Tag: Mymul

  • ಮೈಮೂಲ್‍ನಲ್ಲಿ ಹಿಡಿತಕ್ಕೆ ಸಿಎಂ ಯತ್ನನಾ..?- ಜಿಟಿಡಿ ಆಪ್ತ ಪ್ರಸನ್ನ ಕೆಳಗಿಳಿಸಲು ಸ್ಕೆಚ್

    ಮೈಮೂಲ್‍ನಲ್ಲಿ ಹಿಡಿತಕ್ಕೆ ಸಿಎಂ ಯತ್ನನಾ..?- ಜಿಟಿಡಿ ಆಪ್ತ ಪ್ರಸನ್ನ ಕೆಳಗಿಳಿಸಲು ಸ್ಕೆಚ್

    – ಸಚಿವ ವೆಂಕಟೇಶ್ ಮೂಲಕ ಬೆದರಿಕೆ ಆರೋಪ

    ಮೈಸೂರು: ಸಹಕಾರ ಕ್ಷೇತ್ರದ ಹಿಡಿತ ಪಡೆಯಲು ಸಿಎಂ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ತವರು ಜಿಲ್ಲೆಯಿಂದಲೇ ಕಾಂಗ್ರೆಸ್ ನಾಯಕರು ಸಹಕಾರ ಕ್ಷೇತ್ರದ ಆಪರೇಷನ್ ಶುರುಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಡಿಸೆಂಬರ್ ನಲ್ಲಿ ನಡೆಯಬೇಕಿದ್ದ ಎಂಡಿಸಿಸಿ ಬ್ಯಾಂಕ್ (MDCC Bank) ಚುನಾವಣೆಯನ್ನು ರಾಜ್ಯ ಸರ್ಕಾರ ಮುಂದೂಡಿತ್ತು. ಅಲ್ಲದೇ ಜಿ.ಟಿ ದೇವೇಗೌಡ (GT Devegowda) ಮಗ, ಶಾಸಕ ಹರೀಶ್ ಗೌಡನನ್ನು ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೂ ಆಯ್ತು. ಈಗ ಮೈಮೂಲ್ ಸರದಿಯಾಗಿದೆ.

    ಸಹಕಾರ ಕ್ಷೇತ್ರದಲ್ಲಿ ಜಿಟಿ.ದೇವೇಗೌಡರ ಪಾರುಪತ್ಯ ಮುರಿಯಲು ಶತ ಪ್ರಯತ್ನ ನಡೆಸಲಾಗುತ್ತಿದೆ. 15 ಸದಸ್ಯರ ಪೈಕಿ 12 ಸದಸ್ಯ ಬಲದೊಂದಿಗೆ ಮೈಮೂಲ್ ಅಧ್ಯಕ್ಷ ಆಗಿರುವ ಪಿ.ಎಂ.ಪ್ರಸನ್ನ ಅವರು ಜಿಟಿಡಿ ಆಪ್ತ ಮಾಜಿ ಶಾಸಕ ಕೆ.ಮಹದೇವ್ ಪುತ್ರ. ಈ ಕಾರಣಕ್ಕೆ ಪ್ರಸನ್ನ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ.

    ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಮೂಲಕ ಆಪರೇಷನ್ ನಡೆಯುತ್ತಿದ್ದು, ವಾಸಸ್ಥಳ ದೃಢೀಕರಣ ವಿಚಾರವಾಗಿಯೇ ಹೆಚ್ಚು ಬಾರಿ ನೋಟೀಸ್ ಕೊಟ್ಟು ಕಿರುಕುಳ ನೀಡಲಾಗುತ್ತದೆ. ಮೈಮೂಲ್ ಇತರ ಸದಸ್ಯರನ್ನು ಬೆದರಿಸುವ ಮೂಲಕ ಪ್ರಸನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಮೂಲಕ ಸದ್ಯ ಸಚಿವ ವೆಂಕಟೇಶ್ ವಿರುದ್ಧ ದ್ವೇಷ ರಾಜಕಾರಣದ ಗಂಭೀರ ಆರೋಪ ಕೇಳಿಬಂದಿದೆ.

  • ಮೈಸೂರಲ್ಲಿರೋ ಕೆಲ ಹಾವುಗಳಿಂದ ದೂರ ಇರಬೇಕು: ಸಾ.ರಾ. ಮಹೇಶ್

    ಮೈಸೂರಲ್ಲಿರೋ ಕೆಲ ಹಾವುಗಳಿಂದ ದೂರ ಇರಬೇಕು: ಸಾ.ರಾ. ಮಹೇಶ್

    ಮೈಸೂರು: ಜಿಲ್ಲೆಯಲ್ಲಿ ಕೆಲ ಹಾವುಗಳಿವೆ. ಅಂತಹ ಹಾವುಗಳಿಂದ ಹುಷಾರಾಗಿರಬೇಕು ಎಂದು ಮೈಸೂರು ಹಾಲು ಒಕ್ಕೂಟ ನಿ.(ಮೈಮುಲ್)ದ ಕುರಿತು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಗಿ ಮಾತನಾಡಿದ್ದಾರೆ.

    ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಮೈಸೂರಿನಲ್ಲಿ ಕೆಲ ಹಾವುಗಳಿವೆ ಅವುಗಳಿಂದ ಹುಷಾರಾಗಿ ಇರಬೇಕು. ಕೆಲವು ಕಚ್ಚಿದ್ರೆ ವಿಷ, ಇನ್ನೂ ಕೆಲವು ಮೂಸಿದರೆ ವಿಷ ಇದೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು. ಚಾಮರಾಜನಗರ ಹಾಲು ಒಕ್ಕೂಟದ ಬಗ್ಗೆ ಜಂಟಿ ಸಮಿತಿ ವರದಿ ನೀಡಿದ್ದು, ಅಲ್ಲಿನ ಆಡಳಿತ ಮಂಡಳಿಯನ್ನು ಅಮಾನತು ಮಾಡಿ ಎಂದು ಹೇಳಿದೆ. ಅಲ್ಲಿನ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ಇರಲಿಲ್ಲ ಎಂದೂ ಹೇಳಿದೆ. ಅಲ್ಲಿ ಪರೀಕ್ಷೆ ನಡೆಸಿದ ಸಂಸ್ಥೆಯೇ ಮೈಮುಲ್‍ನಲ್ಲಿ ಪರೀಕ್ಷೆ ನಡೆಸಿದೆ. ಅಲ್ಲಿ ಅಕ್ರಮ ಮಾಡಿರುವ ಸಂಸ್ಥೆಯನ್ನು ಇಲ್ಲಿ ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

    ನಮಗೆ ನ್ಯಾಯ ಸಿಗುವ ಭರವಸೆ ಇದೆ. ಅದಕ್ಕಾಗಿ ಹೋರಾಟ ಮಾಡ್ತಿದ್ದೇನೆ. ಆದರೆ ಕೆಲ ಹಾವುಗಳು ಮೈಸೂರಿನಲ್ಲಿ ಇವೆ. ಅಂತಹ ಹಾವುಗಳಿಂದ ಹುಷಾರಾಗಿ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡಿದ ಅವರು, ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನ. ನಾಳೆಯೂ ದೇವೇಗೌಡರನ್ನು ಮನವೊಲಿಸುತ್ತೇವೆ. ಒಪ್ಪಲಿಲ್ಲ ಎಂದರೆ ಮಂಗಳವಾರ ಎಲ್ಲ ಜೆಡಿಎಸ್ ಶಾಸಕರು ಹೆಚ್‍ಡಿಡಿ ಮನೆಗೆ ಭೇಟಿ ನೀಡಿ ಒಪ್ಪುವಂತೆ ಮಾಡುತ್ತೇವೆ. ದೇವೇಗೌಡರು ಒಪ್ಪಿದರೆ ಬಾಕಿ ಬೇಕಾಗಿರುವ ಮತಗಳಿಗೆ ಯಾರ ಬಳಿ ಹೋಗಬೇಕು ಎಂದು ಚರ್ಚೆ ಮಾಡುತ್ತೇವೆ ಎಂದರು.

