Tag: mud

  • ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಪ್ರತಿಭಟಿಸಿ ಕೆಸರು ನೀರಲ್ಲೇ ಸ್ನಾನ ಮಾಡಿದ ಶಾಸಕಿ

    ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಪ್ರತಿಭಟಿಸಿ ಕೆಸರು ನೀರಲ್ಲೇ ಸ್ನಾನ ಮಾಡಿದ ಶಾಸಕಿ

    ರಾಂಚಿ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ (National Highway) ತುಂಬಿದ ಕೆಸರಲ್ಲಿ (Mud) ಕುಳಿತು ಶಾಸಕಿಯೊಬ್ಬರು (MLA) ಸ್ನಾನ (Bath) ಮಾಡಿ ಪ್ರತಿಭಟಿಸಿರುವ ಘಟನೆ ಜಾರ್ಖಂಡ್‌ನ (Jharkhand) ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಶಾಸಕಿ ಕೊಳಚೆ ನೀರಿನಲ್ಲಿ ಮಿಂದು ತಕ್ಷಣವೇ ರಸ್ತೆಯ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.

    ಮಹಾಗಾಮಾದ ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ತಮ್ಮ ಮೇಲೆ ಕೆಸರು ನೀರನ್ನು ಸುರಿದುಕೊಂಡು, ಈ ರಸ್ತೆಯ ದುರಸ್ತಿಯನ್ನು ಕೈಗೊಂಡು ದೊಡ್ಡ ಗುಂಡಿಗಳನ್ನು ಮುಚ್ಚಲು ಈಗಿಂದೀಗಲೇ ಮುಂದಾಗದಿದ್ದರೆ, ನಾನು ಇಲ್ಲಿಂದ ಕದಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಪೋಸ್ಟರ್‌ನಲ್ಲಿ ಸಾವರ್ಕರ್ ಫೋಟೋ – ಪ್ರಿಂಟಿಂಗ್ ಮಿಸ್ಟೇಕ್ ಎಂದ ಕಾಂಗ್ರೆಸ್

    ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಹೋರಾಟದಲ್ಲಿ ನಾನು ಭಾಗಿಯಾಗಲು ಬಯಸಲ್ಲ. ಇದು ಎನ್‌ಹೆಚ್-133 ಆಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಇದರ ವಿಸ್ತರಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಂಡಿದ್ದರು. ಆದರೆ ದುರಸ್ತಿಗೆ ಕೇಂದ್ರ ಹಣವನ್ನು ನೀಡಿಲ್ಲ. ಈ ಹೆದ್ದಾರಿಯಿಂದ ಸಾರ್ವಜನಿಕರು ಕಷ್ಟಪಡುತ್ತಿದ್ದು, ಇದನ್ನು ಸರಿಪಡಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೋಗ್ಬೇಡಿ ಸರ್- ಮಂಡ್ಯದಲ್ಲಿ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರು

    Live Tv
    [brid partner=56869869 player=32851 video=960834 autoplay=true]

  • ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಫೇಕ್ ಕಾಲ್ ಮಾಡಿದವ ಅರೆಸ್ಟ್ – ಅಸಲಿ ಕಾರಣವೇನು?

    ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಫೇಕ್ ಕಾಲ್ ಮಾಡಿದವ ಅರೆಸ್ಟ್ – ಅಸಲಿ ಕಾರಣವೇನು?

    ನವದೆಹಲಿ: ಕಾರ್ ಡ್ರೈವರ್‌ಗೆ ಪಾಠ ಕಲಿಸಲು ಪೊಲೀಸರಿಗೆ ಫೇಕ್ ಕಾಲ್ ಮಾಡಿದವನನ್ನು ಅರೆಸ್ಟ್ ಮಾಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ದೆಹಲಿಯ ಮುಂಡ್ಕಾ ಪೊಲೀಸ್ ಠಾಣೆಗೆ ಕಾಲ್ ಮಾಡಿದ ಆರೋಪಿಯು, ತನ್ನ ಮೇಲೆ ಯಾರೂ ಪಿಸ್ತೂಲ್‍ನಿಂದ ಹಲ್ಲೆ ಮಾಡಲು ಬಂದಿದ್ದಾರೆ ಎಂದು ಪೊಲೀಸರಿಗೆ ನಕಲಿ ಕರೆ ಮಾಡಿದ್ದಾನೆ. ಈ ಹಿನ್ನೆಲೆ ಕಾಲ್‌ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಇದನ್ನೂ ಓದಿ:  ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್

    ಜುಲೈ 22 ರಂದು ಅರವಿಂದ್ ಕುಮಾರ್(39) ಬೈಕ್‍ನಲ್ಲಿ ಹೋಗುತ್ತಿದ್ದಾಗ ಕಾರೊಂದು ಕೊಚ್ಚೆಯ ಮೇಲೆ ಹರಿದಿದೆ. ಈ ವೇಳೆ ಪಕ್ಕದಲ್ಲೇ ಇದ್ದ ಅರವಿಂದ್ ಮೇಲೆ ಕೊಚ್ಚೆ ನೀರು ಬಿದ್ದಿದೆ. ಇದರಿಂದ ತನ್ನ ಬಟ್ಟೆ ಹಾಳು ಮಾಡಿದ್ದಕ್ಕಾಗಿ ಚಾಲಕನಿಗೆ ಪಾಠ ಕಲಿಸಲು, ಅವನು ಪೊಲೀಸರಿಗೆ ನಕಲಿ ಕರೆ ಮಾಡಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ(ಹೊರ) ಸಮೀರ್ ಶರ್ಮಾ ಹೇಳಿದ್ದಾರೆ.

    ಗ್ಯಾಸ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಕುಮಾರ್, ಮುಂಡ್ಕ ಪೊಲೀಸ್ ಠಾಣೆಗೆ ಕರೆ ಮಾಡಿ ಕಾರು ಚಾಲಕ ತನ್ನ ಮೇಲೆ ಪಿಸ್ತೂಲ್‍ನಿಂದ ಹಲ್ಲೆ ಮಾಡಲು ಬಂದಿದ್ದಾನೆ ಎಂದು ಆರೋಪಿಸಿದ್ದಾನೆ. ಆದರೆ, ಪೊಲೀಸರು ಸ್ಥಳಕ್ಕೆ ತಲುಪಿದಾಗ ಕುಮಾರ್ ಅಲ್ಲಿ ಇರಲಿಲ್ಲ ಮತ್ತು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಮರಿಗೆ ಬಿದ್ದ ಕಾರು: 5 ಸಾವು, ಇಬ್ಬರಿಗೆ ಗಂಭೀರ ಗಾಯ

    ಮರುದಿನ, ಪೊಲೀಸರು ಕುಮಾರ್‌ನನ್ನು ಸಂಪರ್ಕಿಸಿದ್ದು, ವಿಚಾರಣೆಯ ಮಾಡಿದ್ದಾರೆ. ಈ ವೇಳೆ, ತಾನು ಕಾರು ಚಾಲಕನಿಗೆ ಬುದ್ಧಿ ಕಲಿಸಲು ನಕಲಿ ಕರೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಹೊಂಡ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಜೀವಂತ ಸಮಾಧಿ

    ಹೊಂಡ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಜೀವಂತ ಸಮಾಧಿ

    ಮಂಗಳೂರು: ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ದುರಸ್ಥಿ ವೇಳೆ ಮಣ್ಣು ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮಣ್ಣಿನಲ್ಲೇ ಸಮಾಧಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವಿನಲ್ಲಿ ಘಟನೆ ನಡೆದಿದ್ದು, ಪಾರ್ಪಳ್ಳದ ಕೂಲಿ ಕಾರ್ಮಿಕರಾದ ಬಾಬು ಮತ್ತು ರವಿ ಎಂದಿನಂತೆ ಇಂದು ಕೂಲಿ ಕೆಲಸಕ್ಕೆ ಬಂದಿದ್ದರು. ಕಡಮ್ಮಾಜೆ ಹಾಜಿ ಅಬ್ದುಲ್ಲಾರಿಗೆ ಸೇರಿದ ಕೋಳಿ ಫಾರ್ಮ್‍ನ ತ್ಯಾಜ್ಯ ವಿಲೇವಾರಿ ಗುಂಡಿಗೆ ಪೈಪ್ ಆಳವಡಿಸುವ ಕಾರ್ಯ ನಡೆಸುತ್ತಿದ್ದರು. ಆದರೆ ಗುಂಡಿಯ ಮೇಲ್ಭಾಗದಲ್ಲಿ ಹಾಕಿದ್ದ ಮಣ್ಣಿನ ಲೋಡ್‍ನಿಂದ ಸ್ಲ್ಯಾಬ್ ಮುರಿದು ಇಬ್ಬರೂ ಗುಂಡಿಯೊಳಗೆ ಬಿದ್ದಿದ್ದಾರೆ. ಬಿದ್ದ ಸಂದರ್ಭ ಪಕ್ಕದಲ್ಲೇ ಹಾಕಿದ್ದ ಮಣ್ಣಿನ ರಾಶಿಯು ಕೆಳಗೆ ಬಿದ್ದು, ಸಮಾಧಿಯಾಗಿದ್ದಾರೆ.

    ಘಟನೆ ನಡೆದ ಸಂದರ್ಭ ಅಗ್ನಿಶಾಮಕ ದಳ, ಸಂಪ್ಯ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಅಧಿಕಾರಿ, ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಸಿದರು. ಸಂಪೂರ್ಣವಾಗಿ ಮಣ್ಣು ಬಿದ್ದಿದ್ದರಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ಮಣ್ಣಿನಡಿ ಹೂತು ಹೋಗಿದ್ದ ಇಬ್ಬರ ಮೃತದೇಹವನ್ನು ಹೊರತೆಗೆದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಜಾಗದ ಮಾಲೀಕರು ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಕೆಲಸಕ್ಕೆ ತೆರಳಿದ್ದಾರೆ ಮರಳಿ ಬರುತ್ತಾರೆ ಎಂದು ದಾರಿ ಕಾಯುತ್ತಿದ್ದ ಮೃತರ ಕುಟುಂಬಸ್ಥರು ಘಟನೆಯಿಂದ ದಿಗ್ಭ್ರಮೆಗೊಳಗಾಗಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಸದಸ್ಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರವಾದರೂ ಸಿಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

  • ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    ಮಣ್ಣಲ್ಲಿ ಮುಚ್ಚಿ ಹೋಗ್ತಿದೆ 500 ವರ್ಷದ ದೇಗುಲ

    – ದೇವಸ್ಥಾನಕ್ಕೆ ಕಂಟಕವಾಯ್ತು ರಸ್ತೆ ಅಗಲೀಕರಣ

    ಮಂಡ್ಯ: ಹೆದ್ದಾರಿ ಕಾಮಗಾರಿಯಿಂದಾಗಿ ಜಿಲ್ಲೆಯಲ್ಲಿರುವ 500 ವರ್ಷಗಳ ಹಳೆಯದಾದ ಪ್ರಸಿದ್ಧ ದೇವಸ್ಥಾನಕ್ಕೆ ಕಂಟಕ ಎದುರಾಗಿದೆ. ಇದೀಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇಗುಲವೇ ಮುಚ್ಚಿಹೋಗುವ ಆತಂಕ ಎದುರಾಗಿದೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ರಂಗನಾಥ ಸ್ವಾಮಿ ದೇವಾಲಯ ಇದೆ. ಇದು 500 ವರ್ಷಗಳ ಹಿಂದಿನ ಪುರಾಣ ಪ್ರಸಿದ್ಧ ದೇವಾಲಯ. ರಂಗನಾಥ ಸ್ವಾಮಿ ಮಲಗಿರುವ ಭಂಗಿಯಲ್ಲಿ ವಿಗ್ರಹ ಕೆತ್ತಲಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ದೇವಾಲಯ ಮಣ್ಣಲ್ಲಿ ಮಣ್ಣಾಗುವ ಆತಂಕ ಎದುರಾಗಿದೆ.

    ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇಗುಲಗಳು ಹತ್ತಾರಿವೆ. ಅದರಲ್ಲಿ ವಿಜಯನಗರ ಅರಸರ ಕಾಲದ ಈ ರಂಗನಾಥ ಸ್ವಾಮಿ ದೇಗುಲವೂ ಒಂದು. ಶ್ರೀರಂಗಪಟ್ಟಣದ ಗಂಜಾಂ ಸಮೀಪದ ಗದ್ದೆಯೊಂದರಲ್ಲಿ ದೇವಾಲಯ ನಿರ್ಮಿಸಿರುವುದರಿಂದ ಈ ದೇವಸ್ಥಾನವನ್ನು ಗದ್ದೆ ರಂಗನಾಥಸ್ವಾಮಿ ಎಂದು ಕರೆಯಲಾಗುತ್ತದೆ. ಆದರೆ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಗದ್ದೆ ರಂಗನಾಥಸ್ವಾಮಿ ದೇವಾಲಯ ಮುಚ್ಚಿಹೋಗುವ ಭೀತಿ ಎದುರಾಗಿದೆ.

