Tag: MP Veerappa moily

  • ನೀರು ಕೊಟ್ಟೇ ನಾನು ಪ್ರಾಣ ಬಿಡ್ತೇನೆ: ವೀರಪ್ಪ ಮೊಯ್ಲಿ

    ನೀರು ಕೊಟ್ಟೇ ನಾನು ಪ್ರಾಣ ಬಿಡ್ತೇನೆ: ವೀರಪ್ಪ ಮೊಯ್ಲಿ

    – 15 ವರ್ಷದ ಹುಡುಗಿ 85 ವರ್ಷದ ಮುದುಕಿಯಾಗಿ ಕಾಣ್ತಾಳೆ..!
    – ಎತ್ತಿನಹೊಳೆ ನೀರು ಹರಿಯಲಿರುವ ದೃಶ್ಯ ನಾನು ಕಣ್ತುಂಬಿಕೊಳ್ಳಬೇಕಿದೆ..!

    ಚಿಕ್ಕಬಳ್ಳಾಪುರ: ನಿಮಗೆ, ನಿಮ್ಮ ಭಾಗಕ್ಕೆ ನೀರು ತರುತ್ತೇವೆ ಎಂದು ಹಿಂದಿನ ಎಲ್ಲಾ ಸಂಸದರು ಹೇಳಿದರು. ಹಾಗೂ ಹಿಂದಿನ ದಿವಂಗತ ಸಂಸದ ಕೃಷ್ಣ ರಾಯರು ಸಹ ನೀರು ಕುಡಿಸುತ್ತೇನೆ ಎಂದು ಕೊನೆಗೆ ಪ್ರಾಣ ಬಿಟ್ಟರು. ಆದರೆ ಮೊದಲು ನಾನು ನಿಮಗೆ ನೀರು ಕೊಟ್ಟು ನಂತರ ಪ್ರಾಣ ಬಿಡುತ್ತೇನೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದ ಗಾಂಧಿ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿ ಅವರು, ನನಗೆ ನೀರಿನ ಮಹತ್ವ ಗೊತ್ತಿದೆ ಎಂದು ಭಾವುಕರಾದರು. ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ನೀರಿಗೆ ತುಂಬಾ ಹಾಹಾಕಾರವಿದೆ. ಆ ಭಾಗದಲ್ಲಿ 15 ವರ್ಷದ ಹುಡುಗಿ 85 ವರ್ಷದ ಮುದುಕಿಯಾಗಿ ಕಾಣುತ್ತಾಳೆ. ಆ ಭಾಗದಿಂದ ಹೆಣ್ಣು ಮದುವೆ ಮಾಡಿಕೊಳ್ಳೋಕೆ ಭಯಪಡುತ್ತಾರೆ. ಕೆಲವರಿಗೆ ಹಲ್ಲಿಲ್ಲ, ಹಲವರು ಅಂಗಹೀನರು, ಇಡೀ ಗ್ರಾಮಗಳ ತುಂಬೆಲ್ಲಾ ಅಂಗವಿಕಲರಿದ್ದಾರೆ. ಅದನ್ನ ಕಂಡು ನಾನು ಸಂಸದನಾಗಿ ಹೇಗೆ ಉಳಿಯಬೇಕು? ಹಿಂದಿನ ಎಲ್ಲಾ ಸಂಸದರು ನೀರು ತರುತ್ತೇವೆ ಎಂದು ಹೇಳಿದ್ದರು. ನಾನು ಮೊದಲು ನೀರು ಕೊಟ್ಟೇ ನನ್ನ ಪ್ರಾಣ ಬಿಡುತ್ತೇನೆ ಎಂದು ಭಾವುಕರಾಗಿ ಮಾತನಾಡಿದರು.

    ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಎತ್ತಿನಹೊಳೆ ಯೋಜನೆ ಮುಗಿಯುವ ಹಂತಕ್ಕೆ ತಲುಪಿದ್ದು ಎರಡು ವರ್ಷದಲ್ಲಿ ಈ ಭಾಗಕ್ಕೆ ನೀರು ಹರಿಯಲಿದೆ. ಆ ದೃಶ್ಯ ನಾನು ಕಣ್ತುಂಬಿಕೊಳ್ಳಬೇಕಿದೆ. ಹೀಗಾಗಿ ನನಗೆ ಆಶೀರ್ವಾದ ನೀಡಿ ಎಂದು ಮತಯಾಚನೆ ಮಾಡಿದರು. ಇದೇ ವೇಳೆ ಎಚ್ ಎನ್ ವ್ಯಾಲಿ-ಕೆ ಸಿ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ತಡೆ ತಂದಿರೋ ಹೆಸರು ಹೇಳಲ್ಲ ಅಂತಲೇ ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ರೈತ ವಿರೋಧಿ ಎಂದು ಆಕ್ರೋಶ ಹೊರಹಾಕಿದರು.

    ಎಚ್ ಎನ್ ವ್ಯಾಲಿ ಯೋಜನೆಯ ಗುತ್ತಿಗೆದಾರರ ಬಳಿ ಹಣ ವಸೂಲಿ ಮಾಡುವ ಉದ್ದೇಶದಿಂದ ಆಂಜನೇಯರೆಡ್ಡಿ ಸುಪ್ರೀಂ ಕೋರ್ಟ್ ಮೊರೆ ಹೋದರು. ಸುಪ್ರೀಂ ಕೋರ್ಟ್ ಗೆ ಹೋಗಲು ಹಣ ಕೊಟ್ಟಿದ್ದೇ ಬಿಜೆಪಿ ಅಭ್ಯರ್ಥಿ ಬಿ.ಎನ್ ಬಚ್ಚೇಗೌಡ ಎಂದು ಗಂಭೀರ ಆರೋಪ ಮಾಡಿದರು. ಇದಲ್ಲದೆ ಎತ್ತಿನಹೊಳೆ ಯೋಜನೆ ವಿರುದ್ಧ ಹಸಿರು ಪೀಠಕ್ಕೆ ಹೋಗಲು ಹಣ ಕೊಟ್ಟವರು ಸಹ ಬಿ ಎನ್ ಬಚ್ಚೇಗೌಡ ಅಂತ ಎಂದರು. ಹೀಗಾಗಿ ನೀರಾವರಿ ಯೋಜನೆಗಳನ್ನ ತಪ್ಪಿಸಲು ಹೋದವರಿಗೆ ಜನರ ಶಾಪ ತಟ್ಟುತ್ತೆ. ಭೂಮಿ ತಾಯಿಯ ಶಾಪ ತಟ್ಟುತ್ತೆ ಎಂದರು.

    ಭೂಮಿ ತಾಯಿಯೂ ಕೂಡ ಬಾಯಾರಿ ನನಗೆ ನೀರು ಕೊಡಿ ಅಂತ ಬಾಯಿಬಿಡ್ತಿದ್ದಾಳೆ. ಇದರಿಂದ ನೀರಾವರಿ ಯೋಜನೆಗಳಿಗೆ ಅಡ್ಡಗಾಲು ಹಾಕುವವರಿಗೆ ಜನ್ಮ ಜನ್ಮಕ್ಕೆ ಶಾಪ ತಟ್ಟುತ್ತೆ ಅಂತ ಶಾಪ ಹಾಕಿದ್ರು. ಚಿಕ್ಕಬಳ್ಳಾಪುರ ಕ್ಷೇತ್ರದ ಜನ ಚಿನ್ನದ ಮನಸ್ಸಿನವರು. ಜಾತಿ ಗೀತಿ ನೋಡದೇ ನನ್ನನ್ನ ಎರಡು ಬಾರಿ ಗೆಲ್ಲಿಸಿದ ಜನ ಚಿನ್ನದ ಜನರು ನಿಮ್ಮ ಋಣ 7 ಜನ್ಮದಲ್ಲೂ ತೀರಿಸಲಾಗುವುದಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಸಚಿವ ಎಂಟಿಬಿ ನಾಗರಾಜ್, ಬಿ.ಎನ್ ಬಚ್ಚೇಗೌಡರೇ ನೀವೇನು ಸತ್ಯ ಹರಿಶ್ಚಂದ್ರರಾ? ಹೋದ ಕಡೆಯಲ್ಲೆಲ್ಲಾ ವೀರಪ್ಪಮೊಯ್ಲಿ ಸುಳ್ಳುಗಾರ-ಮೋಸಗಾರ ಅಂತೀದ್ದರಲ್ಲಾ. ನೀವೇನು ಸತ್ಯ ಹರಿಶ್ಚಂದ್ರರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಅಲ್ಲದೇ ವೀರಪ್ಪಮೊಯ್ಲಿ ಅವರು ತಮ್ಮ ಜೀವನವನ್ನೇ ರಾಜಕಾರಣಿಯಾಗಿ ಜನರ ಸೇವೆಗೆ ಮೀಸಲಿಟ್ಟಿದ್ದಾರೆ. ನೀವು ಇಟ್ಟಿದ್ದಾರಾ? ರಾಜಕಾರಣದಲ್ಲಿ ನೀವು ಮಾಡಿದ ಅನ್ಯಾಯ ಅಕ್ರಮ ದೌರ್ಜನ್ಯ ದಬ್ಬಾಳಿಕೆ ಸರ್ವಾಧಿಕಾರ ಯಾರಾದ್ರೂ ಮಾಡಿದ್ದೀರಾ? ಸರ್ಕಾರಿ ಗೋಮಾಳಗಳನ್ನ ಗುಳುಂ ಮಾಡಿದ್ದೀರಿ ಎಂದು ಬಚ್ಚೇಗೌಡರ ವಿರುದ್ಧ ಕಿಡಿಕಾರಿದರು.

  • ಸಂಸದ ವೀರಪ್ಪ ಮೊಯ್ಲಿಯಿಂದ ನೀತಿ ಸಂಹಿತೆ ಉಲ್ಲಂಘನೆ

    ಸಂಸದ ವೀರಪ್ಪ ಮೊಯ್ಲಿಯಿಂದ ನೀತಿ ಸಂಹಿತೆ ಉಲ್ಲಂಘನೆ

    ಚಿಕ್ಕಬಳ್ಳಾಪುರ: ಸಂಸದ ವೀರಪ್ಪ ಮೊಯ್ಲಿ ಮೂರು ಕಾರಿಗೆ ಅನುಮತಿ ಪಡೆದು ಮೂವತ್ತು ವಾಹನದಲ್ಲಿ ಆಗಮಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಚುನಾವಣಾ ಅಧಿಕಾರಿಗಳು ಚುನಾವಣಾ ಪ್ರಚಾರಕ್ಕೆ ಮೂರು ವಾಹನಗಳಿಗೆ ಮಾತ್ರ ಅನುಮತಿ ನೀಡಿ ಪತ್ರ ಬರೆದಿತ್ತು. ಆದರೆ ವೀರಪ್ಪಮೊಯ್ಲಿ ವಾಹನದ ಹಿಂದೆ ಮೂವತ್ತಕ್ಕೂ ಹೆಚ್ಚು ವಾಹನಗಳ ಓಡಾಟ ನಡೆಸುತ್ತಿದೆ.

    ಇಂದು ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸುವ ಮುನ್ನ ಚಿಕ್ಕಬಳ್ಳಾಪುರ ತಾಲೂಕಿನ ನಂದಿಯಲ್ಲಿರುವ ಭೋಗನಂಧೀಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಶಾಸಕ ಎಂಟಿಬಿ ನಾಗರಾಜ್ ಆರತಿ ತಟ್ಟೆಗೆ 1 ಸಾವಿರ ರೂ. ಹಾಕಿದರೆ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣ್ಣಯ್ಯ ಅವರು 200 ರೂ. ಹಾಕಿದ್ದಾರೆ.

    ನಾಮಪತ್ರ ಸಲ್ಲಿಕೆಗೂ ಮುನ್ನ ವೀರಪ್ಪ ಮೊಯ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದಾರೆ. ವೀರಪ್ಪ ಮೊಯ್ಲಿಗೆ ಸಚಿವ ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಾಸಕ ಸುಧಾಕರ್ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.

    ದೇವಸ್ಥಾನ ನಂತರ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ದರ್ಗಾಗೆ ಭೇಟಿ ನೀಡಿದ್ದಾರೆ. ಶ್ರೀ ಭೋಗನಂಧೀಶ್ವರ ದೇವಾಲಯದ ಹಿಂಭಾಗದಲ್ಲೇ ದರ್ಗಾ ಇರುವುದರಿಂದ ಮೊಯ್ಲಿ ಅಲ್ಲಿಗೂ ಭೇಟಿ ನೀಡಿದ್ದಾರೆ. ವೀರಪ್ಪಮೊಯ್ಲಿ ಟೆಂಪಲ್ ರನ್ ಗೆ ಶಾಸಕರು ಬೆಂಬಲಿಗರು ಸಾಥ್ ನೀಡಿದ್ದಾರೆ.

  • ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ: ವೀರಪ್ಪ ಮೊಯ್ಲಿ

    ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದ್ದು, ದೊಡ್ಡ ಆಲದ ಮರವಿದ್ದಂತೆ ಬೆಳೆದಿದೆ. ಪಕ್ಷವು ಎಲ್ಲರಿಗೂ ಆಶ್ರಯ ನೀಡುತ್ತದೆ ಎಂದು ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಕ್ರಿಸ್ಮಸ್ ನಿಮಿತ್ತ ನಗರದ ಚರ್ಚ್‍ಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಸಂಸದರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದೆ. ಹೀಗಾಗಿ ಪಕ್ಷದ ಎಲ್ಲರಿಗೂ ಸ್ಥಾನ-ಮಾನ, ಮಂತ್ರಿಗಿರಿ ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುತ್ತೇವೆ, ರಾಜೀನಾಮೆ ಕೊಡುತ್ತೇವೆ ಎನ್ನುವುದು ಸರಿಯಲ್ಲ. ಈ ಹಿಂದೆ ಕಾಂಗ್ರೆಸ್ ಬಿಟ್ಟು ಹೋದವರು ಮರಳಿ ಪಕ್ಷಕ್ಕೆ ಬಂದ ಪ್ರಸಂಗಗಳಿವೆ ಎಂದು ಅತೃಪ್ತ ಶಾಸಕರಿಗೆ ಎಚ್ಚರಿಕೆ ನೀಡಿದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಅಸಮಾಧಾನಿತರು ತಮ್ಮ ವೈಯುಕ್ತಿಕ ಆಸೆ-ಆಕಾಂಕ್ಷೆಗಳನ್ನು ಮರೆಯಬೇಕು ಎಂದ ಮೊಯ್ಲಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಗ ಎಲ್ಲರಿಗೂ ಸ್ಥಾನಮಾನ ಸಿಗುತ್ತದೆ ಎಂದು ವಿಶ್ವಾಸ ಹೊರಹಾಕಿದರು.

    ಲೋಕಸಭಾ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಈ ಬಾರಿಯೂ ನಾನೇ ಸ್ಫರ್ಧಿಸಲಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv