Tag: Mumbai Indians

  • ಚೆನ್ನೈ ಗೆದ್ದ ಎರಡು ಪಂದ್ಯಗಳ ಸಾಮ್ಯತೆ ಕುರಿತು ಭಾರೀ ಚರ್ಚೆ!

    ಚೆನ್ನೈ ಗೆದ್ದ ಎರಡು ಪಂದ್ಯಗಳ ಸಾಮ್ಯತೆ ಕುರಿತು ಭಾರೀ ಚರ್ಚೆ!

    ಚೆನ್ನೈ: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್ ಟೂರ್ನಿಗೆ ಹಿಂದಿರುಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯ ಆರಂಭದ ಎರಡು ಪಂದ್ಯಗಳಲ್ಲಿ ಕೊನೆಯ ಓವರ್ ನಲ್ಲಿ ಜಯ ಗಳಿಸಿದೆ. ಸದ್ಯ ಈ ಎರಡು ಪಂದ್ಯಗಳಲ್ಲಿ ನಡೆದಿರುವ ಸಾಮಾನ್ಯ ಅಂಶ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಹೌದು ಸಿಎಸ್‍ಕೆ ತಂಡ ಮುಂಬೈ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಕೊನೆಯ 24 ಎಸೆತಗಳಲ್ಲಿ 51 ರನ್ ಗಳಿಸಿಬೇಕಿತ್ತು. ಕಾಕತಾಳೀಯ ಎಂಬಂತೆ ಚೆನ್ನೈ ನಲ್ಲಿ ನಡೆದ ಕೋಲ್ಕತ್ತಾ ವಿರುದ್ಧದ ಎರಡನೇ ಪಂದ್ಯದಲ್ಲೂ 24 ಎಸೆತಗಳಲ್ಲಿ ಗೆ 51 ರನ್ ಹೊಡೆಯಬೇಕಿತ್ತು.

    ಮೊದಲ ಪಂದ್ಯದಲ್ಲಿ ಕೇರಿಬಿಯನ್ ಆಟಗಾರ ಬ್ರಾವೋ ಸ್ಫೋಟಕ ಬ್ಯಾಟಿಂಗ್ ನಡೆಸಿ 68 ರನ್(30 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಎರಡನೇ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ 56 ರನ್(23 ಎಸೆತ, 2 ಬೌಂಡರಿ, 5 ಸಿಕ್ಸರ್)ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಸದ್ಯ ಎರಡು ಪಂದ್ಯಗಳಲ್ಲಿ ನಡೆದಿರುವ ಕಾಕತಾಳೀಯ ಅಂಶದ ಕುರಿತು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ತವರಿನ ಪ್ರೇಕ್ಷಕರ ಮುಂದೆ ಮಂಗಳವಾರ ನಡೆದ ಪಂದ್ಯದಲ್ಲಿ ಮಿಂಚಿದ ಚೆನ್ನೈ ಐದು ವಿಕೆಟ್‍ಗಳಿಂದ ಗೆದ್ದಿತು. ಎಂಎ ಚಿದಂಬರಂ ಕ್ರೀಡಾಂಗಣದ ನಡೆದ ರೋಚಕ ಹಣಾಹಣಿಯಲ್ಲಿ 203 ರನ್‍ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ ಒಂದು ಎಸೆತ ಬಾಕಿ ಇರುವಾಗ ಗೆಲುವಿನ ರನ್ ಗಳಿಸಿತು. ಅಂತಿಮ ಓವರ್ ನಲ್ಲಿ 17 ರನ್ ಸಿಡಿಸುವ ಒತ್ತಡವನ್ನು ಚೆನ್ನೈ ಆಟಗಾರರು ಎದುರಿಸಿದ್ದರು. ಈ ವೇಳೆ ಕ್ರಿಸ್ ನಲ್ಲಿದ್ದ ಬ್ರಾವೋ, ಕೆಕೆಆರ್ ಬೌಲರ್ ವಿನಯ್ ಕುಮಾರ್ ಎಸೆದ ನೋಬಾಲ್ ಅನ್ನು ಸಿಕ್ಸರ್ ಸಿಡಿಸುವ ಮೂಲಕ ಮತ್ತೊಮ್ಮೆ ಸ್ಫೋಟಕ ಆಟವಾಡಿದರು. ಈ ವೇಳೆ ಬ್ಯಾಟ್ ಬೀಸಲು ತಡವರಿಸುತ್ತಿದ್ದ ಜಡೇಜಾ 5ನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿ 11 ರನ್(7 ಎಸೆತ, 1 ಸಿಕ್ಸರ್) ತಂಡಕ್ಕೆ ಜಯವನ್ನು ತಂದಿಟ್ಟರು. ಇದನ್ನೂ ಓದಿ: ಗೆಲುವಿನ ಆಟ ಮಾತ್ರ ನನ್ನದಾಗಿತ್ತು: ಕೊನೆಯ 11 ಎಸೆತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಬ್ರಾವೋ ಮಾತು

     

  • ಗೆಲುವಿನ ಆಟ ಮಾತ್ರ ನನ್ನದಾಗಿತ್ತು: ಕೊನೆಯ 11 ಎಸೆತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಬ್ರಾವೋ ಮಾತು

    ಗೆಲುವಿನ ಆಟ ಮಾತ್ರ ನನ್ನದಾಗಿತ್ತು: ಕೊನೆಯ 11 ಎಸೆತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಬ್ರಾವೋ ಮಾತು

    ಮುಂಬೈ: ಎರಡು ವರ್ಷಗಳ ಬಳಿಕ ಐಪಿಎಲ್ ಗೆ ರೀ ಎಂಟ್ರಿ ಕೊಟ್ಟ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನೊಂದಿಗೆ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದ್ದು, ಅಭಿಮಾನಿಗಳಿಗೆ ಆರಂಭದಲ್ಲೇ ಸಂತಸ ನೀಡಿದೆ.

    ವಾಂಖೇಡೆಯಲ್ಲಿ ಶನಿವಾರ ನಡೆದ ಐಪಿಎಲ್ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಬ್ರಾವೋ ಚೆನ್ನೈ ಗೆಲುವಿಗೆ ಕಾರಣರಾದರು. ಕೇವಲ 30 ಎಸೆತಗಳಲ್ಲಿ 68 ರನ್ ಸಿಡಿಸಿ ಭರ್ಜರಿ ಪ್ರದರ್ಶನ ನೀಡಿದರು.

    ಪಂದ್ಯದ ಬಳಿಕ ಮಾತನಾಡಿದ ಬ್ರಾವೋ, ತಾನು ಯಾವುದೇ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಲು ಇಷ್ಟ ಪಡುತ್ತೇನೆ. ಹಾಗೆಯೇ ಐಪಿಎಲ್‍ನಲ್ಲೂ ತಂಡದ ಗೆಲುವಿನೊಂದಿಗೆ ಶುಭಾರಂಭವಾಗಿದೆ. ಚೆನ್ನೈ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳು ತನ್ನ ಪ್ರದರ್ಶನಕ್ಕೆ ಪ್ರೇರಣೆ ಎಂದು ಹೇಳಿದರು.

    25 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರೂ ಸಂಭ್ರಮಾಚರಣೆ ಮಾಡಿಲ್ಲ ಯಾಕೆ ಎನ್ನುವ ಪ್ರಶ್ನೆಗೆ, ಬ್ಯಾಟಿಂಗ್ ವೇಳೆ ಪಂದ್ಯದ ಕೊನೆಯ ಓವರ್ ವರೆಗೂ ಆಡಲು ನಿರ್ಧರಿಸಿದ್ದೆ. ಅದರಂತೆ ಅರ್ಧ ಶತಕ ಪೂರೈಸಿದ ವೇಳೆಯೂ ಯಾವುದೇ ಸಂಭ್ರಮಾಚರಣೆ ಮಾಡಿಲ್ಲ. ತಂಡದ ಗೆಲುವು ಮುಖ್ಯವಾಗಿತ್ತು ಎಂದು ಉತ್ತರಿಸಿದರು.

    ಚೆನ್ನೈ ತಂಡ 75 ರನ್ ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡ ವೇಳೆ ಭರ್ಜರಿ ಬ್ಯಾಟಿಂಗ್ ನಡೆಸಿ ಬ್ರಾವೋ ತಂಡಕ್ಕೆ ಆಸರೆಯಾದರು. ಕೊನೆಯ 18 ಎಸೆತಗಳಲ್ಲಿ 47 ರನ್ ಗಳ ಅಗತ್ಯವಿತ್ತು. ಮಿಚೆಲ್‌ ಮೆಕ್‌ಕ್ಲೆನಗನ್‌ ಬೌಲಿಂಗ್ ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ 18ನೇ ಓವರ್ ನಲ್ಲಿ 20 ರನ್ ಕಲೆ ಹಾಕಿದರು. ಬಳಿಕ ಬೆಸ್ಟ್ ಡೆತ್ ಬೌಲರ್ ಎಂದು ಹೆಗ್ಗಳಿಕೆ ಪಡೆದ ಬುಮ್ರಾ ಬೌಲಿಂಗ್ ನಲ್ಲಿ 3 ಸಿಕ್ಸರ್ ಸಿಡಿಸಿ ತಂಡದ ಗೆಲುವು ಖಚಿತ ಪಡಿಸಿದರು. ಈ ಮೂಲಕ ಬುಮ್ರಾ ಬೌಲಿಂಗ್ ಓವರ್ ಒಂದರಲ್ಲಿ 3 ಸಿಕ್ಸರ್ ಸಿಡಿಸಿದ ಮೊದಲಿಗ ಎಂಬ ಹೆಗ್ಗಳಿಗೆ ಬ್ರಾವೋ ಪಾತ್ರರಾದರು.

    ಅಂತಿಮವಾಗಿ ಚೆನ್ನೈ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು. ಎರಡು ವರ್ಷಗಳ ಬಳಿಕ ಐಪಿಎಲ್ ಗೆ ಪ್ರವೇಶ ಪಡೆದ ಮೊದಲ ಪಂದ್ಯಲ್ಲೇ ಚೆನ್ನೈ ತಂಡ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದೆ. ಸ್ಫೋಟಕ ಬ್ಯಾಟಿಂಗ್ ನಡೆಸಿ 68 ರನ್(30 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿದ ಬ್ರಾವೋ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ತಂಡದ ಪರ ಸೂರ್ಯ ಕುಮಾರ್ ಯಾದವ್ 43, ಕೃಷ್ಣ 40, ಕೃಣಲ್ ಪಾಂಡ್ಯ 41 ರನ್ ನೇರವಿನಿಂದ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

  • ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    ಮುಂಬೈ: ಐಪಿಎಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ತಮ್ಮ ಮಗ ಅನಂತ್ ತೂಕ ಕಳೆದುಕೊಂಡ ಬಗೆಗಿನ ಗುಟ್ಟನ್ನು ಖಾಸಗಿ ಮಾಧ್ಯಮ ಸಮಾರಂಭದಲ್ಲಿ ತಿಳಿಸಿದ್ದಾರೆ.

    2013 ರಲ್ಲಿ ತಮ್ಮ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಗೆದ್ದು ಕೊಂಡಿತ್ತು. ಈ ವೇಳೆ ಅನಂತ್ ಜೊತೆ ಟ್ರೋಫಿ ಸ್ವೀಕರಿಸಲು ಸೂಚಿಸಿದ್ದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಗನ ತೂಕವನ್ನು ನೋಡಿ ಜನ ಟ್ರೋಲ್ ಮಾಡಲು ಆರಂಭಿಸಿದರು.

    ಟ್ರೋಲ್ ಆದ ಬಳಿಕ ನಮ್ಮ ಬಳಿ ಬಂದ ಅನಂತ್ ದೇಹದ ತೂಕ ಇಳಿಸಿಕೊಳ್ಳುವ ನಿರ್ಧಾರ ತಿಳಿಸಿದ್ದ. ಆದರೆ ಆತನ ಇಷ್ಟದಂತೆ ಮಾಡಲು ಸಮ್ಮತಿಸಿದೆ. ನಂತರ ಅನಂತ್ ಜಾಮ್ ನಗರದಲ್ಲಿ 500 ದಿನಗಳ ಕಾಲ ಉಳಿದುಕೊಂಡು ಪ್ರತಿನಿತ್ಯ 23 ಕಿಮೀ ನಡೆಯುವ ಮೂಲಕ ನೈಸರ್ಗಿಕವಾಗಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾನೆ ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ಮಕ್ಕಳಿಗೆ ಅವರ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿದರು.

    ಕಾರ್ಯಕ್ರಮದಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮಾತನಾಡಿದ ಅವರು, ನಮಗೇ ಹೊಸ ಹೊಸ ಅನ್ವೇಷಣೆ ಹಾಗೂ ಕಡಿಮೆ ಖರ್ಚಿನಲ್ಲಿ ಸಕಾರಗೊಳ್ಳುವ ಪರಿಣಾಮಕಾರಿ ವಿಧಾನಗಳ ಅಗತ್ಯವಿದೆ. ದೇಶದ 14-16 ವಯಸ್ಸಿನ ಹಲವು ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಸರಳ ವಾಕ್ಯವನ್ನು ಓದಲು ಬರುವುದಿಲ್ಲ. ರಿಲಯನ್ಸ್ ಫೌಂಡೇಶನ್ ಶೈಕ್ಷಣಿಕ ಕಾರ್ಯಕ್ರಮ ಮುಖಾಂತರ ಈಗಾಗಲೇ 1.2 ಕೋಟಿ ಮಕ್ಕಳಿಗೆ ಸಹಾಯ ಮಾಡಲಾಗಿದೆ. ನನ್ನ ಮುಂದಿನ ಜೀವನವನ್ನು ಭಾರತದ 20 ಮಕ್ಕಳಿಗೆ ಮೂಡಿಪಾಗಿಡುತ್ತೇನೆ. ಶಿಕ್ಷಕಿಯಾಗಿ ನನ್ನ ವೃತ್ತಿ ಜೀವನ ಆರಂಭ ಮಾಡಿದ್ದೆ, ಒಂದು ಬಾರಿ ಶಿಕ್ಷಕರಾದರೆ ಜೀವನ ಪರ್ಯಾಂತ ಶಿಕ್ಷಕರಾಗಿಯೇ ಇರುತ್ತಾರೆ. ತಾನು ಇದೇ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು.