Tag: Mumbai Indians

  • ಗೆಲುವು ತಂದುಕೊಟ್ಟ ನೋಬಾಲ್ – ರೋಹಿತ್ ಹೇಳಿದ್ದೇನು?

    ಗೆಲುವು ತಂದುಕೊಟ್ಟ ನೋಬಾಲ್ – ರೋಹಿತ್ ಹೇಳಿದ್ದೇನು?

    ಬೆಂಗಳೂರು: ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಅವುಗಳನ್ನು ಪಕ್ಕಕಿಟ್ಟು ನೋಡುವುದಾದರೆ ಅಂಪೈರ್ ನಿರ್ಧಾರ ಕ್ರೀಡಾಸ್ಫೂರ್ತಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಅಂಪೈರ್ ತೀರ್ಮಾನ ಪಂದ್ಯದ ಗತಿಯನ್ನೇ ಬದಲಿಸುವ ನಿರ್ಧಾರ ಆಗುತ್ತಿತ್ತು. ಅಭಿಮಾನಿಗಳಲ್ಲಿ ಕ್ರಿಕೆಟ್ ಬಗ್ಗೆ ಮತ್ತಷ್ಟು ಅಸಕ್ತಿ ಮೂಡಿಸಲು ಇಂತಹ ತಪ್ಪುಗಳನ್ನು ಕಡಿಮೆ ಮಾಡಬೇಕು. ನಾವು ಮೈದಾನದಲ್ಲಿ ತಪ್ಪು ಮಾಡಿದರೆ ಅಲ್ಲೆ ಬೆಲೆ ನೀಡಬೇಕಾಗುತ್ತದೆ. ಇಂತಹ ತಪ್ಪುಗಳು ಕೇವಲ ಪಂದ್ಯದ ಮೇಲಷ್ಟೇ ಅಲ್ಲದೇ, ಇಡೀ ಟೂರ್ನಿಯ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅಂಪೈರ್ ಇಂತಹ ತಪ್ಪು ಮಾಡಿದರೆ ಏನಾಗುತ್ತದೆ? ಈ ಬಗ್ಗೆ ಬಿಸಿಸಿಐ ನಿರ್ಧಾರ ಮಾಡಬೇಕಿದೆ ಎಂದರು.

    ಟೂರ್ನಿಯಲ್ಲಿ ನಾವು ಮೊದಲ ಗೆಲುವು ಪಡೆದಿದ್ದು ಸಂತಸ ತಂದಿದ್ದು, ಬುಮ್ರಾ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಪಂದ್ಯದ ಮುಖ್ಯ ಹಂತದಲ್ಲಿ ಕೊಹ್ಲಿ ವಿಕೆಟ್ ಪಡೆದದ್ದು ತಿರುವು ನೀಡಿತ್ತು. ಅಲ್ಲದೇ ಲಸಿತ್ ಮಾಲಿಂಗ ಬೌಲಿಂಗ್ ಕೂಡ ಉತ್ತಮವಾಗಿತ್ತು. ವಿಶ್ವಕಪ್ ದೃಷ್ಟಿಯಿಂದಲೂ ಟೂರ್ನಿ ಅವರಿಗೆ ಪ್ರಮುಖವಾಗಿದೆ ಎಂದರು. ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ಅಂತಿಮ ಎರಡು ಓವರಿನಲ್ಲಿ ನೀಡಿದ್ದು ಕೇವಲ 6 ರನ್ ಮಾತ್ರ. ಒಟ್ಟಾರೆ 4 ಓವರ್ ಬೌಲ್ ಮಾಡಿದ ಬುಮ್ರಾ 20 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು.

    ಕೊನೆಯ ಎಸೆತದಲ್ಲಿ ಆರ್ ಸಿಬಿಗೆ 7 ರನ್‍ಗಳ ಅವಶ್ಯಕತೆ ಇತ್ತು. ಕೊನೆಯ ಓವರನ್ನು ಮುಂಬೈ ತಂಡದ ಆಟಗಾರ ಲಸಿತ್ ಮಾಲಿಂಗ ಬೌಲಿಂಗ್ ಮಾಡಿದ್ದಾಗ ಶಿವಂ ದುಬೆ ಕ್ರೀಸ್ ನಲ್ಲಿದ್ದರು. ಕೊನೆಯ ಎಸೆತದಲ್ಲಿ ಶಿವಂ ದುಬೆ ಯಾವುದೇ ರನ್ ಪಡೆಯಲಿಲ್ಲ. ಆದರೆ ರಿಪ್ಲೈ ನೋಡಿದ್ದಾಗ ಲಸಿತ್ ಅವರ ಕಾಲು ಕ್ರೀಸ್‍ಗಿಂತ ಮುಂದೆ ಇತ್ತು. ಅಂದರೆ ನೋ ಬಾಲ್ ಆಗಿತ್ತು. ಆದರೆ ಅದನ್ನು ಅಂಪೈರ್ ಗಮನಿಸಲಿಲ್ಲ. ಅಂಪೈರ್ ನೋ ಬಾಲ್ ಎಂದು ಪರಿಗಣಿಸಿದ್ದರೆ ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ್ದರೆ ಪಂದ್ಯವನ್ನು ಆರ್ ಸಿಬಿ ಗೆದ್ದುಕೊಳ್ಳುತಿತ್ತು.

  • ವಿಶ್ವ ನಂ.1 ಬೌಲರ್, ಬ್ಯಾಟ್ಸ್‌ಮನ್ ನಡುವೆ ಪೈಪೋಟಿ!

    ವಿಶ್ವ ನಂ.1 ಬೌಲರ್, ಬ್ಯಾಟ್ಸ್‌ಮನ್ ನಡುವೆ ಪೈಪೋಟಿ!

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ನಂ.1 ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದು, ಇತ್ತ ನಂ.1 ಬೌಲರ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಬುಮ್ರಾ ನಡುವಿನ ಕದನಕ್ಕೆ ವೇದಿಕೆ ಸಿದ್ಧವಾಗಿದೆ.

    2019ರ ಟೂರ್ನಿಯ ಮೊದಲ ತವರು ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲ್ಲಲು ಆರ್ ಸಿಬಿ ಉತ್ಸಾಹಿಯಾಗಿದೆ. ಇತ್ತ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಬುಮ್ರಾ ಇಂದಿನ ಪಂದ್ಯ ಆಡುವುದು ಬಹುತೇಕ ಖಚಿತವಾಗಿದೆ. ಮುಂಬೈ ತಂಡ ಕೂಡ ಟೂರ್ನಿಯಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತಂಡಗಳು ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿದ್ದವು.

    ಮುಂಬೈ ತಂಡಕ್ಕೆ ಅನುಭವಿ ಬೌಲರ್ ಲಸಿತ್ ಮಾಲಿಂಗ್ ಕೂಡ ಲಭ್ಯವಾಗಿದ್ದು, ತಂಡದ ಬೌಲಿಂಗ್ ಸಾಮಥ್ರ್ಯ ಹೆಚ್ಚಾಗಿದೆ. ಯುವರಾಜ್ ಸಿಂಗ್ ಫಾರ್ಮ್ ಕೂಡ ಮುಂಬೈ ಬೌಲಿಂಗ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಗಾಯಗೊಂಡ ಬಳಿಕ ಅಭ್ಯಾಸಕ್ಕೆ ಹಾಜರಾಗಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಪಂದ್ಯಕ್ಕೆ ಸಿದ್ಧ ಎಂದು ತಿಳಿಸಿದ್ದರು.

    ಟೂರ್ನಿಯ ಆರಂಭಕ್ಕೂ ಮುನ್ನ ಜಾಹೀರಾತಿನಲ್ಲಿ ಬುಮ್ರಾ, ಕೊಹ್ಲಿ ಸವಾಲು ಎಸೆದಿದ್ದರು. ಅಲ್ಲದೇ ಕೊಹ್ಲಿ ಕೂಡ ಸವಾಲು ಸ್ವೀಕರಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆಯಿದೆ.

  • ಬುಮ್ರಾ ಗಾಯದ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ

    ಬುಮ್ರಾ ಗಾಯದ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ

    ಮುಂಬೈ: ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ಬುಮ್ರಾ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಗಾಯಗೊಂಡಿರುವ ಬಗ್ಗೆ ಮುಂಬೈ ಇಂಡಿಯನ್ಸ್ ಸ್ಪಷ್ಟನೆ ನೀಡಿದೆ. ಬುಮ್ರಾ ಗಾಯದ ಸಮಸ್ಯೆ ಗಂಭೀರ ಸ್ವರೂಪದಲ್ಲ. ಮುಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಗಾಯಗೊಂಡಿದ್ದರು. ಬೌಲಿಂಗ್ ವೇಳೆ ಚೆಂಡನ್ನು ತಡೆಯಲು ಮುಂದಾದ ಬುಮ್ರಾ ಎಡಗೈ ಜಾರಿದ ಪರಿಣಾಮ ಗಾಯಗೊಂಡು ಮೈದಾನಲ್ಲೇ ನೋವು ಅನುಭವಿಸಿದ್ದರು. ಆ ಬಳಿಕ ಮುಂಬೈ ಬ್ಯಾಟಿಂಗ್ ವೇಳೆ ಅಂತಿಮ 4 ಎಸೆತಗಳು ಉಳಿದರು ಕೂಡ ಬುಮ್ರಾ ಬ್ಯಾಟಿಂಗ್ ನಡೆಸಿರಲಿಲ್ಲ. ಅದ್ದರಿಂದ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು.

