Tag: murder Attempt

  • ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

    ಮನೆ ಮುಂದೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು!

    ನವದೆಹಲಿ: ವ್ಯಕ್ತಿಯೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ಮನೆ ಮುಂದೆಯೇ ಬಂದು ಏಕಾಏಕಿ ಗುಂಡು ಹಾರಿಸಿದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ಶುಕ್ರವಾರದ ಸಂಜೆ ಹೊತ್ತಿಗೆ ದೆಹಲಿಯ ಸೆಕ್ಟರ್-11ರ ರೋಹಿಣಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂಲತಃ ದೆಹಲಿಯ ಖೇದಾ ಖರ್ದ್ ಗ್ರಾಮದವರಾದ ಮನೀಶ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸಹೋದ್ಯೊಗಿಗಳ ಜೊತೆ ಹೊರಗಡೆ ಹೊರಟಿದ್ದ ಮನೀಶ್ ಕಾರನ್ನು ದುಷ್ಕರ್ಮಿಗಳು ಮತ್ತೊಂದು ವಾಹನದಲ್ಲಿ ಬಂದು ರೋಹಿಣಿ ಪ್ರದೇಶದಲ್ಲಿ ಅಡ್ಡಗಟ್ಟಿದ್ದರು. ಈ ವೇಳೆ ಕಾರಿನಿಂದ ಮನೀಶ್ ಇಳಿದು ಕೆಳಗೆ ಬಂದ ಮೇಲೆ ನಾಲ್ವರು ದುಷ್ಕರ್ಮಿಗಳು ಒಬ್ಬರ ಹಿಂದೆ ಒಬ್ಬರಂತೆ ಬಂದು ಮನೀಶ್ ಮೇಲೆ ಗುಂಡು ಹಾರಿಸಿದ್ದಾರೆ.

    ಆರೋಪಿಗಳು ಮನೀಶ್ ಮೇಲೆ ದಾಳಿ ಮಾಡಿರುವ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿದ್ದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಗುಂಡೇಟು ತಿಂದಿರುವ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಆರೋಪಿಗಳನ್ನು ಸೆರೆಹಿಡಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ವಿಡಿಯೋದಲ್ಲಿ ಗಮನಿಸಿದರೆ ಮೊದಲು ಇಬ್ಬರು ವ್ಯಕ್ತಿಗಳು ಮನೀಶ್ ಬಳಿ ಬಂದು ಗುಂಡು ಹೊಡೆಯುತ್ತಾರೆ. ಅವರ ಹಿಂದೆಯೇ ಇನ್ನಿಬ್ಬರು ಸಾಲಾಗಿ ಬಂದು ಗುಂಡು ಹಾರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ಘಟನೆಯನ್ನು ಕಂಡು ತಮ್ಮ ಮನೆಯ ಗೇಟ್ ಮುಚ್ಚಿ ಭಯದಿಂದ ಮನೆಯೊಳಗೆ ಹೋದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಹುಡ್ಗಿಗಾಗಿ ಮೂವರು ಯುವಕರು ದುಂಬಾಲು – ಪ್ರೀತಿಗಾಗಿ ಆಕೆಯ ಪೋಷಕರ ಕೊಲೆಗೆ ಸ್ಕೆಚ್

    ಹುಡ್ಗಿಗಾಗಿ ಮೂವರು ಯುವಕರು ದುಂಬಾಲು – ಪ್ರೀತಿಗಾಗಿ ಆಕೆಯ ಪೋಷಕರ ಕೊಲೆಗೆ ಸ್ಕೆಚ್

    ಬೆಂಗಳೂರು: ಪ್ರೀತಿಸಿದ ಯುವತಿಗಾಗಿ ಮೂವರು ಯುವಕರು ಆಕೆಯ ಪೋಷಕರನ್ನು ಕೊಲ್ಲಲು ಯತ್ನಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನೆಲಮಂಗಲ ಸಮೀಪದ ಕಾಚನಹಳ್ಳಿಯಲ್ಲಿ ನಡೆದಿದೆ.

    ಗಂಗನರಸಮ್ಮ ಮತ್ತು ಮಂಜುನಾಥ್ ಗಾಯಗೊಂಡ ಯುವತಿಯ ಪೋಷಕರು. ಇವರ ಕೊಲೆಗೆ ಕಾಚನಹಳ್ಳಿ ಗ್ರಾಮದ ನಿವಾಸಿಗಳಾದ ನಾಗೇಶ, ನರಸಿಂಹಮೂರ್ತಿ ಮತ್ತು ನಾಗೇಂದ್ರ ಈ ಮೂವರು ಯುವಕರು ಯತ್ನಿಸಿದ್ದಾರೆ.

    ಮೂವರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆದರೆ ಯುವತಿಯನ್ನು ಓಲೈಸಿಕೊಳ್ಳಲು ಅಡ್ಡಿಯಾದ ಆಕೆಯ ಪೋಷಕರ ಕೊಲೆಗೆ ಸಂಚು ರೂಪಿಸಿದ್ದರು. ಯುವತಿ ಹಾಗೂ ಆಕೆಯ ಪೋಷಕರಾದ ಗಂಗನರಸಮ್ಮ ಮತ್ತು ಮಂಜುನಾಥ್ ಮೇಲೆ ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಮೂವರನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಯ ಬಳಿಕ ಪುಂಡ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹುಡುಗಿಗಾಗಿ ಕೊಲೆ ಮಾಡಲು ಮುಂದಾದ ಯುವಕರಿಗೆ ಪೊಲೀಸರು ತಕ್ಕ ಪಾಠ ಕಲಿಸಬೇಕೆಂದು ನೊಂದ ಪೋಷಕರು ಒತ್ತಾಯಿಸಿದ್ದಾರೆ.

