Tag: Mumbai High Court

  • ನಟ ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಅರೆಸ್ಟ್

    ನಟ ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಅರೆಸ್ಟ್

    -ತನಿಖೆ ವೇಳೆ ಮಹಿಳೆಯ ಕಟ್ಟು ಕಥೆ ಬಹಿರಂಗ
    -ಮಹಿಳೆಗೆ ಬೆಂಬಲಿಸಿದ್ದ ವಕೀಲನ ಬಂಧನ

    ಮುಂಬೈ: ನಟ ಕರಣ್ ಓಬೇರಾಯ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಪೂರ್ವ ನಿಯೋಜಿತವಾಗಿದ್ದು, ಸಂತ್ರಸ್ತ ಮಹಿಳೆಯು ಕರಣ್ ಒಬೇರಾಯ್ ಅವರ ಮಾನಹಾನಿ ಮಾಡಲು ಈ ಸುಳ್ಳು ಆರೋಪ ಮಾಡಿದ್ದು, ಇದಕ್ಕೆ ತಕ್ಕಂತೆ ಕಥೆಯನ್ನೂ ಹೆಣೆಯುವ ಮೂಲಕ ಒಬೇರಾಯ್ ವಿರುದ್ಧ ಸುಳ್ಳು ಆರೋಪವನ್ನು ಸಾಬೀತು ಪಡಿಸಲು ಮುಂದಾಗಿದ್ದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪ ಸಾಬೀತು ಪಡಿಸಲು ಮಹಿಳೆ ವಿವಿಧ ರೀತಿಯ ಕಥೆ ಹೆಣೆದಿದ್ದು, ಇದೆಲ್ಲವೂ ಪೊಲೀಸ್ ತನಿಖೆ ವೇಳೆ ರಿವೀಲ್ ಆಗಿದೆ.

    ಪ್ರಕರಣ ಹಿಂಪಡೆಯುವಂತೆ ಇಬ್ಬರು ವ್ಯಕ್ತಿಗಳು ನನಗೆ ಬೆದರಿಕೆ ಒಡ್ಡಿದ್ದರು ಎಂದು ಇತ್ತೀಚೆಗೆ ಮಹಿಳೆ ದೂರಿದ್ದರು. ಇದೆಲ್ಲವೂ ಕಟ್ಟು ಕಥೆ ಕರಣ್ ಒಬೇರಾಯ್ ಅವರ ಮಾನಹಾನಿ ಮಾಡಲು ಈ ರೀತಿಯ ತಂತ್ರವನ್ನು ಹೆಣೆಯಲಾಗಿದೆ. ಇಂತಹ ನಕಾರಾತ್ಮಕ ಸುದ್ದಿಗಳಿಂದ ನಟ ಕರಣ್ ಒಬೇರಾಯ್ ಅವರ ಮಾನಹಾನಿಯಾಗಿದೆ ಎಂದು ತನಿಖೆ ನಂತರ ತಿಳಿದು ಬಂದಿದೆ.

    ಓಶಿವಾರ ಠಾಣೆಯ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಶೈಲೇಶ್ ಪಾಸಲ್ವಾಡ್ ಪ್ರಕರಣದ ಕುರಿತು ಮಾಹಿತಿ ನೀಡಿ, ತಪ್ಪೊಪ್ಪಿಗೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಒಬೇರಾಯ್ ವಿರುದ್ಧ ಆರೋಪ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಶೀಘ್ರವೇ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸುಳ್ಳು ಹೇಳಿದ್ದ ಮಹಿಳೆ:
    ಮೇ.25ರಂದು ಓಶಿವಾರಾ ಪೊಲೀಸರು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕರಣ್ ಒಬೇರಾಯ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ನನಗೆ ಖಿನ್ನತೆಯ ರೋಗವಿದ್ದು, ಪ್ರತಿ ದಿನ ಬೆಳಗಿನ ಜಾವ ವಾಕಿಂಗ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಹೀಗಾಗಿ ನಿತ್ಯ ಬೆಳಗ್ಗೆ ವಾಕಿಂಗ್‍ಗೆ ತೆರಳುತ್ತಿದ್ದೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಏಕಾಏಕಿ ದಾಳಿ ಮಾಡಿ, ಕರಣ್ ಒಬೇರಾಯ್ ವಿರುದ್ಧದ ಅತ್ಯಾಚಾರ ಕುರಿತ ದೂರನ್ನು ಹಿಂಪಡೆಯದಿದ್ದರೆ ಆಸಿಡ್ ದಾಳಿ ಮಾಡುವ ಕುರಿತು ಬೆದರಿಕೆ ಹಾಕಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.

