Tag: mother

  • ನವಜಾತ ಶಿಶುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದ ತಂದೆ, ತಾಯಿ, ಅಜ್ಜಿಯ ಬಂಧನ

    ನವಜಾತ ಶಿಶುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದಿದ್ದ ತಂದೆ, ತಾಯಿ, ಅಜ್ಜಿಯ ಬಂಧನ

    -ಮಗಳ ಅಕ್ರಮ ಸಂಬಂಧ ಮುಚ್ಚಲು ತಾಯಿ ಪ್ರಯತ್ನ

    ಚೆನ್ನೈ: ಬಕೆಟ್ ನಲ್ಲಿ ನವಜಾತ ಹೆಣ್ಣು ಶಿಶುವನ್ನು ಮುಳುಗಿಸಿ ಕೊಲೆ ಮಾಡಿದ್ದ ತಂದೆ, ತಾಯಿ ಮತ್ತು ಅಜ್ಜಿಯನ್ನು ಪೊಲೀಸರು ಗುರುವಾರ ಸಂಜೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ನವಜಾತಶಿಶು ಕೊಂದ ಬಳಿಕ ತಿಪ್ಪೆಗುಂಡಿಯಲ್ಲಿ ಎಸೆದು ಪರಾರಿಯಾಗಿದ್ದರು. ಬೆಳಗ್ಗೆ ಕಾರ್ಪೋರೇಷನ್ ಸಿಬ್ಬಂದಿ ನವಜಾತ ಶಿಶುವಿನ ಶವವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಒಂದು ತಿಂಗಳ ನಂತರ ಆರೋಪಿಗಳನ್ನು ಬಂಧಿಸಿದ್ದಾರೆ.

    ತಾಯಿ ವಾಸಂತಿ (22), ತಂದೆ ಜಯರಾಜ್(23), ಅಜ್ಜಿ ವಿಜಯಾ (50) ಬಂಧಿತ ಆರೋಪಿಗಳು. ಬಂಧಿತರು ಕನ್ನಿಗಪುರಂ ನಗರದ ಗುಂಡಿ ನಿವಾಸಿಗಳು. ಪೊಲೀಸರು ಮಗುವಿನ ಶವ ಸಿಕ್ಕ ಸ್ಥಳದಲ್ಲಿಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಅಕ್ರಮ ಸಂಬಂಧ:
    ವಾಸಂತಿ ಕಳೆದ ಮೂರು ವರ್ಷಗಳಿಂದ ಜಯರಾಜ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು. ಆರು ತಿಂಗಳ ಹಿಂದೆ ವಾಸಂತಿಗೆ ತಾನು ಗರ್ಭಿಣಿ ಎಂಬುವುದು ಗೊತ್ತಾಗಿದೆ. ತಾನು ಗರ್ಭಿಣಿ ಎಂಬುವುದನ್ನು ತಾಯಿ ವಿಜಯಾಗೆ ಹೇಳಿದ್ದಾಳೆ. ಮಗಳು ಮಾತು ಕೇಳಿದ ತಾಯಿ ನೇರವಾಗಿ ವಾಸಂತಿಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದಾಳೆ. ಆದ್ರೆ ವೈದ್ಯರು ವಾಸಂತಿಗೆ ಗರ್ಭಪಾತ ಮಾಡುವುದು ಸೂಕ್ತವಲ್ಲ ಅಂತ ಸಲಹೆ ನೀಡಿದ್ದಾರೆ.

    ಆಸ್ಪತ್ರೆಯ ಹಿಂದಿರುಗಿ ಬಂದ ತಾಯಿ ವಿಜಯಾ, ಮಗಳನ್ನು ಮನೆಯಿಂದ ಹೊರಗಡೆ ಎಲ್ಲಿಯೂ ಕಳುಹಿಸಿಲ್ಲ. ತನ್ನ ಮನೆಗೆ ಯಾರು ಬರದಂತೆ ನೋಡಿಕೊಂಡಿದ್ದಳು. ಸೆಪ್ಟೆಂಬರ್ 16ರಂದು ವಾಸಂತಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ವಿಜಯಾ ಮಗಳನ್ನು ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾಳೆ. ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ವಾಸಂತಿಯನ್ನು ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಾದ್ರೆ ಅಲ್ಲಿಯ ಸಿಬ್ಬಂದಿಗೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ. ಮದುವೆಗೆ ಮುನ್ನವೇ ಮಗಳು ತಾಯಿ ಆಗುತ್ತಿರುವ ವಿಷಯ ಎಲ್ಲರಿಗೆ ತಿಳಿಯುತ್ತೆ ಎಂದು ಭಯಬೀತಳಾದ ವಿಜಯ ಮಗಳೊಂದಿಗೆ ಮನೆಗೆ ಹಿಂದಿರುಗಿದ್ದಾಳೆ.

