Tag: Moon Eclipse

  • ನಾಳೆ ವರ್ಷದ ಮೂರನೇ ಚಂದ್ರಗ್ರಹಣ

    ನಾಳೆ ವರ್ಷದ ಮೂರನೇ ಚಂದ್ರಗ್ರಹಣ

    ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ ನಾಳೆ ಅಂದ್ರೆ ಗುರು ಪೂರ್ಣಿಮೆ ದಿನವೇ ಸಂಭವಿಸಲಿದೆ.

    ಅರೆನೆರಳಿನ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ, ಬೆಳಗ್ಗೆ 9.59ಕ್ಕೆ ಪೂರ್ಣ ಗೋಚರ ಕಂಡು, ಬೆಳಗ್ಗೆ 11.37ಕ್ಕೆ ಗ್ರಹಣ ಮೋಕ್ಷ ಕಾಣಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.

    ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣ ಧನುರ್ ರಾಶಿಯಲ್ಲಿ ಸಂಭವಿಸಲಿದೆ. ಚಂದ್ರಗ್ರಹಣದ ವೇಳೆ ಮನಸ್ಸು ಅಶಾಂತವಾಗಿರಲಿದೆ ಹಾಗೂ ನಕಾರಾತ್ಮಕ ಭಾವನೆಗಳಿಂದ ಮನಸ್ಸು ಕೂಡಿರಲಿದೆ. ಹೀಗಾಗಿ ಮನಸ್ಸನ್ನು ಕೇಂದ್ರೀಕರಿಸಲು ನಿಮ್ಮಿಷ್ಟ ದೇವರನ್ನು ಆರಾಧಿಸಲು ಜ್ಯೋತಿಷ್ಯರು ಸಲಹೆ ನೀಡಿದ್ದಾರೆ.

  • ‘ತೋಳ’ ಚಂದ್ರ ಗ್ರಹಣಕ್ಕೆ ಸಿಕ್ಕಿತು ಮೋಕ್ಷ

    ‘ತೋಳ’ ಚಂದ್ರ ಗ್ರಹಣಕ್ಕೆ ಸಿಕ್ಕಿತು ಮೋಕ್ಷ

    – ಅರೆನೆರಳಲ್ಲಿ ಕೊಂಚ ಮಂಕಾದ ಚಂದಿರ

    ಬೆಂಗಳೂರು: ಪ್ರತಿ ಹುಣ್ಣಿಮೆಯಂದು ಚಂದಿರ ಪಳಪಳನೆ ಹೊಳೆಯುತ್ತಾನೆ. ಆದರೆ ಬಾನಂಗಳದಲ್ಲಿ ಶುಕ್ರವಾರ ರಾತ್ರಿ 4 ಗಂಟೆಗಳ ಕಾಲ ನಡೆದ ಚಮತ್ಕಾರದಲ್ಲಿ ಚಂದಿರ ಕೊಂಚ ಮಂಕಾಗಿ ಹೋಗಿದ್ದು, ತೋಳನ ವಕ್ರದೃಷ್ಟಿಯಿಂದಾಗಿ ಚಂದಿರನಿಗೆ ಗ್ರಹಣ ಬಡಿದಿತ್ತು.

    ಶುಕ್ರವಾರ ರಾತ್ರಿ 10.38 ರಿಂದ ಮುಂಜಾನೆ 2.42ರವರೆಗೂ ಚಂದ್ರ ಭೂಮಿಯ ಅರೆನೆರಳಿನಲ್ಲಿ ಸಿಲುಕಿದ್ದನು. ಈ ನಾಲ್ಕು ಗಂಟೆಗಳ ಕಾಲ ನಡೆದ ಕೌತುಕವನ್ನು ತೋಳ ಚಂದ್ರ ಗ್ರಹಣ, ಪಾರ್ಶ್ವ ಛಾಯಾ ಗ್ರಹಣ, ಮಸುಕಂಚಿನ ಚಂದ್ರಗ್ರಹಣ ಎಂದೆಲ್ಲ ಕರೆಯುತ್ತಾರೆ. ಮಧ್ಯರಾತ್ರಿ 12.40ರ ಸುಮಾರಿಗೆ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು.

