Tag: Muskan Rastogi

  • ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಂದು ಡ್ರಮ್‌ಗೆ ತುಂಬಿದ್ದ ಮುಸ್ಕಾನ್‌ ಈಗ ಗರ್ಭಿಣಿ – ಜೈಲಿನಲ್ಲಿ ವಿಶೇಷ ಸೌಲಭ್ಯ

    ಪ್ರಿಯಕರನೊಂದಿಗೆ ಸೇರಿ ಗಂಡನನ್ನ ಕೊಂದು ಡ್ರಮ್‌ಗೆ ತುಂಬಿದ್ದ ಮುಸ್ಕಾನ್‌ ಈಗ ಗರ್ಭಿಣಿ – ಜೈಲಿನಲ್ಲಿ ವಿಶೇಷ ಸೌಲಭ್ಯ

    ಲಕ್ನೋ: ಮೀರತ್‌ ನಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕಿದೆ. ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಪೀಸ್‌ ಪೀಸ್‌ ಮಾಡಿ ಡ್ರಮ್‌ಗೆ ತುಂಬಿದ್ದ ಮುಸ್ಕಾನ್‌ ರಸ್ತೋಗಿ (Muskan Rastogi) ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ ವರದಿಯಾಗಿದೆ.

    ಹೌದು. ಕಳೆದ ಕೆಲ ದಿನಗಳಿಂದ ಜೈಲಿನಲ್ಲಿದ್ದ ಆರೋಪಿ ಮುಸ್ಕಾನ್‌ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ಜೈಲಾಧಿಕಾರಿಗಳು ಮಹಿಳಾ ವೈದ್ಯರನ್ನ ಕರೆಸಿ, ತಪಾಸಣೆ ಮಾಡಿದ್ರು. ಆಗ‌ ಮುಸ್ಕಾನ್‌ ಗರ್ಭಿಣಿ (Pregnant) ಎಂದು ವೈದ್ಯರು ತಿಳಿಸಿದ್ದರು. ಅದರಂತೆ ಇಂದು (ಏ.11) ಸಹ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಟ್ರಾಸೌಂಡ್‌ (Ultrasound Test) ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ಮುಸ್ಕಾನ್‌ ಗರ್ಭ ಧರಿಸಿರುವುದು ಅಲ್ಟ್ರಾಸೌಂಡ್‌ ಟೆಸ್ಟ್‌ನಲ್ಲಿ ದೃಢಪಟ್ಟಿದೆ. ಸದ್ಯ ವೈದ್ಯರು ಹೆರಿಗೆಗೆ 4 ರಿಂದ 6 ವಾರಗಳ ಸಮಯ ನೀಡಿದ್ದಾರೆ. ಈ ಹಿನ್ನೆಲೆ ಜೈಲಿನಲ್ಲಿ ಗರ್ಭಿಣಿಯರಿಗೆ ನೀಡುವ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.

    UP Murder

    ಸೌರಬ್‌ ಕುಟುಂಬಸ್ಥರಿಂದ ಆಕ್ಷೇಪ
    ಇನ್ನೂ ಮುಸ್ಕಾನ್‌ ಗರ್ಭಿಯಾದ ವಿಷಯ ತಿಳಿದು ಪತ್ನಿಯಿಂದ ಕೊಲೆಯಾದ ಸೌರಭ್‌ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸೌರಭ್‌ನದ್ದಲ್ಲ, ಒಂದು ವೇಳೆ ಸೌರಭ್‌ನದ್ದೇ ಆಗಿದ್ದರೆ, ನಾವೇ ದತ್ತು ಪಡೆದು ಸಾಕುತ್ತೇವೆ. ಆದ್ರೆ ಆ ಮಗು ಸೌರಭ್‌ನದ್ದಾ ಅಥವಾ ಅವಳ ಪ್ರಿಯಕರ ಸಾಹಿಲ್‌ನದ್ದಾ ಎಂಬುದು ದೃಢವಾಗಬೇಕು. ಅದಕ್ಕಾಗಿ ಡಿಎನ್‌ಎ ಪರೀಕ್ಷೆ ನಡೆಬೇಕು ಎಂದು ಜೈಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪತಿಯನ್ನು ಪೀಸ್‌ ಪೀಸ್‌ ಮಾಡಿ ಕೊಂದ ಹಂತಕಿ – ಜೈಲಲ್ಲಿ ಪ್ರಿಯಕರನ ಜೊತೆ ಇರಲು ಬಿಡಿ ಎಂದ ಮುಸ್ಕಾನ್!

