Tag: Nagasadhu

  • ‘ಕೈಲಾಸ’ ಸಾಂಗ್ ಬಿಡುಗಡೆ ಮಾಡಿದ ಕಾಶಿಯ ನಾಗಸಾಧು

    ‘ಕೈಲಾಸ’ ಸಾಂಗ್ ಬಿಡುಗಡೆ ಮಾಡಿದ ಕಾಶಿಯ ನಾಗಸಾಧು

    ‘ರಂಗಸಮುದ್ರ’ ಸಿನಿಮಾ ಈಗ ಮತ್ತೊಂದು ವಿಶೇಷ ರೀತಿಯಲ್ಲಿ ಸಿನಿಮಾ ಪ್ರಮೋಷನ್ ಮಾಡಿದೆ. ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಿ ಆಡೀಯೋ ಬಿಡುಗಡೆ ಮಾಡುವುದು ಈಗಿನ ಸಿನಿಮಾ ತಂಡಗಳ ಟ್ರೆಂಡ್. ಆದರೆ ಅದನ್ನು ಹೊರತು ಪಡಿಸಿ ಹೀಗೂ ಬಿಡುಗಡೆ ಮಾಡಬಹುದು  ಎಂದು ಪವಿತ್ರ ಕ್ಷೇತ್ರ ಕಾಶಿಗೆ ತೆರಳಿ ಸಾಂಗ್ ಗೆ ಹೊಂದಿಕೊಂಡಂತಿರುವ ಒಬ್ಬ ನಾಗಸಾಧುಗಳ ಬಳಿ ಬಿಡುಗಡೆ ಮಾಡಿಸಿದೆ.

    ದೇಶದ ಹೆಸರಾಂತ ಗಾಯಕ ಕೈಲಾಶ್ ಕೇರ್ ಕನ್ನಡದಿಂದ ಹಿಂದಿಗೆ ಸ್ವತಃ ತಾವೇ ಸಾಹಿತ್ಯ ಬರೆದುಕೊಂಡು ತುಂಬಾ ಇಷ್ಟ ಪಟ್ಟು ಹಾಡಿರುವುದು ಲಿರಿಕಲ್ ಸಾಂಗ್ ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಕನ್ನಡ ಸಿನಿರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ರಂಗಾಯಣ ರಘು ಈ ಹಿಂದೆ ಕಾಮಿಡಿ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದರು. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಹಾಗು ವಿಶಿಷ್ಟ ಪಾತ್ರದಲ್ಲಿ ಅವರು ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ. ಇದನ್ನೂ ಓದಿಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

                   

    ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಸಂಪೂರ್ಣ ಭಂಡಾರವನ್ನೇ ಉಪಯೋಗಿಸಿ ಚಿತ್ರೀಕರಿಸಿದ ಮೊದಲ ಸಾಂಗ್ ಇದಾಗಿದ್ದು, ಹಾಡು ಅತ್ಯಂತ ಕಲರ್ ಫುಲ್ ಆಗಿ ಮೂಡಿಬಂದಿದೆ. ಈ ಹಾಡನ್ನು ಚಿತ್ರೀಕರಿಸಲು ಬೇಕಾದ ಸ್ಥಳ ಹಾಗು ಹೊಂದಿಕೊಳ್ಳುವ ಜನ ಬೇಕಿತ್ತು. ಹಾಗಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಹುಲಿಜಯಂತಿ ಊರನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಮಾಳಿಂಗರಾಯ ಸ್ವಾಮಿ ಜಾತ್ರೆಗೆ ಬರುವ ಸರಿಸುಮಾರು 15 ಲಕ್ಷ ಜನರು ಮಧ್ಯೆ ಹಾಡನ್ನು ಸೆರೆ ಹಿಡಿದಿದ್ದಾರೆ ನಿರ್ದೇಶಕ ರಾಜಕುಮಾರ್ ಅಸ್ಕಿ ಹಾಗು ಕೋರಿಯೋಗ್ರಫರ್ ಬಿ. ಧನಂಜಯ್.

