Tag: Mumbai Indians

  • ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

    ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಶಾರುಖ್ ಖಾನ್

    ಕೋಲ್ಕತ್ತಾ: ಬಾಲಿವುಡ್ ಸೂಪರ್ ಸ್ಟಾರ್ ಹಾಗೂ ಕೆಕೆಆರ್ ತಂಡದ ಮಾಲೀಕರಾಗಿರುವ ಶಾರುಖ್ ಖಾನ್ ಕೆಕೆಆರ್ ತಂಡದ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮುಂಬೈ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ತಂಡ 102 ರನ್ ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು. ಈ ಕುರಿತು ಟ್ವೀಟ್ ಮಾಡಿರುವ ಶಾರುಖ್, ಕ್ರೀಡೆ ಎಂಬುವುದು ಸ್ಫೂರ್ತಿಯಾಗಿದ್ದು, ಇಲ್ಲಿ ಸೋಲು ಅಥವಾ ಗೆಲುವು ಸಾಮಾನ್ಯ. ಆದರೆ ತಂಡದಲ್ಲಿ ಇಂದು ಗೆಲುವಿನ ಸ್ಫೂರ್ತಿ ಕ್ಷೀಣಿಸಿದ್ದರಿಂದ ಮಾಲೀಕನಾಗಿ ತಾನು ಅಭಿಮಾನಿಗಳಲ್ಲಿ ಕ್ಷಮೆ ಕೇಳಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಉತ್ತಮ ರನ್ ರೆಟ್ ನೊಂದಿಗೆ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.

    ಕೋಲ್ಕತ್ತಾ ತಂಡ ಕಳೆದ ಮೂರು ದಿನಗಳಲ್ಲಿ ಮುಂಬೈ ವಿರುದ್ಧ ಮುಖಾಮುಖಿ ಆದ ಎರಡು ಪಂದ್ಯಗಳಲ್ಲೂ ಸೋಲುಂಡಿದೆ. ಅಲ್ಲದೇ ಇದುವರೆಗೂ ಐಪಿಎಲ್ ನಲ್ಲಿ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಪಂದ್ಯದಲ್ಲಿ ಸೋತಿದೆ. ಇದರಲ್ಲಿ 8 ಪಂದ್ಯಗಳನ್ನು ಸತತವಾಗಿ ಸೋತಿರುವುದು ವಿಶೇಷವಾಗಿದೆ.

    ಮುಂಬೈ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಯುವ ಆಟಗಾರ ಈಶಾನ್ ಕಿಶಾನ್ ಕೇವಲ 21 ಎಸೆತಗಳಲ್ಲಿ 62 ರನ್(7 ಬೌಂಡರಿ, 6 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಈಶಾನ್, ಯುವ ಆಟಗಾರರಿಗೆ ಟಾಪ್ ಆರ್ಡರ್ ನಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ತಂಡದ ನಾಯಕ ಹಾಗೂ ಮಾಲೀಕರ ಪ್ರೋತ್ಸಾಹ ಉತ್ತಮವಾಗಿದ್ದು, ತಾನು ಯಾವುದೇ ಆರ್ಡರ್ ನಲ್ಲಿ ಆಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.

  • ಧೋನಿ ಹೆಲಿಕಾಪ್ಟರ್ ಶಾಟ್ ಸಿಡಿಸಿ ಮಿಂಚಿದ ಈಶಾನ್ ಕಿಶಾನ್ -ವಿಡಿಯೋ ವೈರಲ್

    ಧೋನಿ ಹೆಲಿಕಾಪ್ಟರ್ ಶಾಟ್ ಸಿಡಿಸಿ ಮಿಂಚಿದ ಈಶಾನ್ ಕಿಶಾನ್ -ವಿಡಿಯೋ ವೈರಲ್

    ಕೋಲ್ಕತ್ತಾ: ಮುಂಬೈ ಇಂಡಿಯನ್ಸ್ ತಂಡದ ಯುವ ಆಟಗಾರ, ವಿಕೆಟ್ ಕೀಪರ್ ಈಶಾನ್ ಕಿಶಾನ್ ಕೋಲ್ಕತ್ತಾ ವಿರುದ್ಧ ನಡೆದ ಪಂದ್ಯದಲ್ಲಿ ಹೆಲಿಕಾಪ್ಟರ್ ಶಾಟ್ ಹೊಡೆದು ಸಿಕ್ಸರ್ ಸಿಡಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರ ವಿಶಿಷ್ಟ ಶೈಲಿಯ ಹೆಲಿಕಾಪ್ಟರ್ ಶಾಟ್ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಸದ್ಯ ಈಶಾನ್ ಕಿಶಾನ್ ಈ ರೀತಿ ಬ್ಯಾಟ್ ಬೀಸಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ಬುಧವಾರ ಈಡಾನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 21 ಎಸೆತ ಎದುರಿಸಿದ ಕಿಶಾನ್ 5 ಬೌಂಡರಿ, 6 ಸಿಕ್ಸರ್ ನೆರವಿನಿಂದ 62 ರನ್ ಸಿಡಿಸಿ ಮಿಂಚಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು.

    ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಈಶಾನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ 210 ರನ್ ಸಿಡಿಸಿತ್ತು. ಇದಕ್ಕೂ ಮುನ್ನ ಪಂದ್ಯದ 14ನೇ ಓವರ್ ಎಸೆದ ಕುಲ್‍ದೀಪ್ ಬೌಲಿಂಗ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ಈಶಾನ್ ಕಿಶಾನ್ 4 ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ 25 ರನ್ ಗಳಿಸಿ ಮಿಂಚು ಹರಿಸಿದ್ದರು.