    ಯುವಕರ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಡ್ ಮೇಲೆ ಪುತ್ರಿ ಬಳಿ ಕುಳಿತ ತಾಯಿ – ಆಸ್ಪತ್ರೆಯಲ್ಲೇ ಸೆಕ್ಸ್‌ಗೆ ಕರೆದ ಕುಡುಕ ಪತಿ

    ಬೆಡ್ ಮೇಲೆ ಪುತ್ರಿ ಬಳಿ ಕುಳಿತ ತಾಯಿ – ಆಸ್ಪತ್ರೆಯಲ್ಲೇ ಸೆಕ್ಸ್‌ಗೆ ಕರೆದ ಕುಡುಕ ಪತಿ

    – ಪತ್ನಿ ಮೇಲೆ ಹಲ್ಲೆಗೈದ ಪತಿ
    – ಕೋಮಾಗೆ ಜಾರಿದ ಪತ್ನಿ

    ಹೈದರಾಬಾದ್: ಆಸ್ಪತ್ರೆಯಲ್ಲಿ ಸೆಕ್ಸ್‌ಗೆ ನಿರಾಕರಿಸಿದ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಶಾಕಿಂಗ್ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಪತಿ ಕೃತ್ಯದಿಂದ ಪತ್ನಿ ಪದ್ಮಾ ಕೋಮಾದಲ್ಲಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಆರೋಪಿ ಪತಿ ನಂದಾನನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಪದ್ಮಾ ಮತ್ತು ನಂದಾ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆರೋಪಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಐರುವಾರಾಂ ದಲಿತ್ವಾಡಾದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪದ್ಮಾ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಪದ್ಮಾ ಆಕೆಯನ್ನು ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಅಲ್ಲಿ ವೈದ್ಯರು ಪರೀಕ್ಷೆ ಮಾಡಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡುವಂತೆ ಸೂಚಿಸಿದ್ದಾರೆ. ಕೊನೆಗೆ ಪದ್ಮಾ ಮಗಳನ್ನು ಅಡ್ಮಿಟ್ ಮಾಡಿ ಇನ್ನೊಬ್ಬಳ ಮಗಳೊಂದಿಗೆ ಆಸ್ಪತ್ರೆಯಲ್ಲಿಯೇ ಉಳಿದುಕೊಂಡಿದ್ದರು.

    ನಂದಾ ಭಾನುವಾರ ರಾತ್ರಿ ಆಸ್ಪತ್ರೆಗೆ ಕಂಠಪೂರ್ತಿ ಕುಡಿದು ಬಂದಿದ್ದಾನೆ. ಈ ವೇಳೆ ನಂದಾ ಪತ್ನಿ ಪದ್ಮಾ ಬಳಿ ಬಂದು ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಪದ್ಮಾ ಆತನಿಗೆ ಬೈದು ಹೊರಗೆ ಕಳುಹಿಸಿದ್ದಾರೆ. ಇದರಿಂದ ಕೋಪಗೊಂಡ ನಂದಾ ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾನೆ. ನಂತರ ಸೆಕ್ಯೂರಿಟಿ ಬಂದು ಆಸ್ಪತ್ರೆಯಿಂದ ಆತನನ್ನು ಹೊರಗೆ ಕಳುಹಿಸಿದ್ದಾನೆ.

    ಕೊಲೆ ಪ್ರಯತ್ನ:
    ನಂದಾ ಮತ್ತೆ ರಾತ್ರಿ ಸುಮಾರು 11 ಗಂಟೆಗೆ ಆಸ್ಪತ್ರೆಗೆ ಬಂದು ಮಾತನಾಡಬೇಕು ಎಂದು ಹೇಳಿ ಮಕ್ಕಳೊಂದಿಗಿದ್ದ ಪತ್ನಿಯನ್ನು ಟೆರೆಸಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮತ್ತೆ ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ್ದಾನೆ. ಆಗಲೂ ಪತ್ನಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಡ ನಂದಾ ಪದ್ಮಾ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಪದ್ಮಾ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಆದರೂ ಕಾಮುಕ ಪತಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಆಕೆಯ ಸೀರೆಯಿಂದಲೇ ಕುತ್ತಿಗೆ ಹಿಸುಕಿ ಹೋಗಿದ್ದಾನೆ.

