Tag: mother

  • ‘ಅಂಗವೈಕಲ್ಯ’ ಅಂತ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವನ್ನು ಬಿಟ್ಟು ಹೋದ ದಂಪತಿ

    ‘ಅಂಗವೈಕಲ್ಯ’ ಅಂತ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವನ್ನು ಬಿಟ್ಟು ಹೋದ ದಂಪತಿ

    ಚಿಕ್ಕಬಳ್ಳಾಪುರ: ಮಗು ಅಂಗವೈಕಲ್ಯದಿಂದ ಹುಟ್ಟಿದೆ ಎಂದು ದಂಪತಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ಹಳ್ಳಿಯೊಂದರ ಮಹಿಳೆ ಹೆರಿಗೆಗೆಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಹುಟ್ಟಿದ ಮಗುವಿನ ಬಲ ಗೈ ಹಾಗೂ ಎಡ ಕಾಲಿನಲಲ್ಲಿ ಬೆರಳುಗಳಿಲ್ಲದೆ ಹುಟ್ಟಿದ್ದು ಆರೋಗ್ಯವಾಗಿಯೇ ಇದೆ. ಆದ್ರೆ ಅಂಗವೈಕಲ್ಯದಿಂದ ಹುಟ್ಟಿದ ಮಗು ತಮಗೆ ಬೇಡ ಅಂತ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಆಸ್ಪತ್ರೆಯಲ್ಲೇ ಹುಟ್ಟಿದ ಮಗುವನ್ನ ಅನಾಥ ಮಾಡಿ ಬಿಟ್ಟು ಹೋಗಿದ್ದಾರೆ.

    ನವಜಾತ ಮಗುವನ್ನು ಈ ರೀತಿ ಬಿಟ್ಟುಹೋಗುವುದು ಸರಿಯಲ್ಲ, ಕೆಲ ದಿನಗಳ ಕಾಲ ಕನಿಷ್ಠ ಎದೆ ಹಾಲು ಆದರೂ ಮಗುವಿಗೆ ಉಣಿಸಿ, ಮತ್ತೆ ಮಗು ಬೇಡವಾದ್ರೇ ವಾಪಾಸ್ ತಂದು ಕೊಡಿ ಅಂತ ಅಧಿಕಾರಿಗಳು ಹಾಗೂ ವೈದ್ಯರು ದಂಪತಿಗೆ ಪರಿ ಪರಿಯಾಗಿ ಮನವಿ ಮಾಡಿದ್ರೂ ದಂಪತಿಯ ಮನಸ್ಸು ಮಾತ್ರ ಕರಗಿಲ್ಲ. ದಂಪತಿಯ ಈ ನಡೆಗೆ ಎಲ್ಲೆಡೆ ಅಸಮಾಧಾನ ವ್ಯಕ್ತವಾಗಿದೆ.

  • ಕಾಣೆಯಾದ ಬುದ್ಧಿಮಾಂದ್ಯ ಮಗನಿಗಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ ತಾಯಿ

    ಕಾಣೆಯಾದ ಬುದ್ಧಿಮಾಂದ್ಯ ಮಗನಿಗಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ ತಾಯಿ

    ಬೆಂಗಳೂರು: ಇದೊಂದು ಕರುಣಾಜನಕ ಕಥೆ. ಕಿವಿ ಕೇಳದ ಹಾಗೂ ಮಾತು ಬಾರದ ಬುದ್ಧಿಮಾಂದ್ಯ ಮಗನಿಗಾಗಿ ತಾಯಿಯೊಬ್ಬರು ಬೀದಿ ಬೀದಿಯಲ್ಲಿ ಹುಡುಕಾಟ ನಡೆಸುತ್ತಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಕುಮಾರಸ್ವಾಮಿ (19) ಕಾಣೆಯಾದ ಯುವಕ. ಇವರು ಮೂಲತಃ ಕೊಳ್ಳೇಗಾಲದವನಾಗಿದ್ದು, ಇವರಿಗೆ ಕಿವಿ ಕೇಳಿಸುತ್ತಿಲ್ಲ. ಮಾತು ಕೂಡ ಬರುತ್ತಿಲ್ಲ. ಹೀಗಾಗಿ ಇಂತಹವರಿಗಾಗಿಯೇ ಇರುವ ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯ ಸಮರ್ಥನಂ ಟ್ರಸ್ಟ್ ನಲ್ಲಿ ಪೋಷಕರು ಸೇರಿಸಿದ್ದರು.

    ಬೆಂಗಳೂರಿನಲ್ಲೇ ಮನೆ ಕೆಲಸ ಮಾಡಿಕೊಂಡು ಆಗಾಗ ಹೋಗಿ ಮಗನನ್ನು ನೋಡಿಕೊಂಡು ಬಂದು ಸ್ಬಲ್ಪ ನೆಮ್ಮದಿಯಿಂದಿದ್ದರು. ಆದರೆ ಕಳೆದ ಜನವರಿ 21ರಂದು ಟ್ರಸ್ಟ್ ನಿಂದ ಕುಮಾರಸ್ವಾಮಿ ಕಾಣೆಯಾಗಿದ್ದಾರೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದಾರೆ ಎನ್ನಲಾಗಿದೆ. ಇವರಿಗಾಗಿ ಟ್ರಸ್ಟ್ ನವರು ಒಂದೆರೆಡು ದಿನ ಹುಡುಕಾಡಿ ಸುಮ್ಮನಾಗಿದ್ದಾರೆ. ಆದರೆ ಹೆತ್ತ ಕರುಳಿಗೆ ನೆಮ್ಮದಿಯಿಲ್ಲದಂತಾಗಿದೆ.

    ಯುವಕನ ತಾಯಿ ಮಗನಿಗಾಗಿ ಬೀದಿ ಬೀದಿಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಕೆಲ ದಿನಗಳ ಹಿಂದೆ ಕೋಣನಕುಂಟೆಯ ಆವಲಹಳ್ಳಿ ಬಳಿ ಕಂಡಿದ್ದಾರೆ ಎಂದು ಹೇಳಲಾಗಿದೆ. ಜನ ಮಾತನಾಡಿಸಿದರು ಮಾತು ಬಾರದ ಯುವಕನನ್ನು ಕಳ್ಳನೆಂದು ಅನುಮಾನಿಸಿ ಹಿಗ್ಗಾ ಮುಗ್ಗ ಥಳಿಸಿದ್ದರಿಂದ ಅಲ್ಲಿಂದ ಭಯಗೊಂಡು ಯಾವುದೋ ಕಡೆ ಹೊರಟು ಹೋಗಿದ್ದಾನೆಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.

    ಬುದ್ಧಿಮಾಂದ್ಯ ಕುಮಾರಸ್ವಾಮಿಯು ಪ್ರತಿನಿತ್ಯವು ಔಷಧಿ ತೆಗೆದುಕೊಳ್ಳಬೇಕಿರುವುದರಿಂದ ಆದಷ್ಟು ಬೇಗನೆ ತನ್ನ ಮಗನನ್ನು ಹುಡುಕಿಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹೆಚ್ ಆರ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಹಾಲು ಕೇಳಿದ್ದಕ್ಕೆ ಒಂದು ವರ್ಷದ ಮಗುವಿನ ಕತ್ತು ಸೀಳಿ ಕೊಂದ ತಾಯಿ!

    ಹಾಲು ಕೇಳಿದ್ದಕ್ಕೆ ಒಂದು ವರ್ಷದ ಮಗುವಿನ ಕತ್ತು ಸೀಳಿ ಕೊಂದ ತಾಯಿ!

    ಭೋಪಾಲ್: ತಾಯಿಯೊಬ್ಬಳು ಕುಡಿಯಲು ಹಾಲು ಕೇಳಿ ಹಠ ಮಾಡಿದ್ದ ಒಂದು ವರ್ಷದ ಮಗುವಿನ ಕತ್ತನ್ನು ಸೀಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಧಾರ್ ಎಂಬಲ್ಲಿ ನಡೆದಿದೆ.

    ಘಟನೆ ಸಂಬಂಧ ಪೊಲೀಸರು ಆರೋಪಿ ತಾಯಿಯನ್ನು ಗುರುವಾರ ವಶಕ್ಕೆ ಪಡೆದಿದ್ದಾರೆ. ಮಹಿಳೆ ತನ್ನ ಮಗುವನ್ನು ಕೊಲೆ ಮಾಡಿದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.

    ತಾಯಿ ಅಡುಗೆ ಮಾಡುವಾಗ ಒಂದು ವರ್ಷದ ಮಗು ಹಾಲು ಬೇಕೆಂದು ಹಠ ಮಾಡಿದೆ. ಈ ವೇಳೆ ಅಳುತ್ತಿರುವ ಮಗುವಿನ ಶಬ್ಧ ಆಕೆಗೆ ಕಿರಿಕಿರಿಯುಂಟು ಮಾಡಿದೆ. ತಾಳ್ಮೆ ಕಳೆದುಕೊಂಡ ತಾಯಿ ಹರಿತವಾದ ವಸ್ತುವಿನಿಂದ ಮಗುವಿನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಘಟನೆ ನಂತರ ಮನೆಯ ಬಾಗಿಲನ್ನು ಹೊರಗಡೆಯಿಂದ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿ ಕುಳಿತುಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಸಿ.ಬಿ.ಸಿಂಗ್ ತಿಳಿಸಿದ್ದಾರೆ.

    ತುಂಬಾ ಸಮಯದವರೆಗೆ ಅಳುತ್ತಿದ್ದ ಮಗು ಇದ್ದಕ್ಕಿದಂತೆ ಸುಮ್ಮನಾಗಿದ್ದರಿಂದ ಅನುಮಾನಗೊಂಡ ನೆರಮನೆಯ ಸಂಬಂಧಿಕರು ಮನೆಯ ಬಾಗಿಲು ತೆರೆದು ನೋಡಿದ್ದಾರೆ. ಮನೆಯಲ್ಲಿ ಒಂದು ವರ್ಷದ ಕಂದಮ್ಮ ರಕ್ತದ ಮಡುವಿನಲ್ಲಿ ಬಿದ್ದಿದೆ. ಸದ್ಯ ಪೊಲೀಸರು ಕ್ರೂರಿ ತಾಯಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

  • ಮರದ ರಿಪೀಸಿನಿಂದ ತಾಯಿಯನ್ನೇ ಬರ್ಬರವಾಗಿ ಕೊಂದ!

    ಮರದ ರಿಪೀಸಿನಿಂದ ತಾಯಿಯನ್ನೇ ಬರ್ಬರವಾಗಿ ಕೊಂದ!

    ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಮಗ ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಮಲ್ಲಸಂದ್ರ ದಲ್ಲಿ ನಡೆದಿದೆ.

    55 ವರ್ಷದ ಮುನಿಯಮ್ಮ ಮಗನಿಂದಲೇ ಕೊಲೆಯಾದ ದುರ್ದೈವಿ. ಕುಡಿದ ಮತ್ತಿನಲ್ಲಿದ್ದ ಮಗ ಸಂತೋಷ್, ಮರದ ರಿಪೀಸ್‍ನಿಂದ ಬಡಿದು ತಾಯಿಯನ್ನು ಹತ್ಯೆಗೈದಿದ್ದಾನೆ. ಕೆಲಸವಿಲ್ಲದ ಸಂತೋಷ್ ಆಗಾಗ ಕುಡಿಯಲು ತಾಯಿ ಬಳಿ ಹಣಕ್ಕಾಗಿ ಪೀಡಿಸುತಿದ್ದ. ಹಣಕ್ಕಾಗಿ ಪ್ರತಿದಿನ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಸೋಮವಾರ ರಾತ್ರಿ ಸಂತೋಷ್ ಮದ್ಯದ ನಶೆಯಲ್ಲಿ ಮರದ ರಿಪೀಸ್‍ನಿಂದ ಬಡಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಸಂತೋಷ್ ನನ್ನು ವಶಕ್ಕೆ ಪಡೆದಿದ್ದಾರೆ.

  • ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

    ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

    ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆ ಹಾಗೂ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

    ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್‍ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದಿದ್ದ ಚಂದನ್ ಶೆಟ್ಟಿಗೆ, ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ. ಇದೀಗ ಬಿಗ್ ಬಾಸ್ ಗೆದ್ದ ಚಂದನ್ ಗೆ ಅವರ ತಾಯಿ ಮುದ್ದಾದ ಉಡುಗೊರೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದ ಶೃತಿ ಪ್ರಕಾಶ್‍ಗೆ ಕಾದಿತ್ತು ಸರ್ ಪ್ರೈಸ್

    ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಅವರು ಪ್ರಾಣಿಗಳನ್ನು ಸಾಕಲು ಸಾಧ್ಯವಾಗಲಿಲ್ಲ. ಇದೀಗ ಅವರ ತಾಯಿ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಅವರಿಗೆ ಗೆಲುವಿನ ಖುಷಿಯ ಮೇಲೆ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ರ್ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ಚಂದನ್ ಅವರ ತಾಯಿ ಉಡುಗೊರೆ ನೀಡಿದ್ದಾರೆ. ಈ ನಾಯಿಮರಿಗೆ `ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಚಂದನ್ ಅವರ ಆಸೆಯ ಪ್ರಕಾರವೇ ಆ ನಾಯಿಮರಿಗೆ `ಆಪಲ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಮೂಲತಃ ಹಾಸನದ ಶಾಂತಿಗ್ರಾಮದ ಚಂದನ್ ಶೆಟ್ಟಿ ಅವರ ತಂದೆ ಪರಮೇಶ್ ಹಾಗೂ ತಾಯಿ ಪ್ರೇಮಾ. ಚಂದನ್ ಶೆಟ್ಟಿಗೆ ಓರ್ವ ತಮ್ಮನಿದ್ದಾನೆ. ಚಂದನ್ ಸಾಹಿತ್ಯ ಬರಹಗಾರನಾಗಿದ್ದು, ಅಲೆಮಾರಿ ಚಿತ್ರದಲ್ಲಿ ಸಹ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ವರದನಾಯಕ, ಚಕ್ರವ್ಯೂಹ ಹಾಗೂ ಭಜರಂಗಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟಕಿಲಾ ಹಾಡು ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯವಾಗಿತ್ತು.

  • ಮಗನ ಮೇಲೆ ವಿಕೃತಿ ಮೆರೆದ ತಂದೆ ಪ್ರಕರಣ- ಪತಿಯ ಕೃತ್ಯಕ್ಕೆ ಪತ್ನಿ ಸಮರ್ಥನೆ!

    ಮಗನ ಮೇಲೆ ವಿಕೃತಿ ಮೆರೆದ ತಂದೆ ಪ್ರಕರಣ- ಪತಿಯ ಕೃತ್ಯಕ್ಕೆ ಪತ್ನಿ ಸಮರ್ಥನೆ!

    ಬೆಂಗಳೂರು: 10 ವರ್ಷದ ಮಗನ ಮೇಲೆ ತಂದೆ ವಿಕೃತಿ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ತಾಯಿ ತನ್ನ ಗಂಡನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಮ್ಮ ಗಂಡ ಮಗುವಿಗೆ ಬೇಕು ಅಂತ ಹೊಡೆದಿಲ್ಲ. ಬುದ್ಧಿ ಕಳಿಸೋದಿಕೆ ಅಂತ ಹೊಡೆದಿದ್ದಾರೆ. ಶಾಲೆ ಮತ್ತು ಟ್ಯೂಷನ್ ಗೆ ಆತ ಸರಿಯಾಗಿ ಹೋಗುತ್ತಿರಲಿಲ್ಲ. ಈ ಘಟನೆ ಒಂದೂವರೆ ತಿಂಗಳ ಹಿಂದೆ ನಡೆದಿದೆ. ನನ್ನ ಮೊಬೈಲ್ ರಿಪೇರಿ ಮಾಡಲು ಕೊಟ್ಟಿದ್ದೆ. ಈ ವೇಳೆ ಯಾರೋ ಈ ವಿಡಿಯೋ ನೋಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಅಂತ ಹೇಳಿದ್ದಾರೆ.