    ಗೆಲುವಿನ ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ತಂಡವನ್ನು 108 ರನ್ ಗಳಿಗೆ ಅಲೌಟ್ ಆಗುವ ಮೂಲಕ ಮುಂಬೈ 102 ರನ್ ಗಳ ಬೃಹತ್ ಅಂತರದಿಂದ ಜಯಗಳಿಸಿತು. ಅಲ್ಲದೇ ಈ ಟೂರ್ನಿಯಲ್ಲಿ ಪಡೆದ ದಾಖಲೆ ಅಂತರದ ಜಯ ಎಂಬ ಹೆಗ್ಗಳಿಕೆಗೂ ಕಾರಣವಾಯಿತು. ಕೊಲ್ಕತ್ತಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಮುಂಬೈ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಮುಂಬೈ ನಾಲ್ಕನೇ ಸ್ಥಾನಕ್ಕೆ ಏರಿದೆ.

    https://twitter.com/videos_shots/status/994245698626334720?

    ಕೋಲ್ಕತ್ತಾ ವಿರುದ್ಧ ಮುಂಬೈ ಇದುವರೆಗೂ ಆಡಿರುವ 23 ಪಂದ್ಯಗಳಲ್ಲಿ 18 ರಲ್ಲಿ ಗೆಲುವು ಪಡೆದಿರುವುದು ವಿಶೇಷವಾಗಿದೆ. ಅಲ್ಲದೇ ಕೋಲ್ಕತ್ತಾ ಸತತ 8 ಪಂದ್ಯಗಳಲ್ಲಿ ಮುಂಬೈ ವಿರುದ್ಧ ಸೋಲುಂಡಿದೆ.

    ಕ್ಯಾಪ್ಟನ್ ಕೂಲ್ ಧೋನಿ ಹೆಲಿಕಾಪ್ಟರ್ ಶಾಟ್ ಹಿಂದೆ ನೋವಿನ ಕಥೆಯಿದೆ. ಧೋನಿ ಅವರಿಗೆ ಈ ರೀತಿಯ ಸಿಕ್ಸರ್ ಹೊಡೆಯುವುದನ್ನು ಕಲಿಸಿಕೊಟ್ಟವರು ಸ್ನೇಹಿತ ಮಾಜಿ ರಣಜಿ ಆಟಗಾರ ಸಂತೋಷ್ ಲಾಲ್. ಧೋನಿ ಮತ್ತು ಸಂತೋಷ್ ಲಾಲ್ ಈ ಹಿಂದೆ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ್ ಲಾಲ್ ಉತ್ತಮ ಬ್ಯಾಟ್ಸ್ ಮನ್ ಆಗಿದ್ದರು. ಇಬ್ಬರು ಒಟ್ಟಿಗೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಧೋನಿಗೆ ಹೆಲಿಕಾಪ್ಟರ್ ಶಾಟ್ ಹೊಡೆಯುವುದನ್ನು ಹೇಳಿಕೊಟ್ಟಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಂತೋಷ್ 2013ರ ಜೂನ್‍ನಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಧೋನಿಯ ಹೆಲಿಕಾಪ್ಟರ್ ಶಾಟ್ ಪ್ರಯತ್ನದಲ್ಲಿ ಸೆಹ್ವಾಗ್, ಬ್ರೇಟ್ ಲೀ ಫೇಲ್: ವಿಡಿಯೋ

     

  • ಉತ್ತಪ್ಪ ಕ್ಯಾಚ್ ಮಿಸ್ ಆಗಿದ್ದಕ್ಕೆ ಮಯಾಂಕ್ ಮೇಲೆ ಕೋಪಗೊಂಡ ಹಾರ್ದಿಕ್ – ವಿಡಿಯೋ

    ಉತ್ತಪ್ಪ ಕ್ಯಾಚ್ ಮಿಸ್ ಆಗಿದ್ದಕ್ಕೆ ಮಯಾಂಕ್ ಮೇಲೆ ಕೋಪಗೊಂಡ ಹಾರ್ದಿಕ್ – ವಿಡಿಯೋ

    ಮುಂಬೈ: ಕೊಲ್ಕತ್ತಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಆಟಗಾರ ಉತ್ತಪ್ಪ ನೀಡಿದ್ದ ಕ್ಯಾಚ್ ಮುಂಬೈ ಯುವ ಆಟಗಾರ ಮಯಾಂಕ್ ಮಾರ್ಕಂಡೆ ಡ್ರಾಪ್ ಮಾಡಿದಕ್ಕೆ ಹಾರ್ದಿಕ್ ಪಾಂಡ್ಯ ಕೋಪ ಪ್ರದರ್ಶಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ 6ನೇ ಓವರ್ ವೇಳೆ 4 ರನ್ ಗಳಿಸಿದ್ದ ಉತ್ತಪ್ಪ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಈ ವೇಳೆ ಮಯಾಂಕ್ ಕೈಗೆ ಬಂದಿದ್ದ ಬಾಲನ್ನು ಹಿಡಿಯಲು ವಿಫಲರಾಗಿದ್ದರು. ಇದರಿಂದ ಕ್ಷಣ ಮಾತ್ರ ಶಾಕ್ ಗೆ ಒಳಗಾದ ಹಾರ್ದಿಕ್, ಮಾರ್ಕಂಡೆ ವಿರುದ್ಧ ಕೋಪ ಪ್ರದರ್ಶಿಸಿದರು. ಜೀವದಾನ ಪಡೆದ ಬಳಿಕ ಉತ್ತಪ್ಪ ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದರು. ಕೇವಲ 35 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅರ್ಧ ಶತಕ (54 ರನ್) ಸಿಡಿಸಿದರು.

    ಸದ್ಯದ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯದ ಮುಂಬೈ ಉಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ಕನಸನ್ನು ಉಳಿಸಿಕೊಳ್ಳುವ ಒತ್ತಡದಲ್ಲಿದೆ. ಅದ್ದರಿಂದ ಆನ್ ಫೀಲ್ಡ್ ನಲ್ಲಿ ಮಾಡುವ ಪ್ರತಿ ತಪ್ಪಿಗೂ ತಂಡ ಭಾರೀ ದಂಡ ತೆರಬೇಕಾಗುತ್ತದೆ. ಸದ್ಯ ಕೆಕೆಆರ್ ವಿರುದ್ಧ ಗೆಲುವು ಪಡೆದ ಮುಂಬೈ ಆಡಿರುವ 10 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನ ಪಡೆದಿದೆ.

    4 ಸಾವಿರ ರನ್: ಮುಂಬೈ ವಿರುದ್ಧ 54 ರನ್ ಗಳೊಂದಿಗೆ ರಾಬಿನ್ ಉತ್ತಪ್ಪ ಐಪಿಎಲ್ ನಲ್ಲಿ 4 ಸಾವಿರ ರನ್ ಪೂರೈಸಿ ಅತಿ ಹೆಚ್ಚು ರನ್ ಗಳಿಸಿದ 5ನೇ ಆಟಗಾರ ಎನಿಸಿಕೊಂಡರು. ಈ ಮೂಲಕ ಡೇವಿಡ್ ವಾರ್ನರ್ ರನ್ನು ಹಿಂದಿಕ್ಕಿದರು. ಒಟ್ಟು 159 ಪಂದ್ಯಗಳಲ್ಲಿ 29.25 ಸರಾಸರಿಯಲ್ಲಿ 4,37 ರನ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ರೈನಾ (4,801 ರನ್), ಕೊಹ್ಲಿ (4,775 ರನ್) ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದಿದ್ದಾರೆ.

  • ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಇಂದೋರ್: 2018 ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಬಳಗ ಉತ್ತಮ ಆರಂಭ ಪಡೆದಿದ್ದರು, ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.

    ಪಂಜಾಬ್ ವಿರುದ್ಧದ ಗೆಲುವುನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 300 ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಐಪಿಎಲ್ ಚೇಸಿಂಗ್ ವೇಳೆ ಗೆಲುವು ಪಡೆದ ತಂಡದ ಪರ 17 ಬಾರಿ ಔಟಾಗದೆ ಉಳಿದ ಆಟಗಾರ ಎಂಬ ದಾಖಲೆಯನ್ನು ಬರೆದರು.

    ರೋಹಿತ್ ಶರ್ಮಾ ಒಟ್ಟಾರೆ ಟಿ20 ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ್ದು, ಅಂತರಾಷ್ಟ್ರೀಯ ಹಾಗೂ ದೇಶಿಯ ಟೂರ್ನಿಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಕ್ರಿಸ್ ಗೇಲ್ (844 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಚೇಸಿಂಗ್ ವೇಳೆ 16 ಬಾರಿ ನಾಟೌಟ್ ಆಗಿ ಉಳಿದಿದ್ದ ಗೌತಮ್ ಗಂಭೀರ್ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9 ಪಂದ್ಯಗಳಿಂದ 6 ಅಂಕ ಪಡೆದು 5ನೇ ಸ್ಥಾನ ಪಡೆದಿದೆ. ಪಂಜಾಬ್ ವಿರುದ್ಧ ಕಣಕ್ಕೆ ಇಳಿಯಲು ಅವಕಾಶ ಪಡೆದ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅರ್ಧ ಶತಕ ಸಿಡಿಸಿದ್ದರು. 47 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಮಿಂಚಿದರು.

  • ಧೋನಿಗೆ ಮುಂಬೈ ಅಭಿಮಾನಿಯಿಂದ ವಿಶೇಷ ಗೌರವ- ಇಂಟರ್‌ನೆಟ್ ನಲ್ಲಿ ಫುಲ್ ವೈರಲ್ ಆಯ್ತು ವಿಡಿಯೋ

    ಧೋನಿಗೆ ಮುಂಬೈ ಅಭಿಮಾನಿಯಿಂದ ವಿಶೇಷ ಗೌರವ- ಇಂಟರ್‌ನೆಟ್ ನಲ್ಲಿ ಫುಲ್ ವೈರಲ್ ಆಯ್ತು ವಿಡಿಯೋ

    ಮುಂಬೈ: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಧೋನಿ ಸ್ಟೇಡಿಯಂಗೆ ಬರುತ್ತಿದ್ದಂತೆ ಮುಂಬೈ ಜೆರ್ಸಿ ಮೇಲೆ ಸಿಎಸ್‍ಕೆ ಜೆರ್ಸಿ ಧರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿಎಸ್‍ಕೆ ಫ್ಯಾನ್ ಕ್ಲಬ್ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಹಾಕಿದ್ದು, ಧೋನಿ ಮೈದಾನಕ್ಕೆ ಬರುತ್ತಿದ್ದಂತೆ ಅಭಿಮಾನಿ ಸಿಎಸ್‍ಕೆ ಜೆರ್ಸಿ ತೊಟ್ಟಿದ್ದಾನೆ. ಜೆರ್ಸಿ ಬದಲಿಸಿದಲ್ಲದೇ “ಧೋನಿ, ಧೋನಿ” ಎಂದು ಜೋರಾಗಿ ಕಿರುಚಿ ತಂಡವನ್ನು ಚಿಯರ್ ಮಾಡಿದ್ದಾನೆ.

