Tag: monkeys

  • ಲಾಕ್‍ಡೌನ್ ಎಫೆಕ್ಟ್ ಶಿವಗಂಗೆ ಬೆಟ್ಟದಲ್ಲಿ ಹಸಿವಿನಿಂದ ಮಂಗಗಳ ಪರದಾಟ- ಸ್ಥಳೀಯರ ನೆರವು

    ಲಾಕ್‍ಡೌನ್ ಎಫೆಕ್ಟ್ ಶಿವಗಂಗೆ ಬೆಟ್ಟದಲ್ಲಿ ಹಸಿವಿನಿಂದ ಮಂಗಗಳ ಪರದಾಟ- ಸ್ಥಳೀಯರ ನೆರವು

    ಬೆಂಗಳೂರು: ಮಾರಣಾಂತಿಕ ಕೋವಿಡ್ ನಿಂದಾಗಿ ರಾಜ್ಯಾದ್ಯಂತ ಲಾಕ್‍ಡೌನ್ ವೀಧಿಸಲಾಗಿದ್ದು, ಪ್ರವಾಸಿ ತಾಣಗಳನ್ನು ಸಹ ಬಂದ್ ಮಾಡಲಾಗಿದೆ. ಹೀಗಾಗಿ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮಂಗಗಳಿಗೆ ಆಹಾರ ಇಲ್ಲದಂತಾಗಿದ್ದು, ಹಸಿವಿಂದ ಪರದಾಡುತ್ತಿವೆ. ಸ್ಥಳೀಯರೇ ಮಂಗಗಳಿಗೆ ಆಹರ ನೀಡುವ ಮೂಲಕ ನೆರವಾಗಿದ್ದಾರೆ.

    ನಗರದ ಹೊರವಲಯದ ನೆಲಮಂಗಲ ತಾಲೂಕಿನ ಶ್ರೀ ಕ್ಷೇತ್ರ ದಕ್ಷಿಣಕಾಶಿ ಶಿವಗಂಗೆಯಲ್ಲಿ ಮಂಗಗಳಿಗೆ ಆಹಾರವಿಲ್ಲದೆ ಪರದಾಡುತ್ತಿವೆ. ಇದನ್ನು ಗಮನಿಸಿದ ಸ್ಥಳೀಯರು, ಮೂಕ ವೇದನೆ ಪಡುತ್ತಿದ್ದ ಪ್ರಾಣಿ ವರ್ಗಕ್ಕೆ ಆಹಾರ ನೀಡಿದ್ದಾರೆ. ಈ ಮೂಲಕ ಮಂಗಗಳ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ.

    ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದರಿಂದ ಆಹಾರ ಸಿಗುತ್ತಿತ್ತು. ಆದರೆ ಲಾಕ್‍ಡೌನ್ ನಿಂದ ಶಿವಗಂಗೆಗೆ ಯಾರೂ ಆಗಮಿಸುತ್ತಿಲ್ಲ. ಈ ಹಿನ್ನಲೆ ಶಿವಗಂಗೆ ಬೆಟ್ಟದಲ್ಲಿ ಸಾವಿರಾರು ಕೋತಿಗಳಿಗೆ ಆಹಾರವಿಲ್ಲದಂತಾಗಿದೆ. ಹೀಗಾಗಿ ಸ್ಥಳೀಯರೇ ಆಹಾರ ವ್ಯವಸ್ಥೆ ಮಾಡುತ್ತಿದ್ದಾರೆ. ಶಿವಗಂಗೆ ಗ್ರಾಮಸ್ಥರು, ಸ್ವಯಂ ಸೇವಾ ಸಂಸ್ಥೆ ನೆರವಿನಿಂದ ಮಂಗಗಳಿಗೆ ನೆರವಾಗಿದ್ದಾರೆ. ಹಲಸಿನ ಹಣ್ಣು, ಮಾವಿನ ಹಣ್ಣು, ಬಾಳೆ ಹಣ್ಣು, ಇನ್ನೀತರ ಆಹಾರ ನೀಡುತ್ತಿದ್ದಾರೆ.

  • ವಿಷವುಣಿಸಿ 40 ಮಂಗಗಳನ್ನು ಕೊಂದ ಪಾಪಿಗಳು

    ವಿಷವುಣಿಸಿ 40 ಮಂಗಗಳನ್ನು ಕೊಂದ ಪಾಪಿಗಳು

    – ಸ್ಥಳೀಯರ ಮೇಲೆ ಅಧಿಕಾರಿಗಳ ಅನುಮಾನ
    – ಮಂಗಗಳ ಹಾವಳಿಯಿಂದ ಕೃತ್ಯ ಎಸಗಿರುವ ಶಂಕೆ

    ಹೈದರಾಬಾದ್: ಸುಮಾರು 50 ಮಂಗಗಳಿಗೆ ವಿಷವುಣಿಸಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ಮಹಬೂಬಬಾದ್ ಜಿಲ್ಲೆಯಲ್ಲಿ ನಡೆದಿದೆ.

    ವಿಷವುಣಿಸಿ ಬರೋಬ್ಬರಿ 40 ಮಂಗಗಳನ್ನು ಕೊಲೆ ಮಾಡಲಾಗಿದ್ದು, ಮೃತದೇಹಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಎಸೆಯಲಾಗಿದೆ. ಸಾನಿಗಾಪುರಂ ಗ್ರಾಮದ ಸಮೀಪವಿರುವ ಬೆಟ್ಟದ ಮೇಲೆ ಮೃತದೇಹಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ದೇಹಗಳು ಸಂಪೂರ್ಣವಾಗಿ ಕೊಳೆತಿದ್ದರಿಂದ ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೆ ವಿಷ ಉಣಿಸಿ ಮಂಗಗಳನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಪರಿಪ್ರಮಾಣದಲ್ಲಿ ಮಂಗಗಳನ್ನು ಏಕೆ ಸಾಯಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ ಎಂದು ತಿಳಿಸಿದ್ದಾರೆ.