    https://twitter.com/dhonirohitfan1/status/1109858689324744704

    ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವ ವೇಳೆ ಬುಮ್ರಾ ಗಾಯದ ಸಮಸ್ಯೆಗೆ ಸಿಲುಕಿದ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಬಿಸಿಸಿಐ ಕೂಡ ಈ ಬಗ್ಗೆ ಮಾಹಿತಿ ಪಡೆದಿದೆ. ಕಳೆದ ವರ್ಷ ಕೂಡ ಬುಮ್ರಾ ಗಾಯದ ಸಮಸ್ಯೆ ಎದುರಿಸಿದ್ದರು. ಪರಿಣಾಮ ಇಂಗ್ಲೆಂಡ್ ವಿರುದ್ಧದ ಸಿಮೀತ ಓವರ್ ಗಳ ಸರಣಿಯಲ್ಲಿ ಬುಮ್ರಾ ಭಾಗವಹಿಸಿರಲಿಲ್ಲ. ಆ ಬಳಿಕ ಟೆಸ್ಟ್ ಸರಣಿಗೆ ಕಮ್ ಬ್ಯಾಕ್ ಮಾಡಿದ್ದರು. ವಿಶ್ವಕಪ್ ಟೂರ್ನಿಗೆ 2 ತಿಂಗಳು ಮಾತ್ರ ಉಳಿದಿರುವುದಿಂದ ಆಟಗಾರರು ಫಿಟ್ನೆಸ್ ಕಾಯ್ದುಕೊಳ್ಳುವುದು ಪ್ರಮುಖವಾಗಿದೆ.

    ಮುಂಬೈ ಇಂಡಿಯನ್ಸ್ ಸರಣಿಯನ್ನು ಸೋಲಿನ ಮೂಲಕ ಆರಂಭ ಮಾಡಿದ್ದು, ಭಾನುವಾರ ನಡೆದ ಪಂದ್ಯದಲ್ಲಿ ಯುವಿ ಅರ್ಧ ಶತಕದ ಹೊರತಾಗಿಯೂ ಸೋಲುಂಡಿತ್ತು. ಡೆಲ್ಲಿ ಆಟಗಾರರ ಪಂತ್ ಸ್ಫೋಟ ಬ್ಯಾಟಿಂಗ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು.

  • ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ರಿಷಬ್ ಪಂತ್ ಭವಿಷ್ಯದ ಸ್ಟಾರ್ ಆಟಗಾರ : ಯುವಿ

    ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಫೋಟಕ ಪ್ರದರ್ಶನ ನೀಡಿದ ಯುವ ಆಟಗಾರ ರಿಷಬ್ ಪಂತ್ ಕುರಿತು ಯುವರಾಜ್ ಸಿಂಗ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದು, ಭವಿಷ್ಯದ ಸ್ಟಾರ್ ಆಟಗಾರ ಎಂದಿದ್ದಾರೆ.

    ಮುಂಬೈ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ 27 ಎಸೆತಗಳಲ್ಲಿ 78 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 7 ಸಿಕ್ಸರ್, 7 ಬೌಂಡರಿ ಸಿಡಿಸಿದ್ದರು. ಪಂದ್ಯದ ಬಳಿಕ ಈ ಕುರಿತು ಪ್ರತಿಕ್ರಿಯೆ ನೀಡಿದ 2011ರ ವಿಶ್ವಕಪ್ ಹೀರೋ ಯುವಿ, ರಿಷನ್ ಪಂತ್ ವಿಶ್ವಕಪ್ ಆಯ್ಕೆ ಬಗ್ಗೆ ನಾನು ಏನು ಹೇಳಲು ಸಾಧ್ಯವಿಲ್ಲ. ಆದರೆ ಕಳೆದ ವರ್ಷ ಪಂತ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಟಾರ್ ಆಟಗಾರ ಆಗುವ ವಿಶ್ವಾಸ ಇದೆ ಎಂದಿದ್ದಾರೆ.

    ಇತ್ತ ಟೂರ್ನಿಯ ಆರಂಭದ ಪಂದ್ಯದಲ್ಲೇ ಅರ್ಧ ಶತಕ ಸಿಡಿಸಿದ ಯುವಿ ಕೂಡ ಈ ಬಾರಿ ಮುಂಬೈ ಮಿಂಚುವ ಸೂಚನೆ ನೀಡಿದ್ದಾರೆ. ಆದರೆ ಯುವಿ ಅರ್ಧ ಶತಕದ ನಡುವೆಯೂ ಮುಂಬೈ ಸೋಲುಂಡಿತು. 35 ಎಸೆತಗಳಲ್ಲಿ ಯುವಿ 53 ರನ್ ಗಳಿಸಿದ್ದರು.

    ಕಳೆದ ಎರಡು ವರ್ಷಗಳ ಪ್ರದರ್ಶನದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಯಿತು. ಆದರೆ ನಾನು ಕ್ರಿಕೆಟ್ ಮೇಲಿನ ಪ್ರೀತಿಯಿಂದಲೇ ಆಡುತ್ತಿದ್ದೇನೆ. ದೇಶ ಪರ ಸದ್ಯ ಆಡಲು ಸಾಧ್ಯವಾಗದಿದ್ದರೂ ಕೂಡ ಈ ಹಿಂದೆ ಅಂಡರ್ 16, 14 ತಂಡದ ಪರ ಆಡಿದಂತೆಯೇ ಸಂತಸದಿಂದ ಆಡುತ್ತಿದ್ದೇನೆ. ಸಚಿನ್ ಅವರೊಂದಿಗೆ ಕಳೆದ ಸಮಯ, ನನ್ನ ಪ್ರದರ್ಶನ ಉತ್ತಮ ಪಡಿಸಲು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

  • ಯುವಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಾರೆ: ಜಹೀರ್

    ಯುವಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡ್ತಾರೆ: ಜಹೀರ್

    ಮುಂಬೈ: 2019ರ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇದೇ ವೇಳೆ ಎಲ್ಲಾ ತಂಡಗಳು ಟೂರ್ನಿಗೆ ಸಿದ್ಧತೆ ನಡೆಸುತ್ತಿವೆ.

    ಐಪಿಎಲ್ ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಈ ಬಾರಿ ಕಪ್ ಮೇಲೆ ಕಣ್ಣಿಟ್ಟಿದ್ದು, ಕಳೆದ ಟೂರ್ನಿಯಲ್ಲಿ ಸೋಲಿಗೆ ಕಾರಣವಾಗಿದ್ದ ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಯುವರಾಜ್ ಸಿಂಗ್ ಅವರನ್ನ ಕರೆ ತಂದಿದೆ.

    ಯುವಿ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಂಬೈ ಇಂಡಿಯನ್ಸ್ ತಂಡ ಜಹೀರ್ ಖಾನ್, ಯುವರಾಜ್ ಸಿಂಗ್ ಕಮ್ ಬ್ಯಾಕ್ ಈ ಬಾರಿಯ ಟೂರ್ನಿಯಲ್ಲಿ ಹೆಚ್ಚಿನ ಪರಿಣಾಮ ಉಂಟು ಮಾಡಲಿದೆ. ಅಲ್ಲದೇ ಯುವರಾಜ್ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮಥ್ರ್ಯ ಹೊಂದಿದ್ದಾರೆ. ಪಂದ್ಯದ ಮೇಲೆ ನಿಯಂತ್ರಣವನ್ನು ಸಾಧಿಸಬಲ್ಲ ಆಟಗಾರರನ್ನೇ ಗುರುತಿಸಿ ಆಯ್ಕೆ ಮಾಡಿದ್ದೇವೆ. ರೋಹಿತ್ ಆರಂಭಿಕರಾಗಿ ಕಣಕ್ಕೆ ಇಳಿಯುವ ನಿರ್ಧಾರ ಮಾಡಿದ ಬಳಿಕ ನಮಗೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬವುದು ಮುಖ್ಯ ಉದ್ದೇಶವಾಗಿತ್ತು. ಅಲ್ಲದೇ ಅನುಭವಿ ಆಟಗಾರರ ಅಗತ್ಯವೂ ಇತ್ತು. ಯುವಿ ಸಾಮಥ್ರ್ಯವೂ ಅರಿವಿದ್ದ ಕಾರಣ ಅವರು ಆಯ್ಕೆ ಆಗಿದ್ದಾರೆ ಎಂದಿದ್ದಾರೆ.

    ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಯಶಸ್ವಿ ಪಡೆದ ತಂಡವಾಗಿದೆ. 4ನೇ ಕಪ್ ಗೆಲ್ಲುವ ಹುಮ್ಮಸಿನಲ್ಲಿರುವ ಮುಂಬೈ ತಂಡ ಕಳೆದ ಬಾರಿ 5ನೇ ಸ್ಥಾನದಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿತ್ತು. ಈ ಬಾರಿಯ ಟೂರ್ನಿಯಲ್ಲಿ ಮುಂಬೈ ತಂಡ ಮಾರ್ಚ್ 24 ರಂದು ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

  • ಯುವರಾಜ್ ಸಿಂಗ್ ಮೇಲೆ ಅನುಕಂಪ ತೋರಿದ ಮುಂಬೈ ಇಂಡಿಯನ್ಸ್

    ಯುವರಾಜ್ ಸಿಂಗ್ ಮೇಲೆ ಅನುಕಂಪ ತೋರಿದ ಮುಂಬೈ ಇಂಡಿಯನ್ಸ್

    – ರೋಹಿತ್‍ಗೆ ವಿಶೇಷ ಸಂದೇಶ ರವಾನಿಸಿದ ಯುವಿ

    ಜೈಪುರ: ಟೀಂ ಇಂಡಿಯಾದ ಸ್ಫೋಟಕ ಆಟಗಾರ, ವಿಶ್ವಕಪ್ ಹೀರೋ ಎಂದೇ ಖ್ಯಾತಿ ಪಡೆದಿದ್ದ ಯುರಾಜ್ ಸಿಂಗ್‍ಗೆ ಅವರಿಗೆ ಈ ಬಾರಿ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಜೀವದಾನ ನೀಡಿದ್ದು, ಯುವಿ ಮೂಲ ಬೆಲೆ 1 ಕೋಟಿ ರೂ. ಗೆ ಖರೀದಿ ಮಾಡಿದೆ.

    ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದರು. ಮೊದಲ ಸುತ್ತಿನಲ್ಲಿ ಯುವಿರನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ಖರೀದಿ ಮಾಡಿತು. ಈಗಾಗಲೇ 2019ರ ವಿಶ್ವಕಪ್ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಸಿದ್ಧತೆಯಲ್ಲಿ ಇರುವ ಯುವಿ, ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಒತ್ತಡದಲ್ಲಿದ್ದಾರೆ.

    ಇತ್ತ ಮುಂಬೈ ತಂಡ ಯುವಿರನ್ನು ಆಯ್ಕೆ ಮಾಡುತ್ತಿದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಯುವರಾಜ್ ಸಿಂಗ್ ಮುಂಬೈ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೇ ನಾಯಕ ರೋಹಿತ್ ಶರ್ಮಾಗೆ ವಿಶೇಷ ಸಂದೇಶ ನೀಡಿರುವ ಯುವಿ, ಮುಂದಿನ ಟೂರ್ನಿಗಾಗಿ ಕಾಯುತ್ತಿದ್ದು, ಬಹು ಬೇಗ ಭೇಟಿ ಆಗೋಣ ಎಂದು ಶರ್ಮಾಗೆ ತಿಳಿಸಿದ್ದಾರೆ.

    ಐಪಿಎಲ್ ಆರಂಭದಲ್ಲಿ ಬಹು ಬೇಡಿಕೆಯ ಆಟಗಾರರಾಗಿದ್ದ ಯುವಿ ಸತತ ವೈಫಲ್ಯ ಆನುಭವಿಸಿದ ಕಾರಣ ಬೇಡಿಕೆ ಕಳೆದುಕೊಂಡರು. ಮಹಾಮಾರಿ ಕ್ಯಾನ್ಸರ್ ನಿಂದ ಗೆದ್ದು ಬಂದ ಬಳಿಕ ಯುವಿ ಮತ್ತೆ ಕ್ರಿಕೆಟ್‍ನಲ್ಲಿ ತಮ್ಮ ಹಿಂದಿನ ಲಯ ಕಂಡುಕೊಳ್ಳಲು ಸಾಕಷ್ಟು ಅಭ್ಯಾಸ ನಡೆಸಿದ್ದರು.

    ತಮ್ಮ ವೃತ್ತಿ ಜೀವನದ ಅತ್ಯುನ್ನತ್ತ ಶಿಖರದಲ್ಲಿರುವಾಗ ಯುವಿ 2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಆ ಬಳಿಕ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜು ಆಗಿದ್ದರು.

    ಯುವಿ ಟೀಂ ಇಂಡಿಯಾ ಪರ 2017 ಜೂನ್‍ನಲ್ಲಿ ಅಂತಿಮ ಪಂದ್ಯವಾಡಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಟೂರ್ನಿಯಲ್ಲಿ 8 ಇನ್ನಿಂಗ್ಸ್ ಗಳಿಂದ ಕೇವಲ 65 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು. ಉಳಿದಂತೆ ಮುಂಬೈ ಇಂಡಿಯನ್ಸ್ ತಂಡ ಶ್ರೀಲಂಕಾದ ಹಿರಿಯ ಅನುಭವಿ ಆಟಗಾರ ಲಸಿತ್ ಮಾಲಿಂಗರನ್ನು ಖರೀದಿ ಮಾಡಿದ್ದು, ಮತ್ತೊಮ್ಮೆ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ದಾಖಲೆ ನಿರ್ಮಿಸಿ ಟೂರ್ನಿಯಿಂದ ಹೊರ ನಡೆದ ರಿಷಭ್ ಪಂತ್!