    ಇತ್ತ ಪದ್ಮಾರ ಎರಡನೇ ಮಗಳು ತಾಯಿಯನ್ನು ಹುಡುಗಿಕೊಂಡು ಟೆರೆಸ್ ಮೇಲೆ ಬಂದಿದ್ದಾಳೆ. ಆಗ ತಾಯಿ ರಕ್ತಸ್ರಾವದಿಂದ ಪ್ರಜ್ಞೆಹೀನರಾಗಿ ಬಿದ್ದಿರುವುದನ್ನು ನೋಡಿದ್ದಾಳೆ. ತಕ್ಷಣ ಸಂಬಂಧಿಕರನ್ನು ಕರೆದಿದ್ದು, ಅವರು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ಮಾಡಿದ ವೈದ್ಯರು ಸದ್ಯಕ್ಕೆ ಆಕೆ ಕೋಮಾಗೆ ಹೋಗಿದ್ದಾರೆ. ಆದರೂ ಬದುಕುವ ಸಾಧ್ಯತೆಗಳಿಲ್ಲ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ತಿಳಿದ ಚಿತ್ತೂರು ಪೊಲೀಸರು ಆಸ್ಪತ್ರೆಗೆ ಬಂದು ನಂದನನ್ನು ಬಂಧಿಸಿದ್ದಾರೆ. ಈ ವೇಳೆ ಸಂಬಂಧಿಕರು ಪೊಲೀಸರ ವಾಹನವನ್ನು ಅಡ್ಡಗಟ್ಟಿ ಆತನನ್ನು ತಮಗೆ ಒಪ್ಪಿಸುವಂತೆ ಗಲಾಟೆ ಮಾಡಿದ್ದಾರೆ. ಆಗ ಪೊಲೀಸರು ಪರಿಸ್ಥಿತಿಯನ್ನ ಶಾಂತಗೊಳಿಸಿ ಆತನನ್ನು ಕರೆದುಕೊಂಡಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಏನೋ ತೋರಿಸ್ತೀನಿ ಅಂತ ಟೆರೇಸ್‌ಗೆ ಕರ್ಕೊಂಡು ಹೋಗಿ ಬಾಲಕಿಯ ಮೇಲೆ ರೇಪ್

    ಏನೋ ತೋರಿಸ್ತೀನಿ ಅಂತ ಟೆರೇಸ್‌ಗೆ ಕರ್ಕೊಂಡು ಹೋಗಿ ಬಾಲಕಿಯ ಮೇಲೆ ರೇಪ್

    ನವದೆಹಲಿ: 30 ವರ್ಷದ ವ್ಯಕ್ತಿಯೊಬ್ಬ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಕೊಲೆ ಮಾಡಲು ಯತ್ನಿಸಿರುವ ಘಟನೆ ಪೂರ್ವ ದೆಹಲಿಯ ಮಧು ವಿಹಾರ್ ಮನೆಯ ಟೆರೇಸ್ ನಲ್ಲಿ ನಡೆದಿದೆ.

    ಆರೋಪಿಯನ್ನು ಮನೀಷ್ ಎಂದು ಗುರುತಿಸಲಾಗಿದೆ. ಆರೋಪಿ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಮನೀಶ್ ತನ್ನ ಮನೆಯ ಹತ್ತಿರ ಬಾಲಕಿ ಅಂಗಡಿಗೆ ಹೋಗುವುದನ್ನು ಗಮನಿಸಿದ್ದಾನೆ. ಬಳಿಕ ಬಾಲಕಿಯ ಬಳಿ ಹೋಗಿ ನಿನಗೆ ಏನನ್ನೋ ತೋರಿಸುತ್ತೀನಿ ಬಾ ಎಂದು ಸುಳ್ಳು ಹೇಳಿ ಆಕೆಯನ್ನು ಎತ್ತಿಕೊಂಡು ಮಧು ವಿಹಾರ್ ನಲ್ಲಿರುವ ಮನೆಯ ಟೆರೇಸ್ ಮೇಲೆ ಹೋಗಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಈ ವೇಳೆ ಬಾಲಕಿ ಕಿರುಚಾಡಿದ್ದಾಳೆ. ಆಗ ಆರೋಪಿ ಭಯಗೊಂಡು ಬಾಲಕಿಯ ಬಾಯಿಯನ್ನು ಮುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಬಾಲಕಿಯ ಹೇಗೋ ಆರೋಪಿಯಿಂದ ತಪ್ಪಿಸಿಕೊಂಡು ನೆರೆಹೊರೆಯವರನ್ನು ಕರೆದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಓಡಿ ಬಂದಿದ್ದಾರೆ.

    ನೆರೆಹೊರೆಯವರು ಬರುವುದನ್ನು ನೋಡಿದ ಆರೋಪಿ ಮನೀಷ್ ಪರಾರಿಯಾಗಲೂ ಪ್ರಯತ್ನ ಮಾಡಿದ್ದಾನೆ. ಆದರೆ ಸ್ಥಳೀಯರು ಆತನನ್ನು ಹಿಡಿದು ಪೊಲೀಸ್ ಬರುವರೆಗೂ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಣ್ಣನನ್ನೇ ಮದ್ವೆಯಾದ ತಂಗಿ – ರೊಚ್ಚಿಗೆದ್ದ ಅಮ್ಮನಿಂದ ಚಾಕು ಇರಿತ

    ಅಣ್ಣನನ್ನೇ ಮದ್ವೆಯಾದ ತಂಗಿ – ರೊಚ್ಚಿಗೆದ್ದ ಅಮ್ಮನಿಂದ ಚಾಕು ಇರಿತ

    ಚಂಡೀಗಢ: ಸಹೋದರಿಯೊಬ್ಬಳು ಸಂಬಂಧದಲ್ಲಿ ಅಣ್ಣನಾದ ವ್ಯಕ್ತಿಯನ್ನು ಮದುವೆಯಾಗಿದ್ದು, ಇದರಿಂದ ರೊಚ್ಚಿಗೆದ್ದ ಯುವತಿಯ ತಾಯಿ ಕುಟುಂಬದವರ ಜೊತೆ ಸೇರಿ ಆಕ್ರೋಶಗೊಂಡು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಹರ್ಯಾಣದ ಪಾಣಿಪಾತ್‍ನಲ್ಲಿ ನಡೆದಿದೆ.