    ವಿಪರೀತ ದುರ್ವಾಸನೆ ಬರುತ್ತಿದ್ದರಿಂದ ಆ ಪ್ರದೇಶದಲ್ಲಿ ಹುಡುಕಾಟ ನಡೆಸಿದೆವು. ಬಳಿಕ ಮಂಗಗಳ ಮೃತದೇಹಗಳು ತುಂಬಿರುವ ಚೀಲಗಳು ಪತ್ತೆಯಾದವು ಎಂದು ಸ್ಥಳೀಯರು ವಿವರಿಸಿದ್ದಾರೆ. ಐಪಿಸಿ ಸೆಕ್ಷನ್ 429 (ಪ್ರಾಣಿ ಕೊಲ್ಲುವ ಅಥವಾ ದುರ್ಬಲಗೊಳಿಸುವ ಕೃತ್ಯ) ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(ಎಲ್) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಕೃತ್ಯ ನಡೆದು ಐದಾರು ದಿನಗಳು ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಹಬುಬಬಾದ್ ಗ್ರಾಮಾಂತರ ಎಸ್‍ಐ ಸಿ.ಎಚ್.ರಮೇಶ್ ಬಾಬು ಅವರು ಈ ಕುರಿತು ಮಾಹಿತಿ ನಿಡಿ, ಇದು ದುರಂತ ಮಾತ್ರವಲ್ಲ ಅಪಾಯಕಾರಿ ಕೃತ್ಯ. ಸೆಕ್ಷನ್ 429(ಪ್ರಾಣಿಗಳ ಕೊಲೆ ಹಾಗೂ ವಿಷವುಣಿಸಿರುವುದು) ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11(ಎಲ್) ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

    ಜಿಲ್ಲಾ ಅರಣ್ಯಾಧಿಕಾರಿ ಪೊಲೋಜು ಕೃಷ್ಣಮಾಚಾರಿ ಮಾತನಾಡಿ, ಮಂಗಗಳ ಹಾವಳಿಯಿಂದ ಬೇಸರಗೊಂಡ ಕೆಲವು ಸ್ಥಳೀಯರ ಮೇಲೆ ನನಗೆ ಅನುಮಾನವಿದೆ. ಈ ಕುರಿತು ಇಲಾಖೆ ತನಿಖೆ ಆರಂಭಿಸಿದ್ದು, ಸುತ್ತಲ ಗ್ರಾಮಗಳಲ್ಲಿ ತನಿಖೆ ನಡೆಸಲಿದೆ. ಇಲಾಖೆ ವತಿಯಿಂದಲೇ ಮಂಗಗಳ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಭಾರೀ ಮಳೆ, ರಣ ಗಾಳಿ- ಆಹಾರವಿಲ್ಲದೆ ಪರದಾಡುತ್ತಿದೆ ವಾನರ ಸಂತತಿ

    ಭಾರೀ ಮಳೆ, ರಣ ಗಾಳಿ- ಆಹಾರವಿಲ್ಲದೆ ಪರದಾಡುತ್ತಿದೆ ವಾನರ ಸಂತತಿ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ರಣ ಗಾಳಿ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲ. ಪ್ರಾಣಿ-ಪಕ್ಷಿಗಳಿಗೂ ತೀವ್ರ ಸಂಕಷ್ಟ ತಂದೊಡ್ಡಿದೆ. ವಾನ ಸಂತತಿಯಂತೂ ಆಹಾರವಿಲ್ಲದೆ ಪರದಾಡುವಂತಾಗಿದೆ.

    ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನೂರಾರು ವರ್ಷಗಳಿಂದ ಬದುಕುತ್ತಿರು ವಾನರ ಸಂತಿತಿ ಇದೀಗ ಅನ್ನ-ಆಹಾರ ಇಲ್ಲದೆ ಪರದಾಡುತ್ತಿದೆ. ಭಾರೀ ಮಳೆಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸಂಖ್ಯೆಯೂ ತೀರಾ ಕಡಿಮೆ ಇದೆ. ಇದರಿಂದಾಗಿ ಕೋತಿಗಳಿಗೆ ಆಹಾರ ಹಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದರಿಂದ ಮಂಗಗಳು ಯಾರಾದರೂ ವಾಹನ ನಿಲ್ಲಸಿದ ಕೂಡಲೇ ಏನಾದ್ರು ಕೊಡುತ್ತಾರೆಂದು ವಾಹನದಿಂದ ಇಳಿದವರ ಕೈಯನ್ನೇ ನೋಡುವ ದೃಶ್ಯ ಮನಕಲಕುವಂತಿದೆ.