    ಈ ಭೂಮಿ-ಚಂದ್ರನ ಆಟ ವಿಶ್ವದ ಕೆಲವೆಡೆ ಮಾತ್ರ ಗೋಚರಿಸಿತು. ಭಾರತ, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಉತ್ತರ ಅಮೆರಿಕದ ಕೆಲ ಪ್ರದೇಶದಲ್ಲಿ ತೋಳ ಚಂದಿರನ ಕೌತುಕತೆಯನ್ನ ಜನ ಕಣ್ತುಂಬಿಕೊಂಡರು. ರಾಜ್ಯದಲ್ಲೂ ತೋಳ ಚಂದಿರನ ವಿಸ್ಮಯ ಜರುಗಿದ್ದು, ಕೆಲವರು ನಿದ್ರೆ ಬಿಟ್ಟು ಈ ಕೌತುಕತೆಯನ್ನ ಕಣ್ತುಂಬಿಕೊಂಡರು. ಬೆಂಗಳೂರಿನ ಟೌನ್‍ಹಾಲ್, ಲಾಲ್‍ಬಾಗ್‍ನಲ್ಲಿ ತೋಳ ಚಂದ್ರಗ್ರಹಣ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಹಲವರು ಮಧ್ಯರಾತ್ರಿ ಜರುಗಿದ ಚಂದಿರನ ಚಮಾತ್ಕಾರ ನೋಡಿದರು.

    2019ರ ಅಂತ್ಯದ ವೇಳೆಗೆ, ಇಡೀ ಜಗತ್ತು ಬೆಂಕಿ ಬಳೆ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಇದಾಗಿ ಕೇವಲ ಎರಡು ವಾರಗಳ ಅಂತರದಲ್ಲಿ ಚಂದ್ರಗ್ರಹಣ ಸಂಭವಿಸಿದೆ. ಹೀಗಾಗಿ ಅತ್ಯಂತ ಕುತೂಹಲಕಾರಿಯಾಗಿ ಜನ ಚಂದ್ರಗ್ರಹಣವನ್ನ ವೀಕ್ಷಿಸಿದರು.

    ಚಂದ್ರ ಗ್ರಹಣದ ವಿಶೇಷತೆಗಳೇನು?
    – ಈ ಚಂದ್ರ ಗ್ರಹಣಕ್ಕೆ ತೋಳ ಚಂದ್ರ ಗ್ರಹಣ ಎಂದು ಹೆಸರು
    – ಜನವರಿ ತಿಂಗಳು ತೋಳಗಳ ಸಂತಾನಾಭಿವೃದ್ಧಿಯ ಸಮಯ
    – ಪಾಶ್ಚಾತ್ಯ ದೇಶಗಳಲ್ಲಿ ಜನವರಿ ತಿಂಗಳ ಗ್ರಹಣವನ್ನು ತೋಳ ಗ್ರಹಣ ಎನ್ನುತ್ತಾರೆ
    – ಈ ಗ್ರಹಣವನ್ನು ಸಂಪೂರ್ಣ ಚಂದ್ರ ಗ್ರಹಣ ಎನ್ನುವುದಿಲ್ಲ
    – ಇದು ನೆರಳಿನ ಗ್ರಹಣ, ಚಂದ್ರನ ಸ್ಥಾನದಲ್ಲಿ ವಿಶೇಷ ಬದಲಾವಣೆ ಇಲ್ಲ

    ವೈಜ್ಞಾನಿಕವಾಗಿ ಇದೊಂದು ಖಗೋಳ ಕೌತುಕತೆ. ಇದರಿಂದ ಯಾವುದೇ ಅಪಾಯವಿಲ್ಲ. ಆದರೆ ಜ್ಯೋತಿಷ್ಯಗಳ ಪ್ರಕಾರ ಈ ಚಂದ್ರಗ್ರಹಣ ದೊಡ್ಡ ಅಪಾಯಕರಿಯಂತೆ. ವರ್ಷಾರಂಭದಲ್ಲಿ ಸಂಭವಿಸಿರುವ ಈ ತೋಳ ಚಂದ್ರ ಗ್ರಹಣದಿಂದ ಜಲಗಂಡಾಂತರವಿದೆ ಅಂತ ಭವಿಷ್ಯ ನುಡಿದಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ತೋಳ ಚಂದ್ರಗ್ರಹಣ ವೀಕ್ಷಿಸಿದ ಸಾರ್ವಜನಿಕರು

    ಸಿಲಿಕಾನ್ ಸಿಟಿಯಲ್ಲಿ ತೋಳ ಚಂದ್ರಗ್ರಹಣ ವೀಕ್ಷಿಸಿದ ಸಾರ್ವಜನಿಕರು

    ಬೆಂಗಳೂರು: ಶುಕ್ರವಾರ ರಾತ್ರಿ ನಭೋ ಮಂಡಲದಲ್ಲಿ ಈ ವರ್ಷದ ಮೊದಲ ಚಂದ್ರಗ್ರಹಣ ನಡೆಯಿತು.

    ಚಂದ್ರಗ್ರಹಣದ ಸಂಪೂರ್ಣ ಘೋಚರ ನಮ್ಮ ದೇಶದ ಮೇಲೆ ಆಗದಿದ್ದರೂ ಸ್ವಲ್ಪ ಪ್ರಮಾಣದಲ್ಲಿ ಘೋಚರವಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯ ಮಲ್ಲೇಶ್ವರಂ ಬಳಿಯ ಗಾಯಿತ್ರಿ ನಗರದ ಅಪಾರ್ಟ್ ಮೆಂಟ್ ಮೇಲೆ ಟಿಲಿ ಸ್ಕೋಪ್ ಮೂಲಕ ಅಲ್ಲಿನ ನಿವಾಸಿಗಳು ನಭೋ ಮಂಡಲದಲ್ಲಿ ಆದ ಕೌತಕವನ್ನ ವೀಕ್ಷಿಸಿದರು.

    ಟೆಲಿಸ್ಕೋಪ್ ಮತ್ತು ದೂರದರ್ಶಕದ ಮೂಲಕ ಮಕ್ಕಳು, ಹಿರಿಯರು ಸೇರಿ ಅಪಾರ್ಟ್ ಮೆಂಟ್ ನಿವಾಸಿಗಳೆಲ್ಲಾ ಚಂದ್ರಗ್ರಹಣದ ವೀಕ್ಷಣೆ ಮಾಡಿದರು.

    ಇದೇ ಮೊಲದ ಬಾರಿಗೆ ಚಂದ್ರ ಗ್ರಹಣವನ್ನ ಟೆಲಿ ಸ್ಕೋಪ್ ಮೂಲಕ ನೋಡುತ್ತಿದ್ದೇವೆ. ಇಷ್ಟು ಹತ್ತಿರದಿಂದ ಚಂದ್ರನನ್ನ ನೋಡಿದ್ದು ಬಹಳ ಸಂತೋಷವಾಗಿದೆ. ಚಂದ್ರ ಗ್ರಹಣ ಅನ್ನೋದು ಸೌರ ಮಂಡಲದಲ್ಲಿ ನಡೆಯುವ ಪ್ರಕ್ರಿಯೆ ಅದನ್ನ ಬರಿಗಣ್ಣಿನಲ್ಲಿ ನೋಡಬಹುದು. ಆದರೆ ಟೆಲಿಸ್ಕೋಪ್ ಮೂಲಕ ಅತಿ ಹತ್ತಿರದಿಂದ ನೋಡುವುದಕ್ಕೆ ಸಾಧ್ಯವಾಗಿದೆ ಎಂದು ನಿವಾಸಿಗಳು ಸಂತಸಗೊಂಡರು.

  • ರಕ್ತ ಚಂದ್ರಗ್ರಹಣ

    ರಕ್ತ ಚಂದ್ರಗ್ರಹಣ

    https://www.youtube.com/watch?v=tqwGF6hB1EU

  • ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?

    ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?

    ಬೆಂಗಳೂರು: ಮೊನ್ನೆಯಷ್ಟೇ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಈಗ ಚಂದ್ರಗ್ರಹಣ ಬಂದಿದೆ. ಅದು ಅಂತಿಂಥ ಚಂದ್ರಗ್ರಹಣವಲ್ಲ. ಸೂಪರ್ ಬ್ಲಡ್ ವೂಲ್ಫ್ ಮೂನ್. ಅಂದ್ರೆ ರಕ್ತಚಂದ್ರಗ್ರಹಣ. ಹೆಸರಲ್ಲೇ ಭಯಾನಕತೆ ಹೊಂದಿರುವ ರಕ್ತಚಂದ್ರಗ್ರಹಣದ ಸೋಮವಾರ ನಡೆಯಲಿದೆ.

    ಪ್ರಶ್ನೆಗಳ ಸಾಗರದಂತಿರುವ ಬ್ರಹ್ಮಾಂಡದಲ್ಲಿ ನಡೆಯೋ ಪ್ರತಿಯೊಂದು ಪ್ರಕ್ರಿಯೆಯೂ ಮನುಷ್ಯನಿಗೆ ಕುತೂಹಲ ಹುಟ್ಟಿಸುತ್ತದೆ. ಕಣ್ಣರಳಿಸಿ ನೋಡುವಂತೆ ಮಾಡುತ್ತದೆ. ಇದರ ಜೊತೆಗೆ ಸಣ್ಣ ಆತಂಕವನ್ನೂ ಭಯವನ್ನೂ ಹುಟ್ಟಿಸುತ್ತದೆ. ಕೆಲವೊಂದು ಪ್ರಕ್ರಿಯೆಗಳ ನೈಜ ಕಾರಣವನ್ನ ಮನುಷ್ಯ ಕಾಲಾಂತರದಲ್ಲಿ ಅರ್ಥಮಾಡಿಕೊಳ್ಳುತ್ತಾ ಬಂದಿದ್ದಾನೆ. ಆದರೆ ಇನ್ನು ಕೆಲವು ಆಕಾಶದಲ್ಲಿ ನಡೆಯುವ ವಿದ್ಯಮಾನಗಳ ಇವತ್ತಿಗೂ ಭಯ ಹುಟ್ಟಿಸುತ್ತದೆ.

    ಅಮಾವಾಸ್ಯೆ ಸೂರ್ಯ ಗ್ರಹಣ ಕಳೆದು ಹುಣ್ಣಿಮೆಗೆ ಈಗ ಚಂದ್ರ ಗ್ರಹಣ ಬಂದಿದೆ. ಇದು ಸಾಮಾನ್ಯವಾದ ಚಂದ್ರಗ್ರಹಣವಾದ್ರೆ ಯಾರೂ ಭಯಪಡುತ್ತಿರಲಿಲ್ಲ. ಆದ್ರೆ ಇದನ್ನ ವಿಜ್ಞಾನಿಗಳು ರಕ್ತಚಂದ್ರಗ್ರಹಣ ಅಂತಾನೆ ಕರೆದಿದ್ದಾರೆ. ಚಂದ್ರ ಗ್ರಹಣದ ಸಮಯದಲ್ಲಿ ಕಂಡು ಕೆಂಪು ಬಣ್ಣದಲ್ಲಿ ಗೋಚರವಾಗಲಿದ್ದಾನೆ. 2018ರಲ್ಲಿಯೂ ಇದೇ ಸಂದರ್ಭದಲ್ಲಿ ಭೂಮಿ ರಕ್ತ ಚಂದ್ರಗ್ರಹಣಕ್ಕೆ ಸಾಕ್ಷಿಯಾಗಿತ್ತು.

