Tag: Museum

  • ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜ ಪತ್ತೆ – ರಾಜ್ಯದಲ್ಲಿ ಮೊದಲ ಮ್ಯೂಸಿಯಂ ಮಾಡಲು ಚಿಂತನೆ

    ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜ ಪತ್ತೆ – ರಾಜ್ಯದಲ್ಲಿ ಮೊದಲ ಮ್ಯೂಸಿಯಂ ಮಾಡಲು ಚಿಂತನೆ

    ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಂತಿರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ಬಗೆಯ ಖನಿಜಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸಂರಕ್ಷಿಸಿ ಇಲ್ಲೊಂದು ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

    ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಪರಿಶೀಲನೆ ನಡೆಸುತ್ತಿದ್ದ ವೇಳೆ ಚಾಮರಾಜನಗರ ಸಮೀಪವೇ ಇರುವ ಮಲ್ಲಯ್ಯನಪುರ ಬಳಿ ಒಂದೇ ಪ್ರದೇಶದಲ್ಲಿ ಏಳು ರೀತಿಯ ಖನಿಜಗಳು ಪತ್ತೆಯಾಗಿರುವುದು ಕಂಡು ಬಂದಿದೆ. ಸರ್ಕಾರಕ್ಕೆ ಸೇರಿದ ಸರ್ವೆ ನಂಬರ್ 124 ರಲ್ಲಿ ಫೆಲ್‍ಸೈಟ್, ಗ್ರಾನೈಟ್ ಫ್ಯೂಷೈಟ್, ಕ್ವಾರ್ಟ್ ಜೈಟ್, ಡೋಲೆರೈಟ್ ಡೈಕ್, ಸ್ಮೋಕಿ ಕ್ವಾರ್ಟ್ಜ್, ಪೆಗ್ಮಟೈಟ್ ಮತ್ತು ಗ್ರಾನೈಟ್ ಗ್ನೈಸ್ ಎಂಬ ಖನಿಜಗಳು ಪತ್ತೆಯಾಗಿವೆ.

    ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಬಗೆಯ ಖನಿಜಗಳು ಕಂಡು ಬರುವುದು ತೀರಾ ಅಪರೂಪ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಲಕ್ಷ್ಮಮ್ಮ ಹೇಳಿದ್ದಾರೆ. ಹೀಗಾಗಿ ಒಂದೇ ಪ್ರದೇಶದಲ್ಲಿ ವಿವಿಧ ರೀತಿಯ ಖನಿಜಗಳು ಪತ್ತೆಯಾಗಿರುವ ಈ ಪ್ರದೇಶವನ್ನು ಸಂರಕ್ಷಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

    ಮೈಸೂರು ವಿಶ್ವವಿದ್ಯಾನಿಲಯದ ಸಹಕಾರದೊಂದಿಗೆ ಇಲ್ಲೊಂದು ಪ್ರಕೃತಿದತ್ತವಾದ ಜಿಯೋಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ ಸ್ವಾಭಾವಿಕ ಭೂಗರ್ಭ ಸಂಗ್ರಹಾಲಯ ಸ್ಥಾಪಿಸಿ, ಜಿಲ್ಲೆಯ ಇತರ ಕಡೆ ದೊರೆಯುವ ಶಿಲಾ ಮಾದರಿ ಹಾಗೂ ಖನಿಜಗಳ ಮಾದರಿಗಳನ್ನು ಇಲ್ಲಿ ಸಂಗ್ರಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಈ ಪ್ರಾಕೃತಿಕ ಭೂಗರ್ಭದಲ್ಲಿ ಸಂಗ್ರಹಾಲಯ ಸ್ಥಾಪಿಸುವುದರಿಂದ ಭೂಮಿಯ ಶಿಲಾಸ್ತರಗಳ ಉಗಮ ಹಾಗೂ ರಚನೆ ಬಗ್ಗೆ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ಸಂಗ್ರಹಾಲಯ ಸ್ಥಾಪನೆಗೆ ಬೇಕಾಗುವ ಅನುಧಾನವನ್ನು ಜಿಲ್ಲಾ ಖನಿಜ ನಿಧಿಯಿಂದ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಚಾಮರಾಜನಗರವನ್ನು ಪ್ರವಾಸಿ ತಾಣವನ್ನಾಗಿ ಸಹ ರೂಪಿಸಲು ನಿರ್ಧರಿಸಲಾಗಿದ್ದು, ಒಂದು ವಿಸ್ತೃತ ಯೋಜನೆ ತಯಾರಿಸಿ ಸಲ್ಲಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

  • ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

    ಯೋಧರ ನಾಡಿಗೆ ಬಂದ ಮಿಗ್-21 ಯುದ್ಧ ವಿಮಾನ

    ಮಡಿಕೇರಿ: ಆಧುನಿಕ ಯುಗದ ವೀರ ಸೇನಾನಿ ಜನರಲ್ ತಿಮ್ಮಯ್ಯ ಹುಟ್ಟಿ ಬೆಳೆದ ಸನ್ನಿಸೈಡ್ ನಿವಾಸ, ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಮತ್ತೊಂದು ಆಕರ್ಷಣೆಯಾಗಿ ಮಿಗ್-21 ವಿಮಾನ ಮ್ಯೂಸಿಯಂಗೆ ಬಂದಿದೆ.

    ಸದ್ಯ ಮಡಿಕೇರಿಗೆ ತರಲಾಗಿರುವ ಮಿಗ್-21 ಯುದ್ಧ ವಿಮಾನ 1971ನೇ ಯುದ್ಧದಲ್ಲಿ ದೊಡ್ಡಪಾತ್ರ ವಹಿಸಿದೆ. 15 ವರ್ಷಗಳ ಹಿಂದೆಯೇ ಈ ವಿಮಾನವನ್ನು ಸೇವೆಯಿಂದ ಹೊರಗಿಡಲಾಗಿತ್ತು. ಆಗಿನ ಸಮಯದಲ್ಲಿ ಈ ವಿಮಾನ 40-45 ಲಕ್ಷ ರೂ. ಬೆಲೆಯನ್ನು ಹೊಂದಿತ್ತು. ಮಡಿಕೇರಿ ನಗರದಲ್ಲಿ ತಿಮ್ಮಯ್ಯ ಮ್ಯೂಸಿಯಂನಲ್ಲಿ ಕೆಲಸಗಳು ನಡೆಯುತ್ತಿದ್ದು, ನಂದಾ ಕಾರ್ಯಪ್ಪ ಅವರು ವಿಮಾನಕ್ಕಾಗಿ ಹಲವು ಬಾರಿ ಸೇನೆಗೆ ಮನವಿ ಸಲ್ಲಿಸಿದ್ದರು.

    ಇವರ ಪ್ರಯತ್ನದ ಫಲವಾಗಿ ಕಳೆದ ಜನವರಿ 11 ರಂದು ಮಿಗ್-21 ವಿಮಾನ ತಿಮ್ಮಯ್ಯ ಮ್ಯೂಸಿಯಂ ಸೇರಿತ್ತು. ಆದರೆ ಅದರ ಜೋಡಣೆ ಮಾತ್ರ ಅಗಿರಲ್ಲಿಲ್ಲ. ಅಲಹಾಬಾದ್‍ನಿಂದ ಟ್ರಕ್‍ನಲ್ಲಿ ಬಂದಿರುವ ಮಿಗ್-21 ವಿಮಾನ ಬಿಡಿ ಬಿಡಿಯಾಗಿತ್ತು. ಏರ್ಫೋರ್ಸ್ ಗ್ರೌಂಡ್ ಇಂಜಿನಿಯರ್ ಗಳು ಮಿಗ್-21ನ್ನು ಜೋಡಿಸುವ ಕಾರ್ಯವನ್ನು ಮಾಡಿದ್ದಾರೆ.

    ಈ ವಿಮಾನ 1965 ಹಾಗೂ 1971 ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಆಕಾಶದಲ್ಲಿ ಮಿಂಚಿನ ವೇಗದಲ್ಲಿ ಹಾರುವ ಸಾಮರ್ಥ್ಯವಿರುವ ಜೆಟ್, ಶ್ರತುಗಳ ಹುಟ್ಟಡಗಿಸಿತ್ತು. ಕಾರ್ಗಿಲ್ ಕದನದಲ್ಲೂ ಮಿಗ್-21 ತನ್ನ ಸಾಮರ್ಥ್ಯ ತೋರುವ ಜತೆಗೆ ವಾಯು ಸೇನೆಯ ಶಕ್ತಿಯಾಗಿತ್ತು. ದಶಕದ ಹಿಂದೆ ಮಿಗ್-21 ಎಂಬ ಈ ಬಾಹುಬಲಿ ತನ್ನ ಹಾರಾಟವನ್ನು ನಿಲ್ಲಿಸಿತ್ತು. ಇದರ ಜೊತೆಗಿದ್ದ ಇತರೆ ವಿಮಾನಗಳು ಕಳೆದ ಡಿಸೆಂಬರ್ ನಲ್ಲಿ ಹಾರಾಟ ನಿಲ್ಲಿಸಿವೆ.

    ಕಳೆದ ವರ್ಷ ನಮ್ಮ ಹೆಮ್ಮೆಯ ಯೋಧ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಎಲ್ಲರಿಗೂ ಗೊತ್ತೇ ಇದೆ. ಅವರು ಕೂಡಾ ಮಿಗ್-21ನ ಅಪ್ಡೇಟೆಡ್ ಜೆಟ್ ಮಿಗ್-21 ಬೈಸನ್ ಅನ್ನು ಬಳಸಿದ್ದರು. ಈಗ ಮಡಿಕೇರಿಗೆ ಬಂದ ವಿಮಾನವನ್ನು ಜೋಡಣೆ ಮಾಡಿ ಕ್ರೇನ್ ನೆರವಿನಿಂದ ವೀಕ್ಷಣೆಗೆ ಅನುಕೂಲ ಆಗುವಂತೆ ನಿಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಯುದ್ಧ ವಿಮಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ.

  • 3,400 ವರ್ಷಗಳ ಹಳೆಯ ಶವ ಪೆಟ್ಟಿಗೆ ಧಾರವಾಡದಿಂದ ಬಳ್ಳಾರಿಗೆ ಶಿಫ್ಟ್

    3,400 ವರ್ಷಗಳ ಹಳೆಯ ಶವ ಪೆಟ್ಟಿಗೆ ಧಾರವಾಡದಿಂದ ಬಳ್ಳಾರಿಗೆ ಶಿಫ್ಟ್

    ಧಾರವಾಡ: ಕಳೆದ 3,400 ವರ್ಷದ ಹಳೆಯದಾದ ಮಗುವಿನ ಶವ ಪೆಟ್ಟಿಗೆಯೊಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಳ್ಳಾರಿ ಪ್ರಾಚ್ಯಶಾಸ್ತ್ರದ ಮ್ಯೂಸಿಯಂಗೆ ಹೋಗಿದೆ.

    ಇದು ನವಶಿಲಾಯುಗದ ಇತಿಹಾಸವನ್ನು ತೆರೆದಿಡುವ ನಿಟ್ಟಿನಲ್ಲಿ ಮಹತ್ವದ ಸಂಶೋಧನೆಯಾಗಿದೆ. ಸಾರ್ಕೋಫಾಗಸ್ ಎನ್ನಲಾಗುವ ಈ ಶವ ಪೆಟ್ಟಿಗೆ ಬಳ್ಳಾರಿಯಲ್ಲಿ ಕಳೆದ 20 ವರ್ಷಗಳ ಹಿಂದೆ ಬಳ್ಳಾರಿಯ ಕುಡತಿನ್ನಿ ಥರ್ಮಲ್ ಪ್ಲಾಂಟ್‍ನ ಕೆಲಸ ಮಾಡುತ್ತಿದ್ದಾಗ ಆ ಮಣ್ಣಿನಲ್ಲಿ ಸಾರ್ಕೋಫಾಗಸ್ ಸಿಕ್ಕಿತ್ತು. ಥರ್ಮಲ್ ಪ್ಲಾಂಟ್‍ನ ಕೆಲಸದ ವೇಳೆ ಚಿಕ್ಕ ಚಿಕ್ಕ ಮಣ್ಣಿನ ಗಡಿಗೆಗಳನ್ನು ಆಧರಿಸಿ ಉತ್ಖನನ ಮಾಡಿದಾಗ ಸಿಕ್ಕಿದ್ದ ಈ ಶವ ಪೆಟ್ಟಿಗೆಯಲ್ಲಿ 7 ವರ್ಷದ ಮಗುವಿನ ಅಸ್ಥಿಗಳಿದ್ದವು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ರವಿ ಕೋರಿಶಟ್ಟರ್ ಮಾಹಿತಿ ನೀಡಿದ್ದರು.

    ಇದು ಅತ್ಯಂತ ಹಳೆಯ ಕಾಲದ್ದಾಗಿದ್ದರಿಂದ ಶವ ಪೆಟ್ಟಿಗೆ ಒಡೆದು ಹೋಗಿತ್ತು. ಆದರೆ ಅದನ್ನ ಧಾರವಾಡಕ್ಕೆ ತಂದಿದ್ದ ಕೋರಿಶೆಟ್ಟರ್ ಅವರು ದುರಸ್ತಿ ಮಾಡಿ ಮರುಜೋಡಿಸಿ ಕರ್ನಾಟಕ ವಿಶ್ವವಿದ್ಯಾಲಯ ಪ್ರಾಚ್ಯಶಾಸ್ತ್ರ ವಿಭಾಗದಲ್ಲಿ ಇಟ್ಟಿದ್ದರು. ಆದರೆ ನಂತರ ಅದನ್ನ ಬಳ್ಳಾರಿಗೆ ಕಳಿಸಬೇಕಿದ್ದ ವಿಶ್ವವಿದ್ಯಾಲಯ ಕಳಿಸಿರಲೇ ಇಲ್ಲ. ಈ ಶವ ಪೆಟ್ಟಿಗೆ ಸಿಕ್ಕಿರುವ ಮಾಹಿತಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಗೊತ್ತಿದ್ದ ಕಾರಣ, ಅವರು ಧಾರವಾಡ ಜಿಲ್ಲಾಧಿಕಾರಿಗಳಿಗೆ ಈಗ ಪತ್ರ ಬರೆದು ಶವ ಪೆಟ್ಟಿಗೆಯನ್ನು ವಾಪಸ್ ತರಿಸಿಕೊಂಡಿದ್ದಾರೆ.

    ಈಗ ಬಳ್ಳಾರಿಯಲ್ಲಿ ಕಟ್ಟಲಾಗಿರುವ ಪ್ರಾಚ್ಯಶಾಸ್ತ್ರ ಮ್ಯೂಸಿಯಂ ಜನವರಿ 26 ರಂದು ಉದ್ಘಾಟನೆಗೊಳ್ಳಲಿದ್ದು, ಅಲ್ಲಿ ಇದನ್ನ ಇಡಲಾಗಿದೆ. ಸದ್ಯ ಕೋರಿಶೆಟ್ಟರ್ ಅವರು ಕಂಡು ಹಿಡಿದಿದ್ದ ಈ ಶವ ಪೆಟ್ಟಿಗೆ ಜನವರಿ 26 ರಿಂದ ಎಲ್ಲರಿಗೆ ನೋಡಲು ಸಿಗಲಿದೆ. ಅದರ ಜೊತೆಗೆ ಉಳಿದ ಹಳೆಯ ಕಾಲದ ಐತಿಹಾಸಿಕ ವಸ್ತುಗಳು ಕೂಡ ಅಲ್ಲಿ ನೋಡಲು ಸಿಗಲಿವೆ.

  • ಮೋದಿ ಮಂದಿರ ನಿರ್ಮಾಣಕ್ಕೆ ಮುಂದಾದ ಮುಸ್ಲಿಂ ದಂಪತಿ

    ಮೋದಿ ಮಂದಿರ ನಿರ್ಮಾಣಕ್ಕೆ ಮುಂದಾದ ಮುಸ್ಲಿಂ ದಂಪತಿ

    ಲಕ್ನೋ: ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮೋದಿ ಮಂದಿರ ಎಂಬ ಮ್ಯೂಸಿಯಂ ಕಟ್ಟಲು ಮುಜಪ್ಫರ್‍ನಗರದ ಮುಸ್ಲಿಂ ದಂಪತಿ ತೀರ್ಮಾನಿಸಿದ್ದಾರೆ.

    ಬಿಜೆಪಿಯ ಕಾರ್ಯಕರ್ತರಾದ ಸಮರ್ ಗಜ್ನಿ ಮತ್ತು ನಗರದ ಅಲ್ಪಸಂಖ್ಯಾತ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆಯಾದ ಸಮರ್ ಪತ್ನಿ ರೂಬಿ ಗಜ್ನಿ ಸೇರಿದಂತೆ ಹಲವು ಕಾರ್ಯಕರ್ತರು ಮೋದಿ ಮಂದಿರ ಕಟ್ಟಲು ಅನುಮತಿ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಸಮರ್ ಗಜ್ನಿ, ಪ್ರಧಾನಿ ಮೋದಿ ಅವರು ದೇಶದಲ್ಲಿ ಉತ್ತಮವಾದ ಆಡಳಿತ ನಡೆಸಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಕಂಟಕವಾದ ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ್ದಾರೆ. ಹೊರ ದೇಶಗಳಲ್ಲೂ ಮೋದಿ ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡುತ್ತಿದ್ದಾರೆ. ಅದ್ದರಿಂದ ನಾವು ನಮ್ಮ ಪ್ರದೇಶದಲ್ಲಿ ಮೋದಿ ಮಂದಿರ ಎಂಬ ಹೆಸರಿನ ಮ್ಯೂಸಿಯಂ ಅನ್ನು ಕಟ್ಟಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