    ಅಮಂದೀಪ್ ಕೌರ್ ಹಲ್ಲೆಗೊಳಗಾದ ಯುವತಿ. ಈಕೆ ನಾನ್ಯೂಲ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಕುಟುಂಬದವರು ಹಲ್ಲೆ ಮಾಡಿದ ತಕ್ಷಣ ನೆರೆಹೊರೆಯವರು ಬಂದು ಆಕೆಯನ್ನು ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಆಕೆಯನ್ನು ಚಂಡೀಗಢಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಚಂಡೀಗಢದ ಧಾನಾಸ್ ಪ್ರದೇಶದ ನಿವಾಸಿ ಅಮಂದೀಪ್ ಕೌರ್ 2018ರ ಮಾರ್ಚ್ 21ರಂದು ಪಟಿಯಾಲಾ ನಿವಾಸಿ ಜಸ್ವಿಂದರ್ ಸಿಂಗ್‍ನನ್ನು ಮದುವೆಯಾಗಿದ್ದಳು. ಮದುವೆಯ ನಂತರ ಇಬ್ಬರು ನಾನ್ಯೂಲ ಗ್ರಾಮದಲ್ಲಿ ಒಟ್ಟಿಗೆ ಸಂತೋಷದಿಂದ ವಾಸಿಸುತ್ತಿದ್ದರು. ಪತಿ ಸಿಂಗ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಕುಟುಂಬದ ವಿರೋಧದ ನಡುವೆಯೂ ಅಮಂದೀಪ್ ಮತ್ತು ಜಸ್ವಿಂದರ್ ಇಬ್ಬರು ಮದುವೆಯಾಗಿದ್ದರು.

    ಕೊಲೆಗೆ ಪ್ಲ್ಯಾನ್
    ಜನವರಿ 9 ರಂದು ಸಂಜೆ ಕೌರ್ ಮನೆಯಲ್ಲಿ ಒಬ್ಬಳೇ ಇದ್ದಳು. ಈ ವೇಳೆ ಕೌರ್ ನ ತಾಯಿ ಪರಮಜಿತ್ ಕೌರ್, ಸಹೋದರ ಪ್ರದೀಪ್ ಸಿಂಗ್, ಜಸ್ಮನ್ಪ್ರೀತ್, ಸೋದರ ಸಂಬಂಧಿ ಕಮಲ್ಜೀತ್ ಸಿಂಗ್, ಅವರ ಸ್ನೇಹಿತ ಸುಖ್‍ದೀಪ್ ಸಿಂಗ್ ಮತ್ತು ಚಿಕ್ಕಪ್ಪ ಕಾಕಾ ಸಿಂಗ್ ಸೇರಿದಂತೆ ಕೆಲವು ಮಂದಿ ಮನೆಗೆ ಹೋಗಿದ್ದಾರೆ. ಆಗ ಏಕಾಏಕಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ತಾಯಿ ಹಿಂದಿನಿಂದ ಬಂದು ಕೌರ್ ನ ಕುತ್ತಿಗೆಯನ್ನು ಹಿಡಿದಿದ್ದು, ಇತ್ತ ಪ್ರದೀಪ್ ಸಿಂಗ್ ಮತ್ತು ಜಸ್ಮನ್ಪ್ರೀತ್ ಆಕೆಯ ಕೈ-ಕಾಲುಗಳನ್ನು ಹಿಡಿದಿದ್ದರು. ಬಳಿಕ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

    ಮದುವೆ ಆದಾಗಿನಿಂದಲೂ ಅಮಂದೀಪ್ ಕುಟುಂಬಸ್ಥರು ಬೆದರಿಕೆ ಹಾಕುತ್ತಿದ್ದರು. ಕುಟುಂಬದಿಂದ ದೂರ ಉಳಿದುಕೊಂಡಿದ್ದ ನಮ್ಮ ಸಂಸಾರ ಚೆನ್ನಾಗಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಹಿಂದೆ ಅಮಂದೀಪ್ ಕುಟುಂಬಸ್ಥರು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎಂದು ಜಸ್ವಿಂದರ್ ಸಿಂಗ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೋಲ್ ಬಳಿ ಲಾರಿ ಹರಿಸಿ RTI ಕಾರ್ಯಕರ್ತನ ಹತ್ಯೆಗೆ ಯತ್ನ!

    ಟೋಲ್ ಬಳಿ ಲಾರಿ ಹರಿಸಿ RTI ಕಾರ್ಯಕರ್ತನ ಹತ್ಯೆಗೆ ಯತ್ನ!