    ಅಭಿಮಾನಿಯ ಈ ವರ್ತನೆಯನ್ನು ನೋಡಿದ ಕೆಲವರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಸಿಎಸ್‍ಕೆ ಫ್ಯಾನ್ ಕ್ಲಬ್ ಟ್ವಿಟ್ಟರಿನಲ್ಲಿ ಹಾಕಿ, ಧೋನಿ ಬ್ಯಾಟಿಂಗ್ ಮಾಡಲು ಬಂದರೆ ಆಗ ಮುಂಬೈ ಇಂಡಿಯನ್ಸ್ ಫ್ಯಾನ್ಸ್ ಸ್ಟೇಡಿಯಂನನ್ನು ಹಳದಿ ಮಾಡುತ್ತಾರೆ. ಇದರಿಂದ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಟ್ವೀಟ್ ಮಾಡಿದೆ.

    ವಿಡಿಯೋದಲ್ಲಿ ಕಾಣಿಸಿಕೊಂಡ ಕುನಾಲ್ ಸಾಮಂತ್ ಮುಂಬೈ ನಿವಾಸಿಯಾಗಿದ್ದು, ನಾನು ಜೆರ್ಸಿಯನ್ನು ಬದಲಾಯಿಸಿದ್ದು ಯಾಕೆ ಎನ್ನುವುದನ್ನು ಟ್ವೀಟ್ ಮಾಡಿ ಹೇಳಿದ್ದಾರೆ.

    “ನಾನು ಧೋನಿಗೆ ಗೌರವ ನೀಡಲು ಈ ರೀತಿ ಮಾಡಿದೆ. ಅವರು ಭಾರತದ ಅಭಿಮಾನಿಗಳಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನಾನು ಯಾವಾಗಲೂ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ, ಏಕೆಂದರೆ ನಾನು ಮುಂಬೈ ನಿವಾಸಿ. ಆದರೆ ಧೋನಿ ನಮಗಾಗಿ ಮಾಡಿರುವುದನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ಈ ವರ್ತನೆಯಿಂದ ನಿಮಗೆ ಬೇಸರವಾಗಿದ್ದರೆ, ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದಾರೆ.

  • ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

    ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿದ್ರೂ ಔಟ್: ಮೂರನೇ ಅಂಪೈರ್ ಎಡವಟ್ಟು

    ಮುಂಬೈ: ಆರ್‌ಸಿಬಿ ಮುಂಬೈ ನಡುವಿನ ಪಂದ್ಯದಲ್ಲಿ ಉಮೇಶ್ ಯಾದವ್ ಔಟ್ ಪರಿಶೀಲನೆ ವೇಳೆ 3ನೇ ಅಂಪೈರ್ ಪ್ರಮಾದ ಎಸಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾದ ಬಳಿಕ ಪ್ರಸ್ತುತ ಬುಮ್ರಾ ಎಸೆತದಲ್ಲಿ ಯಾದವ್ ಔಟ್ ನೀಡಿರುವ ವೇಳೆ 3ನೇ ಅಂಪೈರ್ ಮಾಡಿರುವ ಪ್ರಮಾದ ಭಾರೀ ಚರ್ಚೆಗೆ ಕಾರಣವಾಗಿದೆ.

    ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನೆತ್ತಿದ್ದ ಆರ್‌ಸಿಬಿ 18 ಓವರ್ ಅಂತ್ಯಕ್ಕೆ 8 ವಿಕೆಟ್ ಗೆ 137 ರನ್ ಗಳಿಸಿತ್ತು. ಈ ವೇಳೆ ಸ್ಟ್ರೇಕ್ ನಲ್ಲಿದ್ದ ಉಮೇಶ್ ಯಾದವ್ ಬುಮ್ರಾ ಅವರ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಆದರೆ ಈ ವೇಳೆ ನೋಬಾಲ್ ಚೆಕ್ ಮಾಡಲು 3ನೇ ಅಂಪೈರ್ ಗೆ ಮನವಿ ಸಲ್ಲಿಸಲಾಗಿತ್ತು. ವಿಡಿಯೋ ಪರಿಶೀಲನೆ ವೇಳೆ ನಾನ್ ಸ್ಟ್ರೈಕರ್ ನಲ್ಲಿ ಉಮೇಶ್ ಯಾದವ್ ನಿಂತಿರುವುದು ಸೆರೆಯಾಗಿದ್ದರೂ ಅಂಪೈರ್ ಔಟ್ ಎಂದು ಘೋಷಿಸಿದ್ದರು.

    ಎಡವಟ್ಟು ಆಗಿದ್ದು ಎಲ್ಲಿ?
    ಅಂಪೈರ್ ಉಮೇಶ್ ಯಾದವ್ ಎಸೆತವನ್ನು ಪರಿಶೀಲನೆ ನಡೆಸುವ ಬದಲು ಕೊಹ್ಲಿ ಆಡಿದ ಎಸೆತವನ್ನು ಪರಿಶೀಲನೆ ನಡೆಸಿದ್ದರು. ಆದರೆ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಸದ್ಯ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣದಲ್ಲಿ 3 ನೇ ಅಂಪೈರ್ ಮಾಡಿದ ಪ್ರಮಾದ ಬೆಳಕಿಗೆ ಬಂದಿದೆ.

