Tag: monsoon

  • ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ಮಾನ್ಸೂನ್ ಬಳಿಕ ಭಾರತದಲ್ಲಿ ಐಪಿಎಲ್: ಬಿಸಿಸಿಐ ಸಿಇಒ

    ನವದೆಹಲಿ: ಮಾನ್ಸೂನ್ ಬಳಿಕ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ಆವೃತ್ತಿ ಆಯೋಜಿಸುವ ಸಾಧ್ಯತೆ ಇದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಿಇಒ ರಾಹುಲ್ ಜೋಹ್ರಿ ಹೇಳಿದ್ದಾರೆ.

    ವಿಶ್ವ ಕ್ರಿಕೆಟಿನ ಅತ್ಯುತ್ತಮ ಆಟಗಾರರು ಐಪಿಎಲ್ ಆಡುತ್ತಾರೆ. ಈ ಲೀಗ್ ಅಭಿಮಾನಿಗಳನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಣಯದ ಮೇಲೆ ನಮ್ಮ ನಿರ್ಧಾರ ತೀರ್ಮಾನವಾಗುತ್ತದೆ. ಕ್ರಮಬದ್ಧ ವಿಧಾನದಲ್ಲಿ ಲೀಗ್ ಆಯೋಜಿಸುವ ಅಗತ್ಯ ದೇಶದಲ್ಲಿ ನಿರ್ಮಾಣವಾಗಿದೆ. ಲಾಕ್‍ಡೌನ್ ಮುಗಿಯುತ್ತಿದಂತೆ ಮಾನ್ಸೂನ್ ಆರಂಭವಾಗುತ್ತದೆ. ಆ ಬಳಿಕವೇ ಐಪಿಎಲ್ ಕುರಿತು ಯೋಚಿಸಬೇಕಿದೆ. ಪ್ರೇಕ್ಷಕರಿಲ್ಲದೇ ಐಪಿಎಲ್ ನಿರ್ವಹಿಸುವುದರಿಂದ ಉಂಟಾಗುವ ನಷ್ಟ ಕಡಿಮೆ ಎಂದು ಮಾಧ್ಯಮಗಳೊಂದಿಗೆ ಜೋಹ್ರಿ ಹೇಳಿದ್ದಾರೆ.

    ಮಾರ್ಚ್ 29ರಂದು ಪ್ರಾರಂಭವಾಬೇಕಿದ್ದ ಐಪಿಎಲ್ 2020 ಆವೃತ್ತಿ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಐಪಿಎಲ್ ಆವೃತ್ತಿ ಆಯೋಜಿಸಲು ಕನಿಷ್ಠ 2 ತಿಂಗಳ ಅವಧಿ ಅಗತ್ಯವಿದ್ದು, ದೇಶದಲ್ಲಿ ವಿಧಿಸಲಾಗಿರುವ ಲಾಕ್‍ಡೌನ್ ಮೇ 31ಕ್ಕೆ ಮುಕ್ತಾಯವಾಗಲಿದೆ. ಆ ಬಳಿಕ ಮತ್ತೆ ಲಾಕ್‍ಡೌನ್ ಅವಧಿ ಹೆಚ್ಚಿಸಲಾಗುತ್ತಾ? ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಲಭಿಸಿಲ್ಲ. ಇತ್ತ ಭಾರತದಲ್ಲಿ ಜೂನ್‍ನಿಂದಲೇ ಮಳೆ ಆರಂಭವಾಗುವ ಸೂಚನೆ ಲಭಿಸುತ್ತಿದ್ದು, ಸೆಪ್ಟೆಂಬರ್ ವರೆಗೂ ಮಳೆ ಬೀಳುವ ಸಾಧ್ಯತೆ ಇದೆ. ಪರಿಣಾಮ ಅಕ್ಟೋಬರ್-ನವೆಂಬರ್ ನಡುವಿನ ಅವಧಿಯಲ್ಲಿ ಮಾತ್ರ ಐಪಿಎಲ್ 2020ರ ಆವೃತ್ತಿ ನಿರ್ವಹಿಸಲು ಅವಕಾಶವಿದೆ. ಇದೇ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18 ರಿಂದ ನವೆಂಬರ್ 15ರ ವರೆಗೂ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಟಿ20 ವಿಶ್ವಕಪ್ ಮುಂದೂಡಿದರೆ ಮಾತ್ರ ಐಪಿಎಲ್ ನಿರ್ವಹಿಸುವ ಅವಕಾಶವಿದೆ. ಮೇ28ಕ್ಕೆ ಟಿ20 ವಿಶ್ವಕಪ್ ಆಯೋಜಿಸುವ ಕುರಿತು ಐಸಿಸಿ ಪ್ರಮುಖ ನಿರ್ಣಯ ಕೈಗೊಳ್ಳಲಿದೆ.

  • ರಾಜ್ಯಕ್ಕೆ ಮುಂಗಾರು ಲೇಟ್ ಎಂಟ್ರಿ

    ರಾಜ್ಯಕ್ಕೆ ಮುಂಗಾರು ಲೇಟ್ ಎಂಟ್ರಿ

    ಬೆಂಗಳೂರು: ರಾಜ್ಯಕ್ಕೆ ಮತ್ತೆ ಮಳೆಯ ಶಾಕ್ ಎದುರಾಗಿದ್ದು, ಮುಂಗಾರು ಇನ್ನೂ ಎರಡು ದಿನ ವಿಳಂಬವಾಗುವ ಸಾಧ್ಯತೆ ಇದೆ.

    ಸಾಮಾನ್ಯವಾಗಿ ಜೂನ್ ಒಂದರಿಂದ ಮುಂಗಾರು ಆರಂಭವಾಗಬೇಕಿತ್ತು. ಆದರೆ ಈ ವರ್ಷ ಕೊಂಚ ವಿಳಂಬವಾಗಿದ್ದು, ಜೂನ್ 8ರಂದು ಕೇರಳ ಪ್ರವೇಶಿಸಲಿವೆ. ಅದಾದ ಎರಡು ದಿನದ ಬಳಿಕ ರಾಜ್ಯಕ್ಕೆ ಮುಂಗಾರು ಕಾಲಿಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

    ಇಂದಿನಿಂದ ನೈಋತ್ಯ ಮಾರುತಗಳು ದಕ್ಷಿಣ ದ್ವೀಪಕಲ್ಪವನ್ನು ಪ್ರವೇಶಿಸಲು ಅವಶ್ಯವಿರುವ ಸನ್ನಿವೇಶಗಳು ಈಗ ಅನುಕೂಲಕರವಾಗಿವೆ. ಅಂತೆಯೇ ಅಲ್ಲಿಂದ ಮುಂದಿನ 72 ತಾಸುಗಳ ಬಳಿಕ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ ಎಂದು ಇಲಾಖೆ ಹೇಳಿದೆ.

    ಕೇರಳಕ್ಕೆ ಮುಂಗಾರು ಪ್ರವೇಶವಾದ ಎರಡು ದಿನದ ಬಳಿಕ ಕರ್ನಾಟಕಕ್ಕೆ ಮುಂಗಾರು ಎಂಟ್ರಿಯಾಗುತ್ತದೆ. ಹಾಗಾಗಿ ಜೂನ್ 8ರಿಂದ ಮುಂಗಾರಿನ ಆರಂಭವಾಗಲಿದೆ. ಮೊದಲ ವಾರ ಮುಂಗಾರು ಕೊಂಚ ಕಡಿಮೆಯಿರಲಿದೆ. ಆದರೆ ಜೂನ್ ಎರಡನೇ ವಾರದಲ್ಲಿ ಮುಂಗಾರು ಆರ್ಭಟ ಹೆಚ್ಚಾಗಲಿದೆ. ಮೇಲ್ಮೈ ಸುಳಿಗಾಳಿ ಇರುವುದರಿಂದ ಜೂನ್ ಎರಡನೇಯ ವಾರ ಪ್ರಬಲ ಮುಂಗಾರು ಸಾಧ್ಯತೆ ಇದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಮಾಹಿತಿ ಲಭ್ಯವಾಗಿದೆ.

  • ವಾಡಿಕೆಗಿಂತ ಕಡಿಮೆ ಮಳೆ – ಜೂನ್ 4 ರಂದು ಮುಂಗಾರು ಭಾರತಕ್ಕೆ ಪ್ರವೇಶ

    ವಾಡಿಕೆಗಿಂತ ಕಡಿಮೆ ಮಳೆ – ಜೂನ್ 4 ರಂದು ಮುಂಗಾರು ಭಾರತಕ್ಕೆ ಪ್ರವೇಶ

    ಬೆಂಗಳೂರು: ಮಾನ್ಸೂನ್ ಮಳೆಯು ದಕ್ಷಿಣ ಕರಾವಳಿಯನ್ನು ಜೂನ್ 4 ರಂದು ತಲುಪಲಿದ್ದು, ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ತಿಳಿಸಿದೆ.

    ಭಾರತದ ಕೃಷಿ ಚಟುವಟಿಕೆಗಳಿಗೆ ಆಧಾರ ಸ್ತಂಭವಾದ ಮಾನ್ಸೂನ್ ಮಳೆಯೂ ಜೂನ್ 1ರಂದು ಕೇರಳ ರಾಜ್ಯದ ದಕ್ಷಿಣ ತುದಿಯನ್ನು ತಲುಪಲಿದೆ ಎಂದು ಸ್ಕೈಮೆಟ್ ಹೇಳಿದೆ.

    ಜೂನ್ ನಿಂದ ಸೆಪ್ಟೆಂಬರ್‌ವರೆಗೆ ಮಳೆಯಾಗಲಿದ್ದು, 2019 ರಲ್ಲಿ ಮುಂಗಾರಿನ ದೀರ್ಘಾವಧಿ ಸರಾಸರಿ(ಎಲ್‍ಪಿಎ) ಶೇ.93 ರಷ್ಟು ಇರಲಿದೆ ಎಂದು ಸ್ಕೈಮೆಟ್ ವ್ಯವಸ್ಥಾಪಕ ನಿರ್ದೇಶಕ ಜತಿನ್ ಸಿಂಗ್ ತಿಳಿಸಿದ್ದಾರೆ.

    ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ಬೆಳೆಯುವ ದಕ್ಷಿಣ ಭಾರತದಲ್ಲಿ ಶೇ.95, ವಾಯುವ್ಯ ಭಾರತದಲ್ಲಿ ಶೇ.96, ಮಧ್ಯ ಭಾರತದಲ್ಲಿ ಶೇ.91, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಶೇ.92 ರಷ್ಟು ಮಳೆಯಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಭಾರತೀಯ ಹವಾಮಾನ ಇಲಾಖೆ ಎಲ್‍ಪಿಎ ಲೆಕ್ಕಾಚಾರವನ್ನು ಹಾಕಿ ಸಾಧಾರಣ, ಕೊರತೆ, ಅಧಿಕ ಮಳೆ ಎಂದು ವಿಂಗಡಿಸಿದೆ. ದೀರ್ಘಾವಧಿ ಸರಾಸರಿ 90-96ರಷ್ಟಿದ್ದರೆ ಅದು ಸಹಜಕ್ಕಿಂತ ಕಡಿಮೆ ಮಳೆ ಎಂದು ಪರಿಗಣಿಸಲಾಗುತ್ತದೆ. ಎಲ್‍ಪಿಎ 90ಕ್ಕಿಂತಲೂ ಕಡಿಮೆಯಿದ್ದರೆ ಅದನ್ನು ಕೊರತೆಯ ಮುಂಗಾರು ಎಂದು ಕರೆಯಲಾಗುತ್ತದೆ. ಎಲ್‍ಪಿಎ 104ಕ್ಕಿಂತ ಹೆಚ್ಚಿದ್ದರೆ ಅದು ಸಹಜಕ್ಕಿಂತ ಅಧಿಕ ಮಳೆ ಎಂದು ವಿಶ್ಲೇಷಿಸಲಾಗುತ್ತದೆ.

    ಆರ್ಥಿಕತೆಯಲ್ಲಿ ಏಷ್ಯಾದ ಮೂರನೇ ಅತಿ ದೊಡ್ಡ ದೇಶವಾದ ಭಾರತ ಬೀಳುವ ವಾರ್ಷಿಕ ಮಳೆಯಲ್ಲಿ ಶೇ.70 ರಷ್ಟು ಮಳೆ ಮಾನ್ಸೂನ್ ಅವಧಿಯಲ್ಲಿ ಬೀಳುತ್ತದೆ.

  • ಒಂದು ತಿಂಗಳು ತಡವಾಗಲಿದೆ ಮುಂಗಾರು!

    ಒಂದು ತಿಂಗಳು ತಡವಾಗಲಿದೆ ಮುಂಗಾರು!

    ನವದೆಹಲಿ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಳೆಗಾಲ ಜೂನ್ ಬರುವಷ್ಟರಲ್ಲಿ ನಮ್ಮ ಪರಿಸ್ಥಿತಿ ಏನು ಎಂದು ಜನ ಯೋಚನೆ ಮಾಡುತ್ತಿದ್ದ ವೇಳೆಯಲ್ಲೇ ಶಾಕಿಂಗ್ ವರದಿಯೊಂದು ಬಂದಿದ್ದು, ಈ ಬಾರಿ ಮುಂಗಾರು ಮಳೆ ಸುಮಾರು 1 ತಿಂಗಳು ತಡವಾಗಿ ಪ್ರವೇಶವಾಗಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಮಾಹಿತಿ ನೀಡಿದೆ.

    ಜೂನ್‍ನಲ್ಲಿ ಅಂತ್ಯದವರೆಗೆ ಮಳೆ ಪ್ರವೇಶ ಮಾಡುವುದು ಅನುಮಾನವಾಗಿದ್ದು, ಜುಲೈ, ಆಗಸ್ಟ್‍ನಲ್ಲಿ ಮಳೆ ಆಗಲಿದೆ. ಇದರಿಂದಾಗಿ, ವಾಡಿಕೆಗಿಂತ ವಾರ್ಷಿಕ ಮಳೆಯ ಪ್ರಮಾಣ ಶೇ.7ರಷ್ಟು ಕಡಿಮೆಯಾಗಲಿದೆ ಎಂದಿದೆ. ಅಲ್ಲದೇ ಇದಕ್ಕೆ ಏಲ್ ನಿನೋ ವಿದ್ಯಮಾನವೇ ಸಂಭವನೀಯ ಕಾರಣ ಎಂದು ತಿಳಿಸಿದೆ. ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಶೇ.55 ರಷ್ಟಿದೆ ಸ್ಕೈಮೆಟ್ ತಿಳಿಸಿದೆ.

    ಏನಿದು ಏಲ್ ನಿನೋ?
    ಏಲ್ ನಿನೋ ಎಂದರೆ ಶಾಂತ ಸಾಗರದ ಪೂರ್ವ ಮತ್ತು ಕೇಂದ್ರ ಭಾಗಗಳಲ್ಲಿ ತಾಪಮಾನದಲ್ಲಾಗುವ ಹೆಚ್ಚಳ ಎಂದು ಹೇಳಬಹುದಾಗಿದೆ. ಅಂದರೆ ಪೆಸಿಫಿಕ್ ಸಾಗರದಲ್ಲಿ ಉಷ್ಣಾಂಶ ಹೆಚ್ಚಾದಂತೆ ಮಳೆ ತರುವ ಮಾರುತಗಳು ಬಂಗಾಳಕೊಲ್ಲಿಯನ್ನು ಪ್ರವೇಶಿಸುವುದು ತಡವಾಗುತ್ತದೆ. ಕ್ರಿಸ್ ಮಸ್ ಹಬ್ಬದ ಸಮಯದಲ್ಲಿ ಇದು ಹೆಚ್ಚಾಗಿ ಸಂಭವಿಸುವುದರಿಂದ ಈ ಹೆಸರು ನೀಡಲಾಗಿದ್ದು, ಏಲ್ ನಿನೋ ಬಾಲ ಯೇಸುವಿನ ಸ್ಪ್ಯಾನಿಷ್ ಪದವಾಗಿದೆ.

    ಈ ಪ್ರಕ್ರಿಯೆ ನಡೆದರೆ ಮಳೆ ಸೃಷ್ಟಿಸುವ ಮಾರುತಗಳ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆಯಿದೆ ಇದ್ದು, ಪರಿಣಾಮ ಮುಂಗಾರು ಪ್ರವೇಶ ಏರುಪೇರಾಗಿ ಮಳೆ ದುರ್ಬಲಗೊಳ್ಳಬಹುದು. ಅಲ್ಲದೇ ಪೆಸಿಫಿಕ್ ಸಾಗರದಲ್ಲಿನ ಉಷ್ಣಾಂಶದ ಏರಿಕೆ ಇಲ್ಲಿನ ತಾಪಮಾನದಲ್ಲಿಯೂ ಏರುಪೇರಾಗುತ್ತದೆ.

  • ಅರಬ್ಬೀ ಸಮುದ್ರದಲ್ಲಿ ಹೈ ಅಲರ್ಟ್ ಘೋಷಣೆ- ಉಡುಪಿಯ 800 ಬೋಟುಗಳು ದಡದತ್ತ

    ಅರಬ್ಬೀ ಸಮುದ್ರದಲ್ಲಿ ಹೈ ಅಲರ್ಟ್ ಘೋಷಣೆ- ಉಡುಪಿಯ 800 ಬೋಟುಗಳು ದಡದತ್ತ

    ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮುಂದಿನ ಐದು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರಿಕಾ ಇಲಾಖೆ ಮುಂಜಾಗ್ರತ ಕ್ರಮವಾಗಿ ಹೈ ಅಲರ್ಟ್ ಘೋಷಿಸಿದೆ. ಅಲ್ಲದೇ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದೆಂದು ಸೂಚನೆ ನೀಡಿದೆ.

    ಅರಬ್ಬೀ ಸಮುದ್ರದಲ್ಲಿ ಏಕಾಏಕಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಕರಾವಳಿಯಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ತೂಫಾನ್ ಎದ್ದರೆ ಮೊದಲು ಸಮಸ್ಯೆಯಾಗೋದು ಮೀನುಗಾರರಿಗೆ. ಹಾಗಾಗಿ ಸಮುದ್ರದ ಮಧ್ಯೆಯಿರುವ ಮೀನುಗಾರರನ್ನು ಇಲಾಖೆ ವಾಪಾಸ್ ಕರೆಸಿಕೊಳ್ಳುತ್ತಿದೆ.

    ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುಮಾರು 800 ಬೋಟ್ ಗಳನ್ನು ಮಲ್ಪೆ ಮೀನುಗಾರರ ಸಂಘ ದಡಕ್ಕೆ ಬರುವಂತೆ ಸಂದೇಶ ರವಾನಿಸಿದೆ. ಕಳೆದ ಮೂರ್ನಾಲ್ಕು ದಿನದಿಂದ ಮಲ್ಪೆ ಬಂದರಿನಿಂದ ಸುಮಾರು 800 ಬೋಟುಗಳು ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದು, ತೂಫಾನ್ ಬರುವ ಹಿನ್ನೆಲೆಯಲ್ಲಿ ಎಲ್ಲಾ ಬೋಟ್ ಗಳನ್ನು ಬಂದರಿಗೆ ವಾಪಾಸ್ ಕರೆಸಿಕೊಳ್ಳಲಾಗುತ್ತಿದೆ. ಅಕ್ಟೋಬರ್ 5 ರಿಂದ 10ರ ವರೆಗೆ ಐದು ದಿನಗಳ ಕಾಲ ಅರಬ್ಬೀ ಸಮುದ್ರಕ್ಕೆ ತೆರಳದೇ ಬೋಟ್ ಗಳೆಲ್ಲಾ ಬಂದರಿನಲ್ಲೇ ಲಂಗರು ಹಾಕಲಿದೆ.

    ಈಗಾಗಲೇ ಮಲ್ಪೆ ಬಂದರಿನಲ್ಲಿ ಎಚ್ಚರಿಕಾ ಕರೆಗಂಟೆ ಮೊಳಗಿಸಲಾಗಿದೆ. ಮೀನುಗಾರರ ಮಾತೃಸಂಘದ ಮೂಲಕ ಐದು ಕಡೆಗಳಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ. ಸಮುದ್ರಕ್ಕೆ ಹೋದ ಬೋಟ್ ಗಳಿಗೆ ವೈರ್‍ಲೆಸ್ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ಕರಾವಳಿ ಕಾವಲು ಪಡೆ ಪೊಲೀಸರು ಕೂಡಾ ಸಮುದ್ರದಾದ್ಯಂತ ಗಸ್ತು ಸುತ್ತಿ ಎಚ್ಚರಿಕೆ ನೀಡುತ್ತಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಈ ಬಾರಿ ಮೀನುಗಾರಿಕೆಯೂ ಕಮ್ಮಿ. ಅಲ್ಲದೇ ಡೀಸೆಲ್ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಇದೀಗ ಐದು ದಿನ ಹೈ ಅಲರ್ಟ್ ಘೋಷಣೆಯಾಗಿದೆ. ಹೀಗಾಗಿ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುತ್ತಿಲ್ಲ. ವಾಯುಭಾರ ಕುಸಿತದ ಸಂದರ್ಭ ಯಾರೂ ಸಮುದ್ರಕ್ಕೆ ಇಳಿಯದಂತೆ ನೋಡಿಕೊಳ್ಳುತ್ತೇವೆ. ಕೋಟ್ಯಾಂತರ ರೂಪಾಯಿ ವೆಚ್ಚದ ಬೋಟ್ ಹಾಗೂ ಅದಕ್ಕಿಂತ ಅಮೂಲ್ಯವಾದ ಮೀನುಗಾರರ ಪ್ರಾಣ ಮುಖ್ಯ ಅಂತ ಹೇಳಿದರು.