    ಬೆಂಗಳೂರು: ಕೊಬ್ಬರಿ ಹಗರಣ ಬಯಲಿಗೆಳೆದಿದ್ದ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಹತ್ಯೆಗೆ ಸಂಚು ನಡೆಸಲಾಗಿದೆ. ದಾಖಲೆ ಇಲ್ಲದೆ ಕೊಬ್ಬರಿಯನ್ನ ಹೊರರಾಜ್ಯಕ್ಕೆ ಅಕ್ರಮವಾಗಿ ಸಾಗಾಟದ ಬಗ್ಗೆ ವಾಣಿಜ್ಯ ತೆರಿಗೆ ಆಯುಕ್ತರಿಗೆ ತುಮಕೂರು ಮೂಲದ ರವಿ ದೂರು ನೀಡಿದ್ರು. ಅಲ್ಲದೆ ಅದಕ್ಕೆ ಬೇಕಾದ ಎಲ್ಲಾ ಆಡಿಯೋ, ವಿಡಿಯೋ ಸಾಕ್ಷ್ಯ ಕೂಡಾ ಒದಗಿಸಿದ್ದರು.

    ಇದರ ಮಧ್ಯೆ ರವಿ ಕುಮಾರ್ ಕಾರ್ ಮೇಲೆ ಲಾರಿ ಹರಿಸಿ ಹತ್ಯೆಗೆ ಸಂಚು ರೂಪಿಸಲಾಗಿದೆಯಂತೆ. ನೆಲಮಂಗಲ ಪಟ್ಟಣದ ನವಯುಗ ಟೋಲ್ ಬಳಿ ತಮಿಳುನಾಡು ರಿಜಿಸ್ಟ್ರೇಷನ್ ಲಾರಿ ರವಿ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಇದು ಬ್ರೆಕ್ ಫೇಲ್ಯೂರ್‍ನಿಂದ ಆಗಿರುವ ಅಪಘಾತ ಎಂದು ಹೇಳಿದ್ರೂ, ಲಾರಿ ಬ್ರೇಕ್ ಫೇಲ್ಯೂರ್ ಆಗಿರಲಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರವಿಕುಮಾರ್ ದೂರು ಕೊಟ್ಟು ಒಂದೂವರೆ ತಿಂಗಳಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತಿಪಟೂರು ಎಪಿಎಂಸಿ ಕಾರ್ಯದರ್ಶಿಯನ್ನು ಕೇಳಿದ್ರೆ, ಈ ವಿಚಾರವಾಗಿ ದೂರು ನೀಡಿದ್ರೆ ಯಾವುದೇ ಪ್ರಯೋಜನ ಇಲ್ಲ. 29 ಮಂದಿ ಕೆಲಸಗಾರರ ಜಾಗದಲ್ಲಿ ಇರೋದು ಇಬ್ಬರು ಮಾತ್ರ. ಹೀಗಿದ್ದಾಗ ಅಕ್ರಮ ತಡೆಗಟ್ಟಲು ಹೇಗೆ ಸಾಧ್ಯ ಅಂತಿದ್ದಾರೆ ಎಂದು ರವಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಕ್ಷಿಣಕನ್ನಡದ ಕೈಕಂಬದಲ್ಲಿ ಮತ್ತೆ ಝಳಪಿಸಿದ ತಲ್ವಾರ್!

    ದಕ್ಷಿಣಕನ್ನಡದ ಕೈಕಂಬದಲ್ಲಿ ಮತ್ತೆ ಝಳಪಿಸಿದ ತಲ್ವಾರ್!

    ಮಂಗಳೂರು: ಬೆಳಂಬೆಳಗ್ಗೆ ಮೂಡಬಿದ್ರೆಯಲ್ಲಿ ತಲ್ವಾರ್ ದಾಳಿ ನಡೆಸಿ ನೆತ್ತರು ಹರಿಸಿದ ಬೆನಲ್ಲೇ ಪ್ರತಿಕಾರವಾಗಿ ಮತ್ತೊಂದು ತಲ್ವಾರ್ ದಾಳಿ ನಡೆದಿದೆ.

    ಕೈಕಂಬದ ಸೂರಲ್ಪಾಡಿಯಲ್ಲಿ ಸಂಜೆ ವೇಳೆ ಪೊಳಲಿ ನಿವಾಸಿ ಹರೀಶ್ ಶೆಟ್ಟಿ (38) ಮೇಲೆ ತಲ್ವಾರ್ ನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

    ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹರೀಶ್ ಶೆಟ್ಟಿ, ಕೈಕಂಬದಲ್ಲಿ ಬಸ್ ಟೈಂ ಕೀಪರ್ ಆಗಿದ್ದ ಕೆಲಸ ಮಾಡುತ್ತಿದ್ದರು. ಸದ್ಯ ದಾಳಿಯಲ್ಲಿ ಗಾಯಗೊಂಡಿರುವ ಹರೀಶ್ ಶೆಟ್ಟಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಟಿ.ಆರ್ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇಂದು ಬೆಳಗ್ಗೆ ಮೂಡುಬಿದ್ರೆಯ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಇಮ್ತಿಯಾಜ್ ಎಂಬಾತನನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಈ ವೇಳೆ ಇಮ್ತಿಯಾಜ್ ತಲೆ ಹಾಗೂ ಕಾಲಿಗೆ ತಲ್ವಾರ್ ನಿಂದ ಹಲ್ಲೆ ನಡೆಸಲಾಗಿತ್ತು. ಘಟನೆಯಲ್ಲಿ ತೀವ್ರ ಪ್ರಮಾಣದಲ್ಲಿ ಗಾಯಗೊಂಡಿದ್ದ ಇಮ್ತಿಯಾಜ್‍ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಮ್ತಿಯಾಜ್ ಮೇಲಿನ ಹಲ್ಲೆಯ ಪ್ರತಿಕಾರವಾಗಿ ಸಂಜೆ ವೇಳೆಗೆ ಹರೀಶ್ ಶೆಟ್ಟಿ ಮೇಲೆ ತಲವಾರ್ ದಾಳಿ ನಡೆಸಲಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೂರು ನೀಡಿದ್ದಕ್ಕೆ ಯುವತಿಯರಿಬ್ಬರ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

