Tag: Nagachaitanya

  • ಅಯ್ಯೋ.. ಸಮಂತಾಗೆ ನಾಗಚೈತನ್ಯ ನೋಡಿದ್ರೆ ಕೊಲ್ಲುವಷ್ಟು ಕೋಪವಿದ್ಯಾ?

    ಅಯ್ಯೋ.. ಸಮಂತಾಗೆ ನಾಗಚೈತನ್ಯ ನೋಡಿದ್ರೆ ಕೊಲ್ಲುವಷ್ಟು ಕೋಪವಿದ್ಯಾ?

    ಟಾಲಿವುಡ್‌ನ ಹಾಟ್ ಟಾಪಿಕ್ ಅಂದ್ರೆ ಸಮಂತಾ ಮತ್ತು ನಾಗಚೈತನ್ಯ ಇಂದಿಗೂ ಈ ಜೋಡಿ ಯಾಕೆ ಬೇರೆಯಾಗಿದ್ದಾರೆ ಎಂಬ ಕಾರಣ ಗೌಪ್ಯವಾಗಿಯೇ ಇದೆ. ಇದೀಗ ಕರಣ್ ಜೋಹರ್ ಶೋವೊಂದರಲ್ಲಿ ಡಿವೋರ್ಸ್ ನಂತರ ನಾಗಚೈತನ್ಯ ಮೇಲೆ ಭಾವನೆ ಹೇಗಿದೆ ಅಂತಾ ಶಾಕಿಂಗ್ ಹೇಳಿಕೆಯನ್ನ ಸಮಂತಾ ನೀಡಿದ್ದಾರೆ.

    ಸಮಂತಾ ಮತ್ತು ನಾಗಚೈತನ್ಯ ಒಬ್ಬರನೊಬ್ಬರು ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದ ಜೋಡಿ ಆದರೆ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಇಬ್ಬರು ದೂರ ದೂರ ಆದರು. ಸಾಕಷ್ಟು ನೆಗೆಟಿವ್ ಟ್ರೋಲ್‌ಗಳಿಗೆ ಗುರಿಯಾಗಿದ್ದ ಸಮಂತಾಗೆ ಕರಣ್ ಜೋಹರ್ ಶೋನಲ್ಲಿ ಸಮಂತಾ ಖಾಸಗಿ ವಿಚಾರವೊಂದನ್ನು ಕೇಳಿದ್ದಾರೆ. ಪ್ರಸ್ತುತ ನಿಮ್ಮ ಮತ್ತು ನಾಗಚೈತನ್ಯ ನಡುವೆ ರಿಲೇಷನ್ ಹೇಗಿದೆ ಎಂದು ಪ್ರಶ್ನಿಸಿದ್ದಾರೆ.

    ನನ್ನನ್ನು ಮತ್ತು ನಾಗಚೈತನ್ಯ ಅವರನ್ನು ಒಂದೇ ಕೊಠಡಿಗೆ ಹಾಕಿದರೆ, ಆ ಕೋಣೆಯಲ್ಲಿ ಚೂಪಾದ ವಸ್ತುಗಳನ್ನು ಇರದಂತೆ ನೋಡಿಕೊಳ್ಳಿ ಎಂದು ಕರಣ್‌ಗೆ ಉತ್ತರಿಸಿದ್ದಾರೆ. ನಮ್ಮ ನಡುವೆ ಈಗ ಸ್ನೇಹಕ್ಕೆ ಭಾವನೆಗೆ ಜಾಗವಿಲ್ಲ ಅಂತಾ ಪರೋಕ್ಷವಾಗಿ ಸಮಂತಾ ತಿಳಿಸಿದ್ದಾರೆ. ನಾಗಚೈತನ್ಯ ಅವರನ್ನ ಕಂಡ್ರೆ ಸಮಂತಾಗೆ ಕೊಲ್ಲುವಷ್ಟು ಕೋಪವಿದ್ಯಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಸಮಂತಾ ಅವರನ್ನು ತುಂಬಾ ನೋಯಿಸಿದ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಯಾವುದು ಎಂದು ಕರಣ್ ಕೇಳಿದರು. ನಾಗ ಚೈತನ್ಯಗೆ ವಿಚ್ಛೇದನ ನೀಡಲು ೨೫೦ ಕೋಟಿ ರೂಪಾಯಿ ತೆಗೆದುಕೊಂಡಿರುವ ಸುದ್ದಿ ನನಗೆ ತುಂಬಾ ನೋವುಂಟು ಮಾಡಿದೆ ಎಂದು ಸಮಂತಾ ಹೇಳಿದ್ದಾರೆ. ಡಿವೋರ್ಸ್ ಅನೌನ್ಸ್ ಮಾಡಿದಾಗ ಕಷ್ಟ ಆಯ್ತು.. ಖುಷಿಯಿಂದ ನಾವು ಡಿವೋರ್ಸ್ ಪಡೆದಿಲ್ಲ. ನೋವಿನಿಂದಲೇ ದೂರ ಆಗಿದ್ದೇವೆ ಜತೆಗೆ ಈಗ ಮೊದಲಿಗಿಂತಲೂ ಸ್ಟ್ರಾಂಗ್ ಆಗಿದ್ದೇನೆ ಎಂದು ಸಮಂತಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಸಮಂತಾ ಮೇಲೆ ನಾಗಚೈತನ್ಯಗೆ ಲವ್: ವೈರಲ್ ಆಯ್ತು ಪೋಸ್ಟ್

