Tag: mountain

  • 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

    22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಬಳಿಕ ಕೊಂಚ ಬ್ರೇಕ್ ಪಡೆದ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದರು. ಸದ್ಯ ಇದೀಗ ನಿಧಿ ಪ್ರವಾಸದಿಂದ ಹಿಂದಿರುಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    nidhi

    ಬಿಗ್‍ಬಾಸ್ ಸೀಸನ್-8ರಲ್ಲಿ ತಮ್ಮ ಚೇಷ್ಟೆ ಮತ್ತು ತಮಾಷೆ ಮೂಲಕವೇ ಮನೆ ಮಾತಾಗಿದ್ದ ನಿಧಿ ಸುಬ್ಬಯ್ಯ, ಬಿಗ್‍ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಬೆಳೆಸಿದ್ದ ಅವರು, ಅಲ್ಲಿನ ಮಂಜು ಗಟ್ಟಿದ ಖಾಲಿ ರಸ್ತೆಗಳಲ್ಲಿ, ಬೆಟ್ಟ, ಗುಡ್ಡ, ನದಿ ಹೀಗೆ ಪ್ರಕೃತಿಯ ಮಧ್ಯೆ ಸುಂದರವಾಗಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್

    nidhi

    ಇದೀಗ ನಿಧಿ ಪ್ರವಾಸದಿಂದ ಮರಳಿ ಮತ್ತೆ ತವರಿನತ್ತ ಮುಖ ಮಾಡಿದ್ದು, ಈ ಕುರಿತಂತೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆಗೆ 22 ದಿನಗಳ ನಡಿಗೆ, ಲುಡೋ ಆಟ ಆಡುವುದು, ಓದುವುದು, ಸ್ಕೇಚ್ಚಿಂಗ್ ಮಾಡುವುದು, ಲೈವ್ ಮ್ಯೂಸಿಕ್‍ಗಳನ್ನು ಕೇಳುವುದು, ಮೋಡಗಳನ್ನು ಏರುವ ಪರ್ವತಗಳನ್ನು ಏರುವುದು ಮತ್ತು ಆಕಾಶದಲ್ಲಿ ಬದಲಾಗುತ್ತಿರುವ ಬಣ್ಣಗಳನ್ನು ನೋಡುತ್ತಿರುವುದು. ಮರೆಯಲಾಗದಂತಹ ನೆನಪುಗಳು ಎಂದು ಪ್ರವಾಸಿದಲ್ಲಿ ತಾವು ಕಳೆದ ಸುಂದರವಾದ ಕ್ಷಣದ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: ನಿಧಿ ಸುಬ್ಬಯ್ಯ ಸಾಂಗ್‍ಗೆ ಮನೆ ಮಂದಿ ಫಿದಾ

     

    View this post on Instagram

     

    A post shared by Nidhi Subbaiah (@nidhisubbaiah)

    ಇತ್ತೀಚೆಗಷ್ಟೇ ನಿಧಿ ಕಿಚ್ಚನ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿ ಅವರ ಸುದೀಪ್‍ಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದರು. ಪಂಚರಂಗಿ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ನಿಧಿ ಸುಬ್ಬಯ್ಯ ನಂತರ ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾಬಾಂಡ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಬಾಲಿವುಡ್‍ನಲ್ಲಿ ಕೂಡ ನಾಯಕಿಯಾಗಿ ಮಿಂಚಿದ್ದಾರೆ.

     

  • ವೆಡ್ಡಿಂಗ್ ಫೋಟೋಶೂಟ್ – ವರನ ಕೈಯಿಂದ ಜಾರಿದ ವಧು ಫೋಟೋಗೆ ಟ್ವಿಸ್ಟ್

    ವೆಡ್ಡಿಂಗ್ ಫೋಟೋಶೂಟ್ – ವರನ ಕೈಯಿಂದ ಜಾರಿದ ವಧು ಫೋಟೋಗೆ ಟ್ವಿಸ್ಟ್

    – 1,900 ಅಡಿ ಎತ್ತರದ ಬಂಡೆಯ ತುತ್ತ ತುದಿಯಲ್ಲಿ ಫೋಟೋ ಕ್ಲಿಕ್

    ವಾಷಿಂಗ್ಟನ್: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಆಗಿದೆ. ವಧು-ವರ ಇಬ್ಬರೂ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ವಧುಯೊಬ್ಬಳು ಸುಮಾರು 1,900 ಅಡಿ ಎತ್ತರದ ಬಂಡೆಯ ಅಂಚಿನಲ್ಲಿ ತೂಗಾಡುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಅಮೆರಿಕದ ಅರ್ಕಾನ್ಸಾಸ್ ಮೂಲದ ರಿಯಾನ್ ಮೈಯರ್ಸ್ (30) ಮತ್ತು ಪತ್ನಿ ಸ್ಕೈ (28) ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಲು ಪ್ಲಾನ್ ಮಾಡಿದ್ದರು. ಆದರೆ ಕೊರೊನಾ ಹಿನ್ನೆಲೆ ಲಾಕ್‍ಡೌನ್ ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಿಲ್ಲ. ಕೊನೆಗೆ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಅದ್ಧೂರಿಯಾಗಿ ಮದುವೆಯಾಗದಿದ್ದರೂ ಸಾಹಸಮಯವಾಗಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಅದರಂತೆಯೇ ದಂಪತಿ ಅರ್ಕಾನ್ಸಾಸ್‍ನ ಅತ್ಯಂತ ಜನಪ್ರಿಯ ಟ್ರಕ್ಕಿಂಗ್ ಸ್ಥಳವಾದ ವಿಟೇಕರ್ ಪಾಯಿಂಟ್‍ನಲ್ಲಿರುವ ಹಾಕ್ಸ್ ಬಿಲ್ ಕ್ರಾಗ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಛಾಯಾಗ್ರಾಹಕ ಮಾಸನ್ ಗಾರ್ಡನರ್ ಎಂಬುವರು ರೋಮಾಂಚನಕಾರಿ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಅದರಲ್ಲಿ ಬಂಡೆಯ ತುದಿಯಲ್ಲಿ ನವವಿವಾಹಿತರು ಕೈ ಹಿಡಿದು ನಿಂತಿರುವುದನ್ನು ನೋಡಬಹುದಾಗಿದೆ.

    ಪರ್ವತದ ತುತ್ತ ತುದಿಯಲ್ಲಿ ವಧುವಿನ ಕೈಯನ್ನು ವರ ಹಿಡಿದಿದ್ದಾನೆ. ವಧು ತೂಗಾಡುವಂತಿದ್ದು, ವರನ ಕೈಯಿಂದ ಜಾರಿ ವಧು ಪ್ರಪಾತಕ್ಕೆ ಬೀಳುವಂತೆ ಕಾಣಿಸುತ್ತದೆ. ಆದರೆ ವಧುವಿನ ಸುರಕ್ಷತೆಗಾಗಿ ರೋಪ್ ಬಳಸಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಿಸುತ್ತಿದೆ. ಛಾಯಾಗ್ರಾಹಕರು ಸಾಕಷ್ಟು ಸಾಹಸಮಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.

    ಈ ದಂಪತಿಗೆ ಕೇವಲ 12 ಅತಿಥಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ನಂತರ ಈ ದಂಪತಿ ಸಾಹಸಮಯ ಫೋಟೋಶೂಟ್ ಮಾಡಿಸಿದ್ದಾರೆ.

    ನಾವು ಅದ್ಧೂರಿಯಾಗಿ ಮದುವೆಯಾಗಬೇಕೆಂದು ಬಯಸಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದೇವೆ. ನಮಗೆ ಪ್ರಕೃತಿಯ ಮಧ್ಯೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ತುಂಬಾ ಇಷ್ಟ. ಆದ್ದರಿಂದ ಫೋಟೋಶೂಟ್ ವೇಳೆ ಎಲ್ಲಾ ಸುರಕ್ಷತಾ ಸಾಧನಗಳನ್ನು ತಜ್ಞರು ಪರಿಶೀಲಿಸಿದ ನಂತರ ಫೋಟೋಶೂಟ್ ಮಾಡಿಸಿದ್ದೇವೆ. ಇದರ ಅನುಭವ ಅದ್ಭುತವಾಗಿತ್ತು ಎಂದು ದಂಪತಿ ಸಂತಸದಿಂದ ಹೇಳಿದ್ದಾರೆ.

  • ದೇವಿಯ ದರ್ಶನದ ನಂತ್ರ ಪರ್ವತದಿಂದ ಪತ್ನಿಯನ್ನೇ ತಳ್ಳಿದ

    ದೇವಿಯ ದರ್ಶನದ ನಂತ್ರ ಪರ್ವತದಿಂದ ಪತ್ನಿಯನ್ನೇ ತಳ್ಳಿದ

    ಮುಂಬೈ: ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಪತಿಯೊಬ್ಬ ಪತ್ನಿಯನ್ನು ಪರ್ವತದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ.

    ಕವಿತಾ (22) ಮೃತ ಮಹಿಳೆ. ಆರೋಪಿ ಪತಿಯನ್ನು ಬಾಬುಲಾಲ್ ಕೇಲ್ ಎಂದು ಗುರುತಿಸಲಾಗಿದ್ದು, ಈತ ತನ್ನ ಪತ್ನಿ ಕವಿತಾಳನ್ನು ಪ್ರಸಿದ್ಧ ಸಪ್ತಶೃಂಗಿ ದೇವಾಲಯ ಇರುವ ನಂದೂರಿ ಪರ್ವತ ಶಿಖರದಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ದಂಪತಿ ಮೂಲತಃ ಮಧ್ಯಪ್ರದೇಶದವರಾಗಿದ್ದು, ಭಾನುವಾರ ಕಲ್ವಾನ್‍ಗೆ ಆಗಮಿಸಿದ್ದರು. ಇಬ್ಬರು ಹೋಟೆಲ್‍ನಲ್ಲಿ ಉಳಿದುಕೊಂಡಿದ್ದು, ಇಂದು ಸಪ್ತಶೃಂಗಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆದುಕೊಂಡು ಬಳಿಕ ಸಮೀಪದ ಶೀಟ್ಕಾಡ ಶಿಖರಕ್ಕೆ ಹೋಗಿದ್ದರು. ಅಲ್ಲಿ ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಇದರಿಂದ ಕೋಪಗೊಂಡ ಪತಿ ಕೇಲ್ ಕವಿತಾಳನ್ನು ಕಣಿವೆಯಲ್ಲಿ ತಳ್ಳಿದ್ದಾನೆ ಎಂದು ಪೊಲೀಸ್ ಅಧಿಕಾರಿ ಪ್ರಮೋದ್ ವಾಘ್ ಹೇಳಿದ್ದಾರೆ.

    ಶಿಖರದ ಸಮೀಪದಲ್ಲಿ ನಿಂತಿದ್ದ ಹಣ್ಣಿನ ವ್ಯಾಪಾರಿ ಕೇಲ್ ತನ್ನ ಪತ್ನಿಯನ್ನು ಕಣಿವೆಯಲ್ಲಿ ತಳ್ಳುವುದನ್ನು ನೋಡಿದ್ದಾನೆ. ತಕ್ಷಣ ಇತರ ಯಾತ್ರಾರ್ಥಿಗಳಿಗೆ ಎಚ್ಚರಿಕೆ ನೀಡಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಕವಿತಾಳ ಮೃತದೇಹವನ್ನು ಕಣಿವೆಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

    ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

    ಶ್ರೀನಗರ: ಕಲ್ಲಿನಿಂದ ಹೊಡೆದು ಕಂದು ಬಣ್ಣದ ಕರಡಿಯನ್ನು ಕಡಿದಾದ ಪರ್ವತದಿಂದ ನದಿಗೆ ಬೀಳಿಸುತ್ತಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿನತ್ತ ಬಂದ ಕರಡಿಯನ್ನು ಜನರು ಕಲ್ಲಿನಿಂದ ಹೊಡೆದಿದ್ದಾರೆ. ಎತ್ತರದ ಶಿಖರದಿಂದ ಕೆಳಗೆ ಬೀಳುತ್ತಿರುವ ವಿಡಿಯೋ ಮಾಡಿ ಮಾನವೀಯತೆಯನ್ನು ಮರೆತಿದ್ದಾರೆ.

    ದಾರಿ ತಪ್ಪಿ ನಾಡಿಗೆ ಬಂದ ಕರಡಿಯನ್ನು ಅಲ್ಲಿನ ಸ್ಥಳೀಯ ಜನರು ಓಡಾಡಿಸಿದ್ದಾರೆ. ಜನರ ಗಲಾಟೆಯಿಂದ ಭಯಗೊಂಡ ಕರಡಿ ಸಮೀಪದ ಎತ್ತರದ ಪ್ರದೇಶ(ಬೆಟ್ಟ)ವೇರಿದೆ. ಕಲ್ಲಿನಿಂದ ಹೊಡೆಯುತ್ತಾ ಜನರು ಕರಡಿಯನ್ನು ಬೆನ್ನತ್ತಿದ್ದಾರೆ. ಎತ್ತರ ಪ್ರದೇಶಕ್ಕೆ ತಲುಪಿದಂತೆ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಉರುಳಿದೆ. ಪ್ರಾಣ ಉಳಿಸಿಕೊಳ್ಳಲು ಕರಡಿ ಮತ್ತೆ ಮೇಲೆ ಬರಲು ಪ್ರಯತ್ನಿಸಿದೆ.

    ಕರಡಿ ಪ್ರಾಣ ಉಳಿಸಿಕೊಳ್ಳಲು ಮೇಲೆ ಬರುತ್ತಿದ್ದನ್ನು ಕಂಡ ಜನರು ಮತ್ತೆ ಕಲ್ಲಿನ ದಾಳಿ ನಡೆಸಿದ್ದಾರೆ. ಕಲ್ಲಿನ ದಾಳಿಗೆ ಆಯತಪ್ಪಿದ ಕರಡಿ ಕಂದಕದಲ್ಲಿ ಹರಿಯುತ್ತಿರುವ ನದಿಯ ಪಾಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರಡಿಯ ಸಾವಿಗೆ ಕಾರಣರಾದವರನ್ನು ಕಂಡು ಹಿಡಿದು ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಕರಡಿಯ ಮೇಲೆ ಕಲ್ಲೆಸೆದವರನ್ನು ಪತ್ತೆ ಹಚ್ಚಿ ಅವರೆಲ್ಲ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ನದಿಯಲ್ಲಿ ಬಿದ್ದಿರುವ ಕರಡಿಯ ಪತ್ತೆಗಾಗಿ ವನ್ಯಜೀವಿ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಉಲ್-ಹಕ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.

    ಈ ವಿಡಿಯೋ ರೀಟ್ವೀಟ್ ಮಾಡಿಕೊಂಡಿರುವ ಮಾಜಿ ಸಿಎಂ ಮೆಹಬೂಬ ಮುಫ್ತಿ, ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಅಮಾನವೀಯತೆಯ ಸಾಕ್ಷಿಯಾಗಿದೆ. ಪ್ರಾಣಿಗಳ ವಾಸಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದು ನಮ್ಮ ತಪ್ಪು ಎಂದು ಬರೆದುಕೊಂಡಿದ್ದಾರೆ.