Tag: Nani

  • ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

    ಇನ್ಮುಂದೆ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳಿಗೆ ಬಹಿಷ್ಕಾರ

    ಹೈದರಾಬಾದ್: ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾಗಳನ್ನು ಬಹಿಷ್ಕಾರ ಹಾಕಲು ತೆಲುಗು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ.

    ತೆಲುಗಿನಲ್ಲಿ ತಮ್ಮ ಆ್ಯಕ್ಟಿಂಗ್ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ನಟ ಎಂದರೆ ನಾನಿ. ಸೈಲೆಂಟ್ ಆಗಿ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ನಾನಿಗೆ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟ ಸಿನಿಮಾ ಈಗ. ಇದಾದ ನಂತರ ನಾನಿ ಸಿನಿಮಾಗಳೆಲ್ಲಾವೂ ಬಾಕ್ಸ್ ಆಫೀಸ್‍ನಲ್ಲಿ ಭಾರೀ ಸದ್ದು ಮಾಡತೊಡಗಿತು. ಸದ್ಯ ಟಾಲಿವುಡ್‍ನ ಹಲವು ಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ನಾನಿ ಸಿನಿಮಾವನ್ನು ಇನ್ನು ಮುಂದೆ ಥಿಯೇಟರ್‍ನಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಚಿತ್ರಮಂದಿರದ ಮಾಲೀಕರು ಪಟ್ಟು ಹಿಡಿದು ಕುಳಿತಿದ್ದಾರೆ.

    ಹೌದು, ಕೆಲವು ತಿಂಗಳ ಹಿಂದೆ ನಾನಿ ಅಭಿನಯದ ‘ವಿ’ ಸಿನಿಮಾವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೆ ನಾನಿಯ ಟಕ್ ಜಗದೀಶ್ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಹೀಗಾಗಿ ಆಕ್ರೋಶಗೊಂಡ ಚಿತ್ರಮಂದಿರ ಮಾಲೀಕರು ಇನ್ನು ಮುಂದೆ ನಾನಿ ಸಿನಿಮಾಗಳನ್ನು ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರದರ್ಶನ ಮಾಡುವುದಿಲ್ಲ ಎಂದು ಸಾಮೂಹಿಕವಾಗಿ ಬಹಿಷ್ಕಾರ ಹಾಕಿದ್ದಾರೆ. ಇದನ್ನೂ ಓದಿ:ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

    ಅಕ್ಟೋಬರ್ 10ರವರೆಗೂ ಕಾದು ನೋಡಿ ನಂತ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿಲ್ಲ ಎಂದರೆ ಓಟಿಟಿಯಲ್ಲಿ ನಿಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿಕೊಳ್ಳಿ ಯಾವುದೇ ತೊಂದರೆ ಇಲ್ಲ ಎಂದು ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಿದ್ದೇವು. ಅಲ್ಲದೇ ದಶಕಗಳ ಕಾಲ ನಾವು ನಿರ್ಮಾಪಕರುಗಳಿಗೆ ಲಾಭ ಮಾಡಿಕೊಡುತ್ತಾ ಬಂದಿದ್ದೇವೆ. ಹೀಗಿದ್ದರೂ ಕೆಲ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಓಟಿಟಿಗೆ ನೀಡಿದ್ದಾರೆ ಎಂದು ಚಿತ್ರ ಪ್ರದರ್ಶಕರ ಪ್ರಮುಖರೊಬ್ಬರು ಆರೋಪಿಸಿದ್ದಾರೆ.

    ಈ ಹಿಂದೆ ಸಂದರ್ಶನವೊಂದರಲ್ಲಿ ನಾನಿ ಕೂಡ ವಿ ಸಿನಿಮಾವನ್ನು ನಾನು ಓಟಿಟಿಯಲ್ಲಿ ಬಿಡುಗಡೆ ಮಾಡಿ ತಪ್ಪು ಮಾಡಿದ್ದೆ ಎಂದಿದ್ದರು. ಆದರೆ ಇದೀಗ ನಾನಿ ಅಭಿನಯದ ಹೊಸ ಸಿನಿಮಾ ಮತ್ತೆ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಸದ್ಯ ಈ ವಿಚಾರವಾಗಿ ಮಾತನಾಡಿದ ಚಿತ್ರ ಮಂದಿರ ಮಾಲೀಕರ ಸಂಘದ ಪ್ರಮುಖ ಮುಖಂಡ ಶ್ರೀಹರಿ, ನಾನಿ ಹೆದರು ಪುಕ್ಕಲ. ಮಾತಿನ ಮೇಲೆ ನಿಗಾ ಇಲ್ಲದ ವ್ಯಕ್ತಿ. ಈ ಮುನ್ನ ತಮ್ಮ ಸಿನಿಮಾಗಳನ್ನು ಚಿತ್ರಮಂದಿರಗಳಿಗರೆ ಕೊಡುತ್ತೇನೆ ಎಂದವರು ಇದೀಗ ಓಟಿಟಿಗೆ ಕೊಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಬದಲಾಯ್ತು ಸುಶಾಂತ್ ಎಫ್‍ಬಿ ಫೋಟೋ- ಸ್ವರ್ಗದಲ್ಲಿ ನೆಟ್‍ವರ್ಕ್ ಸಿಗುತ್ತಾ ಅಂದ್ರು ಫ್ಯಾನ್ಸ್

