Tag: mudhol

  • ಅತ್ಯಾಚಾರ ಯತ್ನ: ಮನನೊಂದು ಆತ್ಯಹತ್ಯೆಗೆ ಶರಣಾದ ಅಪ್ರಾಪ್ತೆ

    ಅತ್ಯಾಚಾರ ಯತ್ನ: ಮನನೊಂದು ಆತ್ಯಹತ್ಯೆಗೆ ಶರಣಾದ ಅಪ್ರಾಪ್ತೆ

    ಬಾಗಲಕೋಟೆ: ಕುಡಿದ ಮತ್ತಿನಲ್ಲಿ ವ್ಯಕಿಯೊಬ್ಬ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ನೊಂದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಚನಾಳ ಗ್ರಾಮದಲ್ಲಿ ನಡೆದಿದೆ.

    ಸರೋಜಿನಿ (16) ಆತ್ಮಹತ್ಯೆಗೆ ಶರಣಾದ ಅಪ್ರಾಪ್ತೆ. ವೆಂಕಪ್ಪ ಗಡ್ಡಿ (36) ಎಂಬಾತನೇ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ. ವೆಂಕಪ್ಪ ಮೂರು ದಿನಗಳ ಹಿಂದೆ ಗ್ರಾಮದ ಸರೋಜಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದನು. ಇದರಿಂದ ಅವಮಾನ ತಾಳಲಾರದೇ ಆಕೆ ಶುಕ್ರವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮಗಳ ಸಾವಿನ ಬಳಿಕ ಬಾಲಕಿ ತಂದೆ ಕೋಪಗೊಂಡು ವೆಂಕಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆರೋಪಿ ಮುಧೋಳ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • 50 ವರ್ಷಗಳ ದೇಶವನ್ನ ಲೂಟಿ ಮಾಡಿದ್ದಕ್ಕೆ ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಶೆಟ್ಟರ್

    50 ವರ್ಷಗಳ ದೇಶವನ್ನ ಲೂಟಿ ಮಾಡಿದ್ದಕ್ಕೆ ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಶೆಟ್ಟರ್

    – 37 ನೇ ದಿನಕ್ಕೆ ಕಾಲಿಟ್ಟ ಸಸಲಾಟ್ಟಿ ಏತ ನೀರಾವರಿ ಪ್ರತಿಭಟನೆ

    ಬಾಗಲಕೋಟೆ: ಐವತ್ತು ವರ್ಷಗಳ ಕಾಲ ಕಾಂಗ್ರೆಸ್‍ನವರು ಆಡಳಿತ ನಡೆಸಿ ದೇಶ ಲೂಟಿ ಹೊಡೆದಿದ್ದಾರೆ ಹಾಗಾಗಿ ಅವ್ರ ಮನೆಗಳ ಮೇಲೆಯೇ ಐಟಿ ದಾಳಿಯಾಗುತ್ತಿವೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಿಲ್ಲೆಯ ಮುಧೋಳ ಪಟ್ಟಣದಲ್ಲಿ ಹೇಳಿದ್ದಾರೆ.

    ಸಸಲಾಟ್ಟಿ ಏತ ನೀರಾವರಿ ಜಾರಿಗೆ ಆಗ್ರಹಿಸಿ ನೆಡೆಯುತ್ತಿರುವ ರೈತ ಪ್ರತಿಭಟನೆ 37ನೇ ದಿನಕ್ಕೆ ಕಾಲಿಟ್ಟಿದೆ. ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಘಟಕ ಇಂದು ಮುಧೋಳ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಸಮಾವೇಶದಲ್ಲಿ ಭಾಗವಹಿಸಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