    ಯುಎಇ ಸರ್ಕಾರ ತಮ್ಮ ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ‘ಆರ್ಡರ್ ಆಫ್ ಜಾಯದ್’ ಪ್ರಶಸ್ತಿ ನೀಡಿ ಗೌರವಿಸಿದ ಮೇಲೆ ನಮಗೂ ಈ ರೀತಿಯಲ್ಲಿ ಮೋದಿ ಅವರಿಗೇ ಏನಾದರೂ ಕಾಣಿಕೆ ನೀಡಬೇಕು ಎಂದು ನಾವು ತೀರ್ಮಾನ ಮಾಡಿದ್ದೆವು. ಈಗ ಅದರಂತೆ ನಮ್ಮ ಸ್ವಂತ ಜಾಗದಲ್ಲೇ ಮೋದಿ ಮಂದಿರ ಎಂಬ ಹೆಸರಿನಲ್ಲಿ ಒಂದು ಮ್ಯೂಸಿಯಂ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಈ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಸಮರ್ ಅವರ ಪತ್ನಿ ರೂಬಿ ಗಜ್ನಿ, ನಾವು ಮೋದಿ ಅವರ ಹೆಸರಿನಲ್ಲಿ ಮ್ಯೂಸಿಯಂ ಕಟ್ಟಲು ತೀರ್ಮಾನ ಮಾಡಿದ್ದೇವೆ. ಈ ಮ್ಯೂಸಿಯಂಗೆ ಮೋದಿ ಮಂದಿರ್ ಎಂಬ ಹೆಸರು ಇಡುತ್ತೇವೆ. ಈ ಮ್ಯೂಸಿಯಂನಲ್ಲಿ ಮೋದಿಗೆ ಸಂಬಂಧ ಪಟ್ಟ ಮಾಹಿತಿ ಎಲ್ಲವನ್ನು ಇಲ್ಲಿ ಪ್ರದರ್ಶನ ಮಾಡುತ್ತೇವೆ ಎಂದು ಹೇಳಿದ್ದಾರೆ.

  • ಮ್ಯೂಸಿಯಂ ಮೇಲ್ಛಾವಣಿಯಲ್ಲಿ ಜೋಡಿಯಿಂದ ಸೆಕ್ಸ್

    ಮ್ಯೂಸಿಯಂ ಮೇಲ್ಛಾವಣಿಯಲ್ಲಿ ಜೋಡಿಯಿಂದ ಸೆಕ್ಸ್

    ತೈವಾನ್: ಜೋಡಿಯೊಂದು ಅಸಭ್ಯವಾಗಿ ಮ್ಯೂಸಿಯಂನ ಮೇಲ್ಛಾವಣಿಯ ಮೇಲೆ ಸೆಕ್ಸ್ ಮಾಡಿರುವ ಘಟನೆ ತೈವಾನ್‍ನಲ್ಲಿ ನಡೆದಿದೆ.

    ತೈವಾನ್‍ನ ತೈನಾನ್ ಆರ್ಟ್ ಮ್ಯೂಸಿಯಂನ ಮೇಲ್ಛಾವಣಿಯ ಮೇಲೆ ಜೋಡಿ ಸೆಕ್ಸ್ ಮಾಡಿದ್ದಾರೆ. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆದ ನಂತರ ಪೊಲೀಸರು ಈ ಕುರಿತು ತನಿಖೆ ಶುರು ಮಾಡಿದ್ದಾರೆ.

    ಈಗಾಗಲೇ ಪೊಲೀಸರು ವಿಡಿಯೋದಲ್ಲಿರುವ ಜೋಡಿಯನ್ನು ಪತ್ತೆ ಮಾಡಿದ್ದು, ಆತನಿಂದ ಹೇಳಿಕೆಯನ್ನು ತೆಗೆದುಕೊಂಡಿದ್ದಾರೆ. ಇನ್ನೂ ಮಹಿಳೆಯನ್ನು ಗುರುತಿಸಿ ಆಕೆಯನ್ನು ತನಿಖೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೇ ಜೋಡಿ ತಮ್ಮ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸೆಕ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಸೋಶಿಯಲ್ ಮೀಡಿಯಾದಲ್ಲಿ ಜೋಡಿಯ ಸೆಕ್ಸ್ ವಿಡಿಯೋಗೆ ಕೆಲವರು ಫನ್ನಿಯಾಗಿ ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಜೋಡಿಯ ಅಸಭ್ಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ಅರ್ಪಣೆ – ಭಾರತಿ ವಿಷ್ಣುವರ್ಧನ್

    ವಿಷ್ಣು ಸ್ಮಾರಕ ಅಭಿಮಾನಿಗಳಿಗೆ ಅರ್ಪಣೆ – ಭಾರತಿ ವಿಷ್ಣುವರ್ಧನ್

    ಮೈಸೂರು: ಜಿಲ್ಲೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕವನ್ನು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಅರ್ಪಣೆ ಮಾಡುತ್ತಿದ್ದೇವೆ. ವಿಷ್ಣುವರ್ಧನ್ ಕನಸು ಕೂಡ ಇದೆ ಆಗಿತ್ತು ಎಂದು ಹಿರಿಯ ನಟಿ, ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

    ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕ ಪ್ರದೇಶವನ್ನು ಭಾರತಿ ವಿಷ್ಣುವರ್ಧನ್ ವೀಕ್ಷಿಸಿದರು. ಸುಮಾರು 5 ಎಕರೆ ವ್ಯಾಪ್ತಿಯ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗುತ್ತಿದೆ. ಕಳೆದ 10 ವರ್ಷದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಪುನಃ ಆರಂಭವಾಗಿರುವ ಕಾಮಗಾರಿಯನ್ನು ನೋಡಲು ಬಂದ ಭಾರತಿ ಅವರು ಸ್ಥಳೀಯರು ಹಾಗೂ ಅಧಿಕಾರಿಗಳ ಜೊತೆ ಸ್ಮಾರಕ ನಿರ್ಮಾಣದ ಕುರಿತು ಮಾಹಿತಿ ಪಡೆದರು.

