Tag: mother

  • ಗೋಡೆ ಕುಸಿದು ಮಗು ಸಾವು – ತಂದೆ, ತಾಯಿಗೆ ಗಂಭೀರ ಗಾಯ

    ಗೋಡೆ ಕುಸಿದು ಮಗು ಸಾವು – ತಂದೆ, ತಾಯಿಗೆ ಗಂಭೀರ ಗಾಯ

    ಚಾಮರಾಜನಗರ: ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

    ಚಾಮರಾಜನಗರದ ದೇಶೀಗೌಡನಪುರ ಗ್ರಾಮದ ವೀರಭದ್ರಸ್ವಾಮಿ(4) ಮೃತಪಟ್ಟ ಮಗು. ಭಾರೀ ಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ವೀರಭದ್ರಸ್ವಾಮಿ ಮೃತಪಟ್ಟಿದ್ದಾನೆ. ಅಲ್ಲದೆ ಈ ಘಟನೆಯಲ್ಲಿ ತಂದೆ ಮಲ್ಲೇಶ್ ಮತ್ತು ತಾಯಿ ಚೆನ್ನಮ್ಮ ಅವರಿಗೂ ಗಂಭೀರ ಗಾಯಗಳಾಗಿದೆ.

    ಗಾಯಾಳುಗಳನ್ನು ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸೋಮವಾರ ರಾತ್ರಿ ಚಾಮರಾಜನಗರದಲ್ಲಿ ಧಾರಾಕಾರ ಮಳೆಯಾಗಿದೆ. ಮನೆಯಲ್ಲಿ ಮಲಗಿದ್ದ ವೇಳೆ ದಿಢೀರನೇ ಮನೆಯ ಗೋಡೆ ಕುಸಿದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪಿದ್ದಾನೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ-ತಾಯಿಗೆ ತಮ್ಮ ಮಗು ಮೃತಪಟ್ಟಿರುವ ವಿಷಯವೇ ತಿಳಿದಿಲ್ಲ ಎನ್ನಲಾಗಿದೆ.

    ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸೋಮವಾರ ಸಂಜೆ ವೇಳೆಗೆ ದಿಢೀರ್ ಎಂದು ಭಾರೀ ಮಳೆಯಾಗಿದೆ. ನಗರದ ಹೃದಯಭಾಗವಾದ ಮೆಜೆಸ್ಟಿಕ್ ಸೇರಿದಂತೆ ಮೈಸೂರು ಸರ್ಕಲ್, ಸಂಜಯ್ ನಗರ, ಯಶವಂತಪುರ, ಕೋರಮಂಗಲ, ಹೆಬ್ಬಾಳ, ಚಾಮರಾಜನಗರ ಭಾಗಗಳಲ್ಲಿ ಮಳೆಯಾಗಿದೆ.

  • ಮಕ್ಕಳು, ಸೊಸೆಯರ ಕಿರಿಕಿರಿಗೆ ಬೇಸತ್ತು ತಾಯಿ ಆತ್ಮಹತ್ಯೆ

    ಮಕ್ಕಳು, ಸೊಸೆಯರ ಕಿರಿಕಿರಿಗೆ ಬೇಸತ್ತು ತಾಯಿ ಆತ್ಮಹತ್ಯೆ

    – ವಿಷಯ ತಿಳಿದು ಮನೆಗೆ ಬೀಗ ಹಾಕಿ ಹೊರಗೆ ಹೋದ  ಮಕ್ಕಳು

    ಹುಬ್ಬಳ್ಳಿ: ಮಕ್ಕಳು ಹಾಹೂ ಸೊಸೆಯರ ಕಿರಿಕಿರಿಗೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.

    ನೇಕಾರ ನಗರದ ನಿವಾಸಿ ಸುಶೀಲಮ್ಮ ಗಲಿಕಟ್ಟಿ (60) ಆತ್ಮಹತ್ಯೆ ಶರಣಾದ ಮಹಿಳೆ. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಮಕ್ಕಳು ಬೀಗ ಹಾಕಿ ಮನೆಯಿಂದ ಹೋರ ನಡೆದು ಅಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ: ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

    ಸುಶೀಲಮ್ಮ ಕೆಎಸ್‍ಆರ್ ಟಿಸಿ ನೌಕರರಾಗಿದ್ದು, ಹುಬ್ಬಳ್ಳಿಯ ಹಲವೆಡೆ ಆಸ್ತಿ ಮಾಡಿದ್ದರು. ಆದರೆ ತಾಯಿಯನ್ನು ನೋಡಿಕೊಳ್ಳುವ ವಿಚಾರವಾಗಿ ಮಕ್ಕಳಾದ ಮಂಜುನಾಥ ಹಾಗೂ ರಾಜಪ್ಪ ಪದೇ ಪದೇ ಜಗಳವಾಡುತ್ತಿದ್ದರು. ಇದರಿಂದ ಮನನೊಂದ ಸುಶೀಲಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಸುಶೀಲಮ್ಮ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೆಣ್ಣು ಮಕ್ಕಳು ತಾಯಿ ಮನೆಗೆ ಬಂದು, ಕಣ್ಣೀರು ಹಾಕಿದ್ದಾರೆ. ನಮ್ಮ ತಾಯಿಯ ಸಾವಿಗೆ ಸಹೋದರರು ಹಾಗೂ ಅವರ ಪತ್ನಿಯರೇ ಕಾರಣ. ಅವರಿಗೆ ಆಸ್ತಿ ಬೇಕು ತಾಯಿ ಬೇಡ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ತಾಯಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸುಶೀಲಮ್ಮ ಅವರ ಮೃತ ದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿಯಾದ 16 ಮಕ್ಕಳ ತಾಯಿ

    38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿಯಾದ 16 ಮಕ್ಕಳ ತಾಯಿ

    ಮುಂಬೈ: 16 ಮಕ್ಕಳ ತಾಯಿಯೊಬ್ಬರು ತಮ್ಮ 38ನೇ ವಯಸ್ಸಿನಲ್ಲಿ 20ನೇ ಬಾರಿ ಗರ್ಭಿಣಿ ಆಗಿರುವ ಅಪರೂಪದ ಸಂಗತಿಯೊಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಲಂಕಾಬಾಯಿ ಖರತ್(38) 20ನೇ ಮಗುವಿಗೆ ಜನ್ಮ ನೀಡಲಿರುವ ಮಹಿಳೆ. ಲಂಕಾಬಾಯಿ ಅವರು ಈವರೆಗೂ 16 ಮಕ್ಕಳಿಗೆ ಜನ್ಮ ನೀಡಿದ್ದು, ಮೂರು ಅರ್ಬಾಷನ್ ಆಗಿದೆ. ಈಗ ಅವರು ಮತ್ತೆ 7 ತಿಂಗಳು ಗರ್ಭಿಣಿ ಆಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಅಲ್ಲದೆ ಪ್ರತಿ ಬಾರಿ ಅವರು ಒಂದು ಮಗುವಿಗೆ ಜನ್ಮ ನೀಡುತ್ತಿದ್ದರು. ಹೀಗೆ ಡೆಲಿವರಿ ಆದ ಕೆಲವೇ ದಿನಗಳಲ್ಲಿ ಅಥವಾ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪುತ್ತಿತ್ತು. ಹೀಗೆ 5 ಮಕ್ಕಳು ಮೃತಪಟ್ಟಿವೆ. ಈಗ ಅವರ 11 ಮಕ್ಕಳು ಬದುಕಿದ್ದಾರೆ. ಲಂಕಾಬಾಯಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಗ ಮೂರು ಬಾರಿ ಗರ್ಭಪಾತ ಆಗಿದೆ. 38 ವರ್ಷದಲ್ಲಿ ಅವರು 20ನೇ ಬಾರಿ ಗರ್ಭಿಣಿ ಆಗಿದ್ದಾರೆ ಎಂದು ಬೀಡ್ ಜಿಲ್ಲೆಯ ಸಿವಿಲ್ ಸರ್ಜನ್ ಡಾ. ಅಶೋಕ್ ತೋರಟ್ ತಿಳಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಮತ್ತೊಬ್ಬ ವೈದ್ಯರು, ಅವರು ಗರ್ಭಿಣಿ ಎಂಬ ವಿಷಯ ತಿಳಿದಾಗ ಮೊದಲು ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಗತ್ಯವಿರುವ ಎಲ್ಲ ಪರೀಕ್ಷೆ ನಡೆಸಿದ್ದೇವೆ. ಸದ್ಯ ತಾಯಿ ಹಾಗೂ ಮಗು ಕ್ಷೇಮವಾಗಿದ್ದಾರೆ. ಇದು ಆಸ್ಪತ್ರೆಯಲ್ಲಿ ಮಹಿಳೆಯ ಮೊದಲ ಹೆರಿಗೆ ಆಗಿದ್ದು, ಈ ಹಿಂದೆ ಎಲ್ಲ ಹೆರಿಗೆ ಮನೆಯಲ್ಲೇ ನಡೆದಿತ್ತು. ಆರೋಗ್ಯದ ಅಪಾಯವನ್ನು ತಪ್ಪಿಸಲು ಎರಡು ತಿಂಗಳಲ್ಲಿ ನಿಗದಿಯಾದ ಹೆರಿಗೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.

  • ಬಟ್ಟೆ ಒಣಹಾಕುವಾಗ ವಿದ್ಯುತ್ ಶಾಕ್-ಒಂದೇ ಕುಟುಂಬದ ಮೂವರು ಸಾವು

    ಬಟ್ಟೆ ಒಣಹಾಕುವಾಗ ವಿದ್ಯುತ್ ಶಾಕ್-ಒಂದೇ ಕುಟುಂಬದ ಮೂವರು ಸಾವು

    ಹಾಸನ: ಬಟ್ಟೆ ಒಣಹಾಕುವಾಗ ವಿದ್ಯುತ್ ಶಾಕ್ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಹಾಸನದಲ್ಲಿ ನಡೆದಿದೆ.

    ಚನ್ನರಾಯಪಟ್ಟಣ ತಾಲೂಕಿನ ಅಗಸರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ತಾಯಿ ಭಾಗ್ಯಮ್ಮ(49) ಮತ್ತು ಮಕ್ಕಳಾದ ದಾಕ್ಷಾಯಿಣಿ(30), ದಯಾನಂದ(34) ಮೃತ ದುರ್ದೈವಿಗಳು.