    ಚಾರ್ಮಾಡಿಯಲ್ಲಿ ಭಾರೀ ಗಾಳಿ-ಮಳೆ ಸುರಿಯುತ್ತಿದ್ದು, ವಾನರ ಸಂತತಿ ಮಳೆಯಲ್ಲಿ ನೆನೆದು ಚಳಿಯಲ್ಲಿ ನಡುಗುತ್ತಿದೆ. ಪುಟ್ಟ ಮಂಗಗಳು ಮರದಿಂದ ಮರಕ್ಕೆ ಹಾರಿ ಆಹಾರ ಹುಡುಕುವ ಪರಿ ಕೂಡ ಬೇಸರ ಮೂಡಿಸುವಂತಿದೆ. ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಪ್ರವಾಸಿಗರ ಸಂಖ್ಯೆ ಸಹ ಕಡಿಮೆಯಾಗಿದೆ. ಹೀಗಾಗಿ ಮಂಗಗಳಿಗೆ ಆಹಾರ ಹಾಕುವವರೇ ಇಲ್ಲದಂತಾಗಿದ್ದು, ಮರದಿಂದ ಮರಕ್ಕೆ ಜಿಗಿದು ಆಹಾರವನ್ನು ಹುಡುಕುತ್ತಿವೆ. ಸಿಕ್ಕ ಹಣ್ಣುಗಳನ್ನೇ ತಿಂದು ಜೀವಿಸುತ್ತಿವೆ.

    ಮಲೆನಾಡು ಭಾಗದಲ್ಲಿ ಭಾರೀ ಗಾಳಿಯಿಂದಾಗಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ. ತಾಲೂಕಿನ ಜಾವಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೂಡಿಗೆರೆಯಿಂದ ಕಳಸ- ಹೊರನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಲೆನಾಡಲ್ಲಿ ಮಳೆ ಪ್ರಮಾಣ ತಗ್ಗಿದೆ. ಆದರೆ ವಿಪರೀತ ಗಾಳಿ ಬೀಸುತ್ತಿದೆ. ಇದರಿಂದ ಸಮುದ್ರದಲ್ಲಿ ಸಹ ಕಡಲ್ಕೊರೆತ ಉಂಟಾಗಿದೆ.

  • ಸುತ್ತಲೂ ಪ್ರವಾಹ, ಮರಗಳಲ್ಲೇ ಸಿಲುಕಿದ ಮುಷ್ಯಗಳು- ಅರಣ್ಯ, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

    ಸುತ್ತಲೂ ಪ್ರವಾಹ, ಮರಗಳಲ್ಲೇ ಸಿಲುಕಿದ ಮುಷ್ಯಗಳು- ಅರಣ್ಯ, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

    – ಮುಷ್ಯಗಳನ್ನು ರಕ್ಷಿಸಲು ಹರಸಾಹಸಪಟ್ಟ ಸಿಬ್ಬಂದಿ

    – ಮರಗಳಿಂದ ದಡದವರೆಗೂ ಹಗ್ಗ ಕಟ್ಟಿ ರಕ್ಷಣೆ

    ದಾವಣಗೆರೆ: ಸುತ್ತಲೂ ಪ್ರವಾಹವಿದ್ದು, ಮರಗಳ ಮೇಲೆಯೇ ಮುಷ್ಯಗಳು ಸಿಲುಕಿವೆ. ಇನ್ನೇನು ಮಾಡುವುದಪ್ಪ ಎಂದು ಮುಷ್ಯಗಳು ಯೋಚಿಸುತ್ತಿರುವಾಗಲೇ ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.
    ಜಿಲ್ಲೆಯ ಹರಿಹರದ ಬಳಿ ಇರುವ ತುಂಗಾಭದ್ರಾ ನದಿ ತಟದಲ್ಲಿ ಮುಷ್ಯಗಳು ಸಿಲುಕಿದ್ದು, ಇವುಗಳನ್ನು ಹೊರ ತರಲು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸಪಟ್ಟಿದ್ದಾರೆ. ನದಿ ನೀರು ಏಕಾಏಕಿ ಬಂದ ಕಾರಣ ಮುಷ್ಯಗಳು ಮರದಲ್ಲೇ ಸಿಲುಕಿವೆ. ಬೆಳಗ್ಗೆಯಿಂದಲೇ ಮುಷ್ಯಗಳನ್ನು ರಕ್ಷಿಸುವ ಕಾರ್ಯ ನಡೆಸುತ್ತಿದ್ದು, ಜನರು ಜಾಸ್ತಿ ಇರುವ ಕಾರಣ ಭಯಪಟ್ಟು ಮುಷ್ಯಗಳು ಮರದಿಂದ ಕೆಳಗೆ ಬಂದಿಲ್ಲ. ಹೀಗಾಗಿ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
    ಮುಷ್ಯಗಳು ಮರಗಳಿಂದ ಕೆಳಗಿಳಿಯದ ಕಾರಣ ಅಗ್ನಿಶಾಮಕ ಸಿಬ್ಬಂದಿ ಮರದಿಂದ ದಡದ ವರೆಗೂ ಹಗ್ಗ ಕಟ್ಟಿದ್ದಾರೆ. ನಂತರ ಮುಷ್ಯಗಳನ್ನು ಬೆದರಿಸಿ ದಡಕ್ಕೆ ಓಡಿಸಿದ್ದಾರೆ. ಒಟ್ಟಿನಲ್ಲಿ ಹೆರಸಾಹಸಪಟ್ಟು ಪೂಕ ಪ್ರಾಣಿಗಳನ್ನು ರಕ್ಷಿಸಿದ್ದಾರೆ.
  • ಮೀಸಲು ಅರಣ್ಯದಲ್ಲಿನ ಮಂಗಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ಕೇಸ್

    ಮೀಸಲು ಅರಣ್ಯದಲ್ಲಿನ ಮಂಗಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ಕೇಸ್

    ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಅರಣ್ಯ ಪ್ರದೇಶಕ್ಕೆ ಭೇಟಿ ಕೊಟ್ಟರೆ ಅಲ್ಲಿನ ಮಂಗಗಳಿಗೆ ಎಲ್ಲರು ಹಣ್ಣುಗಳನ್ನು ಹಾಕುತ್ತಾರೆ. ಆದರೆ ಇನ್ಮುಂದೆ ಹೀಗೆ ಮಂಗಗಳಿಗೆ ಹಣ್ಣು ಹಾಕಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ಹಾಕಲು ಮುಂದಾಗಿದ್ದಾರೆ.

