Tag: mosque

  • ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

    ಬಾಬ್ರಿ ಮಸೀದಿ ಧ್ವಂಸಕ್ಕೆ 25 ವರ್ಷ – ಕರ್ನಾಟಕ ಸೇರಿದಂತೆ ದೇಶಾದ್ಯಂತ ತೀವ್ರ ಕಟ್ಟೆಚ್ಚರ

    ಮಂಗಳೂರು/ಉಡುಪಿ: ದೇಶಾದ್ಯಂತ ಸದ್ದು ಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ನಡೆದು ಇಂದಿಗೆ 25 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ದೇಶದೆಲ್ಲೆಡೆ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಲಾಗಿದೆ.

    ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಸಂಘಟನೆಗಳು ಕರಾಳ ದಿನಾಚರಣೆ, ಸಂಭ್ರಮಾಚರಣೆ ನಡೆಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯಾದ್ಯಂತ ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಬಹಿರಂಗ ಸಭೆ, ಪ್ರತಿಭಟನೆ, ರ‍್ಯಾಲಿಗೆ ನಿರ್ಬಂಧ ವಿಧಿಸಲಾಗಿದೆ.

    ಈ ನಡುವೆ ಸುಪ್ರೀಂಕೋರ್ಟ್‍ನಲ್ಲಿ ತಮಗೆ ವಿರುದ್ಧವಾಗಿ ತೀರ್ಪು ಬಂದರೂ, ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ನೃತ್ಯಗೋಪಾಲ್ ದಾಸ್ ಸ್ಪಷ್ಟಪಡಿಸಿದ್ದಾರೆ. ಇನ್ನು ಹೈದರಾಬಾದ್‍ನಲ್ಲಿ ಮಾತಾಡಿದ ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪದ್ಮಾವತಿ ಸಿನಿಮಾ ಬಿಡುಗಡೆಯಾಗೋದನ್ನು ತಡೆದಿದ್ದೀರಾ. ಈಗ ಅಯೋಧ್ಯ ರಾಮ ಮಂದಿರ ನಿರ್ಮಾಣ ಪ್ರಕರಣದ ಅರ್ಜಿ ವಿಚಾರಣೆಯನ್ನು 2019ರಲ್ಲಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಉಡುಪಿ ಕೃಷ್ಣಮಠದ ಪೇಜಾವರಶ್ರೀಗಳೂ ಮಸೀದಿ ಧ್ವಂಸದ ಕರೆ ನೀಡಿದ್ದರು ಎಂಬ ಆರೋಪ ಅಂದಿನಿಂದ ಇಂದಿನವರೆಗೂ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿದ ಶ್ರೀಗಳು, ಬಾಬ್ರೀ ಮಸೀದಿ ನನ್ನ ನೇತೃತ್ವದಲ್ಲಿ ಧ್ವಂಸವಾದದ್ದಲ್ಲ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ರಾಮಜನ್ಮಭೂಮಿ ಸ್ವಚ್ಛತಾ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೆ. ರಾಮಭೂಮಿ ಸರ್ವೋಚ್ಛ ಸಮಿತಿ ನೇತೃತ್ವವಿತ್ತು. ಆದ್ದರಿಂದ ಹೋಮ, ಹವನಗಳು, ಶುದ್ಧೀಕರಣ ಕಾರ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆ ಕಲ್ಲುಗಳು ಬಿದ್ದವು. ಕರಸೇವಕರು ಮಸೀದಿಯ ಗುಂಬಜ್ ಹತ್ತಿದ್ದರು. ಸಂಭ್ರಮಿಸಿದ ವ್ಯಕ್ತಿಯೊಬ್ಬನಿಗೆ ಕಪಾಳಕ್ಕೆ ಬಾರಿಸಿದ್ದೆ. ಅದೊಂದು ವಿಷಾಧದ ಘಟನೆ ಎಂದು ಪೇಜಾವರಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.

