Tag: Nagarjuna Akkineni

  • ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಮಾತನಾಡಿದರೆ ನೋವಾಗುತ್ತೆ: ನಾಗಾರ್ಜುನ್

    ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಮಾತನಾಡಿದರೆ ನೋವಾಗುತ್ತೆ: ನಾಗಾರ್ಜುನ್

    ಚೆನ್ನೈ: ನನ್ನ ಕುಟುಂಬದ ಬಗ್ಗೆ ಅಸಹ್ಯವಾಗಿ ಯಾರದರೂ ಮಾತನಾಡಿದರೆ ನನಗೆ ನೋವಾಗುತ್ತೆ ಎಂದು ದಕ್ಷಿಣ ಭಾರತದ ಖ್ಯಾತ ನಟ ನಾಗಾರ್ಜುನ್ ಅಕ್ಕಿನೇನಿ ಬೇಸರ ವ್ಯಕ್ತಪಡಿಸಿದ್ದಾರೆ.

    ಇತ್ತೀಚೆಗೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದುಕೊಂಡಿದ್ದರು. ಈ ಹಿನ್ನೆಲೆ ಅಕ್ಕಿನೇನಿ ಕುಟುಂಬದ ಬಗ್ಗೆ ಹಲವು ಜನರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು. ಆದರೆ ಈ ಕುರಿತು ಅಕ್ಕಿನೇನಿ ಕುಟುಂಬ ಎಂದೂ ಒಂದು ಮಾತನ್ನು ಆಡಿರಲಿಲ್ಲ. ಆದರೆ ಈಗ ನಾಗಾರ್ಜುನ್ ಈ ಕುರಿತು ಮಾತನಾಡಿದ್ದು, ಕೆಲವರು ನಮ್ಮ ಕುಟುಂಬದ ಬಗ್ಗೆ ಅಸಹ್ಯವಾಗಿ ವರದಿ ಮಾಡುವುದನ್ನು ನೋಡಿ ನಾನು ಬೇಸರ ಪಟ್ಟಿಕೊಂಡಿದ್ದೇನೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.  ಇದನ್ನೂ ಓದಿ: ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ಕಾರಜೋಳ

    ಎಲ್ಲರಿಗೂ ಅವರವರ ಜೀವನದಲ್ಲಿ ಆಯ್ಕೆಯ ಸ್ವಾತಂತ್ರ್ಯವಿದೆ. ಮೊದಲು ಈ ಸುದ್ದಿ ಕೇಳಿ ನಮಗೂ ಆಘಾತವಾಗಿತ್ತು. ಆದರೆ ಇದಕ್ಕೆ ಹೆಚ್ಚು ಬಣ್ಣ ಕಟ್ಟಿ ಹೇಳುತ್ತಿರುವುದನ್ನು ಕೇಳಿ ತುಂಬಾ ನೋವಾಗಿದೆ. ಇದರಿಂದ ನನ್ನ ಕುಟುಂಬ ಕುಗ್ಗಿದೆ. ಯಾರೂ ನಮ್ಮ ಕುಟುಂಬದ ಮೇಲೆ ಕೆಟ್ಟ ವಂದತಿಗಳನ್ನು ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ.

    ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದರು. ಈ ಕುರಿತು ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಮ್ಮ ನಿರ್ಧಾರವನ್ನು ನೀವು ಗೌರವಿಸಿ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ: ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

    ನಾಗಾರ್ಜುನ್ ಅವರು ಮಗ ನಾಗಚೈತನ್ಯ ಅವರೊಂದಿಗೆ ‘ಬಂಗಾರರಾಜು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಸಂಕ್ರಾಂತಿ ದಿನ ಈ ಸಿನಿಮಾ ರಿಲೀಸ್ ಆಗಿತ್ತು. ಜನರು ಸಹ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ. ಪ್ರಸ್ತುತ ನಾಗಾರ್ಜುನ ಅವರು ತೆಲುಗಿನಲ್ಲಿ ‘ಥ್ಯಾಂಕ್ ಯೂ’ ಮತ್ತು ಅಮೀರ್ ಖಾನ್ ಜೊತೆಗಿನ ಬಾಲಿವುಡ್ ಚೊಚ್ಚಲ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ಚೆನ್ನೈ: ಟಾಲಿವುಡ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ತೆಲುಗು ಚಲನಚಿತ್ರಗಳನ್ನು ಲೈಂಗಿಕತೆ(ಸೆಕ್ಸಿಸ್ಟ್) ಹೆಚ್ಚಿರುತ್ತೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತೆಲುಗಿನ ಎಲ್ಲ ಸಿನಿಮಾಗಳು ಮತ್ತು ಹಾಡಿನ ಸಾಹಿತ್ಯವು ‘ಸೆಕ್ಸಿಸ್ಟ್’ ಆಗಿರುತ್ತೆ ಎಂಬ ಆರೋಪದ ಮಾತುಗಳು ಸರಿಯಲ್ಲ. ನಮ್ಮ ಭಾಷೆಯನ್ನು ಬೇರೆ ಭಾಷೆಯಲ್ಲಿ ಅನುವಾದಿಸಿದರೆ ಅದು ತನ್ನ ನಿಜವಾದ ಸತ್ವ ಕಳೆದುಕೊಳ್ಳುತ್ತೆ ಎಂದರು.