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಕೊನೆ ಸ್ಥಾನದಲ್ಲಿ ಹೊರಬಿದ್ದ ತಂಡ ಎನಿಸಿಕೊಂಡರೂ ತಂಡದ ಯುವ ಆಟಗಾರ ರಿಷಭ್ ಪಂತ್ ವೈಯಕ್ತಿಕವಾಗಿ ದಾಖಲೆ ನಿರ್ಮಿಸಿದ್ದಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕೊನೆಯ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಪಂತ್ ಅರ್ಧ ಶತಕ (44 ಎಸೆತ, 64 ರನ್) ಸಿಡಿಸಿ ಮಿಂಚಿದ್ದರು. ಈ ಮೂಲಕ ಆರೆಂಜ್ ಕ್ಯಾಪ್ ಸಹ ಪಡೆದರು. ಇನ್ನು ಟೂರ್ನಿಯಲ್ಲಿ ಒಟ್ಟಾರೆ 684 ರನ್ ಸಿಡಿಸಿದ ಪಂತ್ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಈ ಮೂಲಕ ಈ ಹಿಂದೆ ಕೆಕೆಆರ್ ಪರ 2014 ರಲ್ಲಿ ರಾಬಿನ್ ಉತ್ತಪ್ಪ (660 ರನ್) ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ.

    ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಪಂತ್ ದಾಖಲೆಯನ್ನು ಮುರಿಯುವ ಅವಕಾಶವಿತ್ತು. ಆದರೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ಗಳಿಸಿ ಟೂರ್ನಿಯಲ್ಲಿ ಒಟ್ಟಾರೆ 659 ರನ್ ಗಳೊಂದಿಗೆ ರಾಹುಲ್ ಈ ಐಪಿಎಲ್ ಆವೃತ್ತಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.

    20 ವರ್ಷದ ಪಂತ್ ಟೂರ್ನಿಯಲ್ಲಿ 52.61 ಸರಾಸರಿ ಹಾಗೂ 173.60 ಸ್ಟ್ರೈಕ್ ರೇಟ್ ನಲ್ಲಿ 684 ರನ್ ಸಿಡಿಸಿದ್ದು, ಇದರಲ್ಲಿ 5 ಅರ್ಧ ಶತಕ ಹಾಗೂ ದಾಖಲೆಯ ಅಜೇಯ 128 ರನ್ ಗಳ ಶತಕವೂ ಸೇರಿದೆ. ಅಲ್ಲದೇ ಈ ಟೂರ್ನಿಯದಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯೂ ಪಂತ್ ಹೊಂದಿದ್ದು, ಒಟ್ಟಾರೆ 37 ಸಿಕ್ಸರ್ ಸಿಡಿಸಿದ್ದಾರೆ.

    ಡೆಲ್ಲಿ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂಬೈ ತಂಡದವನ್ನು ಪ್ಲೇ ಆಫ್ ನಿಂದ ದೂರ ಮಾಡಿತ್ತು. ಇದರಲ್ಲಿ 64 ರನ್ ಸಿಡಿಸಿ ಪಂತ್ ತಂಡದ ಗೆಲುವಿಗೆ ಕಾರಣರಾಗಿದ್ದರು.

  • ಪಂಜಾಬ್ ಪ್ಲೇ ಆಫ್ ಪ್ರವೇಶಿಸದಿದ್ದರೂ ಪ್ರೀತಿ ಜಿಂಟಾ ಖುಷಿಯಾಗಿದ್ದು ಏಕೆ ಗೊತ್ತಾ? ವೈರಲ್ ವಿಡಿಯೋ

    ಪಂಜಾಬ್ ಪ್ಲೇ ಆಫ್ ಪ್ರವೇಶಿಸದಿದ್ದರೂ ಪ್ರೀತಿ ಜಿಂಟಾ ಖುಷಿಯಾಗಿದ್ದು ಏಕೆ ಗೊತ್ತಾ? ವೈರಲ್ ವಿಡಿಯೋ

