Tag: mother

  • ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

    ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

    ಬೆಂಗಳೂರು: ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಹೆಬ್ಬಾಳದಲ್ಲಿ ನಡೆದಿದೆ.

    ಪುಷ್ಪಾವತಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪುಷ್ಪಾವತಿ ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಏಕಾಏಕಿ ತನ್ನಿಬ್ಬರು ಮಕ್ಕಳಾದ ಎಂಟು ವರ್ಷದ ಮಗ ಜೀವನ್ ಹಾಗೂ ಐದು ತಿಂಗಳ ಮಗಳಿಗೆ ವಿಷವುಣಿಸಿ ಡೇತ್ ಬರೆದಿಟ್ಟು ಬಳಿಕ ಆಕೆ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಪುಷ್ಪಾವತಿ ಡೇತ್ ನೋಟ್ ನಲ್ಲಿ ನನಗೆ ಜೀವನ ಬೇಸರವಾಗಿದೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ 10 ವರ್ಷಗಳ ಹಿಂದೆ ಕಂಪನಿಯೊಂದರಲ್ಲಿ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್ ಎಂಬವರನ್ನು ಮದುವೆ ಆಗಿದ್ದಳು. ಮೂಲತಃ ಶಿವಮೊಗ್ಗದ ತಿರ್ಥಹಳ್ಳಿಯವರಾದ ಇವರು ಬೆಂಗಳೂರಿನ ಹೆಬ್ಬಾಳ ಬಳಿಯ ಮನೋರಾಯನ ಪಾಳ್ಯದಲ್ಲಿ ವಾಸವಾಗಿದ್ದರು.

    ಮದುವೆಯಾದ ನಂತರ ಪುಷ್ಪಾವತಿ ತನ್ನ ಪೋಷಕರ ಸಂಪರ್ಕವನ್ನು ಕಳೆದುಕೊಂಡು ಪತಿಯ ಜೊತೆ ವಾಸಿಸುತ್ತಿದ್ದಳು. ಮದುವೆಯಾದ ಅಂದಿನಿಂದ ಇಲ್ಲಿಯವರೆಗೆ ಒಮ್ಮೆಯೂ ಜಗಳವಾಗಿರಲಿ, ಇವರಿಬ್ಬರ ನಡುವೆ ಮನಸ್ತಾಪವಿರದೇ ಹಾಲು-ಜೇನಿನಂತೆ ಜೀವನ ನಡೆಸುತ್ತಿದ್ದರು. ಆದರೆ ಸೋಮವಾರ ಪುಷ್ಪಾವತಿ ಏಕಾಏಕಿ ಮಕ್ಕಳಿಗೆ ವಿಷ ಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡು, ಇಡೀ ಕುಟುಂಬಸ್ಥರಿಗೆ ಅರಗಿಸಿಕೊಳ್ಳಲಾಗದ ಶಾಕ್ ಕೊಟ್ಟು ಇಹಲೋಕ ತ್ಯಜಿಸಿದ್ದಾಳೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಾಳ ಪೊಲೀಸರು ಪತಿ ನಾಗರಾಜ್‍ನನ್ನು ವಶಕ್ಕೆ ಪಡೆದು ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ಮರಣೋತ್ತರ ಪರಿಕ್ಷೇಗೆ ರವಾನಿಸಿದ್ದಾರೆ. ಸದ್ಯ ಆತ್ಮಹತ್ಯೆಗೆ ಅಸಲಿ ಕಾರಣ ತಿಳಿದುಬಂದಿಲ್ಲ.

  • ಆಪರೇಷನ್ ಬಳಿಕ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು

    ಆಪರೇಷನ್ ಬಳಿಕ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು

    – ಆಸ್ಪತ್ರೆಯ ಮುಂಭಾಗದಲ್ಲಿ ಹೈಡ್ರಾಮಾ
    – Pesudo Pregnancy case ಎಂದ ವೈದ್ಯರು

    ಭೋಪಾಲ್: ಆಪರೇಷನ್ ಬಳಿಕ ಗರ್ಭಿಣಿ ಹೊಟ್ಟೆಯಲ್ಲಿ ಮಗು ಇಲ್ಲವೆಂದು ವೈದ್ಯರು ಹೇಳಿದ ಬಳಿಕ ಆಸ್ಪತ್ರೆಯ ಮುಂದೆ ಹೈಡ್ರಾಮ ನಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಒಂಭತ್ತು ತಿಂಗಳಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಆಪರೇಷನ್ ಬಳಿಕ ನಿಮ್ಮ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ವೈದ್ಯರು ಸುಳ್ಳು ಹೇಳುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಧ್ಯಪ್ರದೇಶದ ಹೋಶಂಗಾಬಾದ್ ರಸ್ತೆಯ ನೊಬಲ್ ಆಸ್ಪತ್ರೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

    ಹೆರಿಗೆ ನೋವೆಂದು ಆಸ್ಪತ್ರೆಗೆ ಕೃಷ್ಣಾ ಸೋಲಂಕಿ ದಾಖಲಾಗಿದ್ದರು. ತುರ್ತು ಪ್ರಕರಣವೆಂದು ವೈದ್ಯರು ಮಹಿಳೆಗೆ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದರು. ಒಂದು ಗಂಟೆಯ ಬಳಿಕ ಆಸ್ಪತ್ರೆಗೆ ಆಗಮಿಸಿದ ಮಹಿಳೆಯ ಪತಿ ಪ್ರೇಮ್ ಲಾಲ್‍ರನ್ನು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆಸಿ ನಿಮ್ಮ ಪತ್ನಿಯ ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ. ಆಕೆ ಗರ್ಭಿಣಿಯೇ ಆಗಿಲ್ಲ ಎಂದು ತಿಳಿಸಿದ್ದಾರೆ.

