರಾರೂ ಉತ್ತರ ನೀಡಿಲ್ಲ. ವಿದೇಶದಲ್ಲಿ ಇದ್ದಾರಾ ಎಂದು ಚೆಕ್ ಮಾಡಿದರೆ. ಅದೂ ಇಲ್ಲ. ಇಬ್ಬರೂ ಇದೇ ನೆಲದಲ್ಲಿದ್ದಾರೆ. ಕೊನೆಗೆ ನಾವು ಕೂಡ ಪವಿತ್ರಾ ಲೋಕೇಶ್‌ರನ್ನು ಸಂಪರ್ಕ ಮಾಡಲು ಯತ್ನಿಸಿದೆವು. ಅವರ ಮೊಬೈಲ್ ಸಂಖ್ಯೆಗೆ ಮೂರು ನಾಲ್ಕು ಬಾರಿ ಫೋನ್ ಮಾಡಿದೆವು. ಉತ್ತರ ಬರಲಿಲ್ಲ. ಕೊನೆಗೆ ಇಂತಿಂಥ ವಿಷಯಕ್ಕೆ ನಿಮ್ಮಿಂದ ಸ್ಪಷ್ಟನೆ ಬೇಕಾಗಿತ್ತು ಎನ್ನುವ ಸಂದೇಶವನ್ನೂ ಮೊಬೈಲ್‌ಗೆ ಕಳಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ರಮ್ಯಾ ನನ್ನ ಮನೆಯಲ್ಲಿ ಇಲ್ಲ, ನನ್ನೊಂದಿಗೆ ವಾಸಿಸುತ್ತಿಲ್ಲ: ನಟ ನರೇಶ್ ಸ್ಪಷ್ಟನೆ

    ರಮ್ಯಾ ನನ್ನ ಮನೆಯಲ್ಲಿ ಇಲ್ಲ, ನನ್ನೊಂದಿಗೆ ವಾಸಿಸುತ್ತಿಲ್ಲ: ನಟ ನರೇಶ್ ಸ್ಪಷ್ಟನೆ

    ಮೈಸೂರಿನಲ್ಲಿ ನಡೆದ ಹೈ ಡ್ರಾಮಾ ನಂತರ ತೆಲುಗು ನಟ ನರೇಶ್ ಮತ್ತು ರಮ್ಯಾ ರಘುಪತಿ (Ramya Raghupathi) ಪ್ರಕರಣ ತಣ್ಣಗಾಗಿತ್ತು. ಕೋರ್ಟ್ ನಲ್ಲಿ ಈ ಪ್ರಕರಣವನ್ನು ನೋಡಿಕೊಳ್ಳುವುದಾಗಿ ನರೇಶ್ ಹೇಳಿದ್ದರು. ಇತ್ತ ಕಡೆ ರಮ್ಯಾ ಅವರ ತಾಯಿಗೆ ಹುಷಾರಿಲ್ಲದ ಕಾರಣ ಅವರ ಮೌನವಹಿಸಿದ್ದರು. ಇದೀಗ ಮತ್ತೆ ರಮ್ಯಾ ಅವರು ನರೇಶ್ ಅವರ ಮನೆಗೆ ಹೋಗಿದ್ದಾರೆ, ನರೇಶ್ ಜೊತೆಯೇ ವಾಸಿಸಲು ನಿರ್ಧಾರ ತಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಇತ್ತು. ಅದಕ್ಕೆ ನರೇಶ್ ಸ್ಪಷ್ಟನೆ ನೀಡಿದ್ದಾರೆ.

    ನನ್ನ ಮನೆಯಲ್ಲಿ ರಮ್ಯಾ ಇದ್ದಾರೆ, ಇಲ್ಲಿಗೆ ಬಂದಿದ್ದಾರೆ ಎನ್ನುವುದು ಸುಳ್ಳು. ಅದು ಸಾಧ್ಯವಾಗದೇ ಇರುವ ಕೆಲಸ. ಯಾರೋ ಮಾನಸಿಕ ಸರಿ ಇಲ್ಲದ ವ್ಯಕ್ತಿಯೊಬ್ಬ ಈ ರೀತಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾನೆ. ರಮ್ಯಾ ಮತ್ತು ನಾನು ಎಂದಿಗೂ ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಡಿವೋರ್ಸ್ ಕೇಸ್ ಕೋರ್ಟಿನಲ್ಲಿದೆ. ಕೋರ್ಟ್ ತೀರ್ಪಿಗಾಗಿ ನಾನು ಕಾಯುತ್ತಿದ್ದೇನೆ. ಯಾರೂ ವಂದತಿಗಳನ್ನು ಯಾರೂ ನಂಬಬಾರದು ಎಂದು ನರೇಶ್ (Naresh) ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ:ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್

    ಅಲ್ಲದೇ, ರಮ್ಯಾ ಅವರು ಯಾವುದೇ ರೀತಿಯಲ್ಲೂ ತಮ್ಮನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟ ಪಡಿಸಿದ್ದು, ಡಿವೋರ್ಸ್ (Divorce) ತೀರ್ಪಿಗಾಗಿ ತಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ರೀತಿ ರೂಮರ್ (Rumor) ಹರಡಿಸುವವರ ವಿರುದ್ಧವೂ ನರೇಶ್ ಹರಿಹಾಯ್ದಿದ್ದಾರೆ. ಇನ್ಮುಂದೆ ಇಂತಹ ಸುದ್ದಿಗಳು ಬಂದಾಗ ನಂಬಬೇಡಿ ಎಂದೂ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ನರೇಶ್ ಮನೆಯಲ್ಲೇ ರಮ್ಯಾ ವಾಸ್ತವ್ಯ: ಪವಿತ್ರಾ ಲೋಕೇಶ್ ನಿಂದ ಪತಿಯ ದೂರ ಮಾಡಲು ತಂತ್ರ

    ನಟ ನರೇಶ್ ಮನೆಯಲ್ಲೇ ರಮ್ಯಾ ವಾಸ್ತವ್ಯ: ಪವಿತ್ರಾ ಲೋಕೇಶ್ ನಿಂದ ಪತಿಯ ದೂರ ಮಾಡಲು ತಂತ್ರ

    ತೆಲುಗಿನ ಖ್ಯಾತ ನಟ ನರೇಶ್ (Naresh) ಮತ್ತು ಬೆಂಗಳೂರಿನ ರಮ್ಯಾ ದಾಂಪತ್ಯ ಜೀವನದ ರಾದ್ಧಾಂತ ಸ್ವಲ್ಪ ತಿಂಗಳ ಮಟ್ಟಿಗೆ ತಣ್ಣಗಾಗಿತ್ತು. ಬೆಂಗಳೂರಿನಲ್ಲಿ ಇಬ್ಬರೂ ಮಾಡಿದ ಆರೋಪ ಪ್ರತ್ಯಾರೋಪದ ನಂತರ ನರೇಶ್ ಮತ್ತು ಪವಿತ್ರಾ ಲೋಕೇಶ್ ಮೈಸೂರಿನ ಲಾಡ್ಜ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅಲ್ಲಿಂದ ಪ್ರಕರಣಕ್ಕೆ ಬೇರೆ ತಿರುವು ಸಿಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ನರೇಶ್ ಮತ್ತು ಪವಿತ್ರಾ ಲೋಕೇಶ್ ಹೈದರಾಬಾದ್ಗೆ (Hyderabad) ಶಿಫ್ಟ್ ಆದರು.

    ಇತ್ತ ರಮ್ಯಾ (Ramya) ಅವರ ತಾಯಿಗೆ ಹುಷಾರಿಲ್ಲದ ಕಾರಣಕ್ಕಾಗಿ ಮತ್ತು ನರೇಶ್ ಈ ಎಲ್ಲ ಪ್ರಕರಣವನ್ನು ಕೋರ್ಟಿನಲ್ಲೇ ನೋಡಿಕೊಳ್ಳುತ್ತೇನೆ ಎಂದು ಪರಿಣಾಮ ಇಡೀ ಪ್ರಕರಣ ಕೆಲವು ತಿಂಗಳ ಮಟ್ಟಿಗೆ ತಣ್ಣಗಾಗಿತ್ತು. ಇಬ್ಬರೂ ತಮ್ಮ ಪಾಡಿಗೆ ತಾವು ಇದ್ದುಕೊಂಡು ಕೋರ್ಟ್ ನಲ್ಲಿ ಫೈಟ್ ಮಾಡುತ್ತಾರೆ ಎಂದುಕೊಳ್ಳುವಷ್ಟರಲ್ಲಿ ದಿಢೀರ್ ಅಂತ ನರೇಶ್ ಮನೆಯಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಆಗಿದೆಲ್ಲ ಸರಿ ಮಾಡಿ, ಗಂಡನ ಜೊತೆಯೇ ಇರುವುದಾಗಿ ಅವರು ಅಲ್ಲಿಗೆ ಹೋಗಿದ್ದಾರೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

