Tag: Moscow

  • ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

    ಭಾರತದ ಚಂದ್ರಯಾನ-3 ಉಡಾವಣೆ ಬೆನ್ನಲ್ಲೇ ಚಂದ್ರನೆಡೆಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದ ರಷ್ಯಾ

    ಮಾಸ್ಕೋ: ಕಳೆದ ತಿಂಗಳು ಭಾರತ ಚಂದ್ರಯಾನ-3 (Chandrayaan-3) ಉಡಾವಣೆ ಮಾಡಿದ್ದು, ಇದರ ಬೆನ್ನಲ್ಲೇ ರಷ್ಯಾ (Russia) ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿ ಚಂದ್ರನೆಡೆಗೆ (Moon) ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.

    ವರ್ಷದಿಂದ ಉಕ್ರೇನ್‌ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಹೆಜ್ಜೆ ಇಟ್ಟಿದೆ. ಇದೀಗ ಉಡಾವಣೆಯಾಗಿರುವ ಲೂನಾ-25 (Luna-25) ಪ್ರೋಬ್ 1976 ರಿಂದ ರಷ್ಯಾದ ಮೊದಲ ಚಂದ್ರನ ಮೇಲಿನ ಕಾರ್ಯಾಚರಣೆಯಾಗಿದೆ.

    ಲೂನಾ-25 ಪ್ರೋಬ್ ಅನ್ನು ಹೊತ್ತ ರಾಕೆಟ್ ಗುರುವಾರ ಸ್ಥಳೀಯ ಕಾಲಮಾನ 02:10 ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ. ಈ ಉಪಗ್ರಹ ಆಗಸ್ಟ್ 21ರ ವೇಳಗೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಹೇಗಿದೆ ನೋಡಿ – Chandrayaan-3 ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

    ಈ ನೌಕೆ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿರುವ ಉಪಗ್ರಹ ಅದಕ್ಕೂ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು 3-7 ದಿನಗಳನ್ನು ತೆಗೆದುಕೊಳ್ಳಲಿದೆ.

    ಇತಿಹಾಸದಲ್ಲಿ ಮೊದಲ ಬಾರಿಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ-25 ಇಳಿಯಲಿದೆ. ಇಲ್ಲಿಯವರೆಗೆ ಚಂದ್ರನ ಮೇಲೆ ನಡೆಸಲಾಗಿರುವ ಎಲ್ಲಾ ಕಾರ್ಯಾಚರಣೆಗಳು ಸಮಭಾಜಕ ವಲಯದಲ್ಲಿ ಇಳಿದಿವೆ ಎಂದು ಹಿರಿಯ ರೋಸ್ಕೊಸ್ಮಾಸ್ ಅಧಿಕಾರಿ ಅಲೆಕ್ಸಾಂಡರ್ ಬ್ಲೋಖಿನ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ.

    1 ವರ್ಷಗಳವರೆಗೆ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಲಿರುವ ಬಾಹ್ಯಾಕಾಶ ನೌಕೆ ಮಣ್ಣಿನ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೊಳಪಡಿಸಲಿದೆ. ಜೊತೆಗೆ ದೀರ್ಘಕಾಲದ ವೈಜ್ಞಾನಿಕ ಸಂಶೋಧನೆ ನಡೆಸಲಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ಕ್ರೋಮ್‌, ಫೈರ್‌ಫಾಕ್ಸ್‌, ಎಡ್ಜ್‌ಗೆ ಸೆಡ್ಡು – ದೇಶಿ ಬ್ರೌಸರ್‌ ಅಭಿವೃದ್ಧಿ ಪಡಿಸಿ, ಕೋಟಿ ರೂ. ಗೆಲ್ಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

    ಮಾಸ್ಕೋ ಮೇಲೆ ಡ್ರೋನ್‌ ದಾಳಿ – ಇದು ಉಕ್ರೇನ್‌ ಕೃತ್ಯ ಎಂದ ರಷ್ಯಾ

    ಮಾಸ್ಕೋ: ರಷ್ಯಾ ಉಕ್ರೇನ್‌ ಯುದ್ಧ (Russia-Ukraine War) ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ಮಾಸ್ಕೋ (Moscow) ಮೇಲೆ ಡ್ರೋನ್‌ ದಾಳಿ (Drone Attacks) ನಡೆದಿದ್ದು, ಈ ದಾಳಿಯನ್ನು ಉಕ್ರೇನ್‌ ನಡೆಸಿದೆ ಎಂದು ರಷ್ಯಾ ಆರೋಪ ಮಾಡಿದೆ

    ಪಶ್ಚಿಮದಲ್ಲಿರುವ ಓಡಿಂಟ್ಸೊವೊ ಜಿಲ್ಲೆಯಲ್ಲಿ ಒಂದು ಡ್ರೋನ್‌ ಹೊಡೆದು ಉರುಳಿಸಲಾಗಿದೆ. ಇನ್ನು ಎರಡು ಡ್ರೋನ್‌ ಮೇಲೆ ದಾಳಿ ಮಾಡಿ ತಟಸ್ಥಗೊಳಿಸಿದ್ದರೂ ಅವು ಕಟ್ಟಡದ ಮೇಲೆ ಅಪ್ಪಳಿಸಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

    ಈ ದಾಳಿಯಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ. ಎರಡು ಕಟ್ಟಡಗಳ ಮುಂಭಾಗಗಳು ಸ್ವಲ್ಪ ಹಾನಿಗೊಳಗಾಗಿವೆ ಎಂದು ನಗರದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

    ಉಕ್ರೇನ್‌ ಅಧಿಕಾರಿಗಳು ಘಟನೆಯನ್ನು ಒಪ್ಪಿಕೊಂಡಿಲ್ಲ. ನಗರ ಕೇಂದ್ರದ ನೈಋತ್ಯದಲ್ಲಿರುವ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು ಈ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವಿಮಾನಗಳನ್ನು ಬೇರೆ ನಿಲ್ದಾಣಗಳ ಕಡೆಗೆ ತಿರುಗಿಸಲಾಗಿದೆ.

    ಭಾನುವಾರ ಬೆಳಗಿನ ಜಾವ ಈ ದಾಳಿ ನಡೆದಿದೆ. ಉಕ್ರೇನ್‌ ಗಡಿಯಿಂದ ಮಾಸ್ಕೋ 500 ಕೀ.ಮೀ ದೂರದಲ್ಲಿದೆ. ರಷ್ಯಾದ ಒಳಗಡೆ ನಡೆದ ದಾಳಿಗೆ ನಾನು ಕಾರಣ ಎಂದು ಉಕ್ರೇನ್‌ ಒಪ್ಪಿಕೊಂಡಿರುವುದು ಬಹಳ ವಿರಳ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಪಿಂಗ್ ಮಾಲ್‍ನಲ್ಲಿ ಬಿಸಿನೀರಿನ ಪೈಪ್ ಬ್ಲಾಸ್ಟ್- ನಾಲ್ವರು ಸಾವು

    ಶಾಪಿಂಗ್ ಮಾಲ್‍ನಲ್ಲಿ ಬಿಸಿನೀರಿನ ಪೈಪ್ ಬ್ಲಾಸ್ಟ್- ನಾಲ್ವರು ಸಾವು

    ಮಾಸ್ಕೋ: ರಾಷ್ಯಾದ ರಾಜಧಾನಿ ಪಶ್ಚಿಮ ಮಾಸ್ಕೋ (Western Moscow) ನಗರದಲ್ಲಿರುವ ಶಾಪಿಂಗ್ ಮಾಲ್  (Shopping Mall)  ಒಂದರಲ್ಲಿ ಬಿಸಿನೀರಿನ ಪೈಪ್ (Hot Water Pipe Burst) ಒಡೆದು ನಾಲ್ವರು ಸಾವನ್ನಪ್ಪಿ , 10 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

    ಈ ಸಂಬಂಧ ಅಲ್ಲಿನ ಮೇಯರ್ ಮೇಯರ್ ಸೆರ್ಗೆಯ್ ಸೊಬಯಾನಿನ್ ಪ್ರತಿಕ್ರಿಯಿಸಿ, ಗಾಯಗೊಂಡವರಲ್ಲಿ ಕೆಲವರು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಮತ್ತು ತುರ್ತು ಸೇವೆಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಸ್ಥಳದಲ್ಲಿ ಯಾವುದೇ ಅಮೋನಿಯಾ ಸೋರಿಕೆಯಾಗಿಲ್ಲ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಈವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ಅವೈಡ್ ಮಾಡ್ತಿದ್ದ ಲವ್ವರ್ ಮನೆಗೆ ಹೋಗಿ ಗಲಾಟೆ ಮಾಡಿ ಚಾಕು ಹಾಕಿದ್ಳು!

    ವ್ರೆಮೆನಾ ಗೋಡಾ (Vremena Goda) (ದಿ ಸೀಸನ್ಸ್) ಎಂದು ಕರೆಯಲ್ಪಡುವ ಈ ಮಾಲ್ 2007 ರಲ್ಲಿ ಪ್ರಾರಂಭವಾಗಿದೆ. ಇದರಲ್ಲಿ 150 ಕ್ಕೂ ಹೆಚ್ಚು ಮಳಿಗೆಗಳಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

    ದಂಗೆ ನಿಲ್ಲಿಸಿ ನಗರ ತೊರೆದ ವ್ಯಾಗ್ನರ್ ಪಡೆ – ಟಾ ಟಾ.. ಬೈ ಬೈ ಹೇಳಿದ ರಷ್ಯನ್ನರು

    ಮಾಸ್ಕೋ: ಯೆವ್ಗೆನಿ ಪ್ರಿಗೋಜಿನ್ (Yevgeny Prigozhin) ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ (Wagner) ರಷ್ಯಾ (Russia) ಮೇಲೆ ದಂಗೆ ಏಳಲು ನಿರ್ಧರಿಸಿತ್ತು. ಆದರೆ ಬೆಲಾರಸ್ ಅಧ್ಯಕ್ಷ ಲೂಕಶೆಂಕೋ ಮಧ್ಯಸ್ತಿಕೆಯ ಪರಿಣಾಮ ಹೋರಾಟವನ್ನು ವ್ಯಾಗ್ನರ್ ಮುಖ್ಯಸ್ಥ ಪ್ರಿಗೋಜಿನ್ ಕೈಬಿಟ್ಟಿದ್ದಾರೆ. ವ್ಯಾಗ್ನರ್ ಪಡೆಗಳು ದಕ್ಷಿಣ ರಷ್ಯಾದ ರೋಸ್ಟೋವ್ ಆನ್ ಡಾನ್ ಅನ್ನು ತೊರೆಯುತ್ತಿದ್ದ ವೇಳೆ ನಗರವಾಸಿಗಳು ಅವರತ್ತ ಕೈ ಬೀಸಿ ಸಂಭ್ರಮಿಸಿದ್ದಾರೆ.

    ಉಕ್ರೇನ್ (Ukraine) ವಿರುದ್ಧ ದಾಳಿ ನಡೆಸುತ್ತಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಪ್ತನೇ ರಷ್ಯಾ ಸೇನೆ ವಿರುದ್ಧ ಬಂಡಾಯ ಎದ್ದಿದ್ದ. ಯೆವ್ಗೆನಿ ಪ್ರಿಗೋಜಿನ್ ನಾಯಕತ್ವದ ಖಾಸಗಿ ಸೇನೆ ವ್ಯಾಗ್ನರ್ ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದು ದಾಳಿಗೆ ಮುಂದಾಗಿತ್ತು.

    ವ್ಯಾಗ್ನರ್ ಸೇನೆ ಮೊದಲು ರೋಸ್ಟೋವ್ ನಗರವನ್ನು ವಶಪಡಿಸಿಕೊಂಡಿತ್ತು. ಬಳಿಕ ಮಾಸ್ಕೋದ ಹೆಚ್ಚಿನ ಭಾಗವನ್ನು ಆಕ್ರಮಿಸಿ ಮುಂದುವರಿದಿತ್ತು. ಹೆಚ್ಚಿನ ಅನಾಹುತ ತಪ್ಪಿಸಲು ಮಧ್ಯಪ್ರವೇಶಿಸಿದ ಬೆಲಾರಸ್ ಅಧ್ಯಕ್ಷ ಮಾತುಕತೆ ಮೂಲಕ ದಂಗೆ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ರಷ್ಯಾ ದಂಗೆ ಮಾತುಕತೆ ಮೂಲಕ ದಮನ – ಬೆಲಾರಸ್ ಅಧ್ಯಕ್ಷ ಮಧ್ಯಸ್ತಿಕೆಯಿಂದ ಮಾರ್ಗ ಮಧ್ಯೆಯೇ ಹೋರಾಟ ಕೈಬಿಟ್ಟ ಪ್ರಿಗೋಜಿನ್

    ಇದೀಗ ಮಾಸ್ಕೋ ಸಮೀಪ ಬಂದಿದ್ದ ವ್ಯಾಗ್ನರ್‌ಗಳಿಗೆ ವಾಪಸಾಗುವಂತೆ ಸೂಚಿಸಲಾಗಿದೆ. ಅದರಂತೆ ವ್ಯಾಗ್ನರ್ ಪಡೆಗಳು ನಗರವನ್ನು ತೊರೆಯುವ ಸಂದರ್ಭ ರಷ್ಯನ್ನರು ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೇ ಹೊರಟಿದ್ದ ಖಾಸಗಿ ಸೇನೆಗೆ ಟಾ ಟಾ.. ಬೈ ಬೈ ಹೇಳಿದ್ದಾರೆ. ಈ ದೃಶ್ಯದ ವೀಡಿಯೋ ವೈರಲ್ ಆಗಿದೆ.

    ವ್ಯಾಗ್ನರ್ ಗುಂಪು ಟೆಲಿಗ್ರಾಂನಲ್ಲಿ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಶಸ್ತ್ರಸಜ್ಜಿತ ವಾಹನಗಳು ಹಾಗೂ ಟ್ಯಾಂಕರ್‌ಗಳು ಪಟ್ಟಣವನ್ನು ತೊರೆಯುವ ದೃಶ್ಯವಿದೆ. ಈ ವೇಳೆ ಹತ್ತಾರು ಜನರು ವ್ಯಾಗ್ನರ್.. ವ್ಯಾಗ್ನರ್.. ಎಂದು ಘೋಷಣೆ ಕೂಗಿದ್ದಾರೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ಈ ವೇಳೆ ಜನರು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ

  • ಬಾಂಬ್ ಬೆದರಿಕೆ – ಮಾಸ್ಕೋದಿಂದ ಗೋವಾ ಬರಬೇಕಿದ್ದ ವಿಮಾನ ಉಜ್ಬೇಕಿಸ್ತಾನದಲ್ಲಿ ಲ್ಯಾಂಡ್

    ಬಾಂಬ್ ಬೆದರಿಕೆ – ಮಾಸ್ಕೋದಿಂದ ಗೋವಾ ಬರಬೇಕಿದ್ದ ವಿಮಾನ ಉಜ್ಬೇಕಿಸ್ತಾನದಲ್ಲಿ ಲ್ಯಾಂಡ್

    ಪಣಜಿ: ಸುಮಾರು 240 ಪ್ರಯಾಣಿಕರಿದ್ದ ರಷ್ಯಾದ ರಾಜಧಾನಿ ಮಾಸ್ಕೋದಿಂದ (Moscow) ಗೋವಾಗೆ (Goa) ಹೊರಟಿದ್ದ ವಿಮಾನವೊಂದರಲ್ಲಿ (Flight) ಬಾಂಬ್ ಬೆದರಿಕೆ (Bomb threat) ಕರೆ ಬಂದಿದ್ದು, ವಿಮಾನವನ್ನು ಉಜ್ಬೇಕಿಸ್ತಾನದಲ್ಲಿ (Uzbekistan) ತುರ್ತುಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಷ್ಯಾದ ಪೆರ್ಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ಹೊರಟಿದ್ದ ಅಝುರ್ ಏರ್ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಬಳಿಕ ಅದನ್ನು ಉಜ್ಬೇಕಿಸ್ತಾನದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿ 2 ಶಿಶುಗಳು, 7 ಸಿಬ್ಬಂದಿ ಸೇರಿದಂತೆ ಒಟ್ಟು 238 ಪ್ರಯಾಣಿಕರು ಇದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೈಟೆನ್ಷನ್ ಕೆಳಗೆ ನಗರದಲ್ಲಿವೆಯಂತೆ 10 ಸಾವಿರ ಮನೆಗಳು- ಖಡಕ್ ನೋಟಿಸ್ ಕೊಡಲು ಬಿಬಿಎಂಪಿ ತಯಾರಿ

    ವರದಿಗಳ ಪ್ರಕಾರ, ವಿಮಾನ ಶನಿವಾರ ಮುಂಜಾನೆ 4:15ರ ವೇಳೆಗೆ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಇದಕ್ಕೂ ಮುನ್ನ 2:30ರ ವೇಳೆಗೆ ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರು ಬಾಂಬ್ ಬೆದರಿಕೆಯ ಮೇಲ್ ಅನ್ನು ಸ್ವೀಕರಿಸಿದ್ದು, ಅದನ್ನು ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    2 ವಾರಗಳ ಇಂದಷ್ಟೇ ಇಂತಹುದೇ ಇನ್ನೊಂದು ಹುಸಿ ಬಾಂಬ್ ಬೆದರಿಕೆ ವರದಿಯಾಗಿತ್ತು. ಜನವರಿ 9ರಂದು 244 ಪ್ರಯಾಣಿಕರಿದ್ದ ವಿಮಾನ ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ಸಂದರ್ಭ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನವನ್ನು ಜಾಮ್‌ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಇದನ್ನೂ ಓದಿ: ತನ್ನ ಬೆಕ್ಕು ಕದ್ದಿದ್ದಾರೆಂದು ಶಂಕಿಸಿ ನೆರೆಮನೆಯವರ ಪಾರಿವಾಳಗಳಿಗೆ ವಿಷ ಉಣಿಸಿದ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಷ್ಯಾ ನರ್ಸಿಂಗ್ ಹೋಂನಲ್ಲಿ ಅಗ್ನಿ ದುರಂತ – 20 ಮಂದಿ ದಾರುಣ ಸಾವು

    ರಷ್ಯಾ ನರ್ಸಿಂಗ್ ಹೋಂನಲ್ಲಿ ಅಗ್ನಿ ದುರಂತ – 20 ಮಂದಿ ದಾರುಣ ಸಾವು

    ಮಾಸ್ಕೊ: ಸೈಬೀರಿಯಾದ ಕೆಮೆರೊವೊ ನಗರದ ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ (Nursing Home) ಸಂಭವಿಸಿದ ಅಗ್ನಿ ದುರಂತದಲ್ಲಿ (Fire Broke) 20 ಮಂದಿ ಮೃತಪಟ್ಟಿರುವುದಾಗಿ ರಷ್ಯಾದ ತುರ್ತು ಸಚಿವಾಲಯ (Russia Emergencies Ministry) ತಿಳಿಸಿದೆ.

    ಮಾಸ್ಕೊದಿಂದ (Moscow) ಪೂರ್ವಕ್ಕೆ 3 ಸಾವಿರ ಕಿಮೀ ದೂರದಲ್ಲಿರುವ ಕೆಮೆರೊವೊ ನಗರದಲ್ಲಿ ಎರಡು ಅಂತಸ್ತಿನ ನರ್ಸಿಂಗ್ ಹೋಂನಲ್ಲಿ ಶನಿವಾರ ಮುಂಜಾನೆಯೇ ಬೆಂಕಿ ಕಾಣಿಸಿಕೊಂಡಿತು. ಅಗ್ನಿ ಅನಾಹುತಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಇದನ್ನೂ ಓದಿ: ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಅರೆಸ್ಟ್

    ಬೆಂಕಿ ಹೊತ್ತಿಕೊಂಡಾಗ ನರ್ಸಿಂಗ್ ಹೋಂನಲ್ಲಿ ಎಷ್ಟು ಜನರು ಇದ್ದರು ಎಂಬುದೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದೆ. ಕಾರ್ಯಾಚರಣೆ ಮುಂದುವರಿಸಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾರಂಭದಲ್ಲಿ ಮತ್ತೆ ಯುದ್ಧ – ರಷ್ಯಾದಿಂದ 2 ಲಕ್ಷ ಸಾಮರ್ಥ್ಯದ ಸೇನೆ ಸಿದ್ಧ

    ಹೊಸ ವರ್ಷಾರಂಭದಲ್ಲಿ ಮತ್ತೆ ಯುದ್ಧ – ರಷ್ಯಾದಿಂದ 2 ಲಕ್ಷ ಸಾಮರ್ಥ್ಯದ ಸೇನೆ ಸಿದ್ಧ

    ಕೀವ್: ಮುಂಬರುವ ಹೊಸ ವರ್ಷ ಉಕ್ರೇನ್ (Ukraine) ಪಾಲಿಗೆ ಕಹಿಯಾಗಿದೆ. ಕೆಲ ದಿನಗಳಿಂದ ಬಿಡುವು ನೀಡಿದ್ದ ರಷ್ಯಾ-ಉಕ್ರೇನ್ ಯುದ್ಧ (Russia Ukraine War)  ಮತ್ತೊಮ್ಮೆ ಭೀಕರ ಸ್ವರೂಪಕ್ಕೆ ತಿರುಗುವುದು ಖಚಿವಾಗಿದೆ. 2023ರ ಹೊಸ ವರ್ಷದ ಆರಂಭದಲ್ಲಿ ರಷ್ಯಾದಿಂದ ಮತ್ತೆ ದಾಳಿ ಎದುರಾಗುವ ಬಗ್ಗೆ ಉಕ್ರೇನ್ ಸಶಸ್ತ್ರ ಪಡೆಗಳ ಕಮಾಂಡರ್ ಮುಖ್ಯಸ್ಥ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ರಷ್ಯಾ, ಉಕ್ರೇನ್ (Russia-Ukraine) ಮೇಲಿನ ತನ್ನ ದಾಳಿಯನ್ನು ಮುಂದುವರಿಸಲು ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಸುಮಾರು 2 ಲಕ್ಷ ಸೈನಿಕರನ್ನು ಒಳಗೊಂಡ ಹೊಸ ಸೇನಾಪಡೆಯನ್ನು ಸಿದ್ಧಪಡಿಸುತ್ತಿದೆ. ಕೀವ್‌ನಲ್ಲಿ (Kyiv) ಅಟ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು

    ಉಕ್ರೇನ್ ಸಹ ದಾಳಿಯ ಬಗ್ಗೆ ಎಲ್ಲಾ ಲೆಕ್ಕಾಚಾರ ಮಾಡಿಕೊಂಡಿದೆ. ನಮಗೆ ಎಷ್ಟು ಯುದ್ಧ ಟ್ಯಾಂಕರ್‌ಗಳು ಬೇಕು? ಫಿರಂಗಿಗಳು ಬೇಕು ಎಲ್ಲ ರೀತಿಯ ಲೆಕ್ಕಾಚಾರ ಮಾಡಿದ್ದೇವೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಉಕ್ರೇನ್ ಈಶಾನ್ಯದಲ್ಲಿರುವ ಖಾರ್ಕೀವ್ ಪ್ರದೇಶದಿಂದ ರಷ್ಯನ್ ಪಡೆಗಳನ್ನು ಹಿಂದಕ್ಕೆ ಸರಿಸಿತ್ತು. ಆನಂತರದಲ್ಲಿ ರಷ್ಯಾ, ಉಕ್ರೇನಿನ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿತ್ತು. ನಿರಂತರ ಕ್ಷಿಪಣಿ (Missile), ಡ್ರೋನ್ (Drone) ದಾಳಿಯಿಂದ ಇಂಧನ ಸಂಪನ್ಮೂಲ ಹಾಗೂ ಇತರ ಮೂಲಸೌಕರ್ಯಗಳನ್ನು ನಾಶಪಡಿಸಿತು. ಇದರಿಂದ ಈಗಾಗಲೇ ದೇಶಾದ್ಯಂತ ಭಾರೀ ವಿದ್ಯುತ್ ಅಭಾವವನ್ನುಂಟು ಮಾಡಿದೆ ಎಂದು ಸೇನಾ ಮುಖ್ಯಸ್ಥ ತಿಳಿಸಿದ್ದಾರೆ.

    ಸದ್ಯ ಉಕ್ರೇನ್‌ಗೆ ರಷ್ಯಾ ಪಡೆಗಳನ್ನು ಎದುರಿಸಲು 300 ಟ್ಯಾಂಕರ್‌ಗಳು, 600 ರಿಂದ 700 ಇನ್ಫಾಂಟರಿ ಫೈಟಿಂಗ್ ವೆಹಿಕಲ್ (ಪದಾತಿದಳದ ಹೋರಾಟದ ವಾಹನಗಳು) ಹಾಗೂ 500 ಹೊವಿಟ್ಜರ್‌ಗಳು ಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಕ್ಷಣ ಉಕ್ರೇನ್‌ನಿಂದ ಹೊರಟುಬಿಡಿ – ವಿದ್ಯಾರ್ಥಿಗಳು, ನಾಗರಿಕರಿಗೆ ಭಾರತ ತುರ್ತು ಸಲಹೆ

    ಕೆಲ ದಿನಗಳ ಹಿಂದೆಯಷ್ಟೇ ಉಕ್ರೇನ್ ರಷ್ಯಾದ ತೂಗು ಸೇತುವೆಯನ್ನು ಧ್ವಂಸಗೊಳಿಸಿದ ನಂತರ ಉಕ್ರೇನ್ ಭೀಕರ ದಾಳಿಗೆ ತುತ್ತಾಗಿತ್ತು. ರಷ್ಯಾ ಏಕಾಏಕಿ 100 ಕ್ಷಿಪಣಿಗಳು, ಇರಾನಿ ಡ್ರೋನ್‌ಗಳ ಮೂಲಕ ದಾಳಿ ನಡೆಸಿತು.

    Live Tv
    [brid partner=56869869 player=32851 video=960834 autoplay=true]

  • ಇದು ಯುದ್ಧದ ಸಮಯ ಅಲ್ಲ: ರಷ್ಯಾ ಭೇಟಿ ವೇಳೆ ಪುನರುಚ್ಚರಿಸಿದ ಜೈಶಂಕರ್

    ಇದು ಯುದ್ಧದ ಸಮಯ ಅಲ್ಲ: ರಷ್ಯಾ ಭೇಟಿ ವೇಳೆ ಪುನರುಚ್ಚರಿಸಿದ ಜೈಶಂಕರ್

    ಮಾಸ್ಕೋ: ಭಾರತದ (India) ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರು ಇಂದು ರಷ್ಯಾಗೆ (Russia) ಭೇಟಿ ನೀಡಿದ್ದು, ಅಲ್ಲಿ ರಷ್ಯಾ ಉಕ್ರೇನ್ (Ukraine) ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಮಾತನಾಡಿ, ಇದು ಯುದ್ಧದ (War) ಸಮಯವಲ್ಲ ಎಂದು ಪುನರುಚ್ಚರಿಸಿದ್ದಾರೆ.

    ರಷ್ಯಾದ ರಾಜಧಾನಿ ಮಾಸ್ಕೋಗೆ (Moscow) ತೆರಳಿದ ಜೈಶಂಕರ್ ಅವರು ಇಂದು ತಮ್ಮ ಸಹವರ್ತಿ ಸರ್ಗೆ ಲಾವ್ರೋ (Sergey Lavrov) ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಜೈಶಂಕರ್, ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕಳೆದ ಕೆಲವು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ, ಹಣಕಾಸಿನ ಒತ್ತಡಗಳು ಮತ್ತು ವ್ಯಾಪಾರದ ತೊಂದರೆಗಳಿಂದ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಆದರೆ ಇದೀಗ ಮತ್ತೆ ಉಕ್ರೇನ್‌ನೊಂದಿಗಿನ ಸಂಘರ್ಷದ ಪರಿಣಾಮವನ್ನು ನೋಡುತ್ತಿದ್ದೇವೆ ಎಂದು ಹೇಳಿದರು.

    ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಹೆಚ್ಚು ದೀರ್ಘಕಾಲಿಕ ಸಮಸ್ಯೆಗಳು. ಇವೆರಡೂ ಪ್ರಗತಿ ಮತ್ತು ಸಮೃದ್ಧಿಯ ಮೇಲೆ ಭೀಕರ ಪರಿಣಾಮವನ್ನು ಬೀರುತ್ತವೆ. ನಮ್ಮ ಮಾತುಕತೆಗಳು ಒಟ್ಟಾರೆಯಾಗಿ ಜಾಗತಿಕ ಪರಿಸ್ಥಿತಿ ಮತ್ತು ನಿರ್ದಿಷ್ಟ ಪ್ರಾದೇಶಿಕ ಕಾಳಜಿಯನ್ನೇ ವಹಿಸುತ್ತದೆ ಎಂದು ವಿದೇಶಾಂಗ ಸಚಿವರು ಹೇಳಿದರು. ಇದನ್ನೂ ಓದಿ: ಅಕ್ರಮ ಆಸ್ತಿ ಮಾಡಿದ್ದಾರೆಂಬ ವೈರಲ್ ಸುದ್ದಿ ವಿರುದ್ಧ ಹೆಚ್.ಆರ್.ರಂಗನಾಥ್ ದೂರು

    ಭಾರತ ಮತ್ತು ರಷ್ಯಾ ವಿವಿಧ ಹಂತಗಳಲ್ಲಿ ಬಲವಾದ ಮತ್ತು ನಿರಂತರ ಸಂಪರ್ಕವನ್ನು ನಿರ್ವಹಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ಸಮರ್ಕಂಡ್‌ನಲ್ಲಿ ಭೇಟಿಯಾಗಿದ್ದಾರೆ. ಉಕ್ರೇನ್‌ನೊಂದಿಗಿನ ಯುದ್ಧದ ನಡುವೆಯೂ ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿದೆ. ಆದರೆ ಇದು ಪಾಶ್ಚಿಮಾತ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ರಷ್ಯಾದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಒತ್ತಡವನ್ನೂ ಹಾಕಿದೆ ಎಂದರು.

    ರಷ್ಯಾದ ತೈಲ ಖರೀದಿಯನ್ನು ಮಿತಿಗೊಳಿಸುವಂತೆ ಪಶ್ಚಿಮದ ಕರೆಗಳ ಬಗ್ಗೆ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ನಮಗೆ ಇಂಧನ ಮಾರುಕಟ್ಟೆಯ ಮೇಲೆ ನಿಜವಾಗಿಯೂ ಒತ್ತಡವಿದೆ. ತೈಲ ಮತ್ತು ಅನಿಲದ ಮೂರನೇ ಅತಿದೊಡ್ಡ ಗ್ರಾಹಕವಾಗಿರುವ ಭಾರತದಲ್ಲಿ ಆದಾಯ ಕಡಿಮೆಯಿರುವುದರಿಂದ ನಾವು ಕೈಗೆಟಕುವ ಮೂಲಗಳನ್ನು ಹುಡುಕಬೇಕಾಗಿದೆ. ಆದ್ದರಿಂದ ಭಾರತ ಹಾಗೂ ರಷ್ಯಾದ ಸಂಬಂಧ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದೆ. ನಾವು ಅದನ್ನು ಹೀಗೆಯೇ ಮುಂದುವರಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಟ್ವಿಟ್ಟರ್‌ ಖಾತೆ ಬ್ಲಾಕ್‌ ಆದೇಶ ರದ್ದು – ಕೆಜಿಎಫ್‌ ಹಾಡು ಬಳಸಿದ್ದ ಕಾಂಗ್ರೆಸ್‌ಗೆ ಬಿಗ್‌ ರಿಲೀಫ್‌

    Live Tv
    [brid partner=56869869 player=32851 video=960834 autoplay=true]

  • ನವೆಂಬರ್ 8ಕ್ಕೆ ಜೈಶಂಕರ್ ರಷ್ಯಾ ಭೇಟಿ

    ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (Jaishankar) ಅವರು ನವೆಂಬರ್ 8 ರಂದು ರಷ್ಯಾ (Russia) ಪ್ರವಾಸವನ್ನು ಕೈಗೊಳ್ಳಲಿದ್ದು, ತಮ್ಮ ಸಹವರ್ತಿ ಸರ್ಗೆ ಲಾವ್ರೊವ್ (Sergey Lavrov) ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯಲ್ಲಿ ದ್ವಿಪಕ್ಷೀಯ ಸಂಬಂಧ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉಕ್ರೇನ್ (Ukraine) ತಮ್ಮ ವಿರುದ್ಧ ದಾಳಿ ನಡೆಸಲು ಡರ್ಟಿ ಬಾಂಬ್ (Dirty Bomb) ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಆಧಾರರಹಿತವಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಬುಧವಾರ ರಷ್ಯಾದಲ್ಲಿ ಪರಮಾಣು ಪಡೆಗಳು ತಾಲೀಮು ನಡೆಸಿರುವುದಾಗಿ ವರದಿಯಾಗಿದೆ. ಇದೀಗ ಜೈಶಂಕರ್ ಅವರ ಮಾಸ್ಕೋ ಭೇಟಿಯ ನಿರ್ಧಾರವನ್ನು ಈ ಎಲ್ಲಾ ಬೆಳವಣಿಗೆಳ ಬೆನ್ನಲ್ಲೇ ಮಾಡಲಾಗಿದೆ. ಇದನ್ನೂ ಓದಿ: ಯೋಗಿ, ಮೋದಿ ವಿರುದ್ಧ ದ್ವೇಷದ ಭಾಷಣ – ಅಜಂ ಖಾನ್‍ಗೆ 3 ವರ್ಷ ಜೈಲು

    ರಷ್ಯಾ ಉಕ್ರೇನ್‌ನ ಯುದ್ಧ ಇನ್ನಷ್ಟು ತೀವ್ರಗೊಳ್ಳುವ ಭೀತಿಯ ನಡುವೆ ಬುಧವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ಸಹವರ್ತಿ ಸರ್ಗೆಯ್ ಶೋಯಿಗು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಯುದ್ಧದಲ್ಲಿ ಯಾವುದೇ ಕಡೆಯಿಂದ ಅಣ್ವಸ್ತ್ರಗಳನ್ನು (Nuclear Weapons) ಬಳಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಒಕೆ ಮರಳಿ ಪಡೆದಾಗಲೇ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ: ರಾಜನಾಥ್ ಸಿಂಗ್

    ಪರಮಾಣು ಅಥವಾ ರೇಡಿಯೋಲಾಜಿಕಲ್ ಶಸ್ತ್ರಾಸ್ತ್ರಗಳ ಬಳಕೆ ಮಾನವೀಯತೆಯ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಹೀಗಾಗಿ ಯಾರೊಬ್ಬರೂ ಅಣ್ವಸ್ತ್ರವನ್ನು ಆಶ್ರಯಿಸಬಾರದು ಎಂದು ರಾಜನಾಥ್ ಸಿಂಗ್ ಶೋಯಿಗು ಅವರಿಗೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವೀಡಿಯೋ ಶೇರ್ ಮಾಡಿದ ರಷ್ಯಾ

    ಉಕ್ರೇನ್ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ವೀಡಿಯೋ ಶೇರ್ ಮಾಡಿದ ರಷ್ಯಾ

    ಮಾಸ್ಕ್: ಉಕ್ರೇನ್‍ನ ಮೇಲೆ ನಡೆಯುತ್ತಿರುವ ಆಕ್ರಮಣದ ಸಮಯದಲ್ಲಿ ವಶಪಡಿಸಿಕೊಂಡ ಯುಎಸ್ ಶಸ್ತ್ರಾಸ್ತ್ರಗಳು ಮತ್ತು ಯುದ್ಧದ ಇತರ ವಸ್ತುಗಳನ್ನು ಟ್ರೋಫಿಗಳಂತೆ ರಷ್ಯಾ ವೀಡಿಯೋದಲ್ಲಿ ಪ್ರದರ್ಶಿಸುತ್ತಿದೆ.

    ಉಕ್ರೇನಿಯನ್ ಪಡೆಗಳಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಫೋಟೋಗಳನ್ನು ರಷ್ಯಾದ ರಕ್ಷಣಾ ಸಚಿವಾಲಯವು ತನ್ನ ಅಧಿಕೃತ ಚಾನೆಲ್‍ವೊಂದರಲ್ಲಿ ಶೇರ್ ಮಾಡಿಕೊಂಡಿದೆ. 2 ನಿಮಿಷ 15 ಸೆಕೆಂಡುಗಳ ಕ್ಲಿಪ್‍ನಲ್ಲಿ, ರಷ್ಯಾದ ಸೈನಿಕನು ಯುಎಸ್, ಯುಕೆ, ಪೋಲೆಂಡ್ ಮತ್ತು ಸ್ವೀಡನ್‍ನಲ್ಲಿ ತಯಾರಿಸಿದ ಟ್ಯಾಂಕ್ ವಿರೋಧಿ ಗ್ರೆನೇಡ್ ಲಾಂಚರ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಮಾತನಾಡುವುದನ್ನು ಕಾಣಬಹುದು. ವೀಡಿಯೋದಲ್ಲಿ, ಆಯುಧಗಳನ್ನು ಸೈನಿಕರು ಟ್ರೋಫಿಗಳ ರೀತಿ ತೋರಿಸುತ್ತಿದ್ದರು. ಇದನ್ನೂ ಓದಿ:  10ರ ಮಗಳು, ತಾಯಿ ಪ್ರತ್ಯೇಕ ಕೋಣೆಯಲ್ಲಿ ನೇಣಿಗೆ ಶರಣು – ಪ್ರೀತಿಸಿ ಮದ್ವೆಯಾಗಿದ್ದ ವೈದ್ಯ ದಂಪತಿ 

    ವಿಶೇಷ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಪಡೆದ ಸಣ್ಣ ಪ್ರಮಾಣದ ಶಸ್ತ್ರಾಸ್ತ್ರಗಳು, ಮಷಿನ್ ಗನ್ ಮತ್ತು ಉಕ್ರೇನಿಯನ್ ಸೈನಿಕರ ಆಯುಧ, ಸೋವಿಯತ್ ಮೂಲದ ಶಸ್ತ್ರಾಸ್ತ್ರಗಳನ್ನು ಸಹ ಒಳಗೊಂಡಿದೆ.

    ಶಸ್ತ್ರಾಸ್ತ್ರಗಳು ಮುಖ್ಯವಾಗಿ ವಿದೇಶಿ ಉತ್ಪಾದನೆಗಳಾಗಿವೆ. ಜಾವೆಲಿನ್, ಗ್ರೇಟ್ ಬ್ರಿಟನ್, ಯುಎ, ಪೋಲೆಂಡ್, ಸ್ವೀಡನ್‍ನಲ್ಲಿ ತಯಾರಿಸಿದ ಹ್ಯಾಂಡ್-ಹೆಲ್ಡ್ ಆಂಟಿ-ಟ್ಯಾಂಕ್ ಗ್ರೆನೇಡ್ ಲಾಂಚರ್‌ಗಳು, ಜೊತೆಗೆ ಹೆವಿ ಮೆಷಿನ್ ಗನ್‍ಗಳು ಮತ್ತು ಸೋವಿಯತ್ ನಿರ್ಮಿತ ಸಣ್ಣ ಶಸ್ತ್ರಾಸ್ತ್ರಗಳನ್ನು ಉಕ್ರೇನಿಯನ್ ರಾಷ್ಟ್ರೀಯವಾದಿಗಳು ಬಿಟ್ಟಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಪೋಸ್ಟ್ ತಿಳಿಸಿದೆ. ಇದನ್ನೂ ಓದಿ: ಗ್ರಾಮಕ್ಕೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಿ – ಡಿಸಿಗೆ ಮನವಿ ಮಾಡಿದ ಪುಟ್ಟ ಬಾಲಕಿ 

    Live Tv
    [brid partner=56869869 player=32851 video=960834 autoplay=true]