    ಮತ್ತೆ ಸಮಂತಾ ಮೇಲೆ ನಾಗಚೈತನ್ಯಗೆ ಲವ್: ವೈರಲ್ ಆಯ್ತು ಪೋಸ್ಟ್

    `ವ್‌ಸ್ಟೋರಿ’ ಸಕ್ಸಸ್ ನಂತರ ಟಾಲಿವುಡ್ ಸ್ಟಾರ್ ನಾಗಚೈತನ್ಯ ಸದ್ಯ `ಥ್ಯಾಂಕ್‌ ಯೂ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾಗಚೈತನ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಮೂಲಕ ಸಮಂತಾ ಮೇಲೆ ಪ್ರೀತಿಯಿದೆ ಎಂಬುದಕ್ಕೆ ಸುಳಿವು ಬಿಟ್ಟು ಕೊಟ್ಟಿದ್ದಾರೆ. ಸದ್ಯ ಶೇರ್ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.

    ನಟ ನಾಗಚೈತನ್ಯ ಸದ್ಯ `ಥ್ಯಾಂಕ್ ಯೂ’ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ರಿಲೀಸ್‌ಗೆ ರೆಡಿಯಾಗಿರುವ ನಾಗಚೈತನ್ಯ ಹೊಸ ಸಿನಿಮಾದ ಹೆಸರು `ಥ್ಯಾಂಕ್ ಯೂ’ ಹೀಗಾಗಿ ತಮ್ಮ ಜೀವನದಲ್ಲಿ `ಥ್ಯಾಂಕ್ ಯೂ’ ಎಂದು ಹೇಳಲು ಬಯಸುವ ಮೂವರ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಮೂರು ಫೋಟೊಗಳಲ್ಲಿ ಒಂದು ಪರೋಕ್ಷವಾಗಿ ಸಮಂತಾ ಕಡೆಗೆ ಬೆರಳು ಮಾಡುತ್ತಿದೆ. ಆ ಫೋಟೊ ನೋಡಿ ನಾಗಚೈತನ್ಯ ಇನ್ನೂ ಸಮಂತಾರನ್ನು ಮರೆತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಮೊದಲ ಫೋಟೋ ತಾಯಿಯ ಜತೆ, ಎರಡನೇ ಫೋಟೋ ತಂದೆ ಜತೆ ಮತ್ತು ಕಡೆಯ ಫೋಟೋ ಮುದ್ದು ಶ್ವಾನ ಜತೆಯಿರುವ ಫೋಟೋ ಹಾಕಿ ಥ್ಯಾಂಕ್ ಯೂ ಅಂದಿದ್ದಾರೆ. ಇದನ್ನೂ ಓದಿ: ಐದು ವರ್ಷಗಳ ನಂತರ ಮತ್ತೆ ನಿರ್ದೇಶನದತ್ತ ಎಸ್. ನಾರಾಯಣ್

    ನಾಗಚೈತನ್ಯ ಶೇರ್ ಮಾಡಿದ ಮೂರು ಫೋಟೊಗಳಲ್ಲಿ ಒಂದು ಮಾಜಿ ಪತ್ನಿ ಸಮಂತಾಗೆ ಸಂಬಂಧಿಸಿದ್ದು. ಇಬ್ಬರೂ ತಮ್ಮ ಪ್ರೀತಿಯ ಪ್ರತೀಕವಾಗಿ ಇಟ್ಟುಕೊಂಡಿದ್ದ ಹ್ಯಾಶ್ ಫೋಟೊವನ್ನು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Chay Akkineni (@chayakkineni)

    ಹ್ಯಾಶ್, ಇದು ನಾಗಚೈತನ್ಯ ಹಾಗೂ ಸಮಂತಾ ಪ್ರೀತಿಯ ಸಂಕೇತಕ್ಕೆಂದು ಇದ್ದ ಅವರ ಪ್ರೀತಿಯ ಶ್ವಾನ. ಇದೇ ಫೋಟೊವನ್ನು ನಾಗಚೈತನ್ಯ ಹಂಚಿಕೊಂಡಿದ್ದು, ಪರೋಕ್ಷವಾಗಿ ನಾಗಚೈತನ್ಯಗೆ ಧನ್ಯವಾದಗಳನ್ನು ಹೇಳಿದ್ದಾರೆ. ಹ್ಯಾಶ್ ಹೇಗೆ ಪ್ರೀತಿ ಮಾಡಬೇಕು ಎನ್ನುವ ಭಾವ ಮೂಡಿಸಿದ್ದು ನೀನು, ಮನುಷ್ಯನಾಗಿಯೇ ಇರುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ನಿರೂಪಣೆಗೆ ಸಮಂತಾ ಫಿಕ್ಸ್: ನಾಗಾರ್ಜುನ ಔಟ್.?

    ಬಿಗ್ ಬಾಸ್ ನಿರೂಪಣೆಗೆ ಸಮಂತಾ ಫಿಕ್ಸ್: ನಾಗಾರ್ಜುನ ಔಟ್.?

    ಟಾಲಿವುಡ್‌ನಲ್ಲಿ ಈಗ ಸಮಂತಾದೇ ಬಿಸಿ ಬಿಸಿ ಸುದ್ದಿ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾ ಈಗ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಶೋಗೆ  ಸಮಂತಾ ನಿರೂಪಣೆ ಮಾಡಲಿದ್ದಾರೆ.