    ಈಗಾಗಲೇ ದೇವಾಲಯದ ಸುತ್ತಾ ಮಣ್ಣಿನ ರಾಶಿ ಹಾಕಲಾಗುತ್ತಿರುವುದರಿಂದ ಮುಚ್ಚಿಹೋಗುವ ಅಪಾಯ ಎದುರಾಗಿದೆ. ಹೀಗಿದ್ದರೂ ದೇವಾಲಯ ಸ್ಥಳಾಂತರ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಹೆದ್ದಾರಿ ಕಾಮಗಾರಿಗೆ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲೇ ಸ್ಥಳೀಯರು ದೇವಾಲಯ ಸ್ಥಳಾಂತರ ಮಾಡುವಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈವರೆಗೂ ಅಧಿಕಾರಿಗಳು ದೇವಸ್ಥಾನವನ್ನು ಸ್ಥಳಾಂತರಿಸದೇ ನಿರ್ಲಕ್ಷಿಸಿದ್ದಾರೆ.

  • ಮೈಗೆ ಮಣ್ಣು ಬಳಿದುಕೊಂಡು ಅಗ್ನಿಯ ಮಧ್ಯೆ ಬಿಜೆಪಿ ಸಂಸದನ ಯೋಗಾಸನ

    ಮೈಗೆ ಮಣ್ಣು ಬಳಿದುಕೊಂಡು ಅಗ್ನಿಯ ಮಧ್ಯೆ ಬಿಜೆಪಿ ಸಂಸದನ ಯೋಗಾಸನ

    ಜೈಪುರ್: ಆರನೇ ವಿಶ್ವ ಯೋಗ ದಿನವಾದ ಇಂದು ದೇಶ ಹಾಗೂ ವಿದೇಶದಲ್ಲಿ ಅನೇಕರು ತಾವು ಯೋಗಾಸನ ಮಾಡುತ್ತಿರುವ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಕೇಂದ್ರ ಸಚಿವರು, ಸೈನಿಕರು ಸೇರಿದಂತೆ ಅನೇಕರು ಯೋಗಾಸನ ಮಾಡಿದ್ದಾರೆ.

    ಆದರೆ ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರದ ಬಿಜೆಪಿ ಸಂಸದ ಸುಖ್ಬೀರ್ ಸಿಂಗ್ ಜೌನಾಪುರಿಯಾ ಅವರು ತುಂಬಾ ವಿಭಿನ್ನವಾಗಿ ಹಾಗೂ ಅಪಾಯಕಾರಿ ಯೋಗಾಸನ ಮಾಡುವ ಮೂಕ ಸುದ್ದಿಯಾಗಿದ್ದಾರೆ. ಸಂಸದರು ಮೈಗೆ ಮಣ್ಣು ಬಳಿದುಕೊಂಡು ಸುಡುವ ಬಿಸಿಲಿನಲ್ಲಿ ಬೆಂಕಿಯ ವೃತ್ತವೊಂದರ ಮಧ್ಯೆ ಕುಳಿತ ಹಾಗೂ ನಿಂತ ಭಂಗಿಯಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದಾರೆ.

    ಬಳಿಕ ಸಂಸದ ಸುಖ್ಬೀರ್ ಸಿಂಗ್ ಅವರು, ಯೋಗ ಮಾಡಿ ಆರೋಗ್ಯವಂತರಾಗಿ ಎಂದು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತಾವು ಪ್ರತಿದಿನ 3ರಿಂದ 4 ಗಂಟೆ ಕಾಲ ಯೋಗ, ಜಿಮ್ ಮತ್ತು ಧ್ಯಾನದಲ್ಲಿ ಸಮಯ ಕಳೆಯುವುದಾಗಿ ಹೇಳಿಕೊಂಡಿದ್ದಾರೆ.

