Tag: muttappa rai

  • ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ

    ಡಾನ್ ಆಗಿದ್ದು ಹೇಗೆ?- ಕಥೆ ಬಿಚ್ಚಿಟ್ಟಿದ್ದ ಮುತ್ತಪ್ಪ ರೈ

    – ನನ್ನ ಪಬ್ಲಿಸಿಟಿಗೆ ನನ್ನ ಸಿಂಪ್ಲಿಸಿಟಿಯೇ ಕಾರಣ
    – ಕೊಟ್ಟ ಮಾತು ತಪ್ಪಿದವನಲ್ಲ
    – ಜನರಿಗೆ ಸಹಾಯ ಮಾಡುವವ, ನ್ಯಾಯ ಕೊಡಿಸೋನೆ ಡಾನ್

    ಬೆಂಗಳೂರು: ಭೂಗತ ಜಗತ್ತಿನ ಮಾಜಿ ಡಾನ್, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ (68) ವಿಧಿವಶರಾಗಿದ್ದಾರೆ. ಹಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ರೈ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ ಜಾವ 2.10ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

    ಮುತ್ತಪ್ಪ ರೈ ಈ ಹಿಂದೆ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ತಾವು ಡಾನ್ ಆಗಿದ್ದ ಸ್ಟೋರಿಯನ್ನು ಬಿಚ್ಚಿಟ್ಟಿದ್ದರು. ಪುತ್ತೂರಿನಿಂದ ಬಂದು ಸಾಮಾನ್ಯ ಮುತ್ತಪ್ಪ ರೈ ಆಗಿದ್ದರು. ಇದುವರೆಗೂ ಮುತ್ತಪ್ಪ ರೈ ಮನೆಯಿಂದ ಯಾರಿಗೂ ಅನ್ಯಾಯ ಆಗಿಲ್ಲ. ನಮ್ಮ ಮನೆಯವರು ಅನೇಕರಿಗೆ ನ್ಯಾಯ ಕೊಡಿಸಿದ್ದಾರೆ. ನಾನು ವಿಜಯ ಬ್ಯಾಂಕಿಗೆ ಸೇರಿದ್ದೇ ಒಂದು ವಿಶೇಷ. ಬ್ಯಾಂಕಿನ ವಿರುದ್ಧವಾಗಿ ಧ್ವನಿ ಎತ್ತಿದ್ದವರನ್ನು ಅಡಗಿಸಲು ಬ್ಯಾಂಕ್ ಪರವಾಗಿ ನಾನು ಕೆಲಸಕ್ಕೆ ಹೋಗಿದ್ದೆ ಎಂದು ತಿಳಿಸಿದ್ದರು.

    ಬ್ಯಾಂಕಿನಲ್ಲಿ 6-7 ವರ್ಷ ಕೆಲಸ ಮಾಡಿ ರಾಜೀನಾಮೆ ಕೊಟ್ಟು ಹೊರಬಂದೆ ಎಂದು ಹೇಳಿದ್ದರು. ನನಗೆ ಡಾನ್ ಆಗಬೇಕೆಂಬ ಆಸೆಯೂ ಇರಲಿಲ್ಲ. ಡಾನ್ ಪದದ ಅರ್ಥವೂ ಗೊತ್ತಿರಲಿಲ್ಲ. ಜನರು ಪ್ರೀತಿಯಿಂದ ನನ್ನನ್ನು ಡಾನ್ ಆಗಿ ಮಾಡಿದರು. ಹೀಗಾಗಿ ನಾನು ಪ್ರೀತಿಯಿಂದ ಡಾನ್ ಆದೆ ಹೊರತು ಯಾವುದೇ ರೂಲ್, ಆರ್ಡರ್ ಮಾಡಿ ಡಾನ್ ಆಗಿಲ್ಲ. ಇವತ್ತು ನನ್ನ ಪಬ್ಲಿಸಿಟಿಗೆ ನನ್ನ ಸಿಂಪ್ಲಿಸಿಟಿಯೇ ಕಾರಣ ಎಂದಿದ್ದರು.