    ಅಭಿಮಾನಿಗಳ ನೆಚ್ಚಿನ ಜೋಡಿ ಎನಿಸಿಕೊಂಡಿದ್ದ ನಾಗಾಚೈತನ್ಯ ಮತ್ತು ಸಮಂತಾ ದೂರ ಆಗಿದ್ದೇ ಎಲ್ಲರಿಗೂ ಶಾಕಿಂಗ್ ವಿಚಾರ. ಅಂದಿನಿಂದ ಇಂದಿನವರೆಗೂ ಈ ಜೋಡಿಯ ಕುರಿತ ವಿಚಾರ ಏನೇ ಬಂದರೂ ಅಭಿಮಾನಿಗಳಿಗೆ ಕಿವಿ ನೆಟ್ಟಗಾಗುತ್ತದೆ. ಈಗ ಹೊಸ ಬ್ರೇಕಿಂಗ್ ವಿಚಾರ ಏನಪ್ಪಾ ಅಂದ್ರೆ ಪ್ರೇಕ್ಷಕರ ಅಚ್ಚು ಮೆಚ್ಚಿನ ಶೋ ಬಿಗ್ ಬಾಸ್ ಸೀಸನ್ 6ರ ನಿರೂಪಣೆ ಸಮಂತಾ ಮಾಡಲಿದ್ದಾರೆ. ಈ ಮೂಲಕ ಮಾಜಿ ಮಾವ ನಾಗಾರ್ಜುನ ಅವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.

    ಡೈವೋರ್ಸ್ ನಂತರ ಸಮಂತಾ ಡಿಮ್ಯಾಂಡ್ ಗಗನಕ್ಕೇರಿದೆ. ತೆಲುಗು, ತಮಿಳು, ಬಾಲಿವುಡ್, ಹಾಲಿವುಡ್ ಎಲ್ಲಾ ರಂಗದಲ್ಲೂ ಸಮಂತಾ ಬ್ಯುಸಿಯಾಗಿದ್ದಾರೆ. ಇಷ್ಟೊಂದು ಬ್ಯುಸಿಯಿರುವಾಗ ಸಮಂತಾಗೆ ಬಿಗ್ ಬಾಸ್ ಶೋ ನಡೆಸಲು ಬುಲಾವ್ ಬಂದಿದೆ. ಈ ಹಿಂದೆ ಬಿಗ್ ಬಾಸ್ ಶೋನಲ್ಲಿ ಅತಿಥಿಯಾಗಿ ಜತೆಗೆ ಮಾಜಿ ಮಾವನ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡರು. ಈಗ ವಾಹಿನಿ ಕೂಡ ನಿರೂಪಣೆಗೆ ಸಮಂತಾನೇ ಬೇಕು ಅಂತಾ ಪಟ್ಟು ಹಿಡಿದಿದ್ದಾರಂತೆ. ಇದನ್ನೂ ಓದಿ: ಕ್ಯಾಪ್ ತೊಟ್ಟು ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

    ಇಷ್ಟಕ್ಕೂ ಸ್ಟಾರ್ ನಟ ನಾಗಾರ್ಜುನ ಜಾಗಕ್ಕೆ ಸಮಂತಾ ಬರುತ್ತಿರೋದು ನಿಜನಾ ಅನ್ನೋದನ್ನ ಅಧಿಕೃತ ಮಾಹಿತಿಗಾಗಿ ಕಾಯಲೇಬೇಕಿದೆ. ಒಟ್ನಲ್ಲಿ ಸಮಂತಾ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್.

  • ನಾಗಚೈತನ್ಯ -ಸಮಂತಾ ಮತ್ತೆ ಮುಖಾಮುಖಿ : ಮಾಜಿ ಪತಿ ಚಿತ್ರಕ್ಕೆ ಯಶೋದ ಫೈಟ್

    ನಾಗಚೈತನ್ಯ -ಸಮಂತಾ ಮತ್ತೆ ಮುಖಾಮುಖಿ : ಮಾಜಿ ಪತಿ ಚಿತ್ರಕ್ಕೆ ಯಶೋದ ಫೈಟ್

    ಟಿ ಸಮಂತಾ, ಮಾಜಿ ಪತಿ ನಾಗಚೈತನ್ಯ ಜತೆಗಿನ ಸಂಬಂಧಕ್ಕೆ ಈಗಾಗಲೇ ಫುಲ್ ಸ್ಟಾಪ್ ಇಟ್ಟಾಗಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿದ್ದ ಪತಿ ಜತೆಗಿನ ಅಷ್ಟು ಫೋಟೋಗಳನ್ನ ಕೂಡ ಡಿಲೀಟ್ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ದೂರ ದೂರ ಆಗಿದ್ದ ಈ ಜೋಡಿ ಇದೀಗ ಮತ್ತೆ ಸಮಂತಾ ಮಾಜಿ ಪತಿಗೆ ಎದುರಾಳಿಯಾಗಿ ನಿಂತಿದ್ದಾರೆ.

    ವಯಕ್ತಿಕ ಬದುಕಿನ ಏಲ್ಲಾ ಕಹಿ ಘಟನೆಗಳನ್ನ ಮರೆತು ಸಿನಿಮಾಗಳ ಮುಖ ಮಾಡಿರೋ ಈ ಇಬ್ಬರು ತಾರೆಯರು. ಇದೀಗ ಒಬ್ಬರನೊಬ್ಬರು ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ಒಂದೇ ಕ್ಷೇತ್ರದಲ್ಲಿ ಇರುವುದರಿಂದ ಮುಖಾಮುಖಿ ಆಗೋದು ಅನಿವಾರ್ಯವಾಗಿದೆ. ಚಿತ್ರರಂಗದಲ್ಲಿ ನಾಗಚೈತನ್ಯ ಸಿನಿಮಾಗೆ ಫೈಟ್ ಕೊಡೊದಕ್ಕೆ ಸಮಂತಾ ಸಜ್ಜಾಗಿದ್ದಾರೆ.

    ತಮ್ಮ ಸಿನಿಮಾಗಳ ಮೂಲಕ ಸಮಂತಾ ಮತ್ತು ನಾಗಚೈತನ್ಯ ಮತ್ತೆ ಮುಖಾಮುಖಿಯಾಗಿದ್ದಾರೆ. ಒಂದು ದಿನದ ಅಂತರದಲ್ಲಿ ಮಾಜಿ ಪತಿ ಪತ್ನಿಯ ಸಿನಿಮಾ ರಿಲೀಸ್ ಆಗ್ರಿದೆ. ನಾಗಚೈತನ್ಯ ನಟನೆಯ `ಲಾಲ್‌ಸಿಂಗ್ ಚಡ್ಡಾ’ ಮತ್ತು ಸಮಂತಾ ನಟನೆಯ `ಯಶೋದ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಫೈಟ್ ಮಾಡಲು ರೆಡಿಯಾಗಿದ್ದಾರೆ.

    ಆಮೀರ್ ಖಾನ್ ನಟನೆಯ `ಲಾಲ್‌ಸಿಂಗ್ ಚಡ್ಡಾ’ ಮೇ 11ರಂದು ರಿಲೀಸ್ ಆದರೆ ಇತ್ತ ಸಮಂತಾ ನಟನೆಯ `ಯಶೋದ’ ಮೇ 12ರಂದು ತೆರೆಗೆ ಬರುತ್ತಿದೆ. ಆಮೀರ್ ಖಾನ್ ನಟನೆಯ ಈ ಚಿತ್ರದಲ್ಲಿ ನಾಗಚೈತನ್ಯ ಅತಿಥಿ ಪಾತ್ರ ನಿರ್ವಹಿಸಿದ್ರು ಕೂಡ ಆ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಚಿತ್ರದಲ್ಲಿ ಮೇಜರ್ ರೋಲ್ ಪ್ಲೇ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಗ್ತಿರೋ `ಯಶೋದ’ ಚಿತ್ರದ ಗ್ಲೀಂಪ್ಸ್ ಈಗಾಗಲೇ ಫಿದಾ ಆಗಿರೋ ಅಭಿಮಾನಿಗಳಿಗೆ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ. ಇದನ್ನೂ ಓದಿ: ಯಶ್ ನಟನೆಯ `ಕೆಜಿಎಫ್ 2′ ಚಿತ್ರ ನೋಡಲಿರುವ ಸೆಂಚ್ಯೂರಿ ಸ್ಟಾರ್ ಶಿವಣ್ಣ

     

    View this post on Instagram

     

    A post shared by Samantha (@samantharuthprabhuoffl)

    ರಿಲೀಸ್‌ಗೂ ಮುಂಚೆನೇ ಹೈಪ್ ಕ್ರಿಯೇಟ್ ಮಾಡಿರೋ ಈ ಎರಡು ಚಿತ್ರಗಳಲ್ಲಿ ಪ್ರೇಕ್ಷಕಪ್ರಭುಗಳು ಯಾವ ಸಿನಿಮಾಗೆ ಸಾಥ್ ನೀಡ್ತಾರೆ ಅಂತಾ ಕಾದು ನೋಡಬೇಕಿದೆ.

  • ಕರೀನಾ ಕಪೂರ್- ಆಮೀರ್ ಖಾನ್ ಫನ್ನಿ ವಿಡಿಯೋ ವೈರಲ್

    ಕರೀನಾ ಕಪೂರ್- ಆಮೀರ್ ಖಾನ್ ಫನ್ನಿ ವಿಡಿಯೋ ವೈರಲ್

    ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಜೋಡಿ ಮೋಡಿ ಮಾಡಿದ್ದಾರೆ. ʻಲಾಲ್ ಸಿಂಗ್ ಚಡ್ಡಾʼ ಸಿನಿಮಾಗಾಗಿ ಮತ್ತೆ ಒಂದಾಗಿರೋ ಈ ಜೋಡಿ, ಫನ್ನಿ ವಿಡಿಯೋ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.

    ಹಲವಾರು ವಿಚಾರಗಳಿಂದ ಅಟ್ರಾಕ್ಟ್ ಮಾಡ್ತಿರೋ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಇದೇ ಆಗಸ್ಟ್ 11ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರೋ ಕರೀನಾ ಕಪೂರ್ ಮತ್ತು ಆಮೀರ್ ಖಾನ್ ಜೋಡಿ ಈಗ ಡಿಫಪರೆಂಟ್ ಆಗಿ ಸಿನಿಮಾ ಪ್ರಚಾರ ಮಾಡ್ತಿದ್ದಾರೆ. ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫಿಲ್ಟರ್‌ನ್ನು ಕೂಡ ಪರಿಚಯ ಮಾಡಲಾಗಿದೆ. ಅದಕ್ಕಾಗಿ ʻಲಾಲ್ ಸಿಂಗ್ ಚಡ್ಡಾʼ ಜೋಡಿ ಒಟ್ಟಿಗೆ ವಿಡಿಯೋ ಮಾಡಿ ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದಾರೆ.