  • ಯಶ್, ನಾನಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡ್ತೀರಿ – ನಾನಿ ಎಂದ ಶ್ರದ್ಧಾ ಶ್ರೀನಾಥ್

    ಯಶ್, ನಾನಿ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡ್ತೀರಿ – ನಾನಿ ಎಂದ ಶ್ರದ್ಧಾ ಶ್ರೀನಾಥ್

    ಹೈದರಾಬಾದ್: ನಟಿ ಶ್ರದ್ಧಾ ಶ್ರೀನಾಥ್ ಅವರು ತೆಲುಗಿನಲ್ಲಿ ನಟಿಸಿದ ‘ಜೆರ್ಸಿ’ ಸಿನಿಮಾ ಬಿಡುಗಡೆಯಾಗಿದೆ. ಈ ವೇಳೆ ಮಾಧ್ಯಮದವರು ನೀವು ನಾನಿ ಹಾಗೂ ಯಶ್ ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಶ್ರದ್ಧಾ ನಾನಿ ಅವರನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಉತ್ತರಿಸಿದ್ದಾರೆ.

    ಕಳೆದ ಶುಕ್ರವಾರ ನಾನಿ ಹಾಗೂ ಶ್ರದ್ಧಾ ಶ್ರೀನಾಥ್ ನಟಿಸಿದ ಜೆರ್ಸಿ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.

     

    View this post on Instagram

     

    Last night. Celebrating with the heroes of Jersey. My director Gowtam – I call him a visionary. My most favourite person on set. My go to person for everything Sarah. What he has created is magical and so so special. Everyone told me that they couldn’t remember the last time they cried during a movie. You are genius, Gowtam. Nani – the best co actor I could ask for. Humourous, intelligent, inspirational and such fantastic company. His understanding of the craft is beyond words. A complete actor. Brilliant. Sanu sir – the wittiest man on set. As an actor I have been fascinated with the camera ever since I joined this field and watching Sanu sir go about doing his job was such a delight. I learnt so much from him. I was amused and laughing all the time thanks to him. Best. Anirudh – how he has elevated Jersey to another level we all know. Thank you for the music, Anirudh. My entire direction department and some of the camera department – such a jolly bunch. Always laughing at the lame jokes I made on set and appreciating my broken Telugu. It was so good working with each and every one of you.

    A post shared by Shraddha Srinath (@shraddhasrinath) on

    ಸ್ಟಾರ್ ಆಗಿ ನಾನು ನಾನಿ ಜೊತೆ ಕೆಲಸ ಮಾಡಿದ್ದೇನೆ. ಹಾಗಾಗಿ ಯಶ್ ಬದಲು ನಾನಿ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಯಶ್ ಕೂಡ ಸ್ಟಾರ್ ಆಗಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಯಶ್ ಧಾರಾವಾಹಿಯಿಂದ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಅವರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರು ಕನ್ನಡ ಚಿತ್ರರಂಗವನ್ನು ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ. ನಾನು ಕೇವಲ ಒಂದು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಅವರನ್ನು ಹತ್ತಿರದಿಂದ ನಾನು ನೋಡಿಲ್ಲ. ಹಾಗಾಗಿ ನಾನಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತನ್ನ ಉತ್ತರಕ್ಕೆ ಸಮರ್ಥನೆ ನೀಡಿದ್ದಾರೆ.

    ನಂತರ ಮಾಧ್ಯಮದವರು ನೀವು ಸ್ಯಾಂಡಲ್‍ವುಡ್ ಹಾಗೂ ಟಾಲಿವುಡ್‍ನಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಶ್ರದ್ಧಾ, “ನನಗೆ ಎಲ್ಲ ಚಿತ್ರರಂಗ ಇಷ್ಟವಾಗುತ್ತದೆ. ನಾನು ಕೆಲಸವನ್ನು ಪ್ರೊಫೆಶನ್ ಆಗಿ ನೋಡುತ್ತೇನೆ. ಹಾಗಾಗಿ ನಾನು ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಒಂದು ಚಿತ್ರರಂಗ ಆಯ್ಕೆ ಮಾಡಿ ನನಗೆ ನನ್ನ ಅಭಿಮಾನಿಗಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ” ಎಂದು ಹೇಳಿದರು.

  • ರಶ್ಮಿಕಾ ನಂತರ ಮತ್ತೆ ಕನ್ನಡದ ನಟಿ ಜೊತೆ ನಾನಿ ರೊಮಾನ್ಸ್!

    ರಶ್ಮಿಕಾ ನಂತರ ಮತ್ತೆ ಕನ್ನಡದ ನಟಿ ಜೊತೆ ನಾನಿ ರೊಮಾನ್ಸ್!

    ಬೆಂಗಳೂರು: ‘ದೇವದಾಸ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಟಿಸಿದ್ದ ಟಾಲಿವುಡ್ ಹ್ಯಾಂಡ್‍ಸಮ್ ಹಂಕ್ ನಾನಿ ಮುಂದಿನ ಚಿತ್ರದಲ್ಲಿ ಕನ್ನಡ ನಟಿ ಜೊತೆ ರೊಮಾನ್ಸ್ ಮಾಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ನಾನಿ ಅವರ ಮುಂದಿನ ‘ಜೆರ್ಸಿ’ ಚಿತ್ರಕ್ಕೆ ಕನ್ನಡದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸುವ ಸಾಧ್ಯತೆಗಳಿವೆ. ‘ಮಳ್ಳಿರಾವಾ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಗೌತಮ್ ತಿನ್ನನೋರಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ.

    ಶ್ರದ್ಧಾ ಈಗಾಗಲೇ ಕನ್ನಡ, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಆದರೆ ಈಗ ತೆಲುಗು ಚಿತ್ರರಂಗದಲ್ಲೂ ಮಿಂಚಲು ರೆಡಿಯಾಗಲಿದ್ದಾರೆ. ಸದ್ಯ ಶ್ರದ್ಧಾ ಈಗ ಶಿವರಾಜ್‍ಕುಮಾರ್ ನಟಿಸುತ್ತಿರುವ ‘ರುಸ್ತುಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಹಿಂದಿಯಲ್ಲಿ ‘ಮಿಲನ್ ಟಾಕೀಸ್’ ಚಿತ್ರದಲೂ ನಟಿಸುತ್ತಿದ್ದಾರೆ.

    ಜೆರ್ಸಿ ಸಿನಿಮಾದಲ್ಲಿ ನಾನಿ ಕ್ರಿಕೆಟ್ ಆಟಗಾರನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಕ್ರಿಕೆಟ್ ಪ್ರಾಕ್ಟೀಸ್ ಮಾಡಲು ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದಾರೆ. ಆದರೆ ಈ ಚಿತ್ರದಲ್ಲಿ ಶ್ರದ್ಧಾ ನಾಯಕಿ ಆಗಲಿದ್ದಾರೆ ಎನ್ನುವ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ತಿಳಿದುಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಶ್ಮಿಕಾ ಮಂದಣ್ಣ ನನ್ನ ಬಾಡಿಗಾರ್ಡ್ ಆಗಿದ್ದರು: ನಾಗಾರ್ಜುನ

    ರಶ್ಮಿಕಾ ಮಂದಣ್ಣ ನನ್ನ ಬಾಡಿಗಾರ್ಡ್ ಆಗಿದ್ದರು: ನಾಗಾರ್ಜುನ

    ಹೈದರಾಬಾದ್: ರಶ್ಮಿಕಾ ಮಂದಣ್ಣ ನನಗೆ ಬಾಡಿಗಾರ್ಡ್ ಆಗಿದ್ದರು ಎಂದು ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಹೇಳಿದ್ದಾರೆ.

    ಗುರುವಾರ ಸಂಜೆ ರಶ್ಮಿಕಾ ಮಂದಣ್ಣ, ನಾನಿ ಹಾಗೂ ನಾಗುರ್ಜನ ಅವರು ಅಭಿನಯಿಸಿದ ‘ದೇವದಾಸ್’ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರ ಜೊತೆ ಸಮಂತಾ, ಸುಶಾಂತ್, ಅಖಿಲ್ ಹಾಗೂ ಅಮಲಾ ಅಕ್ಕಿನೇನಿ ಕೂಡ ಭಾಗಿಯಾಗಿದ್ದರು.

    ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕರಾದ ನಾಗರ್ಜುನ ಹಾಗೂ ನಾನಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತೆಲುಗು ಪ್ರೇಕ್ಷಕರಿಗೆ ರಶ್ಮಿಕಾ ಮಂದಣ್ಣ ಏಕೆ ಇಷ್ಟವಾಗುತ್ತಾರೆ ಎಂಬುದನ್ನು ಕಾರ್ಯಕ್ರಮದಲ್ಲಿ ಎಲ್ಲರ ಸಮ್ಮುಖದಲ್ಲಿ ಹೇಳಿದರು.

    ಚಿತ್ರದ ಚಿತ್ರೀಕರಣ ಮುಗಿಸಿ ನಾವು ಥೈಲ್ಯಾಂಡ್‍ನಿಂದ ವಾಪಸ್ ಬರುತ್ತಿದ್ದಾಗ ರಶ್ಮಿಕಾ ನನ್ನ ಪಕ್ಕದಲ್ಲೇ ಕುಳಿತುಕೊಂಡಿದ್ದರು. ಮೂರು ಗಂಟೆಯ ಪ್ರಯಾಣದಲ್ಲಿ ರಶ್ಮಿಕಾ ನಿರಂತರವಾಗಿ ನನ್ನನ್ನು ನಗಿಸುತ್ತಲ್ಲೇ ಇದ್ದರು. ಅಲ್ಲದೇ ರಶ್ಮಿಕಾ ನನಗೆ ಬಾಡಿಗಾರ್ಡ್ ಆಗಿ ಕೂಡ ಇದ್ದರು. ಫ್ಲೈಟ್‍ನಲ್ಲಿ ರಾತ್ರಿ ಹೊತ್ತು ನಮ್ಮ ಹಿಂದೆ ಕುಳಿತ್ತಿದ್ದವರು ಕುಡಿದ ನಶೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ. ಆಗ ರಶ್ಮಿಕಾ ನನ್ನನ್ನು ರಕ್ಷಿಸಲು ಅವರ ಮೇಲೆ ಕೈ ಕೂಡ ಮಾಡಿದರು ಎಂದು ಹೇಳಿದರು.

    ಸದ್ಯ ‘ಚಲೋ’ ಹಾಗೂ ‘ಗೀತಾ ಗೋವಿಂದಂ’ ಚಿತ್ರದ ನಂತರ ದೇವದಾಸ್ ಚಿತ್ರ ರಶ್ಮಿಕಾಗೆ ಹ್ಯಾಟ್ರಿಕ್ ಗೆಲವು ಸಿಗಲಿದೆ. ರಶ್ಮಿಕಾ ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗುವುದರಲ್ಲಿ ಯಾವುದೇ ಅನುಮಾವಿಲ್ಲ ಎಂದು ನಾಗಾರ್ಜುನ್ ಕಾರ್ಯಕ್ರಮದಲ್ಲಿ ಹೇಳಿದರು.

    ಕಾರ್ಯಕ್ರಮದಲ್ಲಿ ನಟ ನಾನಿ ಕೂಡ ರಶ್ಮಿಕಾ ಬಗ್ಗೆ ಮಾತನಾಡಿದರು. ರಶ್ಮಿಕಾ ಅವರ ಜೊತೆ ಕೆಲಸ ಮಾಡಿದ್ದು ನಿಜಕ್ಕೂ ಪಾಸಿಟೀವ್ ಎನರ್ಜಿ. ಅವರು ಸಿನಿಮಾ ಸೆಟ್‍ನಲ್ಲಿ ಯಾವಾಗಲೂ ನಗುತ್ತಿರುತ್ತಾರೆ. ಅವರು ಚಿತ್ರದ ಸೆಟ್‍ನಲ್ಲಿ ಇದ್ದಾರೆ ಎಂದರೆ ಅಲ್ಲಿ ಎಲ್ಲರು ಖುಷಿಯಾಗಿರುತ್ತಾರೆ ಎಂದು ನಟ ನಾನಿ ರಶ್ಮಿಕಾ ಅವರ ಬಗ್ಗೆ ಮಚ್ಚುಗೆ ವ್ಯಕ್ತಪಡಿಸಿದರು.