    ಮಹಾರಾಷ್ಟ್ರ- ಗೋವಾ ಬಾರ್ಡರ್ ದಾಟಿ ಹೋದ ಮೀನುಗಾರರನ್ನು ಸಂಪರ್ಕ ಮಾಡುವುದು ಬಹಳ ಕಷ್ಟಕರ. ಒಬ್ಬರಿಂದ ಒಬ್ಬರು ಮಾಹಿತಿ ಪಡೆದು ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಹೊರ ರಾಜ್ಯದಲ್ಲಿ ಕೂಡಾ ಬೋಟ್ ಗಳು ನೆಲೆ ಕಂಡುಕೊಳ್ಳಬಹುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು, ಕರಾವಳಿ ಭಾಗದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು

    ಕೊಡಗು, ಕರಾವಳಿ ಭಾಗದಲ್ಲಿ ಮತ್ತೆ ಚುರುಕುಗೊಂಡ ಮುಂಗಾರು

    -ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿಯುವ ಭೀತಿ
    -ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ

    ಬೆಂಗಳೂರು: ಕೊಡಗು, ಕರಾವಳಿ ಭಾಗದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಮಡಿಕೇರಿ, ಮಂಗಳೂರು, ಚಿಕ್ಕಮಗಳೂರು, ಹಾಸನದಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಕೊಡಗಿನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

    ಮಡಿಕೇರಿ-ಮಂಗಳೂರು ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬದಲಿ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಕೊಡಗು ಜಿಲ್ಲಾಡಳಿತ ಆದೇಶ ನೀಡಿದೆ. ಸೆ.29 ರವರೆಗೂ ಮಡಿಕೇರಿಯಿಂದ ಮೇಕೇರಿ, ತಾಳತ್‍ಮನೆ ಮಾರ್ಗವಾಗಿ ಓಡಾಡಬೇಕೆಂದು ಸೂಚನೆ ನೀಡಿದ್ದಾರೆ. ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಕೂಡ ಮುಳುಗಡೆಯಾಗಿದ್ದು, ರೈತರ ಹೊಲಗಳಿಗೆ ನೀರು ನುಗ್ಗಿದೆ.

    ತುಂಗಾ, ಭದ್ರ, ಹೇಮಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇತ್ತ ಸಕಲೇಶಪುರ ತಾಲೂಕಿನ ಯಡಕುಮಾರಿ ಬಳಿ ರೈಲು ಹಳಿ ಮೇಲೆ ಭಾರೀ ಭೂ ಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ಮಾರ್ಗದ ರೈಲು ಹಾಸನದಲ್ಲಿ ಸ್ಥಗಿತಗೊಂಡಿದೆ. ಬುಧವಾರ ಕತ್ತಲೆ ಇದ್ದ ಕಾರಣ ಇಂದು ತೆರವು ಕಾರ್ಯ ನಡೆಯಲಿದೆ. ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ತುಂಬಿ ಹರಿದಿದ್ದು ದಡದಲ್ಲಿರುವ ನಿವಾಸಿಗಳು ಆತಂಕ ಎದುರಿಸುತ್ತಿದ್ದಾರೆ. ಸುಬ್ರಹ್ಮಣ್ಯ ಬಳಿಯ ಹೊಸ್ಮಠ ಸೇತುವೆ ಈ ಬಾರಿ ದಾಖಲೆ ಎಂಬಂತೆ ಆಗಸ್ಟ್ ತಿಂಗಳಲ್ಲಿಯೂ ಮುಳುಗಡೆಯಾಗಿದೆ. ಕುಕ್ಕೆ ದೇಗುಲದ ಸ್ನಾನಘಟ್ಟವೂ ಮುಳುಗಿದ್ದು ಪ್ರವಾಸಿಗರು ಭೀತಿ ಪಡುವಂತಾಗಿದೆ.

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರೊಯುತ್ತಿದೆ.  ವರುಣ ದೇವನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ  ಕಡಿಮೆಯಾಗಿದ್ದು, ಕರ್ನಾಟಕದ ಕಾಶ್ಮೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಮಲೆನಾಡಿನ ವಾತಾವರಣವನ್ನು ಅನುಭವಿಸಬೇಕು ಎಂದು ಪ್ಲಾನ್ ಮಾಡುವರು ಮಡಿಕೇರಿ ಸುತ್ತಮುತ್ತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇಬ್ಬನಿಯ ಸಿಂಚನದಲ್ಲಿ ಮನಸೋಲುತ್ತಿದ್ದಾರೆ. ಟ್ರಾಫಿಕ್, ಧೂಳಿನ ನಡುವೆ ಇದ್ದವರು ಮನತಣಿಸುವ ತಂಪಾದ ಪರಿಸರಕ್ಕೆ ಮೂಕವಿಸ್ಮಿತರಾಗುತ್ತಿದ್ದಾರೆ.

    ವೀಕೆಂಡ್‍ಗಳಲ್ಲಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಂಜಿನ ವೈಭವದಿಂದ ಭೂಲೋಕದಲ್ಲಿ ಸ್ವರ್ಗ ಸೃಷ್ಠಿಯಾದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ.

    ಮಂಜಿನ ಕಣ್ಣಾಮುಚ್ಚಾಲೆ, ಮಳೆಯ ಅರ್ಭಟ, ಮೈಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೂರ್ಗ್ ಸ್ಪೆಷಲ್ ಟೇಸ್ಟಿ ಕಾಫಿ ಹಿತ ಅನುಭವ ನೀಡುತ್ತಿದ್ದು ಟೂರಿಸ್ಟ್ ಗಳು ಇವೆಲ್ಲದಕ್ಕೆ ಮನಸೋಲ್ತಿದ್ದಾರೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ. ಗಿರಿಕಂದಕಗಳ ನಡುವೆ ಮಂಜಿನ ಥಕಧಿಮಿತ ನೋಡಲು 2 ಕಣ್ಣುಗಳು ಕೂಡ ಸಾಲುತ್ತಿಲ್ಲ. ಮಂಜಿನ ಸ್ಪರ್ಶ ಸವಿಯುತ್ತ ಎಂಜಾಯ್ ಮಾಡುವ ಪ್ರವಾಸಿಗರಿಗೆ ಕೊಡಗಿನಿಂದ ಹೋಗಲು ಮನಸೇ ಬರ್ತಿಲ್ಲ ಅಂತಾ ಹೇಳುತ್ತಿದ್ದಾರೆ.

    ಒಟ್ಟಾರೆಯಾಗಿ ಮಂಜಿನ ನಗರಿ ಪ್ರವಾಸಿಗರನ್ನು ಒಂದೆಡೆ ಸೆಳೆಯುತ್ತಿದ್ರೆ. ಅಬ್ಬರಿಸಿ ಬೊಬ್ಬರೆಯುತ್ತಿರುವ ಮಳೆಯಿಂದ ಕೊಡಗಿನ ಜನ ಮಾತ್ರ ತತ್ತರಗೊಂಡಿದ್ದಾರೆ. ಮನತಣಿಸುವ ಮಂಜಿಗೆ ಪ್ರವಾಸಿಗರು ಈಗಾಗ್ಲೇ ಮನಸೋತಿದ್ದಾರೆ. ಕೊಡಗನ್ನು ಮತ್ತೇ ಮತ್ತೇ ನೋಡಬೇಕಾನುವ ಮಟ್ಟಿಗೆ ಮಂಜಿನ ಲೋಕ ಹುಚ್ಚು ಹಿಡಿಸಿದೆ. ಮಳೆಗಾಲದಲ್ಲಿ ಕಂಗೊಳಿಸುವ ಶ್ವೇತಸುಂದರಿ ಇಡೀ ಕೊಡಗನ್ನು ಆವರಿಸಿ ಹಿತವಾದ ಅನುಭವ ನೀಡ್ತಿದ್ದು ಪ್ರವಾಸಿಗರು ಟೆನ್ಷನ್ ಮರೆತು ರಿಫ್ರೆಶ್ ಆಗುತ್ತಿದ್ದಾರೆ. ನೀವು ಕೂಡ ಕೊಡಗಿಗೊಮ್ಮೆ ಆಗಮಿಸಿ ಸೂಪರ್ ವೆದರ್ ನ ಫೀಲ್ ಮಾಡಿ.

  • ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ

    ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ

    ಮುಂಬೈ: ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಂಬೈನ ರಸ್ತೆ ಗುಂಡಿಗಳನ್ನು ಮುಚ್ಚಲು ‘ಆವೊ ಪಾಥ್ ಹೋಲ್ಸ್ ಗಿಣೇ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿದರು. ಕಾಂಗ್ರೆಸ್ ಕಾರ್ಯಕರ್ತರೇ ಸ್ವತಃ ಗುಂಡಿಯನ್ನು ಮುಚ್ಚುವ ಮೂಲಕ ಬಿಜೆಪಿ ಮತ್ತು ಶಿವಸೇನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್‍ನ ಸಿಟಿ ಯೂನಿಟ್ ಮುಖ್ಯಸ್ಥ ಸಂಜಯ್ ನಿರುಪಮ್ ಮಾತನಾಡುತ್ತಾ, ಶಿವಸೇನಾ ಮತ್ತು ಬಿಜೆಪಿ ಬೃಹತ್ ಮುಂಬೈ ಮುನಿಸಿಪಲ್ ಕಾರ್ಪೋರೇಶನ್ ನಿಂದ ಹೊರಬರಬೇಕಿದೆ. ಇಲ್ಲವಾದರೆ ನಾಗರಿಕರನ್ನು ನಗರದ ಗುಂಡಿ ಬಿದ್ದಿರುವ ರಸ್ತೆಗಳಿಂದ ಮುಕ್ತವಾಗಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

    ಬಿಎಂಸಿಯೂ ಗುಂಡಿಗಳನ್ನು ಮುಕ್ತಗೊಳಿಸಲು 48 ಗಂಟೆಗಳ ಗಡುವು ನೀಡಿದ್ದು, ಅದು ಕೊನೆಗೊಂಡಿದೆ. ಆದರೂ ಬಹುತೇಕ ರಸ್ತೆಗಳನ್ನು ದುರಸ್ತಿ ಮಾಡಲು ಬಿಎಂಸಿ ವಿಫಲವಾಗಿದೆ. ಬಿಎಂಸಿ ನಿರಾಸಕ್ತಿ ಮತ್ತು ಅಸಮರ್ಥತೆಯಿಂದ ಮುಂಬೈ ನಿವಾಸಿಗಳು ತೊಂದರೆಪಡುವಂತಾಗಿದೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ ಈ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಹಲವರು ಸಾವನ್ನಪ್ಪುತ್ತಿದ್ದಾರೆ ಎಂದು ನಿರೂಪಮ್ ವಾಗ್ದಾಳಿ ನಡೆಸಿದರು.

    ಬಿಎಂಸಿಯ ಸಾಮಾನ್ಯ ಸಭೆಯಲ್ಲಿ ಹೆಚ್ಚುವರಿ ಮುನಿಸಿಪಲ್ ಕಮೀಷನರ್ ವಿಜಯ್ ಸಿಂಘಾಲ್ ಅವರು ರಸ್ತೆಗಳನ್ನು ಸರಿಪಡಿಸಲು 48 ಗಂಟೆಗಳ ಭರವಸೆಯನ್ನು ನೀಡಿದ್ದು, ಕಾರ್ಪೋರೇಟರ್‍ಗಳು ರಸ್ತೆಗಳ ಗುಂಡಿಗಳಿಗೆ ಸಂಬಂಧಿಸಿದಂತೆ ನಾಗರಿಕ ಆಡಳಿತ ಸಭೆಯನ್ನು ಸಹ ನಡೆಸಿದ್ದರು.

    ಈ ಗುಂಡಿಗಳನ್ನು ಮುಕ್ತಗೊಳಿಸಲು ಒಟ್ಟು 2,500 ಟನ್ಸ್ ಸಿಮೆಂಟ್ ಮಿಶ್ರಣದ ಅವಶ್ಯಕತೆ ಇದೆ. ಆದರೆ ಬರೀ 40 ಟನ್ಸ್ ಮಾತ್ರ ಸ್ಟಾಕ್ ಇದೆ. ಹಾಗಾಗಿ ಇದರಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುದಿಲ್ಲ. ಇದಕ್ಕೆ ಬಿಜೆಪಿ ಮತ್ತು ಶಿವಸೇನಾ ಕಾರಣವಾದ್ದರಿಂದ ಬಿಎಂಸಿಯಿಂದ ಹೊರಬರಬೇಕು ಎಂದು ಗುಂಡಿ ರಿಪೇರಿಂಗ್ ಡ್ರೈವ್‍ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಿರೂಪಮ್ ಹೇಳಿದರು.

  • ಮಳೆಗಾಲಕ್ಕಾಗಿಯೇ ಸಿದ್ಧವಾಗಿರುವ ಸ್ಮಾರ್ಟ್ ಫೋನ್‍ಗಳು-ನೀರಿನಲ್ಲಿ ಬಿದ್ದರೂ ಚಿಂತೆಯಿಲ್ಲ!

    ಮಳೆಗಾಲಕ್ಕಾಗಿಯೇ ಸಿದ್ಧವಾಗಿರುವ ಸ್ಮಾರ್ಟ್ ಫೋನ್‍ಗಳು-ನೀರಿನಲ್ಲಿ ಬಿದ್ದರೂ ಚಿಂತೆಯಿಲ್ಲ!

    -ಇವುಗಳ ಗುಣ-ವೈಶಿಷ್ಟ್ಯವೇನು? ಬೆಲೆ ಎಷ್ಟು?

    ಬೆಂಗಳೂರು: ಮಳೆಯಿಂದಾಗಿ ಸ್ಮಾರ್ಟ್ ಫೋನ್‍ಗಳು ಹಾಳಾಗುವುದನ್ನು ನಾವು-ನೀವು ನೋಡಿಯೇ ಇದ್ದೇವೆ. ಆದರೆ ಇಂದು ಮಾರುಕಟ್ಟೆಗಳಲ್ಲಿ ಲಭ್ಯವಿರುವ ವಾಟರ್ ಪ್ರೂಫ್  ಫೋನ್‍ಗಳಿಂದ ಈ ತರಹದ ಚಿಂತೆ ಮಾಡಬೇಕಾಗಿಲ್ಲ.

    ಮಾರುಕಟ್ಟೆಗಳಲ್ಲಿ ಮಳೆಗಾಲಕ್ಕಾಗಿ ಸಿದ್ಧವಾಗಿರುವ ವಾಟರ್ ಪ್ರೂಫ್  ಸ್ಮಾರ್ಟ್ ಫೋನ್‍ಗಳು ಯಾವುವು? ಅದರ ಗುಣ-ವೈಶಿಷ್ಟ್ಯವೇನು? ಹಾಗೂ ಬೆಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಿ

    1. ಎಚ್‍ಟಿಸಿ ಯು-11, ಬೆಲೆ 39,999 ರೂ.
    ಗುಣ-ವೈಶಿಷ್ಟ್ಯಗಳು: 5.5 ಇಂಚ್ ಕ್ಯು ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 16 ಎಂಪಿ ಕ್ಯಾಮರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ ಧೂಳು ಮತ್ತು ವಾಟರ್ ಪ್ರೂಫ್.