    ಸಂಸದರ ಹೇಳಿಕೆ ಬಗ್ಗೆ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೊತೆಗೆ ಸುಖ್ಬೀರ್ ಸಿಂಗ್ ಅವರು ಯೋಗಾಸನ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  • ಮಣ್ಣು ಕುಸಿದು ಕೂಲಿ ಅರಸಿ ಬಂದಿದ್ದ ಕಾರ್ಮಿಕರಿಬ್ಬರು ಸಾವು

    ಮಣ್ಣು ಕುಸಿದು ಕೂಲಿ ಅರಸಿ ಬಂದಿದ್ದ ಕಾರ್ಮಿಕರಿಬ್ಬರು ಸಾವು

    ಬೆಂಗಳೂರು: ಮಣ್ಣು ಕುಸಿದ ಪರಿಣಾಮ ಕೂಲಿ ಅರಸಿ ದೂರದೂರಿಂದ ಸಿಲಿಕಾನ್ ಸಿಟಿಗೆ ಬಂದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಂಗೇರಿಯ ಕೆಂಪೇಗೌಡ ಲೇಔಟ್‍ನ ಹೊಸ ಬೈರೊಹಳ್ಳಿಯಲ್ಲಿ ನಡೆದಿದೆ.

    ಕರಿಯಪ್ಪ ಮತ್ತು ನಿಖಿಲೇಶ್ ಮೃತ ಕಾರ್ಮಿಕರು. ಸ್ಯಾನಿಟರಿ ಪೈಪ್ ಅಳವಡಿಸಲು ಗುಂಡಿ ತೆಗೆಯಲಾಗಿತ್ತು. 12 ಅಡಿ ಉದ್ದದ ಗುಂಡಿ ತೋಡಿ ಅಲ್ಲಿ ಪೈಪ್‍ಗಳನ್ನ ಜೋಡಿಸಿ ಕೆಲಸ ಮಾಡಲಾಗುತ್ತಿತ್ತು. ದುರದೃಷ್ಟ ಮೇಲಿಂದ ಕುಸಿದು ಬಿದ್ದ ಮಣ್ಣು ಇಬ್ಬರು ಕಾರ್ಮಿಕರನ್ನು ಮುಚ್ಚಿ ಹಾಕಿತ್ತು. ತಕ್ಷಣ ಸ್ಥಳೀಯರು ಕರಿಯಪ್ಪನ ಮೇಲಿದ್ದ ಮಣ್ಣು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು.

    ಮತ್ತೊಬ್ಬ ಕಾರ್ಮಿಕ ನಿಖಿಲೇಶ್‍ನನ್ನ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬಂದು ಹೊರತೆಗೆಯುವಷ್ಟರಲ್ಲಿ ನಿಖಿಲೇಶ್ ಮೃತಪಟ್ಟಿದ್ದನು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕರಿಯಪ್ಪ ಕೂಡ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ದಳದವರು 12 ಅಡಿ ಆಳದಿಂದ ಮಣ್ಣನ್ನು ಹೊರತೆಗೆದು ರಕ್ಷಿಸುವಷ್ಟರಲ್ಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ಕರಿಯಪ್ಪ ಮತ್ತು ನಿಖಿಲೇಶ್ ಆಂಧ್ರ ಮತ್ತು ಬಿಹಾರದಿಂದ ಕೂಲಿಗಾಗಿ ಬಂದಿದ್ದರು. ಸದ್ಯ ಈ ಬಗ್ಗೆ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಗುತ್ತಿಗೆ ಪಡೆದ ಏಜೆನ್ಸಿ ವಿರುದ್ಧ ನಿರ್ಲಕ್ಷ್ಯದಡಿ ಪ್ರಕರಣ ದಾಖಲಿಸಲಾಗಿದೆ.

  • ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ತಿರುವನಂತಪುರಂ: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ಪ್ರತಿಯೊಂದು ಜೋಡಿಯೂ ತಮ್ಮ ಫೋಟೋಶೂಟ್ ಇಂತಹ ಸ್ಥಳದಲ್ಲಿ, ಹೀಗೆಯೇ ಆಗಬೇಕೆಂಬ ಕನಸು ಕಂಡಿರುತ್ತಾರೆ. ಅದರಲ್ಲೂ ಸುಂದರವಾದ ಸ್ಥಳಗಳಲ್ಲಿ, ನದಿಯ ಮಧ್ಯೆ, ವಿಧವಿಧವಾದ ಕಾಸ್ಟ್ಯೂಮ್ಸ್ ಧರಿಸಿಕೊಂಡು ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ಯಾವುದೇ ಮೇಕಪ್ ಇಲ್ಲದೇ ಪ್ರಕೃತಿಯ ನಡುವೆ, ಕೆಸರಿನ ಮಣ್ಣಿನ ಮಧ್ಯೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

    ಇದೀಗ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇರಳ ಮೂಲದ ಜೋಸ್ ಮತ್ತು ಅನಿಷಾ ಜೋಡಿ ಈ ರೀತಿಯ ಕೆಸರಿನ ಮಣ್ಣಿನಲ್ಲಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಟ್ವಿಟ್ಟರ್ ಮತ್ತು ಫೇಸ್‍ಬುಕ್ ಪೇಜಿನಲ್ಲಿ ಹರಿದಾಡುತ್ತಿವೆ.