    ಇತ್ತೀಚೆಗೆ ಹಸಿದ ಮಂಗಗಳಿಗೆ ಆರ್.ಟಿ.ಐ ಕಾರ್ಯಕರ್ತ ಸಿದ್ದರಾಮಯ್ಯ ಹೀರೆಮಠ ಬಾಳೆಹಣ್ಣು ನೀಡಿದ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ವನ್ಯಜೀವು ಕಾಯ್ದೆ ಪ್ರಕಾರ ಕೊಂಚಾವರಂ ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನುಗ್ಗಿ, ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಸಾವಿಗೆ ಕಾರಣವಾಗಿದ್ದಾರೆ ಎಂದು ತಿಪ್ಪಣ್ಣಪ್ಪ ಹಾಗೂ ಪ್ರವೀಣ ಜಿಲ್ಲೆಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

    ಈ ದೂರಿನ ಆಧಾರದ ಮೇಲೆ ವನ್ಯಜೀವು ಸಂರಕ್ಷಣಾ ಕಾಯ್ದೆ 1972, ಸೆಕ್ಷನ್ 27 ಮತ್ತು 51ರ ಅಡಿ ಚಿಂಚೋಳಿ ತಾಲೂಕಿನ ಶಾದಿಪುರ ಶಾಖೆಯ ವನ್ಯಜೀವಿ ವಲಯದ ಚಿಂಚೋಳಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತಮ್ಮ ಫೇಸ್ ಬುಕ್‍ನಲ್ಲಿ ಸ್ಪಷ್ಟನೆ ನೀಡಿರುವ ಆರ್.ಟಿ.ಐ ಕಾರ್ಯಕರ್ತ ಸಿದ್ದರಾಮಯ್ಯ, ಇದು ದುರುದ್ದೇಶದಿಂದ ನನ್ನ ಮೇಲೆ ಹಾಕಲಾಗಿರುವ ಪ್ರಕರಣವಾಗಿದೆ. ಒಂದು ವೇಳೆ ಅರಣ್ಯಾಧಿಕಾರಿಗಳು ಇದರ ಬಗ್ಗೆ ನೋಟಿಸ್ ನೀಡಿದರೆ ಹಾಜರಾಗಿ ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.

  • ಆಹಾರಕ್ಕಾಗಿ ಮೂಕ ರೋಧನೆ – ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ತಾಯಿ ಪರದಾಟ

    ಆಹಾರಕ್ಕಾಗಿ ಮೂಕ ರೋಧನೆ – ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ತಾಯಿ ಪರದಾಟ

    ಹುಬ್ಬಳ್ಳಿ: ದೇಶಾದ್ಯಂತ ಲಾಕ್‍ಡೌನ್ ಜಾರಿಯಿರುವ ಹಿನ್ನೆಲೆ ಜನರು ಆಹಾರಕ್ಕಾಗಿ ಪರದಾಡುವಂತ ಸ್ಥಿತಿಯನ್ನು ನೋಡಿದ್ದೇವೆ. ಜನರ ನೆರವಿಗೆ ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. ಆದರೇ ಮೂಕ ಪ್ರಾಣಿಗಳು ಕೂಡ ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ತಾಯಿ ಮಂಗವೊಂದು ತನ್ನ ಮರಿ ಪಾಲನೆಗೆ ತುತ್ತು ಆಹಾರಕ್ಕಾಗಿ ಪರಿತಪಿಸುತ್ತಿರುವ ದೃಶ್ಯ ಮನಕಲಕುವಂತಿದೆ.

    ತಾಯಿ ಮಂಗವೊಂದು ತನ್ನ ಪುಟ್ಟ ಮರಿಗಾಗಿ ಆಹಾರ ಹುಡುಕಿಕೊಂಡು ಆಹಾರ ಅರಸಿ ಸಾಗುತ್ತಿರುವ ದೃಶ್ಯ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ಕಂಡುಬಂದಿದೆ. ಅರಣ್ಯ ಹಾಗೂ ಉದ್ಯಾನವನಗಳಲ್ಲಿ ಆಹಾರ ಪಡೆದುಕೊಂಡು ಜೀವನ ನಡೆಸುತ್ತಿದ್ದ ಮಂಗಗಳು ಈಗ ಎಲ್ಲಿಯೂ ಕೂಡ ಆಹಾರವಿಲ್ಲದೆ ಪರದಾಡುವಂತಾಗಿದೆ. ಲಾಕ್‍ಡೌನ್ ಬಿಸಿ ಮನುಷ್ಯನಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ತಟ್ಟಿದ್ದು, ಆಹಾರ ಅರಸಿಕೊಂಡು ಮಂಗಗಳು ನಗರದತ್ತ ಮುಖ ಮಾಡಿವೆ. ಕಾಲೋನಿಗಳಲ್ಲಿ ಜನರು ಹಾಕುತ್ತಿದ್ದ ಅಳಿದು ಉಳಿದ ಆಹಾರವನ್ನು ನೆಚ್ಚಿಕೊಂಡು ಜೀವನಕ್ಕೆ ದಾರಿ ಮಾಡಿಕೊಂಡಿರುವ ಮಂಗಗಳು ಈಗ ಆಹಾರವಿಲ್ಲದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿವೆ. ಜನರಿಗೆ ಆಹಾರವಿಲ್ಲದಿದ್ದರೆ ಕಷ್ಟವನ್ನು ಹೇಳಿಕೊಂಡು ಆಹಾರ ಪಡೆಯುತ್ತಾರೆ. ಆದರೇ ಮೂಕ ಪ್ರಾಣಿಗಳ ರೋಧನ ಹೇಳ ತೀರದಾಗಿದೆ.

    ತುತ್ತು ಆಹಾರಕ್ಕಾಗಿ ಮಂಗಗಳು ಪಡುತ್ತಿರುವ ಕಷ್ಟ ಮನಕಲಕುವಂತಿದೆ. ಅದರಲ್ಲೂ ತಾಯಿ ಮಂಗವೊಂದು ತನ್ನ ಪುಟ್ಟ ಕಂದಮ್ಮನನ್ನು ಉದರದಲ್ಲಿ ಹೊತ್ತಿಕೊಂಡು ಆಹಾರವನ್ನು ಹುಡುಕುತ್ತಿರುವ ದೃಶ್ಯ, ಸ್ಥಳದಲ್ಲಿ ಬಿಸಾಡಿದ ಹಾಲಿನ ಪ್ಯಾಕೆಟ್‍ನಲ್ಲಿ ಉಳಿದ ಹಾಲನ್ನು ಮಂಗ ಕುಡಿಯುತ್ತಿರುವುದು, ನೆಲದಲ್ಲಿ ಚೆಲ್ಲಿದ ಹಾಲನ್ನು ಮಂಗಗಳು ಕುಡಿಯುತ್ತಿರುವುದು, ಕಸದ ರಾಶಿಯಲ್ಲಿ ಸಿಕ್ಕ ಅಲ್ಪಸ್ವಲ್ಪ ಆಹಾರವನ್ನು ಆರಿಸಿ ತಿನ್ನುತ್ತಿರುವ ಮಂಗಗಳ ದೃಶ್ಯಗಳನ್ನು ನೋಡಿದರೆ ಕಣ್ಣಂಚಲ್ಲಿ ನೀರು ತುಂಬುತ್ತದೆ.

  • ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ

    ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ.

    ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು ಕೆಮ್ಮುತ್ತಿವೆ. ಇದೆಲ್ಲವನ್ನೂ ಗ್ರಾಮಸ್ಥರು ಆತಂಕದಿಂದ ನೋಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಾಗಿದ್ದರೆ ಗ್ರಾಮಸ್ಥರು ತೆಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಕೊರೊನಾ ಮಹಾಮಾರಿ ಒಕ್ಕರಿಸಿರುವ ಸಂದರ್ಭದಲ್ಲಿ ಕೋತಿಗಳು ಈ ರೀತಿ ಮಾಡುತ್ತಿರುವುದನ್ನು ಕಂಡು ಭಯಭೀತರಾಗಿದ್ದಾರೆ.

    ಕೋಡುಗುರ್ಕಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಈ ಕೋತಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೋತಿಗಳ ಹಾವ ಭಾವಗಳನ್ನ ಕಂಡ ಗ್ರಾಮಸ್ಥರು ಕೋತಿಗಳಿಗೂ ಕೊರೊನಾ ವೈರಸ್ ಹರಡಿದಿಯಾ ಎಂದು ಆತಂಕಗೊಂಡಿದ್ದಾರೆ. ಇದರ ನಡುವೆಯೂ ಕೋತಿಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.

    ಗ್ರಾಮದಲ್ಲಿರುವ ನೂರಾರು ಕೋತಿಗಳಲ್ಲಿ ಕೆಲವೊಂದು ರೋಗ ಲಕ್ಷಣಗಳು ಗೋಚರವಾಗಿವೆ. ಇಲ್ಲಿರುವ ಹೆಚ್ಚಿನ ಸಂಖ್ಯೆಯ ಕೋತಿಗಳು ಕೆಮ್ಮುವುದು, ಎಲ್ಲಂದರಲ್ಲಿ ನಿತ್ರಾಣವಸ್ಥೆಯಲ್ಲಿ ಮಲಗುವುದು, ಸುಸ್ತಾಗಿ ಬೀಳುವುದು. ಜನರು ಏನಾದರೂ ಆಹಾರ ಕೊಟ್ಟರೂ ತಿನ್ನದೆ ಇರೋದು ಹೀಗೆ ವರ್ತಿಸುತ್ತಿರುವ ಕೋತಿಗಳು ರಾತ್ರಿಯೆಲ್ಲಾ ಕೆಮ್ಮುತ್ತಿರುತ್ತವಂತೆ.

    ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ನೆಮ್ಮದಿಯಿಂದಿರುವ ಜನರು, ಇದೀಗ ಕೋತಿಗಳ ರೋಗ ಲಕ್ಷಣ ಕಂಡು ಮೈಸೂರು ಹಾಗೂ ಇನ್ನಿತರ ಭಾಗಗಳಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಏನಾದ್ರು ಕಾಣಿಸಿಕೊಂಡಿತಾ ಅಥವಾ ಕೊರೊನಾ ವೈರಸ್ಸೇ ಹಬ್ಬಿತಾ ಎಂಬ ಆಂತಂಕದಲ್ಲಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಪಿಡಿಓ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಗ್ರಾಮಕ್ಕೆ ಬಂದಿರುವ ಅರಣ್ಯ ಇಲಾಖೆ, ಆರೋಗ್ಯ ಹಾಗೂ ಪಶು ವೈದ್ಯಾಧಿಕಾರಿಗಳ ತಂಡ ಕೋತಿಗಳ ಪರಿಶೀಲನೆಯಲ್ಲಿ ತೊಡಗಿದೆ.

  • ಬೆಂಗ್ಳೂರಿನ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್‍ನಲ್ಲಿ ಕೋತಿಗಳ ಮೂಕರೋಧನೆ

    ಬೆಂಗ್ಳೂರಿನ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್‍ನಲ್ಲಿ ಕೋತಿಗಳ ಮೂಕರೋಧನೆ

    ಚಿಕ್ಕಬಳ್ಳಾಪುರ: ಭಾರತ ಲಾಕ್‍ಡೌನ್ ಹಿನ್ನೆಲೆ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮ ಸಂಪೂರ್ಣ ಬಂದ್ ಆಗಿದ್ದು, ನಂದಿಗಿರಿಧಾಮದಲ್ಲಿನ ಮೂಕ ಪ್ರಾಣಿಗಳ ರೋದನೆ ಮನಕಲಕುವಂತಿದೆ.

    ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಆ ಪ್ರವಾಸಿ ತಾಣವನ್ನು ಬಂದ್ ಮಾಡಿದ ಹಿನ್ನೆಲೆ, ಅಲ್ಲಿರುವ ಸಾವಿರಾರು ಕೋತಿಗಳು ಅನ್ನ, ಆಹಾರ, ಹಣ್ಣು ಹಂಪಲು ಹಾಗೂ ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ನಿತ್ರಾಣವಾಗಿ ಉಸಿರಾಡುತ್ತಿವೆ. ಸದಾ ಮರದಿಂದ ಮರಕ್ಕೆ ಜಿಗಿಯುತ್ತಾ ಕಪಿಚೇಷ್ಠೆ ಮಾಡುತ್ತಿದ್ದ ಕೋತಿಗಳು ಈಗ ನಡೆದಾಡಲು ಕಷ್ಟಪಡುತ್ತಿದ್ದವೆ.

    ಬೆಂಗಳೂರಿಗರ ಹಾಟ್ ಫೇವರೆಟ್ ಪಿಕ್ನಿಕ್ ಸ್ಪಾಟ್ ಆಗಿದ್ದ ನಂದಿ ಹಿಲ್ಸ್ ಈಗ ಬಿಕೋ ಎನ್ನುತ್ತಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕಳೆದ ಒಂದು ತಿಂಗಳಿಂದ ನಂದಿಗಿರಿಧಾಮಕ್ಕೆ ಬೀಗ ಹಾಕಿ ಪ್ರವಾಸಿಗರ ಪ್ರವೇಶ ನಿರ್ಬಂಧ ಮಾಡಿದೆ. ಇದರ ನೇರ ಪರಿಣಾಮ ಗಿರಿಧಾಮದಲ್ಲಿದ್ದ ವಾನರ ಸೈನ್ಯದ ಮೇಲೆ ಬಿದ್ದಿದ್ದು, ಗಿರಿಧಾಮದ ಮೇಲೆ ಇರುವ ಕೋತಿಗಳಿಗೆ ಅನ್ನ ಆಹಾರ, ಹಣ್ಣು, ಹಂಪಲು, ನೀರು ಇಲ್ಲದೆ ಪ್ರಾಣ ಕೈಯಲ್ಲಿಡಿದು ನಿತ್ರಾಣಗೊಂಡಿವೆ.

    ಹತ್ತಾರು ವರ್ಷಗಳಿಂದಲೂ ಗಿರಿಧಾಮವನ್ನೇ ತಮ್ಮ ಆವಾಸ ಸ್ಥಾನ ಮಾಡಿಕೊಂಡಿರುವ ಸಾವಿರಾರು ಕೋತಿಗಳು, ಈಗ ಇದ್ದಕ್ಕಿದ್ದ ಹಾಗೆ ಕೆಳಗೆ ಬರಲಾಗದೆ ಮೇಲೆಯೂ ಇರಲಾರದೆ ಗಿರಿಧಾಮದಲ್ಲಿ ಸಿಗುವ ಹುಲ್ಲನ್ನೆ ತಿಂದು ಉಸಿರಾಡುವಂತಾಗಿವೆ. ಇನ್ನೂ ಒಂದಷ್ಟು ಕೋತಿಗಳು, ಗಿರಿಧಾಮದ ಅಕ್ಕ ಪಕ್ಕ ಇರುವ ಹಳ್ಳಿಗಳತ್ತಾ ವಲಸೆ ಹೋಗಿವೆ. ಕೋತಿಗಳ ಹಸಿವು ಸಂಕಷ್ಟ ನೋಡಲಾಗದೆ ಕೆಲವು ಸ್ಥಳೀಯ ಗ್ರಾಮಸ್ಥರು ತಮ್ಮ ಗ್ರಾಮಗಳ ಬಳಿ ಬಂದ ಕೋತಿಗಳಿಗೆ, ತರಕಾರಿ ಹಾಕಿ ಮಾನವೀಯತೆ ಮೆರೆಯುತ್ತಿದ್ದಾರೆ.