    ಆರೋಪಿ ತಂದೆ ಬಂಧನ: ತನ್ನ 11 ವರ್ಷದ ಮಗ ಸುಳ್ಳು ಹೇಳುತ್ತಾನೆಂದು ಮನಬಂದಂತೆ ಥಳಿಸಿರುವ ಆರೋಪಿ ತಂದೆ ಮಹೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ, ನನ್ನ ಮಗ ನನ್ನ ಮಾತು ಕೇಳುತ್ತಿರಲಿಲ್ಲ. ಏನೇ ಹೇಳಿದ್ದರೂ ತಿರಸ್ಕರಿಸುತ್ತಿದ್ದ. ಹಾಗಾಗಿ ಅವನ ತಾಯಿ ಮುಂದೆನೇ ಆತನನ್ನು ನಾನು ಹೊಡೆಯುತ್ತಿದ್ದೆ. ಅದನ್ನು ಚಿತ್ರಿಕರಿಸಲು ನಾನೇ ನನ್ನ ಹೆಂಡತಿಗೆ ಹೇಳಿದ್ದೆ. ನನ್ನ ಮಗ ಮತ್ತೊಮ್ಮೆ ಗಲಾಟೆ ಮಾಡಿದರೆ ಆತನಿಗೆ ಹೆದರಿಸಲೆಂದು ಆ ವಿಡಿಯೋ ಮಾಡಲು ನಾನೇ ಹೇಳಿದ್ದೆ ಎಂದು ಮಹೇಂದ್ರ ತನ್ನ ತಪ್ಪೊಪ್ಪಿಕೊಂಡಿದ್ದಾನೆ.

    ವಿಡಿಯೋದಲ್ಲೇನಿದೆ?: ಈ ಘಟನೆ ಕೆಂಗೇರಿ ಬಳಿಯ ಗ್ಲೋಬಲ್ ವಿಲೇಜ್ ಸಮೀಪದಲ್ಲಿ ನಡೆದಿದೆ. ಮಗ ಸುಳ್ಳು ಹೇಳುತ್ತಾನೆಂದು ಸಿಟ್ಟುಗೊಂಡ ಕ್ರೂರ ತಂದೆ ಆತನಿಗೆ ಮನಬಂದಂತೆ ಥಳಿಸಿದ್ದಾನೆ. ತನ್ನ ಕೈಯಲ್ಲಿ ಹೊಡೆಯುವುದಲ್ಲದೆ ಕಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾನೆ. ಬಾಲಕ ಸುಳ್ಳು ಹೇಳಿಲ್ಲ ಎಂದು ಹೇಳುತ್ತಿದ್ದರೂ ಬಿಡದೇ ಚೆಂಡಿನಂತೆ ಬಿಸಾಡಿದ್ದಾನೆ. ಎಷ್ಟು ಸಲ ಸುಳ್ಳು ಹೇಳುತ್ತೀಯಾ ಎಂದು ತಂದೆ ಬೆಲ್ಟ್‍ನಲ್ಲಿ ಹೊಡೆದಿದ್ದಾನೆ. ಮಗ ಪದೇ ಪದೇ ಸುಳ್ಳು ಹೇಳ್ತಾನೆ ಎಂದು ತಂದೆ ಕಾಲಿನಲ್ಲಿ ಒದ್ದು, ವಿಕೃತವಾಗಿ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

    ವಿಡಿಯೋ ವೈರಲ್ ಆಗಿದ್ದು ಹೇಗೆ?: ಕೆಲವು ದಿನಗಳ ಹಿಂದೆ ಮೊಬೈಲ್ ಹಾಳಾಗಿದ್ದ ಕಾರಣ ರಿಪೇರಿಗೆಂದು ಮೊಬೈಲ್ ಶಾಪ್ ಗೆ ಕೊಟ್ಟಿದ್ದರು. ಈ ವೇಳೆ ಅಂಗಡಿಯವನು ಮೊಬೈಲ್ ಫ್ಲ್ಯಾಶ್ ಮಾಡುವಾಗ ಎಲ್ಲಾ ಫೋಟೋ, ವಿಡಿಯೋಗಳನ್ನು ತನ್ನ ಕಂಪ್ಯೂಟರ್‍ನಲ್ಲಿ ಹಾಕಿದ್ದಾರೆ. ಆಗ ಈ ವಿಡಿಯೋವನ್ನು ನೋಡಿದ್ದಾರೆ. ನೋಡಿದ ತಕ್ಷಣ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತಂದೆಯ ಈ ಕ್ರೂರ ವರ್ತನೆಗೆ ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಸದ್ಯ ಪ್ರಕರಣ ಸಂಂಬಂಧಿಸಿದಂತೆ ಕೆಂಗೇರಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಬಾಸ್ಕೊ (ಮಕ್ಕಳ ಮೇಲೆ ನಡೆಯುವ ಹಲ್ಲೆ ಬಗ್ಗೆ ತಿಳಿಸುವುದು) ಗೆ ಮಾಹಿತಿ ನೀಡಿದ್ದಾರೆ.

    https://www.youtube.com/watch?v=e0WobI4CVJk

    https://www.youtube.com/watch?v=j-PFEhOIDnc

  • ವಿದ್ಯುತ್ ಶಾಕ್ ಆಗಿ ಮಗುವಿನ ಬಲಗೈ ಕಟ್- ಮಗಳು ಬೇಡ ಎಂದ ತಂದೆ

    ವಿದ್ಯುತ್ ಶಾಕ್ ಆಗಿ ಮಗುವಿನ ಬಲಗೈ ಕಟ್- ಮಗಳು ಬೇಡ ಎಂದ ತಂದೆ

    ಬೆಂಗಳೂರು: ವಿದ್ಯುತ್ ಶಾಕ್ ಒಳಗಾಗಿ ಬಲಗೈ ಕಳೆದುಕೊಂಡಿದ್ದ 6 ವರ್ಷದ ಮಗಳನ್ನು ತಂದೆಯೊಬ್ಬ ದೂರ ಮಾಡಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ.

    ನೆಲಮಂಗಲ ಪಟ್ಟಣದ ರೇಣುಕಾನಗರದಲ್ಲಿ ಕಳೆದ ಒಂದು ತಿಂಗಳ ಹಿಂದೆ ಮನೆಯ ಮೇಲೆ ಆಟವಾಡುತ್ತಿದ್ದ ಮಗು ಆಯತಪ್ಪಿ ವಿದ್ಯುತ್ ತಂತಿಗೆ ಕೈ ತಗುಲಿದಾಗ, ಮಗುವಿನ ಬಲಗೈ ವಿದ್ಯುತ್ ಶಾಕ್‍ ಗೆ ಒಳಗಾಗಿ ಕೈ ಕಳೆದು ಕೊಂಡಿತ್ತು.

    ಚಿಕಿತ್ಸೆಗೆಂದು ಮಗು ಆಶ್ರಿಯಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದಾಗ, ವೈದ್ಯರು ಪುಟಾಣಿ ಆಶ್ರೀಯಳ ಬಲಗೈ ತುಂಡರಿಸಿ ಜೀವವನ್ನ ಉಳಿಸಿದ್ದಾರೆ. ಆದರೆ ಮಗುವಿಗೆ ಈ ರೀತಿಯಾಗಿ ತಿಂಗಳುಗಳೇ ಕಳೆದರು, ಇಲ್ಲಿಯವರೆಗೂ ಪಾಪಿ ತಂದೆ ಸೈಯದ್ ಪಾಷ ಆಸ್ಪತ್ರೆಗಾಗಲಿ, ಮನೆಗಾಗಲಿ ಬಂದು ತಾನು ಜನ್ಮ ನೀಡಿದ ಮಗುವಿನ ಯೋಗಕ್ಷೇಮ ನೋಡಿಲ್ಲ ಎಂದು ಮಗುವಿನ ತಾಯಿ ಶಬೀನಬಾನು ಆರೋಪಿಸಿದ್ದಾರೆ.

    ಅಲ್ಲದೆ ಮಗು ತನ್ನ ಬಲಗೈ ಕಳೆದುಕೊಂಡಿರೋದರಿಂದ ನೋಡಲು ಅಸಹ್ಯ ಹಾಗೂ ಮುಂದಿನ ಜೀವನ ಕಷ್ಟ ಎಂದು ತಾಯಿ ಮಗುವನ್ನು ತಿರಸ್ಕರಿಸಿ, ಎರಡನೇ ಮದುವೆಯಾಗುವುದಾಗಿ ಹೆಂಡತಿಗೆ ಬೆದರಿಕೆ ಹಾಕುತ್ತಿದ್ದಾನೆ. ಇನ್ನೂ ಸೂಕ್ತ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಆಸ್ಪತ್ರೆಯ ಖರ್ಚು ವೆಚ್ಚವನ್ನು ನಿಭಾಯಿಸಿ ಕೈತೊಳೆದು ಕೊಂಡಿದ್ದಾರೆ.

    ಇತ್ತ ಗಂಡನ ಆಸರೆ ಇಲ್ಲದೆ ಇತ್ತ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು ನೀಡಿದ ಪರಿಹಾರದ ಭರವಸೆ ಹುಸಿಯಾಗಿದೆ. ತಾಯಿ ಹಾಗೂ ಕೈ ಕಳೆದುಕೊಂಡಿರುವ ಪುಟ್ಟ ಮಗು ಕಣ್ಣೀರು ಹಾಕುತ್ತಿದ್ದು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

  • ಮಗಳಿಗೆ ಕಣ್ಣಾಕಿದವರ ಮೇಲೆ ಹಲ್ಲೆಗೈಯಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ತಾಯಿ!

    ಮಗಳಿಗೆ ಕಣ್ಣಾಕಿದವರ ಮೇಲೆ ಹಲ್ಲೆಗೈಯಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ತಾಯಿ!

    ಶಿವಮೊಗ್ಗ: ತಾಯಿಯೊಬ್ಬರು ತನ್ನ ಮಗಳ ಮೇಲೆ ಕಣ್ಣಾಕಿದವರ ಮೇಲೆ ಹಲ್ಲೆ ನಡೆಸಲು ಪುಡಿ ರೌಡಿಗಳಿಗೆ ಸುಪಾರಿ ಕೊಟ್ಟ ಘಟನೆ ಶಿವಮೊಗ್ಗ ನಗರದ ಹೊರವಲಯದ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.

    ಧನಲಕ್ಷ್ಮಿ ಎಂಬವರ ಮಗಳ ಮೇಲೆ ನಿತಿನ್ ಎಂಬಾತ ಕಣ್ಣು ಹಾಕಿದ್ದ. ಆಕೆಯನ್ನು ಲವ್ ಮಾಡುತ್ತಿರುವುದಾಗಿ ಗೆಳೆಯರಿಗೆ ಹೇಳಿಕೊಂಡು ತಿರುಗಾಡುತ್ತಿದ್ದ. ಇದರಿಂದ ರೊಚ್ಚಿಗೆದ್ದ ಧನಲಕ್ಷ್ಮಿ ಪುಡಿ ರೌಡಿ ಸಂತು ಎಂಬಾತನಿಗೆ ಸುಪಾರಿ ಕೊಟ್ಟಿದ್ದಾರೆ. ಅಂತೆಯೇ ಸಂತು ನಿತಿನ್ ಮತ್ತು ಆತನ ಸ್ನೇಹಿತರ ಮೇಲೆ ಚೂರಿಯಂದ ಹಲ್ಲೆ ಮಾಡಿದ್ದಾನೆ.

    ಚೂರಿ ಇರಿತದಿಂದ ನಿತಿನ್ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಸ್ನೇಹಿತರಾದ ರಾಜು, ಪ್ರಜ್ವಲ್, ನವೀನ್ ಎಂಬವರೂ ಕೂಡ ಗಾಯಗೊಂಡಿದ್ದಾರೆ. ಸದ್ಯ ಗಾಯಗೊಂಡ ನಾಲ್ವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

    ಹಲ್ಲೆ ನಡೆಸಿದ ಬಳಿಕ ಪುಡಿ ರೌಡಿ ಕುಟ್ಟಿ ಮತ್ತು ಈತನ ಗೆಳೆಯರಾದ ನವೀನ್, ಪ್ರದೀಪ್, ಸಂತು ಎಂಬವರು ಪರಾರಿ ಆಗಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 14 ವರ್ಷದ ಮಗನನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಸುಟ್ಟಳು ನಿರ್ದಯಿ ತಾಯಿ!

    14 ವರ್ಷದ ಮಗನನ್ನು ಕೊಲೆ ಮಾಡಿ ಪೀಸ್ ಪೀಸ್ ಮಾಡಿ ಸುಟ್ಟಳು ನಿರ್ದಯಿ ತಾಯಿ!

    ತಿರುವಂತನಪುರಂ: ತಾಯಿಯೇ ತನ್ನ 14 ವರ್ಷದ ಮಗನನ್ನು ಕೊಲೆ ಮಾಡಿ ಕತ್ತರಿಸಿ ಪೀಸ್ ಪೀಸ್ ಮಾಡಿ ಸುಟ್ಟು ಹಾಕಿರುವ ಮನಕಲಕುವಂತಹ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

    ಆರೋಪಿ 45 ವರ್ಷದ ಜಯಮೊಲ್ ಮಗನನ್ನೇ ಕೊಂದ ನಿರ್ದಯಿ ತಾಯಿ. 14 ವರ್ಷದ ಜೀತುಜಾಬ್ ತಾಯಿಂದಲೇ ಕೊಲೆಯಾದ ನತದೃಷ್ಟ ಮಗ. ಗುರುವಾರ ಆರೋಪಿ ಜಯಮೊಲ್‍ಳನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಜಯಮೊಲ್ ಬಂಧಿಸಿ ವಿಚಾರಣೆ ಮಾಡಿದಾಗ ಯಾವುದೋ ಕಾರಣಕ್ಕೆ ಮಗ ಜೀತುಜಾಬ್ ತಾಯಿಯನ್ನು ಪೀಡಿಸಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಅವನನ್ನು ಅಡುಗೆ ಮನೆಯೊಳಗೆ ತಳ್ಳಿ ಶಲ್ಯದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ. ನಂತರ ತಾನು ಮಾಡಿದ ಅಪರಾಧವನ್ನು ಮುಚ್ಚಿಡಲು ಮೃತ ದೇಹವನ್ನು ಕತ್ತರಿಸಿ ಬಾಳೆ ತೋಟದಲ್ಲಿ ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ತನ್ನ ಕೃತ್ಯ ಮುಚ್ಚಿ ಹಾಕಲು ಮೂರು ದಿನಗಳ ಹಿಂದೆ ಜಯಮೊಲ್ ಜೀತುಜಾಬ್ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ನೀಡುವ ನಾಟಕ ಮಾಡಿದ್ದಾಳೆ. ಪೊಲೀಸರು ದೂರು ದಾಖಲಿಸಿಕೊಂಡು ಜೀತುಜಾಬ್ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಮೂರು ದಿನಗಳ ನಂತರ ಪಕ್ಕದ ಬಾಳೆ ತೋಟದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.

    ಆರೋಪಿ ಕೈ ಕೂಡ ಸುಟ್ಟಿದ್ದರಿಂದ ಪೊಲೀಸರು ಅನುಮಾನಗೊಂಡ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆಗ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾಳೆ. ಆರೋಪಿ ಜಯಮೊಲ್ ಮಾನಸಿಕ ಅಸ್ವಸ್ಥೆ ಎಂದು ಪತಿ ಜಾಬ್ ವಿ.ಜಾನ್ ತಿಳಿಸಿದ್ದಾರೆ.

    ಬಾಲಕನ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಬಗ್ಗೆ ಎಲ್ಲಾ ಮೂಲಗಳಿಂದಲೂ ತನಿಖೆ ಮುಂದುವರೆದಿದೆ ಎಂದು ಕೊಲ್ಲಂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

  • ವಿಶ್ವಕ್ಕೆ ಪ್ರಚಾರವಾಗಲಿದೆ ಕೊಪ್ಪಳದ ತ್ರಿವಳಿಗಳ ಯಶೋಗಾಥೆ! – ಏನಿದು ಕಾಂಗರೊ ಕೇರ್ ಯೋಜನೆ?

    ವಿಶ್ವಕ್ಕೆ ಪ್ರಚಾರವಾಗಲಿದೆ ಕೊಪ್ಪಳದ ತ್ರಿವಳಿಗಳ ಯಶೋಗಾಥೆ! – ಏನಿದು ಕಾಂಗರೊ ಕೇರ್ ಯೋಜನೆ?

    ಕೊಪ್ಪಳ: ಜನನವಾದಾಗ 1500 ಗ್ರಾಂಗಳಿಗಿಂತಲೂ ಕಡಿಮೆ ತೂಕ. ಜನಿಸಿದ ಮೂರು ಮಕ್ಕಳು ಹೆಣ್ಣು ಎಂದು ಸುದ್ದಿ ಕೇಳಿದಾಗ ತಂದೆಗೆ ಬರಸಿಡಿಲು. ಈ ಮಕ್ಕಳು ಬದುಕುವುದೇ ಕಷ್ಟ ಎಂದಾಗ ಮತ್ತೊಂದು ಚಿಂತೆ. ಆದರೆ ಈ ಎಲ್ಲ ಚಿಂತೆಗಳು ದೂರವಾಗಿ ಕೊಪ್ಪಳದ ದಂಪತಿಯ ಮುಖದಲ್ಲಿ ಈಗ ಸಂತಸ ಮೂಡಿದೆ. ಅಷ್ಟೇ ಅಲ್ಲದೇ ಈ ತ್ರಿವಳಿಗಳ ಯಶೋಗಾಥೆಯ ಸುದ್ದಿ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ.

    ಮಹಾದೇವಿ, ಸೃಷ್ಟಿ ಮತ್ತು ಲಕ್ಷ್ಮಿ ಈಗ ಒಂದು ವರ್ಷ ಮೂರು ತಿಂಗಳು. ಕಡಿಮೆ ತೂಕವನ್ನು ಹೊಂದಿದ್ದ ಈ ತ್ರಿವಳಿಗಳು ಸಾವನ್ನು ಗೆದ್ದಿದ್ದು, ಇವರ ಪುನರ್ ಜನ್ಮದ ಕಥೆಯನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್‍ಒ) ಜಗತ್ತಿಗೆ ಸಾರಲು ಮುಂದಾಗಿದೆ.

    2016ರ ಅಕ್ಟೋಬರ್ 25 ರಂದು ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೇಣುಕಾ ಹಡಪದ್ ತ್ರಿವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದರು. ಈ ಹಿಂದೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದು, ಈಗ ತ್ರಿವಳಿ ಹೆಣ್ಣು ಮಕ್ಕಳು ಹುಟ್ಟಿದ್ದ ಸುದ್ದಿ ಕೇಳಿ ಪತಿ ಸೋಮಪ್ಪಗೆ ಬರಸಿಡಿಲು ಬಡಿದಂತಾಗಿತ್ತು. ತ್ರಿವಳಿಗಳ ತೂಕ 1500 ಗ್ರಾಂಗಿಂತಲೂ ಕಡಿಮೆ ಇದ್ದ ಕಾರಣ ಮಕ್ಕಳು ಬದುಕುವುದೇ ಕಷ್ಟ ಎಂದು ಭಾವಿಸಲಾಗುತ್ತು. ಶಿಶುಗಳ ತೂಕ ಹೆಚ್ಚಿಸಿ ಆರೈಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಖಾಸಗಿ ಆಸ್ಪತ್ರೆ ಶಿಶುಗಳನ್ನು ಬೆಚ್ಚಗೆ ಇಟ್ಟು ಆರೈಕೆ ಮಾಡುವುದಕ್ಕೆ ಲಕ್ಷಾಂತರ ರೂ. ಖರ್ಚಾಗುತಿತ್ತು. ಆದರೆ ಸೋಮಪ್ಪ ಮತ್ತು ರೇಣುಕಾ ಹಡಪದ್ ದಂಪತಿ ಒಂದು ಪೈಸೆಯೂ ಖರ್ಚು ಮಾಡದೇ ಮಕ್ಕಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಕಾಂಗರೊ ಮದರ್ ಕೇರ್ ಸಹಾಯ:
    ಸೋಮಪ್ಪ ಹಡಪದ್ ದಂಪತಿಯ ಸಹಾಯಕ್ಕೆ ಬಂದಿದ್ದು `ಕಾಂಗರೊ ಮದರ್ ಕೇರ್’ ಹೆಸರಿನ ವಿಶಿಷ್ಟ ಯೋಜನೆ. ಕಡಿಮೆ ತೂಕದ ಮಕ್ಕಳ ಆರೈಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ಕಾಂಗರೊ ಮದರ್ ಕೇರ್ ಯೋಜನೆಯನ್ನು ಆರಂಭಿಸಿತ್ತು. ಭಾರತ ಮತ್ತು ಇಥಿಯೋಪಿಯಾದ ಏಳು ಸ್ಥಳಗಳಲ್ಲಿ ಈ ಯೋಜನೆಯನ್ನು ಡಬ್ಲೂಎಚ್‍ಒ ಆರಂಭಿಸಿದ್ದು, ಭಾರತದ ಮೂರು ಸ್ಥಳಗಳಲ್ಲಿ ರಾಜ್ಯದ ಕೊಪ್ಪಳವೂ ಆಯ್ಕೆ ಆಗಿತ್ತು. ಹೀಗಾಗಿ ರಾಜ್ಯದ ಆರೋಗ್ಯ ಇಲಾಖೆಯ ಜೊತೆ ಸೇರಿ ಡಬ್ಲ್ಯೂಎಚ್‍ಒ ಮಾತುಕತೆ ನಡೆಸಿ ಪೈಲಟ್ ಯೋಜನೆಯಾಗಿ ತ್ರಿವಳಿಗಳ ಆರೈಕೆ ಮಾಡಲು ಮುಂದೆ ಬಂತು.

    ಆರಂಭದಲ್ಲಿ ಒಪ್ಪಲಿಲ್ಲ:
    ಈ ಯೋಜನೆಯ ಬಗ್ಗೆ ಆರಂಭದಲ್ಲಿ ದಂಪತಿ ಒಪ್ಪಿಗೆ ಸೂಚಿಸಲಿಲ್ಲ. ಬಳಿಕ ಸಮಾಜದಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ತಿಳಿಸಲಾಯಿತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಪಡಾವೋ ಯೋಜನೆಯ ಬಗ್ಗೆಯೂ ವಿವರಿಸಲಾಯಿತು. ಹೆಣ್ಣು ಮಕ್ಕಳ ಯಶೋಗಾಥೆಯನ್ನು ವಿವರಿಸಿದ ಬಳಿಕ ಸೋಮಪ್ಪ ಮತ್ತು ರೇಣುಕಾ ಹಡಪದ್ ದಂಪತಿ ಒಪ್ಪಿಗೆ ಸೂಚಿಸಿದರು. 28 ದಿನಗಳು ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೇಣುಕಾ ಗಂಡನ ಮನೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ತವರಿಗೆ ಹೋದರು. ಪ್ರತಿ ದಿನ 9 ಗಂಟೆಗಳ ಕಾಲ ಮನೆಯಲ್ಲಿ ರೇಣುಕಾ ಮಗುವನ್ನು ಅಪ್ಪಿಕೊಂಡು ಇರುತ್ತಿದ್ದರು. ಪರಿಣಾಮ 2017ರ ಮಾರ್ಚ್ 7ರಂದು ತ್ರಿವಳಿಗಳ  ತೂಕ 2500 ಗ್ರಾಂ ದಾಟಿತ್ತು.

     

    ಮೊದಲ ಹುಟ್ಟುಹಬ್ಬ:
    2017ರ ಅಕ್ಟೋಬರ್ 30 ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೇಣುಕಾ ಮತ್ತು ಕುಟುಂಬದವರು ತ್ರಿವಳಿಗಳ ಮೊದಲ ಹುಟ್ಟುಹಬ್ಬವನ್ನು ಆಚರಿಸಿದರು. ಹೆಣ್ಣು ಮಕ್ಕಳು ಎಂದು ನಿರ್ಲಕ್ಷ್ಯ ಮಾಡದಿರಿ ಎಂದು ರೇಣುಕಾ ಹೇಳಿದ್ದಾರೆ. ಈಗ ಪತ್ನಿಯ ಜೊತೆಗೆ ಪತಿ ಸೋಮಪ್ಪ ಅವರು ಹೆಣ್ಣು ಮಕ್ಕಳ ಅಗತ್ಯ ಮತ್ತು ಕಾಂಗರೊ ಮದರ್ ಕೇರ್ ಬಗ್ಗೆ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.

    ಏನಿದು ಕಾಂಗರೊ ಮದರ್ ಕೇರ್?
    ಕಡಿಮೆ ತೂಕದಲ್ಲಿ ಹುಟ್ಟಿದ ಮಗುವಿಗೆ ಪೋಷಕರ ಅಪ್ಪುಗೆ ಬೇಕಾಗುತ್ತದೆ. ತಂದೆ, ತಾಯಿಯ ಚರ್ಮದ ಬಿಸಿ ನಿರಂತರವಾಗಿ ನೀಡಿದರೆ ಮಗುವಿನ ಆರೋಗ್ಯ ಸುಧಾರಿಸುತ್ತದೆ. ದಿನ 24 ಗಂಟೆಯಲ್ಲಿ ಎಷ್ಟು ಹೊತ್ತು ಅಪ್ಪಿಕೊಳ್ಳಲು ಸಾಧ್ಯವಾಗುತ್ತದೋ ಅಷ್ಟು ಹೊತ್ತು ಅಪ್ಪಿಕೊಂಡರೆ ಮಗುವಿನ ಆರೋಗ್ಯ ಸುಧಾರಿಸುತ್ತದೆ. ಈ ರೀತಿ ಅಪ್ಪಿಕೊಂಡು ಮಗವನ್ನು ಆರೈಕೆ ಮಾಡುವುದಕ್ಕೆ ಕಾಂಗರೊ ಮದರ್ ಕೇರ್ ಎಂದು ಕರೆಯಲಾಗುತ್ತದೆ.

    ವಿಶ್ವಕ್ಕೆ ಮಾದರಿ:
    ಭಾರತ ಮತ್ತು ಇಥಿಯೋಪಿಯಾದಲ್ಲಿ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ತ್ರಿವಳಿಗಳ ಯಶೋಗಾಥೆಯನ್ನು ವಿಶ್ವಕ್ಕೆ ಪ್ರಚಾರ ಮಾಡಲಾಗುವುದು ಎಂದು ಡಬ್ಲೂಎಚ್‍ಒ ನವಜಾತ ಶಿಶು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಂಯೋಜಕ ಡಾ.ರಾಜೀವ್ ಬಾಲ್ ಹೇಳಿದ್ದಾರೆ.

    ಬಿಲ್‍ಗೇಟ್ಸ್ ಅನುದಾನ:
    ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಬಿಲ್ ಆಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ಧನ ಸಹಾಯದ ಅಡಿ ವಿಶ್ವ ಆರೋಗ್ಯ ಸಂಸ್ಥೆ ದೇಶದ ಮೂರು ಜಿಲ್ಲೆ ಮತ್ತು ಇಥಿಯೋಪಿಯಾದ 14 ಕಡೆ ಕಾಂಗರೊ ಮದರ್ ಕೇರ್ ಪೈಲಟ್ ಯೋಜನೆಯನ್ನು ಆರಂಭಿಸಿದೆ.