    ಇದೇ ಮೊದಲಲ್ಲ: ಪಂದ್ಯದ ಸಂದರ್ಭದಲ್ಲಿ 3ನೇ ಅಂಪೈರ್ ಈ ರೀತಿ ಪ್ರಮಾದ ಎಸಗಿರುವುದು ಇದೇ ಮೊದಲಲ್ಲ. ಈ ಹಿಂದೆ 2011 ರಲ್ಲೂ ಇಂತಹ ಘಟನೆ ನಡೆದಿತ್ತು. ವಾಂಖೆಡೆ ಕ್ರೀಡಾಂಗಣದಲ್ಲಿ ಅಮಿತ್ ಮಿಶ್ರಾ ಅವರ ಬೌಲಿಂಗ್ ನಲ್ಲಿ ಸಚಿನ್ ರನ್ನು ಔಟ್ ಎಂದು ತೀರ್ಪು ನೀಡಲಾಗಿತ್ತು. ಆದರೆ ನೋಬಾಲ್ ಪರಿಶೀಲನೆ ವೇಳೆ ಸಚಿನ್ ನಾನ್ ಸ್ಟ್ರೈಕ್ ನಲ್ಲಿದ್ದ ವಿಡಿಯೋ ಪರಿಶೀಲನೆ ನಡೆಸಿ ಔಟ್ ಎಂದು ತೀರ್ಪು ನೀಡಲಾಗಿತ್ತು. ಈ ಎಡವಟ್ಟಿಗೆ ಸ್ಪಷ್ಟನೆ ನೀಡಿದ್ದ ಐಪಿಎಲ್ ಆಡಳಿತ ಮಾನವ ಸಹಜ ತಪ್ಪಿನಿಂದಾಗಿ ತೀರ್ಪು ಪ್ರಕಟವಾಗಿದೆ. ತಾಂತ್ರಿಕ ಸಮಸ್ಯೆಯಿಂದಲೂ ನಡೆದಿರುವ ಸಾಧ್ಯತೆ ಇದೆ. ಅಂಪೈರ್ ಬಳಿಯಿದ್ದ ಕಂಪ್ಯೂಟರ್ ಪ್ಯಾಡ್ ಸಹ ಇದಕ್ಕೆ ಕಾರಣವಾಗಿರಬಹುದು ಎಂದು ತಿಳಿಸಿತ್ತು.

  • ಲಾಸ್ಟ್ ಬಾಲ್ ಫಿನಿಷ್- ಡೆಲ್ಲಿ ಡೇರ್ ಡೆವಿಲ್ಸ್ ಗೆ ರೋಚಕ ಗೆಲುವು

    ಲಾಸ್ಟ್ ಬಾಲ್ ಫಿನಿಷ್- ಡೆಲ್ಲಿ ಡೇರ್ ಡೆವಿಲ್ಸ್ ಗೆ ರೋಚಕ ಗೆಲುವು

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸತತ ಎರಡು ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿದೆ.

    ಗೆಲ್ಲಲು 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡ ಆರಂಭಿಕ ಜೇಸನ್ ರಾಯ್ ಬಿರುಸಿನ ಅರ್ಧ ಶತಕ 91 ರನ್ (53 ಎಸೆತ, ತಲಾ 6 ಬೌಂಡರಿ, 6 ಸಿಕ್ಸರ್) ಹಾಗೂ ರಿಷಬ್ ಪಂತ್ (47) ಬ್ಯಾಟಿಂಗ್ ನೆರವಿನೊಂದಿಗೆ ಗೆಲುವು ಪಡೆಯಿತು.

    ಡೆಲ್ಲಿ ಪರ ಉತ್ತಮ ಆರಂಭ ನೀಡಿದ ರಾಯ್ ಹಾಗೂ ಗಂಭೀರ್ ಜೋಡಿ 50 ರನ್ ಗಳ ಜೊತೆಯಾಟ ನೀಡಿತು. ಈ ವೇಳೆ ನಾಯಕ ಗಂಭೀರ್ 15 ರನ್ ಗಳಿಸಿ ರೆಹಮಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 25 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್  ನೆರವಿನಿಂದ 47 ರನ್ ಸಿಡಿಸಿ ಕುನಲ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು.

    ಬಳಿಕ ಆರಂಭಿಕ ರಾಯ್ ರನ್ನು ಕೂಡಿ ಕೊಂಡ ಶೇಯಸ್ ಅಯ್ಯರ್ (27 ರನ್) ಡೆಲ್ಲಿ ಗೆಲುವಿಗೆ ಪ್ರಮುಖ ಕಾರಣರಾದರು. ಕೊನೆಯ 6 ಓವರ್ ಗಳಲ್ಲಿ 58 ರನ್ ಗಳಿಸುವ ಗುರಿ ಪಡೆದ ಈ ಜೋಡಿ ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೆಯ 6 ಎಸೆತಗಳಲ್ಲಿ 11 ರನ್ ಗಳಿಸುವ ಒತ್ತಡದಲ್ಲಿದ್ದ ರಾಯ್, ಬೌಲರ್ ರೆಹಮಾನ್ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಆದರೆ ಬಳಿಕ ರೆಹಮಾನ್ ಮೂರು ಎಸೆತಗಳು ಡಾಟ್ ಮಾಡುವ ಮೂಲಕ ಪಂದ್ಯದ ಕೊನೆಯ ಎಸೆತವರೆಗೆ ರೋಚಕತೆ ಉಳಿಯುವಂತೆ ಮಾಡಿದರು. ಕೊನೆಯ ಎಸೆತದಲ್ಲಿ ರಾಯ್ ಒಂದು ರನ್ ಗಳಿಸಿ ಡೆಲ್ಲಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯುವಲ್ಲಿ ಕಾರಣರಾದರು. ಮುಂಬೈ ಪರ ಪಾಂಡ್ಯ 2, ರೆಹಮಾನ್ 1 ವಿಕೆಟ್ ಪಡೆದರು. ಹಾಲಿ ಚಾಂಪಿಯನ್ ಮುಂಬೈ ಟೂರ್ನಿಯಲ್ಲಿ ಸತತ 3ನೇ ಸೋಲು ಪಡೆಯಿತು.

    ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮುಂಬಯಿ ಇಂಡಿಯನ್ಸ್ ಪರ ಕಣಕ್ಕೆ ಇಳಿದ ಆರಂಭಿಕರಾದ ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಎವಿನ್ ಲೂಯಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ಆರಂಭ ನೀಡಿದರು.

    ಮೊದಲ ಪವರ್ ಪ್ಲೇ ನಲ್ಲಿ ಡೆಲ್ಲಿ ಬೌಲರ್ ಗಳ ಬೆವರಿಳಿಸದ ಲೂಯಿಸ್, ಯಾದವ್ ಜೋಡಿ 84 ರನ್ ಸಿಡಿಸಿದರು. ಅಲ್ಲದೇ ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಪರ ದಾಖಲೆ ನಿರ್ಮಿಸಿತು. ಈ ವೇಳೆ 32 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನೊಂದಿಗೆ 53 ರನ್ ಗಳಿಸಿದ್ದ ಯಾದವ್ ಹಾಗೂ 48 ರನ್ ಗಳಿಸಿದ್ದ ಎಲ್ವಿನ್ ಲೂಯಿಸ್ ರಾಹುಲ್, ತಿವಟಿಯ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. ಮುಂಬೈ ಮೊದಲ 6 ಓವರ್ ರನ್ – 15, 10, 15, 12, 14, 18 ಒಟ್ಟು 84 ರನ್

    ಇತ್ತ ಬಿರುಸಿನ ಬ್ಯಾಟಿಂಗ್ ನಡೆಸಿದ ಇಶನ್ ಕಿಶನ್ ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 44 ರನ್ ಸಿಡಿಸಿ ತಂಡದ ಮೊತ್ತವನ್ನು 15 ಓವರ್ ಗಳಲ್ಲಿ 160 ರನ್ ಗಡಿದಾಟಲು ನೆರವಾದರು. ಈ ವೇಳೆ ಬೌಲರ್ ಡೆನಿಯಲ್ ಕ್ರಿಸ್ಟನ್ ಎಸೆತದಲ್ಲಿ ಬಾರಿ ಒಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮರು ಎಸೆತದಲ್ಲೇ ಪೊಲಾಡ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.

    ಬಳಿಕ ಬಂದ ನಾಯಕ ರೋಹಿತ್ ಶರ್ಮಾ (18), ಕುಶಲ್ ಪಾಂಡ್ಯ (11) ಹೋರಾಟ ಬಹುಬೇಗ ಅಂತ್ಯವಾಯಿತು. ಬೌಲರ್ ಗಳಾದ ಧನಂಜಯ್ ಹಾಗೂ ಮಾರ್ಕಡೆ ತಲಾ ರನ್ ಗಳಿಸಿ ಆಜೇಯರಾಗಿ ಉಳಿದರು. ಡೆಲ್ಲಿ ಪರ ಬೌಲ್ಟ್, ಡೆನಿಯಲ್, ರಾಹುಲ್ ತಲಾ 2, ಶಮಿ 1 ವಿಕೆಟ್ ಪಡೆದರು.

  • 1 ವಿಕೆಟ್ ಪಡೆದು ಮಿಂಚಿದ ರಶೀದ್ ಖಾನ್‍ಗೆ ಪಂದ್ಯಶ್ರೇಷ್ಠ ಗೌರವ!

    1 ವಿಕೆಟ್ ಪಡೆದು ಮಿಂಚಿದ ರಶೀದ್ ಖಾನ್‍ಗೆ ಪಂದ್ಯಶ್ರೇಷ್ಠ ಗೌರವ!

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಬೌಲರ್ ರಶೀದ್ ಖಾನ್ 1 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದಾರೆ.

    ಪಂದ್ಯದಲ್ಲಿ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿದ್ದರು. 4 ಓವರ್ ನಲ್ಲಿ 13 ರನ್ ನೀಡಿದ್ದರು. ಇವರ ಬಾಲಿಗೆ ರನ್ ಗಳಿಸಲು ಮುಂಬೈ ಆಟಗಾರರು ಪರದಾಡಿದ್ದರು. 24 ಎಸೆತಗಳ ಪೈಕಿ 18 ಬಾಲಿಗೆ ಯಾವುದೇ ರನ್ ಬಂದಿರಲಲ್ಲ. ರಶೀದ್ ಖಾನ್ 2 ಬೌಂಡರಿ ಮತ್ತು ಒಂದು ವೈಡ್ ಮಾತ್ರ ನೀಡಿದ್ದರು. ಪಂದ್ಯದಲ್ಲಿ ರಶೀದ್ ಖಾನ್ 3.25 ಎಕಾನಮಿಯಲ್ಲಿ ಬೌಲಿಂಗ್ ಮಾಡಿ ರನ್ನಿಗೆ ಕಡಿವಾಣ ಹಾಕಿದ್ದರು.

    ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್‍ಗಳಿಸಿತ್ತು. 148 ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿ ಪಂದ್ಯ ಗೆದ್ದಿತ್ತು. ಕೊನೆಯ ಓವರ್ ನಲ್ಲಿ 11 ರನ್ ಬೇಕಿತ್ತು. ಕಟ್ಟಿಂಗ್ ಎಸೆದ ಮೊದಲ ಎಸೆತವನ್ನು ಹೂಡ ಸಿಕ್ಸರ್ ಗೆ ಅಟ್ಟಿದ್ದರೆ, ಕೊನೆಯ ಎಸೆತದಲ್ಲಿ ಬೌಂಡರಿ ಬಂದ ಕಾರಣ ಹೈದರಾಬಾದ್ ತಂಡ ಜಯಗಳಿಸಿತು.