  • ಬಿಎಸ್‍ವೈ ಮನೆಗೆ ನಾನು ಹೋಗಿದ್ದು ಏಕೆ – ಕಾರ್ಯಕರ್ತರಿಗೆ ಕಾರಣ ತಿಳಿಸಿದ ಜಿಟಿಡಿ

    ಬಿಎಸ್‍ವೈ ಮನೆಗೆ ನಾನು ಹೋಗಿದ್ದು ಏಕೆ – ಕಾರ್ಯಕರ್ತರಿಗೆ ಕಾರಣ ತಿಳಿಸಿದ ಜಿಟಿಡಿ

    ಮೈಸೂರು: ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಇತ್ತೀಚೆಗೆ ಬಿಜೆಪಿ ನಾಯಕರೊಂದಿಗೆ ಬೆರೆಯುತ್ತಿರುವ ಬೆನ್ನಲ್ಲೇ ಸೋಮವಾರ ರಾತ್ರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಈ ಕುರಿತು ಜಿ.ಟಿ.ದೇವೇಗೌಡ ಅವರೇ ಸ್ಪಷ್ಟಪಡಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಚುನಾವಣೆ ನಡೆದಿತ್ತು. ಇದಕ್ಕೆ ನನ್ನ ಆಪ್ತ ಸಿದ್ದೇಗೌಡ ಸ್ಪರ್ಧಿಸುತ್ತಿದ್ದ. ಅಲ್ಲದೆ, ಅಧ್ಯಕ್ಷ ಸ್ಥಾನಕ್ಕೆ ಸಿಎಂ ಬಿಎಸ್‍ವೈ ತಂಗಿ ಮಗ ಸಹ ಸ್ಪರ್ಧೆ ಮಾಡಿದ್ದರು. ಈ ವಿಚಾರ ಮಾತನಾಡಲು ಬಿಎಸ್‍ವೈ ಅವರ ಮನೆಗೆ ಹೋಗಿದ್ದೆ ಎಂದು ತಿಳಿಸಿದರು.

    ಯಡಿಯೂರಪ್ಪ ಅವರ ತಂಗಿ ಮಗ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಸೂಚಿಸುವಂತೆ ಮನವಿ ಮಾಡಲು ಅವರ ಮನೆಗೆ ತೆರಳಿದ್ದೆ. ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸಿ, ಮನವಿ ಆಲಿಸಿದರು. ನಿಮ್ಮ ತಂಗಿ ಮಗನಿಗೆ ನೀವೆ ಹೇಳಿ ನಾಮಪತ್ರ ವಾಪಾಸ್ ತಗಿಸಿ ಅಂತ ಮನವಿ ಮಾಡಿಕೊಂಡಿದ್ದೆ. ಅದಕ್ಕೆ ಪ್ರತಿಯಾಗಿ ಅವರು ವಿಜಯೇಂದ್ರ ಅವರಿಗೆ ತಿಳಿಸಿ ಬಿಎಸ್‍ವೈ ತಂಗಿ ಮಗ ಅಶೋಕ್ ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದರು ಎಂದು ಹೇಳಿದರು.

    ಇಂದು ಸಿಎಂ ತಂಗಿ ಮಗ ನಾಮಪತ್ರ ವಾಪಸ್ ಪಡೆದರು. ನಮ್ಮ ಮನವಿಗೆ ಸ್ಪಂದಿಸಿದ ಯಡಿಯೂರಪ್ಪನವರಿಗೆ ಧನ್ಯವಾದಗಳು. ನಾನು ಇದೊಂದೆ ವಿಚಾರಕ್ಕೆ ಸಿಎಂ ಮನೆಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಕೆಲ ನಾಯಕರು ಅಲ್ಲೇ ಇದ್ದರು. ಈ ವಿಚಾರ ಹೊರತು ಪಡಿಸಿ ಬೇರೆನೂ ರಾಜಕೀಯ ಮಾತಾಡಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಬಿಎಸ್‍ವೈ ತಂಗಿ ಮಗ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ಮೈಮುಲ್)ದ ಅಧ್ಯಕ್ಷರಾಗಿ ಜಿಟಿಡಿ ಆಪ್ತ ಸಿದ್ದೇಗೌಡ ಆಯ್ಕೆಯಾದ ಸಿದ್ದೇಗೌಡರಿಗೆ ಜಿ.ಟಿ.ದೇವೇಗೌಡ ಅವರು ಅಭಿನಂದನೆ ಸಲ್ಲಿಸಿದರು.

    ಇದೇ ವೇಳೆ ಫೋನ್ ಕದ್ದಾಲಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ರಾಜ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದಿಲ್ಲವೋ ಅಂತವರು ಮಾತ್ರ ಫೋನ್ ಕದ್ದಾಲಿಕೆ ಮಾಡುತ್ತಾರೆ. ನನಗೆ ಯಾರು ಏನು ಮಾಡುತ್ತಾರೆ ಎನ್ನುವುದು ಬೇಕಾಗಿಲ್ಲ. ಅಲ್ಲದೆ ಅವರು ಏನು ಅಂತಾರೆ, ಇವರೇನು ಅಂತಾನೆ ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ಪೋನ್ ಕದ್ದಾಲಿಗೆ ಯಾಕೆ ಮಾಡ್ತಿದ್ದಾರೆ ಅಂತ ನನಗೆ ಅರ್ಥವಾಗುತ್ತಿಲ್ಲ. ಎಲ್ಲವನ್ನು ನೇರವಾಗಿ ಮಾತನಾಡುವವನು ನಾನು. ಹೀಗಾಗಿ ಇದಕ್ಕೆ ಹೆದರುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಫೋನ್ ಕದ್ದಾಲಿಕೆ ಕುರಿತು ಸೂಕ್ತ ತನಿಖೆಯಾಗಲಿ, ಹಿಂದೆಯೂ ಈ ಕುರಿತು ತನಿಖೆ ಆಗಿದೆ. ಈಗಲೂ ಸೂಕ್ತ ತನಿಖೆ ಆಗಲಿ. ವಿಶ್ವನಾಥ್ ಆರೋಪ ಹಾಗೂ ಕುಮಾರಸ್ವಾಮಿಯವರು ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

    ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ್ದ ಜಿಟಿಡಿ, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಕಳೆದ ತಿಂಗಳ 9 ರಂದು ನಿಗದಿಯಾಗಿತ್ತು. ಆದರೆ ಚುನಾವಣೆಯಲ್ಲಿ ಗೊಂದಲ ಉಂಟಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಆಗಮಿಸಿದ್ದೆ. ಡೈರಿ ಚುನಾವಣೆ ನಡೆಯದ ಕಾರಣ ಹುದ್ದೆ ಖಾಲಿ ಇದ್ದು, ಪರಿಣಾಮ ರೈತರಿಗೆ ಬಿಡುಗಡೆಯಾಗಬೇಕಾದ ಹಣ ಲಭಿಸುತ್ತಿಲ್ಲ ಎಂದು ಹೇಳಿದ್ದರು.

    ರೈತರ ಸಮಸ್ಯೆಯಿಂದ ನಾನೇ ಬಂದು ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿದ್ದೇನೆ. ಸಿಎಂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಬಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಹಿಂದೆಯೇ ಹಲವು ಬಾರಿ ಸ್ಪಷ್ಟ ಪಡಿಸಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದರು. ಬಳಿಕ ಮಾತನಾಡಿದ್ದ ಬಿಎಸ್‍ವೈ, ಈ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವರು ಬಂದಿದ್ದರು ಅಷ್ಟೇ ಎಂದು ಸ್ಪಷ್ಟಪಡಿಸಿದ್ದರು.