     

    ಇತ್ತ ಪವಿತ್ರಾ ಲೋಕೇಶ್ (Pavithra Lokesh) ಜೊತೆ ತೋಟದ ಮನೆಯಲ್ಲಿ ನರೇಶ್ ಇದ್ದಾರೆ ಎಂದು ಹೇಳಲಾಗುತ್ತಿದೆ. ರಮ್ಯಾ ಮನೆಗೆ ಬಂದ ಹಿನ್ನೆಲೆಯಲ್ಲಿ ನರೇಶ್ ಗೊಂದಲಕ್ಕೀಡಾಗಿದ್ದಾರೆ. ಅಲ್ಲದೇ, ಪವಿತ್ರಾ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ರಮ್ಯಾ ತಾಕೀತು ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮತ್ತೆ ಗಂಡನ ಜೊತೆ ಬದುಕು ಮಾಡುತ್ತೇನೆ ಎಂದು ನರೇಶ್ ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನುವುದು ಸದ್ಯಕ್ಕಿರುವ ವರ್ತಮಾನ. ರಮ್ಯಾ ವಾಪಸ್ಸು ಮನೆಗೆ ಬರುತ್ತಿದ್ದಂತೆಯೇ ಪವಿತ್ರಾ ಕೂಡ ಗಲಿಬಿಲಿಗೊಂಡಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ

    ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ರು ರಮ್ಯಾ ರಘುಪತಿ

    ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ಕೆಲ ತಿಂಗಳುಗಳಿಂದ ಸಂಚಲನ ಮೂಡಿಸಿದ ವಿಚಾರ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ಲವ್ವಿ ಡವ್ವಿ ವಿಚಾರ. ಸಾಕಷ್ಟು ರಂಪಾಟದ ನಂತರ ಇದೀಗ ಮತ್ತೆ ನರೇಶ್ ವಿಷ್ಯಕ್ಕೆ ಹೊಸ ಟ್ವಿಸ್ಟೊಂದು ಸಿಕ್ಕಿದೆ. ಟಾಲಿವುಡ್ ನಟ ನರೇಶ್ ಮನೆಗೆ ರಮ್ಯಾ ರಘುಪತಿ ಮತ್ತೆ ಎಂಟ್ರಿ ಕೊಟ್ಟಿದ್ದಾರೆ.

    ಸದ್ಯ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿರುವ ಸುದ್ದಿ ಅಂದ್ರೆ ನರೇಶ್ ಮತ್ತು ಪವಿತ್ರಾ ಲೋಕೇಶ್ ವಿಚಾರ. ನರೇಶ್ ಮತ್ತು ಪತ್ನಿ ರಮ್ಯಾ ರಘುಪತಿ (Ramya Raghupathi) ಸಂಬಂಧದಲ್ಲಿ ಸಾಕಷ್ಟು ಬಿರುಕು ಬಂದ ಮೇಲೆ ಕಾನೂನು ಸಮರಕ್ಕೆ ಮುಂದಾಗಿದ್ದರು. ಈ ವೇಳೆ ನರೇಶ್ ಮತ್ತು ಪವಿತ್ರಾ ನಡುವೆ ಸಂಬಂಧವಿರುವ ವಿಚಾರ ಬೆಳಕಿಗೆ ಬಂದಿತ್ತು.

    ಬೆಂಗಳೂರಿನಲ್ಲಿ ಸಾಕಷ್ಟು ರಂಪಾಟದ ನಂತರ ಮೈಸೂರು ಹೋಟೆಲ್‌ವೊಂದರಲ್ಲಿ ನರೇಶ್ ಮತ್ತು ಪವಿತ್ರಾ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮೂವರು ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ನರೇಶ್ ಮನೆಗೆ ರಮ್ಯಾ ರಘುಪತಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೆಲ್ಲಾ ಗಲಾಟೆಯ ನಂತರ ನರೇಶ್ ಹೆದರಿದ್ದಾರೆ. ಈಗ ಪತ್ನಿ ರಮ್ಯಾ ಅವರನ್ನ ಮನೆಗೆ ಸೇರಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೆಟ್ಟೇರಿತು ಭಾವನಾ ಮೆನನ್- ವಿಜಯ್ ರಾಘವೇಂದ್ರ ನಟನೆಯ `ಕೇಸ್ ಆಫ್ ಕೊಂಡಾಣ’ ಚಿತ್ರ

    ಇನ್ನೂ ಪತಿ ನರೇಶ್ ಮನೆಗೆ ರಮ್ಯಾ ಎಂಟ್ರಿ ಕೊಟ್ಟರು ಕೂಡ ಕಾನೂನು ಸಮರ ನಿಲ್ಲಿಸಿಲ್ಲ. ಇವೆಲ್ಲದರ ನಡುವೆ ಪವಿತ್ರಾ ಲೋಕೇಶ್ ಮುಂದಿನ ನಡೆಯೇನು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಅಫೇರ್ ಆರೋಪ ಬೆನ್ನಲ್ಲೇ ಧಿಡೀರ್ ಸಂಭಾವನೆ ಹೆಚ್ಚಿಸಿಕೊಂಡ ಪವಿತ್ರಾ ಲೋಕೇಶ್

    ಚಿತ್ರರಂಗದ ಹಾಟ್ ಟಾಪಿಕ್ ಆಗಿರುವ ಪವಿತ್ರಾ ಲೋಕೇಶ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ತೆಲುಗಿನ ನಟ ನರೇಶ್ ಜತೆಗಿನ ಅಫೇರ್ ಆರೋಪದ ನಂತರ ಈಗ ಸಂಭಾವನೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

    ಕನ್ನಡದ ಪ್ರತಿಭಾವಂತ ನಟಿ ಪವಿತ್ರಾ ಲೋಕೇಶ್ ತೆಲುಗಿನಲ್ಲೂ ಬೇಡಿಕೆ ನಟಿಯಾಗಿ ಗುರುತಿಸಿಕೊಂಡವರು. ಸ್ಟಾರ್ ನಟರ ತಾಯಿಯಾಗಿ, ಪೋಷಕ ನಟಿಯಾಗಿ ಗಮನ ಸೆಳೆದವರು. ಈಗ ಸಾಕಷ್ಟು ವಿವಾದಗಳ ಬೆನ್ನಲ್ಲೇ ನಟಿ ತಮ್ಮ ಸಂಭಾವನೆಯನ್ನ ಹೆಚ್ಚಿಕೊಂಡಿದ್ದಾರೆ. ಈ ವಿಷ್ಯ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.

    ನರೇಶ್ ಜೊತೆಗಿನ ಅಫೇರ್ ವಿಚಾರವಾಗಿ ಪವಿತ್ರಾ ಅವರ ಹೆಸರು ತಳಕು ಹಾಕಿಕೊಂಡ ಮೇಲೆ ನಟಿಗೆ ಅವಕಾಶಗಳು ಕಮ್ಮಿಯಾಗುತ್ತಿದೆ. ನಿರ್ಮಾಪಕರು ತಾಯಿ ಪಾತ್ರಕ್ಕೆ ಕರೆಯಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟೇಲ್ಲಾ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಪವಿತ್ರಾ ಕೂಡ ಧಿಡೀರ್ ಅಂತಾ ಸಂಭಾವನೆ ಹೆಚ್ಚಿಕೊಂಡಿದ್ದಾರೆ. ಒಂದು ಚಿತ್ರಕ್ಕೆ 60 ಸಾವಿರ ರೂಪಾಯಿ ಪಡೆಯುತ್ತಿದ್ದ ನಟಿ ಈಗ ಧಿಡೀರ್ ಅಂತಾ 1 ಲಕ್ಷಕ್ಕೆ ಏರಿಸಿಕೊಂಡಿದ್ದಾರೆ. ಅವಕಾಶಗಳು ಕಮ್ಮಿಯಾಗಿರುವ ಈ ವೇಳೆಯಲ್ಲಿ ನಟಿಯ ನಡೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಬಾಲಿವುಡ್‌ ಬಿಟ್ಟು ದಕ್ಷಿಣದಲ್ಲೇ ಸೆಟಲ್‌ ಆಗ್ತಾರಾ ಸನ್ನಿ ಲಿಯೋನ್

    ಪವಿತ್ರಾ ಲೋಕೇಶ್ ವೃತ್ತಿರಂಗದಲ್ಲಿ ಮತ್ತೆ ನೆಲೆಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ನಟ ನರೇಶ್‌ವ ಕೂಡ ಬೆಂಬಲ ನೀಡ್ತಿದ್ದಾರೆ. ಇನ್ನು ಸ್ಯಾಂಡಲ್‌ವಯಡ್‌ನಿಂದ ಟಾಲಿವುಡ್ ಅಂಗಳದವರೆಗೂ ಸಂಚಲನ ಮೂಡಿಸುತ್ತಿರುವ ವಿಷ್ಯ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]