    ಕರೀನಾ ಮತ್ತು ಆಮೀರ್ ಹೊಸ ಫಿಲ್ಟರ್‌ನಲ್ಲಿ ಫನ್ನಿಯಾಗಿ ವಿಡಿಯೋ ಮಾಡಿ ಸಿನಿರಸಿಕರ ಗಮನ ಸೆಳೆದಿದ್ದಾರೆ. ನನ್ನ ಹೀರೋ ಜತೆ ಫೆದರ್ ಚಾಲೆಂಜ್ ಎಂದು ಕ್ಯಾಪ್ಷನ್ ಕೊಟ್ಟು ಕರೀನಾ ಫನ್ನಿ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅನೇಕ ಸೆಲೆಬ್ರೆಟಿಗಳು ಈ ಹೊಸ ಫಿಲ್ಟರ್‌ನ್ನು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ʻಲಾಲ್ ಸಿಂಗ್ ಚಡ್ಡಾʼ ಪ್ರಚಾರ ಶುರುವಾಗಿದೆ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಹಾಲಿವುಡ್‌ನ ಫಾರೆಸ್ಟ್ ಗಂಪ್ ಚಿತ್ರದ ಹಿಂದಿ ರಿಮೇಕ್ ಆಗಿ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಮೂಡಿ ಬಂದಿದೆ. ಆಮೀರ್ ಖಾನ್ ನಾಯಕಿಯಾಗಿ ಕರೀನಾ ನಟಿಸಿದ್ದಾರೆ. ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ಟಾಲಿವುಡ್ ನಟ ನಾಗಚೈತನ್ಯ ಕಾಣಿಸಿಕೊಂಡಿದ್ದಾರೆ. ಇನ್ನು ಆಗಸ್ಟ್ 11ಕ್ಕೆ ಸಿನಿಮಾ ತೆರೆಕಾಣಲಿದೆ. ಚಿತ್ರವನ್ನ ಪ್ರೇಕ್ಷಕ ಪ್ರಭುಗಳು ಅಪ್ಪಿ ಒಪ್ಪಿಕೊಳ್ತಾರಾ ಅಂತಾ ಕಾದುನೋಡಬೇಕಿದೆ.

  • ಗರಂ ಆದ ಸಮಂತಾ: ಶಾಂತ ಸ್ವಭಾವ ಕೆಣಕಿದವರಿಗೆ ಖಡಕ್ ಉತ್ತರ

    ಗರಂ ಆದ ಸಮಂತಾ: ಶಾಂತ ಸ್ವಭಾವ ಕೆಣಕಿದವರಿಗೆ ಖಡಕ್ ಉತ್ತರ

    ಟಿ ಸಮಂತಾ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅವರನ್ನು ಪ್ರತಿಕ್ಷಣವೂ ಒಂದಿಲ್ಲೊಂದು ಕಾರಣಕ್ಕಾಗಿ ಟೀಕೆ ಮಾಡುತ್ತಲೇ ಇರುತ್ತಾರೆ. ನಾಗಚೈತನ್ಯರಿಂದ ದೂರವಾದ ನಂತರ ಇದೆಲ್ಲವೂ ಆಗುತ್ತಿರುವುದರಿಂದ ಈವರೆಗೂ ಅವರೂ ಯಾವುದಕ್ಕೂ ಪ್ರತಿಕ್ರಿಯಿಸಿದೇ ತಮ್ಮ ಪಾಡಿಗೆ ತಾವು ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನೂ ಓದಿ : ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು

    ಈ ನಡುವೆ ಅವರ ಮಾಡುತ್ತಿರುವ ಪಾತ್ರಗಳು, ಅವರು ಕಳೆಯುತ್ತಿರುವ ಖಾಸಗಿ ಕ್ಷಣಗಳನ್ನು ಗುರಿಯಾಗಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಅವರು ಧರಿಸುವ ಕಾಸ್ಟ್ಯೂಮ್ ಬಗ್ಗೆಯೂ ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇಷ್ಟೆಲ್ಲ ಅವರನ್ನು ಟಾರ್ಗೆಟ್ ಮಾಡುತ್ತಿದ್ದರೂ ಈವರೆಗೂ ಯಾವುದಕ್ಕೂ ಅವರು ರಿಯ್ಯಾಕ್ಟ್ ಮಾಡಿರಲಿಲ್ಲ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ನಾಗಚೈತನ್ಯರಿಂದ ದೂರವಾದ ನಂತರ ಅತೀ ಹೆಚ್ಚು ಮಾನಸಿಕ ಹಿಂಸೆಯನ್ನು ಅನುಭವಿಸಿದ ಈ ನಟಿ ಅದರಿಂದ ಆಚೆ ಬರುವುದಕ್ಕಾಗಿ ಏನೆಲ್ಲ ಕಸರತ್ತು ಮಾಡಿದರು. ಅದಕ್ಕೂ ಅವರು ಟೀಕೆಯನ್ನು ಎದುರಿಸಬೇಕಾಯಿತು. ಪುಷ್ಪಾ ಸಿನಿಮಾದ ಹಾಡು ಬಂದಾಗಲಂತೂ ಮುಗಿಬಿದ್ದು ಕೆಟ್ಟದಾಗಿ ಕೆಲವರು ಕಾಮೆಂಟ್ ಮಾಡಿದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ಇಷ್ಟೆಲ್ಲ ಹಿಂಸೆಗಳನ್ನು ಈವರೆಗೂ ತಡೆದುಕೊಂಡಿದ್ದ ಸಮಂತಾ, ಇದೀಗ ಏಕಾಏಕಿಯಾಗಿ ಗರಂ ಆಗಿದ್ದಾರೆ. ಏಪ್ರಿಲ್ 22 ರಂದು ಸಂಜೆ 5.30ಕ್ಕೆ ಟ್ವಿಟ್ ಮಾಡಿರುವ ಅವರು, ‘ಮೌನ ಮತ್ತು ತಾಳ್ಮೆಯನ್ನು ಅಜ್ಞಾನ ಎಂದು ತಿಳಿದುಕೊಳ್ಳಬಾರದು. ಅದು ದೌರ್ಬಲ್ಯ ಕೂಡ ಅಲ್ಲ. ನನ್ನೀ ಮೌನವನ್ನು ಅಜ್ಞಾನವೆಂದು ತಿಳಿದುಕೊಂಡಿದ್ದರೆ, ನನ್ನ ಶಾಂತ ಸ್ವಭಾವವನ್ನೂ ಸ್ವೀಕಾರವೆಂದು, ದಯೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಬೇಡಿ’ ಎಂದು ಖಡಕ್ಕಾಗಿಯೇ ಸಂದೇಶ ರವಾನಿಸಿದ್ದಾರೆ. ಈ ಖಡಕ್ ಸಂದೇಶ ಯಾರಿಗೆ ಎಂದು ಅವರು ಹೇಳದೇ ಇದ್ದರೂ, ಅರ್ಥ ಮಾಡಿಕೊಳ್ಳುವವರು ಖಂಡಿತಾ ಅರ್ಥ ಮಾಡಿಕೊಳ್ಳುತ್ತಾರೆ.

  • ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅಭಿಮಾನಿಗಳಿಗೆ ಮಾತ್ರ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದ ಸಮಂತಾ

    ಮೈತುಂಬಾ ಟ್ಯಾಟೂ ಹಾಕಿಸಿಕೊಂಡು, ಅಭಿಮಾನಿಗಳಿಗೆ ಮಾತ್ರ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದ ಸಮಂತಾ

    ಟಾಲಿವುಡ್ ಕಪಲ್ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ವಿಚ್ಚೇದನದ ನಂತರ ಭಾರೀ ಸುದ್ದಿಯಾಗಿದ್ದರು. ಅದರಲ್ಲಿಯೂ ಸಮಂತಾ ಅವರು ನೆಟ್ಟಿಗರ ಟೀಕಿಗಳಿಗೆ ಗುರಿಯಾಗಬೇಕಾಯಿತು. ತಮ್ಮ ವಿಚ್ಚೇದನದ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ ನಂತರ ನಾಗಚೈತನ್ಯ ಎಲ್ಲೂ ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳಲಿಲ್ಲ. ಆದರೆ ಇತ್ತೀಚೆಗೆ ನಾಗಚೈತನ್ಯ ಅವರು ಮತ್ತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಕಡೆ ಹಬ್ಬಿದೆ. ಈ ನಡುವೆಯೇ ಸಮಂತಾ ಅವರ ಹೊಸ ಹೇಳಿಕೆ ಕೂಡ ಎಲ್ಲಾ ಕಡೆ ವೈರಲ್ ಆಗಿದೆ.

    Samantha, Nayanthara to Rashmika: South Indian Actresses and Their Interesting Tattoos | IWMBuzz

    ಸಮಂತಾ ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ನಲ್ಲಿ ಪಾಲ್ಗೊಂಡರು. ಇದಕ್ಕೆ ಸಮಂತಾ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು. ಈ ವೇಳೆ ಒಬ್ಬ ಅಭಿಮಾನಿ, ನೀವು ಪ್ರಯತ್ನಿಸಲು ಇಷ್ಟಪಡುವ ಕೆಲವು ಟ್ಯಾಟೂ ಐಡಿಯಾಗಳನ್ನು ತಿಳಿಸಿ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಈ ನಟಿ, ಎಂದಿಗೂ ಟ್ಯಾಟೂ ಹಾಕಿಸಿಕೊಳ್ಳಬೇಡಿ ಎಂದು ನಾನು ಸಲಹೆ ಕೊಡುತ್ತೇನೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಆದರೆ ಈ ಹಿಂದೆ ಸಮಂತಾ ತನ್ನ ಮಾಜಿ ಪತಿ ನಾಗಚೈತನ್ಯ ಹೆಸರಿನ ಮೂರು ಭಿನ್ನ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದರು. ಈ ನಟಿಯ ಬೆನ್ನಿನ ಮೇಲೆ ‘YMS’ ಎಂಬ ಟ್ಯಾಟೂ ಇತ್ತು. ಅಲ್ಲದೇ ನಾಗಚೈತನ್ಯ ಜೊತೆಗಿನ ಚೊಚ್ಚಲ ಸಿನಿಮಾ ‘ಯೇ ಮಾಯಾ ಚೇಸಾವೆ’ ಮತ್ತು ತಮ್ಮ ಪಕ್ಕೆಲುಬಿನ ಮೇಲೆ ‘ಚಾಯ್’ ಎಂದು ಹಾಕಿಸಿಕೊಂಡಿದ್ದರು. ಇದು ನಾಗಚೈತನ್ಯ ಅವರ ಅಡ್ಡಹೆಸರು

  • ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರಾ ನಾಗಚೈತನ್ಯ?