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 11 ಕೋಟಿ ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಸರ್ಕಾರದಿಂದ ಈ ಹಣ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಮೊದಲು ನಾವು ಈ ಜಾಗದಲ್ಲಿದ್ದವರಿಗೆ ಮಾನವೀಯತೆಯಿಂದ ಹಣ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಸ್ಥಳೀಯರು ಇಂದು ಆಗೋದಿಲ್ಲ ಹೋರಾಟ ಮಾಡುತ್ತೀವಿ ಎಂದರು. ಆದರೆ ಈಗ ಇದು ಸರ್ಕಾರದ ಜಾಗವಾಗಿದೆ. ಹಾಗಾಗಿ ಈಗ ಅವರಿಗೆ ಮಾನವೀಯತೆಯಿಂದ ಹಣ ಕೊಡುವ ಅವಶ್ಯಕತೆ ಇಲ್ಲ. ನಾವು ಕೊಡೋದಿಲ್ಲ, ಸರ್ಕಾರವೂ ಕೊಡಲ್ಲ. ಈ ಸ್ಮಾರಕ ಅಭಿಮಾನಿಗಳು ಹಾಗೂ ವಿಷ್ಣು ಅವರಿಗೆ ಅರ್ಪಿಸುತ್ತೇವೆ. ವಿಷ್ಣುವರ್ಧನ್ ಅವರ ಕನಸು ಕೂಡ ಇದೆ ಆಗಿತ್ತು ಎಂದು ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಮಾತನಾಡಿ, ಮೈಸೂರಿನಲ್ಲಿ ಸ್ಮಾರಕ ಆಗ್ತಿರೋದು ತುಂಬಾನೇ ಖುಷಿಯಾಗಿದೆ. ಅಪ್ಪಾಜಿಯವರ ಕನಸು ಕೂಡ ಇದೇ ಆಗಿತ್ತು. ಇದು ಕೇವಲ ಸ್ಮಾರಕವಲ್ಲ, ಇದೊಂದು ರಾಜ್ಯದ ಮಾಡೆಲ್. ರಂಗ ತರಬೇತಿಯಿಂದ ಹಿಡಿದು ಸಿನಿಮಾಗೆ ಸಂಬಂಧಿಸಿದ ಎಲ್ಲ ರೀತಿಯ ಟ್ರೈನಿಂಗ್ ಇಲ್ಲಿ ಇರುತ್ತದೆ. ದಕ್ಷಿಣ ಭಾರತದಲ್ಲಿ ಇದೊಂದು ಉತ್ತಮವಾದ ಮ್ಯೂಸಿಯಂ ಆಗಬೇಕಿದೆ. 10 ವರ್ಷಗಳ ಕಾಲ ನಡೆದ ಹೋರಾಟದ ಫಲ ಇಂದು ದೊರಕಿದೆ. ಎರಡು ವರ್ಷದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

  • ಪ್ರಧಾನಿ ಮೋದಿಯ ಅಪರೂಪದ 3,000 ಚಿತ್ರಗಳ ಸಂಗ್ರಾಹಾಲಯ

    ಪ್ರಧಾನಿ ಮೋದಿಯ ಅಪರೂಪದ 3,000 ಚಿತ್ರಗಳ ಸಂಗ್ರಾಹಾಲಯ

    -ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಚಿತ್ರದಲ್ಲಿ ಮೋದಿ ಮಿಂಚಿಂಗ್

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಾವಿದರೊಬ್ಬರು ಮೋದಿಯ ಅಪರೂಪದ ಹಾಗೂ ಬಗೆ ಬಗೆಯ 3000 ಚಿತ್ರಗಳನ್ನು ಸಂಗ್ರಹಿಸಿದ ಅಭಿಮಾನ ಮೆರೆದಿದ್ದಾರೆ.

    ಯಲ್ಲಾಪುರ ತಾಲೂಕಿನ ಕಲಾವಿದರಾಗಿರುವ ಜಾಲಿಮನೆ ವೆಂಕಣ್ಣ ಅವರು ಚಿಕ್ಕ ವಯಸ್ಸಿನಿಂದಲೇ ಕಲೆ ಬಗ್ಗೆ ಒಲವು ಹೊಂದಿದ್ದು, ಕಲಾಕೃತಿ ರಚನೆ ಸಂಗ್ರಹಣೆ ಮಾಡುವುದೇ ಹವ್ಯಾಸವಾಗಿದೆ. ಮೋದಿ ಮೇಲಿನ ಇವರ ಅಭಿಮಾನದಿಂದ ಕಳೆದ ಎಂಟು ತಿಂಗಳಿಂದ ಮೋದಿ ಅವರ ಭಾವ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವ ಕೆಲಸ ಮಾಡ್ತಿದ್ದಾರೆ. ಮೋದಿಯವರನ್ನು ನೇರವಾಗಿ ನೋಡದಿದ್ದರೂ ಅವರ ಕಾರ್ಯ ಸಾಧನೆಯನ್ನು ನೋಡಿ ವೆಂಕಣ್ಣ ಅವರು ಅಭಿಮಾನಿಯಾಗಿದ್ದಾರೆ.

