Tag: Muharram

  • ಮೊಹರಂ ಹಬ್ಬದ ಆಚರಣೆ ವೇಳೆ ಎತ್ತುಗಳಿಗೆ ಚಿತ್ರಹಿಂಸೆ, ಮರಗಳ ಮಾರಣಹೋಮ

    ಮೊಹರಂ ಹಬ್ಬದ ಆಚರಣೆ ವೇಳೆ ಎತ್ತುಗಳಿಗೆ ಚಿತ್ರಹಿಂಸೆ, ಮರಗಳ ಮಾರಣಹೋಮ

    – ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

    ಕೊಪ್ಪಳ: ಮೊಹರಂ ಹಬ್ಬದ ಆಚರಣೆ ಹೆಸರಿನಲ್ಲಿ ಜಾನುವಾರುಗಳಿಗೆ ಚಿತ್ರಹಿಂಸೆ ನೀಡುತ್ತಿರುವುದರ ಜೊತೆಗೆ ಮರಗಳ ಮಾರಣಹೋಮ ನಡೆಸಿದ ಘಟನೆ ಜಿಲ್ಲೆಯ ನೂತನ ತಾಲೂಕು ಕನಕಗಿರಿಯಲ್ಲಿ ನಡೆದಿದೆ.

    ಮೊಹರಂ ಹಬ್ಬದ ಆಚರಣೆಯ ಹಿಂದಿನ ದಿನ ಕತ್ತಲ್ ರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕತ್ತಲ್ ಹಬ್ಬದ ಆಚರಣೆಗಾಗಿ ನೂರಾರು ಮರಣಗಳ ದಫನ್ ಮಾಡುಲಾಗುತ್ತದೆ. ಬಳಿಕ ಮರಗಳನ್ನು ಕಡಿದು ಜಾನುವಾರಿಗಳಿಗೆ ಕಟ್ಟಿ ತರುವ ವಿಶಿಷ್ಟ ಆಚರಣೆಯೊಂದು ರೂಡಿಯಲ್ಲಿದೆ. ಇದನ್ನೂ ಓದಿ: ಮೊಹರಂ ಹಬ್ಬದ ವಿಶೇಷತೆ ಏನು..? ಯಾರು ಈ ಇಮಾಮ್ ಹುಸೇನ್? ಇಲ್ಲಿದೆ ಕರಬಲಾದ ಕಥೆ

    ಗುರುವಾರ ತಡರಾತ್ರಿಯೂ ಸಹ ನೂತನ ತಾಲೂಕು ಕನಕಗಿರಿಯಲ್ಲಿ ಜನರು ಕತ್ತಲ್ ಹಬ್ಬಕ್ಕಾಗಿ ನೂರಾರು ಮರಗಳ ಮಾರಣಹೋಮ ನಡೆಸಿ, ಅವುಗಳನ್ನು ಎತ್ತುಗಳಿಗೆ ಕಟ್ಟಿ ಎಳೆದು ತಂದಿದ್ದಾರೆ. ಈ ವೇಳೆ ಎತ್ತುಗಳು ನಿತ್ರಾಣಗೊಂಡು ಕುಸಿದರು ಸಹ ಅವುಗಳಿಗೆ ಚಿತ್ರಹಿಂಸೆ ನೀಡಿ ಹಬ್ಬವನ್ನು ಆಚರಿಸಿದ್ದಾರೆ. ಇದನ್ನೂ ಓದಿ: ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ- ಬಾಲಕಿ ಸಾವು, 30 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

    ಮೊಹರಂ ಆಚರಣೆ ನಿಮಿತ್ತ ಜಾನುವಾರುಗಳಿಗೆ ಚಿತ್ರಹಿಂಸೆ ಹಾಗೂ ಮರಗಳ ಮಾರಣಹೋಮಗಳ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಇಂತಹ ವಿಶಿಷ್ಟ ಆಚರಣೆ ಹೆಸರಿನಲ್ಲಿ ಮರಗಳ ಮಾರಣಹೋಮ ಹಾಗೂ ಎತ್ತುಗಳಿಗೆ ಚಿತ್ರಹಿಂಸೆ ನೀಡುತ್ತಿರುವ ವಿಚಾರ ತಿಳಿದಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಿಸಿ ಕ್ರಮ ಕೈಗೊಳ್ಳ ಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ- ಬಾಲಕಿ ಸಾವು, 30 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

    ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮೇಲ್ಛಾವಣೆ ಕುಸಿತ- ಬಾಲಕಿ ಸಾವು, 30 ಜನರಿಗೆ ಗಾಯ, ಐವರ ಸ್ಥಿತಿ ಗಂಭೀರ

    ಬಳ್ಳಾರಿ: ಮೊಹರಂ ಮೆರವಣಿಗೆ ವೀಕ್ಷಣೆ ವೇಳೆ ಮನೆಯ ಮೇಲ್ಛಾವಣೆ ಕುಸಿದ ಪರಿಣಾಮ ಓರ್ವ ಬಾಲಕಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆ ಪಟ್ಟಣದ ಚಿತ್ತವಾಡಗಿಯಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ 5 ಗಂಟೆಗೆ ಈ ಘಟನೆ ನಡೆದಿದೆ. ಚಿತ್ತವಾಡಗಿಯಲ್ಲಿ ಮೊಹರಂ ವೀಕ್ಷಣೆಗಾಗಿ ಮನೆಯ ಮೇಲ್ಛಾವಣೆ ಏರಿ ಕುಳಿತಿದಿದ್ದರು. ನೂರಕ್ಕೂ ಅಧಿಕ ಜನರು ಮೇಲ್ಛಾವಣೆ ಮೇಲೆ ಹತ್ತಿದ್ದರಿಂದ ಮಾಳಿಗೆ ಕುಸಿದಿದೆ. ಕೂಡಲೇ ಮೇಲ್ಛಾವಣೆ ಮೇಲೆ ಕುಳಿತಿದ್ದ ಜನರು ಕೆಳಗೆ ಕುಸಿದಿದ್ದಾರೆ. ಕೂಡಲೇ ಸ್ಥಳೀಯರು ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದಾರೆ.

    ಎಲ್ಲ ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರಿಯಾದ ಸಮಯಕ್ಕೆ ವೈದ್ಯರು ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾವನ್ನಪ್ಪಿದ ಬಾಲಕಿಯನ್ನು 14 ವರ್ಷದ ಉಷಾ ಎಂದು ಗುರುತಿಸಲಾಗಿದೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಚಿತ್ತವಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊಹರಂ ಹಬ್ಬದ ವಿಶೇಷತೆ ಏನು..? ಯಾರು ಈ ಇಮಾಮ್ ಹುಸೇನ್? ಇಲ್ಲಿದೆ ಕರಬಲಾದ ಕಥೆ

    ಮೊಹರಂ ಹಬ್ಬದ ವಿಶೇಷತೆ ಏನು..? ಯಾರು ಈ ಇಮಾಮ್ ಹುಸೇನ್? ಇಲ್ಲಿದೆ ಕರಬಲಾದ ಕಥೆ

    ಮೊಹರಂ.. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳು. ಈ ತಿಂಗಳನ್ನು ಇಸ್ಲಾಂನಲ್ಲಿ ಹೊಸ ವರ್ಷ ಅಂತಾ ಆಚರಣೆ ಮಾಡಲಾಗುತ್ತದೆ. ಮೊಹರಂ ತಿಂಗಳ 10 ದಿನವನ್ನು ರೋಜ್-ಏ-ಆಶುರಾ (Day Of Ashura) ಎಂದು ಕರೆಯಲಾಗುತ್ತದೆ. ರೋಜ್-ಏ-ಅಶುರಾ ದಿನವನ್ನೇ ಕ್ಯಾಲೆಂಡರ್ ನಲ್ಲಿ ಮೋಹರಂ ಎಂದು ಕರೆಯಲಾಗುತ್ತದೆ.

    ಮೊಹರಂ ತಿಂಗಳ 10ನೇ ದಿನದಂದು ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್ ಅವರ ಕಿರಿಯ ಮೊಮ್ಮಗ ಇಮಾಮ್ ಹುಸೇನ್ ಮತ್ತವರ 72 ಅನುಯಾಯಿಗಳು ಧರ್ಮದ ಉಳಿವಿಗಾಗಿ ವೀರ ಮರಣವಪ್ಪಿದ ದಿನ. ಅರಬ್ ರಾಜ ಯಜೀದ್ ವಿರುದ್ಧ ನಡೆದ ಯುದ್ಧದಲ್ಲಿ ಇಮಾಮ್ ಹುಸೇನ್ ಮತ್ತವರ ಅನುಯಾಯಿಗಳು ಇಸ್ಲಾಂ ಧರ್ಮಕ್ಕಾಗಿ ತನ್ನ ಪ್ರಾಣವನ್ನು ಬಲಿದಾನ ಮಾಡಿರುತ್ತಾರೆ.

    ಏನಿದು ಯುದ್ಧ..?
    ಇಸ್ಲಾಂ ಕೇವಲ ದೇವರ ಪ್ರಾರ್ಥನೆಯನ್ನು ಮಾತ್ರ ಹೇಳುತ್ತದೆ. ಪ್ರವಾದಿ ಮೊಹಮ್ಮದ್ ಅವರ ಉಪದೇಶಗಳನ್ನು ಅವರ ಮೊಮ್ಮಕಳು ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಮೊಹಮ್ಮದ್ ತಮ್ಮ ಸಿದ್ಧಾಂತ, ಧರ್ಮ ಪಾಲನೆಯ ನಿಯಮಗಳನ್ನು ವಿಶ್ವದಾದ್ಯಂತ ವಿಸ್ತರಿಸುವಂತೆ ತಿಳಿಸಿದ್ದರು.

    ಮೊಹಮ್ಮದ್ ರ ಕಾಲವಾದ ನಂತರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ ನಾಲ್ಕನೇ ಖಲೀಫರಾಗಿದ್ದರು. ಬೀಬಿ ಫಾತಿಮಾ ಮತ್ತು ಹಜರತ್ ಅಲಿ ದಂಪತಿಯ ಮಕ್ಕಳೇ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್. ಹಜರತ್ ಅಲಿ ಅವರ ತರುವಾಯ ಖಲೀಫ್ ಸ್ಥಾನಕ್ಕೆ ಇಮಾಮ್ ಹುಸೇನ್ ಬರಬೇಕಿತ್ತು. ಆದ್ರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ಎಂಬಾತ ತಾನೇ ಖಲೀಫ್ ಎಂದು ಘೋಷಿಸಿಕೊಂಡಿದ್ದನು. ಸರ್ವ ದುರ್ಗುಣಗಳ ಸಂಪನ್ನನಾಗಿದ್ದ ಯಜೀದ್, ಇಸ್ಲಾಂ ತತ್ವ ಸಿದ್ಧಾಂತಗಳನ್ನು ತನಗೆ ಅನೂಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು.

    ಸಹಜವಾಗಿ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು. ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ. ಸೋದರನ ಸಾವಿನ ಬಳಿಕವೂ ಇಮಾಮ್ ಹುಸೇನ್ ವಿರೋಧಿಸುತ್ತಾ ಬರುತ್ತಾರೆ. ಕೊನೆಗೆ ಇಮಾಮ್ ಹುಸೇನ್ ರನ್ನು ಸಂಧಾನಕ್ಕಾಗಿ ಯಜೀದ್ ಆಹ್ವಾನಿಸುತ್ತಾನೆ. ಯಜೀದ್ ಜೊತೆ ಸೇರದ ಇಮಾಮ್ ಹುಸೇನ್ ಇಸ್ಲಾಂ ಉಳಿಯುವಿಕೆಗಾಗಿ ಹೋರಾಟ ನಡೆಸುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಯುದ್ಧ ಸಾರುತ್ತಾನೆ.

    ಕರಬಲಾದತ್ತ ಪಯಣ:
    ಕೊನೆಗೆ ಇಮಾಮ್ ಹುಸೇನ್ ಅವರು ಯಜೀದ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರಬಲಾದದಲ್ಲಿ ಎದುರಾಗುವ ಯಜೀದ್ ಸೈನಿಕರು ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.

    ಯಾವುದೇ ಪ್ರಲೋಭಣೆಗೆ ಒಳಗಾಗದ ಇಮಾಮ್ ಹುಸೇನ್ ಅವರಿಗೆ ಕುಡಿಯಲು ನೀರು ಸಹ ನೀಡಲ್ಲ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಕೂಡ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ತಮ್ಮ ಜೀವನದ ಕೊನೆಯವರೆಗೂ ಇಮಾಮ್ ಹುಸೇನ್ ಇಸ್ಲಾಂ ಧರ್ಮದ ಉಳಿಯುವಿಕೆಗಾಗಿ ಹೋರಾಡಿದ್ದ ಧರ್ಮಗುರು.

    ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗಪಡೆದು ರಂಜಿಸುತ್ತಿದೆ. ಇಮಾಮ್ ಹುಸೇನ್ ದುರಂತ ಸಾವಿನ ಸಂತಾಪ ಸೂಚಿಸುವ ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಲಾಗುತ್ತದೆ. ಹಿಂದೂ-ಮುಸ್ಲಿಮರು ಒಂದಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತದೆ. ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರು ಹಿಡಿಯುವುದು, ಬೆಂಕಿಯಲ್ಲಿ ನಡೆದಾಡುವುದು, ಹಿಂದೂಗಳೆಲ್ಲ ಸೇರಿ ನೈವೇದ್ಯ ನೀಡುತ್ತಾರೆ.

    ಹಬ್ಬದ ಸಂದರ್ಭದಲ್ಲಿ ಪಿಂಜಾ ಅಥವಾ ದೇವರು ಹೊತ್ತವರಲ್ಲಿ ಭಯ, ಭಕ್ತಿ, ಹೇಳಿಕೆಗಳು, ರೈತರಿಗೆ ಭವಿಷ್ಯತ್ತಿನಲ್ಲಿ ಮಳೆ, ಬೆಳೆಯ ಬಗ್ಗೆ, ಸಂತಾನ ಪ್ರಾಪ್ತಿಯ ಬಗ್ಗೆ, ಮನೆತನಗಳ ಸಮಸ್ಯೆ ಪರಿಹಾರಗಳ ಬಗ್ಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಭಕ್ತಾದಿಗಳು ಕೇಳುವ ಪದ್ಧತಿ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಇನ್ನು ಜೀವಂತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗನ ಸಾವಿಗೆ ಪ್ರತೀಕಾರವಾಗಿ ಅಣ್ಣನ ಮಗನನ್ನೇ ಕೊಂದ!

    ಮಗನ ಸಾವಿಗೆ ಪ್ರತೀಕಾರವಾಗಿ ಅಣ್ಣನ ಮಗನನ್ನೇ ಕೊಂದ!

    ಹೈದರಾಬಾದ್: ತನ್ನ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬ ಅಣ್ಣನ ಮಗನನ್ನೇ ಅಪಹರಣ ಮಾಡಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್‍ನಲ್ಲಿ ಶುಕ್ರವಾರ ನಡೆದಿದ್ದು, ಆರೋಪಿ ಚಿಕ್ಕಪ್ಪನ್ನು ಪೊಲೀಸರು ಬಂಧಿಸಿದ್ದಾರೆ.

    ಹೈದರಾಬಾದ್‍ನ ದಾದೀಪುರದಲ್ಲಿ ಈ ಘಟನೆ ನಡೆದಿದ್ದು, 7 ವರ್ಷದ ಅಬ್ಬಾಸ್ ಹುಸೈನ್ ರಿಜ್ವಿ ಹತ್ಯೆಯಾದ ಬಾಲಕ. ಚಿಕ್ಕಪ್ಪ ಜಾದವ್ ಅಲಿ ಕೊಲೆ ಆರೋಪಿಯಾಗಿದ್ದು, ಹಳೆ ವೈಷಮ್ಯವೆ ಬಾಲಕನ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. 2008ರಲ್ಲಿ ಅಬ್ಬಾಸ್ ಹುಸೈನ್ ರಿಜ್ವಿಯ ಪೋಷಕರು ಜಾವದ್ ಅಲಿ ಮಗನ ಸಾವಿಗೆ ಕಾರಣರಾಗಿದ್ದರು. ಹೀಗಾಗಿ ಪೋಷಕರ ಮೇಲಿನ ದ್ವೇಷದಿಂದ ಸೇಡು ತೀರಿಸಿಕೊಳ್ಳಲು ಬಾಲಕನನ್ನು ಅಪಹರಣ ಮಾಡಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಕೆಲ ದಿನಗಳ ಹಿಂದೆ ಬಾಲಕ ತನ್ನ ಪೋಷಕರ ಜೊತೆ ಮೊಹರಂ ಹಬ್ಬಕ್ಕೆಂದು ದಾದೀಪುರದಲ್ಲಿರುವ ತನ್ನ ಅಜ್ಜ ಖಮರ್ ಹುಸೈನ್ ರಿಜ್ವಿ ಮನೆಗೆ ಹೋಗಿದ್ದನು. ಶುಕ್ರವಾರದಂದು ಮೊಹರಂ ಮೊದಲ ದಿನವಾದ್ದರಿಂದ ಅಲಮ್ ಕೂರಿಸಲು ತಯಾರಿ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಚಿಕ್ಕಪ್ಪ ಜಾವಿದ್ ಅಲಿ ಬಾಲಕನನ್ನು ಉಪಾಯದಿಂದ ಕರೆದೊಯ್ದು ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಇಲ್ಲಿನ ರೇನ್ ಬಜಾರ್ ಪ್ರದೇಶದ ನಾಗಾಬೌಲಿ ಸ್ಮಶಾನದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.

    ಆರೋಪಿ ಜಾವದ್ ಅಲಿ ತನ್ನ ಮಗನ ಸಾವಿಗೆ ಬಾಲಕನ ಅಜ್ಜನನ್ನು ಹೊಣೆಯಾಗಿಸಿದ್ದಾನೆ. ಜಾವದ್ ಸೌದಿ ಅರೇಬಿಯಾದಲ್ಲಿದ್ದಾಗ ತನ್ನ ಮಗನನ್ನು ಖಮರ್ ಹುಸೇನ್ ರಿಜ್ವಿಯ ಆಶ್ರಯದಲ್ಲಿ ಬಿಟ್ಟಿದ್ದ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಬ್ಬಾಸ್ ಹುಸೇನ್ ರಿಜ್ವಿಯನ್ನ ಕೊಲೆ ಮಾಡಿದ್ದಾನೆ.

    ರಿಜ್ವಿ ಅಜ್ಜ ಇಲ್ಲಿನ ಬಿಬಿ ಕಾ ಆಲಮ್‍ನಲ್ಲಿ ಅಲಮ್ ಬಾರ್ದರ್ ಆಗಿ ಕೆಲಸ ಮಾಡುತ್ತಿದ್ದು, ಅಜ್ಜನಂತೆ ಬಾಲಕ ಕೂಡ ಅಲಮ್ ಬಾರ್ದರ್ ಆಗಬಹುದು ಎಂದು ಜಾವದ್ ಭಾವಿಸಿದ್ದ. ಹೀಗಾಗಿ ಆತನನ್ನು ಕೊಲ್ಲಲು ನಿರ್ಧರಿಸಿದ್ದ. ಈ ಸಂಬಂಧ ಆರೋಪಿ ಜಾವದ್ ಅಲಿ ವಿರುದ್ಧ ಐಪಿಸಿ ಸೆಕ್ಷನ್ 363 ಮತ್ತು 302ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಸಿಪಿ ವಿ. ಸತ್ಯನಾರಾಯಣ ತಿಳಿಸಿದ್ದಾರೆ.

  • ನವರಾತ್ರಿ, ಮೊಹರಂ ಆಚರಣೆಗೆ ಷರತ್ತುಗಳನ್ನು ಹಾಕಿದ ಉತ್ತರಪ್ರದೇಶ ಸಿಎಂ

    ನವರಾತ್ರಿ, ಮೊಹರಂ ಆಚರಣೆಗೆ ಷರತ್ತುಗಳನ್ನು ಹಾಕಿದ ಉತ್ತರಪ್ರದೇಶ ಸಿಎಂ

    ಲಕ್ನೌ: ಸೆಪ್ಟೆಂಬರ್ 21 ಇದೇ ಗುರುವಾರದಿಂದ ನವರಾತ್ರಿ ಹಬ್ಬ ಆರಂಭವಾಗಲಿದೆ. ಇದೇ ಹೊತ್ತಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ದುರ್ಗಾ ಪೂಜೆ, ದಸರಾ ಹಾಗೂ ಮೊಹರಂ ಆಚರಣೆಗೆ ಹಲವು ಷರತ್ತುಗಳನ್ನ ವಿಧಿಸಿದೆ.

    ದುರ್ಗಾ ಪೂಜೆ ಮೆರವಣಿಗೆ ವೇಳೆ ದುರ್ಗಾ ಮಾತೆಯ ಮೂರ್ತಿ ಹಾಗೂ ಮೊಹರಂನ ಮೆರವಣಿಗೆ ವೇಳೆ ಹೊತ್ತೊಯ್ಯಲಾಗುವ ತಝಿಯಾಗಳು ಇಷ್ಟೇ ಎತ್ತರ ಇರಬೇಕೆಂದು ನಿರ್ಬಂಧ ಹೇರಲಾಗಿದೆ. ಹಾಗೂ ಡಿಜೆ(ಹಾಡು-ನೃತ್ಯಕ್ಕೂ) ನಿಷೇಧ ಹೇರಿದ್ದಾರೆ. ಧ್ವನಿವರ್ಧಕಗಳ ಬಳಕೆಗೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಮೊದಲೇ ನಿಗದಿಪಡಿಸಿದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಮೆರವಣಿಗೆ ಸಾಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

    ಸೆಪ್ಟೆಂಬರ್ 26 ರಂದು 4 ದಿನಗಳ ಕಾಲ ದುರ್ಗಾ ಪೂಜೆ ನಡೆಯಲಿದೆ. ಸೆಪ್ಟೆಂಬರ್ 30 ರಂದು ವಿಜಯದಶಮಿ ಆಚರಿಸಲಾಗುತ್ತದೆ. ಹಾಗೇ ಆಕ್ಟೋಬರ್ 1ರಂದು ಮೊಹರಂ ಇದೆ. ಧ್ವನಿ ವರ್ಧಕಗಳ ಬಳಕೆ ಹಾಗೂ ಮೆರವಣಿಗೆ ಹೋಗುವ ಮಾರ್ಗದ ವಿಚಾರವಾಗಿ ಈ ಹಿಂದೆ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಾಟೆ ಆದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ದುರ್ಗಾ ಮಾತೆಯ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆ ಸಾಗುವ ಮಾರ್ಗವನ್ನು ರಾಜ್ಯ ಸರ್ಕಾರವೇ ನಿರ್ಧರಿಸಲಿದೆ.

    ದಸರಾ ಹಬ್ಬ ಕೊನೆಯಾದ ಮಾರನೇ ದಿನವೇ ಮೊಹರಂ ಇರೋದು ವಿಶೇಷ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡೋ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.