    ಸದ್ಯ ದೇವದಾಸ್ ಚಿತ್ರ ಇದೇ ತಿಂಗಳು ಸೆಪ್ಟೆಂಬರ್ 27ರಂದು ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಈಗ’ ಸಿನಿಮಾ ಖ್ಯಾತಿಯ ನಟ ನಾನಿ ಕಾರ್ ಅಪಘಾತ!

    `ಈಗ’ ಸಿನಿಮಾ ಖ್ಯಾತಿಯ ನಟ ನಾನಿ ಕಾರ್ ಅಪಘಾತ!

    ಹೈದರಾಬಾದ್: ಟಾಲಿವುಡ್‍ನಲ್ಲಿ ತನ್ನದೇ ಆದ ಶೈಲಿಯ ಚಿತ್ರಗಳಿಗೆ ಹೆಸರುವಾಸಿಯಾಗಿರೋ ನಟ ನಾನಿ ಕಾರ್ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಜೂಬಿಲಿ ಹಿಲ್ಸ್ ರೋಡ್ ನಂ. 45 ರಲ್ಲಿ ಈ ಅಪಘಾತ ಸಂಭವಿಸಿದೆ. ಸಿನಿಮಾವೊಂದರ ಚಿತ್ರೀಕರಣ ಮುಗಿಸಿಕೊಂಡು ಶುಕ್ರವಾರ ನಾನಿ ತನ್ನ ಇನ್ನೋವಾ ಕಾರಿನಲ್ಲಿ ಡ್ರೈವರ್ ಶ್ರೀನಿವಾಸ್ ಜೊತೆ ಮನೆಗೆ ಹಿಂದಿರುಗುತ್ತಿದ್ದರು. ಅಂತೆಯೇ ತನ್ನ ಟೊಯೊಟಾ ಇನ್ನೊವಾ ಕಾರಿನಲ್ಲಿ ಜುಬಿಲೀ ಹಿಲ್ಸ್ ನಿಂದ ಗ್ಯಾಚಿಬೋವ್ಲಿಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಸುಮಾರು ಸಂಜೆ 4.30 ಕ್ಕೆ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದೆ. ಘಟನೆಯ ಸಂದರ್ಭದಲ್ಲಿ ನಟ ನಾನಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಅದೃಷ್ಟವಶಾತ್ ಕಾರಿನಲ್ಲಿ ಏರ್ ಬ್ಯಾಗ್‍ಗಳನ್ನು ಅಳವಡಿಸಿದ್ದರಿಂದ ಇಬ್ಬರ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ನರೇಶ್ ಹೇಳಿದ್ದಾರೆ.

    ಈ ಸಂಬಂಧ ಚಾಲಕನ ವಿರುದ್ಧ ಸೆಕ್ಷನ್ 3 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಪಘಾತದ ಬಳಿಕ ಪ್ರತಿಕ್ರಿಯಿಸಿದ ನಾನಿ, ನಾನು ಚೆನ್ನಾಗಿದ್ದೇನೆ. ಸಣ್ಣ ಪುಟ್ಟ ಗಾಯಗಳಾಗಿವೆ. ಯುದ್ಧಂಗೆ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ಅಷ್ಟೆ. ನಾನು ಒಂದು ವಾರದಲ್ಲಿ ಚೇತರಿಸಿಕೊಂಡು ಮತ್ತೆ ಬರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಸ್ತುತ ನಾನಿ ಮೆರ್ಲಾಪಾಕಾ ಗಾಂಧಿ ನಿರ್ದೇಶನದ `ಕೃಷ್ಣಾರ್ಜುನ ಯುದ್ಧಂ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾನಿ ಡಬಲ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೃಷ್ಣ ಮತ್ತು ಅರ್ಜುನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅನುಪಮ ಪರಮೇಶ್ವರನ್ ಮತ್ತು ರುಕ್ಷಾರ್ ಮೀರ್ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ.

    2012 ಜುಲೈ 6 ರಲ್ಲಿ ಬಿಡುಗಡೆಯಾಗಿದ್ದ ಎಸ್ ಎಸ್ ರಾಜಮೌಳಿ ನಿರ್ದೇಶನದ `ಈಗ’ ಸಿನಿಮಾದಲ್ಲಿ ನಾನಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಾನಿ ಒಂದು ನೊಣವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿದ್ದರು. ಈ ಸಿನಿಮಾದಲ್ಲಿ ಸ್ಯಾಂಡಲ್‍ವುಡ್ ನ ಸುದೀಪ್ ವಿಲನ್ ಆಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.