    ದೂರು ನೀಡಿದ್ದಕ್ಕೆ ಯುವತಿಯರಿಬ್ಬರ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ

    ಮಂಗಳೂರು: ಪೊಲೀಸ್ ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿದ್ರು ಎಂದು ಕಾಮುಕನೊರ್ವ ಯುವತಿಯರಿಬ್ಬರ ಅತ್ಯಾಚಾರ ಮಾಡಿ ಕೊಲೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ ನಡೆದಿದೆ. ಈ ಮೊದಲು ಸಹ ಆರೋಪಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಗಂಡಿಬಾಗಿಲು ನಿವಾಸಿ ಥಾಮಸ್ ವಿರುದ್ಧ ಕೆಲ ದಿನಗಳ ಹಿಂದೆ ಅಕ್ಕ-ತಂಗಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಥಾಮಸ್ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದಾನೆ.

    ಉಜಿರೆ ಪಟ್ಟಣದಿಂದ ಕೆಲಸ ಮುಗಿಸಿ ಯುವತಿಯರು ಮನೆ ಕಡೆಗೆ ಆಟೋ ಹತ್ತಿದ್ದಾರೆ. ಆರೋಪಿ ಥಾಮಸ್ ಪಿಕ್ ಅಪ್ ವಾಹನ ಮೂಲಕ ಯುವತಿಯರಿದ್ದ ಆಟೋ ವನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಆಟೋ ಗಂಡಿಬಾಗಿಲು ಬಳಿ ಬರುತ್ತಿದ್ದಂತೆಯೇ ಥಾಮಸ್ ಪಿಕ್ ಅಪ್ ವಾಹನವನ್ನು ಆಟೋಗೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಯುವತಿಯರಿಬ್ಬರೂ ಆಟೋದಿಂದ ಹೊರಗೆ ಬಿದ್ದಿದ್ದು, ಥಾಮಸ್ ಹುಡುಗಿಯರಿಗೆ ಮನಬಂದಂತೆ ಕಚ್ಚಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಟೋ ಚಾಲಕ ಪೊಲೀಸರಿಗೆ ಕರೆ ಮಾಡುತ್ತಿದ್ದಂತೆಯೇ ಥಾಮಸ್ ಪರಾರಿಯಾಗಿದ್ದಾನೆ.

    ಸಂತ್ರಸ್ತ ಯುವತಿಯರಿಬ್ಬರು ಧರ್ಮಸ್ಥಳ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಯತ್ನ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಥಾಮಸ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಟೋ ಚಾಲಕನಿಗೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಸ್ಪತ್ರೆಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಆಟೋ ಚಾಲಕನ ಬಳಿ ವಿಚಾರಿಸಿಕೊಂಡಿದ್ದಾರೆ.

  • ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ-ವಿಚಾರವಾದಿ ಭಗವಾನ್‍ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು..?

    ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ-ವಿಚಾರವಾದಿ ಭಗವಾನ್‍ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು..?

    – ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

    ಉಡುಪಿ: ವಿಚಾರವಾದಿ, ಸಾಹಿತಿ ಪ್ರೋ. ಕೆ.ಎಸ್.ಭಗವಾನ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.

    ಗುಂಡುಗಳನ್ನು ನೀಡಿದ್ದು ಯಾರು?:
    ಭಗವಾನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಎರಡು ಜೀವಂತ ಗುಂಡುಗಳನ್ನು ನೀಡಿದ್ದನು. ನವೀನ್ ಬಳಿಯ ಎರಡು ಗುಂಡುಗಳನ್ನು ಪ್ರವೀಣ್ ಅಲಿಯಾಸ್ ಸುಜಿತ್ ಪಡೆದುಕೊಂಡಿದ್ದನು. ಪ್ರವೀಣ್ ಇದೇ ಗುಂಡುಗಳನ್ನು ನಿಹಾಲ್ ದಾದಾನಿಗೆ ತೋರಿಸಿದಾಗ, ಮುಂದೊಂದು ದಿನ ಧರ್ಮ ವಿರೋಧಿಗಳ ಸಮಾಪ್ತಿಗೆ ಗುಂಡುಗಳ ಉಪಯೋಗ ಆಗಲಿದೆ ಎಂದು ನಿಹಾಲ್ ದಾದಾ ಹೇಳಿದ್ದನು. ಗುಂಡುಗಳನ್ನು ಭದ್ರವಾಗಿ ಪ್ರವೀಣ್ ತನ್ನ ದಾವಣಗೆರೆಯ ಅಜ್ಜಿ ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದನು.