    ಆದರೆ ಪ್ರತಿದಿನ ಹಾಕಲು ಸಾಧ್ಯವಾಗುತ್ತಿಲ್ಲ. ಗಿರಿಧಾಮಕ್ಕೆ ಬರುವ ಕಲರ್ ಫುಲ್ ಪ್ರೇಮಿಗಳಿಗೆ ತರ್ಲೆ ತಮಾಷೆ ಮಾಡುತ್ತಾ, ಅವರಿಗೆ ಉಚಿತ ಮನರಂಜನೆ ನೀಡಿ ಅವರ ಕೈಯಲ್ಲಿದ್ದ ತಿಂಡಿ ತಿನಿಸು ಕಸಿದು ತಿನ್ನುತ್ತಿದ್ದ ಕೋತಿಗಳು, ಈಗ ಅನ್ನ-ನೀರು ಇಲ್ಲದೆ ಕೊನೆಗೆ ಹುಲ್ಲನ್ನು ತಿಂದು ಪ್ರಾಣ ಉಳಿಸಿಕೊಳ್ಳುತ್ತಿರುವ ದೃಶ್ಯ ನೋಡಿದರೆ ಕರಳು ಕಿತ್ತುಬರುತ್ತೆ. ಗಿರಿಧಾಮದಲ್ಲಿರುವ ಕೋತಿಗಳಿಗೆ ಯಾರಾದರೂ ಹಣ್ಣು-ಹಂಪಲು ತರಕಾರಿ ಹಾಕಿ ಅವುಗಳು ಬದುಕುಳಿಯಲು ಸಹಾಯ ಮಾಡಬೇಕಿದೆ.

  • ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

    ಮನೆಗೆ ಬಂದ ಭಜರಂಗಿಗಳಿಗೆ ಹೊಟ್ಟೆ ತುಂಬ ನೀಡಿದ ಭಾಯಿಜಾನ್

    ಧಾರವಾಡ: ಲಾಕ್‍ಡೌನ್ ನಡುವೆ ಆಹಾರ ಅರಸಿ ಮನೆಗೆ ಬಂದಿದ್ದ ಕೋತಿಗಳಿಗೆ ಆಹಾರ ನೀಡುವ ಮೂಲಕ ಧಾರವಾದ ಗೌಸ್ ಖಾನ್ ಮಾನವೀಯತೆ ಮರೆದಿದ್ದಾರೆ.

    ಧಾರವಾಡದ ಬಸವನಗರದ ನಿವಾಸಿಯಾದ ಗೌಸ್ ಖಾನ್ ನವಲೂರು ಊಟಕ್ಕೆ ಕುಳಿತಾಗ ಮನೆಗೆ ಇಂದು ಎರಡು ಮಂಗಗಳು ಬಂದಿದ್ದವು. ಮಂಗಗಳನ್ನು ನೋಡಿದ ಗೌಸ್ ಖಾನ್ ಶೇಂಗಾ, ಚಪಾತಿ, ಬಾಳೆಹಣ್ಣು ನೀಡಿದ್ದಾರೆ. ಎಂದು ಬರದ ಮಂಗಗಳು ನಮ್ಮ ಮನೆಗೆ ಬಂದಿದ್ದರಿಂದ ಊಟ ನೀಡಿದ್ದೇವೆ ಎಂದು ಗೌಸ್ ಹೇಳುತ್ತಾರೆ.

    ಇಂದು ಶನಿವಾರ ಆಂಜನೇಯನ ವಾರ ಎಂದು ಹೇಳುತ್ತಾರೆ. ಮನೆಗೆ ಅತಿಥಿಗಳ ರೂಪದಲ್ಲಿ ಬಂದಿದ್ದವು. ನಾವು ಮಾಡುತ್ತಿದ್ದ ಊಟವನ್ನೇ ಮಂಗಗಳಿಗೆ ನೀಡಿದ್ದೇವೆ ಎಂದು ಗೌಸ್ ಕುಟುಂಬಸ್ಥರು ಹೇಳುತ್ತಾರೆ. ಇನ್ನು ಮಂಗಗಳು ಬಂದಿರೋದನ್ನು ನೋಡಿದ ಜನ, ಭಾಯಿಜಾನ್ ಮನೆಗೆ ಭಜರಂಗಿಗಳು ಬಂದಿವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  • ಲಾಕ್‍ಡೌನ್ ಮಧ್ಯೆ ಕೋತಿಗಳ ಕೂಲ್ ಪೂಲ್ ಪಾರ್ಟಿ

    ಲಾಕ್‍ಡೌನ್ ಮಧ್ಯೆ ಕೋತಿಗಳ ಕೂಲ್ ಪೂಲ್ ಪಾರ್ಟಿ

    ಮುಂಬೈ: ಕೊರೊನಾ ಭೀತಿಗೆ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಒಂದೆಡೆ ಕೊರೊನಾ ಭಯಕ್ಕೆ ಮನೆಯಲ್ಲಿಯೇ ಜನರು ಲಾಕ್ ಆಗಿದ್ದಾರೆ. ಇನ್ನೊಂದೆಡೆ ಜನರ ಹಾವಳಿ ಇಲ್ಲದೇ ಪ್ರಾಣಿಗಳು ಹೊರಗೆಲ್ಲಾ ಸುತ್ತಾಡಿಕೊಂಡು ಎಂಜಾಯ್ ಮಾಡುತ್ತಿದೆ. ಮುಂಬೈನಲ್ಲಿ ಕೋತಿಗಳು ಕೂಲ್ ಆಗಿ ಪೂಲ್ ಪಾರ್ಟಿ ಮಾಡುತ್ತಿರುವ ವಿಡಿಯೋ ಇದಕ್ಕೆ ಉದಾಹರಣೆ ಎನ್ನಬಹುದು.