    ಸ್ವಾಮೀಜಿಯಾಗಿ ಹೊಡೆಯುವುದು ತಪ್ಪು ಅಂತ ಗೊತ್ತಿದೆ. ಆದರೆ ಮಸೀದಿ ಧ್ವಂಸ ಮಾಡಬೇಡಿ ಎಂದು ಕೇಳಿಕೊಂಡೆ. ಮಸೀದಿ ಇದ್ದ ಜಾಗದಲ್ಲಿ ಮಂದಿರವಿತ್ತು ಅನ್ನುವುದಕ್ಕೆ ಕುರುಹುಗಳಿವೆ, ದಾಖಲೆ ಪತ್ತೆಯಾಗಿದೆ. ಮುಸಲ್ಮಾನ ಬಂಧುಗಳು ಬೇರೆಡೆ ಬಾಬ್ರಿ ಮಸೀದಿ ನಿರ್ಮಾಣ ಮಾಡುವುದಾದರೆ ನಾನು ಆರ್ಥಿಕ ಸಹಾಯ ಮಾಡಲು ಈಗಲೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಅಶೋಕ್ ಸಿಂಘಾಲ್‍ಗೂ ಧ್ವಂಸದ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

    ನನ್ನ ಮೇಲೆ ಕೆಲ ಬುದ್ಧಿಜೀವಿಗಳು ಮಾಡುತ್ತಿರುವ ಆರೋಪ ಶುದ್ಧ ಸುಳ್ಳು. ನನಗೆ ಅರಿವೇ ಇಲ್ಲದೆ ಮಸೀದಿ ಧ್ವಂಸವಾಯಿತು. ಈ ಘಟನೆ ನಡೆದ ಮಾರನೇ ದಿನ ವಿದಾಯಸಭೆ ಮಾಡಿದ್ದೆವು. ಸುಮ್ಮನೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪೇಜಾವರಶ್ರೀಗಳು ಪ್ರಶ್ನೆ ಮಾಡಿದ್ದಾರೆ.

  • ಈಜಿಪ್ಟ್ ನ ಮಸೀದಿಯಲ್ಲಿ ಉಗ್ರರ ಅಟ್ಟಹಾಸ- 230 ಜನರ ಮಾರಣಹೋಮ

    ಈಜಿಪ್ಟ್ ನ ಮಸೀದಿಯಲ್ಲಿ ಉಗ್ರರ ಅಟ್ಟಹಾಸ- 230 ಜನರ ಮಾರಣಹೋಮ

    ಕೈರೋ: ಈಜಿಪ್ಟ್ ನ ಉತ್ತರ ಭಾಗದ ಸಿನಾಯ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಾಂಬ್ ಸ್ಫೋಟಿಸಿ ಹಾಗೂ ಗುಂಡಿನ ದಾಳಿ ನಡೆಸಿ 230 ಮಂದಿಯನ್ನ ಕೊಂದಿದ್ದಾರೆ.

    ಘಟನೆಯಲ್ಲಿ 109ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಲ್-ಆರಿಷ್ ಪ್ರಾಂತ್ಯದ ರಾಜಧಾನಿ ಬಿರ್ ಅಲ್ ಅಬ್ದ್ ನಗರ ಅಲ್-ರವ್ದಾಹ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

    ಶುಕ್ರವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಮಸೀದಿಯ ಬಳಿ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಜೀಪಿನಲ್ಲಿ ಗನ್‍ಗಳನ್ನು ಹಿಡಿದು ಬಂದಿದ್ದ ಸುಮಾರು 40 ಉಗ್ರರು, ಆತಂಕದಿಂದ ಓಡುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.

    ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಮಸೀದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಈವರೆಗೆ ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ಅಂತ ವರದಿಯಾಗಿದೆ.

    https://twitter.com/kabhishek744/status/934115547943288832

  • ಬೆಂಗಳೂರು ಜಾನ್ಸನ್ ಮಾರುಕಟ್ಟೆ ಮಸೀದಿ ಕಾಂಪೌಂಡ್ ವಿವಾದಕ್ಕೆ ಸಿಕ್ತು ಪರಿಹಾರ

    ಬೆಂಗಳೂರು ಜಾನ್ಸನ್ ಮಾರುಕಟ್ಟೆ ಮಸೀದಿ ಕಾಂಪೌಂಡ್ ವಿವಾದಕ್ಕೆ ಸಿಕ್ತು ಪರಿಹಾರ

    ಬೆಂಗಳೂರು: ನಗರದ ಪ್ರಮುಖ ಕೇಂದ್ರವಾಗಿರುವ ಜಾನ್ಸನ್ ಮಾರುಕಟ್ಟೆ ಬಳಿಯ ಮಸೀದಿ ವಿವಾದಕ್ಕೆ ಶಾಂತಿಯುತ ಪರಿಹಾರ ಸಿಕ್ಕದೆ.