    ನಡೆದಿದ್ದು ಏನು?
    ಬಂಗರಸಿಯಾ ಸಿಆರ್‍ಪಿಎಫ್ ಕ್ಯಾಂಪ್ ನಿವಾಸಿ ಕೃಷ್ಣಾ ಸೋಲಂಕಿ ಜೂನ್ 2ರಂದು ನೊಬಲ್ ಆಸ್ಪತ್ರೆಗೆ ಸುಮಾರು ರಾತ್ರಿ 11 ಗಂಟೆಗೆ ದಾಖಲಾಗುತ್ತಾರೆ. ಹೆರಿಗೆ ನೋವು ಎಂದು ಹೇಳಿ ದಾಖಲಾದ ಮಹಿಳೆ ತಾನು ಒಂಭತ್ತು ತಿಂಗಳ ತುಂಬು ಗರ್ಭಿಣಿ ಎಂದು ತಿಳಿಸಿದ್ದಾರೆ. ಮಹಿಳೆಯ ಮಾತನ್ನು ನಂಬಿದ ಆಸ್ಪತ್ರೆಯ ಸಿಬ್ಬಂದಿ ಆಕೆಯ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಆಪರೇಷನ್ ವೇಳೆ ಹೊಟ್ಟೆಯಲ್ಲಿ ಮಗು ಇಲ್ಲದಿರುವುದು ಬೆಳಕಿಗೆ ಬಂದಿದೆ.

    ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಮಗು ಜೀವಂತವಾಗಿದೆ. ಮಗುವಿನ ಉಸಿರಾಟ ಪ್ರಕ್ರಿಯೆ ಶೇ.80ರಷ್ಟಿದೆ ಎಂದು ತಿಳಿಸಿ ಅತ್ತಿಗೆಯನ್ನು ಆಪರೇಷನ್ ಕೋಣೆಗೆ ಕರೆದುಕೊಂಡು ಹೋಗಿದ್ದಾರೆ. ಒಂದು ಗಂಟೆಯ ಬಳಿಕ ಸೋದರನನ್ನು ಕರೆದು ಹೊಟ್ಟೆಯಲ್ಲಿ ಮಗುವೇ ಇರಲಿಲ್ಲ ಎಂದು ಹೇಳಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯೇ ಮಗುವನ್ನು ಬೇರೆಡೆಗೆ ರಹಸ್ಯವಾಗಿ ರವಾನಿಸಿದ್ದಾರೆ ಎಂದು ಮಹಿಳೆಯ ಬಾಮೈದ ದೀಪಕ್ ಸೋಲಂಕಿ ಆರೋಪಿಸಿದ್ದಾರೆ.

    ವೈದ್ಯರು ಹೇಳಿದ್ದೇನು?
    ಹೆರಿಗೆ ನೋವು ಎಂದು ದಾಖಲಾದ ಮಹಿಳೆಗೆ ಆಸ್ಪತ್ರೆಯ ಸಿಬ್ಬಂದಿ ಈ ಹಿಂದಿನ ಸೋನೊಗ್ರಾಫಿಯ ರಿಪೋರ್ಟ್ ಕೇಳಿದ್ದಾರೆ. ಈ ವೇಳೆ ಮಹಿಳೆ ತನ್ನ ಬ್ಯಾಗ್ ಮರೆ ಮಾಡುವುದು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ಬಚ್ಚಿಟ್ಟ ವರದಿಯಲ್ಲಿ ಆಕೆ ಗರ್ಭಿಣಿ ಅಲ್ಲ ಎಂದು ದಾಖಲಾಗಿದೆ. ಮಹಿಳೆ ಪ್ರಕಾರ ಆಕೆ ಕಳೆದ ಆರು ತಿಂಗಳಿನಿಂದ ನೊಬಲ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದು, ವೈದ್ಯರು ಮೊದಲೇ ಆಕೆ ಗರ್ಭಿಣಿ ಅಲ್ಲ ಎಂದು ಖಚಿತ ಪಡಿಸಿದ್ದರು.

    ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಸೋನೊಗ್ರಾಫಿ ಮಾಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಕಳೆದ ಆರು ತಿಂಗಳಿನಿಂದ ನಿಮ್ಮ ಬಳಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಮೊದಲಿನ ಹೆರಿಗೆ ಸಹ ಶಸ್ತ್ರಚಿಕಿತ್ಸೆಯಿಂದಾಗಿ ನಡೆದಿದೆ ಎಂದಾಗ ಎಮರ್ಜಿನ್ಸಿ ಸಂದರ್ಭದಲ್ಲಿ ಸೋನೊಗ್ರಾಫಿ ಇಲ್ಲದೆಯೇ ಕೆಲವೊಮ್ಮ ಶಸ್ತ್ರಚಿಕಿತ್ಸೆ ಮಾಡಬೇಕಾಗತ್ತದೆ. ಮಹಿಳೆ ಸುಳ್ಳು ಹೇಳುತ್ತಿದ್ದಾರೆ ನೊಬಲ್ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

    ಮಹಿಳೆ ಸುಡೋ ಪ್ರಗ್ನೆನ್ಸಿ ಕಾಯಿಲೆಗೆ ಒಳಗಾಗಿದ್ದು, ಆಕೆಯನ್ನು ನೋವಿನಿಂದ ಒದ್ದಾಡುತ್ತಿದ್ದ ಆಸ್ಪತ್ರೆಗೆ ಕರೆತರಲಾಗಿತ್ತು. ಮಹಿಳೆಯ ಬಳಿ ದೊರೆತ ರಿಪೋರ್ಟ್ ನಲ್ಲಿ ಆಕೆ ಗರ್ಭಿಣಿ ಅಲ್ಲ ಎಂದು ವರದಿಯಾಗಿದೆ ಎಂದು ನೊಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಪ್ರಜ್ಞಾ ಮಿಶ್ರಾ ತಿಳಿಸಿದ್ದಾರೆ.

    ಏನಿದು ಸುಡೋ ಪ್ರೆಗ್ನೆನ್ಸಿ?
    ಸುಡೋ ಎಂದರೆ ಕಾಲ್ಪನಿಕ. ಸೊಡೋ ಪ್ರೆಗ್ನೆನ್ಸಿಯಿಂದ ಬಳಲುತ್ತಿರುವ ಮಹಿಳೆ ತಾನು ಗರ್ಭಿಣಿ ಎಂದು ಬಲವಾಗಿ ನಂಬಿಕೊಂಡಿರುತ್ತಾರೆ. ನಂಬಿಕೆಯಂತೆ ಮಹಿಳೆಯ ಹೊಟ್ಟೆಯೂ ಸಹ ದೊಡ್ಡದಾಗುತ್ತಾ ಹೋದಾಗ ಆಕೆಯ ನಂಬಿಕೆ ಮತ್ತಷ್ಟು ಬಲವಾಗುತ್ತದೆ. ಈ ಸಂದರ್ಭದಲ್ಲಿ ಸೊನೊಗ್ರಾಫಿ ಮಾಡಿಸಿದಾಗ ನಿಜಾಂಶ ತಿಳಿಯುತ್ತದೆ. ಸಾಮಾನ್ಯವಾಗಿ ಸೊನೊಗ್ರಾಫಿ ವರದಿಗಳಿಲ್ಲದೇ ಯಾರು ಶಸ್ತ್ರಚಿಕಿತ್ಸೆಗೆ ಮುಂದಾಗುವುದಿಲ್ಲ. ಹೆರಿಗೆಯ ತುರ್ತು ಸಂದರ್ಭಗಳಲ್ಲಿ ಎರಡು ಜೀವಗಳ ಉಳಿವಿಗಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ಜಿಎಂಸಿಯ ಡೀನ್, ಡಾ.ಅರುಣ್ ಕುಮಾರ್ ಹೇಳಿದ್ದಾರೆ.

  • ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿ ಮೂವರು ಸಾವು

    ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿ ಮೂವರು ಸಾವು

    ಚಿಕ್ಕಬಳ್ಳಾಪುರ: ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸೇರಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    30 ವರ್ಷದ ತಾಯಿ ವಿಜಯಲಕ್ಷ್ಮೀ ಹಾಗೂ ಮಕ್ಕಳಾದ 10 ವರ್ಷದ ಅಜಯ್ ಹಾಗೂ 8 ವರ್ಷದ ಧನಲಕ್ಷ್ಮೀ ಮೃತರು. ಬಟ್ಟೆ ತೊಳೆಯಲು ಗ್ರಾಮ ಹೊರವಲಯದ ರೈತ ಮುನಿಯಪ್ಪನವರ ಬಾವಿ ಬಳಿ ತೆರಳಿದ್ದ ತಾಯಿ ತೆರಳಿದ್ದರು.

    ಈ ವೇಳೆ ಅಲ್ಲೇ ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿದ್ದು, ಈ ವೇಳೆ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ವಿಜಯಲಕ್ಷ್ಮೀ ಪತಿ ನಾಗರಾಜು ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಕಂಡು ಬಟ್ಟೆ ತೊಳೆಯಲು ಹೋಗಿರುವ ವಿಷಯ ತಿಳಿದು ಬಾವಿ ಬಳಿ ಹೋಗಿದ್ದಾನೆ.

    ಬಾವಿ ಬಳಿ ಬಟ್ಟೆ ಮಾತ್ರ ಇದ್ದು ಹೆಂಡತಿ ಮಕ್ಕಳು ಕಂಡಿಲ್ಲ. ಹೀಗಾಗಿ ಅನುಮಾನಗೊಂಡು ಬಾವಿಯಲ್ಲಿ ಹುಡುಕಾಡಿದಾಗ ಮೊದಲು ವಿಜಯಲಕ್ಷ್ಮೀ ಮೃತದೇಹ ಪತ್ತೆಯಾಗಿದ್ದು ತದನಂತರ ಮಕ್ಕಳ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

    ಚಂಢಿಗಡ್: ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಮಹಿಳೆ ಮೃತಪಟ್ಟ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

    ನೀತಾ, ಯಶಿಕಾ ಹಾಗೂ ಲಕ್ಕಿ ಮೃತ ದುರ್ದೈವಿಗಳು. ಅಗ್ನಿ ಅವಘಡದಿಂದ ಉಸಿರುಗಟ್ಟಿ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

    ಕೆಳಮಹಡಿಯಲ್ಲಿ ಇದ್ದ ಬಟ್ಟೆಯ ಗೋಡೌನ್‍ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡದ ಮೊದಲ ಹಾಗೂ ಎರಡನೇಯ ಮಹಡಿಯಲ್ಲಿ ಶಾಲೆ ನಡೆಸಲಾಗುತಿತ್ತು. ಅಲ್ಲದೆ ಶಾಲೆಯ ನಿರ್ವಾಹಕ ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು.

    ಗ್ರೌಂಡ್ ಫ್ಲೋರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ಶಾಲೆಯ ನಿರ್ವಾಹಕ ಅದನ್ನು ನಂದಿಸಲು ಕೆಳಗೆ ಬಂದಿದ್ದಾನೆ. ಮೊದಲು ಗೋಡೌನ್‍ನ ಬೀಗ ತೆಗೆದು ಬಳಿಕ ಕೆಳಗಡೆ ನಿಂತಿದ್ದ ತಮ್ಮ ಕಾರನ್ನು ಹೊರಗೆ ನಿಲ್ಲಿಸಿ ಮತ್ತೆ ಮೇಲೆ ಹೋಗಲು ಯತ್ನಿಸಿದ್ದಾನೆ.

    ನೋಡುವಷ್ಟರಲ್ಲಿ ಬೆಂಕಿ ಮೊದಲನೇ ಹಾಗೂ ಎರಡನೇ ಮಹಡಿ ತಲುಪಿದೆ. ಎರಡನೇ ಮಹಡಿಯಲ್ಲಿ ನೀತಾ ಹಾಗೂ ಅವರ ಇಬ್ಬರ ಮಕ್ಕಳು ಯಶಿಕಾ ಹಾಗೂ ಲಕ್ಕಿ ಇದ್ದರು. ಹೊಗೆ ಹರಡಿಕೊಂಡಿದ್ದ ಕಾರಣ ಮೂವರು ಕೆಳಗೆ ಬರಲು ಸಾಧ್ಯವಾಗಲಿಲ್ಲ.

    ಹೊಗೆಯಿಂದ ಮೂವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ನಂತರ ಮನೆಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ.

  • ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಪಾಪಿ ಮಗ

    ಹೆತ್ತ ತಾಯಿಯನ್ನೇ ಕೊಲ್ಲಲು ಮುಂದಾದ ಪಾಪಿ ಮಗ

    ಬೆಂಗಳೂರು: ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯ ಕೊರಳಿಗೆ ಮಚ್ಚು ಇಟ್ಟು ಕೊಲೆ ಮಾಡಲು ಮುಂದಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಶಿವಕುಮಾರ್ ತನ್ನ 76 ವರ್ಷದ ತಾಯಿ ಸರಸ್ವತಮ್ಮನನ್ನೇ ಕೊಲೆ ಮಾಡಲು ಮುಂದಾಗಿದ್ದಾನೆ. ಸರಸ್ವತಮ್ಮ ಮಂಡ್ಯ ನಿವಾಸಿಯಾಗಿದ್ದು, ಪತಿಯ ಸಾವಿನ ಬಳಿಕ ಕಿರಿಯ ಮಗನ ಜೊತೆ ವಾಸವಿದ್ದರು. ಮೊದ ಮೊದಲು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಾಟಕ ಮಾಡಿ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿ ತಾಯಿಯ ಹೆಸರಿಗಿದ್ದ ಒಂದು ಕೋಟಿ ಆಸ್ತಿಯನ್ನ ತನ್ನ ಹೆಸರಿಗೆ ವರ್ಗಾಯಿಸಿದ್ದಾನೆ.

    ಇಷ್ಟಕ್ಕೆ ತೃಪ್ತಿಯಾಗದ ಪಾಪಿ ಮಗ, ತಾಯಿಯ ಕುತ್ತಿಗೆಯಲ್ಲಿರುವ ಬಂಗಾರವನ್ನು ಕೊಡುವಂತೆ ಹೇಳಿದ್ದಾನೆ. ಇದಕ್ಕೆ ವಿರೋಧಿಸಿದಾಗ ಕುತ್ತಿಗೆಯ ಮೇಲೆ ಮಚ್ಚು ಇಟ್ಟು ಹೆದರಿಸಿ ಕಿತ್ತುಕೊಂಡಿದ್ದಾನೆ. ರಾತ್ರಿ ವೇಳೆ ಕುಡಿದು ಮನೆಗೆ ಬಂದು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಮನೆಯಿಂದ ಹೆತ್ತತಾಯಿಯನ್ನೇ ಹೊರಹಾಕಿದ್ದಾನೆ. ಮಗನಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿ, ಇದೀಗ ವೃದ್ಧೆ ತಾಯಿ ಬೆಂಗಳೂರಿನಲ್ಲಿರುವ ಮಗಳ ಮನೆಗೆ ಬಂದಿದ್ದಾರೆ.

    ಸರಸ್ವತಮ್ಮನಿಗೆ ಚಿತ್ರಹಿಂಸೆ ಕೊಡುವ ವಿಷಯ ಪಕ್ಕದ ಮನೆಯವರ ಮೂಲಕ ಬೆಂಗಳೂರಿನಲ್ಲಿರುವ ಮಗಳು ಶೋಭಾಗೆ ತಿಳಿದಿದೆ. ನೀರು ಇಲ್ಲದೆ ಸಾಯುವ ಸ್ಥಿತಿಯಲ್ಲಿದ್ದ ವೃದ್ಧ ತಾಯಿಯನ್ನು ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ತಾಯಿಗೆ ಹಿಂಸೆ ಕೊಟ್ಟ ತನ್ನ ಸಹೋದರನ ವಿರುದ್ಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ಕ್ಯಾರೆ ಅಂತಿಲ್ಲ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸರು ಮಾತ್ರ ನಮಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ.

     

    ಮಗ ಶಿವಕುಮಾರ್, ಹೆತ್ತ ತಾಯಿಯ ಆಸ್ತಿಯನ್ನು ಕಬಳಿಸಿ, ಮನೆಯಿಂದ ಹೊರ ಹಾಕಿ ದುಬಾರಿ ಕಾರಿನಲ್ಲಿ ಗೋವಾ, ಮಹಾರಾಷ್ಟ್ರ ಎಂದು ಸುತ್ತಾಡುತ್ತಿದ್ದಾನೆ.

  • ತಾಯಿ ಮೇಲಿದ್ದ ಆಸೆಗೆ 9 ವರ್ಷದ ಮಗಳನ್ನು ಅಪಹರಿಸಿದ

    ತಾಯಿ ಮೇಲಿದ್ದ ಆಸೆಗೆ 9 ವರ್ಷದ ಮಗಳನ್ನು ಅಪಹರಿಸಿದ

    ನವದೆಹಲಿ: ಪ್ರೀತಿಯನ್ನು ಮಹಿಳೆ ತಿರಸ್ಕರಿಸಿದ್ದಕ್ಕೆ ಸಿಟ್ಟಾದ ವ್ಯಕ್ತಿಯೊಬ್ಬ ಸೇಡಿಗಾಗಿ 9 ವರ್ಷ ಮಗಳನ್ನು ಅಪಹರಣಗೈದ ಘಟನೆ ದೆಹಲಿಯಲ್ಲಿ ನಡೆದಿದೆ.

    ಆರೋಪಿಯನ್ನು 28 ವರ್ಷದ ಕಮಲೇಶ್ ಎಂದು ಗುರುತಿಸಲಾಗಿದೆ. ಪತಿಯಿಂದ ದೂರವಾಗಿರುವ ಮಹಿಳೆ ತಾನೇ ದುಡಿದುಕೊಂಡು ಮೂವರು ಹೆಣ್ಣು ಮಕ್ಕಳು ಮತ್ತು ಮಗನನ್ನು ಸಾಕುತ್ತಿದ್ದಾಳೆ.

    ಮೂರು ತಿಂಗಳ ಹಿಂದೆ ಮಹಿಳೆ ಕಮಲೇಶ್ ನನ್ನು ಭೇಟಿಯಾಗಿದ್ದರು. ತಮ್ಮ ರೂಮ್‍ನ ಮೇಲ್ಛಾವಣಿ ರಿಪೇರಿ ಮಾಡಿಸಲು ಕಮಲೇಶ್‍ನನ್ನು ಮಹಿಳೆ ಕೆಲಸಕ್ಕೆ ಕರೆದಿದ್ದರು. ಹೀಗೆ ಕೆಲವು ಬಾರಿ ಭೇಟಿಯ ಬಳಿಕ ಆತನಿಗೆ ಮಹಿಳೆ ಮೇಲೆ ಪ್ರೀತಿ ಹುಟ್ಟಿದೆ. ಈ ಬಗ್ಗೆ ಮಹಿಳೆಗೆ ಕಮಲೇಶ್ ತಿಳಿಸಿ, ಮದುವೆಯಾಗೋಣ ಎಂದಾಗ ಆಕೆ ನಿರಾಕರಿಸಿದ್ದಾರೆ.

    ಇದರಿಂದ ಸಿಟ್ಟಿಗೆದ್ದ ಕಮಲೇಶ್ ಹೇಗಾದರೂ ಮಹಿಳೆಯನ್ನು ಮದುವೆಯಾಗಬೇಕು ಎಂದು ನಿರ್ಧಸಿದ್ದಾನೆ. ಆಗ ಆಕೆಯ ಮಗಳನ್ನು ಅಪಹರಿಸಿ, ಹೆದರಿಸಿ ಮಹಿಳೆಯನ್ನು ಮದುವೆಯಾಗಲು ಮುಂದಾಗಿದ್ದನು. ಭಾನುವಾರ ಅಂಗಡಿಗೆ ಬಾಲಕಿ ಹೋದಾಗ ಆಕೆಯನ್ನು ಆರೋಪಿ ಅಪಹರಿಸಿ ಉತ್ತರ ಪ್ರದೇಶಕ್ಕೆ ಕರೆದೋಯ್ದಿದ್ದಾನೆ. ಆದರೆ ಅಂಗಡಿಗೆ ಹೋದ ಮಗಳು ವಾಪಸ್ ಬಾರದೇ ಇದ್ದಾಗ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಸಂಬಂಧ ಪೊಲೀಸರು ತನಿಖೆಗೆ ಇಳಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ದೆಹಲಿಯಿಂದ ಉತ್ತರ ಪ್ರದೇಶಶಕ್ಕೆ ಬಾಲಕಿಯನ್ನು ಆರೋಪಿ ರೈಲಿನಲ್ಲಿ ಕರೆದೋಯ್ಯುತ್ತಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಯುಪಿ ಪೊಲೀಸರಿಗೆ ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರ ಸಹಾಯದಿಂದ ಆರೋಪಿಯನ್ನು ಯಶಸ್ವಿಯಾಗಿ ಸೆರೆಹಿಡಿದು, ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ.

  • ತಂದೆಯಿಂದಲೇ ಮಗನಿಗೆ ನೇಣು – ದೃಶ್ಯ ನೋಡಿ ರೂಮಲ್ಲಿ ಓಡಾಡಿ ಕಣ್ಣೀರಿಟ್ಟ ತಾಯಿ

    ತಂದೆಯಿಂದಲೇ ಮಗನಿಗೆ ನೇಣು – ದೃಶ್ಯ ನೋಡಿ ರೂಮಲ್ಲಿ ಓಡಾಡಿ ಕಣ್ಣೀರಿಟ್ಟ ತಾಯಿ

    – ಮೀಟರ್ ದಂಧೆಗೆ ತಾಯಿ, ಮಗ ಬಲಿ ಪ್ರಕರಣಕ್ಕೆ ಟ್ವಿಸ್ಟ್
    – ಪತ್ನಿ, ಮಗಳ ಕಣ್ಮುಂದೆ ಮಗನಿಗೆ ನೇಣು ಬಿಗಿದ ತಂದೆ
    – ತಂದೆಯೇ ಮಗನಿಗೆ ನೇಣು ಹಾಕುತ್ತಿರುವ ದೃಶ್ಯ ಸೆರೆ

    ಬೆಂಗಳೂರು: ಮೀಟರ್ ದಂಧೆಗೆ ತಾಯಿ ಹಾಗೂ ಮಗ ಬಲಿಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂದೆಯೇ ಮಗನನ್ನು ನೇಣು ಹಾಕುತ್ತಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ.