    ಹೊಯ್ಸಳ ಕೊಣನೂರು ಈ ಚಿತ್ರದ ನಿರ್ಮಾಪಕರು. ಹೊಸಬರನ್ನೆ ಒಳಗೊಂಡಿರುವ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿದ್ದಾರೆ. ರಂಗಸಮುದ್ರ ಚಿತ್ರದಲ್ಲಿ 5 ಹಾಡುಗಳಿದ್ದು ಕೈಲಾಶ್ ಖೇರ್, ಬಾಹುಬಲಿ ಖ್ಯಾತಿಯ ಎಮ್ ಎಮ್ ಕೀರವಾಣಿ, ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಹಾಗು ದೇಸಿ ಮೋಹನ್ ಧ್ವನಿಯಾಗಿದ್ದಾರೆ. ಈ 5 ಗೀತೆಗಳಿಗೂ ಸಾಹಿತ್ಯ ಬರೆದಿರುವ ವಾಗೀಶ್ ಚನ್ನಗಿರಿ ತನ್ನ ಮೊದಲ ಸಾಹಿತ್ಯಕ್ಕೆ ಅತ್ಯುನ್ನತ ಗಾಯಕರು ಧ್ವನಿಗೂಡಿರುವುದು ನನಗೊಂದು ಗರ್ವ ಮತ್ತು ಹೆಮ್ಮೆ ಎನ್ನುತ್ತಾರೆ. ದೇಸಿಮೋಹನ್ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಮುಖ್ಯಭೂಮಿಕೆಯಲ್ಲಿ ರಂಗಾಯಣ ರಘು, ಸಂಪತ್ ರಾಜ್, ದಿವ್ಯಾಗೌಡ, ಮೋಹನ್ ಜುನೇಜಾ, ಗುರುರಾಜ್ ಹೊಸಕೋಟೆ ಸೇರಿದಂತೆ ಮುಂತಾದವರಿದ್ದಾರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾಗಸಾಧು ಮೊರೆ ಹೋದ ಮಾಜಿ ಸಚಿವ ಜರ್ನಾದನ ರೆಡ್ಡಿ

    ನಾಗಸಾಧು ಮೊರೆ ಹೋದ ಮಾಜಿ ಸಚಿವ ಜರ್ನಾದನ ರೆಡ್ಡಿ

    ಬಳ್ಳಾರಿ: ಮಾಜಿ ಸಚಿವ, ಗಣಿದಣಿ ಜನಾರ್ದನ ರೆಡ್ಡಿ ನಾಗಸಾಧು ಮೊರೆ ಹೋಗಿದ್ದಾರೆ.

    ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೇವರಕೊಳ್ಳದ ನಾಗಸಾಧು ದಿಗಂಬರ ರಾಜಭಾರತಿ ಸ್ವಾಮೀಜಿ ಅವರನ್ನು ಮನೆಗೆ ಕರೆಸಿಕೊಂಡಿದ್ದಾರೆ. ದಿಗಂಬರ ರಾಜಭಾರತಿ ಸ್ವಾಮೀಜಿ ವರ್ಷದಲ್ಲಿ ಆರು ತಿಂಗಳು ಮಾತನಾಡುತ್ತಾರೆ ಹಾಗೂ ಉಳಿದ ಆರು ತಿಂಗಳು ಮೌನದಲ್ಲಿರುತ್ತಾರೆ.

    ಜನಾರ್ದನ ರೆಡ್ಡಿ ನಾಗಸಾಧುವನ್ನು ಮನೆಗೆ ಕರೆಸಿಕೊಂಡು ತನಗಿರುವ ಕಷ್ಟದ ಬಗ್ಗೆ ಅವರ ಬಳಿ ಹೇಳಿಕೊಂಡಿದ್ದಾರೆ. ಜನಾರ್ದನ ರೆಡ್ಡಿ ಅವರ ಕಷ್ಟ ಕೇಳಿ ಶೀಘ್ರದಲ್ಲೇ ಎಲ್ಲ ಕಷ್ಟ ನಿವಾರಣೆಯಾಗುತ್ತದೆ ಎಂದು ನಾಗಸಾಧು ಆಶೀರ್ವಾದ ಮಾಡಿದ್ದಾರೆ.

    ಹೊಸಪೇಟೆ ತಾಲೂಕಿನ ಸಂಕ್ಲಾಪುರದಲ್ಲಿರುವ ಶಾಲೆಯಲ್ಲಿ ಇದೇ ತಿಂಗಳು 15ರಂದು ನಾಗಸಾಧು ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜನಾರ್ದನ ರೆಡ್ಡಿ ಅವರನ್ನು ನಾಗಸಾಧು ಆಹ್ವಾನಿಸಿದ್ದಾರೆ.

  • ನಾಗಸಾಧು ಮೊರೆ ಹೋದ ಶಾಸಕ ಕಂಪ್ಲಿ ಗಣೇಶ್!

    ನಾಗಸಾಧು ಮೊರೆ ಹೋದ ಶಾಸಕ ಕಂಪ್ಲಿ ಗಣೇಶ್!

    ಬಳ್ಳಾರಿ: ಹೊಸಪೇಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ಜೈಲುವಾಸ ಅನುಭವಿಸಿ, ಬಿಡುಗಡೆಯಾಗಿರುವ ಕಂಪ್ಲಿ ಶಾಸಕ ಗಣೇಶ್ ಇದೀಗ ಕಷ್ಟಗಳಿಂದ ಪಾರಾಗಲು ನಾಗಸಾಧುವಿನ ಮೊರೆ ಹೋಗಿದ್ದಾರೆ.

    ಸಂಡೂರಿನ ಜೋಗಿಹಳ್ಳದ ಬಳಿಯಿರುವ ಅನ್ನಪೂರ್ಣೇಶ್ವರಿ ಮಠದಲ್ಲಿನ ನಾಗಸಾಧುಗಳನ್ನು ಕಂಪ್ಲಿ ಗಣೇಶ್ ಭೇಟಿ ಮಾಡಿ ಆಶೀರ್ವಾದ ಪಡೆದು ನೋವು ತೋಡಿಕೊಂಡಿದ್ದಾರೆ. ಗಣೇಶ್ ಅವರು ಕುಟುಂಬ ಸಮೇತರಾಗಿ ನಾಗಸಾಧು ಮೊರೆ ಹೋಗಿದ್ದು, ನಾಗಸಾಧು ಇರುವ ಮಠದಲ್ಲಿ ಕೆಲಕಾಲ ಧ್ಯಾನ ಮಾಡಿದ್ದಾರೆ. ಈ ವೇಳೆ ಮೌನ ವ್ರತದಲ್ಲಿದ್ದ ನಾಗಸಾಧು, ಸ್ಲೇಟ್‍ನಲ್ಲೇ ಬರೆದು ಒಳ್ಳೆಯದಾಗುತ್ತೆ ಎಂದು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆಶೀರ್ವದಿಸಿದ್ದಾರೆ.

    ಈ ಹಿಂದೆ ಉಪಚುನಾವಣೆಗೂ ಮುನ್ನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಉಗ್ರಪ್ಪ ಅವರು ಈ ನಾಗಸಾಧುಗಳನ್ನೇ ಭೇಟಿ ಮಾಡಿ ಆಶೀರ್ವಾದ ಪಡೆದು ನಂತರ ಗೆಲುವು ಸಾಧಿಸಿದ್ದರು. ಹೀಗಾಗಿ ಇದೀಗ ಗಣೇಶ್ ಕೂಡ ಕಷ್ಟಗಳಿಂದ ಪಾರಾಗಾಲು ನಾಗಸಾಧು ಮೊರೆ ಹೋದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

  • ಅನಂತ್‍ಕುಮಾರ್ ಹೆಗ್ಡೆ ಮನೆಗೆ ನಾಗಸಾಧುಗಳು ದಿಢೀರ್ ಭೇಟಿ – ನುಡಿದ ಭವಿಷ್ಯವೇನು?

    ಅನಂತ್‍ಕುಮಾರ್ ಹೆಗ್ಡೆ ಮನೆಗೆ ನಾಗಸಾಧುಗಳು ದಿಢೀರ್ ಭೇಟಿ – ನುಡಿದ ಭವಿಷ್ಯವೇನು?

    ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿರುವ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರ ಮನೆಗೆ ಏಳು ಜನ ನಾಗಾ ಸಾಧುಗಳು ಭಾನುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿದ್ದಾರೆ.

    ಮನೆಯಲ್ಲೇ ಇದ್ದ ಅನಂತಕುಮಾರ್ ಹೆಗ್ಡೆಗೆ ಇವರ ಭೇಟಿ ಅನಿರೀಕ್ಷಿತವಾಗಿತ್ತು. ಹೀಗಾಗಿ ಮೊದಲು ಅವರನ್ನು ಹೆಗ್ಡೆ ಭೇಟಿಮಾಡಲು ಬಿಡದಿದ್ದರೂ ನಂತರ ಅವರು ತಮ್ಮ ಪರಿಚಯ ಹೇಳಿದ ನಂತರ ಅವರನ್ನು ಖುದ್ದು ಅನಂತಕುಮಾರ್ ಹೆಗ್ಡೆ ಹಾಗೂ ಪತ್ನಿ ಶ್ರೀರೂಪ ಹೆಗ್ಡೆ ಅವರು ಬರಮಾಡಿಕೊಂಡು ಪಾದಪೂಜೆ ನೆರವೇರಿಸಿದರು.

    ಭೇಟಿ ನೀಡಿದ್ದು ಯಾಕೆ?
    ಮುಂಜಾನೆ ಶಿರಸಿ ನಗರಕ್ಕೆ ಆಗಮಿಸಿದ್ದ ಉತ್ತರ ಪ್ರದೇಶದ ನಾಗಸಾಧು ಮಹಾಂತ ರಾಮಗಿರಿ ಸ್ವಾಮೀಜಿ ಹಾಗೂ ಅವರ ಶಿಷ್ಯರು ಎಲ್ಲರೂ ಆಶ್ಚರ್ಯ ಪಡುವಂತೆ ನೇರವಾಗಿ ಶಿರಸಿಯ ಕೆ.ಹೆಚ್.ಬಿ ಕಾಲೋನಿಯ ಅನಂತಕುಮಾರ್ ಹೆಗ್ಡೆ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಆಗಮನ ಅನಂತಕುಮಾರ್ ಹೆಗ್ಡೆಗೆ ಆಶ್ಚರ್ಯ ತಂದಿತ್ತು. ಯಾವುದೇ ಮಾಹಿತಿ ನೀಡದೇ ಭೇಟಿ ನೀಡಿದ್ದರೂ ಪತ್ನಿ ಸಮೇತರಾಗಿ ಅವರನ್ನು ಮನೆಯೊಳಗೆ ಕರೆದು ಪಾದಪೂಜೆ ಮಾಡಿ ಫಲಪುಷ್ಪಗಳನ್ನು ನೀಡಿ ಗೌರವಿಸಿದರು.

    ನಂತರ ಏಳುಜನ ನಾಗಸಾಧುಗಳು ಹೆಗ್ಡೆ ಕುಟುಂಬಕ್ಕೆ ಆಶಿರ್ವಾದ ಮಾಡಿದರು. ಇದರ ಜೊತೆಗೆ ಅನಂತಕುಮಾರ್ ಹೆಗ್ಡೆಗೆ ನಿಮ್ಮ ಹೆಸರು ರಾಷ್ಟಮಟ್ಟದಲ್ಲಿ ಉಜ್ಜಲಿಸಲಿದೆ, ನೀವು ಉತ್ತಮ ಪದವಿ ಪಡೆಯುತ್ತೀರಿ, ನಿಮ್ಮ ಹೆಸರು ಅಜರಾಮರವಾಗಲಿದೆ. ಸತ್ಯ ನಿಷ್ಟೆಯಿಂದ ಹೆಸರು ಮಾಡುತ್ತೀರಿ, ಈ ಬಾರಿ ವಿಜಯ ನಿಮ್ಮದಾಗಲಿದೆ ಎಂದು ಭವಿಷ್ಯ ನುಡಿದು ಹರಸಿದರು.