    ಮನೆ ಬಳಿ ಇರುವ ವಿದ್ಯುತ್ ಕಂಬಕ್ಕೆ ಬಟ್ಟೆ ಒಣಹಾಕಲು ತಂತಿ ಕಟ್ಟಲಾಗಿತ್ತು. ಬೆಳ್ಳಂಬೆಳಗ್ಗೆ ಈ ತಂತಿಯ ಮೇಲೆ ಬಟ್ಟೆ ಒಣಹಾಕಲು ದಾಕ್ಷಾಯಿಣಿ ಹೋಗಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ತಂತಿಗೆ ಕರೆಂಟ್ ಹರಿದು, ದಾಕ್ಷಾಯಿಣಿಗೆ ಶಾಕ್ ಹೊಡೆದಿದೆ.

    ಈ ವೇಳೆ ತಂಗಿ ಒದ್ದಾಡುತ್ತಿದ್ದುದನ್ನು ಕಂಡ ದಯಾನಂದ ಆಕೆಯನ್ನು ಹಿಡಿಯಲು ಹೋದಾಗ ಆತನಿಗೂ ಶಾಕ್ ಹೊಡೆದಿದೆ. ಬಳಿಕ ತಾಯಿ ಮಕ್ಕಳನ್ನು ಶಾಕ್‍ಯಿಂದ ತಪ್ಪಿಸಲು ಹೋಗಿ ಅವರಿಗೂ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • 16 ತಿಂಗಳ ಮಗನನ್ನು ಉಸಿರುಗಟ್ಟಿಸಿ ಕೊಂದ ಪಾಪಿ ತಾಯಿ

    16 ತಿಂಗಳ ಮಗನನ್ನು ಉಸಿರುಗಟ್ಟಿಸಿ ಕೊಂದ ಪಾಪಿ ತಾಯಿ

    ಕೊಪ್ಪಳ: ಹೆತ್ತ ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗನನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೊಪ್ಪಳದ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ.

    ಅಭಿನವ ಕೊಲೆ ಆದ ಮಗ. ಸೋಮವಾರ ಸಂಜೆ ಸೋಮನಾಳ ಗ್ರಾಮದ ಪ್ರತಿಮಾ ತನ್ನ 16 ತಿಂಗಳ ಮಗ ಅಭಿನವನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಗುವಿನ ತಂದೆ ಶಶಿಧರ್ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಶಿಧರ್ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಯಿ ಪ್ರತಿಮಾಳನ್ನು ವಶಕ್ಕೆ ಪಡೆದಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಸುಮಾರು 5-6 ತಿಂಗಳಿನಿಂದ ದುಡಿಯದೆ ಮನೆಯಲ್ಲಿಯೇ ಇದ್ದುದರಿಂದ ನನ್ನ ಪತ್ನಿ ನನಗೆ ಪ್ರತಿದಿನ ನೀನು ದುಡಿಯದೇ ಮನೆಯಲ್ಲಿ ಕುಳಿತರೆ ನನ್ನನ್ನು ಮತ್ತು ನನ್ನ ಮಗನನ್ನು ಹೇಗೆ ಸಾಕುತ್ತೀಯಾ. ನೀನು ದುಡಿಯದಿದ್ದರೆ ಮಗನ ಮುಂದಿನ ಭವಿಷ್ಯ ಏನು. ನೀನು ಈ ರೀತಿ ದುಡಿಯದೇ ಇದ್ದರೆ ಮಗನನ್ನು ಕೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಪ್ರತಿದಿನ ಹೇಳುತ್ತಿದ್ದಳು. ಈ ವಿಷಯ ನಮ್ಮ ಮನೆಯಲ್ಲಿ ನನ್ನ ಅಣ್ಣಂದಿರಿಗೆ ಮತ್ತು ನಮ್ಮ ತಾಯಿಗೆ ತಿಳಿಸಿದಾಗ ಅವರು ಸಹ ಆಕೆಗೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿದ್ದರು.

    ಸೋಮವಾರ ನಾನು ಕಾರಟಗಿಗೆ ಬಂದು ನವಲಿ ರಸ್ತೆಯಲ್ಲಿರುವ ಶ್ರೀ ಚನ್ನಬಸಪ್ಪ ಅವರ ಪೆಟ್ರೋಲ್ ಬಂಕ್‍ನಲ್ಲಿ ಕೆಲಸಕ್ಕಾಗಿ ಕೇಳಿದ್ದೇನು. ಅವರು ಇಂದು ಬೆಳಗ್ಗೆ 6 ಗಂಟೆಗೆ ಬರಲು ಹೇಳಿದ್ದರು. ನಾನು ಕೆಲಸಕ್ಕೆ ಸೇರಿದ ವಿಷಯವನ್ನು ಹೇಳದೇ ಸೋಮವಾರ ಬೆಳಗ್ಗೆ 5 ಗಂಟೆಗೆ ಮನೆ ಬಿಟ್ಟು ಕಾರಟಗಿಯ ಪೆಟ್ರೋಲ್ ಬಂಕ್‍ನಲ್ಲಿ ಕೆಲಸಕ್ಕೆ ಬಂದೆ. ನಂತರ ಸಂಜೆ ನನ್ನ ತಾಯಿ ಪಾರ್ವತಮ್ಮ ನನಗೆ ಫೋನ್ ಮಾಡಿ ಮೇಲಿನ ರೂಮಿನಲ್ಲಿ ನಿನ್ನ ಪತ್ನಿ ಬೆಳಗ್ಗೆಯಿಂದ ಒಳಗಡೆಯಿಂದ ಲಾಕ್ ಮಾಡಿಕೊಂಡಿದ್ದಾಳೆ. ಎಷ್ಟು ಬಡಿದರೂ ತೆಗೆಯುತ್ತಿಲ್ಲ. ನೀನು ಕೂಡಲೇ ಬಾ ಎಂದು ತಿಳಿಸಿದರು. ಬಳಿಕ ನಾನು ಮನೆಗೆ ಹೋಗಿ ಬಾಗಿಲು ಬಡಿದೆ. ಆಗ ಪತ್ನಿ ಬಾಗಿಲು ತೆರೆದಿದ್ದಾಳೆ. ಈ ವೇಳೆ ಮಗು ಮೃತಪಟ್ಟಿತ್ತು. ಅಲ್ಲದೆ ಮಗುವಿನ ಎಡಕಿವಿಯ ಹತ್ತಿರ ತರಚಿದ ಗಾಯ, ಮೇಲಿನ ತುಟಿಯಲ್ಲಿ ಸ್ವಲ್ಪ ರಕ್ತ ಬಂದಂತೆ ಕಂಡು ಬಂದಿತ್ತು.

