Tag: Mundagod

  • ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

    ಕಾರವಾರ: ಯೂಟ್ಯೂಬರ್ ಮುಕಳೆಪ್ಪ ಪ್ರಕರಣದಲ್ಲಿ ಮುಂಡಗೋಡಿನ ವಿವಾಹ ನೋಂದಣಾಧಿಕಾರಿ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನೋಂದಣಾಧಿಕಾರಿ ಕಚೇರಿಗೆ ಬೀಗ ಹಾಕಿ ಕಚೇರಿ ಸಿಬ್ಬಂದಿಯೊಂದಿಗೆ ನಡೆದ ಘಟನೆ ಜರುಗಿದೆ.

    ಸೆ.22 ರಂದು ಶ್ರೀರಾಮ ಸೇನೆಯೊಂದಿಗೆ ಗಾಯತ್ರಿ ತಾಯಿ ಶಿವಕ್ಕ ನೋಂದಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇದರ ನಂತರ ನೋಂದಣಾಧಿಕಾರಿ ಹೇಮಾ ಸೇರಿ ಏಳು ಜನರ ವಿರುದ್ಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ನೋಂಣಾಧಿಕಾರಿ ಹೇಮಾ ಅವರು ದಾಖಲೆ ಪರಾಮರ್ಷಿಸದೇ ನಿಯಮ ಮೀರಿ ಹಣ ಪಡೆದು ವಿವಾಹ ನೋಂದಣಿ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಇಂದು ಕಚೇರಿಗೆ ಯಾವೊಬ್ಬ ಸಿಬ್ಬಂದಿಯೂ ಬಾರದೇ ಕಚೇರಿಗೆ ಬೀಗ ಹಾಕಲಾಗಿತ್ತು.

    ಕಚೇರಿಗೆ ಬಂದ ಜನ ಬೀಗ ಹಾಕಿರುವುದನ್ನು ನೋಡಿ ಕೆಲಸ ಮಾಡಿಸಿಕೊಳ್ಳಲಾಗದೇ ಹಿಂತಿರುಗುವಂತಾಯಿತು. ಕಚೇರಿಯಲ್ಲಿ ಅಧಿಕಾರಿ ಸೇರಿ ಒಟ್ಟು ನಾಲ್ಕು ಜನ ಇದ್ದು, ಕಚೇರಿ ಸಮಯದಲ್ಲೇ ಹೀಗೆ ಬೀಗ ಹಾಕಿ ಹೋಗಿರುವುದು ಚರ್ಚೆಗೆ ಎಡೆಮಾಡಿಕೊಟ್ಟಿದೆ.

  • ಮುಂಡಗೋಡು ವಸತಿ ಶಾಲೆಯ 75 ವಿದ್ಯಾರ್ಥಿಗಳಿಗೆ ಮಂಗನಬಾವು ಸೋಂಕು

    ಮುಂಡಗೋಡು ವಸತಿ ಶಾಲೆಯ 75 ವಿದ್ಯಾರ್ಥಿಗಳಿಗೆ ಮಂಗನಬಾವು ಸೋಂಕು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ವಸತಿ ಶಾಲೆಯಲ್ಲಿ ಒಂದೇ ದಿನದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಯಿಲೆ ಕಾಣಿಸಿಕೊಂಡು ಮುಂಡಗೋಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮುಂಡಗೋಡಿನ ಶಿರಸಿ ರಸ್ತೆಯಲ್ಲಿರುವ ಬೃಂದಾವನ ವಸತಿ ಬಡಾವಣೆಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಸತಿ ಶಾಲೆಯಲ್ಲಿ 6 ರಿಂದ 10 ನೇ ತರಗತಿ ಓದುತ್ತಿರುವ 205 ವಿದ್ಯಾರ್ಥಿಗಳಿದ್ದಾರೆ.

    ಇವರ ಪೈಕಿ ಬುಧವಾರ 25 ಜನರಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇದೀಗ ಮಂಗನಬಾವು ಕಾಯಿಲೆ ಇತರೆ ವಿದ್ಯಾರ್ಥಿಗಳಿಗೂ ಹಬ್ಬಿದ್ದು, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೋಂಕಿಗೆ ಒಳಗಾಗಿದ್ದಾರೆ.

    ಒಟ್ಟು 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಈ ಮಂಗನಬಾವು ಕಾಣಿಸಿಕೊಂಡಿದ್ದು, ಸದ್ಯ ಕೆಲವು ಮಕ್ಕಳಿಗೆ ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆರೋಗ್ಯಾಧಿಕಾರಿ ಡಾ.ಭರತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿದ್ಯಾರ್ಥಿಗಳ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

    ಏಕಾಏಕಿ ಸೋಂಕು ನೀರು ಮತ್ತು ಸೋಂಕಿತರ ಸಂಪರ್ಕದಿಂದ ಬಂದಿರುವ ಸಾಧ್ಯತೆ ಇದ್ದು, ಆರೋಗ್ಯವಂತ ವಿದ್ಯಾರ್ಥಿಗಳು ಈ ಮಕ್ಕಳಿಂದ ದೂರ ಇರಲು ಸೂಚಿಸಲಾಗಿದೆ.