    ಸುಮಾರು ಒಂದು ಗಂಟೆಗಳ ಕಾಲ ಹೆಗ್ಡೆ ಮನೆಯಲ್ಲಿದ್ದ ನಾಗಸಾಧುಗಳು ರಾಮಮಂದಿರ ಸೇರಿದಂತೆ ರಾಜಕೀಯ ಕುರಿತು ಮಾತುಕತೆ ನಡೆಸಿದರು ಎಂಬುದು ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಉತ್ತರ ಪ್ರದೇಶದ ಮಹಾಂತ ರಾಮಗಿರಿ ಸ್ವಾಮೀಜಿ, ತಾವು ದೇಶ ಸುತ್ತುತ್ತಿದ್ದು ದೇಶದ ಪ್ರಮುಖ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ವೇಳೆ ಆ ಪ್ರದೇಶದ ಪ್ರಮುಖ ಜನರನ್ನು ಭೇಟಿ ಮಾಡಿ ಹೋಗುತ್ತಿದ್ದೇವೆ. ಮುಂದೆ ಯಾವ ದಿಕ್ಕಿಗೆ ಹೋಗುತ್ತೇವೆ ಎಂಬುದು ತಿಳಿದಿಲ್ಲ. ದೇವರ ಇಚ್ಚೆಯಂತೆ ಪ್ರತಿ ಸ್ಥಳವನ್ನೂ ಭೇಟಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

  • ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ – ಶಿವರಾತ್ರಿ ದಿನವೇ ನಾಗಾ ಸಾಧುಗಳ ಭವಿಷ್ಯ

    ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಬಿಜೆಪಿ – ಶಿವರಾತ್ರಿ ದಿನವೇ ನಾಗಾ ಸಾಧುಗಳ ಭವಿಷ್ಯ

    ಬೆಳಗಾವಿ/ಬೆಂಗಳೂರು: ಮುಂಬರುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ನಾಗಾ ಸಾಧುಗಳು ಭವಿಷ್ಯ ನುಡಿದಿದ್ದಾರೆ.

    ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಸ್ವಾಮಿಗಳನ್ನು ಭೇಟಿ ಮಾಡಿದ ನಾಗಾ ಸಾಧುಗಳು, ಉತ್ತರ ಪ್ರದೇಶದಲ್ಲಿ ಅರಳಿದಂತೆ ಕರ್ನಾಟಕದಲ್ಲೂ ಬಿಜೆಪಿಯ ಕಮಲ ಅರಳುವುದು ನಿಶ್ಚಿತ ಎಂದು ಹೇಳಿದ್ದಾರೆ. ಶಿವರಾತ್ರಿ ದಿನಂದಂದೇ ನಾಗಾ ಸಾಧುಗಳು ರಾಜ್ಯ ರಾಜಕಾರಣದ ಬಗ್ಗೆ ಭವಿಷ್ಯ ಹೇಳಿರುವುದು ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ.

    ಇತ್ತ ಶಿವರಾತ್ರಿ ಪ್ರಯುಕ್ತ ಬೆಂಗಳೂರಿಗೆ ನಾಗಸಾಧುಗಳು ಎಂಟ್ರಿ ನೀಡಿದ್ದಾರೆ. ಎಲೆಕ್ಷನ್ ಬೆನ್ನಲ್ಲೆ ನಾಗಸಾಧುಗಳ ಎಂಟ್ರಿ ಸಂಚಲನ ಮೂಡಿಸಿದೆ. ಹರಿದ್ವಾರದಿಂದ ಪವರ್ ಫುಲ್ ನಾಗಸಾಧು ಬಾಬಾ ಬನಖಂಡಿನಾಥ್ ಬಂದಿದ್ದು, ಚಿಕ್ಕಬಾಣಾವರದಲ್ಲಿ ಇಂದು ತಂಗಲಿದ್ದಾರೆ ಎಂದು ಹೇಳಲಾಗಿದೆ. ಸಾಕಷ್ಟು ರಾಜಕೀಯ ನಾಯಕರು ನಾಗಸಾಧುಗಳ ಗುಪ್ತ ಭೇಟಿಗೆ ಅವಕಾಶ ಕೋರಿದ್ದಾರೆ ಎನ್ನಲಾಗಿದೆ. ಎಲೆಕ್ಷನ್ ಬೆನ್ನಲ್ಲೆ ನಾಗಸಾಧುಗಳ ಆರ್ಶಿವಾದ ಪಡೆಯಲು ರಾಜಕೀಯ ನಾಯಕರು ಮುಗಿಬಿದ್ದಿದ್ದಾರೆ. ಈ ನಾಗಸಾಧು ಮುಖ ನೋಡಿಯೇ ಭವಿಷ್ಯದ ಆಗುಹೋಗುಗಳನ್ನು ಹೇಳುತ್ತಾರೆ. ಕುಂಭಮೇಳ ನಡೆಸುವಾಗ ಪ್ರಮುಖ ಸ್ಥಾನದಲ್ಲಿ ಇರುವವರು ಬನಖಂಡಿನಾಥ್ ಸ್ವಾಮೀಜಿ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬನಖಂಡಿನಾಥ್ ಸ್ವಾಮೀಜಿ, ಕರ್ನಾಟಕದ ರಾಜಕೀಯ ನಾಯಕರಿಗೆ ಕಿವಿ ಮಾತು ಹೇಳಿದ್ರು. ನಮಗೆ ಕರ್ನಾಟಕ ಬೇರೆಯಲ್ಲ, ಗುಜರಾತ್ ,ರಾಜಸ್ಥಾನ ಎಲ್ಲವೂ ಒಂದೇ. ಕರ್ನಾಟಕದಲ್ಲಿ ಚುನಾವಣೆ ಪ್ರಾರಂಭವಾಗಿದೆ. ಇಲ್ಲಿ ಜನರ ಮನಸ್ಸು ಗೆದ್ದು ಒಳ್ಳೆಯ ಕೆಲಸ ಮಾಡುವವರು ಗೆಲುವಿನ ಜಯಮಾಲೆ ಹಾಕಿಕೊಳ್ತಾರೆ. ನಾನು ಬಿಜೆಪಿ ಪರವೂ ಅಲ್ಲ, ಕಾಂಗ್ರೆಸ್ ಪರವೂ ಅಲ್ಲ. ನಾಗ ಸಾಧುಗಳು ಜಗತ್ತಿನ ಕಲ್ಯಾಣದ ಬಗ್ಗೆ ಯೋಚಿಸುವವರು. ಕರ್ನಾಟಕದ ಜನರಿಗೆ ಒಳ್ಳೆಯದನ್ನು ಮಾಡುವವರು ಜಯಗಳಿಸಲಿದ್ದಾರೆ ಎಂದು ಹೇಳಿದ್ರು.

  • ಬಿಜೆಪಿ ಶಾಸಕ ತಿಪ್ಪರಾಜು ಮನೆಗೆ ನಾಗಸಾಧುಗಳ ದಿಢೀರ್ ಭೇಟಿ

    ಬಿಜೆಪಿ ಶಾಸಕ ತಿಪ್ಪರಾಜು ಮನೆಗೆ ನಾಗಸಾಧುಗಳ ದಿಢೀರ್ ಭೇಟಿ

    ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮನೆಗೆ ತೆರಳಿ ಆಶೀರ್ವದಿಸಿದ್ದ ನಾಗಸಾಧುಗಳು ಈಗ ರಾಯಚೂರು ಗ್ರಾಮೀಣ ಶಾಸಕರ ಮನೆಯಲ್ಲೂ ಏಕಾಏಕಿ ಪ್ರತ್ಯಕ್ಷವಾಗಿ ಆಶೀರ್ವದಿಸಿದ್ದಾರೆ.

    ಶಾಸಕ ತಿಪ್ಪರಾಜು ಹವಾಲ್ದಾರ್ ಮನೆಗೆ ಕಾರಿನಲ್ಲಿ ಬಂದ ಮೂವರು ನಾಗಸಾಧುಗಳು ನೇರವಾಗಿ ಮನೆಯೊಳಗೆ ಬಂದು ಆಶೀರ್ವದಿಸಿದ್ದಾರೆ. ಮುಂದೆ ಮಂತ್ರಿಯಾಗಿ ಕೆಂಪು ಕಾರಿನಲ್ಲಿ ನಮ್ಮನ್ನು ನೋಡಲು ಬಾ ಎಂದು ಆಶೀರ್ವದಿಸಿದರು ಎನ್ನಲಾಗಿದೆ.

    ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ನಾಗಸಾಧುಗಳು, ಗುರುವಾರ ಶಾಸಕರ ಮನೆಗೆ ನೇರವಾಗಿ ತಾವೇ ತೆರಳಿದ್ದಾರೆ. ನಾಗಸಾಧುಗಳಿಗೆ 5 ಸಾವಿರ ರೂಪಾಯಿ ಕಾಣಿಕೆ ನೀಡಿ ಶಾಸಕ ತಿಪ್ಪರಾಜು ಆಶೀರ್ವಾದ ಪಡೆದಿದ್ದಾರೆ.