    ಈ ಬಗ್ಗೆ ನನ್ನ ಪತ್ನಿಯನ್ನು ವಿಚಾರಿಸಿದಾಗ ನೀಡು ದುಡಿಯದೇ ಇದ್ದುದ್ದರಿಂದ ನಾನೇ ಮಗುವಿನ ಬಾಯಿ ಹಾಗೂ ಮೂಗನ್ನು ಕೈಯಿಂದ ಒತ್ತಿ ಉಸಿರುಗಟ್ಟಿಸಿ ಸಾಯಿಸಿದ್ದೇನೆ ಎಂದು ಹೇಳಿದ್ದಾಳೆ. ನನ್ನ ಮಗ ಅಭಿನವನನ್ನು ಕೊಲೆ ಮಾಡಿದ ನನ್ನ ಪತ್ನಿಯ ವಿರುದ್ಧ ಕಾನೂನು ಕ್ರಮಕೈಕೊಳ್ಳಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  • ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    ಪಬ್‍ಜಿ ಕೊಲೆ ಪ್ರಕರಣ – ತರಕಾರಿ ಕತ್ತರಿಸಿದಂತೆ ತಂದೆಯ ರುಂಡ, ಕಾಲು ಕತ್ತರಿಸಿದ ಮಗ

    – ಯುವಕನ ವಿಕೃತ ಮನಸ್ಥಿತಿ ಕಂಡು ದಂಗಾದ ಸ್ಥಳೀಯರು
    – ರಕ್ತ ಬೇಕೆಂದು ಪಕ್ಕದ ನಿವಾಸಿಗಳ ಬಾಗಿಲು ಬಡಿದಿದ್ದ ಯುವಕ
    – ಇಳಿಗೆ ಮಣೆಯಿಂದ ತಂದೆಯ ದೇಹವನ್ನು ಕತ್ತರಿಸಿ ಛಿದ್ರಗೊಳಿಸಿದ

    ಬೆಳಗಾವಿ: ಯವಕನೋರ್ವ ಪಬ್‍ಜಿ ಆಡಲು ಇಂಟರ್‌ನೆಟ್ ಪ್ಯಾಕ್ ಹಾಕಿಸಲು ಹಣ ಕೊಡದ ತಂದೆಯನ್ನೇ ಕೊಲೆ ಮಾಡಿರುವ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಿದೆ. ಆರೋಪಿಯ ವಿಚಿತ್ರ ವರ್ತನೆ ಕಂಡು ಸ್ವತಃ ಪೊಲೀಸರೇ ದಂಗಾಗಿದ್ದಾರೆ.

    ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಈ ಭಯಾನಕ ಘಟನೆ ನಡೆದಿದೆ. ಕಾಕತಿಯ ನಿವಾಸಿ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ.

    ಕಳದೆ ಮೂರು ದಿನಗಳ ಹಿಂದೆ ಏಕಾಏಕಿ ರಾತ್ರಿಯಲ್ಲಿ ಪಕ್ಕದ ಮನೆಗಳ ಬಾಗಿಲು ಬಡಿದು ನನಗೆ ರಕ್ತ ಬೇಕು ರಕ್ತ ಎಂದು ರಘುವೀರ್ ವಿಚಿತ್ರವಾಗಿ ವರ್ತಿಸಿದ ಘಟನೆ ಬಗ್ಗೆ ಸ್ಥಳೀಯರು ಬಾಯಿಬಿಟ್ಟಿದ್ದಾರೆ. ರಘುವೀರ್ ಈ ರೀತಿ ಕೂಗುತ್ತ ಗಲಾಟೆ ಮಾಡಿದಾಗ ಯಾರು ಬಾಗಿಲು ತೆರೆಯಲಿಲ್ಲ. ಆಗ ಮನೆಯೊಂದರ ಕಿಟಕಿಯನ್ನು ಕೈಯಿಂದ ಒಡೆದು ಆತ ಗಲಾಟೆ ಮಾಡಿದ್ದನು. ಈ ಘಟನೆಯಲ್ಲಿ ಆರೋಪಿ ಕೈಗೆ ಬಲವಾದ ಏಟು ಬಿದ್ದು, ಕೈ ಕೆಲಭಾಗ ಸೀಳಿ ಹೋಗಿತ್ತು. ಮರುದಿನ ಬೆಳಗ್ಗೆ ಅಕ್ಕಪಕ್ಕದ ಮನೆಯವರು ಸೇರಿ ಯುವಕನ ವಿರುದ್ಧ ಕಾಕತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ತಂದೆ ಶಂಕ್ರಪ್ಪ ಜೊತೆ ರಘುವೀರ್ ಪೊಲೀಸ್ ಠಾಣೆಗೆ ಬರುತ್ತಿದ್ದಂತೆ ಎಲ್ಲರನ್ನು ದೂಡಿ ಓಡಿಹೋಗಿದ್ದ. ನಂತರ ಸಂಬಂಧಿಗಳು, ತಂದೆ ತಾಯಿ ಹೇಗೋ ಆತನನ್ನು ಸಮಾಧಾನ ಮಾಡಿ ಭಾನುವಾರ ಠಾಣೆಗೆ ಕರೆತಂದಿದ್ದರು. ಆಗ ಪೊಲೀಸರು ಆತನಿಗೆ ಬುದ್ಧಿವಾದ ಹೇಳಿ ಮರಳಿ ಕಳುಹಿಸಿದ್ದರು.

    ಮನೆಗೆ ಬಂದ ನಂತರ ಆರೋಪಿ ಮೊಬೈಲ್ ಹಿಡಿದು ಮತ್ತೆ ಗೇಮ್ ಆಡಲು ಆರಂಭಿಸಿದ್ದ. ಆಗ ಗಾಯದ ಕೈಗೆ ಕಟ್ಟಿದ ಬ್ಯಾಂಡೇಜ್ ಸರಿ ಮಾಡಲು ತಂದೆ-ತಾಯಿ ಹೋದಾಗ ಅವರನ್ನು ಆತ ಹೊಡೆಯಲಾರಂಭಿಸಿದ್ದಾನೆ. ಕಳೆದ ರಾತ್ರಿಯಿಂದ ಹಾಲ್‍ನಲ್ಲಿ ಮಲಗಿದ್ದ ರಘುವೀರ್ ಏನೇನೊ ಬಡಬಡಿಸುತ್ತಿದ್ದ. ಆಗ ಸರಿ ಸುಮಾರು ರಾತ್ರಿ 2 ಗಂಟೆ ಸಮಯವಾಗಿತ್ತು. ಆಗ ತಂದೆ-ತಾಯಿ ಮಗನ ಕೈಯಿಂದ ರಕ್ತ ಸುರಿಯುತ್ತಿರುವುದನ್ನು ನೋಡಿದ್ದಾರೆ. ಆ ರಕ್ತದಲ್ಲಿಯೇ ಮಗ ಆಟವಾಡುತ್ತಿರುವುದನ್ನು ಕಂಡ ತಂದೆ-ತಾಯಿ ಸುಮಾರು 3 ಗಂಟೆಯವರೆಗೆ ಆತನಿಗೆ ಬುದ್ಧಿ ಹೇಳಿದ್ದಾರೆ. ಈ ಕಾರಣಕ್ಕೆ 3:30ರ ಹೊತ್ತಿಗೆ ತಂದೆ-ತಾಯಿಯ ಜೊತೆ ಆರೋಪಿ ಜಗಳ ಆರಂಭಿಸಿದ್ದಾನೆ. 4 ಗಂಟೆ ಸುಮಾರಿಗೆ ತಾಯಿಯನ್ನು ಕೊಠಡಿಗೆ ತಳ್ಳಿ ಲಾಕ್ ಮಾಡಿ, 4:30ರ ವೇಳೆಗೆ ತಂದೆಯ ಮೇಲೆ ಎಗರಿ, ಕೈಗೆ ಬ್ಯಾಂಡೇಜ್ ಕಟ್ಟಿದ ದಾರದಿಂದಲೇ ತಂದೆಯ ಕುತ್ತಿಗೆಗೆ ಸುತ್ತಿ ಜೋರಾಗಿ ಬಿಗಿದು ಕೊಲೆಗೆ ಯತ್ನಿಸಿದ್ದಾನೆ.

    ತಂದೆ ಜೋರಾಗಿ ಕೂಗಾಡಿದಾಗ ಕೊಠಡಿ ಒಳಗಿಂದ ತಾಯಿ ಕೂಡ ಕಾಪಾಡಿ ಎಂದು ಜೋರಾಗಿ ಕಿರುಚಿದ್ದಾರೆ. ಈ ವೇಳೆ ಅಕ್ಕಪಕ್ಕದ ಮನೆಯವರು ಮನೆಯ ಬಾಗಿಲು ಒಡೆದು ಒಳನುಗ್ಗಲು ಮುಂದಾಗಿದ್ದರು. ಆಗ ಕೆಲವರು ಕಿಟಕಿಯಲ್ಲಿ ಏನಾಗುತ್ತಿದೆ ಎಂದು ನೋಡಲು ಹೋಗಿ ರಘುವೀರ್ ನ ವಿಕೃತಿ ನೋಡಿ ಭಯಗೊಂಡಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿರುವುದನ್ನು ನೋಡಿ ಹೆದರಿದ್ದಾರೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನ ಮಾಡಿ, ನಂತರ ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ.

    ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಕೃತ್ಯ ನೋಡಿ ದಂಗಾಗಿ ಹೋಗಿದ್ದಾರೆ. ಬಾಗಿಲು ಒದ್ದು ರಘುವಿರ್ ನನ್ನು ಹಿಡಿಯಲು ಹರಸಾಹಸ ಮಾಡಿದ್ದಾರೆ. ಆಗ ಕೈಯಲ್ಲಿ ಇಳಿಗೆ ಮಣೆ ಹಿಡಿದು ಹುಚ್ಚುಚ್ಚಾಗಿ ಮಾತನಾಡುತ್ತಿದ್ದ ಆರೋಪಿಯನ್ನು ಕಂಡು ನಮ್ಮ ಮೇಲೆಯೇ ಹಲ್ಲೆ ಮಾಡುತ್ತಾನೆ ಎಂದು ಯೋಚಿಸಿದ ಪೊಲೀಸರು, ಒಂದು ಬಟ್ಟೆಯನ್ನು ಅವನ ಮುಖದ ಮೇಲೆ ಎಸೆದು, ಬಳಿಕ ಎಲ್ಲರೂ ಸೇರಿ ಆತನನ್ನು ಹಿಡಿದಿದ್ದಾರೆ. ಸರಿ ಸುಮಾರು ಬೆಳಗ್ಗಿನ ಜಾವ 5 ಗಂಟೆಯ ವೇಳೆ ಪೊಲೀಸರು ಯಶಸ್ವಿಯಾಗಿ ಆರೋಪಿಯನ್ನು ಬಂಧಿಸಿದ್ದಾರೆ.

  • ಡಿಕೆಶಿ ತಾಯಿ ಗೌರಮ್ಮಗೆ ಧೈರ್ಯ ತುಂಬಿದ ನಂಜಾವಧೂತ ಸ್ವಾಮೀಜಿ

    ಡಿಕೆಶಿ ತಾಯಿ ಗೌರಮ್ಮಗೆ ಧೈರ್ಯ ತುಂಬಿದ ನಂಜಾವಧೂತ ಸ್ವಾಮೀಜಿ

    ರಾಮನಗರ: ಇಡಿ ಕಸ್ಟಡಿಯಲ್ಲಿರುವ ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೆ ನಂಜಾವಧೂತ ಸ್ವಾಮೀಜಿಗಳು ಧೈರ್ಯ  ತುಂಬಿದ್ದಾರೆ.

    ರಾಮನಗರದ ಕೋಡಿಹಳ್ಳಿಯ ಡಿಕೆ ಸುರೇಶ್ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿಗಳು ಗೌರಮ್ಮ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ನಂತರ ಡಿಕೆಶಿ ಬಂಧನದಿಂದ ನೋವಾಗಿದೆ. ಅವರು ಎಲ್ಲ ಸಮಸ್ಯೆಗಳಿಂದ ಮುಕ್ತರಾಗಿ ಬರುತ್ತಾರೆ. ಎದೆಗುಂದಬೇಡಿ ಎಂದು ಧೈರ್ಯದ ಮಾತುಗಳನ್ನು ಹೇಳಿದ್ದಾರೆ.

    ಕನಕಪುರ ಶ್ರೀ ದೇಗುಲ ಮಠದ ನಿರ್ವಾಣ ಮಹಾಸ್ವಾಮಿ ಮಾತನಾಡಿ, ಡಿಕೆಶಿ ಬಂಧನ ಸುದ್ದಿ ಮನಸ್ಸಿಗೆ ಬಹಳ ನೋವು ತಂದಿದೆ. ಕಾಂಗ್ರೆಸ್ಸಿನಲ್ಲಿ ಏನೇ ಕೆಲಸ ವಹಿಸಿದ್ದರೂ ಡಿಕೆಶಿ ದಕ್ಷತೆಯಿಂದ ಮಾಡುತ್ತಿದ್ದರು. ವಿನಾಕಾರಣದಿಂದ ಇಡಿ ಡಿಕೆಶಿಯನ್ನು ಬಂಧಿಸಿದೆ. ಡಿಕೆಶಿ, ಸಹೋದರ ಸುರೇಶ್, ತಾಯಿ ಗೌರಮ್ಮ ತುಂಬಾ ದುಃಖ ಪಡುತ್ತಿದ್ದಾರೆ. ಪ್ರಾರ್ಥನೆ ಮೂಲಕ ಡಿಕೆಶಿ ಬಿಡುಗಡೆಗೆ ಶುಭ ಕೋರಿದ್ದೇವೆ. ಆದಷ್ಟು ಬೇಗ ಬಿಡುಗಡೆಯಾಗಲಿ ಅನ್ನೋದು ನಮ್ಮ ಅಪೇಕ್ಷೆಯಾಗಿದೆ ಎಂದರು.

    ಡಿಕೆಶಿಯವರ ಬಂಧನದಿಂದ ಮಠದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಅವರು ಬಂದ ಮುಕ್ತರಾಗಿ ಶೀಘ್ರವಾಗಿ ಬರಲಿ. ರಾಜಕಾರಣಿಗಳು ಯಾರೂ ದುಡ್ಡು ಮಾಡದೇ ಇರುವವರಲ್ಲ. ಇವರು ಸ್ವಲ್ಪ ಸಂಪಾದನೆ ಜಾಸ್ತಿ ಮಾಡಿದರು ಅನ್ನಿಸುತ್ತಿದೆ. ಅದಕ್ಕೆ ಈ ರೀತಿಯಾಗಿದೆ. ಪಕ್ಷದಿಂದ ನಾಯಕರ ಕಾರ್ಯಕ್ರಮಗಳಿಗೆ ಯಾರೂ ಹಣ ನೀಡಲ್ಲ. ಪಕ್ಷದ ಕಾರ್ಯಕ್ರಮಗಳಿಗೆ ಹಣವನ್ನ ನಾಯಕರೇ ಹೊಂದಿಸಬೇಕು. ಡಿಕೆಶಿ ಬಂಧನದಿಂದ ಸಾಕಷ್ಟು ಬೇಸರವಾಗಿದೆ, ಅವರು ಬಂಧಮುಕ್ತರಾಗಿ ಬರಲಿ. ದೇಗುಲ, ಮಠದ ಜೊತೆ ಡಿಕೆಶಿ ಅವಿನಭಾವ ಸಂಬಂಧ ಹೊಂದಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ನಾಲ್ಕು ದಿನಗಳ ವಿಚಾರಣೆಯ ನಂತರ ಮಂಗಳವಾರ ರಾತ್ರಿ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದೆ. ನಂತರ ದೆಹಲಿಯ ಆರ್‍ಎಂಎಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆ ನಂತರ ಬುಧವಾರ ಕೋರ್ಟ್ ಗೆ ಹಾಜರು ಪಡಿಸಿದ್ದು, 9 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು. ಸದ್ಯ ಇಡಿ ಅಧಿಕಾರಿಗಳಿಂದ ಡಿಕೆಶಿ ಬಂಧನವನ್ನು ಕಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

  • ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    ಚೈನ್ ಕಳ್ಳರನ್ನು ಹಿಡಿದು ಥಳಿಸಿದ ಅಮ್ಮ ಮಗಳು: ವಿಡಿಯೋ

    ನವದೆಹಲಿ: ತಮ್ಮ ಬಳಿ ಚೈನ್ ಕಿತ್ತುಕೊಂಡು ಹೋಗಲು ಬಂದ ಇಬ್ಬರು ಕಳ್ಳರನ್ನು ಅಮ್ಮ ಮಗಳ ಹಿಡಿದು ಥಳಿಸಿರುವ ಘಟನೆ ಪಶ್ಚಿಮ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ನಡೆದಿದೆ.

    ಈ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಂಗ್ಲೋಯಿ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದ ಅಮ್ಮ ಮತ್ತು ಮಗಳ ಮುಂದೆ ಬೈಕಿನಲ್ಲಿ ಬಂದ ಇಬ್ಬರು ಅಮ್ಮನ ಕೊರಳಲ್ಲಿ ಇದ್ದ ಸರ ಕಸಿದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆಗ ಅಮ್ಮ ಮಗಳು ಇಬ್ಬರು ಸೇರಿ ಕಳ್ಳನ್ನು ಹಿಡಿದು ಥಳಿಸುವ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಈ ವಿಡಿಯೋದಲ್ಲಿ ರಸ್ತೆ ದಾಟುತ್ತಿದ್ದ ಅಮ್ಮ ಮಗಳ ಮುಂದೆ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಸರವನ್ನು ಕಿತ್ತುಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ. ತಕ್ಷಣ ಎಚ್ಚೆತ್ತುಕೊಂಡ ಅಮ್ಮ ಮಗಳು ಹಿಂಬದಿಯಲ್ಲಿ ಕುಳಿತ್ತಿದ್ದ ಕಳ್ಳನನ್ನು ಹಿಡಿದುಕೊಂಡು ಇಬ್ಬರು ಕಳ್ಳರನ್ನು ಬೈಕಿನ ಸಮೇತ ಕೆಳಗೆ ಬೀಳಿಸುತ್ತಾರೆ. ಇದರಲ್ಲಿ ಒಬ್ಬ ತಪ್ಪಿಸಿಕೊಂಡು ಹೊಗುತ್ತಾನೆ ಆದರೆ ಒಬ್ಬನನ್ನು ಬಿಗಿಯಾಗಿ ಹಿಡಿದುಕೊಂಡ ಅಮ್ಮ ಮಗಳು ಸ್ಥಳೀಯರ ಸಹಾಯದಿಂದ ಕಳ್ಳನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಸಿಸಿಟಿಯಲ್ಲಿ ಸೆರೆಯಾಗಿದೆ.

    ಚೈನ್ ಕಳ್ಳನನ್ನು ಹಿಡಿದು ಥಳಿಸಿದ ಅಮ್ಮ ಮಗಳು ಮತ್ತು ಸ್ಥಳೀಯರು ನಂತರ ಅವನನ್ನು ಪೊಲೀಸರುಗೆ ಒಪ್ಪಿಸಿದ್ದಾರೆ. ಒಬ್ಬನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿರುವ ದೆಹಲಿ ಪೊಲೀಸರು ತಪ್ಪಿಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಅರೋಪಿಗಳನ್ನು ಅಬ್ದುಲ್ ಶಂಶಾದ್ ಮತ್ತು ವಿಕಾಸ್ ಜೈನ್ ಎಂದು ಗುರುತಿಸಲಾಗಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸರು, ತನಿಖೆಯಲ್ಲಿ ಈ ಇಬ್ಬರು ಆರೋಪಿಗಳು ತುಂಬಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಇವರು ಎರಡು ಚಿನ್ನದ ಚೈನ್ ಮತ್ತು ಮೂರು ಬೈಕ್‍ಗಳು ಎರಡು ಮೊಬೈಲ್‍ಗಳನ್ನು ಕಳವು ಮಾಡಿದ್ದರು ಎಂದು ಹೇಳಿದ್ದಾರೆ.

  • ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಗು

    ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಮಗು

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಾಜಕಾಲುವೆಯಲ್ಲಿ 5 ವರ್ಷದ ಮಗುವೊಂದು ಕೊಚ್ಚಿಹೋಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಗೋರಿಪಾಳ್ಯದ ಪಾದರಾಯನಪುರದ ಗುಡ್ಡದಹಳ್ಳಿ ಬಳಿ ಈ ಘಟನೆ ನಡೆದಿದೆ. ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರನಾಗಿರೊ ಮೊಹಮ್ಮದ್ ಝೈನ್ (5) ಕೊಚ್ಚಿ ಹೋಗಿದ್ದಾನೆ ಎಂದು ಹೇಳಲಾಗಿದೆ.

    ಮಗುವಿನ ತಂದೆ ನಾಲ್ಕು ತಿಂಗಳ ಹಿಂದೆ ತೀರಿಹೋಗಿದ್ದು, ಕಳೆದ ಶುಕ್ರವಾರ ಏರಿಯಾದ ಹುಡುಗರ ಜೊತೆ ಕಸ ಹಾಕಲು ಬಂದಿದ್ದ ಮಗು ಆಯತಪ್ಪಿ ಮೋರಿಯೊಳಗೆ ಬಿದ್ದಿರುವುದಾಗಿ ಮಗು ತಾಯಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಜೆಜೆ ನಗರ ಪೊಲೀಸ್ ಠಾಣಾ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಗುಡ್ಡದಹಳ್ಳಿಯ ದೊಡ್ಡ ಮೋರಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

  • ರಾತ್ರಿ 10 ಗಂಟೆವರೆಗೆ ಬರಬಹುದೆಂದು ಕಾದೆವು, ಬಂದಿಲ್ಲ- ಡಿಕೆಶಿ ತಾಯಿ ಕಣ್ಣೀರು

    ರಾತ್ರಿ 10 ಗಂಟೆವರೆಗೆ ಬರಬಹುದೆಂದು ಕಾದೆವು, ಬಂದಿಲ್ಲ- ಡಿಕೆಶಿ ತಾಯಿ ಕಣ್ಣೀರು

    -ನೋವಾಗುತ್ತೆ, ಏನೂ ಮಾಡಲು ಸಾಧ್ಯವಿಲ್ಲ

    ರಾಮನಗರ: ಗಣೇಶ ಹಬ್ಬದ ದಿನವೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಕರೆದಿರುವುದು ಕುಟುಂಬಸ್ಥರನ್ನು ಬೇಸರಕ್ಕೀಡು ಮಾಡಿದೆ.

    ಈ ಬಗ್ಗೆ ಮಾತನಾಡಿದ ಡಿಕೆಶಿ ತಾಯಿ, ಹಬ್ಬಕ್ಕಿಂತ ಹೆಚ್ಚಾಗಿ ಇಂದು ಆತನ ತಂದೆ ಹಾಗೂ ಅಜ್ಜಿ-ತಾತನಿಗೆ ಪೂಜೆ ಮಾಡುತ್ತಿದ್ದರು. ಆದರೆ ಅದಕ್ಕು ಕೂಡ ಒಂದು ಅವಕಾಶ ಕೊಟ್ಟಿಲ್ಲ. ಏನು ಹೇಳಿ ಏನ್ ಪ್ರಯೋಜನ. ಬಾಯಿಗೆ ಬಂದಂತೆ ಮಾತಾಡಬಹುದು. ಆದರೆ ಅದರಿಂದ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸುವ ಮೂಲಕ ಕಣ್ಣೀರು ಹಾಕಿದ್ದಾರೆ.

    ಯಜಮಾನರಿಗೆ ಎಡೆ ಇಡಲು ಇಬ್ಬರು ಮಕ್ಕಳು ಕೂಡ ಇಲ್ಲ. ಬಹಳ ದುಃಖವಾಗುತ್ತದೆ. ನಿನ್ನೆ ರಾತ್ರಿ 10 ಗಂಟೆವರೆಗೆ ಬರಬಹುದು ಎಂದು ಕಾದೆವು. ಬರೋದಕ್ಕೆ ಸಾಧ್ಯವಿಲ್ಲ ಅಂತೆ. ಹೀಗಾಗಿ ನನ್ನ ಮೊಮ್ಮಗ ಬರುತ್ತಾನೆ. ಆತ ಬಂದ ಬಳಿಕ ನಾವು ಪೂಜೆ ಮಾಡುತ್ತೇವೆ ಎಂದರು.

    ಪ್ರತೀ ವರ್ಷ ಈ ಹಬ್ಬದಲ್ಲಿ ಎಲ್ಲರೂ ಸೇರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಇನ್ನ ಇಬ್ಬರು ಮಕ್ಕಳು ಕೂಡ ಹಬ್ಬ ಆಚರಿಸಲು ಇಲ್ಲ. ಏನು ಮಾಡಲೂ ಸಾಧ್ಯವಿಲ್ಲ. ಬಹಳ ನೋವಾಗುತ್ತದೆ ಎಂದು ಹೇಳಿದರು.

    ಇತ್ತ ಇಡಿ ವಿಚಾರಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ತಂದೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದರು. ನನ್ನ ತಂದೆಗೆ ಎಡೆ ಇಡಲು ಕೂಡ ಬಿಟ್ಟಿಲ್ಲ. ಪರವಾಗಿಲ್ಲ ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.