    ಈ ಜೋಡಿ ಪ್ರಕೃತಿಯ ಮಧ್ಯೆ ಒಂದು ಕೆಸರಿನ ಗದ್ದೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸರಳವಾದ ಉಡುಪು ಧರಿಸಿಕೊಂಡು ಕೆಸರಿನಲ್ಲಿ ಉರುಳಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲೂ ಮುಖಕ್ಕೂ ಕೆಸರು ಹಾಕಿಕೊಂಡು ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಡಿಫರೆಂಟ್ ಆಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

    ಈ ಜೋಡಿಯ ವೆಡ್ಡಿಂಗ್ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಮೇಕಪ್, ಆಡಂಬರವಿಲ್ಲದೇ ಸರಳವಾಗಿ ಫೋಟೋಶೂಟ್ ಮಾಡಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ಸಕಲೇಶಪುರ ಬಳಿ ಕೆಸರಲ್ಲಿ ಸಿಲುಕಿದ ತಾಯಾನೆ- ಅಮ್ಮನನ್ನು ಬಿಟ್ಟು ಕದಲದ ಮರಿಯಾನೆ

    ಸಕಲೇಶಪುರ ಬಳಿ ಕೆಸರಲ್ಲಿ ಸಿಲುಕಿದ ತಾಯಾನೆ- ಅಮ್ಮನನ್ನು ಬಿಟ್ಟು ಕದಲದ ಮರಿಯಾನೆ

    ಹಾಸನ: ನೀರು ಕುಡಿಯಲು ಹೋಗಿ ತಾಯಾನೆಯ ಕಾಲು ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಮನಕಲಕುವ ಘಟನೆ ಸಕಲೇಶಪುರ ತಾಲೂಕಿನ ಕಡದರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಾಡಾನೆಯ ಕಾಲು ಕೆಸರಿನಲ್ಲಿ ಹೂತುಕೊಂಡು ನರಕಯಾತನೆ ಅನುಭವಿಸುತ್ತಿದ್ರೆ, ಇತ್ತ ತನ್ನ ತಾಯಿ ವೇದನೆ ಕಂಡು ಮರಿಯಾನೆ ಮರುಗುತ್ತಿರುವ ದೃಶ್ಯ ಎಂತವರನ್ನು ಒಂದು ಬಾರಿ ಕಣ್ಣೀರು ಹಾಕಿಸುವಂತಿದೆ.

    ಕಳೆದ ನಾಲ್ಕು ದಿನಗಳಿಂದ ತಾಯಿ ಆನೆ ಕೆಸರಿನಲ್ಲೇ ಸಿಲುಕಿಕೊಂಡಿದೆ. ಮರಿ ಆನೆ ತನ್ನ ತಾಯಿ ಆನೆಯನ್ನು ಬಿಟ್ಟು ಕದಲಿಲ್ಲ. ಸದ್ಯ ಆನೆಯನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಆನೆಯ ಒಂದು ಕಾಲು ಗಾಯಗೊಂಡ ಪರಿಣಾಮ ಕೆಸರಿನಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಅರವಳಿಕೆ ತಜ್ಞರಿಗೆ ಈ ಕುರಿತು ಮಾಹಿತಿ ರವಾನಿಸಿದ್ದು, ಸ್ಥಳಕ್ಕೆ ದೌಡಾಯಿಸಿ ಸಾಕಾನೆಗಳು ಮುಖಾಂತರ ಕೆಸರಿನಿಂದ ಆನೆಯನ್ನು ಸುರಕ್ಷಿತವಾಗಿ ಹೊರತೆಗೆಯಬೇಕಾಗಿದೆ.

    ಇತ್ತ ಸ್ಥಳೀಯರು ಆನೆಯನ್ನು ಕೆಸರಿನಿಂದ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಜೆಸಿಬಿ ಮುಖಾಂತರ ಹೂಳು ತೆಗಿಸುತ್ತಿದ್ದಾರೆ. ಒಟ್ಟಿನಲ್ಲಿ ಕಾರ್ಯಚರಣೆ ಮುಂದುವರಿದಿದೆ.

    ಮಲೆನಾಡು ಭಾಗದಲ್ಲಿ ಹೆಚ್ಚಿದ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಕಾಡಾನೆಗಳು ಅಹಾರ ಅರಸಿ ಕಾಡಿನಿಂದ ನಾಡಿಗೆ ಬರುತ್ತಿವೆ. ಹೀಗಾಗಿ ಕಾಡಾನೆ ಮತ್ತು ಮಾನವರ ನಡುವಿನ ಸಂಘರ್ಷ ಮುಂದುವರಿದಿದೆ. ಆದ್ರೂ ಅರಣ್ಯ ಇಲಾಖೆ ಕಾಡಾನೆ ಹಾವಳಿ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ ಅಂತ ಸ್ಥಳೀಯರು ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!

    ದಿನಕ್ಕೆ 1 ಕೇಜಿ ಮಣ್ಣು ತಿನ್ನೋ 99ರ ಅಜ್ಜ!

    ರಾಂಚಿ: ದೀರ್ಘಾಯುಷ್ಯ ಪಡೆಯಲು ಜನ ಹೆಚ್ಚಾಗಿ ನೈಸರ್ಗಿಕವಾದ ಆಹಾರವನ್ನು ಸೇವಿಸುತ್ತಾರೆ. ಆದರೆ ಜಾರ್ಖಂಡ್ ವ್ಯಕ್ತಿಯೊಬ್ಬರು ನೈಸರ್ಗಿಕ ವಸ್ತುವಾದ ಮಣ್ಣನ್ನೇ ಪ್ರತಿದಿನ ಸೇವಿಸಿ ಸುದ್ದಿಯಾಗಿದ್ದಾರೆ.

    ಕಾರು ಪಾಸ್ವಾನ್ ಅವರಿಗೆ ಈಗ 99 ವರ್ಷ. ಪಾಸ್ವಾನ್ ಪ್ರತಿದಿನ ಮಣ್ಣು ತಿನ್ನುವ ಹಿಂದೆ ನೋವಿನ ಕಥೆಯಿದೆ. ಬಾಲ್ಯದಲ್ಲಿ ಇವರಿಗೆ ಬಡತನವಿತ್ತು. ಎಷ್ಟು ಬಡತನ ಅಂದ್ರೆ ಒಂದು ಹೊತ್ತಿನ ಆಹಾರಕ್ಕೂ ಪರದಾಡಬೇಕಾದ ಪರಿಸ್ಥಿತಿ ಇತ್ತು.

    11ನೇ ವಯಸ್ಸಿನಲ್ಲಿ ಯಾವುದೇ ಆಹಾರ ಸಿಗದೇ ಇದ್ದಾಗ ಮೊದಲ ಬಾರಿ ಮಣ್ಣನ್ನು ತಿಂದಿದ್ದಾರೆ. ಮಣ್ಣಿನಲ್ಲಿ ಏನೋ ರುಚಿ ಇದೆ ಎಂದು ತಿಳಿದು ಪ್ರತಿ ದಿನ ಸ್ವಲ್ಪ ಸ್ವಲ್ಪವೇ ತಿನ್ನಲು ಆರಂಭಿಸಿದರು. ಪ್ರತಿದಿನ ತಿನ್ನುವ ಅಭ್ಯಾಸ ಆರಂಭಿಸಿದ ಪರಿಣಾಮ ಅದು ಚಟವಾಗಿ ಪರಿಣಮಿಸಿತು. ವಿಶೇಷ ಏನೆಂದರೆ ಈಗಲೂ ಇವರು ಪ್ರತಿದಿನ 1 ಕೇಜಿ ಮಣ್ಣು ತಿನ್ನುತ್ತಿದ್ದಾರೆ.

    ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಪ್ರತಿದಿನ ಮಣ್ಣು ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ. ಮಣ್ಣು ತಿಂದರೆ ಆರೋಗ್ಯ ಹಾಳಾಗಬಹುದಲ್ಲವೇ ಎನ್ನುವ ಪ್ರಶ್ನೆ ಹುಟ್ಟುವುದು ಸಹಜ. ಆದರೆ ಅವರಿಗೆ ಆರೋಗ್ಯ ಕೈ ಕೊಟ್ಟಿಲ್ಲ. 1919ರಲ್ಲಿ ಜನಿಸಿರುವ ಇವರು ಈಗಲೂ ಗಟ್ಟಿಮುಟ್ಟಾಗಿರುವುದು ವಿಶೇಷ.

    ಮಣ್ಣು ತಿನ್ನುವ ಚಟವನ್ನು ಬಿಡುವಂತೆ ನಾವು ಸಾಕಷ್ಟು ಬಾರಿ ಹೇಳಿದರೂ ತಂದೆ ನಮ್ಮ ಮಾತನ್ನು ಕೇಳಲೇ ಇಲ್ಲ. ಕೊನೆಗೆ ಈ ಬುದ್ಧಿವಾದ ಹೇಳುವ ಪ್ರಯತ್ನವನ್ನು ನಿಲ್ಲಿಸಿದೆವು ಎಂದು ರಾಮ್ ಪಾಸ್ವಾನ್ ಅವರ ಹಿರಿಯ ಮಗ ತಿಳಿಸಿದ್ದಾರೆ.

  • ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

    ವಿಡಿಯೋ: ಹಿಂಡು ಹಿಂಡಾದ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ರಕ್ಷಿಸಿದ್ದು ಹೀಗೆ

    ಬ್ರೆಜಿಲಿಯಾ: ಕೆರೆಯ ಕೆಸರಿನಲ್ಲಿ ರಾಶಿ ಮೊಸಳೆಗಳ ಮಧ್ಯೆ ಸಿಲುಕಿದ್ದ ಕರುವನ್ನು ವ್ಯಕ್ತಿಯೋರ್ವ ಬಹಳ ಜಾಗರೂಕತೆಯಿಂದ ರಕ್ಷಣೆ ಮಾಡಿದ ಘಟನೆ ನಡೆದಿದೆ.

    ವ್ಯಕ್ತಿ ಕರುವನ್ನು ರಕ್ಷಣೆ ಮಾಡುತ್ತಿರುವ ದೃಶ್ಯವನ್ನು ಬ್ರೆಜಿಲ್ ನ ವ್ಯಕ್ತಿ ಸೆರೆಹಿಡಿದಿದ್ದಾರೆ. ಈ ಘಟನೆ ಅಕ್ಟೋಬರ್ 24ರಂದು ನಡೆದಿದೆ.

    ಬನಾನಲ್ ದ್ವೀಪ ಎಂಬ ದೊಡ್ಡ ನದಿ ಈಗ ಬರಗಾಲದಿಂದ ನೀರಿಲ್ಲದೆ ಬತ್ತಿ ಹೋಗಿತ್ತು. ಹೀಗಾಗಿ ಮೊಸಳೆಗಳ ಹಿಂಡು ಕೆಸರಿನಲ್ಲಿ ಹೊರಳಾಡುತ್ತಿದ್ದವು. ಇವುಗಳ ಮಧ್ಯೆ ಕರುವೊಂದು ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಮೊಸಳೆಗಳ ಹಿಂಡನ್ನು ಲೆಕ್ಕಿಸದೇ, ಭಯಪಡದೇ ಕರುವಿನ ಕಿವಿಯಲ್ಲಿ ಎಳೆದು ರಕ್ಷಿಸಿದ್ದಾರೆ. ಕಿವಿಯಲ್ಲಿ ಹಿಡಿದು ಎಳೆದಾಗ ನೋವಿನಿಂದ ನರಳಿತ್ತು. ಮೊಸಳೆಗಳಿಂದ ರಕ್ಷಿಸಿದ ತಕ್ಷಣವೇ ಕರು ಅಲ್ಲಿಂದ ಕಾಲ್ಕಿತ್ತಿದೆ.

    ಬಳಿಕ ವ್ಯಕ್ತಿಯ ತಂಡ ಆ ಕೆರೆಯಲ್ಲಿ ಏನೇನಿರಬಹುದೆಮದು ಪರಿಶೀಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಒಂದು ಕಡೆ ಸತ್ತು ಬಿದ್ದಿರುವ ಮೊಸಳೆಗಳು ಕಾಣಸಿಗುತ್ತವೆ. ಇನ್ನೊಂದೆಡೆ ಹಸುವೊಂದು ಕೆಸರಿನಲ್ಲಿ ಸಿಲುಕಿರುವುದು ಕಂಡಿದೆ. ಅಂತೆಯೇ ಅದನ್ನು ಕೂಡ ಅವರು ಅಪಾಯದಿಂದ ರಕ್ಷಿಸಿದ್ದಾರೆ.

    https://www.youtube.com/watch?v=oFAtu8_QNQ4