Tag: mother

  • ತಾಯಿ-ಮಗಳು ಸೇರಿ ನಾಲ್ವರು ಕೆರೆಯಲ್ಲಿ ಮುಳುಗಿ ಸಾವು

    ತಾಯಿ-ಮಗಳು ಸೇರಿ ನಾಲ್ವರು ಕೆರೆಯಲ್ಲಿ ಮುಳುಗಿ ಸಾವು

    ರಾಮನಗರ: ತಾಯಿ, ಮಗಳು ಹಾಗೂ ಪಕ್ಕದ ಮನೆಯ ಇಬ್ಬರು ಬಾಲಕಿಯರು ಸೇರಿ ಒಟ್ಟು ನಾಲ್ವರು ಕೆರೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ರಾಮನಗರದಲ್ಲಿ ನಡೆದಿದೆ.

    ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರದ ರಾಮಯ್ಯನ ಕೆರೆಯಲ್ಲಿ ಈ ಘಟನೆ ನಡೆದಿದೆ. ವಿರೂಪಾಕ್ಷಿಪುರದ ಗಾಯಿತ್ರಿ (35) ಮಗಳು ಪೂರ್ಣಿಮಾ (10), ಪಕ್ಕದ ಮನೆಯವರಾದ ಅನು (14) ಹಾಗೂ ನಮ್ರತಾ (10) ಮೃತ ದುರ್ದೈವಿಗಳು.

    ವಿರೂಪಾಕ್ಷಿಪುರದ ರಾಮಯ್ಯನಕೆರೆಗೆ ಬಟ್ಟೆ ತೊಳೆಯಲು ಗಾಯಿತ್ರಿ ತಮ್ಮ ಮಗಳ ಜೊತೆ ತೆರಳಿದ್ದರು. ಈ ವೇಳೆ ಪಕ್ಕದ ಮನೆಯ ಮಕ್ಕಳು ಸಹ ಬಂದಿದ್ರು. ಬಟ್ಟೆ ತೊಳೆಯುತ್ತಿದ್ದ ಸಂದರ್ಭದಲ್ಲಿ ಅನು ಹಾಗೂ ನಮ್ರತಾ ಆಟವಾಡುತ್ತಾ ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ರಕ್ಷಿಸಲು ಮುಂದಾದ ಪೂರ್ಣಿಮಾ ಹಾಗೂ ಗಾಯಿತ್ರಿ ಸಹ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಸದ್ಯ ನಾಲ್ವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದ್ದು ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

    ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿಯಾಗಿರುವ ಲಕ್ಷ್ಮಿ ಪತ್ತಾರ ಎಂಬವರೇ ಬಾಣಂತಿ. ಕಳೆದ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸಿ, ಕೆರೂರಿನ ಎರಡು ಖಾಸಗಿ ಆಸ್ಪತ್ರೆಗೆ ತೆರಳಿದ್ರು. ಆದ್ರೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದ ಕಾರಣ ಲಕ್ಷ್ಮಿ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಬುಧವಾರ ರಾತ್ರಿಯೇ ಲಕ್ಷ್ಮಿ ಅವರ ಹೊಟ್ಟೆಯಲ್ಲಿ ಮಗು ಸಾವನ್ನಪ್ಪಿದ್ರೂ, ತಲೆಕೆಡೆಸಿಕೊಳ್ಳದ ಸರ್ಕಾರಿ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕುಮಾರೇಶ್ವರ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ರು. ಈ ಹಿನ್ನೆಲೆಯಲ್ಲಿ ಲಕ್ಷ್ಮಿ ಅವರನ್ನು ಕುಮಾರೇಶ್ವರ ಆಸ್ಪತ್ರೆಗೆ ತಂದಾಗ, ತಪಾಸನೆ ಮಾಡಿದ ಕುಮಾರೇಶ್ವರ ಆಸ್ಪತ್ರೆ ವೈದ್ಯರು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿರುವ ಸುದ್ದಿ ತಿಳಿಸಿದ್ದಾರೆ.

    ಬಾಣಂತಿ ಲಕ್ಷ್ಮಿ ಸರ್ಕಾರಿ ಆಸ್ಪತ್ರೆ ವೈದ್ಯರ ಬೇಜವಾಬ್ದಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ಒಂದೂವರೆ ವರ್ಷದ ಕಂದಮ್ಮನ ಮೇಲೆ ರೇಪ್ – ಮನೆಯೊಳಗಿಂದ್ಲೇ ಕೇರ್ ಟೇಕರ್ ಬಂಧನ