    Meerut Murder

    ಕೊಲೆಗೆ ಕಾರಣ ಏನು?
    ಮುಸ್ಕಾನ್‌, ಪ್ರಿಯಕರ ಸಾಹಿಲ್‌ ಒಂದೇ ಶಾಲೆಯಲ್ಲಿ ಓದಿದ್ದರು. ತಮ್ಮ ಶಾಲೆಯ ವಾಟ್ಸಪ್‌ ಗ್ರೂಪ್‌ನಲ್ಲಿದ್ದ ಇವರು 2019ರಿಂದಲೂ ಪ್ರೀತಿಸಲು ಶುರು ಮಾಡಿದ್ದರು. ಕೆಲ ದಿನಗಳ ಹಿಂದೆ ಮೀರತ್‌ನ ಮಾಲ್‌ನಲ್ಲಿ ನಡೆದ ಪಾರ್ಟಿ ವೇಳೆ ಭೇಟಿಯಾಗಿದ್ದರು. ಬಳಿಕ ಇಬ್ಬರ ಪ್ರೇಮ ಮತ್ತಷ್ಟು ಗಟ್ಟಿಯಾಗಿತ್ತು. ಈ ಸಂಬಂಧಕ್ಕೆ ಸೌರಭ್‌ ಅಡ್ಡಿಯಾಗುತ್ತಾನೆಂದು ಮುಗಿಸುವ ಪ್ಲ್ಯಾನ್‌ ಮಾಡಿದರು. ಇದನ್ನೂ ಓದಿ: ಗಂಡನ ತಲೆ ಕಡಿದ ಶವವನ್ನು ಬೆಡ್ ಬಾಕ್ಸ್‌ನಲ್ಲಿಟ್ಟು ನಿದ್ದೆ ಮಾಡಿದ್ದಳು ಪತ್ನಿ – ಮೀರತ್ ಕೊಲೆ ಪ್ರಕರಣದ ರಹಸ್ಯ ಬಯಲು

    ಕೊಲೆ ಮಾಡಿದ್ದು ಹೇಗೆ?
    ಸೌರಭ್‌ ತನ್ನ ತಾಯಿ ಮನೆಗೆ ಹೋಗಿದ್ದ. ಬರುವಾಗ ಒಂದಷ್ಟು ಖಾದ್ಯಗಳನ್ನೂ ತಂದಿದ್ದ. ಆದ್ರೆ ಮುಸ್ಕಾನ್‌ ಮತ್ತೆ ಆಹಾರವನ್ನು ಬಿಸಿ ಮಾಡುವಾಗ ಅದರಲ್ಲಿ ಮತ್ತು ಬರುವ ಔಷಧಿ ಬೆರಸಿದ್ದಳು. ಆ ಆಹಾರ ತಿನ್ನುತ್ತಿದ್ದಂತೆ ಸೌರಭ್‌ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಬಳಿಕ ತನ್ನ ಪ್ರಿಯಕರ ಸಾಹಿಲ್‌ನನ್ನು ಕರೆದು ಇಬ್ಬರೂ ಸೇರಿ ಕೊಲೆ ಮಾಡಿ ಮುಗಿಸಿದ್ರು. ಚಾಕುವಿನಿಂದ ಅನೇಕ ಬಾರಿ ಚ್ಚುಚ್ಚಿ, ಇರಿದು ಕೊಲೆ ಮಾಡಿದ್ದರು. ಇದನ್ನೂ ಓದಿ: ಹೆಂಡತಿಯನ್ನು ಕೊಂದು ಚರಂಡಿಗೆಸೆದ ದೆಹಲಿ ಉದ್ಯಮಿ – ಪತ್ನಿಯ ಮೂಗುತಿಯಿಂದ ಗುರುತು ಪತ್ತೆ

  • ಕೊಲೆಯಾದ ಸೌರಭ್‌ ಹಣದಲ್ಲಿ ಜೂಟಾಟ, ಗೆದ್ದ ಹಣದಲ್ಲಿ ಅವನ ಪತ್ನಿ ಜೊತೆ ಸುತ್ತಾಟ – ಬಗೆದಷ್ಟೂ ರಹಸ್ಯ ಬಯಲು!

    ಕೊಲೆಯಾದ ಸೌರಭ್‌ ಹಣದಲ್ಲಿ ಜೂಟಾಟ, ಗೆದ್ದ ಹಣದಲ್ಲಿ ಅವನ ಪತ್ನಿ ಜೊತೆ ಸುತ್ತಾಟ – ಬಗೆದಷ್ಟೂ ರಹಸ್ಯ ಬಯಲು!

    – ಮನೆ ಖರ್ಚಿಗೆ ತಿಂಗಳಿಗೆ 1 ಲಕ್ಷ ರೂ. ಪಡೆಯುತ್ತಿದ್ದ ಮುಸ್ಕಾನ್‌

    ಲಕ್ನೋ: ಪತಿಯನ್ನು ಕೊಂದು ಜೈಲುಪಾಲಾಗಿರುವ ಮುಸ್ಕಾನ್ ರಸ್ತೋಗಿ (Muskan Rastogi) ಮತ್ತು ಪ್ರಿಯಕರ ಸಾಹಿಲ್‌ ಶುಕ್ರಾ ಕುರಿತು ಒಂದಿಲ್ಲೊಂದು ರಹಸ್ಯಗಳು ಬೆಳಕಿಗೆ ಬರುತ್ತಲೇ ಇವೆ.

    ಸದ್ಯ ಜೈಲು (Jail) ಪಾಲಾಗಿರುವ ಆರೋಪಿ ಸಾಹಿಲ್‌, ಕೊಲೆಯಾದ ಮುಸ್ಕಾನ್‌ ಪತಿ ಸೌರಭ್‌ ಹಣದಲ್ಲಿ ಬೆಟ್ಟಿಂಗ್‌, ಜೂಜು ಆಡ್ತಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮುಸ್ಲಿಮರ ತುಷ್ಟಿಕರಣಕ್ಕೆ ಕಾಂಗ್ರೆಸ್‌ನಿಂದ ಸಂವಿಧಾನ ಬದಲಾವಣೆ – ಇದು ನಮ್ಮ ದೇಶದ ದುರಂತ: ಸಿಟಿ ರವಿ

    ಕೊಲೆಯಾದ ಸೌರಭ್‌ ಹಣವನ್ನು ಬಳಸಿಕೊಂಡು ಸಾಹಿಲ್‌ ಕ್ರಿಕೆಟ್‌ ಬೆಟ್ಟಿಂಗ್‌ ಆಡ್ತಿದ್ದ. ಬುಕ್ಕಿಗಳನ್ನ ಬಳಸಿಕೊಂಡು ಬೆಟ್ಟಿಂಗ್‌ ಆಡುತ್ತಿದ್ದ. ಗೆದ್ದ ಹಣದಲ್ಲಿ ಪ್ರೇಯಸಿ ಮುಸ್ಕಾನ್‌ಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದ. ರಿಷಿಕೇಶ್‌, ಡೆಹ್ರಾಡೂನ್‌ ಮೊದಲಾದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಿದ್ದ. ಆದ್ರೆ ನೆರೆಹೊರೆಯವರ ಬಳಿ ಇದ್ಯಾವುದೂ ಗೊತ್ತೇ ಇಲ್ಲ ಅನ್ನೋ ತರ ಇದ್ದ. ತನಗೆ ಉದ್ಯೋಗ ಇಲ್ಲ, ನಿರ್ದಿಷ್ಟ ಆದಾಯ ಮೂಲವೂ ಇಲ್ಲ ಎಂದು ಹೇಳಿಕೊಂಡಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.  ಇದನ್ನೂ ಓದಿ: Bengaluru | ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್ – ಹೆಣ್ಣು ಕೊಟ್ಟ ಅತ್ತೆಯಿಂದಲೇ ಅಳಿಯನ ಕೊಲೆ

    ತಿಂಗಳ ಖರ್ಚಿಗೆ 1 ಲಕ್ಷ ಕೊಡ್ತಿದ್ದ ಸೌರಭ್‌:
    ಪೊಲೀಸರ ಪ್ರಕಾರ, ಕೊಲೆಯಾದ ಸೌರಭ್‌ ತನ್ನ ಮತ್ತು ಮಗಳ ಖರ್ಚು ನೋಡಿಕೊಳ್ಳಲು ಪ್ರತಿ ತಿಂಗಳು ಮುಸ್ಲಾನ್‌ಗೆ 1 ಲಕ್ಷ ರೂ. ಕಳುಹಿಸುತ್ತಿದ್ದ. ಆದ್ರೆ ಮುಸ್ಕಾನ್‌ ಈ ವಿಷಯವನ್ನು ಸಾಹಿಲ್‌ಗೆ ತಿಳಿಸಿದ್ದಳು. ಮನೆ ಖರ್ಚು ಕಳೆದು ಉಳಿದ ಹಣವನ್ನ ಬೆಟ್ಟಿಂಗ್‌ ಆಡಲು ಕೊಡುತ್ತಿದ್ದಳು. ಸದ್ಯ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಗೆಲ್ಲುವ ಫೇವರೆಟ್‌ ತಂಡಗಳ ಮೇಲೆ ಒಂದಿಷ್ಟು ಬೆಟ್ಟಿಂಗ್‌ ಮಾಡಲು ಹಣ ರೆಡಿ ಮಾಡಿಕೊಳ್ಳುತ್ತಿದ್ದ. ಅಷ್ಟರಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.  ಇದನ್ನೂ ಓದಿ: ದಕ್ಷಿಣದಲ್ಲಿ ಅಧೀರನಿಗೆ ಭಾರೀ ಬೇಡಿಕೆ- ಪ್ರಭಾಸ್ ಸಿನಿಮಾದಲ್ಲಿ ಸಂಜಯ್ ದತ್