    ಮೋದಿ ಮೇಲಿನ ಅಭಿಮಾನಕ್ಕೆ ವೆಂಕಣ್ಣ ಪ್ರಧಾನಿಯ ಪ್ರತಿಯೊಂದು ಪೋಟೋಗಳನ್ನು ಸಂಗ್ರಹಿಸಿ ಮನೆಯನ್ನೇ ಮೋದಿ ಭಾವಚಿತ್ರಗಳ ಕಲಾ ಸಂಗ್ರಹಾಲಯವನ್ನಾಗಿಸಿ ಅಭಿಮಾನ ಮೆರೆದಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾಗುವ ಮೋದಿ ಭಾವಚಿತ್ರದಿಂದ ಹಿಡಿದು ಮಲೆನಾಡ ಕಲೆ ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಸೇರಿದಂತೆ ಹಲವು ರೂಪದಲ್ಲಿ ಮೋದಿಯನ್ನು ಅವರು ಚಿತ್ರಿಸುವ ಕೆಲಸ ಮಾಡಿದ್ದಾರೆ. ಮೋದಿಯ ಬಾಲ್ಯದ ಚಿತ್ರಗಳಿಂದ ಹಿಡಿದು ನಾನಾ ವೇಷದಲ್ಲಿ ಕಂಗೊಳಿಸುವ ಬಗೆ, ಬಗೆ ಬಂಗಿಯ ಚಿತ್ರಗಳನ್ನ ಅವರು ಸಂಗ್ರಹಿಸಿದ್ದಾರೆ.

    ಮೋದಿಯ ಚಿತ್ರ ಎಲ್ಲೇ ಕಂಡರೂ ತಂದು ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ರಟ್ಟಿನಲ್ಲಿ ಲ್ಯಾಮಿನೇಷನ್ ಮಾಡಿ ಇಡುತ್ತಿದ್ದಾರೆ. ಹೀಗೆ ಬರೋಬ್ಬರಿ 3000 ಕ್ಕೂ ಹೆಚ್ಚು ಸಂಗ್ರಹಿಸಿದ್ದು, ಇವುಗಳನ್ನು ತಮ್ಮ ಮನೆಯ ತುಂಬಾ ನೀಟಾಗಿ ಜೋಡಣೆ ಮಾಡಿ ಮೋದಿ ಭಾವಚಿತ್ರಗಳನ್ನು ಮನೆಗೆ ಬರುವವರಿಗೆಲ್ಲ ತೋರಿಸಿ ಮೋದಿಯ ಜೀವನ ಹಾಗೂ ಸಾಧನೆಗಳನ್ನು ತಿಳಿಸುವ ಕೆಲಸ ಮಾಡ್ತಿದ್ದಾರೆ. ಅಲ್ಲದೇ ಸಂಬಂಧಿಕರ ಮದುವೆ, ಮುಂಜಿಗಳಂದು ಅಶ್ವಥ ಎಲೆ ಮೇಲೆ ಮೋದಿ ಚಿತ್ರ ಬಿಡಿಸಿ ಉಡುಗರೆ ನೀಡಿ ಅಭಿಮಾನ ತೋರುತ್ತಿದ್ದಾರೆ.

    ಅಶ್ವಥ ಮರಕ್ಕೆ ಧಾರ್ಮಿಕವಾದ ಮಹತ್ವವಿದೆ ತ್ರಿಮೂರ್ತಿಗಳ ಸಂಗಮ ಅಶ್ವಥ ಎಲೆ. ಸನ್ಯಾಸಿಯಾದ ಮೋದಿಯನ್ನ ನೋಡಿದಾಗ ದೇಶಾಭಿನ ಜಾಗೃತ ಆಗುತ್ತೆ. ಈ ಹಿನ್ನೆಲೆಯಲ್ಲಿ ಮೋದಿಯನ್ನ ಅಶ್ವಥ ಎಲೆಯಲ್ಲಿ ಸಂಗ್ರಹಿಸುವ ಮನಸ್ಸು ಬಂತು ಎಂದು ಕಲಾವಿದ ವೆಂಕಣ್ಣ ಹೇಳಿದ್ದಾರೆ.

    ಇನ್ನು  ಮೋದಿಯ ವಿಶೇಷ ಚಿತ್ರಗಳ ಸಂಗ್ರಹ ನೋಡಲು ಸುತ್ತ ಮುತ್ತಲಿನ ಜನರೂ ಮುಗಿಬೀಳುತ್ತಿದ್ದಾರೆ, ಮೋದಿ ಚಿತ್ರ ಸಂಗ್ರಹ ನೋಡಿ ಖುಷಿಪಡುವ ಜನರು ವೆಂಕಣ್ಣ ಅವರು ಮೋದಿ ಬಗ್ಗೆ ಇಟ್ಟಿರುವ ಅಪಾರ ಭಕ್ತಿ, ಪ್ರೀತಿಯನ್ನು ಮೆಚ್ಚಿದ್ದಾರೆ.

  • ನೇತಾಜಿ ಸುಭಾಷ್ ಚಂದ್ರಬೋಸ್ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ

    ನೇತಾಜಿ ಸುಭಾಷ್ ಚಂದ್ರಬೋಸ್ ಮ್ಯೂಸಿಯಂ ಉದ್ಘಾಟಿಸಿದ ಪ್ರಧಾನಿ ಮೋದಿ

    ನವದೆಹಲಿ: ನೇತಾಜಿ ಸುಭಾಷ್ ಚಂದ್ರಬೋಸ್ ಅವರ 122ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪುಕೋಟೆಯಲ್ಲಿ ಮ್ಯೂಸಿಯಂ ಉದ್ಘಾಟನೆ ಮಾಡಿದರು.

    ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಪ್ರಧಾನಿ ಮೋದಿ ಅವರು ಬೋಸ್‍ರ ಮ್ಯೂಸಿಯಂ ಉದ್ಘಾಟನೆ ಮಾಡಿದ್ದಾರೆ. ಅಲ್ಲದೇ ಜಲಿಯನ್ ವಾಲಾಬಾಗ್, ಮೊದಲ ವಿಶ್ವಯುದ್ಧ ಹಾಗೂ 1857ರ ಭಾರತ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮ್ಯೂಸಿಯಂಗಳನ್ನು ಉದ್ಘಾಟನೆ ಮಾಡಿದರು.

    ಸುಭಾಷ್ ಚಂದ್ರಬೋಸ್ ಅವರ ವಸ್ತು ಸಂಗ್ರಹಾಲಯದಲ್ಲಿ ಬೋಸರ ಹಾಗೂ ಭಾರತೀಯ ರಾಷ್ಟ್ರೀಯ ಸೇನೆ(ಐಎನ್‍ಎ)ಗೆ ಸಂಬಂಧಿಸಿದ ವಿವಿಧ ಕಲಾಕೃತಿಗಳು ಇಡಲಾಗಿದೆ. ಬೋಸರು ಬಳಿಸಿದ ಕತ್ತಿ, ಕುರ್ಚಿ, ಪದಕಗಳು, ಸಮವಸ್ತ್ರ, ಬ್ಯಾಡ್ಜ್ ಸೇರಿದಂತೆ ಐಎನ್‍ಎ ಗೆ ಸಂಬಂಧಿಸಿದ ಇನ್ನಿತರ ಕಲಾಕೃತಿಗಳು ವಸ್ತುಸಂಗ್ರಾಹಲಯದಲ್ಲಿದೆ.

    ವಿಶೇಷವಾಗಿ ವಸ್ತುಸಂಗ್ರಾಹಲಯಕ್ಕೆ ಭೇಟಿ ನೀಡುವ ಸಾರ್ವಜನಿಕರು ಸುಭಾಷ್ ಚಂದ್ರಬೋಸ್ ಬಗ್ಗೆ ತಯಾರಿಸಿರುವ ಸಾಕ್ಷಚಿತ್ರವನ್ನು ನೋಡಬಹುದಾಗಿದೆ. ಈ ಮೂಲಕ ಸ್ವಾತಂತ್ರ್ಯದ ಹೋರಾಟಗಾರರ ಪರಿಕಲ್ಪನೆ ಬಗ್ಗೆ ತಿಳಿಯಬಹುದಾಗಿದೆ. ಈ ಸಾಕ್ಷ್ಯ ಚಿತ್ರಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ.

    ಜಲಿಯನ್ ವಾಲಾಬಾಗ್ ಮ್ಯೂಸಿಯಂ ಏಪ್ರಿಲ್ 13, 1919 ರಂದು ನಡೆದ ಹತ್ಯಾಕಾಂಡದ ಕುರಿತು ಬೆಳಕು ಚೆಲ್ಲುತ್ತದೆ. ಪಂಜಾಬ್ ಅಮೃತಸರದ ಜಲಿಯನ್ ವಾಲಾಬಾಗ್ ದುರಂತ ನಡೆದ ಸ್ಥಳದಲ್ಲಿ ನಿರ್ಮಿಸಲಾದ ಸ್ಮಾರಕದ ಪ್ರತಿಕೃತಿಯನ್ನು ಈ ವಸ್ತುಸಂಗ್ರಹಾಲಯದಲ್ಲಿ ಸ್ಥಾಪಿಸಲಾಗಿದೆ. ಉಳಿದಂತೆ ಮೊದಲ ಮಹಾಯುದ್ಧದಲ್ಲಿ ಭಾರತೀಯ ಯೋಧರು ತೋರಿದ ಸಾಹಸ ಶೌರ್ಯ ಮತ್ತು ತ್ಯಾಗಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಚಿನ್ ಬಳಿಕ ಆಸೀಸ್ ಬ್ರಾಡ್ಮನ್ ಮ್ಯೂಸಿಯಂನಿಂದ ಕೊಹ್ಲಿಗೆ ವಿಶೇಷ ಗೌರವ

    ಸಚಿನ್ ಬಳಿಕ ಆಸೀಸ್ ಬ್ರಾಡ್ಮನ್ ಮ್ಯೂಸಿಯಂನಿಂದ ಕೊಹ್ಲಿಗೆ ವಿಶೇಷ ಗೌರವ

    ಸಿಡ್ನಿ: ಆಸೀಸ್ ತಂಡದ ಮಾಜಿ ಆಟಗಾರ ಬ್ರಾಡ್ಮನ್ ಅವರ ನೆನಪಿಗಾಗಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಸಚಿನ್ ಪಕ್ಕ ಕೊಹ್ಲಿ ಸ್ಥಾನ ಪಡೆದಿದ್ದಾರೆ.

    ಬ್ರಾಡ್ಮನ್ ಕ್ರಿಕೆಟ್ ನೀಡಿದ ಕೊಡುಗೆಯನ್ನು ತಿಳಿಸಲು ಅವರ ಹೆಸರಿನಲ್ಲಿ ಮ್ಯೂಸಿಯಂ ನಿರ್ಮಿಸಲಾಗಿದೆ. ಇಲ್ಲಿ ಅವರ ಕ್ರಿಕೆಟ್ ಸಾಧನೆಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಈ ಮ್ಯೂಸಿಯಂನಲ್ಲಿ ಈಗಾಗಲೇ ಸಚಿನ್ ಭಾವಚಿತ್ರವನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಸದ್ಯ ಈ ಸಾಲಿಗೆ ಕೊಹ್ಲಿ ಕೂಡ ಸೇರಿದ್ದು ಕೊಹ್ಲಿ ಅವರ ಜರ್ಸಿಗೂ ಕೂಡ ಸಚಿನ್ ಪಕ್ಕದಲ್ಲೇ ಸ್ಥಾನ ಕಲ್ಪಿಸಲಾಗಿದೆ.

    ಈ ಕುರಿತು ಮ್ಯೂಸಿಯಂ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಕೊಹ್ಲಿ ಅವರ ಜೆರ್ಸಿಗೆ ವಿಶೇಷ ಸ್ಥಳ ನೀಡಲಾಗಿದೆ. ಸಚಿನ್ ಅವರ ಭಾವಚಿತ್ರದ ಪಕ್ಕವೇ ಸ್ಥಳ ನಿಗದಿ ಮಾಡಲಾಗಿದೆ. ಮ್ಯೂಸಿಯಂ ಪ್ರವೇಶ ಮಾಡುತ್ತಿದಂತೆ ಇಬ್ಬರು ಆಟಗಾರರು ಪ್ರೇರಣೆ ನೀಡುತ್ತಾರೆ. ಭಾರತದ ಕ್ರಿಕೆಟ್ ಆಧಾರಗಳಂತೆ ಕಾಣುತ್ತಾರೆ ಎಂದು ತಿಳಿಸಿದೆ.

    2014-15 ರಲ್ಲಿ ಆಸೀಸ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ವೇಳೆ ಅವರು ಧರಿಸಿದ್ದ ಟೀ ಶರ್ಟ್ ಇದಾಗಿದ್ದು, ಸದ್ಯ ಸಚಿನ್ ಅವರ ಪಕ್ಕದಲ್ಲೇ ಕೊಹ್ಲಿ ಅವರಿಗೂ ಸ್ಥಾನ ನೀಡಲಾಗಿದೆ. ಈ ಮ್ಯೂಸಿಯಂನಲ್ಲಿ ಖ್ಯಾತ ಕ್ರಿಕೆಟಿಗರ ವಸ್ತುಗಳನ್ನು ಮಾತ್ರ ಇಡಲಾಗಿದ್ದು, ಭಾರತದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಅವರ ಸಾಧನೆಯ ನೆನಪುಗಳ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮ್ಯೂಸಿಯಂ ಪ್ರವೇಶದ್ವಾರದಲ್ಲಯೇ ಸಚಿನ್ ಅವರ ಭಾವಚಿತ್ರ ಇಡಲಾಗಿದ್ದು, ಸದ್ಯ ಅವರ ಬಳಿ ಕೊಹ್ಲಿ ಜರ್ಸಿ ಇರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

    ಸಿನಿಮಾ ಶೈಲಿಯಲ್ಲಿ ಹೈದ್ರಾಬಾದ್ ಮ್ಯೂಸಿಯಂನಿಂದಲೇ 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ದರೋಡೆ!

    ಹೈದರಾಬಾದ್: ತೆಲಂಗಾಣದ ರಾಜಧಾನಿಯಲ್ಲಿರುವ ಪ್ರಸಿದ್ಧ ನಿಜಾಮ್ ಮ್ಯೂಸಿಯಂ ಸಂಗ್ರಹಾಲಯದಲ್ಲಿ ಸಿನಿಮೀಯಾ ಶೈಲಿಯಲ್ಲಿ ಕಳ್ಳರು 2 ಕೆಜಿ ಚಿನ್ನದ ಟಿಫಿನ್ ಬಾಕ್ಸ್ ಸೇರಿದಂತೆ ಹಲವು ವಸ್ತುಗಳನ್ನು ಎಗರಿಸಿದ್ದಾರೆ.

    ದೇಶದಲ್ಲೇ ಪ್ರಸಿದ್ಧ ಹಾಗೂ ಅತಿ ಭದ್ರತೆ ಹೊಂದಿರುವ ನಿಜಾಮಾ ಮ್ಯೂಸಿಯಂನಲ್ಲಿ ಎರಡು ದಶಕಗಳಿಗೂ ಹಳೆಯದಾದ 2 ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್, ಟೀ ಕಪ್, ಸಾಸರ್ ಹಾಗೂ ಸ್ಪೂನ್‍ಗಳನ್ನು ಕಳ್ಳರು ಸಿನಿಮಾ ಶೈಲಿಯಲ್ಲಿ ಎಗರಸಿ ಪರಾರಿಯಾಗಿದ್ದಾರೆ.

    ಕಳ್ಳತನವಾಗಿದ್ದು ಹೇಗೆ?
    ದರೋಡೆಕೋರರು ಭಾನುವಾರ ತಡರಾತ್ರಿ ಮೊದಲನೇ ಮಹಡಿಯಲ್ಲಿರುವ ಕಬ್ಬಿಣದ ಸರಳು ಮತ್ತು ವೆಂಟಿಲೇಟರ್ ಗಳನ್ನು ಮುರಿದು ಹಗ್ಗದ ಮೂಲಕ ಟಿಫಿನ್ ಬಾಕ್ಸ್ ಇರುವ ಕೊಠಡಿಗೆ ಬಂದಿದ್ದಾರೆ. ಮಾಣಿಕ್ಯ, ವಜ್ರ ಮತ್ತು ಪಚ್ಚೆಗಳಿಂದ ಅಲಂಕರಿಸಲಾಗಿದ್ದ ಟಿಫಿನ್ ಬಾಕ್ಸ್ ಸೇರಿದಂತೆ ಇತರೆ ಚಿನ್ನದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಸೋಮವಾರ ಎಂದಿನಂತೆ ಕೊಠಡಿಯನ್ನು ಪರೀಕ್ಷಿಸಿದ ಸೆಕ್ಯೂರಿಟಿ ಸಿಬ್ಬಂದಿಗಳು ಕಳ್ಳತನವಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ಮೀರ್ ಚೌಕ್ ಪೊಲೀಸ್ ಠಾಣಾ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಸ್ಥಳವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿ, ಸಿಸಿಟಿವಿಯ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಂಗ್ರಾಹಲಯದ ಸಿಬ್ಬಂದಿಗಳೇ ಕಳ್ಳತನದಲ್ಲಿ ಭಾಗಿಯಾಗಿರುವುದರ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಹೈದರಾಬಾದಿನ ಕೊನೆಯ ನಿಜಾಮ 7 ನೇ ಮೀರ್ ಒಸ್ಮಾನ್ ಅಲಿ ಖಾನ್ ಅಸಫ್ ಜಾ 1936 ರಲ್ಲಿ ತನ್ನ ಬೆಳ್ಳಿ ಮಹೋತ್ಸವದ ಜ್ಞಾಪಕಾರ್ಥವಾಗಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದ್ದನು. ಈ ಮ್ಯೂಸಿಯಂನಲ್ಲಿ ಹೈದರಾಬಾದಿನ ನಿಜಾಮರಿಗೆ ಸೇರಿದ ಪ್ರಮುಖ ಕಾಣಿಕೆಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=dN3WLhctcCE