    ಸೆಪ್ಟೆಂಬರ್ 16ರ ಬೆಳಗ್ಗೆ 10.30ಕ್ಕೆ ವಾಸಂತಿ ಮನೆಯಲ್ಲಿಯೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ವಿಜಯಾ ಮಗಳ ಗೆಳೆಯ ಜಯರಾಜನಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ವಿಷಯ ತಿಳಿದು ಮನೆಗೆ ಬಂದ ಜಯರಾಜ, ಇಬ್ಬರೊಂದಿಗೆ ಮಾತನಾಡಿ, ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುವ ಪ್ಲಾನ್ ಮಾಡಿದ್ದಾರೆ. ರಾತ್ರಿ ಮೂವರು ಮಗುವನ್ನು ಕೊಲೆ ಮಾಡಿ, 11.30ರ ವೇಳೆಗೆ ವಿಜಯ ಕಂದಮ್ಮನ ಶವವನ್ನು ತಿಪ್ಪೆಗುಂಡಿಗೆ ಎಸೆದು ಬಂದಿದ್ದಾಳೆ.

    ಮರುದಿನ ಬೆಳಗ್ಗೆ ಕಸದ ಗುಂಡಿ ಸ್ವಚ್ಛಗೊಳಿಸುವ ವೇಳೆ ಪೌರ ಕಾರ್ಮಿಕರಿಗೆ ಬಟ್ಟೆಯಲ್ಲಿ ಸುತ್ತಿದ ಕಂದನ ಶವ ಸಿಕ್ಕಿದೆ. ಪೌರ ಕಾರ್ಮಿಕರು ಗುಂಡಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    ದೇಶದಲ್ಲೇ ಫಸ್ಟ್, ಗರ್ಭಕೋಶ ಕಸಿಯಿಂದ ಮಗು ಜನನ

    – ಮಗಳಿಗೆ ಗರ್ಭಕೋಶ ದಾನ ನೀಡಿದ ತಾಯಿ

    ಮುಂಬೈ: ದೇಶದಲ್ಲಿ ಮೊದಲ ಬಾರಿಗೆ ಗರ್ಭಕೋಶ ಕಸಿ ವಿಧಾನದ ಮೂಲಕ ಹೆಣ್ಣು ಮಗು ಜನನವಾಗಿದೆ. ಮಹಾರಾಷ್ಟ್ರದ ಪುಣೆ ನಗರದ ಆಸ್ಪತ್ರೆಯಲ್ಲಿ ಗರ್ಭಕೋಶ ಕಸಿ ವಿಧಾನದ ಮೂಲಕ ತಾಯಿ ಹಣ್ಣು ಮಗವನ್ನು ಹೆತ್ತಿದ್ದಾರೆ.

    ಪುಣೆಯ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ 28 ವರ್ಷದ ಮೀನಾಕ್ಷಿ ವಾಲನ್ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗುಜರಾತ್ ರಾಜ್ಯದ ವಡೋದರ ನಗರದ ಮೀನಾಕ್ಷಿ ಅವರು 2017ರಿಂದಲೂ ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೀನಾಕ್ಷಿ ಅವರಿಗೆ ಪದೇ ಪದೇ ಗರ್ಭಪಾತ ಆಗುತ್ತಿದ್ದ ಕಾರಣ ಮೇ 2017ರಲ್ಲಿಯೇ ಅವರ ತಾಯಿಯೇ ತಮ್ಮ ಗರ್ಭಕೋಶವನ್ನು ಮಗಳಿಗೆ ದಾನ ಮಾಡಿದ್ದರು.

    ಗರ್ಭಕೋಶ ಕಸಿಯ ಬಳಿಕ ಮೀನಾಕ್ಷಿ ಅವರಿಗೆ ಐವಿಎಫ್ (in-vitro fertilisation) ವಿಧಾನದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸದ್ಯ ತಾಯಿ ಮತ್ತು ಮಗುವನ್ನು ತೀವ್ರ ನಿಘಾ ಘಟಕದಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಗರ್ಭಕೋಶದ ಕಸಿ ಮೂಲಕ ಹುಟ್ಟಿದ ಭಾರತದ ಮೊದಲು ಮಗು ಮಾತ್ರವಲ್ಲದೇ, ಏಷ್ಯಾ ಪೆಸಿಫಿಕ್ ವಲಯದ ವ್ಯಾಪ್ತಿಯ ಮೊದಲ ಮಗು ಎನ್ನುವ ಹೆಗಳ್ಳಿಕೆಗೆ ಪಾತ್ರವಾಗಿದೆ.

    ವಿಶ್ವದಲ್ಲಿ ಈವರೆಗೆ ಸ್ವೀಡನ್ ನಲ್ಲಿ 9, ಅಮೆರಿಕದಲ್ಲಿ 2 ಮಕ್ಕಳು ಜನಿಸಿವೆ. 12ನೇ ಮಗು ಭಾರತದ ನಮ್ಮ ಆಸ್ಪತ್ರೆಯಲ್ಲಿ ಜನಿಸಿದೆ ಅಂತಾ ಡಾ.ವರ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಜಯದಶಮಿ ದಿನವೇ ಪ್ರಮೋದಾ ದೇವಿಯ ತಾಯಿ ವಿಧಿವಶ

    ವಿಜಯದಶಮಿ ದಿನವೇ ಪ್ರಮೋದಾ ದೇವಿಯ ತಾಯಿ ವಿಧಿವಶ

    ಮೈಸೂರು: ಇಂದು ಸಮಸ್ತ ನಾಡಿನ ಜನತೆಯೂ ಜಂಬೂಸವಾರಿಗೆ ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ವಿಜಯದಶಮಿ ದಿನವೇ ಪ್ರಮೋದಾ ದೇವಿ ಅವರ ತಾಯಿ ವಿಧಿವಶರಾಗಿದ್ದಾರೆ.

    ರಾಜವಂಶಸ್ಥೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ಅವರು ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುಟ್ಟಚಿನ್ನಮ್ಮಣಿ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

    ಪುಟ್ಟಚಿನ್ನಮ್ಮಣಿ ಅವರು ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ಅರಮನೆಯಲ್ಲಿ ಜಂಬೂಸವಾರಿಯ ಹಬ್ಬದ ವಾತಾವರಣ ಕಂಗೊಳಿಸುತ್ತಿತ್ತು. ಆದರೆ ಈಗ ಪುಟ್ಟಚಿನ್ನಮ್ಮಣಿ ಅವರ ಸಾವಿನಿಂದ ಅರಮನೆಯಲ್ಲಿ ಸೂತಕದ ವಾತಾವರಣ ಆವರಿಸಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾರಕ ರೋಗ ಎಚ್1ಎನ್1ಗೆ ಬಾಣಂತಿ ಸೇರಿ ಅವಳಿ ಹೆಣ್ಣು ಶಿಶು ಸಾವು

    ಮಾರಕ ರೋಗ ಎಚ್1ಎನ್1ಗೆ ಬಾಣಂತಿ ಸೇರಿ ಅವಳಿ ಹೆಣ್ಣು ಶಿಶು ಸಾವು

    ತುಮಕೂರು: ಜಿಲ್ಲೆಯಲ್ಲೂ ಮಾರಕ ರೋಗ ಎಚ್1ಎನ್1 ಗೆ ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶು ಸಾವನ್ನಪ್ಪಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಈ ಸಾವನ್ನು ಆರೋಗ್ಯ ಇಲಾಖೆ ತಡವಾಗಿ ದೃಢಿಕರಿಸಿದೆ.

    ತುಮಕೂರು ತಾಲೂಕಿನ ಕುಪ್ಪೂರು ಗ್ರಾಮದ ರಂಗನಾಥ್ ಅವರ ಪತ್ನಿ ಕಾವ್ಯಾ ಹಾಗೂ ಆಕೆಯ ನವಜಾತ ಅವಳಿ ಹೆಣ್ಣು ಶಿಶುಗಳು ಆಗಸ್ಟ್ 27 ರಂದೇ ಎಚ್1ಎನ್1 ಗೆ ಬಲಿಯಾಗಿದ್ದರು. ಆದರೆ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಗಿತ್ತು. ಈಗ ಬಂದ ವರದಿ ಪ್ರಕಾರ ಎಚ್1ಎನ್1 ನಿಂದಲೇ ಅಸುನೀಗಿದ್ದಾರೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. ಇದನ್ನು ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    7 ತಿಂಗಳ ಗರ್ಭಿಣಿಯಾದ ಕಾವ್ಯಾರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲು ತುಮಕೂರು ದೊಡ್ಡಮನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಹತೋಟಿಗೆ ಬಾರದೇ ಇದ್ದಾಗ ಕ್ರಮವಾಗಿ ಬೆಂಗಳೂರಿನ ವಾಣಿ ವಿಲಾಸ್, ಚಿನ್ಮಯ, ಹಾಗೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಮಣಿಪಾಲ್ ಆಸ್ಪತ್ರೆಯಲ್ಲಿ ಕಾವ್ಯಾ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದರೂ ಅವು ಎಚ್1ಎನ್1 ಗೆ ಬಲಿಯಾಗಿದೆ.

    ಆಗ ತಕ್ಷಣ ಕಾವ್ಯಾರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅಲ್ಲಿ ಕಾವ್ಯಾಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಾವಿನಿಂದಾಗಿ ಜಿಲ್ಲೆಯ ಜನತೆಯಲ್ಲಿ ಮಾರಕ ರೋಗ ಎಚ್1ಎನ್1 ರ ಭೀತಿ ಶುರುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೆರಿಗೆ ಅಂತ ಬಂದ ತಾಯಿ- ಹೆಣ್ಣು ಮಗುವಾಗಿದ್ದಕ್ಕೆ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿ

    ಹೆರಿಗೆ ಅಂತ ಬಂದ ತಾಯಿ- ಹೆಣ್ಣು ಮಗುವಾಗಿದ್ದಕ್ಕೆ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿ

    ಕೋಲಾರ: ಹೆರಿಗೆ ಅಂತ ಬಂದ ತಾಯಿ ಹೆರಿಗೆ ನಂತರ ಹೆಣ್ಣು ಮಗುವಾಗಿದ್ದಕ್ಕೆ ನವಜಾತ ಶಿಶುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಸೆಪ್ಟೆಂಬರ್ 22ರಂದು ಕೋಲಾರದ ಎಸ್.ಎನ್.ಆರ್ ಜಿಲ್ಲಾಸ್ಪತ್ರೆಯಲ್ಲಿ ನಕಲಿ ವಿಳಾಸ ನೀಡಿ ಆಸ್ಪತ್ರೆಗೆ ದಾಖಲಾಗಿ ಹೆಣ್ಣು ಶಿಶುವೊಂದಕ್ಕೆ ಜನ್ಮ ನೀಡಿದ್ದ ತಾಯಿಗೆ ಈಗ ಮಗು ಬೇಡವಾಗಿದೆ. ಕೋಲಾರ ತಾಲೂಕಿನ ಆವಣಿ ಬಳಿಯ ನಕಲಿ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನ ನೀಡಿದ್ದು, ಪುಷ್ಪ ಹಾಗೂ ಸುನೀಲ್ ಎಂಬ ಹೆಸರಿನ ದಂಪತಿಗೆ ಸೇರಿದ ಹೆಣ್ಣು ಮಗು ಎನ್ನಲಾಗಿದೆ.

    ಅವಧಿ ಮುನ್ನವೇ ಹುಟ್ಟಿರುವುದರಿಂದ ಮಗು ಕಡಿಮೆ ತೂಕವನ್ನು ಹೊಂದಿದ್ದು ಉಸಿರಾಟದ ತೊಂದರೆಯನ್ನು ಹೊಂದಿದೆ. ಸದ್ಯ ಮಗುವನ್ನು ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಇದೀಗ ಮಗು ಚೇತರಿಕೆ ಕಂಡಿದೆ.

    ಮಗುವನ್ನು ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಮಗುವನ್ನು ದತ್ತು ಪಡೆದುಕೊಳ್ಳಲು ಸಾಕಷ್ಟು ಸಂಘ ಸಂಸ್ಥೆಗಳು ಬರುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿಯಮಾವಳಿಗಳಂತೆ ದತ್ತು ಪಡೆದುಕೊಳ್ಳುವರಿಂದ ಸಹಿಯನ್ನು ಪಡೆದು ನಂತರ ದತ್ತು ನೀಡುವ ಚಿಂತನೆ ನಡೆಯುತ್ತಿದೆ.

    ಸದ್ಯ ಈ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

    ತಾಯಿ ಮೇಲೆ ಪ್ರಿಯಕರ ಮಲಗಿದ್ದನ್ನ ಕಂಡ ಮಗ – ಅಪ್ಪನಿಗೆ ಹೇಳ್ತೀನಿ ಅಂದಿದ್ದೇ ತಪ್ಪಾಯ್ತು!

    ಚಾಮರಾಜನಗರ: ತನ್ನ ಅಕ್ರಮ ಸಂಬಂಧದ ಬಗ್ಗೆ ಮಗನಿಗೆ ಗೊತ್ತಾಗುತ್ತಿದ್ದಂತೆ ತಾಯಿಯೊಬ್ಬಳು ಮಗನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದಲ್ಲಿ ನಡೆದಿದೆ.

    ಪ್ರೀತಂ (7) ತಾಯಿಯಿಂದ ಕೊಲೆಯಾದ ದುರ್ದೈವಿ. ಬಾಲಕನ ತಾಯಿ ಸಾಕಮ್ಮ(31) ಪ್ರಿಯಕರ ನಾಗರಾಜು ಜೊತೆ ಸೇರಿ ಮಗನನ್ನೇ ಕೊಂದಿದ್ದಾಳೆ. ಈ ಘಟನೆ ಅಕ್ಟೋಬರ್ 6 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    “ಅಕ್ಟೋಬರ್ 5 ಶುಕ್ರವಾರ ರಾತ್ರಿ ಮನೆಯಲ್ಲಿ ನಾನು ಇರಲಿಲ್ಲ. ಮಲಗಿದ್ದ ಮಗ ಪ್ರೀತಂಗೆ ರಾತ್ರಿ 11 ಗಂಟೆಯ ವೇಳೆಗೆ ಎಚ್ಚರ ಆಗಿತ್ತು. ತನ್ನ ತಾಯಿ ಸಾಕಮ್ಮಳ ಮೇಲೆ ಪ್ರಿಯಕರ ನಾಗರಾಜು ಮಲಗಿದ್ದ. ಇದನ್ನು ನೋಡಿದ ಪ್ರೀತಂ, ಅಪ್ಪ ಬರಲಿ ಹೇಳುತ್ತೇನೆ. ಅಮ್ಮನ ಮೇಲೆ ಏಕೆ ಮಲಗಿದ್ದೀಯಾ ಎಂದು ಕೇಳಿದ್ದಾನೆ. ನಂತರ ಸಾಕಮ್ಮ ಆತನಿಗೆ ಹೊಡೆದು ಮಲಗಿಸಿ ಬಿಟ್ಟಿದ್ದಳು. ಮಗ ಮಲಗಿದ ನಂತರ ಇಬ್ಬರು ಸೇರಿ ಹೆತ್ತ ಮಗನನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದರು” ಎಂದು ಬಾಲಕನ ತಂದೆ ನಂಜುಂಡಸ್ವಾಮಿ ಅವರು ಹೇಳಿದ್ದಾರೆ.

    ಮರುದಿನ ಶನಿವಾರ ಆಗಿದ್ದರಿಂದ ಪ್ರೀತಂ ಬೆಳಗ್ಗೆ ಶಾಲೆ ಮುಗಿಸಿಕೊಂಡು ಮನೆಗೆ ಬಂದು ಊಟ ಮಾಡಿ ಹೊರಗೆ ಆಟ ಆಡಲು ಹೋಗಿದ್ದನು. ಮನೆಗೆ ತಂದೆ ನಂಜುಂಡಸ್ವಾಮಿ ಬಂದಿರಲಿಲ್ಲ. ನಂಜುಂಡಸ್ವಾಮಿ ಶುಕ್ರವಾರ ರಾತ್ರಿ ಅಡುಗೆ ಕಾಂಟ್ರಾಕ್ಟ್ ಇದ್ದರಿಂದ ಕೆಲಸ ಮುಗಿಸಿ ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ. ಮನೆಗೆ ಬಂದಾಗ ಮಗ ಎಲ್ಲಿ ಎಂದು ಪತ್ನಿ ಸಾಕಮ್ಮಳನ್ನ ಕೇಳಿದ್ದಾನೆ. ಈ ವೇಳೆ ಮಗನಿಗೆ ಊಟ ಮಾಡಿಸಿದ್ದೇನೆ. ಹೊರಗೆ ಆಟ ಆಡಲು ಹೋಗುವುದಾಗಿ ಹೇಳಿ ಹೋಗಿದ್ದಾನೆ ಎಂದು ಹೇಳಿದ್ದಾಳೆ. ನಂತರ ಸಂಜೆಯಾದ್ರೂ ಮಗ ಮನೆಗೆ ಬರದೇ ಇದ್ದಾಗ ಇಬ್ಬರು ಸೇರಿ ಊರು, ಜಮೀನು ಹುಡುಕಿದ್ದಾರೆ. ಆದರೆ ಎಲ್ಲೂ ಪ್ರೀತಂ ಪತ್ತೆಯಾಗಿಲ್ಲ. ಭಾನುವಾರ ಕೊಳ್ಳೇಗಾಲ ಪೊಲೀಸ್ ಠಾಣೆಗೆ ಹೋಗಿ ನಂಜುಂಡಸ್ವಾಮಿ ಮಗ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲು ಮಾಡಿದ್ದರು. ಅಕ್ಟೋಬರ್ 9 ಮಂಗಳವಾರ ಸಂಜೆ ವೇಳೆಗೆ ಸಿಲ್ಕಲ್ ಪುರ ಗ್ರಾಮದ ಕೆರೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಬಾಲಕನ ಅಜ್ಜಿ ನಾಗಮ್ಮ ಹೇಳಿದ್ದಾರೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಮಗುವಿನ ಶವ ಸಿಗುತ್ತಿದ್ದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಧವಾರ ಮಗುವಿನ ಅಂತ್ಯಕ್ರೀಯೆ ನಡೆಸಿದ ಮರುದಿನ ಪೊಲೀಸರು ನಂಜುಂಡಸ್ವಾಮಿ ಮತ್ತು ಸಾಕಮ್ಮಳನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಾಕಮ್ಮ ಶುಕ್ರವಾರ ನಡೆದಿದ್ದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಗಂಡನಿಗೆ ಅನೈತಿಕ ಸಂಬಂಧ ತಿಳಿಯಬಾರದು ಎಂಬ ಉದ್ದೇಶದಿಂದ ಪ್ರಿಯಕರ ನಾಗರಾಜು ಜೊತೆಗೆ ಸೇರಿ ಮಗ ಪ್ರೀತಂನ ಕುತ್ತಿಗೆಯನ್ನ ಹಿಸುಕಿ ಕೊಲೆ ಮಾಡಿದ್ದೇವು. ಶನಿವಾರ ಶಾಲೆ ಮುಗಿಸಿಕೊಂಡು ಬಂದ ಪ್ರೀತಂ ನನ್ನ ಚಾಕ್ಲೇಟ್ ಕೊಡಿಸುವುದಾಗಿ ಜಮೀನಿನ ಬಳಿ ಕರೆದು ನಂತರ ಆತನನ್ನ ಕೊಲೆ ಮಾಡಿ ಗ್ರಾಮದ ಹೊರ ವಲಯದಲ್ಲಿದ್ದ ಕೆರೆಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.

    ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರ ವಿಚಾರಣೆಯಿಂದ ಸತ್ಯ ಹೊರ ಬರುತ್ತಿದ್ದಂತೆ ಪ್ರಿಯಕರ ನಾಗರಾಜುನನ್ನ ಪೊಲೀಸರು ಬಂಧಿಸಿದ್ದಾರೆ. ನಂತರ ಕೊಲೆ ಮಾಡಿದ ಸ್ಥಳಗಳಿಗೆ ನಾಗರಾಜುನನ್ನು ಕರೆದುಕೊಂಡು ಹೋಗಿ ತನಿಖೆ ಮಾಡಿದ್ದಾರೆ. ಆರೋಪಿ ಸಾಕಮ್ಮಳನ್ನು ಮೈಸೂರಿನ ಜೈಲಿಗೆ ರವಾನಿಸಿದ್ದಾರೆ. ತಮ್ಮ ಕಾಮದಾಟಕ್ಕೆ ಹೆತ್ತ ಮಗನನ್ನೇ ಬಲಿ ಕೊಟ್ಟ ಆಕೆಗೆ ಕಠಿಣವಾದ ಶಿಕ್ಷೆ ನೀಡಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ ರಮ್ಯಾ ತಾಯಿ!

    ಉಪಚುನಾವಣೆಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ ರಮ್ಯಾ ತಾಯಿ!

    ಮಂಡ್ಯ: ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಲು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ತಯಾರಿ ನಡೆಸುತ್ತಿದ್ದಾರೆ. ಚುನಾವಣೆಗೆ ಸ್ಪರ್ಧಿಸಲು ರಂಜಿತಾ ಅವರು ಈಗಾಗಲೇ ಅಫಿಡವಿಡ್ ರೆಡಿ ಮಾಡುತ್ತಿದ್ದಾರೆ.

    ದಾಖಲೆಯಲ್ಲಿ ಯಾವುದೇ ರೀತಿ ತಪ್ಪಾಗದಂತೆ ತಮ್ಮ ಆಪ್ತ ವಕೀಲರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ. ಸಡನ್ ಆಗಿ ಹೆಸರು ಅನೌನ್ಸ್ ಮಾಡಿದ್ರೆ ಸಿದ್ಧವಿರೋಣ ಅಂತಾ ಅಫಿಡವಿಡ್ ರೆಡಿ ಮಾಡ್ತಿದ್ದೇವೆ ಅಂತ ಸುದ್ದಿಗಾರರಿಗೆ ಹೇಳಿದ್ದಾರೆ.

    ಜೆಡಿಎಸ್‍ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವುದು ಸಮಂಜಸವಲ್ಲ. ಈಗಲೂ ಅಭ್ಯರ್ಥಿ ಹಾಕದಿದ್ರೆ 2019ರ ಚುನಾವಣೆಯಲ್ಲಿ ಕಷ್ಟ ಆಗುತ್ತೆ. ಮಂಡ್ಯದಲ್ಲಿ ರಮ್ಯಾಗೆ ಮತ್ತೆ ಅವಕಾಶ ಕೊಡಿ. ಅವರು ವಾಪಸ್ ಬರ್ತಾರೆ. ಇಲ್ಲ ನನಗೆ ಅವಕಾಶ ಕೊಡಿ. ನಾನು ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇವೆ ಅಂತ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯ ಪುಟ್ಟ ಕಂದಮ್ಮನ ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್ರು!

    ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯ ಪುಟ್ಟ ಕಂದಮ್ಮನ ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್ರು!

    ಹೈದರಾಬಾದ್: ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರ ಮಗುವನ್ನು ಪರೀಕ್ಷಾ ಕೇಂದ್ರದಲ್ಲಿದ್ದ ಪೊಲೀಸ್ ಸಿಬ್ಬಂದಿ ಆರೈಕೆ ಮಾಡಿ ಮಾನವೀಯತೆ ಮೆರೆದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.

    ರಾಜ್ಯ ಸರ್ಕಾರ ನಡೆಸಿದ್ದ ಪರೀಕ್ಷೆಗೆ ಬರೆಯಲು ಹೈದರಾಬಾದ್‍ನ ಮಹಾಂಕಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಕ್ಕೆ ಮಹಿಳೆ ಆಗಮಿಸಿದ್ದರು. ಅಲ್ಲದೇ ತಮ್ಮೊಂದಿಗೆ ಸಹೋದರಿಯನ್ನು ಕರೆತಂದಿದ್ದ ಅವರು ಮಗುವನ್ನು ಆಕೆಯ ಕೈಗೆ ನೀಡಿ ಪರೀಕ್ಷೆ ಬರೆಯಲು ತೆರಳಿದ್ದರು. ಆದರೆ ಈ ವೇಳೆ ಒಂದೇ ಸಮನೆ ಮಗು ಅಳಲು ಆರಂಭಿಸಿದನ್ನು ಕಂಡ ಪೊಲೀಸರು ತಕ್ಷಣ ಮಗುವಿಗೆ ಬಾಟಲ್ ನಲ್ಲಿ ಹಾಲು ನೀಡಿ ಆರೈಕೆ ಮಾಡಿದ್ದಾರೆ.

    ಪೊಲೀಸರ ಈ ಮಾನವೀಯ ನಡೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹದ್ದೇ ಘಟನೆ ಕೆಲ ದಿನಗಳ ಹಿಂದೆ ತೆಲಂಗಾಣದ ಮೆಹಬೂಬ್ ನಗರ ವ್ಯಾಪ್ತಿಯಲ್ಲಿ ನಡೆದಿತ್ತು. ಈ ವೇಳೆಯೂ ತಾಯಿಯಿಂದ ಮಗುವನ್ನು ಪಡೆದ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಮುಕ್ತಾಯ ಆಗುವವರೆಗೂ ಆರೈಕೆ ಮಾಡಿದ್ದರು.

    ಆಧುನಿಕ ಸಮಾಜದಲ್ಲಿ ಯುವತಿಯರು ಉನ್ನತ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿತ್ತಿದ್ದಾರೆ. ಆದರೆ ಕಾಲ ಬದಲಾದಂತೆ ಮದುವೆಯಾದ ಬಳಿಕವೂ ತಮ್ಮ ಈ ಸಾಧನೆಯನ್ನು ಮುಂದುವರಿಸಿದ್ದಾರೆ. ಇಂತಹ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುತ್ತಿರುವ ಪೊಲೀಸರ ಕಾರ್ಯ ಮೆಚ್ಚುವಂತಹದ್ದು ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

    https://twitter.com/_Manish_pal/status/1049181854153158656?

  • ಬಾತ್ ರೂಮಿನಲ್ಲಿ ತಾಯಿಯನ್ನೇ ಕೊಲೆಗೈದ 23ರ ಮಾಡೆಲ್!

    ಬಾತ್ ರೂಮಿನಲ್ಲಿ ತಾಯಿಯನ್ನೇ ಕೊಲೆಗೈದ 23ರ ಮಾಡೆಲ್!

    ಮುಂಬೈ: 23 ವರ್ಷದ ಮಾಡೆಲ್ ಒಬ್ಬ ತಾಯಿಯೊಂದಿಗೆ ಹಣದ ವಿಚಾರವಾಗಿ ಜಗಳವಾಡುತ್ತಾ ಸ್ನಾನಗೃಹದಲ್ಲಿ ಆಕೆಯನ್ನು ತಳ್ಳಿ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಸುನಿತಾ ಸಿಂಗ್ ಮಗನಿಂದಲೇ ಹತ್ಯೆಗೊಳಗಾದ ತಾಯಿ. ಮಗ ಲಕ್ಷ್ಯ ಸಿಂಗ್ ನನ್ನು ಓಶಿವಾರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ನ್ಯಾಯಾಲಯ ಅಕ್ಟೋಬರ್ 8 ರವರೆಗೆ ಪೊಲೀಸ್ ಕಸ್ಟಡಿಗೆ ಆತನನ್ನು ನೀಡಿದೆ.

    ಪ್ರಾಥಮಿಕ ತನಿಖೆಯ ಪ್ರಕಾರ ತಾಯಿ ಮತ್ತು ಮಗ ಮಾದಕ ವ್ಯಸನಕ್ಕೆ ಒಳಗಾಗಿದ್ದರು. ಆರೋಪಿಯನ್ನು ವಿಚಾರಣೆಗೊಳಪಡಿಸುತ್ತೇವೆ ಮತ್ತು ಹತ್ಯೆಗೆ ನಿಖರವಾಗಿ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಠಾಣೆಯ ಇನ್ಸ್ ಪೆಕ್ಟರ್ ಎಂದು ಹೇಳಿದ್ದಾರೆ.

    ಏನಿದು ಘಟನೆ?
    ಬುಧವಾರ ಮಧ್ಯರಾತ್ರಿ ತಾಯಿ ಸುನಿತಾ ಸಿಂಗ್ ಮಾದಕ ವಸ್ತುಗಳನ್ನು ಸೇವಿಸಿದ್ದಾಳೆ. ನಂತರ ಹಣದ ವಿಷಯವಾಗಿ ತಾಯಿ ಸುನಿತಾ ಜೊತೆ ಮಗ ಲಕ್ಷ್ಯ ಸಿಂಗ್ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತೆರಳಿದ್ದು, ಮಗ ಸ್ನಾನಗೃಹಕ್ಕೆ ಆಕೆಯನ್ನು ತಳ್ಳಿದ್ದಾನೆ. ತಾಯಿಯ ತಲೆಯನ್ನು ಬಾತ್ ರೂಮಿನಲ್ಲಿರುವ ಟಬ್ ಗೆ ಹೊಡೆದು ಬಳಿಕ ಹೊರಗಡೆ ಲಾಕ್ ಮಾಡಿದ್ದಾನೆ. ಲಕ್ಷ್ಯ ಬೆಳಿಗ್ಗೆ ಬಾಗಿಲು ತೆರೆದಾಗ, ತಾಯಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ಸಮಯದಲ್ಲಿ ಫ್ಲಾಟ್‍ನಲ್ಲಿ ಸುನೀತಾ, ಲಕ್ಷ್ಯ, ಆಕೆಯ ಪ್ರೇಯಸಿ ಮತ್ತು ಇಬ್ಬರು ವ್ಯಕ್ತಿಗಳು ಇದ್ದರು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2 ರೂ. ಬಿಸ್ಕೆಟ್ ಕೊಡಿಸದ್ದಕ್ಕೆ 11ರ ಬಾಲಕ ಆತ್ಮಹತ್ಯೆಗೆ ಶರಣು!

    2 ರೂ. ಬಿಸ್ಕೆಟ್ ಕೊಡಿಸದ್ದಕ್ಕೆ 11ರ ಬಾಲಕ ಆತ್ಮಹತ್ಯೆಗೆ ಶರಣು!

    ಲಕ್ನೋ: ಕೇವಲ ಎರಡು ರೂಪಾಯಿಯ ಬಿಸ್ಕೆಟ್ಟನ್ನ ತಾಯಿ ಕೊಡಿಸಲು ನಿರಾಕರಿಸಿದ್ದಕ್ಕೆ ಆಕೆಯ 11 ವರ್ಷದ ಮಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಷಹಜಹಾನ್‍ಪುರ್ ದ ಹರಿಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಜಹಾರ್ಹರ್ ಹರಿಪುರ ಗ್ರಾಮದ ಚಂದ್ರಬಾನ್ (11) ಆತ್ಮಹತ್ಯೆಗೆ ಶರಣಾದ ಬಾಲಕ. ಚಂದ್ರಬಾನ್ ರಾಜೇಂದ್ರ ಕುಮಾರ್ ಹಾಗೂ ಸುಖಿ ದಂಪತಿಯ ಮೂರು ಮಕ್ಕಳ ಪೈಕಿ ಹಿರಿಯ ಮಗನಾಗಿದ್ದ. ಕಳೆದ ಮಂಗಳವಾರ ಶಾಲೆಗೆ ಹೋಗುವ ಮುನ್ನ ತನ್ನ ತಾಯಿಯ ಬಳಿ ಒಂದು ಕಪ್ ಟೀ ಹಾಗೂ ಬಿಸ್ಕೆಟ್ ಕೊಡುವಂತೆ ಕೇಳಿಕೊಂಡಿದ್ದನು. ಆದರೆ ತಾಯಿ ಟೀ ಮಾತ್ರ ಕೊಟ್ಟು, ಮನೆಯಲ್ಲಿ ಬಿಸ್ಕೆಟ್ ಇಲ್ಲ ಎಂದು ಹೇಳಿದ್ದರು. ನನಗೆ ಬಿಸ್ಕೆಟ್ ಬೇಕೇ ಬೇಕು. ಬಿಸ್ಕೆಟ್ ತರಲು 2 ರೂಪಾಯಿ ಕೊಡುವಂತೆ ತಾಯಿ ಬಳಿ ಬಾಲಕ ಹಠ ಹಿಡಿದಿದ್ದ. ಆದರೆ ತಾಯಿ ಮಾತ್ರ ಅವನ ಮಾತನ್ನು ನಿರಾಕರಿಸಿದ್ದರು.

    ತಾಯಿಯ ಮಾತಿನಿಂದ ಕುಪಿತಗೊಂಡಿದ್ದ ಚಂದ್ರಬಾನ್ ತನ್ನ ತಾಯಿ ಹಾಗೂ ಸಹೋದರಿ ಜೊತೆ ಜಗಳವಾಡಿದ್ದನು. ಅಲ್ಲದೇ ತಾಯಿಯ ವೇಲ್ ಅನ್ನು ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದ. ಮನೆಯಿಂದ ಹೋದ ಬಳಿಕ ಎಷ್ಟೇ ಸಮಯವಾದರೂ ಬಾಲಕ ಮನೆಗೆ ಹಿಂದಿರುಗಿರಲಿಲ್ಲ. ಆದರೆ ಮಧ್ಯಾಹ್ನದ ಹೊತ್ತಿಗೆ ಜಮೀನಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಮದ್ನಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ನಂತರ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

    ಈ ಬಗ್ಗೆ ಮದ್ನಾಪುರ್ ಪೊಲೀಸ್ ಠಾಣೆಯ ಅಧಿಕಾರಿ ಇಶ್ತಿಯಾಕ್ ಅಹಮದ್ ಮಾತನಾಡಿ, ಕೇವಲ ತನ್ನ ತಾಯಿ ಬಿಸ್ಕೆಟ್ ತಿನ್ನಲು 2 ರೂಪಾಯಿ ಹಣವನ್ನು ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಸಂಗತಿಯನ್ನು ಪೋಷಕರು ಹೇಳಿದ್ದರು. ಆದರೆ ನಾವು ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಆದರೆ ಬಾಲಕನ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕ ಸ್ವತಃ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನುವ ವರದಿ ಬಂದಿದೆ ಎಂದು ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ, ನನ್ನ ಮಗ ತುಂಬಾ ಮುಂಗೋಪಿಯ ಸ್ವಭಾವ ಹೊಂದಿದ್ದ. ಆದರೆ ಅವನು ಈ ರೀತಿ ದುಡುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದು ನಿರೀಕ್ಷಿಸಿರಲಿಲ್ಲ. ಮಗನ ಸಾವಿನಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv