Tag: Nagachaitanya

  • ಅನಾರೋಗ್ಯದ ಸುದ್ದಿ ಬೆನ್ನಲ್ಲೇ ಸಮಂತಾರನ್ನು ಭೇಟಿಯಾಗಲಿದ್ದಾರಾ ನಾಗಚೈತನ್ಯ

    ಅನಾರೋಗ್ಯದ ಸುದ್ದಿ ಬೆನ್ನಲ್ಲೇ ಸಮಂತಾರನ್ನು ಭೇಟಿಯಾಗಲಿದ್ದಾರಾ ನಾಗಚೈತನ್ಯ

    ಟಾಲಿವುಡ್ (Tollywood) ಬ್ಯೂಟಿ ಸಮಂತಾ(Samantha) ಅನಾರೋಗ್ಯದಿಂದ ಬಳಲುತ್ತಿದ್ದಾರೆ. `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ಸಮಂತಾ ಮತ್ತು ನಾಗಚೈತನ್ಯ ಬಗ್ಗೆ ಹರಿದಾಡುತ್ತಿದೆ. ಸಮಂತಾಗೆ ಆರೋಗ್ಯ ಕೈಕೊಟ್ಟ ಈ ಬೆನ್ನಲ್ಲೇ ಮಾಜಿ ಪತ್ನಿಯನ್ನ ನಾಗಚೈತನ್ಯ(Nagachaitanya) ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

    ಚೈತನ್ಯ ಜೊತೆಗಿನ ಡಿವೋರ್ಸ್ ನಂತರ ಸಾಕಷ್ಟು ಸವಾಲುಗಳು, ನೋವುಗಳನ್ನ ಎದುರಿಸಿರುವ ನಟಿ ಸಮಂತಾ ಇದೀಗ ಕೆಲ ತಿಂಗಳಿಂದ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಸೂಕ್ತ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಈ ಕುರಿತು ಸ್ವತಃ ಸಮಂತಾನೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಬಳಿಕ ಸಾಕಷ್ಟು ಸ್ಟಾರ್ ನಟ ನಟಿಯರು ಸಮಂತಾ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದರು.

    ಇನ್ನೂ ಅಕ್ಕಿನೇನಿ ಕುಟುಂಬದಿಂದ ಅಖಿಲ್ ಕೂಡ ಸಮಂತಾಗೆ ಬೇಗ ಚೇತರಿಕೊಳ್ಳಿ ಎಂದು ಪೋಸ್ಟ್ ಮಾಡಿದ್ದರು. ಆದರೆ ಸ್ಯಾಮ್ ಆರೋಗ್ಯದ ಬಗ್ಗೆ ಒಂದೇ ಒಂದು ಪೋಸ್ಟ್ ಕೂಡ ನಾಗಚೈತನ್ಯ ಮಾಡಿಲ್ಲ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಮೂಲಕ ಈ ಮಾಜಿ ದಂಪತಿ ಹಾಟ್ ಟಾಪಿಕ್ ಆಗಿದ್ದಾರೆ. ಇದನ್ನೂ ಓದಿ:ಅನುಪಮಾ ಗೌಡ ವಿರುದ್ಧ ಸಿಡಿದೆದ್ದ ರೂಪೇಶ್‌ ರಾಜಣ್ಣ

    ಆದರೆ ಇದೀಗ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ನಾಗಚೈತನ್ಯ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದೆಷ್ಟು ನಿಜ ಎಂಬುದನ್ನ ಭೇಟಿಯ ಬಳಿಕ ತಿಳಿದು ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ಹಿಂಸೆ ಕೊಟ್ಟ ನಾಗಚೈತನ್ಯ ಬಗ್ಗೆ ಅತ್ತೆ ಬಳಿ ಅಳಲು ತೋಡಿಕೊಂಡ ಸಮಂತಾ

    ಹಿಂಸೆ ಕೊಟ್ಟ ನಾಗಚೈತನ್ಯ ಬಗ್ಗೆ ಅತ್ತೆ ಬಳಿ ಅಳಲು ತೋಡಿಕೊಂಡ ಸಮಂತಾ

    ಟಾಲಿವುಡ್ ಬ್ಯೂಟಿ ಸಮಂತಾ(Samantha) ಸದಾ ಸುದ್ದಿಯಲ್ಲಿರುವ ನಟಿ, ಅದರಲ್ಲೂ ನಾಗಚೈತನ್ಯ(Nagchaitanya) ಜೊತೆ ಡಿವೋರ್ಸ್ ಆದ ಮೇಲೆ ಸಾಕಷ್ಟು ಗಾಸಿಪ್, ಟ್ರೋಲಿಗಳಿಗೆ ಸಮಂತಾ ಗುರಿಯಾಗಿದ್ದಾರೆ. ಇದೀಗ ತಾವು ನಾಗಚೈತನ್ಯಗೆ ಯಾಕೆ ಡಿವೋರ್ಸ್ ಕೊಟ್ಟಿದ್ದು ಎಂಬುದರ ಬಗ್ಗೆ ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ (Lakshmi Daggubati) ಬಳಿ ಅಳಲು ತೋಡಿಕೊಂಡಿದ್ದಾರೆ.

    ಸೌತ್ ಸಿನಿರಂಗದಲ್ಲಿ ಮುದ್ದಾದ ಜೋಡಿಯಾಗಿ ಹೈಲೆಟ್ ಆಗಿ ನಾಗ್‌ಚೈತನ್ಯ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾಗಿದೆ. ಬಳಿಕ ತಮ್ಮ ವೃತ್ತಿ ಜೀವನದತ್ತ ನಾಗ್, ಸಮಂತಾ ಬ್ಯುಸಿಯಾಗಿದ್ದಾರೆ. `ಪುಷ್ಪ'(Pushpa Film) ಐಟಂ ಸಾಂಗ್ ಹಿಟ್ ಆದ್ಮೇಲೆ ಸಮಂತಾ ರೇಂಜ್ ಬದಲಾಗಿದೆ. ಹಾಗಾಗಿ ಹೊಸ ಹೊಸ ಗಾಸಿಪ್‌ಗಳಿಗೆ ನಟಿ ಆಹಾರವಾಗುತ್ತಿದ್ದಾರೆ.

    ಹೀಗೆ ದಿನಕ್ಕೊಂದು ಸುದ್ದಿ ಸಮಂತಾ ಬಗ್ಗೆ ಹರಿದಾಡುತ್ತಿದೆ. ಇದೀಗ ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನ ಸಮಂತಾ ಭೇಟಿಯಾಗಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನಿಮ್ಮ ಮಗ ನನಗೆ ಹಿಂಸೆ ಕೊಟ್ಟ, ಅದೇ ಕಾರಣಕ್ಕೆ ನಾನು ಡಿವೋರ್ಸ್ ಕೊಟ್ಟೆ, ಮದುವೆ ನಂತರ ಅವರು ಸಾಕಷ್ಟು ಬದಲಾಗಿದ್ದರು. ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು ಎಂದು ಮಾಜಿ ಅತ್ತೆ ಬಳಿ ಸಮಂತಾ ತಮ್ಮ ನೋವು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

    ನಮ್ಮ ಮದುವೆ ಬಳಿಕ ಸಿನಿಮಾ ಮಾಡಲು ಅವಕಾಶವಿರಲಿಲ್ಲ. ನನ್ನ ಇಷ್ಟದ ಡ್ರೆಸ್ ತೊಡಲು ಬಿಡುತ್ತಿರಲಿಲ್ಲ. ನನಗೆ ಹಿಂಸೆ ಮಾಡುತ್ತಿದ್ದರು ಎಂದು ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ ಅವರ ಬಳಿ ಸಮಂತಾ ಹೇಳಿಕೊಂಡಿದ್ದಾರAತೆ ಈ ಸುದ್ದಿ ಅದೆಷ್ಟು ನಿಜ ಎಂಬುದು ತಿಳಿದುಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

    ಡಿವೋರ್ಸ್ ನಂತರ ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದೀರಾ ಎಂದು ಸಮಂತಾ ಮೇಲೆ ಗರಂ ಆದ ಫ್ಯಾನ್ಸ್

    ಟಾಲಿವುಡ್‌ನ ಪ್ರತಿಭಾನ್ವಿತ ನಟಿ ಸಮಂತಾ (Samantha) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೊಸ ಪ್ರಾಜೆಕ್ಟ್‌ಗಳಲ್ಲಿ ಭಾಗಿಯಾಗುವುದರ ಜತೆಗೆ ಬೋಲ್ಡ್ ಫೋಟೋಶೂಟ್ ಮೂಲಕ ಆಗಾಗ ಸ್ಯಾಮ್ ಸದ್ದು ಮಾಡುತ್ತಾರೆ. ಇದೀಗ ಸಮಂತಾ ನಯಾ ಫೋಟೋಶೂಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಡಿವೋರ್ಸ್ (Divorce) ನಂತರ ಮತ್ತೆ ಚಿತ್ರರಂಗದಲ್ಲಿ ಮತ್ತಷ್ಟು ಆಕ್ಟೀವ್ ಆಗಿರುವ ನಟಿ ಸಮಂತಾ ಮೇಲೆ ಫ್ಯಾನ್ಸ್ ಗರಂ ಆಗಿದ್ದಾರೆ. ಸಮಂತಾ ತೊಡುವ ಡ್ರೆಸ್ ಶೈಲಿ ನೋಡಿ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. `ಪುಷ್ಪ’ ಚಿತ್ರದಲ್ಲಿ ಸಮಂತಾ ಬೋಲ್ಡ್ ಅವತಾರ ನೋಡಿ, ಫ್ಯಾನ್ಸ್ ಸುಸ್ತಾಗಿದ್ದರು. ಈಗ ಸಮಂತಾ ಅವರ ಹೊಸ ಫೋಟೋಶೂಟ್ ನೋಡಿ, ನಟಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಮಹಾಲಕ್ಷ್ಮಿ ನನಗೆ ದೇವರು ಕೊಟ್ಟ ಗಿಫ್ಟ್ : ಪತಿ ರವೀಂದರ್ ಮೊದಲ ಪ್ರತಿಕ್ರಿಯೆ

    ಹಳದಿ ಬಣ್ಣದ ಡ್ರೆಸ್‌ನಲ್ಲಿ ಸಮಂತಾ, ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಸಮಂತಾ ಹಾಟ್ ಪೋಸ್ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸ್ಯಾಮ್ ಡಿವೋರ್ಸ್ ಆಗಿದ್ದೆ ತಡ, ಬೇಕಾಬಿಟ್ಟಿ ಡ್ರೆಸ್ ಹಾಕುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಇನ್ನು ನಟಿಗೆ ಸೂಕ್ತ ಉಡುಗೆ ಧರಿಸಿ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ. ಅಭಿಮಾನಿಗಳ ಯಾವುದೇ ಮನವಿಗೂ ಸಮಂತಾ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಸಿಕ್ಕರೆ ಮತ್ತೆ ಹಗ್ ಮಾಡ್ತೀನಿ: ನಾಗಚೈತನ್ಯ

    ಸಮಂತಾ ಸಿಕ್ಕರೆ ಮತ್ತೆ ಹಗ್ ಮಾಡ್ತೀನಿ: ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ ಸದ್ಯ ಬಾಲಿವುಡ್‌ನ ಮೊದಲ ಚಿತ್ರ `ಲಾಲ್ ಸಿಂಗ್ ಚಡ್ಡಾ’ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಸಮಂತಾ ಕುರಿತು ಪ್ರಶ್ನೆಗಳನ್ನ ನಾಗಚೈತನ್ಯ ಎದುರಿಸುತ್ತಿದ್ದಾರೆ. ಇದೀಗ ಸಂರ್ದಶನವೊಂದರಲ್ಲಿ ಮಾಜಿ ಪತ್ನಿ ಬಗ್ಗೆ ನಾಗಚೈತನ್ಯ ಮಾತನಾಡಿರುವ ಮಾತು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ನಂತರ ತಮ್ಮ ತಮ್ಮ ವೃತ್ತಿರಂಗದತ್ತ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳನ್ನ ಪಡೆಯುತ್ತಾ ಚಿತ್ರರಂಗದಲ್ಲಿ ಗಟ್ಟಿ ಸ್ಥಾನ ಪಡೆಯುವಲ್ಲಿ ಮುನ್ನುಗ್ಗುತ್ತಿದ್ದಾರೆ. ಸಮಂತಾ ಕುರಿತು ಈಗ ತಮಗಿರುವ ಭಾವನೆ ಬಗ್ಗೆ ನಾಗಚೈತನ್ಯ ಮಾತನಾಡಿದ್ದಾರೆ.

    ಕಳೆದ ಕೆಲವು ದಿನಗಳಿಂದ ನಾಗ ಚೈತನ್ಯ ಹಲವು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. `ಲಾಲ್ ಸಿಂಗ್ ಚಡ್ಡಾ’ ಅವರು ಚಿತ್ರದ ಬಗ್ಗೆ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಸಂದರ್ಶನದ ವೇಳೆ ನಾಗಚೈತನ್ಯ ಅವರಿಗೆ ಮಾಧ್ಯಮದವರು ಸಮಂತಾ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇದನ್ನೂ ಓದಿ:`777 ಚಾರ್ಲಿ’ ಸಕ್ಸಸ್ ನಂತರ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ

    ಸಂದರ್ಶನದಲ್ಲಿ ನಾಗಚೈತನ್ಯ ಅವರಿಗೆ ಮಾಜಿ ಪತ್ನಿ ಬಗ್ಗೆ ಕೇಳಲಾಗಿದೆ. ಸಮಂತಾ ಅವರನ್ನು ನೀವು ಮತ್ತೆ ಭೇಟಿಯಾದ್ರೆ ಏನು ಮಾಡ್ತೀರಾ? ಎಂದು ನಾಗಚೈತನ್ಯಗೆ ಪ್ರಶ್ನಿಸಿದ್ದಾರೆ. ಇದಕ್ಕೆ ನಾಗ ಚೈತನ್ಯ ಸಖತ್ ಉತ್ತರ ನೀಡಿದ್ದಾರೆ. ಸಮಂತಾ ಅವರನ್ನು ಭೇಟಿಯಾದರೆ. ಅವರಿಗೆ ಹಾಯ್ ಹೇಳಿ ಒಂದು ಹಗ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಸಖತ್ ಆಗಿ ಉತ್ತರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಮಾಜಿ ಪತಿ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಸಮಂತಾ ಮಾಜಿ ಪತಿ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಕ್ಕಿ ನಟಿ ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ. ಹೀಗಿರುವಾಗ ಸಮಂತಾ ಮಾಜಿ ಪತಿ ನಾಗಚೈತನ್ಯ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ.

    `ಸೀತಾ ರಾಮಂ’ ಚಿತ್ರದ ಸೂಪರ್ ಸಕ್ಸಸ್ ನಂತರ ಇದೀಗ ರಶ್ಮಿಕಾ ಮಂದಣ್ಣಗೆ ಭರ್ಜರಿ ಆಫರ್ ಸಿಕ್ಕಿದೆ. ಟಾಲಿವುಡ್ ನಟ ನಾಗಚೈತನ್ಯಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಮಾಜಿ ಪತಿ ಜತೆ ರಶ್ಮಿಕಾ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ನಾನು ಎಷ್ಟೋ ಜನರ ಜೊತೆ ಫ್ಲರ್ಟ್ ಮಾಡಿದ್ದೇನೆ ಲೆಕ್ಕವಿಲ್ಲ: ಅರ್ಜುನ್ ರಮೇಶ್

    `ಸರ್ಕಾರು ವಾರಿ ಪಾಟ’ ಖ್ಯಾತಿಯ ಪರಶುರಾಮ್ ನಿರ್ದೇಶನದ ಚಿತ್ರದಲ್ಲಿ ನಾಗಚೈತನ್ಯ ಮತ್ತು ರಶ್ಮಿಕಾ ಡ್ಯುಯೇಟ್ ಹಾಡಲು ಸಜ್ಜಾಗಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಈ ಚಿತ್ರಕ್ಕೆ ನಾಗಚೈತನ್ಯ ತಾತ, ಅಕ್ಕಿನೇನಿ ನಾಗೇಶ್ವರ ರಾವ್ ಅವರೇ ಹಸರೇ ಇಡಲಿದ್ದಾರಂತೆ.

    ಇನ್ನು ಇದೇ ಮೊದಲ ಬಾರಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲಿರುವ ಜೋಡಿ ನಾಗಚೈತನ್ಯ ಮತ್ತು ರಶ್ಮಿಕಾ ಸಿನಿಮಾ ನೋಡಲು ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತನಾ ಅಪಾರವಾಗಿ ಗೌರವಿಸ್ತೀನಿ, ಡಿವೋರ್ಸ್ ವಿಚಾರ ಇಲ್ಲಿಗೆ ಬಿಡಿ : ನಾಗಚೈತನ್ಯ

    ಸಮಂತನಾ ಅಪಾರವಾಗಿ ಗೌರವಿಸ್ತೀನಿ, ಡಿವೋರ್ಸ್ ವಿಚಾರ ಇಲ್ಲಿಗೆ ಬಿಡಿ : ನಾಗಚೈತನ್ಯ

    ದೇ ಪದೇ ಡಿವೋರ್ಸ್ ವಿಚಾರವನ್ನೇ ಕೇಳುತ್ತಿರುವುದಕ್ಕೆ ತೆಲುಗು ನಟ ನಾಗಚೈತನ್ಯ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ. ಖಾಸಗಿ ವಿಚಾರಗಳನ್ನು ಬೇರೆಯವರಿಗೆ ತಿಳಿದುಕೊಳ್ಳಲು ಕುತೂಹಲ ಇರುತ್ತದೆ ನಿಜ. ಆದರೆ, ನಮಗೆಲ್ಲ ಅದು ಅಪಾರ ಹಿಂಸೆ ಕೊಡುತ್ತದೆ. ನಾನು ಸಮಂತಾ ಅವರನ್ನು ಅಪಾರವಾಗಿ ಗೌರವಿಸುತ್ತೇನೆ. ಡಿವೋರ್ಸ್ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದಿದ್ದಾರೆ ನಾಗಚೈತನ್ಯ.

    ಸಮಂತಾ ಮತ್ತು ತಮ್ಮ ನಡುವೆ ಏನು ನಡೆಯಿತು, ಡಿವೋರ್ಸ್ ಯಾಕಾಯಿತು ಎನ್ನುವುದು ನಮ್ಮಿಬ್ಬರಿಗೆ ಮಾತ್ರ ಗೊತ್ತಿದೆ. ಉಳಿದೆಲ್ಲವೂ ಸುಳ್ಳು. ಅವರು ಅದನ್ನು ದಾಟಿಕೊಂಡು ಬಹುಮುಂದೆ ಹೋಗಿದ್ದಾರೆ. ನಾನಿನ್ನೂ ಪ್ರಯತ್ನದಲ್ಲಿದ್ದೇನೆ. ನಮ್ಮ ಪಾಡಿಗೆ ನಮಗೆ ಕೆಲಸ ಮಾಡಲು ಬಿಡಿ ಎಂದು ನಾಗಚೈತನ್ಯ ಮನವಿ ಮಾಡಿಕೊಂಡಿದ್ದಾರೆ. ಎಲ್ಲರ ಬದುಕಿನಲ್ಲಿ ನಡೆಯುವುದು ನಮ್ಮ ಬದುಕಿನಲ್ಲೂ ನಡೆದಿದೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದಿದ್ದಾರೆ.  ಇದನ್ನೂ ಓದಿ:ಬಿಗ್ ಬಾಸ್‌ಗೆ ಯಾಕೆ ಹೋಗಬಾರದು? ನವ್ಯಶ್ರೀ ರಾವ್ ಪ್ರಶ್ನೆ

    ನಾಗಚೈತನ್ಯ ಮತ್ತು ಸಮಂತಾ ಇಷ್ಟಪಟ್ಟು ಮದುವೆಯಾದವರು. ಇಬ್ಬರೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದವರು. ಇಬ್ಬರೂ ದೂರವಾಗುತ್ತಾರೆ ಎಂದಾಗ ಅಭಿಮಾನಿಗಳು ದುಃಖಿಸಿದ್ದಾರೆ. ಇದೀಗ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಬಿಟ್ಟು, ನಮ್ಮ ನೆಮ್ಮದಿಯ ಬದುಕಿಗೆ ಶುಭ ಹಾರೈಸಿ ಎಂದು ನಾಗಚೈತನ್ಯ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಆ ಹೇಳಿಕೆಯಿಂದ ಪೈಪೋಟಿಗಿಳಿದ್ರಾ ನಾಗಚೈತನ್ಯ

    ಸಮಂತಾ ಆ ಹೇಳಿಕೆಯಿಂದ ಪೈಪೋಟಿಗಿಳಿದ್ರಾ ನಾಗಚೈತನ್ಯ

    ಟಾಲಿವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದರೆ ಮಾಜಿ ದಂಪತಿ ಸಮಂತಾ ಮತ್ತು ನಾಗಚೈತನ್ಯ ವಿಚಾರ. ಈ ಜೋಡಿ ಬೇರೆಯಾಗಿ 1 ವರ್ಷ ಕಳೆಯುತ್ತಾ ಬಂದ್ರು ಮಾಜಿ ದಂಪತಿ ವಿಚಾರ ಟಿಟೌನ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿರುವ ಈ ಮಾಜಿ ದಂಪತಿ ವೃತ್ತಿರಂಗದಲ್ಲಿ ಪೈಪೋಟಿಗಿಳಿದ್ರಾ ಎಂಬ ಗುಸು ಗುಸು ಶುರುವಾಗಿದೆ.

    ಒಂದಲ್ಲಾ ಒಂದು ವಿಚಾರ ಸಮಂತಾ ಮತ್ತು ನಾಗಚೈತನ್ಯ ಕುರಿತು ಚರ್ಚೆಯಾಗುತ್ತಲೇ ಇರುತ್ತೆ. ಅಷ್ಟರ ಮಟ್ಟಿಗೆ ಗಾಸಿಪ್ ಮಾಡುವ ಮಂದಿಗೆ ಈ ಜೋಡಿ ಇಷ್ಟವಾಗಿ ಬಿಟ್ಟಿದ್ದಾರೆ. ಡಿವೋರ್ಸ್ ನಂತರ ತಮ್ಮ ವೃತ್ತಿರಂಗದ ಕಡೆ ಈ ಮಾಜಿ ದಂಪತಿ ಬ್ಯುಸಿಯಾಗಿದ್ದಾರೆ. ಸದ್ಯ ಸ್ಯಾಮ್ & ಚೈ ಬಗ್ಗೆ ಹೊಸ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಸಂದರ್ಶನವೊಂದರಲ್ಲಿ ಸಮಂತಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ನೀಡಿರುವ ಹೇಳಿಕೆಯಿಂದ ಈಗ ಸಮಂತಾ ಮತ್ತು ನಾಗಚೈತನ್ಯ ನಡುವೆ ಪೈಪೋಟಿ ಶುರುವಾಗಿದೆ ಎನ್ನಲಾಗುತ್ತಿದೆ.

    `ಕಾಫಿ ವಿತ್ ಕರಣ್’ ಶೋನಲ್ಲಿ ಸಮಂತಾ, ನಾಗಚೈತನ್ಯ ಬಗ್ಗೆ ಮಾತನಾಡಿದ್ದರು. ಸಮಂತಾ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಹಾಗಾಗಿ ಈಗ ಅಸಲಿಗೆ ಇಲ್ಲಿವರೆಗೂ ಸುಮ್ಮನಿದ್ದ ನಾಗಚೈತನ್ಯ ಕಳೆದ ಕೆಲವು ದಿನಗಳಿಂದ ಆಕ್ಟಿವ್ ಆಗುತ್ತಿದ್ದಾರೆ. ಮೇಲ್ನೋಟಕ್ಕೆ ಸಮಂತಾಗೆ ಟಕ್ಕರ್ ಕೊಡೋಕೆ ನಾಗಚೈತನ್ಯ ಸಕಲ ಪ್ರಯತ್ನವೂ ನಡೆಸಿದ್ದಾರೆ ಅನ್ನೋ ಚರ್ಚೆಯಾಗ್ತಿದೆ. ಇದನ್ನೂ ಓದಿ:ಗಾಳಿಪಟ 2 ಸಿನಿಮಾದ ‘ಪ್ರಾಯಶಃ’ ಸಾಂಗ್ ರಿಲೀಸ್ ಮಾಡಿದ ಕಿಚ್ಚ ಸುದೀಪ್

    ಸಮಂತಾ ಮುಂಬೈಗೆ ಬಂದಿಳಿಯುವ ಮುನ್ನವೇ ನಾಗಚೈತನ್ಯ ಬಂದಿದ್ದರು. ಅವರ ಮೊದಲ ಬಾಲಿವುಡ್ ಸಿನಿಮಾ `ಲಾಲ್ ಸಿಂಗ್ ಚಡ್ಡಾ’ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ನಾಗಚೈತನ್ಯ ಬಾಲಿವುಡ್ ಫಿಲ್ಮ್ ಮೇಕರ್ ಸಂಜಯ್ ಲೀಲಾ ಬನ್ಸಾಲಿ ಅವರನ್ನ ನಾಗಚೈತನ್ಯ ಭೇಟಿಯಾಗಿ ಬಂದಿದ್ದರು. ಇಬ್ಬರೂ ಸೇರಿ ಸಿನಿಮಾ ಮಾಡುತ್ತಾರೆ ಅನ್ನೋ ಪುಕಾರು ಹಬ್ಬಿದೆ. ಆದರೆ, ಚರ್ಚೆ ಆಗುತ್ತಿರೋ ವಿಷಯವೇ ಬೇರೆ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಕಾಂಪಿಟೇನ್‌ಗೆ ಬಿದ್ದಿದ್ದಾರೆ ಅನ್ನೋ ಗುಸು ಗುಸು ಓಡಾಡುತ್ತಿದೆ. ವೃತ್ತಿರಂಗದಲ್ಲಿ ಸಮಂತಾಗೆ ಟಕ್ಕರ್ ಕೊಡಲು ಮಾಜಿ ಪತಿ ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಮಂತಾ ಜೊತೆಗಿನ ಸಂಬಂಧಕ್ಕೆ ನಾಗಚೈತನ್ಯ ಫುಲ್ ಸ್ಟಾಪ್ ಇಟ್ಟ ಮೇಲೆ ನಟಿ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ನಾಗಚೈತನ್ಯಗೆ ಶೋಭಿತಾ ಕುರಿತ ಪ್ರಶ್ನೆ ಎದುರಾಗಿದೆ. ಈ ಕುರಿತು ನಟ ನೀಡಿರುವ ಉತ್ತರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

    ನಾಗಚೈತನ್ಯ ಮತ್ತು ಸಮಂತಾ ಕಳೆದ ವರ್ಷ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಬಳಿಕ ಶೋಭಿತಾ ಮತ್ತು ನಾಗಚೈತನ್ಯ ಪರಸ್ಪರ ಪ್ರೀತಿಸುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಕೂಡ ಆಗುತ್ತಿದೆ. ಈ ಬೆನ್ನಲ್ಲೇ `ಲಾಲ್ ಸಿಂಗ್ ಚಡ್ಡಾ’ ಸಂದರ್ಶನದಲ್ಲಿ ನಾಗಚೈತನ್ಯಗೆ ಶೋಭಿತಾ ಕುರಿತು ಪ್ರಶ್ನೆ ಎದುರಾಗಿದೆ. ನಿರೂಪಕಿ ಶೋಭಿತಾ ಜತೆಗಿನ ಒಡನಾಟದ ಬಗ್ಗೆ ಕೇಳಿದ್ದಾರೆ.‌ ಇದನ್ನೂ ಓದಿ:ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಯ್ತು ‘ವಿಜಯಾನಂದ’ ಟ್ರೈಲರ್

    ನಿರೂಪಕಿಯ ಪ್ರಶ್ನೆಗೆ ನಾಗಚೈತನ್ಯ ಕ್ಯೂಟ್ ಆಗಿ ಸ್ಮೈಲ್ ಮಾಡಿದ್ದಾರೆ. ನಾನು ಕಿರುನಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಶೋಭಿತಾ ಜತೆಗಿನ ಡೇಟಿಂಗ್ ವಿಚಾರ ನಿಜ ಎಂಬುದನ್ನ ಬಹುತೇಕ ಖಚಿತಪಡಿಸಿದ್ದಾರೆ. ಇನ್ನು ಮೂಲಗಳ ಪ್ರಕಾರ ಈ ಹಿಂದೆ ನಾಗಚೈತನ್ಯ ಹೊಸ ಮನೆಯಲ್ಲಿ ಶೋಭಿತಾ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಈ ಜೋಡಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರಾ ನಾಗಚೈತನ್ಯ ಶೋಭಿತಾ ಜತೆಯಾಗುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

    ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

    `ಲವ್‌ಸ್ಟೋರಿ’ ಚಿತ್ರದ ಸಕ್ಸಸ್ ನಂತರ ನಾಗಚೈತನ್ಯಗೆ ಹಲವು ಬಗೆಯ ಪಾತ್ರಗಳು ಅರಸಿ ಬರುತ್ತಿದೆ. ಸದ್ಯ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಇದೀಗ ಸಂದರ್ಶನವೊಂದರಲ್ಲಿ ತಮಗೆ ಹಿಂದಿ ಸಿನಿಮಾ ಅವಕಾಶ ಬಂದಾಗ ನಿರಾಕರಿಸಿದ್ದು, ಯಾಕೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ.

    ಸದ್ಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯಗಳು ನಿಧಾನಕ್ಕೆ ಶುರುವಾಗಿದೆ. ಬಾಲಿವುಡ್‌ನ ಡೆಬ್ಯೂ ಚಿತ್ರದ ಬಗ್ಗೆ ಮಾತನಾಡುವಾಗ ತಾವು ಯಾಕೆ ಹಿಂದಿ ಚಿತ್ರದಿಂದ ದೂರ ಸರಿಯುತ್ತಿದ್ದರು ಅಂತಾ ಮಾತನಾಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ಹಿಂದಿ ಸಿನಿಮಾಗಳಿಂದ ದೂರವಿದ್ದೆ ಅಂತಾ ನಾಗಚೈತನ್ಯ ಹೇಳಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವ ಕಾರಣ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು ಕಷ್ಟ ಎಂದರು. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

     

    View this post on Instagram

     

    A post shared by Chay Akkineni (@chayakkineni)

    `ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಮೊದಲು ನಿರಾಕರಿಸಿದ್ದೆ, ಆದರೆ ಆಮೀರ್ ಖಾನ್ ಅವರೇ ಪಾತ್ರದ ಬಗ್ಗೆ ಜತೆಗೆ ಹೈದರಾಬಾದ್‌ನಿಂದ ಬರುವ ಹುಡುಗನ ಕಥೆಯಾಗಿದರಿಂದ ನನಗೆ ನಟಿಸಲು ಸುಲಭವಾಯಿತು ಎಂದು ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ಚಿತ್ರರಂಗದಲ್ಲಿ ತಮ್ಮ ಸಿನಿಮಾಗಳ ಮೂಲಕ ಬೆಸ್ಟ್ ಜೋಡಿಯಾಗಿ ಗಮನ ಸೆಳೆದಿರುವ ನಾಗಚೈತನ್ಯ ಮತ್ತು ಸಮಂತಾ ವೈಯಕ್ತಿಕ ಜೀವನದಲ್ಲಿ ಬೇರೆಯಾಗುವ ಮೂಲಕ ಫ್ಯಾನ್ಸ್‌ಗೆ ಶಾಕ್ ನೀಡಿದ್ದರು. ಇದೀಗ ನಾಗಚೈತನ್ಯ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಜತೆ ಮತ್ತೆ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಗೆ ನಟ ನೀಡಿರುವ ಉತ್ತರ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ.

    ಸಿನಿಮಾದಲ್ಲಿ ಮತ್ತು ನಿಜಜೀವನದಲ್ಲಿ ಸಮಂತಾ ಮತ್ತು ನಾಗಚೈತನ್ಯ ಬೆಸ್ಟ್ ಜೋಡಿ ಎಂದೇ ಹೆಸರುವಾಸಿಯಾಗಿದ್ದರು. ಆದರೆ ಈ ಜೋಡಿಯ ಡಿವೋರ್ಸ್ ವಿಚಾರ ಇದುವರೆಗೂ ಅಭಿಮಾನಿಗಳಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮತ್ತೆ ನೀವು ಒಂದಾಗಿ ಅಂತಾ ಫ್ಯಾನ್ಸ್ ಈ ಜೋಡಿಯನ್ನ ಕೇಳಿಕೊಳ್ತಿದ್ದಾರೆ. ಆದರೆ ಈಗ ಸಂದರ್ಶನವೊಂದರಲ್ಲಿ ನಾಗಚೈತನ್ಯ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

    ಸಮಂತಾ ಜೊತೆ ನೀವು ಮತ್ತೆ ಸಿನಿಮಾ ಮಾಡುತ್ತೀರಾ ಅಂತಾ ನಿರೂಪಕಿ ಕೇಳಿದ್ದಾರೆ. ಈ ಪರಿಸ್ಥಿತಿ ಒದಗಿ ಬಂದಿದರೆ ಅದು ಹುಚ್ಚುತನವಾಗುತ್ತದೆ. ಅದು ನನಗೆ ಗೊತ್ತಿಲ್ಲ. ಇದಕ್ಕೆ ಕಾಲವೇ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಆನ್‌ಸ್ಕ್ರೀನ್‌ನಲ್ಲಿ ಅತ್ಯುತ್ತಮ ಕೆಮಿಸ್ಟ್ರಿ ಯಾರ ಜೊತೆ ಎಂದು ಕೇಳಿದಾಗ, ಸಮಂತಾ ಜತೆ ಎಂದು ನಾಗಚೈತನ್ಯ ಉತ್ತರಿಸಿದ್ದರು. ಇದೀಗ ಸಿನಿಮಾ ಕುರಿತಾಗಿ ನಟ ಉತ್ತರಿಸಿರುವ ವಿಚಾರ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಸಮಂತಾ ಚೈತನ್ಯ ಒಟ್ಟಿಗೆ ನಟಿಸುತ್ತಾರಾ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]