  • ಒಡೆದು ಹೋಯ್ತು ಚಿಗಳ್ಳಿ ಚೆಕ್ ಡ್ಯಾಮ್ – 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಸಾಧ್ಯತೆ

    ಒಡೆದು ಹೋಯ್ತು ಚಿಗಳ್ಳಿ ಚೆಕ್ ಡ್ಯಾಮ್ – 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಸಾಧ್ಯತೆ

    ಕಾರವಾರ: ಮಳೆಯಿಂದಾಗಿ ಉತ್ತರಕನ್ನಡದ ಮುಂಡಗೋಡಿನ ಚಿಗಳ್ಳಿ ಚೆಕ್ ಡ್ಯಾಮ್‍ಗೆ ಅಪಾರ ಪ್ರಮಾಣದಲ್ಲಿ ನೀರು ಹರಿದ ಬಂದ ಕಾರಣಕ್ಕೆ ಡ್ಯಾಮ್ ಒಡೆದು ಹೋಗಿದ್ದು, 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಆಗುವ ಸಾಧ್ಯತೆಯಿದೆ.

    ಭತ್ತ, ಜೋಳ ಬೆಳದಿರುವ ಮುಂಡಗೋಡಿನ 5 ಸಾವಿರ ಎಕ್ರೆ ಕೃಷಿ ಭೂಮಿ ಮುಳುಗಡೆ ಆಗುವ ಸಾಧ್ಯತೆ ಇದೆ. 2009ರಲ್ಲಿ ಈ ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿತ್ತು. ಆ ನಂತರ ಅದನ್ನು ಸರಿಪಡಿಸಲಾಗುತ್ತು. ಆದರೆ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾದ ಹಿನ್ನೆಲೆ ನೀರಿನ ಒತ್ತಡಕ್ಕೆ ಎರಡನೇ ಬಾರಿ ಚಿಗಳ್ಳಿ ಡ್ಯಾಮ್ ಒಡೆದಿದೆ.

    ಚೆಕ್ ಡ್ಯಾಮ್ ಆಸುಪಾಸಿನ ಕಡಗಿನವಾಡ ಗ್ರಾಮ ಸೇರಿದಂತೆ ಎರಡು ಹಳ್ಳಿಗಳು ಮುಳುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಹಶಿಲ್ದಾರ್ ಸೇರಿದಂತೆ ರಕ್ಷಣಾ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಈಗಾಗಲೇ ಚೆಕ್ ಡ್ಯಾಮ್‍ನ ಸುತ್ತಮುತ್ತಲ ಹಳ್ಳಿಗಳ ಜನರನ್ನು ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

    ಈ ಬಗ್ಗೆ ಡಿಸಿ ಡಾ. ಹರೀಶ್ ಕುಮಾರ್.ಕೆ ಅವರು ಪ್ರತಿಕ್ರಿಯಿಸಿ, ಚಿಗಳ್ಳಿ ಚೆಕ್ ಡ್ಯಾಮ್ ಒಡೆದಿರುವ ಬಗ್ಗೆ ಪ್ರಾಥಮಿಕ ವರದಿಯನ್ನು ತಹಶಿಲ್ದಾರ್ ಹಾಗೂ ಎಸಿ ಅವರಿಂದ ಪಡೆದಿದ್ದೇನೆ. ಈಗಾಗಲೇ ಅಲ್ಲಿನ ಸುತ್ತಮುತ್ತಲ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ಸೂಚಿಸಿದ್ದೇವೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ ಅಪಾರ ಪ್ರಮಾಣದಲ್ಲಿ ಕೃಷಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಡ್ಯಾಮ್‍ನಿಂದ ಹರಿದ ನೀರು ಬೇಡ್ತಿ ನದಿಯನ್ನು ಸೇರುತ್ತದೆ. ಹೀಗಾಗಿ ಜನರು ಆತಂಕ ಪಡಬೇಡಿ, ಸುಳ್ಳು ವದಂತಿಗಳಿಗೆ ಕವಿಕೊಡಬೇಡಿ, ಏನಾದರೂ ತೊಂದರೆಯಾದರೆ ನೋಡಿಕೊಳ್ಳಲು ರಕ್ಷಣಾ ತಂಡ ಈ ಪ್ರದೇಶ ಸುತ್ತಮುತ್ತಲೇ ಇದೆ ಎಂದು ಧೈರ್ಯ ಹೇಳಿದ್ದಾರೆ.