    ಗ್ರಹಣ ಅವಧಿ:
    ರಕ್ತ ಚಂದ್ರಗ್ರಹಣವು ಭಾರತೀಯ ದಿನಮಾನದ ಪ್ರಕಾರ ಜನವರಿ 21ನೇ ತಾರೀಕು ಸೋಮವಾರ ನಡೆಯಲಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 8 ಗಂಟೆ 6 ನಿಮಿಷಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 1 ಗಂಟೆ 18 ನಿಮಿಷಕ್ಕೆ ರಕ್ತ ಚಂದ್ರಗ್ರಹಣವು ಸಮಾಪ್ತಿಯಾಗಲಿದೆ. ಬೆಳಗ್ಗೆ 10 ಗಂಟೆ 11 ನಿಮಿಷದಿಂದ 11 ಗಂಟೆ 13 ನಿಮಿಷದವರೆಗೆ ಅಂದ್ರೆ 62 ನಿಮಿಷಗಳ ಕಾಲ ಚಂದ್ರ ಸಂಪೂರ್ಣ ಗ್ರಹಣಕ್ಕೆ ಒಳಗಾಗಿ ರಕ್ತಾವತಾರದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಭಾರತದಲ್ಲಿ ಈ ಸಂದರ್ಭದಲ್ಲಿ ಹಗಲು ಇರೋದ್ರಿಂದ ಎಲ್ಲೂ ಕೂಡ ಸೂಪರ್ ಬ್ಲಡ್ ಮೂನ್ ಗೋಚರವಾಗುವುದಿಲ್ಲ.

    ಈ ಬಾರಿಯ ರಕ್ತಚಂದ್ರಗ್ರಹಣ ಭಾರತದಲ್ಲಿ ಗೋಚರವಾಗದೇ ಇದ್ದರೂ ಭಾರತಕ್ಕೆ ಎಫೆಕ್ಟ್ ಇಲ್ವಾ ಅಂತ ಕೇಳಿದ್ರೆ ಚಂದ್ರ ಇಡೀ ಭೂಮಿಗೆ ಒಬ್ಬನೆ ಎನ್ನುವ ಉತ್ತರವನ್ನ ಜ್ಯೋತಿಷಿಗಳು ನೀಡುತ್ತಾರೆ. ಗ್ರಹಣ ನಡೆಯೋದು ಚಂದ್ರನಿಗೆ. ಅದು ಭೂಮಿಯ ಯಾವ ಭಾಗದಲ್ಲಿ ಗೋಚರವಾದರೂ ಇಡೀ ಭೂಮಿಗೆ ಸಂಚಕಾರ ತರಬಹುದು ಎನ್ನಲಾಗುತ್ತದೆ.

    ಎಲ್ಲಿ ಗ್ರಹಣ ಗೋಚರ?
    ಭಾರತದ ಕಾಲಮಾನದ ಪ್ರಕಾರ ಸೋಮವಾರ ಗ್ರಹಣ ನಡೆಯುತ್ತದೆ. ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ಆಗಿನ್ನೂ ಭಾನುವಾರ ರಾತ್ರಿಯಾಗಿರುತ್ತದೆ. ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಗ್ರೀನ್‍ಲ್ಯಾಂಡ್, ಐಸ್‍ಲ್ಯಾಂಡ್, ಐರ್ಲೆಂಡ್, ಗ್ರೇಟ್ ಬ್ರಿಟನ್, ನಾರ್ವೆ, ಸ್ವೀಡನ್, ಪೋರ್ಚುಗಲ್ ಹಾಗೂ ಫ್ರಾನ್ಸ್ ಮತ್ತು ಸ್ಪೇನ್‍ನ ಕರಾವಳಿ ಭಾಗಗಳಲ್ಲಿ ರಕ್ತಚಂದ್ರಗ್ರಹಣ ಗೋಚರವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?