    2. ಎಲ್‍ಜಿ ವಿ30+, ಬೆಲೆ 44,990 ರೂ.
    ಗುಣ-ವೈಶಿಷ್ಟ್ಯಗಳು: 6 ಇಂಚ್ ಓಎಲ್‍ಇಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ+16ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 4ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3300 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    3.ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್-5, ಬೆಲೆ 45,990 ರೂ.
    ಗುಣ-ವೈಶಿಷ್ಟ್ಯಗಳು: 5.7 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 7420 ಪ್ರೋಸೆಸರ್, 4ಜಿಬಿ RAM, 32 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    4. ಆ್ಯಪಲ್ ಐ-ಫೋನ್-7, ಬೆಲೆ 48,999 ರೂ.
    ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ10 ಬಯೋನಿಕ್ 64 ಬಿಟ್ ಪ್ರೋಸೆಸರ್, 32 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

    5. ನೋಕಿಯಾ 8 ಸಿರೊಖೋ, ಬೆಲೆ 49,999 ರೂ.
    ಗುಣ-ವೈಶಿಷ್ಟ್ಯಗಳು: 5.5 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೋಸೆಸರ್, 12ಎಂಪಿ+13ಎಂಪಿ ವ ಹಾಗೂ 5 ಎಂಪಿ ಕ್ಯಾಮೆರಾ, 6ಜಿಬಿ RAM, 128 ಜಿಬಿ ಆಂತರಿಕ ಮೆಮೊರಿ. 3260 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    6. ಗೂಗಲ್ ಪಿಕ್ಸೆಲ್ 2, ಬೆಲೆ 52,999 ರೂ.
    ಗುಣ-ವೈಶಿಷ್ಟ್ಯಗಳು: 5 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 2700 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    7. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 9, ಬೆಲೆ 57,900 ರೂ.
    ಗುಣ-ವೈಶಿಷ್ಟ್ಯಗಳು: 5.8 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ,ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3000 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    8. ಆ್ಯಪಲ್ ಐ-ಫೋನ್ 8, ಬೆಲೆ 59,990 ರೂ.
    ಗುಣ-ವೈಶಿಷ್ಟ್ಯಗಳು: 4.7 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

    9. ಗೂಗಲ್ ಪಿಕ್ಸೆಲ್ 2 ಎಕ್ಸ್, ಎಲ್ ಬೆಲೆ 62,999 ರೂ.
    ಗುಣ-ವೈಶಿಷ್ಟ್ಯಗಳು: 6 ಇಂಚ್ ಫುಲ್ ಎಚ್‍ಡಿ ಡಿಸ್ಲ್ಪೇ, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಪ್ರೊಸೆಸರ್, 12ಎಂಪಿ ಹಾಗೂ 8 ಎಂಪಿ ಕ್ಯಾಮೆರಾ, 4ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3520 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    10. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್9+, ಬೆಲೆ 64,900 ರೂ.
    ಗುಣ-ವೈಶಿಷ್ಟ್ಯಗಳು: 6.2 ಇಂಚ್ ಫುಲ್ ಕ್ಯೂಎಚ್‍ಡಿ ಡಿಸ್ಲ್ಪೇ, ಎಕ್ಸಿನೋಸ್ ವೊಕ್ಟಾ ಕೋರ್ 9810 ಪ್ರೊಸೆಸರ್, 6ಜಿಬಿ RAM, 64 ಜಿಬಿ ಆಂತರಿಕ ಮೆಮೊರಿ. 3500 ಎಂಎಎಚ್ ಬ್ಯಾಟರಿ. ಧೂಳು ಮತ್ತು ವಾಟರ್ ಪ್ರೂಫ್.

    11. ಆ್ಯಪಲ್ ಐ-ಫೋನ್ 8 ಪ್ಲಸ್, ಬೆಲೆ 73,990 ರೂ.
    ಗುಣ-ವೈಶಿಷ್ಟ್ಯಗಳು: 5.5 ಇಂಚ್ ರೆಟಿನಾ ಎಚ್‍ಡಿ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.

    12. ಆ್ಯಪಲ್ ಐ-ಫೋನ್ ಎಕ್ಸ್, ಬೆಲೆ 88,999 ರೂ.
    ಗುಣ-ವೈಶಿಷ್ಟ್ಯಗಳು: 5.8 ಇಂಚ್ ರೆಟಿನಾ ಎಚ್‍ಡಿ ಫುಲ್ ಡಿಸ್ಲ್ಪೇ, ಎ11 ಬಯೋನಿಕ್ 64 ಬಿಟ್ ಪ್ರೊಸೆಸರ್, 64 ಜಿಬಿ ಆಂತರಿಕ ಮೆಮೊರಿ. 12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 7ಎಂಪಿ ಫ್ರೆಂಟ್ ಕ್ಯಾಮೆರಾ. ಧೂಳು ಮತ್ತು ವಾಟರ್ ಪ್ರೂಫ್.