    ನಟನ ಮಾನಹಾನಿಗೆ ಸಂಚು:
    ಆರಂಭಿಕ ತನಿಖೆ ವೇಳೆ ಪೊಲೀಸರು ಮಹಿಳೆಯ ವಕೀಲನ ದೂರದ ಸಂಬಂಧಿಗಳಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ವಕೀಲನೂ ಸಹ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿ, ವಕೀಲ ಖಾನ್ ಅವರನ್ನು ಪೊಲೀಸರು ವಿವರವಾದ ವಿಚಾರಣೆ ನಡೆಸಿದ್ದು, ಈ ವೇಳೆ ಅಪರಾಧದ ಕುರಿತು ವಕೀಲ ಖಾನ್ ತಪ್ಪೊಪ್ಪಿಕೊಂಡಿದ್ದಾರೆ.

    ಅಲ್ಲದೆ, ಬೆಳಗಿನ ಜಾವ ವಾಕಿಂಗ್‍ಗೆ ತರಳಿದಾಗ ಸಂತ್ರಸ್ತ ಮಹಿಳೆಯ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಯಿತು ಎಂದು ಪೊಲೀಸರ ಮುಂದೆ ವಕೀಲ ಖಾನ್ ಬಾಯ್ಬಿಟ್ಟಿದ್ದಾನೆ. ಈ ಪ್ಲಾನ್ ಮಾಡುವಲ್ಲಿ ಸಂತ್ರಸ್ತ ಮಹಿಳೆಯು ಭಾಗಿಯಾಗಿದ್ದಾಳೆ ಎಂದು ತಿಳಿಸಿದ್ದಾನೆ. ಈ ಎಲ್ಲದರ ಕುರಿತು ಮಹಿಳೆಗೂ ತಿಳಿದಿದೆ. ಇದು ಪಕ್ಕಾ ಪ್ಲಾನ್ ಮಾಡಿ ಮಾಡಲಾದ ಆರೋಪ ಎಂದು ಲಾಯರ್ ಖಾನ್ ಬಾಯ್ಬಿಟ್ಟಿದ್ದಾರೆ.

    ಮಹಿಳೆಯ ಆರೋಪವೇನು?
    ಕರಣ್ ವಿರುದ್ಧದ ಸಂತ್ರಸ್ತ ಮಹಿಳೆಯ ಪ್ರಕರಣದ ಕುರಿತು ಓಶಿವಾರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯು ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಕರಣ್ ಒಬೇರಾಯ್ ಅವರು ಮದುವೆಯಾಗುವಂತೆ ನನ್ನ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋ ಇಟ್ಟುಕೊಂಡು ಕರಣ್ ಅವರು ನನ್ನನ್ನು ಬ್ಲ್ಯಾಕ್‍ಮೇಲ್ ಮಾಡಿ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಕರಣ್ ಒಬೇರಾಯ್ ಅವರು ಆರೋಪವನ್ನು ಅಲ್ಲಗಳೆದು ನನ್ನನ್ನು ಬಂಧಿಸಲು ಹಾಗೂ ಮಾನಹಾನಿ ಉಂಟು ಮಾಡಲು ವಿನಾಕಾರಣ ಅತ್ಯಾಚಾರದ ಕಾನೂನನ್ನು ಮಹಿಳೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದರು. ಇದಕ್ಕೆ ಅವರ ಸ್ನೇಹಿತರೂ ಸಹ ಬೆಂಬಲ ಸೂಚಿಸಿದ್ದರು. ಈ ಸ್ಪಷ್ಟೀಕರಣವನ್ನೂ ಮೀರಿ ಕರಣ್ ಒಬೇರಾಯ್ ಅವರನ್ನು ಮೇ 5 ರಂದು ಬಂಧಿಸಲಾಗಿತ್ತು. ನಂತರ ಮೇ 7 ರಂದು ಮುಂಬೈ ಹೈ ಕೋರ್ಟ್‍ನ ಬೇಲ್ ನೀಡಿತ್ತು.

  • ಕುಟುಂಬದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ 19 ವರ್ಷದ ಪ್ರೇಮಿ

    ಕುಟುಂಬದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ 19 ವರ್ಷದ ಪ್ರೇಮಿ

    – ವಿವಾಹಕ್ಕೆ ಕಾನೂನು ತೊಡಕು

    ಮುಂಬೈ: ಕುಟುಂಬದ ಸದಸ್ಯರು ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ರಕ್ಷಣೆ ಕೊಡಿ ಎಂದು 19 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬಳು ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

    ಮುಂಬೈನ ಪ್ರಿಯಾಂಕಾ ಶೆಟೆ ಕೋರ್ಟ್ ಮೆಟ್ಟಿಲೇರಿದ ಕಾನೂನು ವಿದ್ಯಾರ್ಥಿನಿ. ಪ್ರಿಯಾಂಕಾ ತನ್ನ ಸಹಪಾಠಿ ವಿರಾಜ್ ಅವಘರ್ ನನ್ನು ಪ್ರೀತಿ ಸುತ್ತಿದ್ದಾಳೆ. ಆದರೆ ಪ್ರಿಯಾಂಕಾ ಮರಾಠ ಸಮುದಾಯಕ್ಕೆ ಸೇರಿದ್ದು, ವಿರಾಜ್ ಮಾತಂಗ್ ಸಮುದಾಯಕ್ಕೆ ಸೇರಿದವರಾಗಿದ್ದಾನೆ. ಈ ವಿಚಾರ ಮನೆಯವರಿಗೆ ತಿಳಿದಿದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

    ನಾನು ಹಾಗೂ ವಿರಾಜ್ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ಈ ವಿಚಾರ ಕುಟುಂಬದವರಿಗೆ ಗೊತ್ತಾಗಿ, ಆತನನ್ನು ಬಿಡುವಂತೆ ಚಿತ್ರಹಿಂಸೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಆತನ ಜೊತೆಗೆ ಸಂಬಂಧ ಮುಂದುವರಿಸಿದರೆ ಕೊಲೆಗೈಯುತ್ತೇವೆ ಎಂದಿದ್ದಾರೆ. ಚಿಕ್ಕಪ್ಪ ಕೂಡ ಗನ್ ಹಿಡಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಪ್ರಿಯಾಂಕಾ ದೂರಿದ್ದಾಳೆ.

    ಮನೆಯಿಂದ ಹೊರಗೆ ಬಂದಿರುವ ನನ್ನನ್ನು ಹಾಗೂ ವಿರಾಜ್‍ನನ್ನು ಹಿಂಬಾಲಿಸುತ್ತಿದ್ದಾರೆ. ಕಳೆದ ಎರಡು ತಿಂಗಳಿಂದ ದೂರವಾಣಿ ಮೂಲಕ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ವಿರಾಜ್ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾನೆ ಎಂದು ಪ್ರಿಯಾಂಕಾ ಅಳಲು ತೋಡಿಕೊಂಡಿದ್ದಾಳೆ.

    ಪೋಷಕರ ವಿರುದ್ಧ ದೂರು ನೀಡಲು ಠಾಣೆಗೆ ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ಹೀಗಾಗಿ ನಮಗೆ ಕುಟುಂಬದಿಂದ ರಕ್ಷಣೆ ಕೊಡಿ ಎಂದು ಪ್ರಿಯಾಂಕ ಮುಂಬೈ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾಳೆ.

    ವಿರಾಜ್ ಅವಘರ್ ಈಗ 19 ವರ್ಷ. ಕಾನೂನು ಪ್ರಕಾರ ಪುರುಷರ ವಿವಾಹದ ವಯಸ್ಸು 21. ಇದರಿಂದಾಗಿ ಇಬ್ಬರು ಕಾನೂನುಬದ್ಧವಾಗಿ ಎರಡು ವರ್ಷಗಳ ಕಾಲ ಮದುವೆಯಾಗಲು ಸಾಧ್ಯವಿಲ್ಲ.