    ಪ್ರಮುಖವಾಗಿ ಹೊಸೂರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಿದ್ದ ಸರ್ಕಾರ ರಸ್ತೆ ನಿರ್ಮಾಣಕ್ಕೆ ಅಡ್ಡವಾಗಿ ನಿರ್ಮಿಸಿದ್ದ ಮಸೀದಿಯ ಕಾಂಪೌಂಡ್ ತೆರವುಗೊಳಿಸಲು ಮುಂದಾಗಿತ್ತು. ಆದರೆ ಈ ಕ್ರಮಕ್ಕೆ ಮಸೀದಿಯ ಆಸ್ಕರ್ ಕಮಿಟಿ ಭಾರೀ ವಿರೋಧ ವ್ಯಕ್ತ ಪಡಿಸಿತ್ತು. ರಸ್ತೆಯ ತುದಿಗೂ ಮಸೀದಿಯ ಕಾಂಪೌಂಡ್ ನಿರ್ಮಾಣ ಮಾಡಿದ್ದರಿಂದ ಸ್ಥಳದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

    ಈ ನಡುವೆ ಸಮಸ್ಯೆಯನ್ನು ಬಗೆಹರಿಸಲು ಮಸೀದಿಯ ಆಸ್ಕರ್ ಕಮಿಟಿ ಯೊಂದಿಗೆ ಚರ್ಚೆ ನಡೆಸಿದ ಬಿಬಿಎಂಪಿ ಅವರ ಮನವೊಲಿಸಲು ಯಶಸ್ವಿಯಾಗಿತ್ತು. ಹಿನ್ನಲೆಯ ಶಾಸಕ ಹ್ಯಾರಿಸ್ ಮತ್ತು ಮೇಯರ್ ಸಂಪತ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಸರ್ಕಾರದ ವತಿಯಿಂದ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಯಿತು.

    ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಮೇಯರ್ ಸಂಪತ್ ರಾಜ್ ನಗರದಲ್ಲಿ ನಡೆಯುತ್ತಿರುವ ಗುಂಡಿ ಮುಚ್ಚುವ ಕಾರ್ಯಾಚರಣೆಯಲ್ಲಿ ಕೆಲವು ಸ್ಥಳಗಳಲ್ಲಿ ಕಳಪೆ ಕಾಮಗಾರಿ ನಡೆದಿರುವ ಮಾಹಿತಿ ಇದ್ದು, ಮತ್ತೆ ಅದೇ ಗುತ್ತಿಗೆದಾರರಿಗೆ ಸರಿಪಡಿಸಲು ಸೂಚಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು ನೀಡಿರುವ ಗಡುವಿನ ವೇಳೆಗೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

     

  • ಮಸೀದಿಯಲ್ಲಿ ಮೊಬೈಲ್ ಬಳಸ್ಬೇಡಿ ಎಂದಿದ್ದಕ್ಕೆ ಮೌಲನಾರನ್ನು ಎತ್ತಂಗಡಿ ಮಾಡಿಸಿದ ಪರಮೇಶ್ವರ್ ನಾಯ್ಕ್

    ಮಸೀದಿಯಲ್ಲಿ ಮೊಬೈಲ್ ಬಳಸ್ಬೇಡಿ ಎಂದಿದ್ದಕ್ಕೆ ಮೌಲನಾರನ್ನು ಎತ್ತಂಗಡಿ ಮಾಡಿಸಿದ ಪರಮೇಶ್ವರ್ ನಾಯ್ಕ್

    ಬಳ್ಳಾರಿ: ಹೂವಿನಹಡಗಲಿ ಶಾಸಕ ಪರಮೇಶ್ವರ ನಾಯ್ಕ್ ಸಚಿವರಾಗಿದ್ದಾಗ ಫೋನ್ ಹೋಲ್ಡ್ ಮಾಡಿದ್ರು ಅಂತ ಕೂಡ್ಲಗಿ ಡಿವೈಎಸ್‍ಪಿ ಅನುಪಮಾ ಶಣೈ ಅವ್ರನ್ನೇ ಎತ್ತಂಗಡಿ ಮಾಡಿಸಿದ್ರು. ಈಗ ಮಸೀದಿಯಲ್ಲಿ ಮೊಬೈಲ್ ಫೋನ್ ಬಳಸಬೇಡಿ ಅಂತ ಪರಮೇಶ್ವರ್ ನಾಯ್ಕ್ ಆಪ್ತರಿಗೆ ಸೂಚಿಸಿದ್ದಕ್ಕೆ ಮುಸ್ಲಿಂ ಮೌಲಾನಾರಿಗೆ ಮಸೀದಿಯಿಂದಲೇ ಗೇಟ್‍ಪಾಸ್ ಕೊಟ್ಟಿದ್ದಾರೆ.

    ನಾಯ್ಕ್ ಸಹಚರ ವರದಾ ಗೌಸ್ ಎಂಬವರ ಸಹೋದರ ನಿಯಾಜ್‍ಗೆ ಬುದ್ಧಿ ಹೇಳಿದ್ದಕ್ಕೆ ಧರ್ಮಗುರುಗಳು ಪರಮೇಶ್ವರ್ ನಾಯ್ಕ್ ವಕ್ರದೃಷ್ಠಿಗೆ ಗುರಿಯಾಗಿದ್ದಾರೆ. ಮೆಹಮೂದ್ ಆಲಂ 18 ವರ್ಷಗಳಿಂದ ಹಡಗಲಿಯ ಜಾಮಿಯಾ ಮಸೀದಿ ಧರ್ಮಗುರುವಾಗಿ ಸೇವೆ ಸಲ್ಲಿಸ್ತಿದ್ದಾರೆ. ಆದ್ರೆ ಮೌಲನಾರನ್ನು ಎತ್ತಂಗಡಿ ಮಾಡದಿದ್ದರೆ ದೊಂಬಿ, ಕೋಮು ಗಲಭೆ, ರಕ್ತಪಾತ ಸೃಷ್ಟಿಯಾಗುತ್ತೆ ಅಂತಾ ತಹಶೀಲ್ದಾರ್‍ರಿಂದ ವಕ್ಫ್ ಬೋರ್ಡ್‍ಗೆ ವರದಿ ಸಲ್ಲಿಸಿದ್ದಾರೆ. ಅಲ್ಲದೆ ಮೌಲನಾರ ವಿರುದ್ಧ ನಡೆದ ಷಂಡ್ಯತ್ರದ ಆಡಿಯೋ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಡಿಯೋದಲ್ಲೇನಿದೆ?: ನಾಳೆ ಬೆಳಗ್ಗೆ ಒಂದು ಡ್ರಾಪ್ ಮಾಡು, ಒಂದು ಕಾಪಿ ದೈವಕ್ಕೂ, ಒಂದು ಕಾಪಿ ಮಸೀದಿ ಕಮಿಟಿಗೆ ಕಳಿಸು. ಹತ್ತತ್ತು ಮಂದಿದಾ ಸಹಿ ಮಾಡಿಸ್ಕೋ. ಸಹಿ ಯಾಕೆ ಅಂತಾ ಅವರಿಗೆ ಏನೂ ಹೇಳ್ಬೇಡ. ನಾಲ್ಕು ಜನ ಮಿನಿಸ್ಟರ್ ಹತ್ತಿರ ಹೋಗಿ ಮಿನಿಸ್ಟರ್‍ನಿಂದ ಡಿವೈಎಸ್‍ಪಿಗೆ ಫೋನ್ ಮಾಡ್ಸಿ. ಆತ ಮೌಲನಾ ಆದ್ರೆ ಕೋಮು ಗಲಭೆ ಮಾಡಿಸ್ತಾನೆ. ಯೆಂಡಾ ಪಂಡಾ ಕಟ್ಟಿಸ್ತಾನೆ. ಪೊಲೀಸ್ರು ಎಂಎಲ್‍ಎ ಮಂತ್ರಿನಾ ಬೈತಾನೆ. ಊರಮ್ಮನ ಜಾತ್ರೆ ಮಾಡಬೇಡ ಅಂತಾನೆ ಅಂತ ಹೇಳು. ಮಸೀದಿ ಕಮಿಟಿ ರದ್ದು ಮಾಡೋದೆ ನಮ್ಮ ಕೆಲಸ ಗೊತ್ತಾಯ್ತಾ.

    https://www.youtube.com/watch?v=UWEQaBKFeRw&feature=youtu.be

    ಹೀಗೆ ಮಸಲತ್ತು ಮಾಡಿ ಮೌಲಾನರನ್ನ ಮಸೀದಿಯಿಂದ ಓಡಿಸಿದ್ದಕ್ಕೆ ಮುಸ್ಲಿಮರು ಸಿಟ್ಟಿಗೆದ್ದಿದ್ದಾರೆ. ಹೀಗಾಗಿ ಮಸೀದಿಯ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ವರದಾ ಗೌಸ್

    ನಿಯಾಜ್‍

  • ಎಲ್ಲಾ ದೇವಾಲಯ, ಮಸೀದಿ, ಚರ್ಚ್ ಒಡೆದು ಹಾಕಿ ಎಂದು ಕೆ.ಎಸ್ ಭಗವಾನ್ ವಿವಾದ ಸೃಷ್ಟಿ

    ಎಲ್ಲಾ ದೇವಾಲಯ, ಮಸೀದಿ, ಚರ್ಚ್ ಒಡೆದು ಹಾಕಿ ಎಂದು ಕೆ.ಎಸ್ ಭಗವಾನ್ ವಿವಾದ ಸೃಷ್ಟಿ

    – ಭಗವಾನ್ ಹೇಳಿಕೆಗೆ ನಟ ಮಾಸ್ಟರ್ ಕಿಶನ್ ವಿರೋಧ

    ರಾಯಚೂರು: ದೇಶದ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳನ್ನು ಒಡೆದು ಹಾಕಿ. ಇವು ಜನರನ್ನು ಸೇರಿಸಲ್ಲ ದೂರ ಮಾಡುತ್ತವೆ. ಎಲ್ಲಾ ಮತಗಳು ದ್ವೇಷವನ್ನು ಹರಡುತ್ತಿವೆ ಎಂದು ಚಿಂತಕರಾದ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಇಂದು ರಾಯಚೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅನಗತ್ಯ. ಮಂದಿರ ಬದಲಾಗಿ ಉತ್ತಮ ಜಲಾಶಯ, ಅತ್ಯುತ್ತಮ ವಿಶ್ವವಿದ್ಯಾಲಯ, ಗ್ರಾಮಗಳಲ್ಲಿ ಉತ್ತಮ ಶಾಲೆ ನಿರ್ಮಾಣವಾಗಬೇಕು. 26 ಬಾರಿ ಹೊರಗಿನವರು ದೇಶದ ಮೇಲೆ ದಾಳಿ ಮಾಡಿದಾಗ ದೇವರು ಎಲ್ಲಿ ಹೋಗಿದ್ದರು? ನಿಮ್ಮ ರಾಮ, ಶಿವ, ಕೃಷ್ಣ, ಕಾಳಿ ಏನ್ ಮಾಡುತ್ತಿದ್ದರು? ಕೆಲಸಕ್ಕೆ ಬಾರದ ದೇವರುಗಳಿಗೆ ದೇವಾಲಯ ಯಾಕೆ ಕಟ್ಟಬೇಕು? ಯಾವ ದೇವಸ್ಥಾನ ಕಟ್ಟುವುದು ಪ್ರಯೋಜನವಿಲ್ಲ ಎಂದು ಹೇಳಿದರು.

    ಶಿವನ ದೇವಾಲಯ ಯಾಕೆ ಕಟ್ಟುವುದಿಲ್ಲ? ಶಿವ ಪುರಾತನ ದೇವರು. ಗುಲಾಮಗಿರಿ ಎತ್ತಿಹಿಡಿಯುವ ದೇವರಲ್ಲ. ಆದ್ರೆ ಗುಲಾಮಗಿರಿಯನ್ನು ಎತ್ತಿ ಹಿಡಿಯುವ ರಾಮ, ಕೃಷ್ಣರ ದೇವಾಲಯಗಳನ್ನೇ ಯಾಕೆ ಕಟ್ಟುತ್ತಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ರಾಮ ದೇವರು ಅಂತ ಹೇಳಿಲ್ಲ ಎಂದು ಭಗವಾನ್ ಹೇಳಿದ್ರು.

    ಇದೇ ವೇದಿಕೆಯಲ್ಲಿದ್ದ ಮಾಸ್ಟರ್ ಕಿಶನ್ ಇದಕ್ಕೆ ವಿರೋಧ ವ್ಯಕ್ತಪಡಿಸಿ, ಭಗವಾನ್ ಅವರ ಮಾತನ್ನ ನಾನು ಒಪ್ಪಲ್ಲ. ಮಂತ್ರಾಲಯಕ್ಕೆ ಹೋಗಬೇಕು ಅಂತ ಆಸೆ ಇತ್ತು. ಇವತ್ತು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿದ್ದೆ. ಉಪವಾಸ ವ್ರತ ಆಚರಿಸಿ ನಾನು ದೇವಸ್ಥಾನಕ್ಕೆ ಹೋಗಿ ಬಂದೆ. ಒಬ್ಬ ಯುವಕನಾಗಿ ಜಾತಿ ವ್ಯವಸ್ಥೆ ಬಗ್ಗೆ ನಂಬಿಕೆಯಿಲ್ಲ. ಶಾಂತಿಗಾಗಿ ದೇವಾಲಯಕ್ಕೆ ಹೋಗುತ್ತೇವೆ ಎಂದು ಹೇಳಿದ್ರು.