Tag: N R Santhosh

  • NR ಸಂತೋಷ್‍ಗೆ ಸಿಗದ ಅರಸೀಕೆರೆ ಟಿಕೆಟ್- ಬಿಜೆಪಿ ಬಾವುಟ, ಫ್ಲೆಕ್ಸ್‌ಗಳಿಗೆ ಬೆಂಬಲಿಗರಿಂದ ಬೆಂಕಿ

    NR ಸಂತೋಷ್‍ಗೆ ಸಿಗದ ಅರಸೀಕೆರೆ ಟಿಕೆಟ್- ಬಿಜೆಪಿ ಬಾವುಟ, ಫ್ಲೆಕ್ಸ್‌ಗಳಿಗೆ ಬೆಂಬಲಿಗರಿಂದ ಬೆಂಕಿ

    ಹಾಸನ: ಅರಸೀಕೆರೆ ವಿಧಾನಸಭಾ ಕ್ಷೇತ್ರ (Araseekere Assembly Constituency 2023) ದಿಂದ ಎನ್.ಆರ್ ಸಂತೋಷ್‍ಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಬಾವುಟ ಸುಟ್ಟು ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ ಪಕ್ಷ (BJP Party) ದ ಫ್ಲೆಕ್ಸ್ ಗಳನ್ನು ಹರಿದು ಹಾಕಿದ ಸಂತೋಷ್ ಬೆಂಬಲಿಗರು, ಯಡಿಯೂರಪ್ಪ (BS Yediyurappa), ವಿಜಯೇಂದ್ರ (BY Vijayendra) ವಿರುದ್ಧ ಘೋಷಣೆಗಳನ್ನು ಕೂಗಿ ಕಿಡಿಕಾರಿದ್ದಾರೆ. ಜಿ.ವಿ ಬಸವರಾಜು 5 ಸಾವಿರ ವೋಟು ಕೂಡ ಪಡೆಯಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಡೀ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಹಾಳು ಮಾಡಿದ್ದಾರೆ. ನಾನು ಎನ್.ಆರ್ ಸಂತೋಷ್ ಗೆಲ್ಲಲಿ ಎಂದು ಗಡ್ಡ ಬಿಟ್ಟಿದ್ದೆ. ಈಗ ಅವರಿಗೆ ಟಿಕೆಟ್ ನೀಡಿಲ್ಲ. ನಾಳೆ ಬಿಜೆಪಿ ಸೋಲಲಿ ಎಂದು ಗಡ್ಡ ಬೋಳಿಸಿ ಬೆಂಗಳೂರಿನ ಬಿಜೆಪಿ ಕಚೇರಿಗೆ ಕಳುಹಿಸಿತ್ತೇನೆ ಎಂದು ಎನ್.ಆರ್.ಸಂತೋಷ್ ಬೆಂಬಲಿಗ ರಂಗನಾಥ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ

    ಇತ್ತ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಎನ್.ಆರ್.ಸಂತೋಷ್ ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಅಭ್ಯರ್ಥಿ ಎಂದು ಸಂಘಟನೆಯಲ್ಲಿ ತೊಡಗಿದ್ದ ಸಂತೋಷ್‍ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ತಮ್ಮ ಅರಸೀಕೆರೆ ನಿವಾಸದಲ್ಲಿ ಬೃಹತ್ ಸಭೆ ನಡೆಸಿದರು.

    ಕಳೆದ ಮೂರು ವರ್ಷಗಳಿಂದ ಅರಸೀಕೆರೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಕಡೆ ಗಳಿಗೆಯಲ್ಲಿ ನನಗೆ ಟಿಕೆಟ್ ಕೈ ತಪ್ಪಿದೆ. ಯಾಕೆ ಟಿಕೆಟ್ ತಪ್ಪಿದೆ ಎಂದು ಗೊತ್ತಿಲ್ಲ. ಆದರೆ ಚುನಾವಣೆ ಕಣದಿಂದ ಸರಿಯಲ್ಲ. ಸೋಮವಾರ 50 ಸಾವಿರ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸುತ್ತೇನೆ. ಆನಂತರ ಬೇರೆ ಪಕ್ಷದಿಂದ ಸ್ಪರ್ಧಿಸುವುದು ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕೆಂಬುದನ್ನು ತಿಳಿಸಬಯಸುತ್ತೇನೆ ಎಂದರು.

    ನನ್ನ ಎದುರಾಳಿ ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ (K M Shivalinge Gowda), ಬಿಜೆಪಿ ಕಡಿಮೆ ಮತಗಳನ್ನು ಪಡೆಯಲಿದೆ. ಬಿಜೆಪಿ ಕಾರ್ಯಕರ್ತರೆಲ್ಲಾ ನಮ್ಮ ಜೊತೆ ಇದ್ದಾರೆ ಎಂದರು.

  • ಫ್ಲೆಕ್ಸ್ ತೆರವು- ಸಿಎಂ ಆಪ್ತ ಸಂತೋಷ್ ಬೆಂಬಲಿಗರಿಂದ ಅಧಿಕಾರಿಗಳಿಗೆ ನಿಂದನೆ

    ಫ್ಲೆಕ್ಸ್ ತೆರವು- ಸಿಎಂ ಆಪ್ತ ಸಂತೋಷ್ ಬೆಂಬಲಿಗರಿಂದ ಅಧಿಕಾರಿಗಳಿಗೆ ನಿಂದನೆ

    ಹಾಸನ: ನಿಯಮಮೀರಿ ಹಾಕಿಸಿದ್ದ ಫ್ಲೆಕ್ಸ್ ತೆರವುಗೊಳಿಸಿದ ಅರಸೀಕೆರೆ ನಗರಸಭೆ ಆಯುಕ್ತರ ವಿರುದ್ಧ ಮುಖ್ಯಮಂತ್ರಿ ಬಿಎಸ್‍ವೈ ಆಪ್ತ ಸಂತೋಷ್ ಬೆಂಬಲಿಗರು ಏಕವಚನದಲ್ಲಿ ನಿಂದಿಸಿದ ಘಟನೆ ನಡೆದಿದೆ.

    ಅರಸೀಕೆರೆ ನಗರಸಭೆ ವ್ಯಾಪ್ತಿಯ ಹಲವೆಡೆ ಎನ್.ಆರ್.ಸಂತೋಷ್‍ಗೆ ಶುಭಾಷಯ ಕೋರಿ ಫ್ಲೆಕ್ಸ್ ಹಾಕಲಾಗಿತ್ತು. ನಿಯಮ ಮೀರಿ ಫ್ಲೆಕ್ಸ್ ಹಾಕಿಸಿದ್ದಾರು. ಅರಸೀಕೆರೆ ನಗರಸಭೆ ಆಯುಕ್ತ ಕಾಂತರಾಜು, ತಡರಾತ್ರಿ ಫ್ಲೆಕ್ಸ್ ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳಕ್ಕಾಗಮಿಸಿದ ಸಂತೋಷ್ ಬೆಂಬಲಿಗರು ಫ್ಲೆಕ್ಸ್ ತೆರವುಗೊಳಿಸಿ ತೆಗೆದುಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಅಡ್ಡಗಟ್ಟಿದ್ದಲ್ಲದೆ ನಗರಸಭೆ ಅಧಿಕಾರಿಗಳನ್ನು ಏಕವಚನದಲ್ಲಿ ನಿಂದಿಸಿದ್ದಾರೆ.

    ಬೇರೆಯವರು ಫ್ಲೆಕ್ಸ್ ಹಾಕಿದ್ರೆ ಕೇಳಲ್ಲ. ನಾವು ಹಾಕಿಸಿದ್ರೆ ತೆಗೆಸ್ತೀಯಾ? ಈ ಟ್ರ್ಯಾಕ್ಟರ್ ಮುಂದೆ ಹೋಗಲು ಬಿಡಲ್ಲ ಎಂದು ಗಲಾಟೆ ಮಾಡಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಂತೆ ನಿಂತಿದ್ದಾರೆ. ಈ ಗಲಾಟೆಯೆಲ್ಲ ಗಮನಿಸಿದ ಸಾರ್ವಜನಿಕರು ಮಾತ್ರ ಆಡಳಿ ಪಕ್ಷದದ ಬೆಂಬಲಿಗರು ಏನೂ ಮಾಡಿದ್ರು ಅಧಿಕಾರಿಗಳು ಕೇಳಬಾರದ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ತಡರಾತ್ರಿ ಆರಂಭವಾದ ಫ್ಲೆಕ್ಸ್ ಜಟಾಪಟಿ ಇನ್ನೂ ಕೂಡ ಮುಂದುವರಿದಿದೆ.