    ಬೆಂಗಳೂರು: ವರ್ಷದ ಮೊದಲ ತಿಂಗಳಾದ ಜನವರಿಯಲ್ಲೇ ತಲಾ ಒಂದು ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಜರುಗಲಿದೆ. ಜನವರಿ 6ರಂದು ಸೂರ್ಯಗ್ರಹಣ ಮತ್ತು 21ರಂದು ಚಂದ್ರಗ್ರಹಣ ಘಟಿಸಲಿವೆ. ಹಾಗಾಗಿ ನಭೋಮಂಡಲದ ಈ ವಿದ್ಯಮಾನ ಭೂಮಿಗೆ ಕಂಟಕಗಳನ್ನ ಹೊತ್ತು ಬರಲಿದೆಯಾ ಅನ್ನೋ ಅನುಮಾನ ಮೂಡೋದಕ್ಕೆ ಶುರುವಾಗಿದೆ. ಮುಂದಿನ ದಿನಗಳ ಆಸುಪಾಸಿನಲ್ಲಿ ಪ್ರಕೃತಿ ಯಾವ ರೀತಿ ಕೆರಳಲಿದೆಯೋ ಎಂಬ ಭೀತಿ ಕಾಡೋದಕ್ಕೆ ಶುರುವಾಗಿದೆ.

    ಹೊಸ ವರ್ಷದ ಗ್ರಹಣಗಳ ಬಗ್ಗೆ ಜೋತಿಷ್ಯ ಲೋಕ ಕೂಡಾ ಸಾಕಷ್ಟು ಕುತೂಹಲದಿಂದ ಇದ್ದು, 2019ರ ಭಯಾನಕ ಜಾತಕ ಬಿಚ್ಚಿಟ್ಟ ಆನಂದ ಗುರೂಜಿ ಈ ವಿದ್ಯಮಾನ ಅಪಾಯಕಾರಿ ಅಂತಾರೆ. ಭಾರತಕ್ಕೆ ಗ್ರಹಣ ಗೋಚರವಾಗುತ್ತೋ ಇಲ್ವೋ ಅನ್ನೋದಕ್ಕಿಂತ, ಗ್ರಹಣ ಸಮಯದಲ್ಲಿ ಭೂಮಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಇದೆಲ್ಲದರ ಮುನ್ಸೂಚನೆ ಎಂಬಂತೆಯೇ ಈಗಾಗಲೇ ವಿಶ್ವದಲ್ಲಿ ಕೆಲ ವಿನಾಶಕಾರಿ ಘಟನೆಗಳು ನಡೆಯುತ್ತಿವೆ ಅನ್ನೋದು ಅವರ ಅಭಿಪ್ರಾಯವಾಗಿದೆ.

    2019ರ ಹೊಸ್ತಿಲಲ್ಲೆ ಸೌರಮಂಡಲದಲ್ಲಿ ಕೌತುಕದ ವಿದ್ಯಮಾನ ಏರ್ಪಡುತ್ತಿದೆ. ಇದು ಸಾಮಾನ್ಯ ವಿದ್ಯಮಾನದಂತೆ ಕಂಡು ಬಂದರೂ ಕರಾಳತೆಯನ್ನ ಪ್ರದರ್ಶಿಸುವ ಸಾಧ್ಯತೆಗಳು ಹೆಚ್ಚಿವೆ. ಹೊಸ ವರ್ಷದ ಆರಂಭದಲ್ಲೇ ಪೂರ್ಣ ಚಂದ್ರ ಗ್ರಹಣ ಬಂದಿದೆ. ಈ ಪೂರ್ಣ ಪ್ರಮಾಣದ ರಕ್ತ ಚಂದ್ರ ಗ್ರಹಣ ಪೂರ್ಣ ಪ್ರಮಾಣದಲ್ಲೇ ಅಪಾಯಗಳ ಆತಂಕವನ್ನ ಹುಟ್ಟುಹಾಕೋ ಸೂಚನೆಗಳು ನೀಡಿದಂತಿದೆ. 2019ರಲ್ಲೂ ಸಾಲು ಸಾಲು ಗ್ರಹಣಗಳಿದ್ದು, ಈ ಗ್ರಹಣಗಳೇ ಗಂಡಾಂತರಗಳನ್ನ ಹೊತ್ತು ಬರಲಿವೆ ಎನ್ನಲಾಗುತ್ತಿದೆ.

    ಹೊಸ ವರ್ಷದಲ್ಲಿ 5 ಗ್ರಹಣಗಳಿದ್ದು, ಜನವರಿಯಲ್ಲೇ ಭೀಕರವಾದ ರಕ್ತ ಚಂದ್ರಗ್ರಹಣ ಎದುರಾಗಲಿದೆ. ಇದು ಜನರನ್ನ ಆತಂಕದ ಕೂಪಕ್ಕೆ ತಳ್ಳಿದೆ. ಈಗ ಭುಗಿಲೆದ್ದಿರುವ ಭೀಕರ ಭೂಕಂಪ, ಜಲಪ್ರಳಯಗಳಂತಹ ಪ್ರಾಕೃತಿಕ ವಿಕೋಪಗಳ ಮೇಲೆ ರಕ್ತ ಚಂದ್ರ ಗ್ರಹಣ ಪ್ರಭಾವ ಬೀರುವ ಎಲ್ಲಾ ಲಕ್ಷಣಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ವರ್ಷದ ಆರಂಭದಲ್ಲಿ ಗ್ರಹಣ ಎಫೆಕ್ಟ್:
    ನಭೋಮಂಡಲದ ಪ್ರಕ್ರಿಯೆ ಭೂಮಿ ಮೇಲೆ ವ್ಯತಿರಿಕ್ತ ಪರಿಣಾಮವನ್ನ ಬೀರಲಿದೆ ಅನ್ನೋದನ್ನ ಸಾಕಷ್ಟು ಮಂದಿ ಹೇಳುತ್ತಾ ಬಂದಿದ್ದಾರೆ. ಈಗ ಭೂಮಿ ಮೇಲೆ ಆಗುತ್ತಿರುವ ಬೆಳವಣಿಗೆಗಳನ್ನ ನೋಡಿದ್ರೆ ನಿಜಕ್ಕೂ ಇವೆಲ್ಲಾ ವಿನಾಶಕಾರಿ ಬೆಳವಣಿಗೆಯಾ ಅಂತಾ ಅನ್ನಿಸದೇ ಇರೋದಿಲ್ಲ. ಮುಂದಾಗೋ ಗ್ರಹಣದ ಪ್ರಭಾವಕ್ಕೆ ಈಗಲೇ ಪ್ರಕೃತಿ ಕೆರಳಿ ನಿಂತಿದೆಯಾ ಅನ್ನೋ ಸಂಶಯನೂ ಕಾಡುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಭೂಮಿ ಮೇಲೆ ಯಾವಾಗ ಏನಾಗುತ್ತೆ ಅನ್ನೋದನ್ನ ಕರಾರುವಕ್ಕಾಗಿ ಹೇಳೋಕಾಗ್ತಿಲ್ಲ. ಅಂತಹದರಲ್ಲಿ ಹೊಸ ವರ್ಷಕ್ಕೆ ಕಾಲಿಡುವ ಹೊಸ್ತಿಲಲ್ಲೇ ಪ್ರಕೃತಿ ಪದೇ ಪದೇ ಕೆರಳುತ್ತಿದೆ ಶಾಂತವಾಗಿದ್ದ ಕಡಲು ಏಕಾಏಕಿ ಕೆರಳಿ ಅಬ್ಬರಿಸೋದಕ್ಕೆ ಶುರವಾಗುತ್ತೆ. ಸಮುದ್ರ ದಡಕ್ಕೆ ದೈತ್ಯ ಅಲೆಗಳು ಬಂದು ಅಪ್ಪಳಿಸಿ ಸಿಕ್ಕಿದ್ದನ್ನೆಲ್ಲಾ ರಕ್ಕಸ ಅಲೆ ಎಳೆದೊಯ್ಯುತ್ತಿದೆ. ಸುಪ್ತವಾಗಿರೋ ಅಗ್ನಿಪರ್ವತಗಳು ಏಕಾಏಕಿ ಸ್ಫೋಟವಾಗ್ತಿವೆ. ನಿಂತ ನೆಲವೇ ಕುಸಿದು ಬೀಳುವಂತೆ ಭೂಮಿ ಕಂಪಿಸುತ್ತಿದೆ.


    ಗ್ರಹಣದ ಎಫೆಕ್ಟ್ ಗೆನೇ ವಿಶ್ವದೆಲ್ಲೆಡೆ ಭಯಾನಕವಾದಂತಹ, ವಿಚಿತ್ರವಾದ ಘಟನೆಗಳು ನಡೆಯುತ್ತಿವೆಯಂತೆ. ಪದೇ ಪದೇ ಇಂಡೋನೇಷ್ಯಾ ಮೇಲೆ ಸುನಾಮಿ ಉಗ್ರರೂಪ ತಾಳಿ ದಾಳಿ ಮಾಡುತ್ತಿದೆ. ಅಬ್ಬರಿಸಿದ ಸಮುದ್ರ ಸ್ವಲ್ಪವೂ ಗ್ಯಾಪ್ ಕೊಡದೇ ಪದೇ ಪದೇ ಕೆರಳುತ್ತಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ರಕ್ಕಸ ಅಲೆಗಳ ರಣಭೀಕರ ದಾಳಿಗೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಹುಣ್ಣಿಮೆ, ಜ್ವಾಲಾಮುಖಿ ಸ್ಫೋಟದಿಂದ ಕೆರಳಿದ ಅಲೆಗಳು ಸುನಾಮಿ ರೂಪ ತಾಳಿ ಅವಾಂತರ ಸೃಷ್ಟಿ ಮಾಡಿದೆ. ಕೆಲ ದಿನಗಳ ಹಿಂದಷ್ಟೇ ದಕ್ಷಿಣ ಪಿಲಿಫೈನ್‍ನಲ್ಲಿರುವ ಮಿಂಡನೌ ದ್ವೀಪದಲ್ಲಿ ಭೂಕಂಪನ ಉಂಟಾಗಿದೆ. ಸುಮಾರು 7 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಈ ಭೂಕಂಪನ ಉಂಟಾದ ಬೆನ್ನಲ್ಲೇ ಸಮುದ್ರದ ಅಲೆಗಳಲ್ಲಿ ಬದಲಾವಣೆ ಆಗಿ ಭಯಾನಕ ಅನುಭವ ನೀಡಿದೆ.

    ಹೊಸ ವರ್ಷದ ಮೊದಲ ತಿಂಗಳಲ್ಲಿ ಚಂದ್ರ ಗ್ರಹಣ ಸಂಭವಿಸುತ್ತಿದ್ದು ವರ್ಷಪೂರ ಅದ್ಯಾವ ಗ್ರಹಗತಿಗಳು ಈ ದೇಶವನ್ನ ಕಾಡಲಿದೆಯೋ ಅನ್ನೋದು ಮತ್ತೊಂದು ಆತಂಕ. ಅಲ್ಲದೇ ಜನವರಿ 21ರಂದು ಸೌರ ಮಂಡಲದಲ್ಲಿ ನಡೆಯೋ ಕೌತುಕ ಮುಂದಿನ ದಿನಗಳಲ್ಲಿ ಭಾರೀ ಗಂಡಾತರವನ್ನು ಸೃಷ್ಟಿಸಲಿದ್ಯಂತೆ. ವಿಜ್ಞಾನಿಗಳೇನೋ ಎಂದಿನಂತೆ ಇಂದೊಂದು ಕ್ರಿಯೆ ಭಯ ಪಡೋ ಅಗತ್ಯವೇ ಇಲ್ಲ ಅಂತ ಸುಮ್ಮನಾದ್ರೂ ಕೂಡಾ, ಸಂಖ್ಯಾಶಾಸ್ತ್ರಜ್ಞರು, ಜೋತಿಷ್ಯಿಗಳು ಮಾತ್ರ ವಿನಾಶ ಕಾಲ ಹತ್ತಿರವಾಯ್ತು ಅಂತಲೇ ಭವಿಷ್ಯ ನುಡಿಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv