Tag: mouse

  • ಇಲಿ ಗಣೇಶನ ವಾಹನವಾಗಿದ್ದು ಹೇಗೆ?

    ಇಲಿ ಗಣೇಶನ ವಾಹನವಾಗಿದ್ದು ಹೇಗೆ?

    ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಗಣೇಶನ ವಾಹನ ಇಲಿ. ಆದರೆ ಇದರ ಹಿಂದಿನ ಕಾರಣವೇನು ಎಂದು ಅರಿತಿರುವವರು ಕಡಿಮೆ. ಇಲಿ ಗಣೇಶನ ವಾಹನವಾಗಿದ್ದು ಹೇಗೆ ಎನ್ನುವ ಕಥೆ ವಿಭಿನ್ನ ರೀತಿಯಲ್ಲಿ ವರ್ಣಿಸಲಾಗಿದೆ. ಹಿಂದೂ ಗ್ರಂಥಗಳಲ್ಲಿ ಹಾಗೂ ಬೇರೆ ಬೇರೆ ಸ್ಥಳೀಯ ಗ್ರಂಥಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

    ಕ್ರೌಂಚ ಎಂಬ ಒಬ್ಬ ಸಂಗೀತಗಾರನಿದ್ದ. ಆತ ಬಹಳ ದುರಹಂಕಾರಿಯಾಗಿದ್ದ. ಹೀಗೆ ಒಂದು ದಿನ ಆತ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಒಬ್ಬ ಋಷಿ ಮುನಿಯ ಪಾದವನ್ನು ತುಳಿದ. ಇದರಿಂದ ಕೋಪಗೊಂಡ ಋಷಿಮುನಿ ಕ್ರೌಂಚನಿಗೆ ನೀನು ಇಲಿಯಾಗುತ್ತೀಯಾ ಎಂದು ಶಪಿಸಿದನು. ಆಗ ಕ್ರೌಂಚ ತಕ್ಷಣವೇ ಒಂದು ದೊಡ್ಡ, ದೈತ್ಯಾಕಾರದ ಇಲಿಯಾಗಿ ಬದಲಾದನು. ಅಂದಿನಿಂದ ಇಲಿಯಾದ ಕ್ರೌಂಚ ಆಶ್ರಮ, ತೋಟಗಳಲ್ಲಿದ್ದ ಜನರನ್ನು ಹೆದರಿಸಿ, ಬೆಳೆ, ಮನೆಗಳನ್ನು ನಾಶ ಮಾಡಲು ಪ್ರಾರಂಭಿಸಿತು. ಜೊತೆಗೆ ಧ್ಯಾನ ಮಾಡುವ ಋಷಿಮುನಿಗಳಿಗೂ ಕೂಡ ತೊಂದರೆ ಕೊಡಲು ಶುರು ಮಾಡಿತ್ತು.ಇದನ್ನೂ ಓದಿ: ಗಣೇಶ ಚತುರ್ಥಿ – ಗಣಪತಿಯ ವಿವಿಧ ಹೆಸರುಗಳು ಯಾವುವು? ಅರ್ಥ ಏನು?

    ಇದರಿಂದ ಬೇಸತ್ತ ಋಷಿಮುನಿಗಳು ಗಣೇಶನಲ್ಲಿ ಪಾರ್ಥಿಸಿಕೊಂಡು, ಈ ಇಲಿಯಿಂದ ಆಗುತ್ತಿರುವ ವಿನಾಶದಿಂದ ನಮ್ಮನ್ನು ರಕ್ಷಿಸು ಎಂದು ಬೇಡಿಕೊಂಡರು. ಆಗ ಗಣೇಶ ಪ್ರತ್ಯಕ್ಷನಾಗಿ ಇಲಿಯ ಜೊತೆಗೆ ಕಾದಾಟಕ್ಕಿಳಿದನು.

    ಗಣೇಶನನ್ನು ಸೋಲಿಸಲು ಎಷ್ಟೇ ಪ್ರಯತ್ನಿಸಿದರೂ ಇಲಿಗೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಗಣೇಶ ತನ್ನ ಉಪಾಯದಿಂದ ಇಲಿಯನ್ನು ಬಲೆಗೆ ಬೀಳಿಸಿಕೊಂಡನು. ಸೋಲನ್ನು ಒಪ್ಪಿಕೊಂಡ ಇಲಿ ಕ್ಷಮೆಯಾಚಿಸಿತು. ಆಗ ಗಣೇಶ ಇಲಿಯನ್ನು ಕ್ಷಮಿಸಿ, ಇಂದಿನಿಂದ ನೀನು ನನ್ನ ವಾಹನ ಎಂದು ಹೇಳಿದ.

    ಅಂದಿನಿಂದ ಇಲಿಯು ಮೂಷಕನಾಗಿ ಬದಲಾಯಿತು.ಇದನ್ನೂ ಓದಿ: Ganesh Chaturthi | ಗಣೇಶನಿಗೆ `ಏಕದಂತ’ ಹೆಸರು ಹೇಗೆ ಬಂತು? – ಇಲ್ಲಿದೆ ಪುರಾಣದ ಕಥೆ

  • ಶಾಲೆಯ ಬಿಸಿಯೂಟದಲ್ಲಿ ಸಿಕ್ತು ಸತ್ತ ಇಲಿ

    ಶಾಲೆಯ ಬಿಸಿಯೂಟದಲ್ಲಿ ಸಿಕ್ತು ಸತ್ತ ಇಲಿ

    ಲಕ್ನೋ: ಇತ್ತೀಚೆಗಷ್ಟೇ ಉತ್ತರಪ್ರದೇಶದ ಶಾಲೆಯೊಂದರಲ್ಲಿ 1 ಲೀಟರ್ ಹಾಲಿಗೆ 1 ಬಕೆಟ್ ನೀರು ಹಾಕಿ ಮಕ್ಕಳಿಗೆ ನೀಡಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಶಾಲೆಯಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಇಲಿಯೊಂದು ಸಿಕ್ಕಿರುವುದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಬೆಳಕಿಗೆ ಬಂದಿದೆ.

    6 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮುಜಾಫರ್ ನಗರದಿಂದ 90 ಕೀ.ಮಿ ದೂರದಲ್ಲಿರುವ ಹಾಪುರ್ ನ ಜನ್ ಕಲ್ಯಾಣ್ ವಿಕಾಸ್ ಕಮಿಟಿ ಎಂಬ ಎನ್‍ಜಿಓ ಒಂದು ಊಟ ತಯಾರು ಮಾಡುತ್ತಿದೆ. ಇಂದು ಮಧ್ಯಾಹ್ನ ಆಹಾರ ಸೇವಿಸಿದವರಲ್ಲಿ 9 ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಬ್ಬರು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

    ಬಳಿಕ ಸುದ್ದಿ ಸಂಸ್ಥೆಯೊಂದು ಅಸ್ವಸ್ಥರನ್ನು ಮಾತನಾಡಿಸಿದಾಗ, ನಾವು ಸ್ಪೂನ್ ನಲ್ಲಿ ದಾಲ್ ತೆಗೆದುಕೊಂಡಾಗ ಇಲಿಯನ್ನು ನೋಡಿದೆವು. ಇದು ದಾಲ್ ಪಾತ್ರೆಯ ತಳಭಾಗದಲ್ಲಿತ್ತು. ಅದಾಗಲೇ ಸುಮಾರು 15 ಮಂದಿ ಮಕ್ಕಳಿಗೆ ಊಟ ಸರ್ವ್ ಮಾಡಲಾಗಿತ್ತು ಎಂದು 6ನೇ ತರಗತಿ ವಿದ್ಯಾರ್ಥಿ ಶಿವಾಂಗ್ ತಿಳಿಸಿದ್ದಾನೆ. ಇದನ್ನೂ ಓದಿ: ಶಾಲೆಯಲ್ಲಿ 1 ಲೀಟರ್ ಹಾಲನ್ನು 81 ವಿದ್ಯಾರ್ಥಿಗಳಿಗೆ ಹಂಚಿದ್ರು!

    ಈ ವಿಚಾರ ಸಂಬಂಧ ಸ್ಥಳೀಯ ಶಿಕ್ಷಣಾಧಿಕಾರಿ ರಾಮ್ ಸಾಗರ್ ತೃಪಾತಿ ಮಾತನಾಡಿ, ಊಟದಲ್ಲಿ ಇಲಿ ಸಿಕ್ಕ ವಿಚಾರ ತಿಳಿದು ಶಾಕ್ ಆಯಿತು. ನಿರ್ಲಕ್ಷ್ಯತನದಿಂದ ಇಂತಹ ಕೆಲಸವಾಗಿದೆ ಎಂದು ಹೇಳಿದ್ದಾರೆ.

    ಜನ್ ಕಲ್ಯಾಣ್ ವಿಕಾಸ್ ಕಮಿಟಿ ಇಂದು ತಯಾರಿಸಿದ ಮಧ್ಯಾಹ್ನದ ಬಿಸಿಯೂಟದ ದಾಲ್ ನಲ್ಲಿ ಇಲಿ ಸಿಕ್ಕಿದೆ. ಆ ಕೂಡಲೇ ನಾವು ಮಕ್ಕಳಿಗೆ ನೀಡುವುದನ್ನು ನಿಲ್ಲಿಸಿದ್ದೇವೆ. ಘಟನೆಯಿಂದ 9 ಮಂದಿ ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಆರಾಮಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಇದು ನಿರ್ಲಕ್ಷ್ಯತನದಿಂದಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತೃಪಾತಿ ವಿವರಿಸಿದ್ದಾರೆ.