    ಹೆಚ್‍ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಮೃತರು. ಗೀತಾಬಾಯಿ ಅವರ ಪತಿ ಸುರೇಶ್ ಸ್ವಂತ ಮಗನಿಗೆ ನೇಣು ಹಾಕಿದ್ದಾರೆ. ಈ ಮೂಲಕ ಪ್ರಕರಣ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಂಡಿದೆ.

    ಆಗಿದ್ದೇನು?:
    ಸುರೇಶ್ ಹಾಗೂ ಗೀತಾಬಾಯಿ ದಂಪತಿ ಪುತ್ರ ವರುಣ್ ರಾವ್, ಪುತ್ರಿಯ ಜೊತೆಗೆ ಹೆಚ್‍ಎಎಲ್ ವಿಭೂತಿಪುರದಲ್ಲಿ ವಾಸವಿದ್ದರು. ಸುರೇಶ್ ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಗೀತಾಬಾಯಿ ಅವರು ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು.

    ಕುಟುಂಬದ ಜೊತೆಗೆ ಶನಿವಾರ ಮನೆಯಲ್ಲಿದ್ದ ಸುರೇಶ್ ಫ್ಯಾನಿಗೆ ಸೀರೆ ಕಟ್ಟಿ ಪುತ್ರ ವರುಣ್ ರಾವ್‍ಗೆ ನೇಣು ಹಾಕಿದ್ದಾನೆ. ಇದನ್ನು ನೋಡಿದ ಪತ್ನಿ ಗೀತಾಬಾಯಿ ಹಾಗೂ ಪುತ್ರಿ ಬಿದ್ದು ಬಿದ್ದು ಕಣ್ಣೀರಿಟ್ಟಿದ್ದಾರೆ. ಆದರೆ ಸುರೇಶ್ ಮಾತ್ರ ಮಗನ ಸಾವನ್ನಪ್ಪಿದ ಬಳಿಕವೇ ದೇಹವನ್ನು ಮಂಚದ ಮೇಲೆ ತಂದು ಹಾಕಿದ್ದಾನೆ. ಈ ದೃಶ್ಯವು ಆರೋಪಿ ಸುರೇಶ್ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಪೊಲೀಸರ ಕೈಗೆ ಸಿಕ್ಕಿದೆ.

    ಗೀತಾಬಾಯಿ ಕಣ್ಣೀರು ಹಾಕುತ್ತಿದ್ದ ಧ್ವನಿ ಕೇಳಿ ನೆರೆಹೊರೆಯವರು ಮನೆಗೆ ಬಂದಿದ್ದರು. ಈ ವೇಳೆ ಏನು ನಡೆದಿಲ್ಲ ಎಂಬಂತೆ ಸುರೇಶ್ ನಟಿಸಿದ್ದ. ಬಳಿಕ ಮಗನ ಸಾವಿನಿಂದ ಆಘಾತಕ್ಕೆ ಒಳಗಾಗಿದ್ದ ಗೀತಾಬಾಯಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾರೆ. ಆದರೆ ಈ ಸಂಬಂಧ ಸುರೇಶ್‍ನನ್ನು ವಿಚಾರಣೆ ಮಾಡಿದಾಗ, ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬವರ ಬಳಿ ಎರಡು ವರ್ಷಗಳ ಹಿಂದೆ 40 ಸಾವಿರ ರೂ. ಸಾಲ ಪಡೆದಿದ್ದೆವು. ಕೆಲವು ದಿನಗಳನಲ್ಲಿ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ದೇವು. ಆದರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಪತ್ನಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದಾಗಿ ಮನನೊಂದ ಪತ್ನಿ ನಾನು ಮನೆಯಲ್ಲಿ ಇಲ್ಲದಿದ್ದಾಗ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಸುರೇಶ್ ಹೇಳಿಕೆ ನೀಡಿದ್ದರು ಎಂದು ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

    ಕುಟುಂಬದ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರೋ? ಕೇವಲ ಫೈನ್ಸಾನಿಯರ್ ಗಳಿಗೆ ಹೆದರಿಸಲು ಹೀಗೆ ಮಾಡಿದ್ದರೋ ಎನ್ನುವುದು ಸ್ಪಷ್ಟವಾಗಿಲ್ಲ. ಈ ವಿಡಿಯೋದಿಂದ ಪ್ರಕರಣ ತಿರುವು ಪಡೆದುಕೊಂಡಿದೆ. ಆರೋಪಿ ಸುರೇಶ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬೆಳಕಿಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

  • ಮೀಟರ್ ಬಡ್ಡಿಗೆ ತಾಯಿ, ಮಗ ಆತ್ಮಹತ್ಯೆ

    ಮೀಟರ್ ಬಡ್ಡಿಗೆ ತಾಯಿ, ಮಗ ಆತ್ಮಹತ್ಯೆ

    – ಖಾಸಗಿ ಫೈನಾನ್ಸಿಯರ್ ಕಿರುಕುಳ ಆರೋಪ

    ಬೆಂಗಳೂರು: ಸಿಸಿಬಿ ಪೊಲೀಸರು ಇತ್ತೀಚೆಗಷ್ಟೇ ಮೀಟರ್ ಬಡ್ಡಿ ದಂಧೆಕೋರರ ಮೇಲೆ ದಾಳಿ ನಡೆಸಿದ್ದರು. ದಾಳಿ ನಂತರವೂ ಎಚ್ಚೆತುಕೊಳ್ಳದ ದಂಧೆಕೋರರು ಬಡವರ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಬಡ್ಡಿಕೋರರ ಹಾವಳಿಗೆ ಬೇಸತ್ತು ತಾಯಿ ಹಾಗೂ ಮಗ ಪ್ರಾಣ ಬಿಟ್ಟಿದ್ದಾರೆ.

    ಹೆಚ್‍ಎಎಲ್ ವಿಭೂತಿಪುರ ನಿವಾಸಿ ಗೀತಾಬಾಯಿ (34) ಹಾಗೂ ಮಗ ವರುಣ್ ರಾವ್ (12) ಆತ್ಮಹತ್ಯೆಗೆ ಶರಣಾದವರು. ಮನೆಯಲ್ಲಿ ಶನಿವಾರ ರಾತ್ರಿ ತಾಯಿ, ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೀಟರ್ ಬಡ್ಡಿ ದಂಧೆಕೋರರು ನನಗೆ ಕಿರುಕುಳ ನೀಡಿದ್ದಾರೆ. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದೇವೆ ಎಂದು ಗೀತಾಬಾಯಿ ಡೆತ್ ನೋಟ್ ಬರೆದಿಟ್ಟಿದ್ದಾರೆ.

    ಸಿಲಿಕಾನ್ ಸಿಟಿಯಲ್ಲಿ ಒಂದು ಕಡೆ ಸಿಸಿಬಿ ಪೊಲೀಸರು ಬಡ್ಡಿ ದಂಧೆ ಮಟ್ಟಹಾಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಫೈನಾನ್ಸರ್ ಗಳು ಮಾತ್ರ ಪೊಲೀಸರ ಕಣ್ಣಿಗೆ ಮಣ್ಣು ಎರಚಿ ತಮ್ಮ ವ್ಯವಹಾರ ಮುಂದುವರಿಸಿ ಜನರ ಪ್ರಾಣ ಹೀರುತ್ತಿದ್ದಾರೆ.

    ಗೀತಾಬಾಯಿ ಹಾಗೂ ಸುರೇಶ್ ದಂಪತಿ ಮಗನ ಜೊತೆ ವಾಸವಿದ್ದು, ಕೆಲಸ ಮಾಡುತ್ತಿದ್ದರು. ಸುರೇಶ್ ಸ್ವಿಗಿ ಡೆಲಿವರಿ ನೌಕರನಾಗಿ ಕೆಲಸ ಮಾಡುತ್ತಿದ್ದರೆ, ಗೀತಾಬಾಯಿ ಅವರು ಖಾಸಗಿ ಕಂಪನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ವಿಭೂತಿಪುರದ ಫೈನ್ಸಾನಿಯರ್ ಸುಧಾ ಎಂಬವರ ಬಳಿ ಎರಡು ವರ್ಷಗಳ ಹಿಂದೆ 40 ಸಾವಿರ ರೂ. ಸಾಲ ಪಡೆದಿದ್ದರು. ಕೆಲವು ದಿನಗಳನಲ್ಲಿ ಬಡ್ಡಿ ಸಮೇತ ಸಾಲವನ್ನು ತೀರಿಸಿದ್ದರು. ಆದರೂ ಪ್ರತಿ ಬಾರಿ ಸುಧಾ ಕಡೆಯವರು ಹಣ ಕೇಳಿ ಪೀಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಸಹ ಸುಧಾ ಕಡೆಯವರು ಮನೆ ಬಳಿ ಬಂದು ಗೀತಾ ಬಾಯಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದಾಗಿ ಪತಿ ಸುರೇಶ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗೀತಾಬಾಯಿ ಫೈನಾನ್ಸಿಯರ್ ಸುಧಾ ವಿರುದ್ಧ ಡೆತ್‍ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಹೆಚ್‍ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡೆತ್‍ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಹಲ್ಲು ವಾಸನೆ ಬರ್ತಿದೆ ಎಂದು ಹೆತ್ತ ತಾಯಿಯನ್ನೆ ಹೊರ ಹಾಕಿದ ಮಕ್ಕಳು

    ಹಲ್ಲು ವಾಸನೆ ಬರ್ತಿದೆ ಎಂದು ಹೆತ್ತ ತಾಯಿಯನ್ನೆ ಹೊರ ಹಾಕಿದ ಮಕ್ಕಳು

    ಬೆಂಗಳೂರು: ತನ್ನ ತಾಯಿಯ ಹಲ್ಲು ವಾಸನೆ ಬರುತ್ತಿದೆ ಎಂದು ಮಕ್ಕಳು ಮನೆಯಿಂದ ಹೊರಹಾಕಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಶೀಲ(47) ಅವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಉನ್ನತ ಹುದ್ದೆಯಲ್ಲಿ ಕೆಲಸ ಕೂಡ ನಿರ್ವಹಿಸ್ತಿದ್ದಾರೆ. ಆದರೆ ತಾಯಿಗೆ ಹಲ್ಲು ನೋವಿದ್ದ ಕಾರಣ ಖಾಸಗಿ ಆಸ್ಪತ್ರೆ ಹೋಗಿ ಸಮಸ್ಯೆ ತೋರಿಸಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಅವರ ಹಲ್ಲಿನ ಎಲುಬು ಕಟ್ ಮಾಡಿದ್ದಾರೆ. ಇದರಿಂದ ಅವರ ಬಾಯಿ ವಾಸನೆ ಬಂದಿದೆ. ಹಾಗಾಗಿ ಮಕ್ಕಳು ತಾಯಿಯನ್ನು ಹೊರ ಹಾಕಿದ್ದಾರೆ.

    ಶೀಲ ಅವರು ದೇವಸ್ಥಾನ ಕೆಲಸ ಮಾಡುತ್ತಾ 50 ರೂಪಾಯಿಯಲ್ಲಿ ತನ್ನ ಪ್ರತಿ ದಿನದ ಜೀವನ ಸಾಗಿಸುತ್ತಿದ್ದಾರೆ. ಆದರೆ ತನ್ನ ಹಲ್ಲಿನ ಖರ್ಚಿಗಾಗಿ ಮಕ್ಕಳ ಮೊರೆ ಹೋದರೆ ಹೆತ್ತ ತಾಯಿಗೆ ಸಹಾಯ ಮಾಡುವಷ್ಟು ಬುದ್ಧಿ ಅವರಿಗೆ ಬಂದಿಲ್ಲ. ಇದರಿಂದ ನೊಂದ ತಾಯಿ ವನಿತಾ ಸಹಾಯವಾಣಿ ಮೆಟ್ಟಿಲೇರಿದ್ದಾರೆ.

    ಮಕ್ಕಳಿಗೆ ವನಿತಾ ಸಹಾಯವಾಣಿ ಕರೆದು ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ವನಿತ ಸಹಾಯವಾಣಿ ಅವರು ಶೀಲ ಅವರನ್ನು ಮೊದಲು ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯವರು ಶೀಲ ಅವರಿಗೆ ಚಿಕಿತ್ಸೆ ಕೊಡಲು ಸಿದ್ಧವಿದ್ದು, ಅವರ ಜೊತೆ ಆರೈಕೆಗೆ ಒಬ್ಬರು ಇರಬೇಕು ಎಂದಿದ್ದಾರೆ.

    ಮಕ್ಕಳು ತಾಯಿಯ ಬಳಿ ಬಾರದೇ ದೂರ ಇಟ್ಟಿದ್ದಾರೆ. ಮತ್ತೊಂದೆಡೆ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ರು ಅಲ್ಲಿ ಕೂಡ ಅವರಿಗೆ ನೆಲೆ ಸಿಕ್ಕಿಲ್ಲ. ಇದೀಗ ವನಿತಾ ಸಹಾಯವಾಣಿಯ ಕೌನ್ಸಿಲರ್ ಡಾ. ಬಿಂದ್ಯ ಅವರೇ ಇದಕ್ಕೆ ಪರಿಹಾರ ನೀಡಲು ಹೊರಟಿದ್ದಾರೆ.

  • ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಲಕ್ನೋ: ಅಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಕ್ಕೆ ತನ್ನ ಮಗನ ಶವವನ್ನು ತಾಯಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಸೋಮವಾರದಂದು ಬಾಲಕನಿಗೆ ಹೆಚ್ಚು ಜ್ವರ ಬಂದಿದ್ದ ಕಾರಣಕ್ಕೆ ತಂದೆ ತಾಯಿ ಆತನನ್ನು ಶಹಜಹಾನ್‍ಪುರದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ಬಾಲಕನ ಸ್ಥಿತಿ ಗಂಭೀರವಾಗಿದೆ ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ್ದಾರೆ. ಆಗ ಪೋಷಕರು ಬಾಲಕನನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ನೀಡಿ ಎಂದು ಮನವಿ ಮಾಡಿದ್ದಾರೆ.

    ಮನವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ನಿರಾಕರಿಸಿದ್ದು, ಬೇರೆ ವಾಹನ ವ್ಯವಸ್ಥೆ ಮಾಡಿಕೊಂಡು ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಬಳಿ ಹಣವಿಲ್ಲದ ಕಾರಣಕ್ಕೆ ಬಡ ತಂದೆ ತಾಯಿ ಕಂಗಾಲಾಗಿದ್ದಾರೆ. ಬಳಿಕ ಬೇರೆ ವಿಧಿಯಿಲ್ಲದೆ ತಾಯಿಯೇ ಮಗನನ್ನು ಎತ್ತಿಕೊಂಡು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದರು.

    ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದು, ಮಗನ ಶವವನ್ನು ತಾಯಿ ಹೊತ್ತುಕೊಂಡೇ ಮನೆಗೆ ತೆರೆಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ವ್ಯವಸ್ಥೆ ನೀಡಿದ್ದರೆ ತಮ್ಮ ಮಗ ಉಳಿಯುತ್ತಿದ್ದ. ನಾವು ಬಡವರು ಎಂದು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕನ ತಂದೆ, ನಾವು ಸೋಮವಾರ ಬೆಳಗ್ಗೆ ಮಗನನ್ನು ಆಸ್ಪತ್ರಗೆ ಕರೆದೋಯ್ದಿದ್ದೆವು. ಆದರೆ ಅಲ್ಲಿನ ವೈದ್ಯರು ಮಗು ಸ್ಥಿತಿ ಗಂಭೀರವಾಗಿದೆ ಬೇರೆಡೆ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದರು. ಆಗ ನಾವು ಅಂಬುಲೆನ್ಸ್ ವ್ಯವಸ್ಥೆ ನೀಡಲು ಮನವಿ ಮಾಡಿದಾಗ ಸಿಬ್ಬಂದಿ ನಿರಾಕರಿಸಿದರು. ಆಸ್ಪತ್ರೆ ಆವರಣದಲ್ಲಿ ಮೂರು ಅಂಬುಲೆನ್ಸ್ ಇದ್ದರೂ ಕೂಡ ನಮ್ಮ ಮನವಿಯನ್ನು ನಿರ್ಲಕ್ಷಿಸಿದರು ಎಂದು ಕಣ್ಣೀರಿಟ್ಟಿದ್ದಾರೆ.

    ಪೋಷಕರ ಆರೋಪವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಳ್ಳಿಹಾಕಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಲಕ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದಿದ್ದೇವು. ಆದರೆ ಆ ನಂತರ ಪೋಷಕರು ಏನು ಮಾಡಿದರು ಎಂದು ನಮಗೆ ಗೊತ್ತಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.