Tag: Narayangowda

  • ಚುನಾವಣೆ ವೇಳೆ ಸಿನಿಮಾದವ್ರು ಬಂದಿದ್ರು ಈಗ ಎಲ್ಲಿ ಹೋದ್ರು? ನಾರಾಯಣಗೌಡ

    ಚುನಾವಣೆ ವೇಳೆ ಸಿನಿಮಾದವ್ರು ಬಂದಿದ್ರು ಈಗ ಎಲ್ಲಿ ಹೋದ್ರು? ನಾರಾಯಣಗೌಡ

    ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಕಣ ಚುನಾವಣೆ ವೇಳೆ ಭಾರೀ ಸುದ್ದಿಯಲ್ಲಿತ್ತು. ಹೀಗಾಗಿ ಚುನಾವಣೆ ವೇಳೆ ಕ್ಷೇತ್ರಕ್ಕೆ ಬಂದಿದ್ದ ಸಿನಿಮಾದವರು ಈಗ ಎಲ್ಲಿ ಹೋದರು ಎಂದು ಶಾಸಕ ನಾರಾಯಣಗೌಡ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

    ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ನಡೆಯುತ್ತಿರೊ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ನಾರಾಯಣಗೌಡ ಈ ಮಾತನ್ನ ಹೇಳಿದ್ದಾರೆ. ಈಗಾಗಲೇ ನಿಖಿಲ್ ಗೆದ್ದಾಗಿದೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಚುನಾವಣೆ ವೇಳೆ ಕ್ಷೇತ್ರಕ್ಕೆ ಸಿನಿಮಾದವರು ಬಂದಿದ್ದರು ಈಗ ಅವರೆಲ್ಲಾ ಎಲ್ಲಿ ಹೋದರು? ಜನರ ಕಷ್ಟಗಳಿಗೆ ಆಗೋದೆ ಜೆಡಿಎಸ್‍ನವರು ಎಂದು ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಬಂದಿದ್ದ ಯಶ್ ಹಾಗೂ ದರ್ಶನ್ ರನ್ನು ಪರೋಕ್ಷವಾಗಿ ಟೀಕಿಸಿದರು.

    ಕುಮಾರಣ್ಣ ಸಿಎಂ ಆಗಿರುವುದರಿಂದ ನಮಗೆ ಯಾವುದೇ ಭಯ ಇಲ್ಲ. ಪಟ್ಟಣದ ಅಭಿವೃದ್ದಿಗಾಗಿ ನಾನು 10 ಕೋಟಿ ರೂ. ಕೇಳಿದ್ದೆ. ಆದರೆ ಅವರು 23 ವಾರ್ಡ್ ಗಳಿಗೂ ಸೇರಿ 23 ಕೋಟಿ ರೂ. ನೀಡಿದ್ದಾರೆ. ಹಾಗಾಗಿ ಈ ಬಾರಿ ಪಟ್ಟಣದ ಅಭಿವೃದ್ದಿಗಾಗಿ ನಮಗೆ 23 ಸ್ಥಾನಗಳೂ ಬೇಕು ಎಂದು ತಿಳಿಸಿದರು.

    ಬಳಿಕ ಮಾತನಾಡಿ, ಜಿಲ್ಲೆಯ ಅಭಿವೃದ್ದಿಗಾಗಿ ದೇವೇಗೌಡರ ಕುಟುಂಬದ ಕುಡಿ ಬೇಕಿತ್ತು. ಹಾಗಾಗಿ ನಿಖಿಲ್ ಅವರನ್ನ ಕರೆತರಲಾಗಿದೆ. ನಾವು ಶಾಸಕರೇ ನಿಖಿಲ್‍ರನ್ನ ರಾಜಕಾರಣಕ್ಕೆ ಕರೆತಂದದ್ದು. ದೇವೇಗೌಡರ ಪಾದಗಳಿಗೆ ಮುಗಿದು ನಿಖಿಲ್‍ರನ್ನ ರಾಜಕಾರಣಕ್ಕೆ ಕರೆತಂದಿದ್ದೇವೆ. ಆ ಮೂಲಕ ಅದೃಷ್ಠ ಬಂದಿದೆ ಎಂದು ಶಾಸಕ ನಾರಾಯಣಗೌಡ ಹೇಳಿದರು.

  • ಗೌರವದಿಂದ ಮನೆಯಲ್ಲಿರಿ, ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ- ನಟರಿಗೆ ಪರೋಕ್ಷ ಎಚ್ಚರಿಕೆ

    ಗೌರವದಿಂದ ಮನೆಯಲ್ಲಿರಿ, ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ- ನಟರಿಗೆ ಪರೋಕ್ಷ ಎಚ್ಚರಿಕೆ

    ಮಂಡ್ಯ: ಗೌರವದಿಂದ ಮನೆಯಲ್ಲಿ ಇರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ ಎಂದು ಜೆಡಿಎಸ್ ಶಾಸಕ ನಾರಾಯಣಗೌಡ ಅವರು ನಟರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ಮಂಡ್ಯದಲ್ಲಿ ಕೆ.ಆರ್ ಪೇಟೆ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಪರ ಪ್ರಚಾರ ಮಾಡಿದ ಅವರು ಅಂಬರೀಶ್ ಬಗ್ಗೆ ನಮಗೆ ಈಗಲೂ, ಮುಂದೆಯೂ ಗೌರವವಿದೆ. ಆದರೆ ಇತರ ಚಲನಚಿತ್ರ ಕಲಾವಿದರ ಬಗ್ಗೆ ನನಗೆ ಅಸಮಾಧಾನವಿದೆ. ಅನೇಕ ಚಿತ್ರಕಲಾವಿದರೂ ಗೊಂದಲನ್ನು ಹುಟ್ಟು ಹಾಕುತ್ತಿದ್ದಾರೆ. ಇದೇ ರೀತಿ ಗೊಂದಲ ಹುಟ್ಟು ಹಾಕಿದರೆ ಅವರಿಗೆ ಒಳ್ಳೆಯದಲ್ಲ. ಚಲನಚಿತ್ರದ ಕ್ಷೇತ್ರದ ಬಗ್ಗೆ ಮಾತನಾಡಲಿ. ಆದ್ರೆ ಅವರು ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ಒಳ್ಳೆಯದಲ್ಲ ಎಂದು ಹೇಳಿದರು.

    ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳುವ ಮೂಲಕ ಶಾಸಕರು, ದರ್ಶನ್ ಹಾಗೂ ಯಶ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

    ಕ್ಷಮೆ ಕೇಳಿದ ಶಾಸಕ:
    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಶಾಸಕ ನಾರಾಯಣಗೌಡ ಅವರು, ನಾವು ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆಸಿಕೊಂಡಿಲ್ಲ. ಸ್ಟಾರ್ ನಟರು ಮಂಡ್ಯದ ರೈತರ ಬಗ್ಗೆ ಹಾಗೂ ಜನರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಅವರು ನನ್ನ ಮಂಡ್ಯದ ಜನತೆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಇಷ್ಟೊಂದು ದಿನ ಕಾವೇರಿ ಹೋರಟಕ್ಕಾಗಿ ಹಾಗೂ ರೈತರ ಹೋರಾಟಕ್ಕಾಗಿ ಬಂದಿಲ್ಲ. ಅವರು ಈಗ ಮಂಡ್ಯಕ್ಕೆ ಬರುವುದು ಸರಿಯಲ್ಲ. ದರ್ಶನ್‍ಗೆ ಮಂಡ್ಯದ ಜನತೆ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದರು.

    ಈ ಚುನಾವಣೆ ಬಗ್ಗೆ ದರ್ಶನ್ ಅವರನ್ನು ಪ್ರಶ್ನಿಸಿದ್ದಾರೆ. ಆಗ ಅವರು ಮಂಡ್ಯದ ಜನತೆ ಬಗ್ಗೆ ಹಾಗೂ ನಮ್ಮ ಪಕ್ಷದ ಬಗ್ಗೆ ಏಕವಚನದಲ್ಲಿ ಹಾಗೂ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ನಾನು ಅವರ ಮೇಲೆ ಆಕ್ರೋಶದಿಂದ ಮಾತನಾಡಿದ್ದೇನೆ. ನಾನು ಆಕ್ರೋಶದಿಂದ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದೇನೆ. ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಮಂಡ್ಯ ಜನತೆಗೆ ಇವರ ಕೊಡುಗೆ ಏನಿದೆ?. ರೈತರ ಹೋರಾಟಕ್ಕೆ ಇವರು ಭಾಗಿಯಾಗಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.