    ಬ್ಯಾಂಕಿನಲ್ಲಿದ್ದಾಗ ಬ್ರಿಗೇಡ್ ರೋಡಿನಲ್ಲಿ ಹೋಟೆಲ್ ನಡೆಸಲು ಅವಕಾಶ ಸಿಕ್ಕಿತ್ತು. ನಾನು ಅಷ್ಟು ಹಣ ನನ್ನ ಬಳಿ ಇಲ್ಲ ಎಂದು ಕ್ಯಾನ್ಸಲ್ ಮಾಡಿದೆ. ಆದರೆ ಬಾಡಿಗೆ ಏನು ಬೇಡ ಒಂದು ವರ್ಷ ಹೋಟೆಲ್ ನಡೆಸಿ ಸಾಕು ಎಂದು ಕೊಟ್ಟರು. ಯಾಕೆಂದರೆ ಅಲ್ಲಿ ತುಂಬಾ ರೋಡಿಗಳಿದ್ದರು. ಕೊನೆಗೆ ನಾನು ಚಾಲೆಂಜ್ ರೀತಿ ಹೋಟೆಲ್ ನಡೆಸಲು ಶುರು ಮಾಡಿದೆ. ಆಗ ಬಂದ ರೌಡಿಗಳನ್ನು ಹೊಡೆದು ಓಡಿಸಿದೆ. ಈ ವೇಳೆ ನನಗೆ ಹೋಟೆಲ್ ನಡೆಸಲು ಕೊಟ್ಟವರೆ ಒಂದು ವರ್ಷ ಆದ ಮೇಲೆ ಬಿಟ್ಟುಕೊಡುತ್ತಾನೆ ಎಂದು ಅನುಮಾನಪಟ್ಟರು. ಒಂದು ವರ್ಷದ ಬಳಿಕ ಹೋಟೆಲ್ ಬಿಟ್ಟುಕೊಡಲು ಕೇಳಿದರು. ಆಗ ತಕ್ಷಣ ಹೋಟೆಲ್ ಕೀ ಕೊಟ್ಟೆ. ನನ್ನ ಜೀವನದಲ್ಲಿ ಯಾವತ್ತೂ ಕೊಟ್ಟ ಮಾತು ತಪ್ಪಿದವನಲ್ಲ ಎಂದು ಧೈರ್ಯದ ಬಗ್ಗೆ ಮಾತನಾಡಿದ್ದರು.

    ಆಗ ನನ್ನ ಧೈರ್ಯವನ್ನು ನೋಡಿ ಸರ್ಕಾರಕ್ಕೆ ಸಮಸ್ಯೆಯಾಗಿತ್ತು. ಬೆಂಗಳೂರಿನಲ್ಲಿ ಕೇರಳದ ರಶೀದ್ ಅವರು ಲಾಕ್ ಅಪ್‍ನಲ್ಲಿ ಮೃತಪಟ್ಟಿದ್ದರು. ಇದು ದೊಡ್ಡ ಸುದ್ದಿಯಾಗಿ ಹೋಮ್ ಮಿನಿಸ್ಟರ್‍ಗೆ ವಾರೆಂಟ್ ಜಾರಿಯಾಗುವ ಪರಿಸ್ಥಿತಿ ಬಂದಿತ್ತು. ಆಗ ಪೊಲೀಸರು ಬಂದು ಸಹಾಯ ಮಾಡಿ ಎಂದಿದ್ದರು. ನಾನು ಪೊಲೀಸರು ಹಿಂದೆ ಬೆಂಬಲವಾಗಿ ನಿಂತೆ. ಅಲ್ಲಿಂದ ನನಗೆ ಸಮಸ್ಯೆ ಶುರುವಾಯಿತು. ಪೊಲೀಸರಲ್ಲೇ ಮೂರು ಗುಂಪುಗಳಾಗಿತ್ತು. ಅದರಲ್ಲಿ ಒಂದು ಗುಂಪು ನನ್ನ ವಿರುದ್ಧವಾಗಿ ಅನೇಕ ಕೇಸ್‍ಗಳನ್ನು ಹಾಕಿ ಡಾನ್ ಆಗಿ ಮಾಡಿದರು. ಆದರೆ ಕೋರ್ಟಿನಲ್ಲಿ ಅದರಲ್ಲೂ ಪೊಲೀಸರು ಮುಂದೆಯೇ 5 ಗುಂಡು ನನಗೆ ಬಿದ್ದಿತ್ತು. ಆದರೂ ನಾನು ಮತ್ತೆ ಬದುಕಿದೆ ಎಂದು ಡಾನ್ ಆದ ಕಥೆ ಬಿಚ್ಚಿಟ್ಟಿದ್ದರು.