    ಸೌತ್ ಕ್ಯೂಟ್ ಕಪಲ್ ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ಅವರ ವಿಚ್ಛೇದನವು 2021ರಲ್ಲಿ ಅತಿದೊಡ್ಡ ಸುದ್ದಿಯಾಗಿತ್ತು. ಮೊದಲು ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ನಾಗಚೈತನ್ಯ ಸರ್‌ನೇಮ್ ತೆಗೆದು ಹಾಕಿದ್ದರಿಂದ ಅನುಮಾನ ಪ್ರಾರಂಭವಾಗಿತ್ತು. ಕೊನೆಗೆ ಈ ಜೋಡಿ ಅ.2ರಂದು ತಾವು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಸಾರ್ವಜನಿಕವಾಗಿ ತಿಳಿಸಿ ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದರು. ಆದರೆ ಮತ್ತೆ ಈ ಜೋಡಿ ಸುದ್ದಿಯಾಗಿದ್ದು, ನಾಗಚೈತನ್ಯ ಮರುಮದುವೆಗೆ ಸಿದ್ಧರಾಗುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

    ಮೂಲಗಳ ಪ್ರಕಾರ ನಾಗಚೈತನ್ಯ ಶೀಘ್ರದಲ್ಲೇ ಮತ್ತೊಮ್ಮೆ ಮದುವೆಯಾಗುತ್ತಿದ್ದಾರೆ ಎಂಬ ಗಾಸಿಪ್ ಎಲ್ಲಕಡೆ ಹಬ್ಬುತ್ತಿದ್ದು, ಈ ಕುರಿತು ಭಾರೀ ಚರ್ಚೆಯಾಗುತ್ತಿದೆ. ಆದರೆ ಈ ನಟ ಯಾವುದೇ ಸಿನಿಮಾ ತಾರೆಯರನ್ನು ಮದುವೆಯಾಗುತ್ತಿಲ್ಲ ಎಂಬುದು ಸಹ ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಗಲ್ಲಿ ಬಾಯ್ ರಣವೀರ್ ಚಿತ್ರಕ್ಕೆ ಚಾರ್ಲಿ ಚಾಪ್ಲಿನ್‍ನಿಂದ ಪ್ರೇರಣೆ?

    ಈ ಮೊದಲು ನಾಗಚೈತನ್ಯ, ಸಮಂತಾ ಜೊತೆ ಮದುವೆಯಾಗುವುದಕ್ಕೂ ಮೊದಲು ನಟಿ ಶ್ರುತಿಹಾಸನ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ ಈ ನಟ ಸಮಂತಾ ಅವರನ್ನು ಮದುವೆ ಮಾಡಿಕೊಂಡಿದ್ದರು.

    ಇತ್ತೀಚೆಗೆ ನಾಗಚೈತನ್ಯ ಅವರು ‘ಮಜಿಲಿ’ ಸಹನಟಿ ದಿವ್ಯಾಂಶ ಕೌಸಿಕ್ ಅವರೊಂದಿಗೆ ರಿಲೇಷನ್‍ಶಿಪ್ ಹೊಂದಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ. ಆದರೆ ಈ ಬೆನ್ನಲ್ಲೇ ನಾಗಚೈತನ್ಯ ಅವರು ಯಾವುದೇ ನಟಿಯರನ್ನು ಮದುವೆಯಾಗಲು ಆಸಕ್ತಿ ತೋರಿಸುತ್ತಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಅಕ್ಕಿನೇನಿ ಕುಟುಂಬ ಅಧಿಕೃತವಾಗಿ ತಿಳಿಸಬೇಕು. ಪ್ರಸ್ತುತ ನಾಗಚೈತನ್ಯ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ತುಟಿಗೂ ಸೈಜ್ ಇರುತ್ತಾ? ನೆಟ್ಟಿಗನ ಚಳಿ ಬಿಡಿಸಿದ ಸ್ಟಾರ್ ನಟಿ ಶ್ರುತಿ ಹಾಸನ್

  • ಮಾಜಿ ಪತಿ ಜೊತೆ ನಟಿಸಿದ `ಮಜಿಲಿ’ ಚಿತ್ರದ ನೆನೆಪಿನಲ್ಲಿ ಸಮಂತಾ!

    ಮಾಜಿ ಪತಿ ಜೊತೆ ನಟಿಸಿದ `ಮಜಿಲಿ’ ಚಿತ್ರದ ನೆನೆಪಿನಲ್ಲಿ ಸಮಂತಾ!

    ಕ್ಷಿಣ ಭಾರತದ ಮುದ್ದಾದ ಜೋಡಿ ಅಂತಲೇ ಹೈಲೆಟ್ ಆಗಿದ್ದ ಸಮಂತಾ ಮತ್ತು ನಾಗಚೈತನ್ಯ ವಿಚ್ಛೇದನವಾಗಿ ಕೆಲವೇ ತಿಂಗಳುಗಳೇ ಕಳೆದಿದೆ. ಖಾಸಗಿ ಜೀವನ ಪಕ್ಕಕ್ಕಿಟ್ಟು ಸಿನಿಮಾಗಳಲ್ಲಿ ಇಬ್ಬರು ಬ್ಯುಸಿಯಾಗಿದ್ದಾರೆ. ಪತಿಯ ಸಹವಾಸವೇ ಬೇಡ ಅಂತಾ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಮಾಜಿ ಪತಿಯ ಮೂರು ವರ್ಷಗಳ ಹಳೆಯ ನೆನಪನ್ನು ಪೋಸ್ಟ್ ಮಾಡುವ ಮೂಲಕ ಸಮಂತಾ ಸದ್ದು ಮಾಡ್ತಿದ್ದಾರೆ.

    ವಿಚ್ಛೇದನವಾಗ್ತಿದ್ದಂತೆ ಸಮಂತಾ, ಮಾಜಿ ಪತಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್‌ಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಆದರೆ ಈಗ ಮತ್ತೆ ಮಾಜಿ ಪತಿ ನಾಗಚೈತನ್ಯಗೆ ಸಂಬಂಧಿಸಿದ ಸ್ಟೋರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಂತ ಸ್ಯಾಮ್ ತಮ್ಮ ಖಾಸಗಿ ಜೀವನದ ಕುರಿತು ಪೋಸ್ಟ್ ಮಾಡಿಲ್ಲ. ಬದಲಾಗಿ ಮೂರು ವರ್ಷಗಳ ಹಿಂದಿನ ಸಮಂತಾ, ನಾಗಚೈತನ್ಯ ನಟಿಸಿದ್ದ `ಮಜಿಲಿ’ ಚಿತ್ರದ ಪೋಸ್ಟರ್‌ನ್ನ ಶೇರ್ ಮಾಡಿದ್ದಾರೆ.

    ನಟಿ ಸಮಂತಾ ಮೂರು ವರ್ಷಗಳ ಹಿಂದಿನ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಮಜಿಲಿ ಚಿತ್ರಕ್ಕೆ ಮೂರು ವರ್ಷಗಳು ಪೂರೈಸಿರುವ ಖುಷಿಯಲ್ಲಿ ಆ ಸಿನಿಮಾದ ಪೋಸ್ಟರ್‌ನ್ನ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆ ಪೋಸ್ಟರ್‌ನಲ್ಲಿ ನಾಗಚೈತನ್ಯ ಪೋಸ್ಟರ್ ಹೈಲೆಟ್ ಆಗಿದೆ. ಇದನ್ನು ಓದಿ:ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    `ಯೇ ಮಯಾ ಚೇಸಾವೆ’, `ಮನಂ’, `ಮಜಿಲಿ’ ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿರೋ ಈ ಜೋಡಿಯ ಮತ್ತೊಂದು ಹೊಸ ಚಿತ್ರ ಬರಲಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಪೂರಕವಾಗಿರುವಂತೆ ಸ್ಯಾಮ್ ಶೇರ್ ಮಾಡಿರೋ ಪೋಸ್ಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ನೆಚ್ಚಿನ ಜೋಡಿ ತೆರೆಯ ಮೇಲೆ ಆದರೂ ಒಂದಾಗಲಿ ಅಂತಾ ಕಾಯ್ತಿದ್ದಾರೆ.

  • ನಾಗಚೈತನ್ಯಗೆ ಮತ್ತೆ ಜೊತೆಯಾದ ಬೊಟ್ಟಬೊಮ್ಮ ಬೆಡಗಿ ಪೂಜಾ

    ನಾಗಚೈತನ್ಯಗೆ ಮತ್ತೆ ಜೊತೆಯಾದ ಬೊಟ್ಟಬೊಮ್ಮ ಬೆಡಗಿ ಪೂಜಾ

    `ಲವ್‌ಸ್ಟೋರಿ’ ಚಿತ್ರದ ಸಕ್ಸಸ್ ನಂತರ ನಾಗಚೈತನ್ಯ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. `ಓಕಾ ಲೈಲಾ ಕೋಸಂ’ ಚಿತ್ರದ ಜೋಡಿ ನಾಗಚೈತನ್ಯ ಮತ್ತು ಸೌತ್ ಬ್ಯೂಟಿ ಪೂಜಾ ಹೆಗ್ಡೆ ಮತ್ತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

    `ಮಾನಾಡು’ ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರದಲ್ಲಿ ನಾಗಚೈತನ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸುತ್ತಿದ್ದು, ತೆಲುಗು ಮತ್ತು ತಮಿಳು ದ್ವಿಭಾಷೆಗಳಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ವಿಶೇಷ ಅಂದರೆ, ಈ ಚಿತ್ರದ ಮೂಲಕ ಚೈ ಕಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಇನ್ನೂ ಹೆಸರಿಡದ ಈ ಹೊಸ ಪ್ರಾಜೆಕ್ಟ್ಗೆ ಶ್ರೀನಿವಾಸ್ ಸಿಲ್ವರ್ ಮತ್ತು ಪವನ್ ಕುಮಾರ್ ಹಣ ಹೂಡುತ್ತಿದ್ದು, ಈ ಹಿಂದೆ `ಓಕಾ ಲೈಲಾ ಕೋಸಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಚೈ ಮತ್ತು ಪೂಜಾ 8 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ಒಂದಾಗುತ್ತಿರುವುದು ವಿಶೇಷ. ವಿಭಿನ್ನ ಲವ್‌ಸ್ಟೋರಿ, ಡಿಫರೆಂಟ್ ಶೇಡ್‌ಗಳ ಮೂಲಕ ಈ ಜೋಡಿ ಕಮಾಲ್ ಮಾಡಲು ಬರುತ್ತಿದ್ದಾರೆ. ಇದನ್ನು ಓದಿ: ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    `ಓಕಾ ಲೈಲಾ ಕೋಸಂ’ ಜೋಡಿ ಆಪ್ಟರ್ ಎ ಲಾಂಗ್ ಟೈಮ್ ಆನ್ ಸ್ಕ್ರೀನ್‌ನಲ್ಲಿ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಸದ್ಯ ನಾಗಚೈತನ್ಯ ನಟನೆಯ `ಲಾಲ್ ಸಿಂಗ್ ಚಡ್ಡಾ’ ಮತ್ತು ಪೂಜಾ ನಟನೆಯ ಬಹುನಿರೀಕ್ಷಿತ `ಬೀಸ್ಟ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಎರಡೂ ಚಿತ್ರಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.