    ಬೆಳಗಾವಿಯಲ್ಲಿ ಸ್ಕೆಚ್:
    ಭಗವಾನ್ ಹತ್ಯೆಗೆ ಬೆಳಗಾವಿ ಸುಖಸಾಗರ್ ಹೋಟೆಲ್‍ನಲ್ಲಿ ಸ್ಕೆಚ್ ರೂಪಿಸಲಾಗಿತ್ತು. ಹೋಟೆಲ್‍ನಲ್ಲಿ ಪ್ರವೀಣ್ ಅಲಿಯಾಸ್ ಸುಜಿತ್, ಅಮೋಲ್ ಕಾಳೆ, ಅಮಿತ್ ದಗ್ವೇಕರ್ ನಿಹಾಲ್ ದಾದಾ, ಮನೋಹರ್ ಯಡವೆ ಎಲ್ಲರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು. ಕೆ.ಎಸ್.ಭಗವಾನ್ ಧರ್ಮಕ್ಕೆ ಅಪಮಾನ ಮಾಡುತ್ತಿರುವುದರಿಂದ ಅವರನ್ನ ಕೊಲೆ ಮಾಡಬೇಕೆಂದು ಎಲ್ಲರು ನಿರ್ಧರಿಸಿದ್ದರು.

    ಭಗವಾನ್ ಹತ್ಯೆ ಮಾಡಲು ಗುಂಡುಗಳು ಸಿದ್ಧವಾಗಿದ್ದವು ಆದ್ರೆ ಗನ್ ಸಿಕ್ಕಿರಲಿಲ್ಲ. ಅನಿಲ್ ಎಂಬಾತನಿಂದ ಏರ್ ಪಿಸ್ತೂಲ್ ಮತ್ತು ಏರ್‍ಗನ್ ಖರೀದಿ ಮಾಡಿದ್ದರು. ಏರ್ ಗನ್ ಖರೀದಿ ಮಾಡಲು ಆರೋಪಿ ಕೆ.ಟಿ.ನವೀನ್ ಧನ ಸಹಾಯ ಮಾಡಿದ್ದನು. ಬೆಳಗಾವಿಯಲ್ಲಿಯೇ ಏರ್‍ಗನ್ ಚಲಾಯಿಸುವ ತರಬೇತಿಯನ್ನು ಸಹ ಆರೋಪಿಗಳು ಪಡೆದುಕೊಂಡಿದ್ದರು.

    ಭಗವಾನ್ ಟಾರ್ಗೆಟ್ ಯಾಕೆ?:
    ಮೈಸೂರಿನ ಮೈಲಾರಿ ಹೋಟೆಲ್ ಬಳಿ ಆರೋಪಿಗಳೆಲ್ಲರೂ ಮತ್ತೊಮ್ಮೆ ನನ್ನ ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಇನ್ನು ಆರೋಪಿ ಕೆ.ಟಿ. ನವೀನ್ ಕುಮಾರ್‍ನನ್ನು ಎಲ್ಲೋ ನೋಡಿದ ಹಾಗಿದೆ. ಹಾಗಾಗಿ ನನ್ನ ಕೊಲೆಗೆ ಇವರೆಲ್ಲಾ ಸಂಚು ರೂಪಿಸಿರುವ ಸಾಧ್ಯತೆಗಳಿವೆ. ಹಿಂದೂ ಧರ್ಮದ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆ ಮತ್ತು ಶ್ರೀರಾಮ ಸೇನೆಯ ವಿಚಾರಣೆ ನಡೆಸಿ ಸತ್ಯಾಸತ್ಯೆತಯನ್ನು ಪತ್ತೆ ಹಚ್ಚಬೇಕೆಂದು ಕೆ.ಎಸ್.ಭಗವಾನ್ ಉಪ್ಪಾರ ಪೇಟೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಹಿಂದೂ ಸಂಘಟನೆಯ ಕಾರ್ಯಕರ್ತನಾಗಿದ್ದ ಪ್ರವೀಣ್ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದನು. ಯಾವ ಸಂಘಟನೆಯಲ್ಲಿ ಯಾರು ಮೂಲ ಹೆಸರುಗಳನ್ನು ಹೇಳುವಂತಿಲ್ಲ ಮತ್ತು ಕರೆಯುವಂತಿಲ್ಲ ಎಂದು ಎಲ್ಲ ಆರೋಪಿಗಳು ನಿರ್ಧರಿಸಿದ್ದರು. ಒಂದು ವೇಳೆ ಪೊಲೀಸರಿಗೆ ಯಾರಾದರೂ ಸಿಕ್ಕರೆ ನಮ್ಮ ಹೆಸರುಗಳು ಬಹಿರಂಗವಾಗಬಾರದು ಎಂಬ ಹಿನ್ನೆಲೆಯಲ್ಲಿ ಸಂಚು ರೂಪಿಸಿದ್ದರು. ನವೀನ್ ಬಂಧನದ ಬಳಿಕ ಬೆದರಿದ ಎಲ್ಲ ಆರೋಪಿಗಳಿಗೂ ತಪ್ಪಿಸಿಕೊಳ್ಳುವಂತೆ ಅಮಿತ್ ಸೂಚಿಸಿದ್ದನು.

