Tag: MP Hema Malini

  • ವೃಂದಾವನ ದೇವಸ್ಥಾನದಲ್ಲಿ ನೃತ್ಯ ಮಾಡಿದ ಸಂಸದೆ ಹೇಮಾ ಮಾಲಿನಿ: ವಿಡಿಯೋ

    ವೃಂದಾವನ ದೇವಸ್ಥಾನದಲ್ಲಿ ನೃತ್ಯ ಮಾಡಿದ ಸಂಸದೆ ಹೇಮಾ ಮಾಲಿನಿ: ವಿಡಿಯೋ

    ಲಕ್ನೋ: ಬಿಜೆಪಿ ಸಂಸದೆ, ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು ಉತ್ತರ ಪ್ರದೇಶ ಪ್ರಸಿದ್ಧ ಶ್ರೀ ರಾಧಾ ರಮಣ ದೇವಸ್ಥಾನದಲ್ಲಿ ನೃತ್ಯ ಮಾಡಿದ್ದಾರೆ.

    ಹರಿಯಾಲಿ ತೀಜ್ (ಹಸಿರು ಹಬ್ಬದ) ನಿಮಿತ್ತ ಮಥುರಾ ಜಿಲ್ಲೆಯ ವೃಂದಾವನದ ಶ್ರೀ ರಾಧಾ ರಮಣ ದೇವಸ್ಥಾನದಲ್ಲಿ ಶನಿವಾರ ನೃತ್ಯ ಕಾರ್ಯಕ್ರಮ ನಡೆಯಿತು. ಈ ವೇಳೆ ಮಥುರಾದ ಸಂಸದೆ ಹೇಮಾ ಮಾಲಿನಿ ಅವರು ಹಸಿರು ಹಾಗೂ ಕೆಂಪು ಲೆಹಂಗಾ, ಚಿನ್ನಾಭರಣ, ಬಳೆಗಳನ್ನು ಧರಿಸಿ ದೇಗುಲದ ಪ್ರಾಂಗಣದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಇಳಿವಯಸ್ಸಿನಲ್ಲೂ ಹೇಮಾ ಮಾಲಿನಿ ಅವರು ಭರತನಾಟ್ಯ ಪ್ರದರ್ಶನ ನೀಡಿದ್ದನ್ನು ನೋಡಿದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕಾರ್ಯಕ್ರಮದ ಬಳಿಕ ಮಾತನಾಡಿದ ಸಂಸದೆ, ಹರಿಯಾಲಿ ತೀಜ್ ಹಬ್ಬದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ್ದು ಖುಷಿ ತಂದಿದೆ. ನಾನು ನೀಡಿದ ಮೊದಲ ಪ್ರದರ್ಶನದಲ್ಲಿ ಕೃಷ್ಣನನ್ನು ಭೇಟಿಯಾಗಲು ರಾಧೆ ವ್ಯಕ್ತಪಡಿಸುವ ಭಾವನೆಗಳನ್ನು ತಿಳಿಸಿದ್ದೇನೆ. ಎರಡನೇ ಪ್ರದರ್ಶನದಲ್ಲಿ ನಾನು ಯಾವಾಗಲೂ ನಿನ್ನ ಭಕ್ತಳಾಗಿ ಇರುವಂತೆ ನೋಡಿಕೋ ಎಂದು ಮೀರಾ ಕೃಷ್ಣನನ್ನು ಬೇಡಿಕೊಳ್ಳುವ ಭಾವನೆಯನ್ನು ನೃತ್ಯದ ಮೂಲಕ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.

    ಹೇಮಾ ಮಾಲಿನಿ ಅವರ ನೃತ್ಯ ಪ್ರದರ್ಶನ ಅದ್ಭುತವಾಗಿತ್ತು. ಅವರು ಇಲ್ಲಿಗೆ ಬಂದು ನೃತ್ಯ ಪ್ರದರ್ಶನ ನೀಡಿದ್ದು ನಮಗೆ ದೊಡ್ಡ ವಿಚಾರ ಎಂದು ಕಾರ್ಯಕ್ರಮದಲ್ಲಿ ಭಾಗವಿಸಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹರಿಯಾಲಿ ತೀಜ್ ವಿಶೇಷವಾಗಿ ಪಾರ್ವತಿಗೆ ಸಮರ್ಪಿತವಾದ ಹಬ್ಬವಾಗಿದೆ. ಪಾರ್ವತಿಯು ಸುದೀರ್ಘ ಕಾಲದ ಬಳಿಕ ಶಿವನೊಂದಿಗೆ ಒಂದಾದ ದಿನ ಇದು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಹೀಗಾಗಿ ಆ ದಿನವನ್ನು ಸ್ಮರಿಸುವುದಕ್ಕಾಗಿ ಉತ್ತರ ಭಾರತದಲ್ಲಿ ಹರಿಯಾಲಿ ತೀಜ್ ಹಬ್ಬ ಆಚರಿಸಲಾಗುತ್ತದೆ.

  • ಮನಸ್ಸು ಮಾಡಿದ್ರೆ ಒಂದೇ ನಿಮಿಷದಲ್ಲಿ ಸಿಎಂ ಆಗುತ್ತೇನೆ: ಹೇಮಾ ಮಾಲಿನಿ

    ಮನಸ್ಸು ಮಾಡಿದ್ರೆ ಒಂದೇ ನಿಮಿಷದಲ್ಲಿ ಸಿಎಂ ಆಗುತ್ತೇನೆ: ಹೇಮಾ ಮಾಲಿನಿ

    ನವದೆಹಲಿ: ನನಗೆ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಆದರೆ ಮನಸ್ಸು ಮಾಡಿದರೆ ಒಂದೇ ಕ್ಷಣದಲ್ಲಿ ಸಿಎಂ ಆಗುತ್ತೇನೆ ಎಂದು ನಟಿ, ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

    69 ವರ್ಷದ ಹೇಮಾ ಮಾಲಿನಿ ಅವರು ಉತ್ತರಪ್ರದೇಶದ ಮಥುರಾ ಸಂಸದೆಯಾಗಿದ್ದಾರೆ. ರಾಜಸ್ಥಾನದ ಬನ್ಸ್ವಾರ ಪ್ರದೇಶದ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸಿಎಂ ಆಗುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. `ಸಿಎಂ ಆಗುವುದು ನನಗೆ ಕಷ್ಟದ ಕೆಲಸವಲ್ಲ. ಆದರೆ ಇಂತಹ ಹುದ್ದೆಗಳಲ್ಲಿ ನಾನು ಸಿಕ್ಕಿಹಾಕಿಕೊಂಡು ಇರುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.

    2003 ರಾಜ್ಯಸಭೆಗೆ ಬಿಜೆಪಿ ಪಕ್ಷ ಹೇಮಮಾಲಿನಿ ಅವರನ್ನು ನಾಮನಿರ್ದೇಶನ ಮಾಡಿತ್ತು. ಬಳಿಕ 2004ರಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು. ಬಳಿಕ 2010ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸುವ ಮೂಲಕ ಸಂಸದರಾಗಿ ಆಯ್ಕೆಯಾದರು. ಸದ್ಯ ಯೋಗಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಸಿಎಂ ಆಗಿದ್ದು, ಹೇಮಾ ಮಾಲಿನಿ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

     ಹೇಮಾ ಮಾಲಿನಿ ರಾಜಕೀಯ ಪ್ರವೇಶ ಮಾಡಿದ್ದರೂ ಸಹ ಚಿತ್ರರಂಗದ ಮೂಲಕವೇ ಹೆಚ್ಚು ಹೆಸರು ಗಳಿಸಿದ್ದಾರೆ. 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, 1ಸಾವಿರಕ್ಕೂ ಹೆಚ್ಚು ಶೋ ಗಳನ್ನು ಭಾರತದಾದ್ಯಂತ ನೀಡಿದ್ದಾರೆ.