    ನವದೆಹಲಿ: ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಕ್ಕಳನ್ನು ನೋಡಿಕೊಳ್ಳಲೆಂದು ಆಳುಗಳನ್ನು ನೇಮಿಸುತ್ತಾರೆ. ಹೀಗೆ ನೇಮಕಗೊಂಡ ವ್ಯಕ್ತಿಯೇ 18 ತಿಂಗಳ ಪುಟ್ಟ ಕಂದಮ್ಮನ ಮೇಲೆ ಅತ್ಯಾಚಾರವೆಸಗಿರೋ ಶಾಕಿಂಗ್ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ದಕ್ಷಿಣ ದೆಹಲಿಯ ಶಾಹಪುರ್ ಜಾಟ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಕ್ಕಳ ದಿನಾಚರಣೆಯ ಹಿಂದಿನ ದಿನವಾದ ಸೋಮವಾರ ಈ ಘಟನೆ ನಡೆದಿದ್ದು, ಇಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಬೆಳಕಿಗೆ ಬಂದಿದ್ದು ಹೇಗೆ?: ತನ್ನ ಪುಟ್ಟ ಕಂದಮ್ಮನನ್ನು ನೋಡಿಕೊಳ್ಳಲೆಂದು ಮಗುವಿನ ತಂದೆ ಪ್ರಖ್ಯಾತ ಉದ್ಯೋಗ ಸಂಸ್ಥೆಯಿಂದ ವ್ಯಕ್ತಿಯೊಬ್ಬನನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದರು. ಆದ್ರೆ ಅದೇ ವ್ಯಕ್ತಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿಯ ನೀಚ ಕೃತ್ಯದಿಂದ ಪುಟ್ಟ ಕಂದಮ್ಮನ ಸ್ಥಿತಿ ಚಿಂತಾನಜನಕವಾಗಿದ್ದು, ಸದ್ಯ ನಗರದ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಸೋಮವಾರ ಮಧ್ಯಾಹ್ನದ ಬಳಿಕ ತಾಯಿ ಮನೆಗೆ ಬಂದು ನೋಡಿದಾಗ ಮಗುವಿನ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು. ಪುಟ್ಟ ಮಗುವಿಗೆ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಹೌಹಾರಿದ ತಾಯಿ ಆತಂಕ ಹಾಗೂ ಗಾಬರಿಗೊಂಡು ಕೂಡಲೇ ಆರೋಪಿಯನ್ನು ಪ್ರಶ್ನಿಸಿದ್ದಾರೆ. ತನ್ನ ಪತಿಗೂ ಈ ವಿಚಾರ ತಿಳಿಸಿದ್ದಾರೆ. ಬಳಿಕ ಆರೋಪಿಯಿದ್ದ ಕೋಣೆಯ ಬಾಗಿಲಿಗೆ ಬೀಗ ಜಡಿದು ಪೊಲೀಸರಿಗೆ ಮಾಹಿತಿ ನೀಡಿದ್ರು.

    ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮನೆಯೊಳಗಿನಿಂದಲೇ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಇತ್ತ ಮಗುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಘಟನೆ ಸಂಬಂಧ ಆರೋಪಿ ವಿರುದ್ಧ ಹಾಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

  • ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

    ಕೃಷ್ಣಾ ನದಿ ದುರಂತ: ಮಗಳ ಶವ ನೋಡಿದ ತಾಯಿ ದಾರುಣ ಸಾವು!

    ವಿಜಯವಾಡ: ಆಂಧ್ರದ ವಿಜಯವಾಡ ಜಿಲ್ಲೆಯಲ್ಲಿ ನಡೆದ ಕೃಷ್ಣಾ ನದಿ ದುರಂತದಲ್ಲಿ ಮೃತಪಟ್ಟ ತನ್ನ ಮಗಳ ಶವವನ್ನು ನೋಡಿ ತಾಯಿ ಆಘಾತಗೊಂಡು ಮೃತಪಟ್ಟ ದಾರುಣ ಘಟನೆ ನಡೆದಿದೆ.

    ಮೃತ ದುರ್ದೈವಿಯನ್ನು ಲಕ್ಷ್ಮೀಕಾಂತಂ ಎಂದು ಗುರುತಿಸಲಾಗಿದೆ. ವಿಧವೆಯಾಗಿರೋ ಲಕ್ಷ್ಮೀಕಾತಂ ತನ್ನ ಮಗಳು ಲೀಲಾವತಿ ಹಾಗೂ ಆಕೆಯ ಮಗಳೊಂದಿಗೆ ವಾಸವಿದ್ದರು. ಆದ್ರೆ ನಿನ್ನೆ ಇಲ್ಲಿನ ಕೃಷ್ಣಾ ನದಿಯಲ್ಲಿ ನಡೆದ ಘೋರ ದುರಂತದಿಂದಾಗಿ ಮಗಳು ಲೀಲಾವತಿ ಮೃತಪಟ್ಟಿದ್ದರು. ಮಗಳ ಸಾವಿನ ಸುದ್ದಿ ಕೇಳುತ್ತಿದ್ದಮತೆಯೇ ಮಾನಸಿಕವಾಗಿ ನೊಂದಿದ್ದ ತಾಯಿ, ಮಗಳ ಶವ ಮನೆಗೆ ಬಂದ ಬಳಿಕ ನೋಡಿದ ಕೂಡಲೇ ಆಘಾತಗೊಂಡು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಅದಾಗಲೇ ಹೃಯಯಾಘಾತವಾಗಿ ಮೃತಪಟ್ಟಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ.