    ಪುಣೆ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಸೋತು ಟೂರ್ನಿಯಿಂದ ಹೊರಬಿದ್ದರೂ, ತಂಡದ ಸಹ ಮಾಲೀಕರಾಗಿರುವ ಪ್ರೀತಿ ಜಿಂಟಾ ಮಾತ್ರ ಸಂತಸ ವ್ಯಕ್ತಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ತಂಡದ ಸಿಬ್ಬಂದಿಯೊಬ್ಬರ ಜೊತೆ ಮಾತುಕತೆ ನಡೆಸುತ್ತಿರುವ ದೃಶ್ಯಗಳು ಸೆರೆಯಾಗಿದೆ. ಆದರೆ ಈ ವಿಡಿಯೋದಲ್ಲಿ ಧ್ವನಿ ದಾಖಲಾಗದೇ ಇದ್ದರೂ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಗೆ ಪ್ರವೇಶಿಸದೇ ಹೊರಬಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಚೆನ್ನೈ ವಿರುದ್ಧದ ಪಂದ್ಯದ ಬಳಿಕ ಪ್ರೀತಿ ಜಿಂಟಾ ಟ್ವಿಟ್ಟರ್ ನಲ್ಲಿ ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ಶುಭಕೋರಿದ್ದಾರೆ. ಅಲ್ಲದೇ ಮುಂದಿನ ವರ್ಷ ತಾವು ಕಮ್ ಬ್ಯಾಕ್ ಮಾಡುವುದಾಗಿ ಬರೆದು ಕೊಂಡಿದ್ದಾರೆ.

    ಆರ್ ಅಶ್ವಿನ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದಿದೆ. ಸತತ ಗೆಲುವುಗಳ ಮೂಲಕ ಟೂರ್ನಿ ಆರಂಭಿಸಿದ ಪಂಜಾಬ್ ತಂಡ ಮೊದಲ 5 ಪಂದ್ಯಗಳಲ್ಲಿ 4 ರಲ್ಲಿ ಜಯಗಳಿಸಿತ್ತು. ಬಳಿಕ ನಡೆದ 9 ಪಂದ್ಯದಲ್ಲಿ ಸತತವಾಗಿ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಒಟ್ಟಾರೆ ಟೂರ್ನಿಯಲ್ಲಿ ಪಂಜಾಬ್ ತಂಡ 14 ಪಂದ್ಯಗಳಲ್ಲಿ 6 ರಲ್ಲಿ ಮಾತ್ರ ಗೆಲುವು ಪಡೆದಿದೆ.

    ಇನ್ನು ಟೂರ್ನಿಯಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ಸಹ ನೀರಸ ಪ್ರದರ್ಶನವನ್ನು ನೀಡಿ ಪ್ಲೇ ಆಫ್ ಪ್ರವೇಶಿಸದೇ ಹೊರ ನಡೆದಿದೆ. 14 ಪಂದ್ಯಗಳಲ್ಲಿ 6 ರಲ್ಲಿ ಜಯ ಗಳಿಸಿರುವ ಮುಂಬೈ 12 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದೆ.

  • ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮೈದಾನದಲ್ಲೇ ತಮ್ಮ ಜರ್ಸಿ ಬದಲಿಸಿಕೊಂಡ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ -ವಿಡಿಯೋ ನೋಡಿ

    ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್, ಮುಂಬೈ ನಡುವಿನ ಪಂದ್ಯದ ಬಳಿಕ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಟಿ-ಶಾರ್ಟ್ ಗಳನ್ನು ಪರಸ್ಪರ ಬದಲಿಸಿಕೊಂಡಿದ್ದಾರೆ.

    ಈ ಹಿಂದೆ ಪುಟ್ಬಾಲ್ ಪಂದ್ಯವಾಳಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಇಂತಹ ದೃಶ್ಯಗಳು ಕ್ರಿಕೆಟ್‍ನಲ್ಲೂ ಕಂಡಿತು. ಇದೇ ಮೊದಲ ಬಾರಿಗೆ ಆಟಗಾರರು ಪರಸ್ಪರ ಗೌರವದ ಸಂಕೇತವಾಗಿ ತಮ್ಮ ತಂಡಗಳ ಜರ್ಸಿಗಳನ್ನು ನೆರೆದಿದ್ದ ಸಾವಿರು ಅಭಿಮಾನಿಗಳ ಮುಂದೆಯೇ ಬದಲಾಯಿಸಿಕೊಂಡರು.

    ಈ ಪಂದ್ಯದಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಕೇವಲ 60 ಎಸೆತಗಳಲ್ಲಿ 94 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಆದರೆ ಕೆಎಲ್ ರಾಹುಲ್ ಹೋರಟದ ನಡುವೆಯೂ ಮುಂಬೈ 3 ರನ್ ಗಳ ರೋಚಕ ಗೆಲುವು ಪಡೆಯಿತು. ಈ ಮೂಲಕ ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.

    ಮುಂಬೈ ಪರ ಮಿಂಚಿನ ಬೌಲಿಂಗ್ ನಡೆಸಿದ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಮುಂಬೈ ತಂಡಕ್ಕೆ ಮುಳುವಾಗಿದ್ದ ಕೆಎಲ್ ರಾಹುಲ್ ವಿಕೆಟ್ ಸಹ ಬುಮ್ರಾ ಉರುಳಿಸಿದ್ದರು. ಸದ್ಯ ಪಾಂಡ್ಯ ಹಾಗೂ ಕೆಎಲ್ ರಾಹುಲ್ ತಂಡದ ಜರ್ಸಿ ಬದಲಾಯಿಸಿದ ವಿಡಿಯೋವನ್ನು ಪಾಂಡ್ಯ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇಬ್ಬರ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/prashan23S/status/996824768656556032?

  • ಐಪಿಎಲ್‍ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು-ಅಭಿಮಾನಿಗಳು ಗರಂ

    ಐಪಿಎಲ್‍ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು-ಅಭಿಮಾನಿಗಳು ಗರಂ

    ಕೋಲ್ಕತ್ತಾ: ಐಪಿಎಲ್ 11ನೇ ಆವೃತ್ತಿಯಲ್ಲಿ ಆನ್ ಫೀಲ್ಡ್ ನಲ್ಲಿದ್ದ ಅಂಪೈರ್ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.

    ಈಡನ್ ಗಾಡ್ ನಲ್ಲಿ ನಡೆದ ಕೋಲ್ಕತಾ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಅಂಪೈರ್ ಎಡವಟ್ಟು ಮಾಡಿಕೊಂಡಿದ್ದಾರೆ. 16 ನೇ ಓವರ್ ಬೌಲ್ ಮಾಡುತ್ತಿದ್ದ ಕೋಲ್ಕತ್ತಾ ವೇಗಿ ಟಾಮ್ ಕುರ್ರಾನ್ 5ನೇ ಎಸೆತವನ್ನು ಆನ್ ಫೀಲ್ಡ್ ಅಂಪೈರ್ ನೋ ಬಾಲ್ ನೀಡಿದರು. ಆದರೆ ಬಳಿಕ ರಿಪ್ಲೈಯಲ್ಲಿ ಇದು ನೋ ಬಾಲ್ ಆಗದಿರುವುದು ಕಂಡು ಬಂದಿದೆ.

    ಈ ವೇಳೆ ಬೌಲರ್ ಟಾಮ್ ಹಾಗೂ ಕೆಕೆಆರ್ ತಂಡದ ನಾಯಕ ಕಾರ್ತಿಕ್ ಅಂಪೈರ್ ಮನವೊಲಿಸಲು ಪ್ರಯತ್ನಿಸಿದರೂ ಅಂಪೈರ್ ತಮ್ಮ ತೀರ್ಪನ್ನು ಮರು ಪರಿಶೀಲಿಸಲಿಲ್ಲ. ಈ ಹಿಂದೆ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ತಂಡದ ಬೌಲರ್ ಆಂಡ್ರ್ಯೂ ಟೈ ಆನ್ ಫೀಲ್ಡ್ ಅಂಪೈರ್ ತಪ್ಪಿನಿಂದ ದಂಡ ತೆತ್ತಿದ್ದರು. ಅಲ್ಲದೇ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಂ ಸನ್ ಚೆನ್ನೈ ವಿರುದ್ಧ ಪಂದ್ಯದಲ್ಲಿ ಸೊಂಟದಿಂದ ಮೇಲ್ಭಾಗಕ್ಕೆ ಬಂದ ಪೂಲ್ ಟಾಸ್ ಎಸೆತವನ್ನು ಸಿಕ್ಸರ್ ಗೆ ಆಟ್ಟಿದ್ದರೂ ಅಂಪೈರ್ ನೋ ಬಾಲ್ ತೀರ್ಪು ನೀಡಿರಲಿಲ್ಲ. ಸದ್ಯ ಅಂಪೈರ್ ಎಡವಟ್ಟಿನ ವಿರುದ್ಧ ಹಲವು ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲದಲ್ಲಿ ಹಂಚಿಕೊಂಡಿದ್ದಾರೆ.

    ನಿಯಮ ಏನು ಹೇಳುತ್ತೆ?
    ಐಸಿಸಿ ನಿಯಮಗಳ ಪ್ರಕಾರ ಅಂಪೈರ್ ಒಮ್ಮೆ ನೀಡಿದ ತೀರ್ಪನ್ನು ಮತ್ತೆ ದೃಶ್ಯಗಳನ್ನು ನೋಡಿ ಬದಲಿಸುವಂತಿಲ್ಲ. ತೀರ್ಪು ಪ್ರಕಟಿಸುವ ಮುನ್ನ ಮೂರನೇ ಅಂಪೈರ್ ಸಹಾಯ ಪಡೆಯ ಬಹುದಾಗಿದೆ.