Tag: MP Devendrappa

  • ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ಸಂತ್ರಸ್ತೆ

    ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ಸಂತ್ರಸ್ತೆ

    ಬೆಂಗಳೂರು: ಬಳ್ಳಾರಿ (Bellary) ಸಂಸದ ದೇವೇಂದ್ರಪ್ಪ (MP Devendrappa) ಪುತ್ರನಿಂದ ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ಪ-ಅಮ್ಮನನ್ನು ಭೇಟಿ ಮಾಡಿಸುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿ ಖಾಸಗಿ ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ (Physical Contact) ಬೆಳೆಸಿದ್ದಾರೆ ಎಂದು ಸಂತ್ರಸ್ತ ಮಹಿಳೆ (Victim Woman) ಆರೋಪಿಸಿದ್ದಾರೆ.

    ಮದುವೆಯಾಗುವುದಾಗಿ ನಂಬಿಸಿ ನನಗೆ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ಎಂಪಿ ದೇವೇಂದ್ರಪ್ಪ ಅವರ ಮಗ ರಂಗನಾಥ್ (Ranganath) ವಿರುದ್ಧ ಮಹಿಳೆ ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಾಗಿದೆ. ಒಂದೂವರೆ ವರ್ಷದ ಹಿಂದೆ ಉಪನ್ಯಾಸಕ ರಂಗನಾಥ್ ಅವರ ಪರಿಚಯವಾಗಿದ್ದು, ಲೈಂಗಿಕ ಸಂಪರ್ಕ ಬಳಿಕ ಮದುವೆ ಆಗಲ್ಲ ಅಂತ ವಂಚನೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಬೆಂಗಳೂರಿನ (Bengaluru) ಬಸವನಗುಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತು ಸಂತ್ರಸ್ತೆ ಪಬ್ಲಿಕ್ ಟಿವಿ ಜೊತೆ ನೇರ ಮಾತುಕತೆ ನಡೆಸಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಂದು ಬಿಜೆಪಿ ಶಾಸಕಾಂಗ ಸಭೆ – ಕುತೂಹಲ ಮೂಡಿಸಿದ ಯತ್ನಾಳ್‌, ಬೆಲ್ಲದ್‌ ನಡೆ

    ಸಂತ್ರಸ್ತೆ ಹೇಳಿದ್ದೇನು?
    ನನ್ನ ಹಾಗೂ ರಂಗನಾಥ್ ಅವರ ಮೊದಲ ಭೇಟಿ ಜನವರಿಯಲ್ಲಿ ಆಗಿತ್ತು. ಅದಕ್ಕೂ ಮೊದಲು ಅಕ್ಟೋಬರ್ ತಿಂಗಳಲ್ಲಿ ಹೋಟೆಲ್‌ವೊಂದರಲ್ಲಿ ಸ್ನೇಹಿತರ ಮೂಲಕ ನಮ್ಮಿಬರಿಗೆ ಪರಿಚಯವಾಗಿತ್ತು. ನಾನು ನಿನಗೆ ಜೀವನ ಕೊಡುತ್ತೇನೆ, ನಿನ್ನನ್ನು ಚನ್ನಾಗಿ ನೋಡಿಕೊಳ್ಳುತ್ತೇನೆ, ನಾನು ಕೈತುಂಬಾ ಸಂಬಳ ತೆಗೆದುಕೊಳ್ಳುತ್ತೇನೆ. ನನಗೆ ಮಗು ಇಲ್ಲ. ನಾವಿಬ್ಬರು ರಹಸ್ಯವಾಗಿರೋಣ ಎಂದೆಲ್ಲಾ ಹೇಳಿದ್ದರು.

    ಅದಾದ ಬಳಿಕ ಒಂದು ಸಲ ಅಪ್ಪ ಅಮ್ಮನಿಗೆ ಪರಿಚಯ ಮಾಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ ನನ್ನನ್ನು ಭೇಟಿ ಮಾಡಿಸದೇ ಖಾಸಗಿ ಹೋಟೆಲ್ ಒಂದರಲ್ಲಿ ಉಳಿಸಿಕೊಂಡು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡರು. ಬಳಿಕ ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ಎಷ್ಟು ಪೀಡಿಸಿದರೂ ಅವರು ಮದುವೆ ಮಾಡಿಕೊಳ್ಳದೇ ದುಡ್ಡುಕೊಟ್ಟು ಬಿಟ್ಟುಬಿಡು ಎಂದು ಹೇಳಿದ್ದರು. ಅದಾದ ಬಳಿಕವೂ 2-3 ಬಾರಿ ಕೂತು ಮಾತನಾಡಿದ್ದೇವೆ. 6 ತಿಂಗಳ ಬಳಿಕ ನಾನು ಬರುತ್ತೇನೆ, ದಸರಾ ಬಳಿಕ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಬೆಂಗಳೂರು, ಮೈಸೂರಿನಲ್ಲಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ, ಸೆಕ್ಸ್‌ ಹೆಸರಲ್ಲಿ ವಂಚನೆ

    ಅವರಿಗೆ ಮೊದಲೇ ಮದುವೆಯಾಗಿತ್ತು ಎನ್ನುವುದು ಗೊತ್ತಿರಲಿಲ್ಲ. ಜಾತಿ ನಿಂದನೆ ಆರೋಪ ಸುಳ್ಳು. ದುಡ್ಡು ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. 15 ಲಕ್ಷ ಹಣ ಕೇಳಿರುವುದು ಸತ್ಯ. ಆದರೆ ಅದು ಬ್ಲ್ಯಾಕ್‌ಮೇಲ್ ಅಲ್ಲ. ನಾನು ದುಡ್ಡಿಗಾಗಿ ಅವರ ಸ್ನೇಹ ಬೆಳೆಸಿಲ್ಲ. ಮನೆ ಬಾಡಿಗೆಗಾಗಿ ನಾನು ಹಣ ಕೇಳಿದ್ದೆ.

    ಮದುವೆಯಾಗುವುದಾಗಿ ಪ್ರಾಮಿಸ್ ಮಾಡಿದ್ದರು. ಅವರಿಗೆ ಮದುವೆಯಾಗಿದೆ ಅಂತ ಇತ್ತೀಚಿಗೆ ಗೊತ್ತಾಯಿತು. ವಂಚನೆ ಬಳಿಕ ರಂಗನಾಥ್ ತಂದೆ ದೇವೇಂದ್ರಪ್ಪರನ್ನು ಸಂಪರ್ಕಿಸಿದ್ದೆ. ಎಫ್‌ಐಆರ್ ಆದ ಬಳಿಕ ಅವರ ಬಳಿ ಮಾತನಾಡಿದ್ದೆ. ಅವರ ತಂದೆ ಕಾನೂನು ಹೋರಾಟ ಮಾಡಿ ಅಂತ ಹೇಳಿದರು. ಮೋಸ ಮಾಡುತ್ತಿರುವವರು ಅವರೇ. ಹನಿಟ್ರ್ಯಾಪ್ ಅಂತ ಆರೋಪ ಮಾಡಿದರು. ಅದಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ವಿಶ್ವಕಪ್ ಫೈನಲ್ಸ್ ಬೆಟ್ಟಿಂಗ್ ಭರಾಟೆ – 15 ದಿನದಲ್ಲಿ 30 ಕೇಸ್, 42 ಮಂದಿ ಅರೆಸ್ಟ್

  • ಬಿಜೆಪಿ ಸಂಸದರ ಸ್ವಗ್ರಾಮದಲ್ಲಿ ವೈದ್ಯರೇ ನಾಪತ್ತೆ- ಚಿಕಿತ್ಸೆ ಸಿಗದೇ ಮಹಿಳೆ ನರಳಾಟ

    ಬಿಜೆಪಿ ಸಂಸದರ ಸ್ವಗ್ರಾಮದಲ್ಲಿ ವೈದ್ಯರೇ ನಾಪತ್ತೆ- ಚಿಕಿತ್ಸೆ ಸಿಗದೇ ಮಹಿಳೆ ನರಳಾಟ

    ದಾವಣಗೆರೆ: ಬಿಜೆಪಿ ಸಂಸದರ ಸ್ವಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರೇ ನಾಪತ್ತೆಯಾಗಿದ್ದು, ಚಿಕಿತ್ಸೆ ಸಿಗದೆ ರೋಗಿಗಳು ಹೈರಾಣರಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಅರಸೀಕೆರೆ ಗ್ರಾಮ ಬಳ್ಳಾರಿಯ ಬಿಜೆಪಿ ಸಂಸದ ದೇವೇಂದ್ರಪ್ಪನವರ ಸ್ವಗ್ರಾಮ. ಆದರೂ ಕೂಡ ಈ ಗ್ರಾಮದ ದುಸ್ಥಿತಿ ಕೇಳುವವರೇ ಇಲ್ಲ. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಇದೆ.

    ಬುಧವಾರ ರಾತ್ರಿ ಕೆರೆಗುಡಿಹಳ್ಳಿ ಗ್ರಾಮದ ಯಂಕಮ್ಮ ಬೆನ್ನು ಮೂಳೆ ಮುರಿದುಕೊಂಡಿದ್ದರು. ಆದ್ದರಿಂದ ಚಿಕಿತ್ಸೆಗಾಗಿ ಅರಸೀಕೆರೆ ಸಮುದಾಯದ ಆರೋಗ್ಯ ಕೇಂದ್ರಕ್ಕೆ ರಾತ್ರಿ ಬಂದಿದ್ದರು. ಆದರೆ ಅತ್ತ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ, ಇತ್ತ ಕೊನೆ ಪಕ್ಷ ಪ್ರಥಮ ಚಿಕಿತ್ಸೆ ನೀಡುವ ಯಾವುದೇ ಸಿಬ್ಬಂದಿ ಕೂಡ ಇಲ್ಲದೆ ಮಹಿಳೆ ನರಳಾಡಿದ್ದಾರೆ.

    ನರಳಾಡುತ್ತಿರುವ ತಾಯಿಯನ್ನು ನೋಡಲಾಗದೆ, ಮಕ್ಕಳು ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಮ್ಮ ತಾಯಿ ನರಳಾಡುತ್ತಿದ್ದರೂ ಯಾರೂ ಕೂಡ ಇಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರು ಸಹ ಇಲ್ಲ. ನಮಗೆ ಯಾರೂ ಚಿಕಿತ್ಸೆ ನೀಡುತ್ತಾರೆ? ಖಾಸಗಿ ಆಸ್ಪತ್ರೆಗೆ ಹೋಗಲು, ಜಿಲ್ಲಾ ಕೇಂದ್ರಕ್ಕೆ ಹೋಗಲು ನಮ್ಮ ಬಳಿ ಹಣವಿಲ್ಲ. ಇತ್ತ ಸಮುದಾಯ ಕೇಂದ್ರ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಈಗ ನಮ್ಮ ಪರಿಸ್ಥಿತಿ ಏನು ಎಂದು ತಮ್ಮ ಆಳಲನ್ನು ಹೇಳಿಕೊಂಡಿದ್ದಾರೆ.

    ಹೆಸರಿಗೆ ಮಾತ್ರ ಇದು ಸಂಸದ ದೇವೇಂದ್ರಪ್ಪ ಅವರ ಸ್ವಗ್ರಾಮ. ಆದರೆ ಇಲ್ಲಿನ ಸಮುದಾಯ ಕೇಂದ್ರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇರಲಿ, ರೋಗಿಗಳಿಗೆ ಪ್ರಥಮ ಚಿಕಿತ್ಸೆ ಕೊಡಲು ಕೂಡ ಯಾರು ಇಲ್ಲ. ಈಗಲಾದರೂ ಅಧಿಕಾರಿಗಳು, ಸಂಸದರು ಗಮನಕೊಟ್ಟು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೌಲಭ್ಯ ಒದಗಿಸಬೇಕು. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.