    ಹೈದರಾಬಾದ್ ಪರ ಸಂದೀಪ್ ಶರ್ಮಾ, ಸ್ಟ್ಯಾನ್‍ಲೇಕ್, ಕೌಲ್ ತಲಾ ಎರಡು ವಿಕೆಟ್ ಪಡೆದರೆ, ರಶೀದ್ ಖಾನ್ ಮತ್ತು ಶಕೀಬ್ ಉಲ್ ಹಸನ್ ತಲಾ ಒಂದೊಂದು ವಿಕೆಟ್ ಪಡೆದರು.

  • ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಪಡೆದ ಹೈದರಾಬಾದ್

    ಮುಂಬೈ ಇಂಡಿಯನ್ಸ್ ವಿರುದ್ಧ 1 ವಿಕೆಟ್ ರೋಚಕ ಗೆಲುವು ಪಡೆದ ಹೈದರಾಬಾದ್

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 1 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.

    ಸನ್ ರೈಸರ್ಸ್ ಪರ ಉತ್ತಮ ಆರಂಭ ನೀಡಿದ ಧವನ್ ಹಾಗೂ ಸಹಾ ಬ್ಯಾಟಿಂಗ್ ನೆರವಿನೊಡನೆ ಉತ್ತಮ ಆರಂಭ ಪಡೆಯಿತು. ಬಿರುಸಿನ ಪ್ರದರ್ಶನ ನೀಡಿದ ಧವನ್ ಕೇವಲ 28 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 45 ರನ್ ಸಿಡಿಸಿ ಮಾರ್ಕಂಡೆ ಬೌಲಿಂಗ್ ನಲ್ಲಿ ಔಟಾದರು. ಇತ್ತ 20 ಎಸೆತಗಳಲ್ಲಿ 22 ರನ್ ಗಳಿಸಿದ್ದ ಸಹಾ ರನ್ನು ಸಹ ಮಾರ್ಕಂಡೆ ಎಲ್‍ಬಿ ಗೆ ಕೆಡವಿದರು. ಬಳಿಕ ಬಂದ ನಾಯಕ ವಿಲಿಯಂಸನ್ 6 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

    ಈ ವೇಳೆ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಮನಿಷ್ ಪಾಂಡೆ (11 ರನ್), ಶಕೀಬ್ ಅಲ್ ಹಸನ್ (12) ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಮಾರ್ಕಂಡೆ ಹೈದರಾಬಾದ್ ತಂಡಕ್ಕೆ ಹೊಡೆತ ನೀಡಿದರು. ಇನ್ನು ಸ್ಫೋಟಕ ಆಟಗಾರ ಯೂಸಫ್ ಪಠಾಣ್ (14) ಹಾಗೂ ರಶೀದ್ ಖಾನ್ (0)ರನ್ನು ಬುಮ್ರಾ ಬಲಿ ಪಡೆದು ಗೆಲುವಿನ ಆಸೆ ಚಿಗುರುವಂತೆ ಮಾಡಿದರು.

    ಕೊನೆಯ 12 ಎಸೆತಗಳಲ್ಲಿ 12 ರನ್ ಗಳಿಸಬೇಕಿದ್ದ ವೇಳೆ ರಹಮಾನ್ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದರು. 19 ನೇ ಓವರ್ ನಲ್ಲಿ ಕೇವಲ 1 ರನ್ ನೀಡಿದ ರಹಮಾನ್ ಕೌಲ್ ಹಾಗೂ ಸಂದೀಪ್ ಶರ್ಮಾ ವಿಕೆಟ್ ಪಡೆದರು. ಕೊನೆಯ ಓವರ್ ನಲ್ಲಿ 11 ರನ್ ಗಳಿಸ ಬೇಕಾದ ಒತ್ತಡಕ್ಕೆ ಸಿಲುಕಿದ ಹೂಡಾ (25 ಎಸೆತ, 32 ರನ್ ತಲಾ 1 ಸಿಕ್ಸರ್, ಬೌಂಡರಿ) ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡದ ಗೆಲುವಿಗೆ ರೋಚಕ ತಿರುವು ನೀಡಿದರು. ಮುಂಬೈ ಪರ ಮಾರ್ಕಂಡೆ 4, ಮುಸ್ತಾಫಿಜುರ್ 3 ಹಾಗೂ ಬುಮ್ರಾ 2 ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ನಿರಾಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮುಂಬೈ ಪರ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (10 ಎಸೆತ 11ರನ್) ಮೊದಲ ಓವರ್ ನಲ್ಲೇ ಜೀವದಾನ ಪಡೆದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಮತ್ತೊಂದೆಡೆ ಆಕ್ರಮಣಕಾರಿ ಆಟ ಪ್ರಾರಂಭಿಸಿದ್ದ ಎವಿನ್ ಲೂವಿಸ್ (54 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಸುಲಭ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಇಶಾನ್ ಕಿಶಾನ್ (9) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಕೃನಾಲ್ ಪಾಂಡ್ಯ (10 ರನ್) ಈ ಬಾರಿ ಉತ್ತಮ ಬ್ಯಾಟಿಂಗ್ ನಡೆಸಲಿಲ್ಲ.

    ನಿರಂತರವಾಗಿ ವಿಕೆಟ್ ಕಳೆದಕೊಳ್ಳುತ್ತ ಸಾಗಿದ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಪೊಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ನಿಧಾನಗತಿ ಬ್ಯಾಟ್ ನಡೆಸಿದರು. ಈ ವೇಳೆ ಪೊಲಾರ್ಡ್ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಳಿಂದ 28 ರನ್ ಗಳಿಸಿ ಔಟಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸೂರ್ಯಕುಮಾರ್ 28 ರನ್ ಗಳಿಸಿ ಔಟದರು. ಬಳಿಕ ಬಂದ ಮುಂಬೈ ಬೌಲರ್ ಗಳಾದ ಬೆನ್ ಕಟ್ಟಿಂಗ್ (9), ಪ್ರದೀಪ್ ಸಾಂಗ್ವಾನ್ (2), ಮಾಯಂಕ್ ಮಾರ್ಕಂಡೆ (6) ಹಾಗೂ ಜಸ್ಪ್ರೀತ್ ಬುಮ್ರಾ (4) ರನ್ ಗಳಿಸಿದರು. ಇದರೊಂದಿಗೆ ಮುಂಬೈ 20 ಓವರ್ ಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಸನ್ ರೈಸರ್ಸ್ ಪರ ಸಂದೀಪ್ ಶರ್ಮಾ, ಸಿದ್ದಾರ್ಥ್ ಕೌಲ್, ಬಿಲ್ಲಿ ಸ್ಟಾನ್‍ಲೇಕ್ ತಲಾ ಎರಡು ವಿಕೆಟ್ ಮತ್ತು ರಶೀದ್ ಖಾನ್ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.

  • ಹಿಂದೆ ಗೆಲ್ಲಿಸಿದಾಗ ಎಲ್ಲಿ ಹೋಗಿದ್ರಿ: ಟೀಕಾಕಾರರಿಗೆ ವಿನಯ್ ಕುಮಾರ್ ಪ್ರಶ್ನೆ

    ಹಿಂದೆ ಗೆಲ್ಲಿಸಿದಾಗ ಎಲ್ಲಿ ಹೋಗಿದ್ರಿ: ಟೀಕಾಕಾರರಿಗೆ ವಿನಯ್ ಕುಮಾರ್ ಪ್ರಶ್ನೆ

    ಚೆನ್ನೈ: ಆರ್ ಸಿ ಬಿ ವಿರುದ್ಧ ಕೊನೆಯ ಓವರ್  ನಲ್ಲಿ 9 ರನ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ ಇದ್ದಾಗ ಪಂದ್ಯ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದೆ. ಈಗ ಟೀಕೆ ಮಾಡುತ್ತಿರುವವರು ಆಗ ಎಲ್ಲಿಗೆ ಹೋಗಿದ್ದೀರಿ ಎಂದು ವಿನಯ್ ಕುಮಾರ್ ಟ್ರೋಲ್ ಮಾಡೋ ಮಂದಿಯನ್ನು ಪ್ರಶ್ನಿಸಿದ್ದಾರೆ.

    ಇದು ಕೇವಲ ಒಂದು ಪಂದ್ಯವಷ್ಟೇ. ಕೆಲವೊಮ್ಮೆ ಪರಿಸ್ಥಿತಿ ನಮ್ಮ ವಿರುದ್ಧವಾಗಿ ಹೋಗುತ್ತದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ವಿನಯ್ ಕುಮಾರ್ ತಮ್ಮ ಪ್ರತಿಕ್ರಿಯೆ ನೀಡಿದ ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಅಂತಿಮ ಓವರ್  ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ವಿಫಲರಾದ ವಿನಯ್ ಕುಮಾರ್ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಗಿ ಧನ್ಯವಾದಗಳ ಸುರಿಮಳೆಯನ್ನು ಹರಿಸಿದ್ದಾರೆ. ಇನ್ನು ಕೆಲವರು ಟೀಕಾ ಪ್ರವಾಹವನ್ನೇ ಹರಿಸಿದ್ದಾರೆ.

    ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಸಿಎಸ್‍ಕೆ ವಿರುದ್ಧ ಸೋಲನ್ನು ಕಂಡಿತ್ತು. ಗೆಲ್ಲಲು 202 ರನ್ನಿನ ಗುರಿಯನ್ನು ಬೆನ್ನು ಹತ್ತಿದ ಸಿಎಸ್‍ಕೆ ಗೆಲ್ಲುವಲ್ಲಿ ಸಫಲವಾಯಿತು.

    ಕೊನೆಯ ಓವರ್  ನಲ್ಲಿ ಸಿಎಸ್‍ಕೆ ಗೆಲುವಿಗೆ 17 ರನ್‍ಗಳು ಬೇಕಿತ್ತು. ಓವರ್ ನ ಮೊದಲ ಎಸೆತವನ್ನು ಬ್ರಾವೋ ಸಿಕ್ಸರ್ ಗೆ ಅಟ್ಟಿದ್ದರು. ಅಷ್ಟೇ ಅಲ್ಲದೇ ಈ ಎಸೆತ ನೋಬಾಲ್ ಆಗಿತ್ತು. ಒಂದು ಎಸೆತ ಬಾಕಿ ಇದ್ದಾಗ ಜಡೇಜಾ ಸಿಕ್ಸರ್ ಗೆ ಬಾಲ್ ಅಟ್ಟಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಓವರ್ ನಲ್ಲಿ ವಿನಯ್ ಕುಮಾರ್ 19 ರನ್ ಕೊಟ್ಟಿದ್ದು ಅಲ್ಲದೇ 1.5 ಓವರ್ ಎಸೆದು ಯಾವುದೇ ವಿಕೆಟ್ ಪಡೆಯದೇ 35 ರನ್ ಬಿಟ್ಟುಕೊಟ್ಟಿದ್ದರು.

     

     

    https://twitter.com/SalmanAbjani/status/983775369349263362