ಇಂದಿನಿಂದ ಹತ್ತು ದಿನಗಳ ಕಾಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಕ್ಷರಶಃ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನೆ ಪೂರಿತ ವಾತಾವರಣ ನಿರ್ಮಾಣವಾಗಲಿದೆ. ಇದಕ್ಕೆ ಕಾರಣ ಇಂದಿನಿಂದ ದಸರಾ ಮಹೋತ್ಸವ ಆರಂಭವಾಗಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ….
ಬೇಕಾಗುವ ಸಾಮಾಗ್ರಿಗಳು
1. ಕಡಲೆ ಹಿಟ್ಟು – ಅರ್ಧ ಕೆಜಿ
2. ತುಪ್ಪ – 1 ಬಟ್ಟಲು
3. ಎಣ್ಣೆ – 1 ಬಟ್ಟಲು
4. ಸಕ್ಕರೆ – ಮುಕ್ಕಾಲು ಕೆಜಿ
5. ನೀರು – 1 ಲೋಟ
ಮಾಡುವ ವಿಧಾನ
* ಒಂದು ಪ್ಯಾನ್ಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಕುದಿಸಿಡಿ.
* ಈಗ ಒಂದು ಪ್ಯಾನ್ಗೆ ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ.
* ಒಂದು ಎಳೆ ಪಾಕ ಬಂದ ಮೇಲೆ ಅದಕ್ಕೆ(ಪಾಕ) ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟನ್ನು ಹಾಕಿಕೊಳ್ಳುತ್ತಾ ಸೌಟಿನಿಂದ ತಿರುಗಿಸುತ್ತೀರಿ.
* ಕಡಲೆಹಿಟ್ಟು ಗಂಟುಗಳಿಲ್ಲದಂತೆ ಸಂಪೂರ್ಣವಾಗಿ ಸಕ್ಕರೆ ಪಾಕದೊಂದಿಗೆ ಮಿಕ್ಸ್ ಮಾಡಿ.
* ಈಗ ಸ್ವಲ್ಪ ಸ್ವಲ್ಪವೇ ತುಪ್ಪ ಮತ್ತು ಎಣ್ಣೆ ಮಿಕ್ಸ್ ಅನ್ನು ಸೇರಿಸಿ ಕೈಯಾಡಿಸುತ್ತಿರಿ.
* ಕಡಲೆಹಿಟ್ಟು ಈಗ ತುಪ್ಪ ಮತ್ತು ಎಣ್ಣೆಯನ್ನು ಹೀರಿಕೊಂಡು ಗಟ್ಟಿಯಾಗುತ್ತಾ ಬರುತ್ತದೆ.
* ನಂತರ ತುಪ್ಪ ಸವರಿದ ಟ್ರೇಗೆ ಬಿಸಿ ಇರುವಾಗಲೇ ಕಡಲೆಹಿಟ್ಟು ಗಟ್ಟಿಯನ್ನು ಹಾಕಿ ಬೇಕಾದ ಶೇಪ್ಗೆ ಕತ್ತರಿಸಿ.
* ಬಿಸಿ ಆರಿದ ಮೇಲೆ ಸ್ಲೈಸ್ ಗಳನ್ನು ಟ್ರೇನಿಂದ ಸಪರೇಟ್ ಮಾಡಿ ಸವಿಯಿರಿ..
ಮೈಸೂರು: ಲೇಖಕ ಆನಂದ್ ರಂಗನಾಥನ್ ಅವರ ಟ್ವೀಟ್ಗೆ ಸಂಸದ ಪ್ರತಾಪ್ ಸಿಂಹ ಸಖತ್ ಟಾಂಗ್ ಕೊಟ್ಟಿದ್ದಾರೆ. ಮೈಸೂರು ಪಾಕ್ ಹೆಸರಲ್ಲೇ ಮೈಸೂರು ಇದೆ. ‘ಪಾಕ್’ದಿಂದ ಮೈಸೂರು ತೆಗೆದರೆ ಅದಕ್ಕೆ ಬೆಲೆ ಇಲ್ಲ. ಅದನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಸದ್ಯ ಭಾರೀ ಚರ್ಚೆಗೆ ಕಾರಣವಾಗಿರುವ ಮೈಸೂರ್ ಪಾಕ್ ಜಿಐ ತಮಿಳು ನಾಡಿಗೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಆನಂದ್ ರಂಗನಾಥನ್ ಟ್ವೀಟ್ ಬಗ್ಗೆ ಮಾತನಾಡಿ, ಮೈಸೂರು ತೆಗೆದು ‘ಪಾಕ್’ ಮಾತ್ರ ಇದ್ರೆ ಅದು ಬೇರೆ ಅರ್ಥ ಕೊಡಲಿದೆ. ಮೈಸೂರು ಪಾಕ್ ಅನ್ನು ಬೇರೆ ಅವ್ರಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಾನೂ ಆನಂದ್ ರಂಗನಾಥ್ ಟ್ವಿಟ್ ಗಮನಿಸಿದ್ದೇನೆ. ಅವರು ಈ ರೀತಿಯ ಕೆಲಸ ಜಾಸ್ತಿ ಮಾಡುತ್ತಾರೆ. ಈ ರೀತಿ ಕಿಡಿಗೇಡಿತನದಿಂದ ಮಾಡುವ ಟ್ವೀಟ್ಗಳನ್ನು ನಿರ್ಲಕ್ಷಿಸಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬಳಿ ಆನಂದ್ ಅವರು ಯಾವ ಉದ್ದೇಶದಿಂದ ಹೋಗಿದ್ದರೋ ಗೊತ್ತಿಲ್ಲ. ಆದರೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಮೈಸೂರು ಪಾಕ್ ಕೊಟ್ಟಿಲ್ಲ, ಅದು ಶುದ್ದ ಸುಳ್ಳು ಸುದ್ದಿ. ಅವರು ಸಚಿವೆಯ ಜೊತೆ ಫೋಟೋ ಹಾಕಿಕೊಂಡು ಅದಕ್ಕೆ ಏನೋ ಕ್ಯಾಪ್ಷನ್ ಬರೆದುಕೊಂಡರೆ ಅದಕ್ಕೆ ನಾವು ಹೊಣೆಯಲ್ಲ. ಅದು ಅವರವರ ಹೊಣೆಗೇಡಿತನವನ್ನು ತೋರಿಸಿಕೊಡುತ್ತದೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ, ಕೇಂದ್ರ ಸರ್ಕಾರ ಮೈಸೂರು ಪಾಕ್ ಜಿಐ ಟ್ಯಾಗ್ ತಮಿಳುನಾಡಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Haha. I spoke to the concerned TV channel. They are stopping it now.
Chill for now. And as an aside, accept Mysore Pak is from Mysuru 😉
(P.S. To All – If humor & sarcasm is lost from our public conversations, it will be such a loss) https://t.co/Gnjuhj8rCI
ಕೆಲವು ವಸ್ತುಗಳು, ತಿಂಡಿಗಳು ಇತರೇ ಸಾಮಾಗ್ರಿಗಳು ಆಯಾಯ ಪ್ರದೇಶದ ಹೆಸರಿನಿಂದ ಪ್ರಸಿದ್ಧಿಗಳಿಸಿರುತ್ತದೆ. ಉದಾಹರಣೆಗೆ ಮೈಸೂರು ವಿಳ್ಯದ ಎಲೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಸಿಲ್ಕ್ ಹೀಗೆ ಹೊಲವು ಪದಾರ್ಥಗಳು ಮೈಸೂರಿನಲ್ಲಿ ಮಾತ್ರ ತಯಾರಾಗುತ್ತದೆ ಆದ್ದರಿಂದ ಅವುಗಳ ಹೆಸರಿನೊಂದಿಗೆ ಮೈಸೂರನ್ನು ಕೂಡ ಸೇರಿಸಲಾಗಿದೆ. ಮೈಸೂರು ಪಾಕ್ ಯಾರದ್ದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಈ ಬಗ್ಗೆ ಯಾರೋ ವಿವೇಕವಿಲ್ಲದೆ ಮಾತನಾಡುತ್ತಾರೆ ಎಂದರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್ಗೆ ಸಿಹಿ ತಿನಿಸುಗಳಲ್ಲಿ ಮೈಸೂರ್ ಪಾಕ್ ಅಂದರೆ ಪ್ರಿಯವಾದದ್ದು. ಅದರಲ್ಲೂ ರಾಮನಗರದ ಹೋಟೆಲ್ನ ಮೈಸೂರ್ ಪಾಕ್ ಅಂದರೆ ಅಚ್ಚುಮೆಚ್ಚಿನದ್ದಾಗಿತ್ತು. ಆ ನಗರ ಸಮೀಪ ಬರುತ್ತಿದ್ದಂತೆ ಮೈಸೂರ್ ಪಾಕ್ ಅಂಬಿಗಾಗಿ ರೆಡಿಯಾಗುತ್ತಿತ್ತು. ಅಂಬಿ ನಮ್ಮನ್ನಗಲುವ 15 ದಿನಗಳ ಮುಂಚೆ ಕೂಡ ಅಲ್ಲಿಯ ಮೈಸೂರ್ ಪಾಕ್ನ್ನ ಸವಿದಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ಗೆ ಹೋದಲ್ಲಿ ಬಂದಲ್ಲೆಲ್ಲಾ ಹಾಗೂ ದೇಶ-ವಿದೇಶಗಳಲ್ಲೂ ಸ್ನೇಹಿತರು ಇದ್ದಾರೆ. ಮಂಡ್ಯ, ಮೈಸೂರು ಮಾತ್ರವಲ್ಲದೇ ಅಂಬಿಗೆ ರೇಷ್ಮೆನಗರಿ ರಾಮನಗರದಲ್ಲೂ ಉತ್ತಮ ಬಾಂಧವ್ಯವಿದೆ. ಊಟ, ತಿಂಡಿ-ತಿನಿಸಿನ ವಿಚಾರದಲ್ಲೂ ಅಂಬಿಗೆ ರಾಮನಗರ ಸಖತ್ ಪ್ರಿಯವಾಗಿತ್ತು. ಅದರಲ್ಲೂ ಚನ್ನಪಟ್ಟಣದಲ್ಲಿ ನಾಟಿಕೋಳಿ-ಮುದ್ದೆ ಇಷ್ಟಪಟ್ಟರೆ, ರಾಮನಗರದಲ್ಲಿ ಸಿಹಿ ತಿನಿಸು ಮೈಸೂರ್ ಪಾಕ್ನ್ನು ಇಷ್ಟಪಟ್ಟು ತಿನ್ನುತ್ತಿದ್ದರು.
ಬೆಂಗಳೂರಿನಿಂದ ಮಂಡ್ಯ ಇಲ್ಲವೇ ಮೈಸೂರು ಕಡೆಗೆ ಅಂಬಿ ಹೊರಟರೆ ಅವರ ಪರಿಚಿತರು ನಗರದಲ್ಲಿನ ಹೋಟೆಲ್ ಜನಾರ್ದನ್ಗೆ ಹೋಗಿ ಮೈಸೂರ್ ಪಾಕ್ ಪಾರ್ಸೆಲ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮನ್ನಗಲಿದ 15 ದಿನಗಳ ಮುಂಚೆ ರಾಮನಗರಕ್ಕೆ ಆಗಮಿಸಿದ್ದ ಅಂಬರೀಶ್ ತಮ್ಮ ಪರಿಚಿತರನ್ನ ಕಳಿಸಿ 2 ಕೆಜಿಯಷ್ಟು ಮೈಸೂರ್ ಪಾಕ್ ಪಾರ್ಸೆಲ್ ತೆಗೆದುಕೊಂಡಿದ್ದರು.
1980ರ ಕಾಲದಲ್ಲೇ ಅಂಬಿ ಈ ಹೋಟೆಲ್ನ ಮೈಸೂರ್ ಪಾಕ್ನ ರುಚಿಯನ್ನ ಸವಿದಿದ್ದರು. 1997ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಂಬರೀಶ್ ಎಂ.ಜಿ ರಸ್ತೆಯಲ್ಲಿ ಪ್ರಚಾರ ಮಾಡುವ ವೇಳೆ ಮೈಸೂರ್ ಪಾಕ್ನ್ನ ಹೊಗಳಿದ್ದರು. ಅಲ್ಲದೇ ಸ್ಥಳದಲ್ಲಿಯೇ ಮೈಸೂರ್ ಪಾಕ್ ಬೇಕೆಂದು ತರಿಸಿಕೊಂಡು ಸವಿದಿದ್ದರು. ಇಷ್ಟು ಮಾತ್ರವಲ್ಲದೇ ಆಪ್ತಮಿತ್ರ ವಿಷ್ಣು ದಂಪತಿಗೂ ಜನಾರ್ದನ್ ಹೋಟೆಲ್ನ ಮೈಸೂರು ಪಾಕ್ ರುಚಿ ತೋರಿಸಿದ್ದರು.
ಇನ್ನೊಂದು ದಿನ ರಾಮದೇವರ ಬೆಟ್ಟದಲ್ಲಿ ‘ವಂದೇ ಮಾತರಂ’ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಆಗ 1,500 ಕಲಾವಿದರಿಗೆ ಸ್ವಂತ ಖರ್ಚಿನಲ್ಲಿ ಜನಾರ್ದನ್ ಹೋಟೆಲ್ನಿಂದ ಮೈಸೂರ್ ಪಾಕ್ ತರಿಸಿ ಕೊಡಿಸಿದ್ದರು. ಕಳೆದ 66ನೇ ವರ್ಷದ ಹುಟ್ಟುಹಬ್ಬದ ವೇಳೆ ಹೆದ್ದಾರಿಯಲ್ಲಿಯೇ ತಮ್ಮ ಕಾರ್ ನಿಲ್ಲಿಸಿ ಗೆಳೆಯರನ್ನು ಕಳುಹಿಸಿ ಮೈಸೂರ್ ಪಾಕ್ ತರಿಸಿಕೊಂಡಿದ್ದರು. ಹೋಟೆಲ್ ಜನಾರ್ದನ್ನ ಮೈಸೂರ್ ಪಾಕ್ ಅಂದರೆ ಅಂಬಿಗೆ ಸಾಕಷ್ಟು ಪ್ರಿಯವಾಗಿತ್ತು. ಏನೇ ಸ್ಪೆಷಲ್ ಇದ್ದರೂ ಮೈಸೂರ್ ಪಾಕ್ ಬೇಕು ಎಂದು ಕೇಳುತ್ತಿದ್ದರು.
ನಾಡಿನಲ್ಲೆಡೆ ದಸಾರ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬದಿಂದ ದೂರು ಇರುವ ಹಲವರು ಹಬ್ಬಕ್ಕಾಗಿ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರೆ, ಮತ್ತೆ ಕೆಲವರು ಈ ಬಾರಿ ಜಂಬೂ ಸವಾರಿ ನೋಡಬೇಕೆಂದು ಪ್ಲಾನ್ ಮಾಡುತ್ತಿರುತ್ತಾರೆ. ವಿಶ್ವಾದ್ಯಂತ ಜಂಬೂ ಸವಾರಿ ಹೇಗೆ ಪ್ರಸಿದ್ಧವೋ, ಹಾಗೆಯೇ ಮೈಸೂರು ಪಾಕ್ ಸಹ ಅಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರಿಗೆ ಬಂದ ಪ್ರವಾಸಿಗರು ‘ಮೈಸೂರು ಪಾಕ್’ ಸವಿಯಲೇ ಬೇಕು.
ಮೈಸೂರು ಪಾಕ್ ಇತಿಹಾಸ:
ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕಾಕಾಸುರ ಮಾದಪ್ಪ ಎಂಬ ಭಟ್ಟರು ಕೆಲಸ ಮಾಡಿಕೊಂಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯ ನೇತೃತ್ವವನ್ನು ಕಾಕಾಸುರ ಮಾದಪ್ಪನವರೇ ವಹಿಸಿಕೊಂಡಿದ್ದರು. ಒಂದು ದಿನ ಮಹಾರಾಜರು ಕಾಕಾಸುರು ಅವರಿಗೆ ಸಿಹಿ ತಿಂಡಿ ಮಾಡುವಂತೆ ಆದೇಶಿಸುತ್ತಾರೆ.
ಮಹಾರಾಜರ ಆದೇಶ ಸ್ವೀಕರಿಸಿದ ಕಾಕಾಸರು ಭಟ್ಟರು, ಮೊದಲು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು `ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).
ಹೊಸ ಸಿಹಿ ತಿಂಡಿಯ ರುಚಿ ನೀಡಿದ ಮಹಾರಾಜರು ಏನಿದರ ಹೆಸರು ಎಂದು ಕೇಳಿದ್ದರಂತೆ ಆಗಾಗ ಭಟ್ಟರು ಪಾಕದಿಂದ ಮಾಡಿದ ಸಿಹಿ ಅಂದರಂತೆ. ಹಾಗಾದರೆ ಮೈಸೂರು ಪಾಕ್ ಎಂದು ಹೆಸರು ಇಡೋಣ ಅಂತಾ ಹೇಳಿದ್ದರು ಎಂಬ ಕಥೆಯನ್ನು ಜನರು ಹೇಳುತ್ತಾರೆ. ಕಾಕಾಸುರ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸಿಸುತ್ತಿದ್ದು, ಗುರು ಸ್ವೀಟ್ಸ್ ಎಂಬ ಸಿಹಿ ಅಂಗಡಿಯನ್ನು ಹೊಂದಿದ್ದಾರೆ.
ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ರುಚಿಯನ್ನು ಉಳಿಸಿಕೊಂಡು ಬಂದಿದ್ದು, ಅಂಗಡಿಯ ಮಾಹಿತಿ ಇದ್ದವರೂ ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.
ಮೈಸೂರು ಪಾಕ್ ನಮ್ಮದು ತಮಿಳರ ವಾದ..?
ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ ಹೇಳುವ ಪ್ರಕಾರ, 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.
ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ (ಜಿಯಾಗ್ರಾಫಿಕಲ್ ಇಂಡಿಕೇಷನ್-ಐಜಿ) ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಕನ್ನಡಿಗರು ಮತ್ತು ತಮಿಳರ ಮಧ್ಯೆ ಭಾರೀ ಚರ್ಚೆ ಆರಂಭವಾಗಿತ್ತು. ದಕ್ಷಿಣ ಭಾರತದ ಸಮೃದ್ಧ ಸಿಹಿ ತಿನಿಸಾದ ಮೈಸೂರು ಪಾಕ್ ತಯಾರಿಸಲು ಹೇರಳ ಪ್ರಮಾಣದ ಶುದ್ಧ ತುಪ್ಪ, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಲಾಗುತ್ತದೆ. ಆದರೆ ಮೈಸೂರು ಪಾಕ್ ಹಾಗೂ ಧಾರವಾಡ ಪೇಡಗಳಿಗೆ ಈಗಾಗಲೇ ಕರ್ನಾಟಕಕ್ಕೆ ಜಿಐ ಸ್ಥಾನದ ಹಕ್ಕು ನೀಡಲಾಗಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.