    ಜನರಿಗೆ ಸಹಾಯ ಮಾಡುವವನೇ ಡಾನ್, ಜನರಿಗೆ ನ್ಯಾಯ ಒದಗಿಸಿ ಕೊಡುತ್ತಾನೋ ಅವನೇ ಡಾನ್. ಸುಲಿಗೆ ಮಾಡುವುದು, ಬೆದರಿಸುವವನು ಡಾನ್ ಅಲ್ಲ. ನನ್ನ ನೋಡಿ ಭಯ ಪಡಿಸುವ ಜನರಿದ್ದರು. ಹೀಗಾಗಿ ಜನರು ಭಯಪಡುತ್ತಿದ್ದರು. ಆದರೆ ನಾನು ಜನರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತಿದ್ದೆ. ಕೆಲವು ಅಹಸಾಯಕರಿಗೆ ಸಹಾಯ ಮಾಡುವಾಗ ನನಗೆ ಖುಷಿಯಾಗಿತ್ತು. ಡಾನ್ ಆಗಿದ್ದರಿಂದ ನನಗೆ ಬೇಸರ ಇರಲಿಲ್ಲ. ನನ್ನ ವಿರೋಧಿಗಳು ಹೋರಾಡುವುದು ಎಂದರೆ ನನಗೆ ಇಷ್ಟ. ನಾನು ಜೀವನದಲ್ಲೀ ಯಾವತ್ತೂ ಸೋತಿಲ್ಲ. ಹೀಗಾಗಿ ನಾನು ಕ್ಯಾನ್ಸರಿನಿಂದ ಗೆಲ್ಲಬೇಕೆಂದು ಹೋರಾಡುತ್ತಿದ್ದೇನೆ ಎಂದು ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದರು.

  • ಮಾಜಿ ಡಾನ್ ಮುತ್ತಪ್ಪ ರೈ ಇನ್ನಿಲ್ಲ

    ಮಾಜಿ ಡಾನ್ ಮುತ್ತಪ್ಪ ರೈ ಇನ್ನಿಲ್ಲ

    ರಾಮನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ(68) ವಿಧಿವಶರಾಗಿದ್ದಾರೆ.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅನೇಕ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸುಮಾರು 2.10ಕ್ಕೆ ಮೃತಪಟ್ಟಿದ್ದಾರೆ. ಬೆಂಗಳೂರಿನ ಬಿಡದಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಆರೋಗ್ಯದ ಕುರಿತು ಸ್ಪಷ್ಟನೆ ನೀಡಿದ್ದರು. ನನ್ನ ಆರೋಗ್ಯದ ಕುರಿತು ಹರಿದಾಡುತ್ತಿರುವ ವಿಷಯಗಳು ಸತ್ಯ, ನನಗೆ ಕ್ಯಾನ್ಸರ್ ಇರುವುದು ನಿಜ. ಮಿರಾಕಲ್ ನಡೆಯುತ್ತಿರುವುದು ನಿಜವಾಗಿದ್ದು, ವಿಲ್ ಪವರ್ ನಿಂದ ಆರೋಗ್ಯವಾಗಿದ್ದೇನೆ. ಅಲ್ಲದೇ ಟಿಕೆಟ್ ಯಾವಾಗಲೋ ಕನ್ಫರ್ಮ್ ಆಗಿದ್ದು, ಓಕೆ ಆದ್ಮೇಲೆ ಫ್ಲೈಟ್ ಹತ್ತಬೇಕು ಅಷ್ಟೇ ಎಂದು ಭಾವನಾತ್ಮಕವಾಗಿ ಮಾತನಾಡಿದ್ದರು.

    ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಮುತ್ತಪ್ಪ ರೈ ಕೆಲವು ತಿಂಗಳಿನಿಂದ ಉತ್ತಮ ಆಡಳಿತ ನಡೆಸುತ್ತಿದ್ದರು. ಅದರಲ್ಲೂ ಗ್ರಾಮೀಣ ಭಾಗದ ಕ್ರೀಡಾಪಟುಗಳ ನೆರವಿಗೆ ನಿಲ್ಲುವುದರ ಮೂಲಕ ಉತ್ತಮ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು.

    ವೈದ್ಯರು ವಿಶ್ರಾಂತಿ ಸೂಚಿಸಿದ್ದರಿಂದ ತಮ್ಮ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ತೊರೆದಿದ್ದರು. ಕೆಎಸ್‍ಎಎ ಜೊತೆಗೆ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಶಸ್ತ್ರಾಸ್ತ್ರಗಳನ್ನಿಟ್ಟು ಆಯುಧ ಪೂಜೆ- 8 ಗಂಟೆ ಕಾಲ ಮುತ್ತಪ್ಪ ರೈಗೆ ಸಿಸಿಬಿ ಡ್ರಿಲ್..!

    ಶಸ್ತ್ರಾಸ್ತ್ರಗಳನ್ನಿಟ್ಟು ಆಯುಧ ಪೂಜೆ- 8 ಗಂಟೆ ಕಾಲ ಮುತ್ತಪ್ಪ ರೈಗೆ ಸಿಸಿಬಿ ಡ್ರಿಲ್..!

    – ಬಾಡಿಗಾರ್ಡ್ ಗಳ ಬಳಿಯಿದ್ದ ಗನ್‍ಗಳು ವಶಕ್ಕೆ

    ಬೆಂಗಳೂರು: ಆಯುಧಪೂಜೆ ವೇಳೆ ಶಸ್ತ್ರಾಸ್ತ್ರ ಇಟ್ಟು ಪೂಜೆ ಮಾಡಿದ್ದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರು ಶನಿವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾದ್ರು. ಸುಮಾರು 8 ಗಂಟೆಗಳ ಕಾಲ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಮುತ್ತಪ್ಪ ರೈ ವಿಚಾರಣೆ ನಡೀತು.

    ಮುತ್ತಪ್ಪ ರೈ ಹೊಂದಿದ್ದ ಶಸ್ತ್ರಾಸ್ತ್ರಗಳಿಗೆ ಸೂಕ್ತ ದಾಖಲೆಗಳು ಮತ್ತು ಲೈಸನ್ಸ್ ಅವಧಿ ಇದ್ದರಿಂದ ವಿಚಾರಣೆ ಬಳಿಕ ಅವರನ್ನ ಬಿಟ್ಟು ಕಳುಹಿಸಲಾಯ್ತು. ಆದ್ರೆ ಮುತ್ತಪ್ಪ ರೈಗೆ ಬೆಂಗಾವಲಿಗಿದ್ದ ಗನ್‍ಮನ್‍ಗಳ ಶಸ್ತ್ರಾಸ್ತ್ರಗಳ ಲೈಸನ್ಸ್ ಅವಧಿ ಮುಗಿದಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಸಿಸಿಬಿ ಪೊಲೀಸರು ನೀಡಿದ ದೂರಿನ ಮೇರೆಗೆ ಕಾಟನ್‍ಪೇಟೆ ಪೊಲೀಸರು ಗನ್‍ಮನ್‍ಗಳನ್ನು ಒದಗಿಸಿದ್ದ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಎನ್‍ಸಿಆರ್ ದಾಖಲಿಸಿದ್ದಾರೆ. ಅಲ್ಲದೆ ಮುತ್ತಪ್ಪ ರೈ ಅವರ ಐವರು ಗನ್‍ಮನ್‍ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಜೊತೆಗೆ ಏಜೆನ್ಸಿ ಲೈಸೆನ್ಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಎನ್‍ಸಿಆರ್ ದಾಖಲಿಸಿ ಏಳು ಮಂದಿಗೆ ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ 7 ಗನ್‍ಗಳನ್ನು ವಶಕ್ಕೆ ಪಡೆದು ಸೂಕ್ತ ದಾಖಲೆ ನೀಡಿ ಗನ್ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗನ್‍ಗಳನ್ನಿಟ್ಟು ಮುತ್ತಪ್ಪ ರೈಯಿಂದ ಆಯುಧ ಪೂಜೆ!

    ಗನ್‍ಗಳನ್ನಿಟ್ಟು ಮುತ್ತಪ್ಪ ರೈಯಿಂದ ಆಯುಧ ಪೂಜೆ!

    ಬೆಂಗಳೂರು: ನವರಾತ್ರಿ ಕೊನೆಯ ದಿನವಾದ ಇಂದು ದೇಶದೆಲ್ಲೆಡೆ ಆಯುಧಪೂಜೆಯ ಸಂಭ್ರಮ ಮನೆ ಮಾಡಿದ್ದು, ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಆಯುಧ ಪೂಜೆ ನಡೆಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ತಮ್ಮಲ್ಲಿದ್ದ ಕೋವಿ, ಮೆಷನ್ ಗನ್ ಗಳನ್ನು ಇಟ್ಟು ಮುತ್ತಪ್ಪ ರೈ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುವ ವೇಳೆ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರು ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆ ಕೇಳುತ್ತಿದ್ದಾರೆ.

    ಇಷ್ಟೊಂದು ಆಯುಧಗಳಿಗೆ ಸರ್ಕಾರದಿಂದ ಅನುಮತಿ ಇದೆಯೇ? ಪೊಲೀಸರ ಬಳಿ ಇವುಗಳಿಗೆ ದಾಖಲೆಗಳು ಇದ್ಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಅಲೋಕ್ ಕುಮಾರ್ ಅವರಿಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಈ ಪ್ರಶ್ನೆಗೆ ಕೆಲವರು ಮುತ್ತಪ್ಪ ರೈ ಗನ್ ಮ್ಯಾನ್‍ಗಳ ಆಯುಧವನ್ನು ಇಟ್ಟು ಪೂಜೆ ಮಾಡಿರಬಹುದು ಎಂದು ಉತ್ತರಿಸುತ್ತಿದ್ದಾರೆ. ಒಟ್ಟಿನಲ್ಲಿ ಮೂರು ಫೋಟೋಗಳು ಈಗ ಫುಲ್ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಡದಿಯ ನಲ್ಲಿಗುಡ್ಡೆ ಕೆರೆಗೆ ಬಾಗಿನ ಅರ್ಪಿಸಿದ ಮುತ್ತಪ್ಪ ರೈ ದಂಪತಿ

    ಬಿಡದಿಯ ನಲ್ಲಿಗುಡ್ಡೆ ಕೆರೆಗೆ ಬಾಗಿನ ಅರ್ಪಿಸಿದ ಮುತ್ತಪ್ಪ ರೈ ದಂಪತಿ

    ರಾಮನಗರ: ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಇದೀಗ ಮಳೆಯಿಂದ ಕೋಡಿ ಬಿದ್ದ ಕೆರೆಗಳಿಗೆ ಬಾಗಿನ ಅರ್ಪಿಸೋಕೆ ಜನ ಮುಗಿ ಬಿದ್ದಿದ್ದಾರೆ. ಕೋಡಿ ಬಿದ್ದ ನೆಲ್ಲಿಗುಡ್ಡೆ ಕೆರೆಗೆ ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ತಮ್ಮ ಪತ್ನಿ ಅನುರಾಧರೊಂದಿಗೆ ಬಾಗಿನ ಅರ್ಪಿಸಿದ್ದಾರೆ.

    ಕಳೆದ 14 ವರ್ಷಗಳಿಂದ ತುಂಬದಿದ್ದ ನಲ್ಲಿಗುಡ್ಡ ಕೆರೆ ಈ ಬಾರಿ ರೇಷ್ಮೆನಗರಿ ರಾಮನಗರ ಜಿಲ್ಲೆಯ ಬರಗಾಲವನ್ನ ಬಡಿದೋಡಿಸುವ ನಿಟ್ಟಿನಲ್ಲಿ ಸುರಿಯುತ್ತಿರುವ ಮಳೆಯಿಂದ ಕೆರೆ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಬಿಡದಿ ಸುತ್ತಮುತ್ತ ಅಂತರ್ಜಲ ಕೂಡಾ ವೃದ್ಧಿಯಾಗಿದೆ. ಇದ್ರಿಂದ ಸಂತೋಷಗೊಂಡಿರುವ ಬಿಡದಿ ಭಾಗದ ಜನರು ನೆಲ್ಲಿಗುಡ್ಡೆ ಕೆರೆಗೆ ಬಾಗಿನ ಅರ್ಪಿಸುತ್ತಿದ್ದಾರೆ. ಹಾಗೆಯೇ ಶುಕ್ರವಾರ ಮುತ್ತಪ್ಪ ರೈ ಕೂಡ ತಮ್ಮ ಪತ್ನಿ ಅನುರಾಧ ಜೊತೆಗೂಡಿ ಕೆರೆಯ ಬಳಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕೆರೆಗೆ ಬಾಗಿನ ಅರ್ಪಿಸಿದ್ರು.

    ಬಳಿಕ ಈ ಬಾರಿಯಂತೆ ಪ್ರತಿವರ್ಷವೂ ಮಳೆ ಬರಲಿ. ನಾಡಿನಾದ್ಯಂತ ಸಮೃದ್ದಿ ನೆಲಸಲಿ ಎಂದು ಬಾಗಿನ ಅರ್ಪಿಸಿ ಮುತ್ತಪ್ಪ ರೈ ದಂಪತಿಗಳು ಪ್ರಾರ್ಥನೆ ಸಲ್ಲಿಸಿದ್ರು.