    ಅಮಿತ್ ಸೂಚನೆಯಂತೆ ಎಲ್ಲರೂ ತಲೆ, ಮೀಸೆ ಬೋಳಿಸಿಕೊಂಡು ಗುರುತು ಸಿಗದಂತೆ ಮಹಾರಾಷ್ಟ್ರದಲ್ಲಿ ಅವಿತುಕೊಂಡಿದ್ದರು. ಬಹು ದಿನಗಳ ನಂತರ ದಾವಣಗೆರೆಗೆ ಆಗಮಿಸಿದ್ದ ಅಮೋಲ್ ಕಾಳೆ , ಬಸ್ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದನು.

    ಯಾರು ಅಮಿತ್ ದೆಗ್ವೇಕರ್?:
    ಸನಾತನ್ ಪ್ರಭಾತ್‍ನಲ್ಲಿ ಪ್ರೂಫ್ ರೀಡರ್ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಅಮಿತ್ ದೆಗ್ವೇಕರ್. ಹಿಂದೂ ಧರ್ಮದ ಬಗ್ಗೆ ಕಾಳಜಿಯುಳ್ಳ ಅಮಿತ್ ಮಠ, ಮಂದಿರ ಆಶ್ರಮಗಳಿಗೆ ಭೇಟಿ ಕೊಡುತ್ತಿದ್ದನು. ಅಮಿತ್ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಧರ್ಮದ ಕಾರ್ಯಗಳಲ್ಲಿ ತೊಡಗಿದ್ದನು. ಕರ್ನಾಟಕಕ್ಕೆ ಬಂದಾಗ ಪ್ರವೀಣ್ ಮತ್ತು ದಾದಾನ ಪರಿಚಯವಾಗಿತ್ತು. ಮುಂದೆ ಇದೇ ಪ್ರವೀಣ್ ಮೂಲಕ ನವೀನ್‍ಕುಮಾರನ ಸ್ನೇಹ ಸಂಪಾದಿಸಿದ್ದನು. ನವೀನ್ ಮೂಲಕವೇ ಧರ್ಮದ ರಕ್ಷಣೆಗೆ ಶಸ್ತ್ರ ಸಜ್ಜಿತ ಹೋರಾಟಕ್ಕೆ ಅಮಿತ್ ಇಳಿದಿದ್ದನು.

    ಮತ್ತೋರ್ವ ಆರೋಪಿ ಮನೋಹರ್ ಯಡವೆ ಸಹ ಧರ್ಮ ರಕ್ಷಣೆಯ ಹೋರಾಟಕ್ಕಾಗಿ ನವೀನ್‍ಗ್ಯಾಂಗ್ ಸೇರಿಕೊಂಡಿದ್ದನು. ಗ್ಯಾಂಗ್ ಸೇರುವ ಮುನ್ನ ಭಾರತೀಯ ಸೇನೆ, ವೀರ ಹೋರಾಟಗಾರ ಹೆಸರಿನಲ್ಲಿ ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿದ್ದನು.

  • ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ತಂಗಿಯ ಮೇಲೆ ಅಣ್ಣನಿಂದಲೇ ಹಲ್ಲೆ!

    ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ತಂಗಿಯ ಮೇಲೆ ಅಣ್ಣನಿಂದಲೇ ಹಲ್ಲೆ!

    ಹಾಸನ: ಆಸ್ತಿಗಾಗಿ ಸ್ವಂತ ಅಣ್ಣನೇ ತಂಗಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನಡೆದಿದೆ.

    ಲತಾ(38) ಗಂಭೀರವಾಗಿ ಗಾಯಗೊಂಡಿರುವ ತಂಗಿ. ಲತಾ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇದೀಗ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಅಣ್ಣ ಚಂದ್ರಶೇಖರ್ ಪರಾರಿಯಾಗಿದ್ದಾನೆ.

    ಲತಾ ಅದೇ ಗ್ರಾಮ ಪ್ರೇಮಾನಂದ ಜೊತೆ ಲವ್ ಮ್ಯಾರೇಜ್ ಆಗಿದ್ದರು. ತವರು ಮನೆಯೊಂದಿಗೆ ಸಂಪರ್ಕ ಇರಲಿಲ್ಲ. ಆದರೆ ಆಸ್ತಿಯಲ್ಲಿ ಪಾಲು ಬಯಸಿ ಇತ್ತೀಚೆಗೆ ಕೋರ್ಟ್ ಮೆಟ್ಟಿಲೇರಿದ್ದರು. ಚಂದ್ರಶೇಖರ್ ಗೆ ಕೋರ್ಟ್ ನಿಂದ ನೋಟೀಸ್ ಜಾರಿಯಾಗಿತ್ತು.

    ಇದರಿಂದ ಆಕ್ರೋಶಗೊಂಡ ಚಂದ್ರಶೇಖರ್ ಮೊದಲು ಕಾರಿಂದ ಡಿಕ್ಕಿ ಹೊಡೆಸಿ, ನೆಲಕ್ಕೆ ಬಿದ್ದ ಕೂಡಲೇ ಮುಖ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ನಂತರ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಇದೀಗ ಪರಾರಿಯಾಗಿದ್ದಾನೆ. ಸದ್ಯ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.