    ನದಿ ದುರಂತಕ್ಕೆ ಬಲಿಯಾದ ಲೀಲಾವತಿ ಮಗಳು ವಿಜಯವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ತಾಯಿ ಹಾಗೂ ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

    ಇದನ್ನೂ ಓದಿ: ಮಹಾ ಆರತಿ ನೋಡಲು ತೆರಳುತ್ತಿದ್ದ 38 ಜನರಿದ್ದ ದೋಣಿ ಮುಗುಚಿ ಬಿತ್ತು

    ಜಿಲ್ಲೆಯ ಪವಿತ್ರ ಸಂಗಮ್ ಘಾಟ್ ಬಳಿಯ ಕೃಷ್ಣಾ ನದಿಯಲ್ಲಿ ಭಾನುವಾರ 38 ಜನ ಪ್ರಯಾಣಿಸುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, 11 ಮಂದಿ ಕಣ್ಮರೆಯಾಗಿದ್ದರು. ಇಲ್ಲಿಯವರೆಗೆ 16 ಮೃತದೇಹಗಳು ಪತ್ತೆಯಾಗಿದ್ದು, ಶವವನನ್ನು ಮರಣೋತ್ತರ ಪರೀಕ್ಷೆಗಾಗಿ ಒಂಗೋಲ್ ಪಟ್ಟಣಕ್ಕೆ ಕಳುಹಿಸಲಾಗಿದೆ.

    ಮೃತಪಟ್ಟವರೆಲ್ಲರೂ ಒಂಗೋಲ್ ವಾಲ್ಕರ್ಸ್ ಕ್ಲಬ್ ನವರಾಗಿದ್ದು, ಭಾನುವಾರ ರಜಾದಿನವಾಗಿದ್ದರಿಂದ ಎಲ್ಲರೂ ಭವಾನಿ ಐಲ್ಯಾಂಡ್ ಹಾಗೂ ಪವಿತ್ರ ಸಂಗಮ್ ಗೆ ಪಿಕ್ ನಿಕ್ ಗೆಂದು ತೆರಳಿದ್ದರು. ಈ ವೇಳೆ ದೋಣಿ ಮಗುಚಿ 17 ಮಂದಿ ಸಾವನ್ನಪ್ಪಿ, 21 ಮಂದಿಯನ್ನು ರಕ್ಷಿಸಲಾಗಿತ್ತು.

  • ಕಾರ್ ನಲ್ಲಿ ಮಗುವಿಗೆ ಹಾಲುಣಿಸುವಾಗಲೇ ಮಹಿಳೆಯೊಂದಿಗೆ ಅಮಾನವೀಯ ವರ್ತನೆ ತೋರಿದ ಟ್ರಾಫಿಕ್ ಪೊಲೀಸ್..!

    ಕಾರ್ ನಲ್ಲಿ ಮಗುವಿಗೆ ಹಾಲುಣಿಸುವಾಗಲೇ ಮಹಿಳೆಯೊಂದಿಗೆ ಅಮಾನವೀಯ ವರ್ತನೆ ತೋರಿದ ಟ್ರಾಫಿಕ್ ಪೊಲೀಸ್..!

    ಮುಂಬೈ: ಕಾರಲ್ಲಿ ಮಹಿಳೆ ತನ್ನ 7 ತಿಂಗಳ ಮಗುವಿಗೆ ಹಾಲುಣಿಸುವಾಗಲೇ ಟ್ರಾಫಿಕ್ ಪೊಲೀಸರು ಅಮಾನವೀಯವಾಗಿ ವರ್ತಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಘಟನೆ ಶುಕ್ರವಾರ ಮಲಾಡ್ ವೆಸ್ಟ್ ನಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಗರದ ಜ್ಯೋತಿ ಎಂಬವರು ಪೊಲೀಸರ ಹತ್ತಿರ ತನ್ನ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಪ್ರಿಸ್ಕ್ರಿಪ್ಷನ್ ಲೆಟರ್ ತೋರಿಸಿದ್ರೂ ಅವರ ಮಾತನ್ನು ಕೇಳದೆ, ಕರುಣೆಯೂ ತೋರದೆ ಫೋನಿನಲ್ಲಿ ಮಾತನಾಡಿಕೊಂಡು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    `ನಾನು ನನ್ನ 7 ತಿಂಗಳ ಮಗುವಿಗೆ ಹಾಲುಣಿಸುತ್ತಿದ್ದೇನೆ ಎಂದು ಹೇಳಿದೆ. ಆ ವೇಳೆ ನನ್ನನ್ನು ಕಾರಿನಿಂದ ಇಳಿಯೋದಕ್ಕೂ ಅವಕಾಶ ನೀಡಿಲ್ಲ. ನನ್ನ ಕಾರು ನಿಲ್ಲಿಸಿದ್ದ ಜಾಗದಲ್ಲೇ ಇನ್ನೂ ಎರಡೂ ಕಾರಗಳು ನಿಂತಿದ್ದವು. ಆದರೆ ಪೊಲೀಸರು ನನ್ನ ಕಾರನ್ನು ಆಯ್ಕೆ ಮಾಡಿ ನಂತರ ಟೋಯಿಂಗ್ ಮಾಡಿ ಕಾರನ್ನು ಎಳೆದುಕೊಂಡೇ ಹೋದರು. ಅಲ್ಲಿ ಇದ್ದ ಜನರು ಮಗು ಹಾಗೂ ತಾಯಿಗೆ ತೊಂದರೆ ಆಗುತ್ತದೆ ಎಂದು ಸಾಕಷ್ಟು ಹೇಳಿದ್ರೂ ಅವರ ಮಾತನ್ನು ಕೇಳಲಿಲ್ಲ ಎಂದು ಜ್ಯೋತಿ ಹೇಳಿದ್ದಾರೆ.

    https://twitter.com/MuzzammilAap/status/929259260030185472

    ಘಟನೆ ಬಳಿಕ ಮುಂಬೈನ ಜಂಟಿ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಶೀಘ್ರದಲ್ಲೇ ವಿಚರಣೆ ನಡೆಸಲು ಉಪ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುವಂತೆ ಆದೇಶಿಸಿದ್ದಾರೆ. ಅಲ್ಲದೇ ಘಟನೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಭಾನುವಾರ ಪರಿಶೀಲನೆ ನಡೆಸುವುದಾಗಿ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.

    ಶಶಾಂಕ್ ರಾಣೆ ಎಂಬ ಪೊಲೀಸ್ ಅಧಿಕಾರಿ ತನ್ನ ಹೆಸರಿನ ಬ್ಯಾಚ್ ಅನ್ನು ಕೂಡ ಹಾಕದೆ ಇದಿದ್ದು ಮುಂಬೈ ಪೊಲೀಸ್ ನಿಯಮವನ್ನು ಮುರಿದಿದ್ದಾರೆ.

  • ಮನೆಯೊಳಗೇ ತಂದೆ-ತಾಯಿಯ ಸಮಾಧಿ ಮಾಡಿ ಪೂಜಿಸ್ತಿದ್ದಾರೆ ಎನ್ ಟಿ ಆರ್ ಅಭಿಮಾನಿ!

    ಮನೆಯೊಳಗೇ ತಂದೆ-ತಾಯಿಯ ಸಮಾಧಿ ಮಾಡಿ ಪೂಜಿಸ್ತಿದ್ದಾರೆ ಎನ್ ಟಿ ಆರ್ ಅಭಿಮಾನಿ!

    ಕೋಲಾರ: ಜನ್ಮ ನೀಡಿ ಕಷ್ಟಪಟ್ಟು ಸಾಕಿ ಬೆಳೆಸಿದ ತಂದೆ-ತಾಯಿಯನ್ನು ವೃದ್ಧಾಶ್ರಮದಲ್ಲಿ ಬಿಟ್ಟು ಬರುವ ಮಕ್ಕಳು ಇರುವ ಇಂತಹ ಸಂದರ್ಭದಲ್ಲಿ ಇಲ್ಲಿ ವ್ಯಕ್ತಿ ಎಲ್ಲರಿಗೂ ಆದರ್ಶವಾಗಿದ್ದಾರೆ. ತಮ್ಮ ತಂದೆ-ತಾಯಿ ಮರಣ ನಂತರ ಅವರನ್ನು ಮನೆಯಲ್ಲಿಯೇ ಸಮಾಧಿ ಮಾಡಿ ನಿತ್ಯ ಪೂಜಿಸುತ್ತಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ಚಿತ್ರನಟನ ಪ್ರತಿಮೆಯನ್ನು ರೂಪಿಸಿ ಮನೆಯ ಮೇಲೆ ಸ್ಥಾಪನೆ ಮಾಡಿದ್ದಾರೆ.

    ಕೋಲಾರ ತಾಲೂಕು ಸೀಪುರ ಗ್ರಾಮದ ನಿವಾಸಿಯಾಗಿರುವ ನಾರಾಯಣಪ್ಪ ವೃತ್ತಿಯಲ್ಲಿ ಕುರಿಗಾಯಿ. ಕುರಿಕಾಯುವ ವೃತ್ತಿ ಮಾಡುತ್ತಿದ್ದರೂ ಇವರ ಆದರ್ಶ-ಅಭಿಮಾನ ಇಂದು ಎಲ್ಲರಿಗೂ ಮಾದರಿ ಎನ್ನುವಂತಿದೆ. ಏಕೆಂದರೆ ನಾರಾಯಣಪ್ಪನಿಗೆ ಅವರ ತಂದೆ ಬೆಂಗಳೂರು ಮುನಿಯಪ್ಪ ಹಾಗೂ ತಾಯಿ ಅಕ್ಕಳಮ್ಮ ಅಂದರೆ ಪಂಚಪ್ರಾಣ. 70 ವರ್ಷಗಳ ಹಿಂದೆ ಬೆಂಗಳೂರು ನಗರ ಬಿಟ್ಟು ಕೋಲಾರ ಗ್ರಾಮಕ್ಕೆ ಬಂದು ನೆಲೆಸಿದ ಇವರ ಕುಟುಂಬದ ಜೀವನ ತುಂಬಾ ಕಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲಿ ತಮ್ಮನ್ನು ಪ್ರೀತಿಯಿಂದ ಕಷ್ಟಪಟ್ಟು ಸಾಕಿ ಬೆಳೆಸಿದ್ದಾರೆ ಎನ್ನುವ ಅಭಿಮಾನದಿಂದ ಅವರ ಸಮಾಧಿಗೆ ನಿತ್ಯವೂ ಪೂಜಿಸುತ್ತಿದ್ದಾರೆ.

    ಅಲ್ಲದೇ ನಾರಾಯಣಪ್ಪ ಚಿಕ್ಕ ವಯಸ್ಸಿನಿಂದಲೂ ತೆಲುಗು ಚಿತ್ರ ರಂಗದ ಸೂಪರ್‍ಸ್ಟಾರ್ ಎನ್.ಟಿ.ರಾಮ್‍ರಾವ್ ರವರ ಸಿನಿಮಾಗಳನ್ನು ನೋಡುತ್ತಾ ಅವರ ಸಿನಿಮಾದಲ್ಲಿನ ಆದರ್ಶಗಳನ್ನು ಪಾಲಿಸುತ್ತಾ ಬೆಳೆದವರು. ಆ ಕಾರಣಕ್ಕೆ ನಾರಾಯಣಪ್ಪ ಅವರು ಕಳೆದ ಹಲವು ವರ್ಷಗಳ ಹಿಂದೆಯೇ ತಮ್ಮ ಮನೆಯ ಮೇಲೆ ತನ್ನ ತಂದೆ ಹಾಗೂ ಎನ್‍ಟಿ ರಾಮ್‍ರಾವ್ ಅವರ ಪ್ರತಿಮೆಗಳನ್ನು ಸ್ಥಾಪನೆ ಮಾಡಿದ್ದಾರೆ.

    ಇನ್ನೂ ತನ್ನ ತಂದೆ ಹಾಗೂ ತಾಯಿಯ ಸಮಾಧಿಯನ್ನು ತನ್ನ ಮನೆಯಲ್ಲೇ ನಿರ್ಮಾಣ ಮಾಡಿರುವ ನಾರಾಯಣಪ್ಪ, ಪ್ರತಿದಿನ ತನ್ನ ಮನೆಯ ಮೇಲೆ ನಿರ್ಮಾಣ ಮಾಡಿರುವ ತಂದೆ ಹಾಗೂ ಎನ್.ಟಿ. ರಾಮರಾವ್ ಪ್ರತಿಮೆಗಳಿನ್ನು ಶುಚಿಗೊಳಿಸಿ ನಂತರವೇ ತನ್ನ ಕೆಲಸ ಕಾರ್ಯಗಳನ್ನು ಅರಂಭಿಸುತ್ತಾರೆ. ಸುಮಾರು ವರ್ಷಗಳಿಂದ ತನ್ನ ಅಭಿಮಾನದ ಸಂಕೇತವಾಗಿ ನಿರ್ಮಾಣ ಮಾಡಿರುವ ನಾರಾಯಣಪ್ಪ ಚಂದ್ರಬಾಬು ನಾಯ್ಡು, ಬಾಲಕೃಷ್ಣರನ್ನು ಭೇಟಿ ಮಾಡಿ ತಮ್ಮ ಮನೆಗೆ ಬರುವಂತೆ ಮನವಿ ಮಾಡಿದ್ದಾರಂತೆ. ತನ್ನ ಬಳಿ ಇರುವ ಕುರಿಗಳನ್ನು ಮಾರಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ತಮ್ಮ ಅಭಿಮಾನದ ಪ್ರತಿಮೆಗಳನ್ನು ನೋಡಲು ಅವರು ಬಂದಿಲ್ಲಾ ಅನ್ನೋದು ನಾರಾಯಣಪ್ಪನ ಕೊರಗು ಅಂತಾರೆ ಅವರ ಮಕ್ಕಳು.

    ಅನಕ್ಷರಸ್ಥರಾದರು ತನ್ನ ಹೆತ್ತವರ ಮೇಲೆ ಇವರಿಗಿರುವ ಪ್ರೀತಿ, ಎನ್ ಟಿ ಆರ್ ಮೇಲಿರುವ ಅಭಿಮಾನ ಎಲ್ಲರೂ ಮೆಚ್ಚುವಂತದ್ದು. ತಂದೆ-ತಾಯಿಯರನ್ನ ನೋಡಿಕೊಳ್ಳಲಾಗದೆ ವೃದ್ಧಾಶ್ರಮಗಳಿಗೆ ಸೇರಿಸುವ ಮಕ್ಕಳಿರುವ ಈ ಸಮಾಜದಲ್ಲಿ ಅವರು ಮಾದರಿಯಾಗಿದ್ದಾರೆ.

  • ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

    ಮಕ್ಕಳಿಗೆ ಬೇಡವಾದ ಹೆತ್ತ ತಾಯಿ – ಗಂಗಾವತಿಯಲ್ಲೊಂದು ಹೃದಯವಿದ್ರಾವಕ ಘಟನೆ

    ಕೊಪ್ಪಳ: ಹೆತ್ತ ತಾಯಿಯನ್ನು ಮಕ್ಕಳಿಬ್ಬರು ದೂರ ಮಾಡಿರುವ ಹೃದಯವಿದ್ರಾವಕ ಘಟನೆ ಗಂಗಾವತಿಯಲ್ಲಿ ನಡೆದಿದೆ.

    ಬೆಂಗಳೂರಿನಲ್ಲಿರುವ ಗುರುನಾಥ್ ತನ್ನ ತಾಯಿ 95 ವರ್ಷದ ಶಾರದಾಬಾಯಿಯನ್ನು ಖಾಸಗಿ ಬಸ್ ಮೂಲಕ ಗಂಗಾವತಿ ಗೆ ಕಳುಹಿಸಿದ್ದಾರೆ. ಈ ವೇಳೆ ಗಂಗಾವತಿಯಲ್ಲಿರುವ ಸಹೋದರ ಸುರೇಶ್ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ತಿಳಿಸಿದ್ದಾರೆ.

    ಬಸ್ ಗಂಗಾವತಿಗೆ ನಿಲ್ದಾಣಕ್ಕೆ ಆಗಮಿಸಿದಾಗ ಸುರೇಶ್ ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಬಸ್ ಸಿಬ್ಬಂದಿ ಸುರೇಶ್ ಅವರಿಗೆ ಕರೆ ಮಾಡಿದಾಗ ನನಗೆ ಆ ಮಹಿಳೆ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ವೃದ್ಧೆ ತಾಯಿ ಖಾಸಗಿ ಬಸ್ ನಲ್ಲೇ ಕಳೆದ ಐದು ಗಂಟೆಗಳಿಂದ ಪರದಾಡಿದ್ದಾರೆ. ಇದನ್ನು ಗಮನಿಸಿದ ಖಾಸಗಿ ಬಸ್ ಚಾಲಕರು ವೃದ್ಧೆಗೆ ಉಪಹಾರ ಕೊಟ್ಟು ಮಾನವೀಯತೆ ತೋರಿದ್ದಾರೆ. ವೃದ್ಧೆ ಅಸ್ವಸ್ಥಗೊಂಡಿದ್ದು, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

    ಗುರುನಾಥ್ ಮತ್ತು ಸುರೇಶ್ ಅವರಿಗೆ ಫೋನ್ ಮಾಡಿದಾಗ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಚಾಲಕ ಕಳಕಪ್ಪ ಹೇಳಿದ್ದಾರೆ.

  • ಫ್ಲ್ಯಾಟ್ ನಲ್ಲಿ ತಾಯಿ,ಮಗಳ ಶವ ಪತ್ತೆ- 1.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

    ಫ್ಲ್ಯಾಟ್ ನಲ್ಲಿ ತಾಯಿ,ಮಗಳ ಶವ ಪತ್ತೆ- 1.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

    ಮುಂಬೈ: 36 ವರ್ಷದ ತಾಯಿ ಹಾಗೂ ಆಕೆಯ 11 ವರ್ಷದ ಮಗಳು ತಮ್ಮ ಡೈಗರ್ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ಮೃತ ದುರ್ದೈವಿ ತಾಯಿ-ಮಗಳನ್ನು ನಝಿಯಾ ಜಮಲುದ್ದೀನ್ ಸಿದ್ದಿಕಿ ಹಾಗೂ ತಾನಿಯಾ ಫರೋಜ್ ಸಯ್ಯದ್ ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ವೇಳೆ, ತಾಯಿ-ಮಗಳನ್ನು ಕೊಲೆ ಮಾಡಿ ಬಳಿಕ ಮನೆಯಲ್ಲಿದ್ದ ಸುಮಾರು 1.17ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ.

    ತಾಯಿ-ಮಗಳು ಸಾವನ್ನಪ್ಪಿದ ಬಳಿಕ ನಝಿಯಾ ತಾಯಿ ಬದ್ರುನಿಸಾ ಅಸ್ಲಾಂ ಸೈಯದ್ ಧಿಲ್ ದಿಗ್ರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ `ಘಟನೆಯ ವೇಳೆ ತನ್ನ ಮಗಳ ಪತಿ ಮನೆಯಲ್ಲಿರಲಿಲ್ಲ. ಆತ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಘಟನೆ ನವೆಂಬರ್ 4ರಂದು ತಡರಾತ್ರಿ ನಡೆದಿದೆ ಅಂತ ಹೇಳಿದ್ದಾರೆ.

    ನಝೀಯಾಳಿಗೆ ಅನೇಕ ಬಾರಿ ಕರೆ ಮಾಡಿದ್ದೇವು. ಆದ್ರೆ ಆಕೆಯನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾವು ಆಕೆ ವಾಸಿಸುತ್ತಿದ್ದ ನಿವಾಸಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಝೀಯಾ ಕತ್ತು ಸೀಳಿದ ರೀತಿಯಲ್ಲಿ ಹಾಗೂ ಆಕೆಯ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಅಂತ ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

    ದರೋಡೆ ನಡೆಸಲು ಈ ಕೃತದ ಎಸಗಿರಬಹುದೆಂದು ಶಂಕಿಸಲಾಗಿದೆ. ಈಕೆಯ ಮನೆಯಲ್ಲಿ 20 ವರ್ಷದ ಯುವತಿಯೊಬ್ಬಳು ಮನೆಕೆಲಸಕ್ಕೆ ಇದ್ದಳು ಎನ್ನಲಾಗಿದ್ದು, ಯುವತಿ ಎರಡು ತಿಂಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದಳು. ಹೀಗಾಗಿ ಆಕೆಯ ಗೆಳೆಯ ಈ ಕೃತ್ಯದಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ. ಈ ಕುರಿತು ತನಿಖೆ ಮುಂದುವರೆಸುವುದಾಗಿ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

    ಸದ್ಯ ಘಟನೆಯ ಕುರಿತು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶೀಘ್ರವೇ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಕಣ್ಣೆದುರೇ ಮೃತಪಟ್ಟ 5 ವರ್ಷದ ಮಗಳನ್ನು ನೋಡಲು ಸ್ಟ್ರೆಚರ್ ನಲ್ಲಿ ಬಂದ ತಾಯಿ!

    ಕಣ್ಣೆದುರೇ ಮೃತಪಟ್ಟ 5 ವರ್ಷದ ಮಗಳನ್ನು ನೋಡಲು ಸ್ಟ್ರೆಚರ್ ನಲ್ಲಿ ಬಂದ ತಾಯಿ!

    ಮಂಡ್ಯ: ಕ್ಯಾಂಟರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮದುವೆಗೆಂದು ಹೊರಟಿದ್ದ 13 ಜನ ಮೃತಪಟ್ಟ ಘಟನೆಯ ಮಧ್ಯೆಯೊಂದು ಮನಕಲಕುವ ಘಟನೆ ನಡೆದಿದೆ.

    ಅಪಘಾತದ ಬಳಿಕ ತನ್ನ 5 ವರ್ಷದ ಮಗಳ ಶವವನ್ನು ನೋಡಲು ಗಂಭೀರ ಸ್ಥಿತಿಯಲ್ಲಿರೋ ತಾಯಿ ಸ್ಟ್ರೆಚರ್ ನಲ್ಲೇ ಬಂದಿದ್ದು, ನೆರೆದವರಲ್ಲಿ ಕಣ್ಣೀರು ತರಿಸಿತ್ತು. ಘಟನೆಯಲ್ಲಿ ಮಂಜುಳಮ್ಮ ಎಂಬವರ ಕೈ ಕಾಲು ಮುರಿದಿತ್ತು. ಇವರ ಮಗಳಾದ 5 ವರ್ಷದ ಸೋನು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಳು. ಮೃತಳ ಶವ ಪರೀಕ್ಷೆ ಶವಾಗಾರದಲ್ಲಿ ನಡೆಯುತ್ತಿತ್ತು. ಈ ವೇಳೆ ತಾಯಿ ತನ್ನ ಮಗಳ ಶವವನ್ನು ನೋಡಲು ಶವಾಗಾರಕ್ಕೆ ಬಂದಿದ್ದರು.

    ಶವಾಗಾರದ ಮುಂದೆ ಮಗಳ ಶವವನ್ನು ನೋಡಲು ಕಾಯುತ್ತಾ ತಾಯಿ ಮೂಕ ರೋಧನೆ ವ್ಯಕ್ತಪಡಿಸುತ್ತಿದ್ದರು. ಕೊನೆಗೆ ಶವ ಪರೀಕ್ಷೆ ಮುಗಿಸಿ ಬ್ಯಾಂಡೇಜ್ ಸುತ್ತಿದ್ದ ಮಗಳನ್ನು ನೋಡಿದ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಹೆತ್ತ ತಾಯಿಯ ರೋಧನೆ ನೋಡಿ ಸ್ಥಳದಲ್ಲಿದ್ದವರು ಕ್ರೂರ ವಿಧಿಗೆ ಹಿಡಿಶಾಪ ಹಾಕುತ್ತಾ ಕಣ್ಣೀರು ಹಾಕಿದ್ರು.

    ಅವಸರದಹಳ್ಳಿ ಗ್ರಾಮದಿಂದ ಮದ್ದೂರಿಗೆ ಕ್ಯಾಂಟರ್ ನಲ್ಲಿ ಮದುವೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾಚಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಶಿವಣ್ಣ(45), ಸೋನ(5), ರೇಣುಕಮ್ಮ(40), ಮೀನಾಕ್ಷಿ(37), ಜಯಮ್ಮ(46), ಪಾರ್ವತಮ್ಮ(48), ಬೀರಮ್ಮ(51), ಸಣ್ಣಮ್ಮ(60), ಮಾದಮ್ಮ(63), ಕಾಳಮ್ಮ(56), ಕಮಲಮ್ಮ(75), ಕರಿಯಪ್ಪ(56), ಪೂಜಾ(18) ಮೃತಪಟ್ಟಿದ್ದಾರೆ. ಸದ್ಯ ಮೃತರ ಶವಪರೀಕ್ಷೆ ಮಂಡ್ಯ ಜಿಲ್ಲಾಸ್ಪತ್ರೆ, ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

    ಘಟನೆಯಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಶಾಸಕ ಯೋಗೇಶ್ವರ್ ಅವರು ಮದ್ದೂರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ರು.

    https://www.youtube.com/watch?v=DkTaCz1LovU

     

  • ಕೃಷಿ ಹೊಂಡದಲ್ಲಿ ಬಿದ್ದು ತಾಯಿ-ಮಗಳು ದುರ್ಮರಣ

    ಕೃಷಿ ಹೊಂಡದಲ್ಲಿ ಬಿದ್ದು ತಾಯಿ-ಮಗಳು ದುರ್ಮರಣ

    ರಾಯಚೂರು: ಕೃಷಿ ಹೊಂಡದಲ್ಲಿ ಬಿದ್ದು ತಾಯಿ-ಮಗಳು ಸಾವನ್ನಪ್ಪಿರುವ ಘಟನೆ ರಾಯಚೂರಿನ ಲಿಂಗಸುಗೂರಿನ ಮಸ್ಕಿ ಬಳಿ ನಡೆದಿದೆ. ಇಲ್ಲಿನ ಪರಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಶವಗಳು ಪತ್ತೆಯಾಗಿವೆ.

    ಮೃತರನ್ನ ಮ್ಯಾದರಾಳ ಗ್ರಾಮದ ಬಸ್ಸಮ್ಮ (40) ಹಾಗೂ ಶಿವಮ್ಮ (16) ಅಂತ ಗುರುತಿಸಲಾಗಿದೆ. ಕೂಲಿ ಕೆಲಸಕ್ಕೆ ಹೋದಾಗ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

    ಕೊಳೆತ ಸ್ಥಿತಿಯಲ್ಲಿದ್ದ ಮೃತ ದೇಹಗಳು ಶುಕ್ರವಾರ ಸಂಜೆ ಪತ್ತೆಯಾಗಿದ್ದವು. ಮೃತರ ಗುರುತು ಪತ್ತೆಯಾಗಿರಲಿಲ್ಲ. ಇದೀಗ ಮೃತ ಬಸ್ಸಮ್ಮಳ ಪತಿ ರಾಮಪ್ಪ ನಾಯಕ ಗುರುತು ಹಿಡಿದಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಸ್ಕಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.