Tag: Narayana

  • ಪೊಲೀಸ್ ನಾರಾಯಣನಾದ ಖುಷಿಯಲ್ಲಿ ರಕ್ಷಿತ್ ಶೆಟ್ಟಿ!

    ಪೊಲೀಸ್ ನಾರಾಯಣನಾದ ಖುಷಿಯಲ್ಲಿ ರಕ್ಷಿತ್ ಶೆಟ್ಟಿ!

    ನಿರ್ದೇಶಕನಾಗಿ, ನಟನಾಗಿ ಹಲವಾರು ಹೊಸ ಪ್ರಯತ್ನದ ಮೂಲಕವೇ ಕಾಲೂರಿ ನಿಂತಿರುವವರು ರಕ್ಷಿತ್ ಶೆಟ್ಟಿ. ಕಿರಿಕ್ ಪಾರ್ಟಿಯ ನಂತರ ರಕ್ಷಿತ್ ನಟನೆಯ ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲೂ ಕೂಡಾ ರಕ್ಷಿತ್ ಅವರದ್ದು ಹೊಸತನವಿರೋ ಪಾತ್ರ. ಈ ಚಿತ್ರದಲ್ಲವರು ಪೊಲೀಸ್ ಅಧಿಕಾರಿ ನಾರಾಯಣನಾಗಿ ಮಿಂಚಿರುವ ಖುಷಿಯಲ್ಲಿದ್ದಾರೆ!

    ಇದುವರೆಗೂ ಥರ ಥರದ ಒಂದಷ್ಟು ಪಾತ್ರಗಳಿಗೆ ಜೀವ ತುಂಬಿರೋ ರಕ್ಷಿತ್ ಈ ಚಿತ್ರದಲ್ಲಿ ಖಾಕಿ ತೊಟ್ಟು ನಟಿಸಿದ್ದಾರೆ. ಅದು ಬುದ್ಧಿವಂತಿಕೆಯ ಜೊತೆಗೇ ಹಾಸ್ಯ ಪ್ರಜ್ಞೆ ತುಂಬಿರೋ ವಿಶಿಷ್ಟವಾದ ಪಾತ್ರವಂತೆ. ಪೊಲೀಸ್ ಧಿರಿಸಿನಲ್ಲಿ ತಮ್ಮ ಕೈಗೇ ಬೇಡಿ ಹಾಕಿಕೊಂಡಿರೋ ವಿಶಿಷ್ಟವಾದ ಪೋಸ್ಟರಿನಲ್ಲಿ ರಕ್ಷಿತ್ ಮಜವಾಗಿಯೇ ಕಾಣಿಸಿಕೊಂಡಿದ್ದಾರೆ.

    ಸಚಿನ್ ರವಿ ನಿರ್ದೇಶನದ ಈ ಚಿತ್ರ ಕಿರಿಕ್ ಪಾರ್ಟಿಯನ್ನೇ ಮೀರಿಸುವಂಥಾ ಗೆಲುವೊಂದನ್ನು ದಾಖಲಿಸೋ ನಿರೀಕ್ಷೆ ಈಗಾಗಲೇ ಎಲ್ಲೆಡೆ ಹರಡಿಕೊಂಡಿದೆ. ಅದಕ್ಕೆ ಸರಿಯಾಗಿ ಹೀಗೆ ಒಂದೊಂದೇ ವಿಚಾರಗಳನ್ನು ಹಂತ ಹಂತವಾಗಿ ಹೊರ ಬಿಡುತ್ತಾ ಚಿತ್ರ ತಂಡ ಮತ್ತಷ್ಟು ಕುತೂಹಲ ಹುಟ್ಟುವಂತೆ ಮಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು: ಯುಪಿ ಡಿಸಿಎಂ

    ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು: ಯುಪಿ ಡಿಸಿಎಂ

    ಲಕ್ನೋ: ರಾಮಾಯಣ ಕಾಲದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಅದಕ್ಕೆ ಸಾಕ್ಷಿ ಸೀತಾಜಿ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಹೇಳಿದ್ದಾರೆ.

    ನಿನ್ನೆಯೆಷ್ಟೇ ಪತ್ರಿಕೋದ್ಯಮ ಮಹಾಭಾರತದ ಕಾಲದಲ್ಲೇ ಇತ್ತು ಎಂದು ಹೇಳಿದ್ದ ಅವರು ಇವತ್ತು ಸೀತಾಜಿ ಮಡಿಕೆಯಲ್ಲಿ ಜನಿಸಿದ್ದಳು ಎಂದು ಹೇಳಿದ್ದಾರೆ. ಸೀತಾ ಮಾತೆ ಮಡಿಕೆಯಲ್ಲಿ ಜನಿಸಿದ ಕಾರಣ ರಾಮಾಯಣದಲ್ಲೇ ಟೆಸ್ಟ್ ಟ್ಯೂಬ್ ಬೇಬಿ ಪರಿಕಲ್ಪನೆ ಇತ್ತು ಎಂದು ನಾವು ಊಹಿಸಿಕೊಳ್ಳಬಹುದು ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    ಮಥುರಾ ದಲ್ಲಿ ನಡೆಯುತ್ತಿರುವ ಹಿಂದಿ ಪತ್ರಿಕೋದ್ಯಮ ದಿನದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಹಾಭಾರತ ಯುದ್ಧದ ಚಿತ್ರಣವನ್ನು ಹಸ್ತಿನಾವತಿಯಲ್ಲಿದ್ದ ಧೃತರಾಷ್ಟ್ರನಿಗೆ ಸಂಜಯನು ವಿವರಿಸುತ್ತಿದ್ದನು. ಇದನ್ನು ಗಮನಿಸಿದಾಗ ಲೈವ್ ಟೆಲಿಕಾಸ್ಟ್ ಮಹಾಭಾರತದ ಸಮಯದಲ್ಲೇ ಇತ್ತು ಎಂದು ಹೇಳಿಕೆ ನೀಡಿದ್ದರು.

    ಇನ್ನು ನಾರದನನ್ನು ಇವತ್ತಿನ ಗೂಗಲ್ ಗೆ ಹೋಲಿಸಿ ಮಾತನಾಡಿದ ಅವರು ಮಾಹಿತಿಯನ್ನು ಯಾರಿಂದ ಯಾರಿಗೆ ಬೇಕಾದರೂ ಯಾವ ಜಾಗಕ್ಕೂ ಮೂರು ಬಾರಿ ನಾರಾಯಣ ಎಂದು ಹೇಳಿ ತಲುಪಿಸುತ್ತಿದ್ದರು ಎಂದು ತಿಳಿಸಿದ್ದರು.