    ಇತ್ತೀಚೆಗಷ್ಟೇ ಶಾಸಕ ಸಿಟಿ ರವಿ ಅವರ ಮನೆಗೂ ನಾಗಸಾಧುಗಳು ಭೇಟಿ ನೀಡಿದ್ದರು. ಈ ಬಗ್ಗೆ ಸ್ವತಃ ಸಿಟಿ ರವಿ ಟ್ವಿಟ್ಟರ್‍ನಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದರು.

  • ವಾರಣಾಸಿ ನಾಗ ಸಾಧುಗಳಿಂದ ಆಶೀರ್ವಾದ ಪಡೆದ ಬಿಎಸ್‍ವೈ

    ವಾರಣಾಸಿ ನಾಗ ಸಾಧುಗಳಿಂದ ಆಶೀರ್ವಾದ ಪಡೆದ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ನಾಗ ಸಾಧುಗಳ ಆಶೀರ್ವಾದ ಸಿಕ್ಕಿದೆ. ನವರಾತ್ರಿಯ ದಿನವಾದ ಸೆಪ್ಟಂಬರ್ 29ರಂದು ಬಿಎಸ್‍ವೈ ನಿವಾಸಕ್ಕೆ 9 ಮಂದಿ ನಾಗ ಸಾಧುಗಳು ಭೇಟಿಯಾಗಿದ್ದರು.

    ಬಿಎಸ್ ವೈ ನಿವಾಸದಲ್ಲಿ 20 ನಿಮಿಷಗಳ ಕಾಲ ಸಮಯ ಕಳೆದ ಸಾಧುಗಳು ಬಿಎಸ್‍ವೈಗೆ ಆಶೀರ್ವಾದ ಮಾಡಿದ್ರು ಎನ್ನಲಾಗಿದೆ. ಬಿಎಸ್‍ವೈ ಕಾಣಲು ಬಂದಿದ್ದೇವೆ, ವಾರಣಾಸಿ ಕಾಡಿನಿಂದ ಬಂದಿದ್ದೇವೆ ಅಂತೇಳಿ ಮನೆಯಲ್ಲಿ ಬಂದು ಕುಳಿತಿದ್ರಂತೆ. ಹೊರಗೆ ಹೋಗಿದ್ದ ಬಿಎಸ್‍ವೈ ತಕ್ಷಣ ಮನೆಗೆ ಆಗಮಿಸಿ ನಾಗ ಸಾಧುಗಳನ್ನ ಮಾತನಾಡಿಸಿ ಆಶೀರ್ವಾದ ಪಡೆದ್ರಂತೆ. ಅಲ್ಲದೆ ಇವತ್ತು ಮತ್ತೇ ಬಿಎಸ್‍ವೈ ನಿವಾಸಕ್ಕೆ ಆಗಮಿಸಿದ ನಾಗ ಸಾಧುಗಳು ಮತ್ತೊಮ್ಮೆ ಆಶೀರ್ವಾದ ಪಡೆದ್ರು ಎನ್ನಲಾಗಿದೆ.

    ಒಂದೇ ವಾರದಲ್ಲಿ ಎರಡು ದಿನ ನಾಗ ಸಾಧುಗಳು ಬಿಎಸ್‍ವೈ ಅವರನ್ನು ಭೇಟಿ ಮಾಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ನಾಗ ಸಾಧುಗಳನ್ನ ಸತ್ಕರಿಸಿದ ಬಿಎಸ್‍ವೈ ಮುಂದಿನ ಭವಿಷ್ಯಕ್ಕೆ ಆಶೀರ್ವಾದ ಕೇಳಿದ್ರು ಎನ್ನಲಾಗಿದೆ. ನೀವು ಮುಂದಿನ ಸಿಎಂ ಆಗಿ, ನಿಮಗೆ ಯಾವುದೇ ಅಡೆತಡೆ ಬಾರದಿರಲಿ ಅಂತಾ ನಾಗ ಸಾಧುಗಳು ಆಶೀರ್ವಾದ ನೀಡಿದ್ರಂತೆ.