Tag: mother

  • ತಾಯಿ ಕೊಟ್ಟ ಉಡುಗೊರೆಯನ್ನ 40 ವರ್ಷಗಳಿಂದ ಜೋಪಾನ ಮಾಡ್ಕೊಂಡು ಜೀವನ ಕಟ್ಟಿಕೊಂಡಿರೋ ಬೆಣ್ಣೆ ಅಜ್ಜಿ

    ತಾಯಿ ಕೊಟ್ಟ ಉಡುಗೊರೆಯನ್ನ 40 ವರ್ಷಗಳಿಂದ ಜೋಪಾನ ಮಾಡ್ಕೊಂಡು ಜೀವನ ಕಟ್ಟಿಕೊಂಡಿರೋ ಬೆಣ್ಣೆ ಅಜ್ಜಿ

    ಗದಗ: ತವರು ಮನೆ ಅಂದರೆ ಹೆಣ್ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ತಾಯಿ ಕೊಟ್ಟ ತವರಿನ ಉಡುಗೊರೆಯನ್ನು ಜೋಪಾನ ಮಾಡಿಕೊಂಡು ಬರುತ್ತಾರೆ. ಇಲ್ಲೊಬ್ಬರು ಅಜ್ಜಿ ಸುಮಾರು 40 ವರ್ಷಗಳಿಂದ ತಾಯಿ ಕೊಟ್ಟ ಉಡುಗೊರೆಯನ್ನು ಜೋಪಾನ ಮಾಡಿಕೊಂಡು ಬಂದಿದ್ದಾರೆ.

    ತವರಿನ ಪ್ರೀತಿಗೆ ಬೆಲೆ ಕಟ್ಟೋಕು ಆಗಲ್ಲ ಎಂಬಂತೆ ತಾಯಿ ಉಡುಗೊರೆಯಾಗಿ ಕೊಟ್ಟ ಎಮ್ಮೆಯಿಂದ ಬೆಣ್ಣೆ ವ್ಯಾಪಾರ ಮಾಡಿಕೊಂಡು ಬೆಣ್ಣೆ ಅಜ್ಜಿ ಎಂದು ಹೆಸರುವಾಸಿಯಾಗಿ ಈ ವೃದ್ಧೆ ಬೆಣ್ಣೆ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದ ನಾಲ್ಕು ದಶಕಗಳಿಂದ ತವರಿನ ನೆನಪು ಶಾಶ್ವತವಾಗಿಟ್ಟುಕೊಂಡಿದ್ದಾರೆ.

    ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹರದಗಟ್ಟಿ ತಾಂಡಾದ ಸೀತವ್ವ ಲಮಾಣಿ ಅವರು 40 ವರ್ಷದ ಹಿಂದೆ ವಿವಾಹವಾಗಿ ಹರದಗಟ್ಟಿ ತಾಂಡಾಕ್ಕೆ ಬಂದಿದ್ದರು. ಸೀತವ್ವರಿಗೆ ತವರುಮನೆಯವರು ಎಮ್ಮೆಯೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಹರದಗಟ್ಟಿ ತಾಂಡಾದ ನೀಲಪ್ಪನನ್ನು ಮದುವೆಯಾದ ವೇಳೆ ಸೀತವ್ವರ ಕುಟುಂಬ ತುಂಬಾ ಬಡತನದಲ್ಲಿತ್ತು. ಕುಟುಂಬಕ್ಕಂಟಿದ ಬಡತನದ ನಿವಾರಣೆಗೆ ಸೀತವ್ವ ತವರು ಮನೆಯವರು ಕೊಟ್ಟ ಎಮ್ಮೆಯನ್ನೇ ಸಾಕಿದರು. ಛಲಬಿಡದ ದಂಪತಿ ಎಮ್ಮೆ ಸಾಕಿ ಅದರಿಂದ ಬೆಣ್ಣೆ ತೆಗೆದು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಒಂದು ಎಮ್ಮೆಯಿಂದ ಆರಂಭವಾದ ಇವರ ಪರಿಶ್ರಮದ ಪಯಣ ಈಗ 9 ಎಮ್ಮೆಗಳ ತುಂಬು ಕುಟುಂಬವಾಗಿದೆ.

    ಈ ಕುಟುಂಬ ಈಗ ವಾರಕ್ಕೆ 10 ಕೆಜಿ ವರೆಗೆ ಬೆಣ್ಣೆ ಉತ್ಪಾದಿಸುತ್ತಿದೆ. ವಾರಕ್ಕೆ ಅಂದಾಜು ಐದು ಸಾವಿರ ರೂ.ವರೆಗೆ ಲಾಭ ಪಡೆಯುತ್ತಿದ್ದಾರೆ. ಬಹುತೇಕರು ಇವರು ಗುಣಮಟ್ಟದ ಬೆಣ್ಣೆ ಉತ್ಪಾದನೆಯ ಭರವಸೆಯಿಂದ ಮನೆಗೆ ಬಂದು ಬೆಣ್ಣೆ ಖರೀದಿಸುತ್ತಿದ್ದಾರೆ. ನಿತ್ಯ ನೂರು ರೂಪಾಯಿವರೆಗೆ ಮೊಸರು ಕೂಡ ಮಾರಾಟ ಮಾಡ್ತಾರೆ. ಪ್ರತಿವಾರ ಬೆಣ್ಣೆ ಹಾಗೂ ಮೊಸರು ಸೇರಿ ಅಂದಾಜು 8 ಸಾವಿರ ರೂಪಾಯಿ ವರೆಗೆ ಆದಾಯ ದೊರೆಯುತ್ತಿದೆ. ಈ ಕುಟುಂಬ ಕಷ್ಟದಲ್ಲಿಯೇ ಬೆಣ್ಣೆ ಮಾರಿ ಆರ್ಥಿಕ ಸಂಕಷ್ಟ ನಿವಾರಿಸಿಕೊಂಡಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡಿ ಇದ್ದದ್ದರಲ್ಲಿ ಕೊಂಚ ನೆಮ್ಮದಿ ಕಂಡುಕೊಂಡಿದ್ದಾರೆ. ಇಂದು ಅದೆಷ್ಟೋ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ವಿದ್ಯಾರ್ಹತೆಗೆ ತಕ್ಕ ಕೆಲಸ ಬೇಕೆಂದು ಅಲೆದು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಆದ್ರೆ ಸೀತವ್ವ ಹಾಗೂ ನೀಲಪ್ಪ ಅವರ ಪರಿಶ್ರಮದ ಬದುಕು ಇಂದಿನ ಯುವಕರಿಗೆ ಪ್ರಾಯೋಗಿಕ ಪಾಠದಂತಿದೆ ಎಂದು ಸ್ಥಳೀಯ ಶಂಕರ್ ಹೇಳಿದರು.

    ನಾಲ್ಕು ದಶಕದ ಈ ಪರಿಶ್ರಮದ ಪಯಣದಲ್ಲಿ ಸೀತವ್ವ ಹಾಗೂ ನೀಲಪ್ಪ ದಣಿವರಿಯದ ಬದುಕು ಸಾಗಿಸಿದ್ದಾರೆ. ಇದರಿಂದಾಗಿ ಭದ್ರತೆಯೇ ಇಲ್ಲದ ಬದುಕಿಗೆ ಬೆಣ್ಣೆ ವ್ಯಾಪಾರ ಭದ್ರತೆ ನೀಡಿದೆ. ತವರಿನ ಕಾಣಿಕೆಯನ್ನು ಉಳಿಸಿಕೊಳ್ಳೋ ಜೊತೆಗೆ ಬದುಕು ರೂಪಿಸಿಕೊಂಡ ಈ ಲಂಬಾಣಿ ಕುಟುಂಬದ ಶ್ರಮದ ಬದುಕು ಇತರರಿಗೂ ಮಾದರಿಯಾಗಿದೆ.

  • ತಾಯಿ ಸಾವಿನ ಸುದ್ದಿ ಕೇಳಿ ದುಬೈನಲ್ಲಿ ಸಾವನ್ನಪ್ಪಿದ ಮಗ

    ತಾಯಿ ಸಾವಿನ ಸುದ್ದಿ ಕೇಳಿ ದುಬೈನಲ್ಲಿ ಸಾವನ್ನಪ್ಪಿದ ಮಗ

    ದುಬೈ: ತಾಯಿನ ಸಾವಿನ ಸುದ್ದಿ ಕೇಳಿದ ಮಗ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ದುಬೈನಲ್ಲಿ ನಡೆದಿದೆ.

    ಭಾರತೀಯ ಮೂಲದ ಅನಿಲ್ ಕುಮಾರ್ ಗೋಪಿನಾಥನ್ ಎಂಬವರೆ ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಡಿಸೆಂಬರ್ 21 ರಂದು ಘಟನೆ ನಡೆದಿದೆ. ಅನಿಲ್ ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯಾವರಾಗಿದ್ದು, ಅವರ ತಾಯಿ ಕೌಸಲ್ಯ ಅವರು ಮೃತಪಟ್ಟ ಸುದ್ದಿ ಕೇಳಿ ತಮ್ಮ ರೂಮ್ ನಲ್ಲಿ ಕುಸಿದು ಬಿದ್ದಿದ್ದು, ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

    ಅನಿಲ್ ಕಳೆದ 20 ವರ್ಷಗಳಿಂದ ದುಬೈನ ಉಮ್ ಅಲ್ ಕ್ವೈನ್ ನಗರದಲ್ಲಿನ ಟೈಲರಿಂಗ್ ಶಾಪ್‍ನಲ್ಲಿ ಕಾರ್ಯನಿವಹಿಸುತ್ತಿದ್ದರು. ಅನಿಲ್ ಸಹೋದರ ತಮ್ಮ ತಾಯಿ ಕೌಸಲ್ಯ ಅವರು ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದು, ಈ ಸುದ್ದಿ ಕೇಳಿ ಅನಿಲ್ ಭಾರತಕ್ಕೆ ಬರಲು ಬೇಕಾದ ಸಿದ್ಧತೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

    ಮೃತ ಅನಿಲ್ ಅವರ ದೇಹವನ್ನು ಭಾರತಕ್ಕೆ ತರಲು ಕೆಲವು ಕಾನೂನು ಕ್ರಮಗಳ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇಂದು ರಾತ್ರಿ ಅಥವಾ ಸೋಮವಾರ ಅನಿಲ್ ಮೃತ ದೇಹವು ಸ್ವಗ್ರಾಮವನ್ನು ಸೇರಲಿದೆ ಎಂದು ಹೇಳಲಾಗಿದೆ.

  • ತಾಯಿಯ ಕಣ್ಣೀರಿಗೆ ನ್ಯಾಯ ಕೊಡಿಸಿದ ದಿಟ್ಟ ಬಾಲಕಿ

    ತಾಯಿಯ ಕಣ್ಣೀರಿಗೆ ನ್ಯಾಯ ಕೊಡಿಸಿದ ದಿಟ್ಟ ಬಾಲಕಿ

    ಧಾರವಾಡ: 8ನೇ ತರಗತಿ ಓದುತ್ತಿರುವ ಬಾಲಕಿ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದ ನಂತರ ತನ್ನ ತಾಯಿಗೆ ನ್ಯಾಯ ಕೊಡಿಸಿ ದಿಟ್ಟ ಬಾಲಕಿ ಎಂಬ ಪ್ರಶಂಸೆಗೆ ಕಾರಣವಾಗಿದ್ದಾಳೆ.

    ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ನಿವಾಸಿಯಾಗಿರುವ ರೇಖಾ ಮೈಸೂರ ಎಂಬ ಬಾಲಕಿ ತನ್ನ ತಾಯಿಗೆ ನ್ಯಾಯ ಕೊಡಿಸಿದ್ದಾಳೆ. ಬಾಲಕಿ ರೇಖಾ ತಾಲೂಕಿನ ಪೆಸೆಂಟೆಷನ್ ಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ ನಡೆಸುವ ಕಾನೂನು ಅರಿವು ಕಾರ್ಯಕ್ರಮದಲ್ಲಿ ತನ್ನ ತಾಯಿಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯಾಧೀಶರ ಗಮನ ಸೆಳೆದಿದ್ದಾಳೆ.

    ಏನಿದು ಘಟನೆ? ಬಾಲಕಿ ರೇಖಾ ಅವರ ತಾಯಿ ಸಾವಕ್ಕ ತಮ್ಮ 1 ಎಕರೆ 10 ಗುಂಟೆ ಜಮೀನನ್ನ ಅದೇ ಗ್ರಾಮದ ಅಜೀಜ್ ಎಂಬುವರಿಗೆ ಅಡವಿಟ್ಟು 3 ಲಕ್ಷ 20 ಸಾವಿರ ರೂ. ಹಣವನ್ನ ಪಡೆದಿದ್ದರು. ಆದರೆ ಇದನ್ನೇ ಅವಕಾಶವಾಗಿ ಬಳಿಸಿಕೊಂಡ ಆತ ಇಡೀ ಜಮೀನನ್ನು ಕಬಳಿಸಲು ಮುಂದಾಗಿದ್ದಾನು. ಇದರಿಂದ ಸಾವಕ್ಕ ಸಾಕಷ್ಟು ಮಾನಸಿಕವಾಗಿ ಕುಗ್ಗಿದ್ದರು. ಈ ಬಗ್ಗೆ ಧಾರವಾಡ ಗ್ರಾಮೀಣ ಪೊಲೀಸರಿಗೆ ದೂರನ್ನು ನೀಡಿದ್ದರು. ಆದರೆ ಯಾವುದೇ ರೀತಿಯ ನ್ಯಾಯ ಸಿಕ್ಕಿರಲಿಲ್ಲ.

    ತಾಯಿಯ ಸಂಕಟವನ್ನು ನೋಡಿದ ಬಾಲಕಿ ರೇಖಾ, ಕಳೆದ 15 ದಿನಗಳ ಹಿಂದೆ ಧಾರವಾಡ ನಗರದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ದಿನದಂದು ಜಿಲ್ಲಾ ನ್ಯಾಯಾಧೀಶರ ಗಮನ ಸೆಳೆದಿದ್ದಳು. ನ್ಯಾಯಾಧೀಶರು ಬಾಲಕಿಯ ಸಮಸ್ಯೆಯನ್ನ ಅರಿತು ನ್ಯಾಯಾಲಯಕ್ಕೆ ಬಂದು ಭೇಟಿ ಮಾಡಲು ಹೇಳಿದ್ದರು. ಅದರಂತೆ ಈ ಬಾಲಕಿ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಅವರನ್ನ ಭೇಟಿ ಮಾಡಿದಾಗ ನ್ಯಾಯಾಧೀಶರು ಪೊಲೀಸರಿಗೆ ಪತ್ರ ಬರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದರು.

    ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ಅಜೀಜ್‍ಸಾಬ್ ಗೆ ಸಾವಕ್ಕ ಅವರು ನೀಡಬೇಕಿದ್ದ ಹಣವನ್ನು ಹಿಂದಿರುಗಿಸಿ ಅವರ ಜಮೀನನ್ನು ಮತ್ತೆ ವಾಪಸ್ ಕೊಡಿಸಿದ್ದಾರೆ. ಈ ಎಲ್ಲ ಸಮಸ್ಯೆ ಸುಖಾಂತ್ಯ ಕಾಣಲು ಬಾಲಕಿ ರೇಖಾ ಮೈಸೂರ ಮಾಡಿದ ದಿಟ್ಟ ಕಾರ್ಯ ಪ್ರಮುಖ ಕಾರಣವಾಗಿದ್ದು, ತನ್ನ ತಾಯಿಗೆ ನ್ಯಾಯ ಸಿಗುವಂತೆ ಮಾಡಿದ್ದಾಳೆ.

    ಪ್ರಸ್ತುತ ಬಾಲಕಿ ರೇಖಾ ಮೈಸೂರ ಹೋರಾಟ ಮುಂದುವರೆದಿದೆ. 6 ವರ್ಷಗಳ ಹಿಂದೆ ಬಾಲಕಿಯ ತಂದೆ ಮಲ್ಲಿಕಾರ್ಜುನ ಕುಟುಂಬವನ್ನು ಬಿಟ್ಟು ಹೋಗಿದ್ದು, ಮತ್ತೆ ತಂದೆಯನ್ನ ಮನೆಗೆ ಕರೆ ತಂದು, ತಾಯಿಗೆ ಆದ ಅನ್ಯಾಯವನ್ನು ಸರಿಪಡಿಸುವವರೆಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾಳೆ.

     

  • ಬೆಳಕು ಇಂಪ್ಯಾಕ್ಟ್: ತಾಯಿ-ಮಗಳಿಗೆ ಜೀವನ ನಡೆಸಲು ಸಿಕ್ತು ಆಸರೆ

    ಬೆಳಕು ಇಂಪ್ಯಾಕ್ಟ್: ತಾಯಿ-ಮಗಳಿಗೆ ಜೀವನ ನಡೆಸಲು ಸಿಕ್ತು ಆಸರೆ

    ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದ ಬಡಕುಟುಂಬದ ಕಥೆ. ಫಜಲುನಿಸ್ಸ್ ಬಡೇಮಿಯ್ಯಾ ಹುಟ್ಟುತ್ತಾ ಅಂಧೆ, ತಾಯಿ ಶಕುಂದಿ ಬಡೇಮಿಯ್ಯಾಗೆ 70 ವರ್ಷ, ತಂದೆ ತೀರಿ ಹೋಗಿದ್ದಾರೆ. ವಯಸ್ಸಾದ ಅಂಧ ಮಗಳಿಗೆ 70ರ ತಾಯಿಯೇ ಆಸರೆ.

    ಕಳೆದ 20 ವರ್ಷಗಳಿಂದ ತಾಯಿ ಮತ್ತು ಮಗಳು ಬಳೆ ವ್ಯಾಪಾರ ಹಾಗೂ ಜಾಕೇಟ್ ಪೀಸ್ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಲ್ಲದೇ ಪ್ರತಿ ತಿಂಗಳು ಸರ್ಕಾರದಿಂದ ಬರುವ ಅಂಗವಿಕಲ ವೇತನ 1200 ರೂಪಾಯಿ ತೆಗೆದುಕೊಂಡು ತಮ್ಮ ತುತ್ತಿನ ಚೀಲವನ್ನ ತುಂಬಿಸಿಕೊಳ್ತಿದ್ದರು.

    ಮಗಳು ಫಜಲುನಿಸ್ಸ್ ಬಡೇಮಿಯ್ಯಾ ಮತ್ತು ತಾಯಿ ಶಕುಂದಿ ಬಡೇಮಿಯ್ಯಾ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಬಂದು ಸ್ವಾಭಿಮಾನದ ಜೀವನ ನಡೆಸಲು ಸೀರೆ ವ್ಯಾಪಾರಕ್ಕೆ ಸಹಾಯ ಮಾಡಿ ಎಂದು ಕೇಳಿ ಕೊಂಡಿದ್ದರು. ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು 25 ಸಾವಿರ ರೂ. ಬೆಲೆ ಬಾಳುವ ಸೀರೆಗಳನ್ನು ಒದಗಿಸಿದ್ದು, ತಾಯಿ-ಮಗಳ ಕನಸು ಇಂದು ನನಸಾಗಿದೆ. ಈಗ ವಯಸ್ಸಾದ ತಾಯಿ ಮತ್ತು ಅಂಧ ಮಗಳು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ ಸಂತಸದಿಂದ ಇದ್ದಾರೆ. ಸಹಾಯ ಮಾಡಿದ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಧನ್ಯವಾದ ಹೇಳಿದ್ದಾರೆ.

    ಸ್ವಾಭಿಮಾನದ ಜೀವನಕ್ಕಾಗಿ ವ್ಯಾಪಾರ ಮಾಡುತ್ತಿರುವ ವಯಸ್ಸಾದ ತಾಯಿ ಮತ್ತು ಅಂಧೆ ಮಗಳು ಸಂತಸಗೊಂಡಿದ್ದಾರೆ. ಇವರ ವ್ಯಾಪಾರದಲ್ಲಿ ಅಭಿವೃದ್ಧಿಗೊಂಡು ನೆಮ್ಮದಿ ಜೀವನ ಮಾಡಲಿ ಎಂಬುದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಆಶಯ.

  • ಕುಡಿದ ಮತ್ತಿನಲ್ಲಿ ತಾಯಿ ಸಹೋದರನ ಮೇಲೆಯೇ ಗುಂಡು ಹಾರಿಸಿದ್ಳು!

    ಕುಡಿದ ಮತ್ತಿನಲ್ಲಿ ತಾಯಿ ಸಹೋದರನ ಮೇಲೆಯೇ ಗುಂಡು ಹಾರಿಸಿದ್ಳು!

    ನವದೆಹಲಿ: ಕುಡಿದ ಮತ್ತಿನಲ್ಲಿದ್ದ 47 ವರ್ಷದ ಮಹಿಳೆಯೊಬ್ಬಳು ತನ್ನ ತಾಯಿ ಹಾಗೂ ಸಹೋದರನ ಮೇಲೆಯೇ ಗುಂಡು ಹಾರಿಸಿದ ಆಘಾತಕಾರಿ ಘಟನೆ ನಡೆದಿದೆ.

    ಈ ಘಟನೆ ದೆಹಲಿಯ ಡಿಫೆನ್ಸ್ ಕಾಲೊನಿಯಲ್ಲಿ ಗುರುವಾರ ಮಧ್ಯರಾತ್ರಿ ಸುಮಾರು 12.43ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ.

    ಆರೋಪಿ ಮಹಿಳೆಯನ್ನು ಸಂಗೀತ ಎಂದು ಗುರುತಿಸಲಾಗಿದ್ದು, ಈಕೆ ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಳು ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

    ಮಗಳ ಗುಂಡಿನ ದಾಳಿಯ ಪರಿಣಾಮ ತಾಯಿ ಗೀತಾ ಹಾಗೂ ಮಗ ಹರಸರಮ್ ಅಪಾಯದಿಂದ ಪಾರಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆ ತಾರಕಕ್ಕೇರಿ ಸಂಗೀತಾ ಗುಂಡಿನ ದಾಳಿ ನಡೆಸಿರಬಹುದು. ಪ್ರಕರಣ ಸಂಬಂಧ ತನಿಗೆ ನಡೆಯುತ್ತಿದ್ದು, ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿರುವುದರಿಂದ ಅವರ ಹೇಳಿಕೆ ಪಡೆಯಲು ವೈದ್ಯರ ಅನುಮತಿಗಾಗಿ ಕಾಯುತ್ತಿದ್ದೇವೆ ಅಂತ ಪೊಲೀಸರು ತಿಳಿಸಿದ್ದಾರೆ.

    ಗುರುವಾರ ರಾತ್ರಿ ಸುಮಾರು 12.43ರ ವೇಳೆಗೆ ಗುಂಡಿನ ದಾಳಿಯಾಗಿರೋ ಕುರಿತು ಮಾಹಿತಿಯೊಂದು ಬಂದಿತ್ತು. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದಾಗ ಗುಂಡು ಹಾರಿಸಿದ ಮಹಿಳೆ ಮತ್ತು ಆಕೆಯ ತಾಯಿ, ಸಹೋದರನ ಮಧ್ಯೆ ಜೋರಾಗಿ ವಾಗ್ವಾದಗಳು ನಡೆಯುತ್ತಿದ್ದವು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಇನ್ನು ಆರೋಪಿ ಸಂಗೀತಾಳನ್ನು ಹಾಗೂ ಅವಳ ಕೈಯಲ್ಲಿದ್ದ ಪಿಸ್ತೂಲ್ ಕೂಡ ವಶಕ್ಕೆ ಪಡೆಯಲಾಗಿದೆ ಅಂತ ದೆಹಲಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

    ಘಟನೆ ಸಂಬಂಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

  • ತಾಯಿ ಮೇಲಿನ ಸೇಡಿಗೆ ಮಗನನ್ನ ಕತ್ತು ಸೀಳಿ ಕೊಂದ ಕಿರಾತಕ

    ತಾಯಿ ಮೇಲಿನ ಸೇಡಿಗೆ ಮಗನನ್ನ ಕತ್ತು ಸೀಳಿ ಕೊಂದ ಕಿರಾತಕ

    ಬೆಂಗಳೂರು: ಪರಸ್ತ್ರೀಯೊಂದಿಗಿನ ಸಂಬಂಧದ ಬಗ್ಗೆ ದೂರು ಹೇಳಿದ ಕೋಪಕ್ಕೆ ವ್ಯಕ್ತಿಯೊಬ್ಬ ನೆರೆಮನೆಯಲ್ಲಿ ವಾಸವಿದ್ದ ಮಹಿಳೆಯ ಮಗನನ್ನ ಕತ್ತು ಕೊಯ್ದು ಕೊಲೆ ಮಾಡಿದ್ದು, ಇದೀಗ ನ್ಯಾಯಾಲಯ ಆತನನ್ನು ದೋಷಿ ಎಂದು ಪ್ರಕಟಿಸಿದೆ.

    ಏನಿದು ಪ್ರಕರಣ?: 2015ರ ಫೆಬ್ರವರಿ 4ರಂದು ಶಾಲೆಗೆ ಹೋಗಿದ್ದ 8ನೇ ತರಗತಿ ಕಿರಣ್ ಎಂಬ ಬಾಲಕ ಸಂಜೆಯಾದರೂ ಮನೆಗೆ ಬರಲಿಲ್ಲ. ಮಗ ಮನೆಗೆ ಬರದೇ ಇದ್ದಿದ್ದರಿಂದ ಗಾಬರಿಗೊಂಡ ಪೋಷಕರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ಮುದ್ದು ಮುದ್ದಾಗಿದ್ದ ಬಾಲಕ ಕಿರಣ್ ಯಾದವ್‍ನನ್ನ ಹುಡುಕ್ತಿದ್ದ ಪೊಲೀಸರಿಗೆ ಅದೊಂದು ಸಿಸಿಟಿವಿ ಕ್ಲೂ ಕೊಟ್ಟಿತ್ತು. ಬಾಲಕನ ಎದರು ಮನೆಯಲ್ಲೇ ಇದ್ದ ಮಂಜುನಾಥ್ ಜೊತೆ ಕಿರಣ್ ಬೈಕಿನಲ್ಲಿ ಹೋಗೋದು ಪತ್ತೆಯಾಗಿತ್ತು.

    ಮಂಜುನಾಥನ ವಿಚಾರಣೆ ನಡೆಸಿದಾಗ ಮೊದಲು ನನಗೆ ಏನೂ ಗೊತ್ತಿಲ್ಲ ಅಂತಾ ಹೇಳಿದ್ದ. ಆದರೆ ಪೊಲೀಸರು ತಮ್ಮದೇ ಸ್ಟೈಲಲ್ಲಿ ಬೆಂಡೆತ್ತಿದಾಗ ಎಲ್ಲಾ ಬಾಯಿ ಬಿಟ್ಟಿದ್ದ. ನಿನ್ನ ತಮ್ಮನಿಗೆ ಆಕ್ಸಿಡೆಂಟ್ ಆಗಿದೆ. ನಿಮ್ಮವರೆಲ್ಲಾ ಆಸ್ಪತ್ರೆಯಲ್ಲಿದ್ದಾರೆ ಬಾ ಅಂತಾ ಕಿರಣ್‍ನನ್ನ ಬೈಕ್‍ನಲ್ಲಿ ಮಂಜುನಾಥ್ ಕರೆದುಕೊಂಡು ಹೋಗಿದ್ದ. ನಂತರ ಕಿರಣ್ ನನ್ನು ಜ್ಞಾನಭಾರತಿ ಬಳಿ ಕತ್ತು ಕೊಯ್ದು ಕೊಲೆ ಮಾಡಿದ್ದ. ಮಂಜುನಾಥ ಸತ್ಯ ಬಾಯ್ಬಿಡುವ ವೇಳೆಗಾಗಲೇ ಒಂದು ವಾರ ಕಳೆದಿತ್ತು. ಕೂಡಲೇ ಚಂದ್ರಾಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ಕಿರಣ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಕೂಲ್ ಬ್ಯಾಗ್, ಐಡಿ ಕಾರ್ಡ್ ಅಲ್ಲೇ ಬಿದ್ದಿತ್ತು. ಬ್ಲೇಡ್ ಕೂಡ ಸ್ಥಳದಲ್ಲೇ ಸಿಕ್ಕಿತ್ತು.

    ತಾಯಿಯ ಮೇಲೆ ಕೋಪ: ಮಂಜುನಾಥ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ನಿಮ್ಮ ಮಗನಿಗೆ ಬುದ್ಧಿ ಹೇಳಿ ಅಂತಾ ಕಿರಣ್ ತಾಯಿ ಪ್ರಮೀಳಾ ಮಂಜುನಾಥನ ಮನೆಯವರಿಗೆ ಹೇಳಿದ್ದರು. ಇದೇ ಕಾರಣಕ್ಕಾಗಿ ಪ್ರಮೀಳಾರಿಗೆ ಬುದ್ಧಿ ಕಲಿಸಲು ಕಿರಣ್‍ನನ್ನು ಮಂಜುನಾಥ ಕೊಲೆ ಮಾಡಿದ್ದಾನೆ.

    ಚಂದ್ರಾಲೇಔಟ್‍ನ ಅಂದಿನ ಇನ್ಸ್ ಪೆಕ್ಟರ್ ಸುದರ್ಶನ್ ಬಲವಾಗೇ ಚಾರ್ಜ್ ಶೀಟ್ ಹಾಕಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಂಎನ್ ವಾರದ್ ವಾದ ಮಂಡಿಸಿದ್ರು. ಸಿಸಿಎಚ್ 51ರ ಜಡ್ಜ್ ಸುಶೀಲಾ, ಮಂಜುನಾಥ ದೋಷಿ ಅಂತಾ ಘೋಷಿಸಿದ್ದು, ಇದೇ 21ರಂದು ಶಿಕ್ಷೆ ಪ್ರಕಟವಾಗಲಿದೆ.

  • ಗಂಡು ಮಗುವೇ ನಮ್ಮದು ಎಂದು ಪಟ್ಟು – ತಾಯಂದಿರ ಜಗಳಕ್ಕೆ ಕೂಸುಗಳಿಗಿಲ್ಲ ಎದೆಹಾಲು

    ಗಂಡು ಮಗುವೇ ನಮ್ಮದು ಎಂದು ಪಟ್ಟು – ತಾಯಂದಿರ ಜಗಳಕ್ಕೆ ಕೂಸುಗಳಿಗಿಲ್ಲ ಎದೆಹಾಲು

    ಕಲಬುರಗಿ: ಹೆತ್ತ ತಾಯಂದಿರೇ ಗಂಡು ಮಗುವಿಗಾಗಿ ಜಿದ್ದಿಗೆ ಬಿದ್ದು ಕರುಳ ಕುಡಿಗಳಿಗೆ ಎದೆಹಾಲು ಕೊಡ್ತಿಲ್ಲ.

    ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಾಲ್ಕು ದಿನಗಳ ಹಿಂದೆ ಮಕ್ಕಳು ಅದಲು ಬದಲು ಪ್ರಕರಣ ನಡೆದಿತ್ತು. ಆ ಪ್ರಕರಣ ಇಂದಿಗೂ ಇತ್ಯರ್ಥವಾಗದ ಹಿನ್ನಲೆಯಲ್ಲಿ ಎರಡು ಕಂದಮ್ಮಗಳು ತಾಯಿಯ ಹಾಲಿಗಾಗಿ ಪರಿದಾಡುತ್ತಿವೆ. ಸಮಸ್ಯೆಗೆ ಪರಿಹರಿಸಬೇಕಾದ ವೈದ್ಯರು ಇದೀಗ ಪೊಲೀಸರತ್ತ ಬೊಟ್ಟು ಮಾಡಿದ್ದಾರೆ.

    ಎದೆಹಾಲಿನಿಂದ ವಂಚಿತವಾಗಿ ಅಳುತ್ತಾ ಮಲಗಿರುವ ಕಂದಮ್ಮಗಳು, ಮತ್ತೊಂದೆಡೆ ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿನಿಂದ ಮಕ್ಕಳಿದ್ದರೂ ಸಹ ಮಕ್ಕಳನ್ನ ಕಳೆದುಕೊಂಡ ತಾಯಂದಿರು. ಈ ದೃಶ್ಯ ಕಂಡು ಬಂದಿದ್ದು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ. ಡಿಸೆಂಬರ್ 14ರಂದು ರಾತ್ರಿ 10.20ಕ್ಕೆ ನಂದಮ್ಮ ಮತ್ತು 10.25ಕ್ಕೆ ನಾಜ್ಮಿನ್ ಎಂಬ ಇಬ್ಬರು ಮಹಿಳೆಯರ ಹೆರಿಗೆಯಾಗಿದೆ.

    ನಂತರ ಪೊಷಕರಿಗೆ ಮಗು ತೋರಿಸುವಾಗ ಆಸ್ಪತ್ರೆಯ ಸಿಬ್ಬಂದಿ ಅದಲು ಬದಲು ಮಾಡಿ ಎರಡು ಕಡೆಯವರಿಗೆ ಇಕಟ್ಟಿಗೆ ಸಿಲುಕಿಸಿದ್ದಾರೆ. ಆದ್ರೆ ಗಂಡು ಮಗು ನಮ್ಮದು ಅಂತಾ ನಂದಮ್ಮ ಮತ್ತು ನಾಜ್ಮಿನ್ ಕುಟುಂಬದವರು ಪಟ್ಟು ಹಿಡಿದಿದ್ದು, ಇಬ್ಬರೂ ಸಹ ಕಂದಮ್ಮಗಳಿಗೆ ಕಳೆದ ಐದು ದಿನಗಳಿಂದ ಹಾಲುಣಿಸುತ್ತಿಲ್ಲ. ಹೀಗಾಗಿ ಈ ತಾಯಂದಿರ ಜಗಳದಲ್ಲಿ ಕಂದಮ್ಮಗಳು ಅನಾಥವಾಗಿವೆ.

    ಈಗಾಗಲೇ ಎರಡು ಕಂದಮ್ಮಗಳ ರಕ್ತ ಪರೀಕ್ಷೆ ನಡೆಸಿ ಗಂಡು ಮಗು ನಾಜ್ಮಿನ್‍ಗೆ ಸೇರಿದ್ದು ಅಂತಾ ವೈದ್ಯರು ಹೇಳಿದ್ದಾರೆ. ಆದರೆ ನಂದಮ್ಮ ಕುಟುಂಬವದರು ಗಂಡು ಮಗು ನಮಗೆ ಸೇರಿದ್ದು ಅಂತಾ ಪಟ್ಟು ಹಿಡಿದಿದ್ದಾರೆ. ಇದು ವೈದ್ಯರಿಗೆ ತಲೆ ನೋವಾಗಿದ್ದು ಪ್ರಕರಣವನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಇನ್ನು ಈ ಕುರಿತು ಕಲಬುರಗಿ ಎಸ್‍ಪಿ ಎನ್.ಶಶಿಕುಮಾರ್ ಇನ್ನೊಮ್ಮೆ ಬೇರೆಡೆ ರಕ್ತ ಪರೀಕ್ಷೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದ್ದಾಗಿ ಹೇಳುತ್ತಿದ್ದಾರೆ.

    ಆಸ್ಪತ್ರೆ ಸಿಬ್ಬಂದಿಯ ಮಹಾ ಎಡವಟ್ಟಿನಿಂದ ಇದೀಗ ಆ ಎರಡು ಮಕ್ಕಳು ತಾಯಿಯ ಎದೆಹಾಲಿನಿಂದ ವಂಚಿತವಾಗಿವೆ.

  • ಅಪ್ಪನಿಗೆ ಹೇಳ್ತೀನಿ ಎಂದಿದ್ದಕ್ಕೆ ತಾಯಿ, ಲವ್ವರ್ ಸೇರಿ 6ರ ಬಾಲಕಿಯನ್ನು ಕತ್ತು ಸೀಳಿ ಕೊಂದೇಬಿಟ್ರು!

    ಅಪ್ಪನಿಗೆ ಹೇಳ್ತೀನಿ ಎಂದಿದ್ದಕ್ಕೆ ತಾಯಿ, ಲವ್ವರ್ ಸೇರಿ 6ರ ಬಾಲಕಿಯನ್ನು ಕತ್ತು ಸೀಳಿ ಕೊಂದೇಬಿಟ್ರು!

    ನವದೆಹಲಿ: ತಾಯಿ ಹಾಗೂ ಆಕೆಯ ಪ್ರಿಯತಮ ಸೇರಿ 6 ವರ್ಷದ ಬಾಲಕಿಯನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ಪೂರ್ವ ದೆಹಲಿಯ ಘಾಜಿಪುರ್ ಎಂಬಲ್ಲಿ ಬುಧವಾರದಂದು ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸುಧೀರ್(23) ಎಂಬಿಬ್ಬರನ್ನು ಗುರುವಾರ ಬಂಧಿಸಿರುವುದಾಗಿ ಪೊಲೀಸ್ ಆಯಕ್ತ ಓಮ್ವೀರ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಏನಿದು ಪ್ರಕರಣ?: ದೆಹಲಿಯ ಘಾಜಿಪುರ್ ನಲ್ಲಿ ಮಹಿಳೆ ತನ್ನ ಗಂಡ ಹಾಗೂ ಇಬ್ಬರು ಗಂಡು ಹಾಗೂ ಹೆಣ್ಣು ಮಗುವಿನೊಂದಿಗೆ ವಾಸವಾಗಿದ್ದಳು. ಮಹಿಳೆಯ ಪತಿ ಬಂಡಿ ಎಳೆಯುವ ಕೆಲಸ ಮಾಡುತ್ತಿದ್ದರು. ಆರೋಪಿ ಸುಧೀರ್ ಕಾರ್ಮಿಕನಾಗಿದ್ದು, ಇವರ ಮನೆಯ ಹತ್ತಿರದಲ್ಲೇ ವಾಸವಾಗಿದ್ದ. ಮಹಿಳೆ ಸುಧೀರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಮಹಿಳೆಯ ಪತಿ ಬುಧವಾರ ಸಂಜೆ ಮದ್ಯಪಾನ ಮಾಡಲು ಬಾರ್‍ಗೆ ಹೋಗಿದ್ದಾಗ ಸುಧೀರ್ ಮಹಿಳೆಯ ಮನೆಗೆ ಬಂದಿದ್ದ. ಈ ವೇಳೆ 4 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳು ಕೋಣೆಯಲ್ಲಿ ಟಿವಿ ನೋಡುತ್ತಿದ್ದರು. ಆದ್ರೆ ಹೆಣ್ಣು ಮಗಳು ತನ್ನ ಅಮ್ಮ ಸುಧೀರ್ ಜೊತೆ ಸರಸ ಸಲ್ಲಾಪದಲ್ಲಿರುವುದನ್ನ ನೋಡಿದ್ದಳು. ಅಲ್ಲದೇ ನಾನು ಇದನ್ನು ಅಪ್ಪನಿಗೆ ಹೇಳುತ್ತೇನೆ ಎಂದಿದ್ದಳು.

    ಇದರಿಂದ ಅತಂಕಗೊಂಡ ತಾಯಿ ಮತ್ತು ಆಕೆಯ ಪ್ರಿಯಕರ ಮಗಳನ್ನು ಕೊಲೆ ಮಾಡಲು ಯೋಜನೆ ಹಾಕಿದ್ರು. ಅಂತೆಯೇ ಪಕ್ಕದ ಮನೆಯ ಟೆರೇಸ್ ಗೆ ಕರೆದುಕೊಂಡು ಹೋಗಿ ಅಮ್ಮ ಹಾಗೂ ಪ್ರಿಯಕರ ಸೇರಿ ಚಾಕುವಿನಿಂದ ಕತ್ತನ್ನು ಸೀಳಿ ಬಾಲಕಿಯನ್ನು ಕೊಲೆಗೈದಿದ್ದಾರೆ. ಸುಧೀರ್ ಮಗುವಿನ ಕತ್ತು ಸೀಳಿದ್ರೆ ಮಹಿಳೆ ಮಗಳ ಕೈಗಳನ್ನ ಹಿಡಿದುಕೊಂಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಕೃತ್ಯ ಎಸಗಿದ ಬಳಿಕ ಸುಧೀರ್ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ಬಾಲಕಿ ನಾಪತ್ತೆಯಾಗಿದ್ದಾಳೆ ಅಂತ ಮಹಿಳೆ ಅಕ್ಕಪಕ್ಕದ ಮನೆಯವರಿಗೆ ಹೇಳಿದ್ದಾಳೆ. ನಂತರ ಗಂಡ ಹಾಗೂ ಇತರರ ಜೊತೆ ಸೇರಿ ಮಗಳನ್ನು ಹುಡುಕೋ ನಾಟಕವಾಡಿದ್ದಾಳೆ.

    ರಾತ್ರಿ 10 ಗಂಟೆ ಸುಮಾರಿಗೆ ಬಾಲಕಿ ನಾಪತ್ತೆಯಾಗಿರೋ ಬಗ್ಗೆ ಪೊಲೀಸರಿಗೂ ಕರೆ ಮಾಡಿ ತಿಳಿಸಿದ್ದಾರೆ. ಹೀಗಾಗಿ ಕೂಡಲೆ ಪೊಲೀಸರು ತಂಡಗಳನ್ನು ರಚಿಸಿ ಬಾಲಕಿಯ ಹುಡುಕಾಟ ಆರಂಭಿಸಿದ್ದಾರೆ. ತಡರಾತ್ರಿ ಸುಮಾರು 1.30ರ ವೇಳೆಗೆ ನೆರಮನೆಯ ಟೆರೇಸ್ ನಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ. ಕೂಡಲೇ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಅದಾಗಲೇ ಬಾಲಕಿ ಮೃತಪಟ್ಟಿದ್ದಾಳೆ ಅಂತ ವೈದ್ಯರು ತಿಳಿಸಿದ್ದಾರೆ. ಬಳಿಕ ಪೊಲೀಸರು ಘಾಜಿಪುರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪ್ರಕರಣದ ಸಂಬಂಧ ವಿಚಾರಣೆ ಮಾಡುವ ವೇಳೆ ಆರೋಪಿ ಮಹಿಳೆ ತಾನೇನೂ ಮಾಡೇ ಇಲ್ಲ ಎಂಬಂತೆ ಆರಾಮಾಗಿ ಇದ್ದಳು. ಆದ್ರೆ ಈಕೆಗೆ ಸುಧೀರ್ ಜೊತೆ ಅಕ್ರಮ ಸಂಬಂಧವಿತ್ತು ಎಂದು ನೆರೆಮನೆಯವರು ಮಾಹಿತಿ ನೀಡಿದ್ದು, ಮಹಿಳೆ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ನಂತರ ಇಬ್ಬರನ್ನೂ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಆರೋಪಿ ಮಹಿಳೆ ತನ್ನ 4 ವರ್ಷದ ಗಂಡು ಮಗನಿಗೆ, ನಿನ್ನ ತಂಗಿಯನ್ನು ದೆವ್ವ ಹೊತ್ತುಕೊಂಡು ಹೋಗಿದೆ ಎಂದು ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  • ಆಸ್ತಿ ಕೇಳಿದ್ದಕ್ಕೆ ಮಗನನ್ನೇ ಕೊಂದ ತಾಯಿ

    ಆಸ್ತಿ ಕೇಳಿದ್ದಕ್ಕೆ ಮಗನನ್ನೇ ಕೊಂದ ತಾಯಿ

    ಹುಬ್ಬಳ್ಳಿ: ಆಸ್ತಿಗಾಗಿ ಹೆತ್ತ ತಾಯಿಯೇ ಮಗನನ್ನು ಕೊಲೆ ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ನಗರದ ಅರಳಿಕಟ್ಟೆ ಕಾಲೋನಿಯ 30 ವರ್ಷದ ಇಮ್ರಾನ್ ನೂರ್ ಅಹ್ಮದ್ ಕೊಲೆಯಾದ ದುರ್ದೈವಿ. ತಾಯಿ ಮೌಸಂಬಿ ಹಾಗೂ ಸಂಬಂಧಿಕರು ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ಇಮ್ರಾನ್ ನನ್ನು ಕೊಲೆ ಮಾಡಲಾಗಿದೆ ಎಂದು ಮೃತನ ಪತ್ನಿಯ ಸಂಬಂಧಿಕರು ಆರೋಪಿಸಿದ್ದಾರೆ. ಇಮ್ರಾನ್ ನನ್ನು ಮನೆಯಲ್ಲಿಯೇ ಕತ್ತು ಹಿಸುಕಿ ಕೊಲೆ ಮಾಡಿ ನಂತರ ಸಹಜ ಸಾವು ಎಂದು ಬಿಂಬಿಸಲಾಗಿತ್ತು.

    ಹಾಗಾಗಿ ಮೃತನ ಪತ್ನಿಯ ಸಂಬಂಧಿಕರು ಶಹರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಶವವನ್ನು ಪರೀಕ್ಷೆಗೆ ಒಳಪಡೆಸಲಾಗಿದೆ.

  • ತಾಯಿಯೇ 8 ದಿನದ ಹಸುಗೂಸನ್ನ ಟವಲ್‍ನಿಂದ ಸುತ್ತಿ ಕೊಂದ್ಳು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

    ತಾಯಿಯೇ 8 ದಿನದ ಹಸುಗೂಸನ್ನ ಟವಲ್‍ನಿಂದ ಸುತ್ತಿ ಕೊಂದ್ಳು! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

    ತಿರುವಂತನಪುರಂ: ತಾಯಿಯೇ ದೇವರು ಎಂಬ ಮಾತಿದೆ. ಅಂತಹ ತಾಯಿಯೇ ತನ್ನ ಹಸುಗೂಸನ್ನು ಟವಲ್‍ನಿಂದ ಕತ್ತನ್ನು ಸುತ್ತಿ ಕೊಲೆ ಮಾಡಿರುವ ಘಟನೆ ಕೇರಳದ ಕಟ್ಟಪಣ ಸಮೀಪದ ಮುರಿಕ್ಕಟ್ಟುಕುಡಿ ಗ್ರಾಮದಲ್ಲಿ ನಡೆದಿದೆ.

    ಮುರಿಕ್ಕಟ್ಟುಕುಡಿಯ ಕಂಡತಿಂಕರ ಬಿನು ಎಂಬಾತನ ಪತ್ನಿ ಸಂಧ್ಯಾ (28) ಈ ಕೃತ್ಯವನ್ನು ಮಾಡಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ಮಗುವಿನ ಕುತ್ತಿಗೆಯನ್ನು ಟವಲ್‍ನಿಂದ ಸುತ್ತಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊಲೆಗೆ ಕಾರಣವೇನು?: ಮಗು ನನ್ನ ಬಣ್ಣ ಹಾಗೂ ಗಂಡನ ಮುಖ ಲಕ್ಷಣವನ್ನು ಹೊಂದಿಲ್ಲವೆಂದು ನಾನೇ ಕೊಂದಿದ್ದೇನೆ ಎಂದು ಆರೋಪಿ ಸಂಧ್ಯಾ ಒಪ್ಪಿಕೊಂಡಿದ್ದಾಳೆ. ಮಗುವನ್ನ ಮನೆಯ ಒಳಗಡೆ ಕೊಂದು, ನಂತರ ಪತಿಗೆ ಮಗು ಚಲನವಲನ ಮಾಡುತ್ತಿಲ್ಲ ಎಂದು ತಿಳಿಸಿದ್ದಾಳೆ.

    ಈ ವೇಳೆ ಆತಂಕಗೊಂಡ ಪತಿ ಕೂಡಲೆ ಮನೆಗೆ ಬಂದು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ. ವೈದ್ಯರು ಮಗುವನ್ನು ಪರೀಕ್ಷಿಸುವ ವೇಳೆ ಮಗುವಿನ ಕುತ್ತಿಗೆ ಮೇಲಿನ ಗುರುತುಗಳು ಕಂಡು ಬಂದಿದೆ. ವೈದ್ಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.

    ಈ ದಂಪತಿಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಇವರಿಗೆ 9 ವರ್ಷದ ಮಗುವೂ ಕೂಡ ಇದೆ. ಪೊಲೀಸರು ಸಂಧ್ಯಾಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.