    ಜಗದೀಶ್ ಶೆಟ್ಟರ್ ಮಾತನಾಡಿ, ಸಚಿವ ರಮೇಶ್ ಜಾರಕಿಹೊಳಿ ಮನೆ ಮೇಲೆ ಐಟಿ ದಾಳಿಯಾಗಿದೆ. ಆದರೂ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡ್ತಿಲ್ಲ, ಕೂಡಲೇ ಅವ್ರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ರು. ಇನ್ನು ಎಂಎಲ್‍ಸಿ ಗೋವಿಂದ್‍ರಾಜ್ ಅವ್ರ ಡೈರಿ ಬಗ್ಗೆ ಸೂಕ್ತ ತನಿಖೆಯಾದ್ರೆ ಸಿಎಂ ಸಿದ್ಧರಾಮಯ್ಯ ಮನೆಗೆ ಹೋಗ್ತಾರೆ. ಇನ್ನು ಡೈರಿ ಬಗ್ಗೆಯೂ ತನಿಖೆಯಾಗಲಿ, ಅನಂತ್‍ಕುಮಾರ್ ಹಾಗು ಯಡಿಯೂರಪ್ಪ ಡೈರಿ ಸಂಭಾಷಣೆ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳಿದರು.

    ಸಿಎಂ ಸಿದ್ದರಾಮಯ್ಯ ದಾಖಲೆ ಇಲ್ಲದೇ ಬಿಎಸ್‍ವೈ ಬಗ್ಗೆ ಮಾತನಾಡ್ತಾರೆ. ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಪಕ್ಕದ ಜಿಲ್ಲೆಯವ್ರೇ ಆದ್ರೂ ಈ ಭಾಗದ ನೀರಾವರಿ ಯೋಜನೆ ಬಗ್ಗೆ ಕಿಂಚಿತ್ತೂ ಚಿಂತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತ ಪರ ಕಾಳಜಿ ಇದ್ರೆ ಈ ಯೋಜನೆಯನ್ನ ಕೂಡಲೇ ಜಾರಿಗೊಳಿಸಬೇಕು. ಜಾರಿ ಆಗದೇ ಇದ್ದರೆ ಮುಂದೆ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಏತ ನೀರಾವರಿ ಯೋಜನೆ ಜಾರಿಗೊಳಿಸುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಈ ಭಾಗದ ಜನರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ರೆ ಈ ಬಾರಿಯ ಬಜೆಟ್‍ನಲ್ಲಿ 10 ಸಾವಿರ ಕೋಟಿ ರೂ. ತೆಗೆದಿಡಬೇಕು. ನೀರಾವರಿ ಯೋಜನೆಗಳ ಅಭಿವೃದ್ಧಿ ಬಗ್ಗೆ ಇರುವ ಅವಕಾಶಗಳನ್ನ ಸಚಿವ ಎಂ.ಬಿ ಪಾಟೀಲ್ ಸರಿಯಾಗಿ ಬಳಸಿಕೊಳ್ಳದಿದ್ರೆ ಮುಂದಿನ ಜನ್ಮದಲ್ಲಿ ಅವರು ನೀರಾವರಿ ಮಂತ್ರಿ ಆಗಲ್ಲ ಎಂದರು.

    ಬ್ರಿಗೇಡ್ ಸಮಾವೇಶದಲ್ಲಿ ಭಾಗವಹಿಸುವಿಕೆ ಬಗ್ಗೆ ಮಾತನಾಡಿ, ಪಕ್ಷದ ವತಿಯಿಂದ ಬ್ರಿಗೇಡ್ ಸಮಾವೇಶ ಮಾಡಲಾಗುತ್ತೆ. ಇನ್ನು ಯಡಿಯೂರಪ್ಪ ಹಾಗೂ ನಮ್ಮ ಮಧ್ಯೆ ಇದ್ದ ಸಮಸ್ಯೆ ಬಗೆಹರಿದಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿ ನಕ್ಕರು.

     

  • ಎಂಜಿನಿಯರ್ ಓದಿದ್ರೂ ಕೆಲಸ ಬಿಟ್ಟು ಪ್ರಗತಿಪರ ರೈತರಾದ್ರು

    ಎಂಜಿನಿಯರ್ ಓದಿದ್ರೂ ಕೆಲಸ ಬಿಟ್ಟು ಪ್ರಗತಿಪರ ರೈತರಾದ್ರು

    ಬಾಗಲಕೋಟೆ: ಎಂಜಿನಿಯರ್ ಓದಿದ್ರೂ ಒಳ್ಳೆಯ ಕೆಲಸ ಬಿಟ್ಟು ಪ್ರಗತಿ ಪರ ರೈತರಾಗಿರುವ ಬಾಗಲಕೋಟೆಯ ಬಸನಗೌಡ ಪೊಲೀಸ್ ಪಾಟೀಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಗ್ರಾಮದ ಸುತ್ತಮುತ್ತಲ ರೈತರಿಗೆ ಇವರು ಕೃಷಿ ಡಿಕ್ಷನರಿ ಎಂದು ಫೇಮಸ್. ಕೃಷಿ ಬಗ್ಗೆ ಏನೇ ಮಾಹಿತಿ ಕೇಳಿದ್ರೂ ಥಟ್ ಅಂತ ಉತ್ತರಿಸುತ್ತಾರೆ.

    ಬಸನಗೌಡ ಅವರು ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನಿವಾಸಿ. ಇವರನ್ನು ಕೃಷಿಯಲ್ಲಿ ಸಾಧಕ, ಕೃಷಿ ವಿಜ್ಞಾನಿ, ಕೃಷಿ ಪಂಡಿತ ಹೀಗೆ ಇವರನ್ನ ಏನಂತಾ ಕರೀಬೇಕು ಅನ್ನೋದೇ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಕೃಷಿಯಲ್ಲಿ ಪಾಂಡಿತ್ಯ ಸಂಪಾದಿಸಿದ್ದಾರೆ.

    ಕೃಷಿ ಬಗ್ಗೆ ಎರಡೂವರೆ ಸಾವಿರದಷ್ಟು ಪುಸ್ತಕ ಹಾಗೂ ಮ್ಯಾಗಜಿನ್ ಖರೀದಿಸಿದ್ದು ಮನೆಯನ್ನೇ ಕೃಷಿ ಗ್ರಂಥಾಲಯ ಮಾಡಿಕೊಂಡಿದ್ದಾರೆ. 180 ಕೃಷಿ ಪಂಡಿತರ ಜೀವನ ಚರಿತ್ರೆಯ ಅಲ್ಬಂ, 150 ಕೃಷಿ ಸಂಬಂಧಿ ಸಿಡಿ ಕಲೆಹಾಕಿ ಸುತ್ತಮುತ್ತಲ ರೈತರಿಗೆ ವಿಭಿನ್ನ ಕೃಷಿ ಪದ್ದತಿಯ ಬಗ್ಗೆ ಉಪಯುಕ್ತ ಮಾಹಿತಿ ನೀಡ್ತಿದ್ದಾರೆ.

    ಪಬ್ಲಿಕ್ ಟಿವಿ ಅಭಿಮಾನಿಯಾಗಿರುವ ಬಸನಗೌಡ್ರು, ಕೃಷಿಯಲ್ಲಿ ಸಾಧನೆ ಮಾಡಿ ಪಬ್ಲಿಕ್ ಟಿವಿಯಲ್ಲಿ ಗುರುತಿಸಿಕೊಂಡ ಪಬ್ಲಿಕ್ ಹೀರೋಗಳ ಮನೆಗೆ ಭೇಟಿ ನೀಡ್ತಾರೆ. ಅವರಿಂದ ಕೃಷಿ ಬಗ್ಗೆ ಮಾಹಿತಿ ಪಡೆದು ಜಿಲ್ಲೆಯ ರೈತರಿಗೆ ತಿಳಿಸಿಕೊಡ್ತಾರೆ. ಹೆಬ್ಬೇವು, ಮೆಣಸು, ತರಕಾರಿ ಬೆಳೆಗಳು, ತೊಗರಿ, ದಾಳಿಂಬೆ, ಈರುಳ್ಳಿ ಹೀಗೆ ವಿವಿಧ ಬೆಳೆ ಬೆಳೆದು ವಿಭಿನ್ನ ರೈತ ಎನಿಸಿಕೊಂಡಿದ್ದಾರೆ.

    https://www.youtube.com/watch?v=wgA64c0SyVs