    ತೆಲುಗು ಭಾಷೆಯನ್ನು ನೀವು ಅಕ್ಷರಶಃ ಇಂಗ್ಲಿಷ್‍ಗೆ ಅನುವಾದಿಸಿದರೆ, ಅದು ತುಂಬಾ ಸೆಕ್ಸಿಸ್ಟ್ ಆಗಿ ಕಾಣುತ್ತದೆ. ನಾನು ಇದನ್ನು ಅನೇಕ ಜನರೊಂದಿಗೆ ಚರ್ಚೆಸಿದ್ದೇನೆ. ಈ ಬಗ್ಗೆ ನಾನು ತುಂಬಾ ಮಾತನಾಡಿದ್ದೇನೆ ಎಂದು ವಿವರಿಸಿದರು.

    ನಮ್ಮ ಸಿನಿಮಾ ‘ಬಂಗಾರರಾಜು’ ಹಾಡುಗಳನ್ನು ನೀವು ತೆಗೆದುಕೊಂಡರೂ ಅದು ಶುದ್ಧ ಜಾನಪದ ರಾಗಗಳೇ. ಆ ಸಾಲುಗಳನ್ನು ಇಂಗ್ಲಿಷಿನಲ್ಲಿ ಅನುವಾದಿಸಿದರೆ ‘ನೀನು ಇಂದು ರಾತ್ರಿ ನನ್ನೊಂದಿಗೆ ಮಲಗುತ್ತೀಯಾ?’ ಎಂಬ ಅರ್ಥದ ಸಾಲು ಬರುತ್ತದೆ. ಅದು ಸೆಕ್ಸಿಸ್ಟ್ ಆಗಿ ಕಾಣುತ್ತದೆ. ಆದರೆ ಆ ಹಾಡನ್ನು ತೆಲುಗು ಮಹಿಳೆಯರು ಹಾಡಿರುವುದನ್ನು ನೀವು ಗಮನಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ

    ಕೆಲವೊಂದು ಸಿನಿಮಾಗಳು ನೀವು ಹೇಳಿದ ರೀತಿಯಲ್ಲೇ ಇರುತ್ತೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪದಗಳನ್ನು ನಾವು ಸರಿಯಾಗಿ ಬಳಸಲಿಲ್ಲ ಎಂದರೆ ಈ ರೀತಿ ತಪ್ಪಾಗುವುದನ್ನು ನಾವು ನೋಡಬಹುದು. ಆದರೆ ಹೆಚ್ಚು ಸಿನಿಮಾಗಳು ಲೈಂಗಿಕತೆಯನ್ನೆ ಹೆಚ್ಚು ಪ್ರಚೋದಿಸುತ್ತದೆ ಎಂಬುದು ಸುಳ್ಳು ಎಂದರು.

    ನಾಗಾರ್ಜುನ ಪ್ರಸ್ತುತ ತೆಲುಗು ಚಿತ್ರ ‘ಬಂಗಾರರಾಜು 2’ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ತಮ್ಮ ಮಗ ‘ನಾಗಚೈತನ್ಯ’ ಅವರೊಂದಿಗೆ ನಟಿಸಿದ್ದಾರೆ. 2016ರಲ್ಲಿ ತೆರೆಕಂಡ ‘ಸೊಗ್ಗಡೆ ಚಿನ್ನಿ ನಾಯನ’ ಸಿನಿಮಾದ ಮುಂದುವರಿದ ಭಾಗ ಈ ‘ಬಂಗಾರರಾಜು’ ಸಿನಿಮಾವಾಗಿದೆ. ಈ ಚಿತ್ರಕ್ಕೆ ಕಲ್ಯಾಣ್ ಕೃಷ್ಣ ಕುರಸಾಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಮತ್ತು ಕೃತಿ ಶೆಟ್ಟಿ ಕೂಡ ನಟಿಸಿದ್ದಾರೆ.

    ಈ ಸಿನಿಮಾ ಇದೇ ತಿಂಗಳು 14 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್-19 ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹೋಗಿದೆ. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್

    ಇದರ ಹೊರತಾಗಿ, ನಾಗಾರ್ಜುನ ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್ ಮತ್ತು ಡಿಂಪಲ್ ಕಪಾಡಿಯಾ ಕೂಡ ನಟಿಸಿದ್ದಾರೆ. ಇದು ಸೆಪ್ಟೆಂಬರ್ 30 ರಂದು ಬೆಳ್ಳಿತೆರೆ ಮೇಲೆ ಬರಲಿದೆ.

  • ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

    ಚೆನ್ನೈ: ಟಾಲಿವುಡ್ ನಟ ನಾಗಚೈತನ್ಯ ಓಟಿಟಿ ಕ್ಷೇತ್ರವನ್ನು ಪ್ರವೇಶಿಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    ನಾಗಚೈತನ್ಯ ಓಟಿಟಿಯ ವೆಬ್ ಸರಣಿಯಾದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದು, ಈ ವೆಬ್ ಸರಣಿಗೆ ವಿಕ್ರಮ್ ಕೆ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರದಲ್ಲಿ ನಾಗ ಚೈತನ್ಯ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಓಟಿಟಿಯಲ್ಲಿ ಇದು ನಾಗಚೈತನ್ಯ ಚೊಚ್ಚಲ ಸಿನಿಮಾವಾಗಿದೆ.

    ಈ ಸರಣಿಯು ಥ್ರಿಲ್ಲರ್ ಆಗಿದ್ದು, ನಾಗಾಚೈತನ್ಯಗೆ ಜೋಡಿಯಾಗಿ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ದಕ್ಷಿಣದ ಹಲವಾರು ಪ್ರಮುಖ ನಟರು ಸಹ ನಟಿಸಲಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ನಾಗಾರ್ಜುನ ಅಕ್ಕಿನೇನಿ ಮತ್ತು ಅವರ ಮಗ ನಾಗ ಚೈತನ್ಯ ಮುಂಬರುವ ‘ಬಂಗಾರರಾಜು’ ಚಿತ್ರದಲ್ಲಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ನಾಗಾರ್ಜುನ ಅವರ ಬ್ಲಾಕ್‍ಬಸ್ಟರ್ ಚಿತ್ರ ‘ಸೊಗ್ಗಾಡೆ ಚಿನ್ನಿ ನಯನ’ದ ಮುಂದುವರಿದ ಭಾಗವಾಗಿ ಈ ಚಿತ್ರವನ್ನು ಮಾಡುತ್ತಿದ್ದು, ಕಲ್ಯಾಣ್ ಕೃಷ್ಣ ನಿರ್ದೇಶಿಸಿದ್ದಾರೆ. ‘ಝೀ ಸ್ಟುಡಿಯೋಸ್’ ಸಹಯೋಗದೊಂದಿಗೆ ಈ ಚಿತ್ರ ನಿರ್ಮಾಣವಾಗುತ್ತಿದೆ.

    ನಾಗಾರ್ಜುನ ಅವರ ಜೊತೆ ಹಿರಿಯ ನಟಿ ರಮ್ಯಾ ಕೃಷ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ‘ಉಪ್ಪೇನ’ ಖ್ಯಾತಿಯ ಕೃತಿ ಶೆಟ್ಟಿ ಈ ಸಿನಿಮಾದಲ್ಲಿ ನಾಗ ಚೈತನ್ಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಾಗಾರ್ಜುನ ಮತ್ತು ನಾಗ ಚೈತನ್ಯ ಮನಂ, ಪ್ರೇಮಂ ಚಿತ್ರಗಳ ನಂತರ ‘ಬಂಗಾರರಾಜು’ ಸಿನಿಮಾ ಮೂಲಕ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದು, ಅಕ್ಕಿನೇನಿ ಅಭಿಮಾನಿಗಳ ಪಾಲಿಗೆ ಇದು ವಿಶೇಷ ಸಿನಿಮಾವಾಗಿದೆ. ಈ ಚಿತ್ರಕ್ಕಾಗಿ ಇವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

  • ಈಗ ಸಮಂತಾಗಾಗಿ ಕಾಯುತ್ತಿದ್ದಾರೆ ನಾಗಚೈತನ್ಯ ಕುಟುಂಬ!

    ಈಗ ಸಮಂತಾಗಾಗಿ ಕಾಯುತ್ತಿದ್ದಾರೆ ನಾಗಚೈತನ್ಯ ಕುಟುಂಬ!

    ಹೈದರಾಬಾದ್: ಟಾಲಿವುಡ್ ನ ಕ್ಯೂಟ್ ಕಪಲ್ ಆದ ನಾಗಚೈತನ್ಯ ಹಾಗೂ ಸಮಂತಾ ರೂತ್ ಪ್ರಭು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯದಂತೆ ಗೋವಾದಲ್ಲಿ ಮದುವೆಯಾಗಲಿದ್ದಾರೆ.

    ನಾಗರ್ಜುನ್ ಅಕ್ಕಿನೇನಿ ತಮ್ಮ ಮಗ ನಾಗಚೈತನ್ಯ ಜೊತೆಗೆ ಇರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಾಗಚೈತನ್ಯ ಹಾಗೂ ಅವರ ಕುಟುಂಬದ ಫೋಟೋವೊಂದನ್ನು ಹಾಕಿ ‘ಸಮಂತಾಗಾಗಿ ಕಾಯುತ್ತಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.

    ನಾಗಚೈತನ್ಯ ಹಾಗೂ ಸಮಂತಾ ‘ಎ ಮಾಯಾ ಚೇಸಾವೆ’ ನತ್ತು ‘ತ್ರಾಯಾಮ್’ ಚಿತ್ರದಲ್ಲಿ ನಟಿಸಿದ್ದಾರೆ. ವರದಿಯೊಂದರ ಪ್ರಕಾರ ಕ್ರೈಸ್ತ ಸಮುದಾಯದಂತೆ ಅಕ್ಟೋಬರ್ 8 ರಂದು ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.