    ಹೌದು. ಜನರ ಓಡಾಟವಿಲ್ಲದ ಕಾರಣ ಪ್ರಾಣಿ, ಪಕ್ಷಿಗಳು ರಸ್ತೆಗಳಲ್ಲಿ ಆರಾಮಾಗಿ ಓಡಾಡಿಕೊಂಡಿವೆ. ಲಾಕ್‍ಡೌನ್ ಪರಿಣಾಮ ವಾಹನಗಳ ಕಿರಿಕಿರಿ ಇಲ್ಲದೇ ಪರಿಸರದಲ್ಲಿ ಮಾಲಿನ್ಯ ಕೂಡ ಕಡಿಮೆಯಾಗಿದೆ. ಈ ನಡುವೆ ಮುಂಬೈನ ಬೋರಿವಿಲಾದಲ್ಲಿರುವ ಅಪಾರ್ಟ್‍ಮೆಂಟ್ ಒಂದರ ಸ್ವಿಮ್ಮಿಂಗ್ ಪೂಲ್‍ನಲ್ಲಿ ಕೋತಿಗಳ ಗ್ಯಾಂಗ್ ಬಿಸಿಲ ಝಳಕ್ಕೆ ಕೂಲ್ ಆಗಿ ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    https://www.instagram.com/p/B-1Fg2PD5Fg/

    ವಿಡಿಯೋದಲ್ಲಿ ಅಪಾರ್ಟ್‍ಮೆಂಟ್ ಬಾಲ್ಕಾನಿಗಳಿಂದ, ಕಿಟಕಿ ಮೇಲಿಂದ ಸ್ವಿಮ್ಮಿಂಗ್ ಪೂಲ್ ಒಳಗೆ ಕೋತಿಗಳು ಹಾರುತ್ತಿರುವುದು, ನೀರಿನಲ್ಲಿ ಈಜುತ್ತಾ ಮಸ್ತಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಕ್ಯೂಟ್ ವಿಡಿಯೋವನ್ನು ಬಾಲಿವುಡ್ ನಟಿ ಟಿಸ್ಕಾ ಚೋಪ್ರಾ ತಮ್ಮ ಇನ್‍ಸ್ಟಾಗ್ರಾಮ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಮನಸೋತ ನಟಿ ರವೀನಾ ತಂಡನ್ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡು ಇದು ‘ಶುದ್ಧವಾದ ಕೋತಿಗಳ ಆಟ’ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಕೂಲ್ ವಿಡಿಯೋ ಮಾತ್ರ ನೆಟ್ಟಿಗರ ಮನಗೆದ್ದಿದ್ದು, ಸಖತ್ ವೈರಲ್ ಆಗುತ್ತಿದೆ.

    ಈ ಲಾಕ್‍ಡೌನ್ ಸಮಯದಲ್ಲಿ ಇನ್ನೊಂದು ವಿಡಿಯೋ ಕೂಡ ವೈರಲ್ ಆಗುತ್ತಿದೆ. ಅದು ಕೂಡ ಸ್ವಿಮ್ಮಿಂಗ್ ಪೂಲ್ ಅಲ್ಲಿ ಕೋತಿಗಳು ಆಟವಾಡುತ್ತಾ, ಈಜುತ್ತಾ ಕಾಲ ಕಳೆಯುತ್ತಿರುವ ವಿಡಿಯೋ. ಇದನ್ನು ನೋಡಿದ ನೆಟ್ಟಿಗರು ಕೋತಿಗಳ ಪೂಲ್ ಪಾರ್ಟಿಗೆ ಫಿದಾ ಆಗಿದ್ದಾರೆ. ವಿಡಿಯೋ ಹಂಚಿಕೊಂಡ ಟ್ವಿಟ್ಟರ್ ಬಳಕೆಯಾರರು, ನಾವು ನಮ್ಮ ಅಪಾರ್ಟ್‍ಮೆಂಟ್‍ನಲ್ಲಿರುವ ಸ್ವಿಮ್ಮಿಂಗ್ ಪೂಲ್ ಯಾರು ಉಪಯೋಗಿಸುತ್ತಿಲ್ಲ, ಹೀಗಾಗಿ ಅದರಲ್ಲಿರುವ ನೀರನ್ನು ಖಾಲಿ ಮಾಡಬೇಕು ಎಂದು ನಿರ್ಧರಿಸಿದ್ದೆವು. ಆದರೆ ಅಷ್ಟರಲ್ಲಿ ನಮ್ಮ ನೆರೆಯ ವಾರನ ಸೇನೆ ಬಂದು ನಮ್ಮ ನಿರ್ಧಾರಕ್ಕೆ ಬ್ರೇಕ್ ಹಾಕಿದೆ. ಕೋತಿಗಳು ಖುಷಿಯಾಗಿ ನೀರಿನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತ್ತಿರೋದನ್ನ ನೋಡಿದರೆ ಖುಷಿ ಆಗುತ್ತೆ. ಲಾಕ್‍ಡೌನ್‍ನಲ್ಲಿ ನಮಗೆ ಲೈವ್ ಎಂಟರ್‌ಟೈನ್‌ಮೆಂಟ್ ಸಿಗುತ್ತಿದೆ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.

    https://twitter.com/PreetiManiar/status/1248694395416674304

    ಅದೇನೆ ಇರಲಿ ಲಾಕ್‍ಡೌನ್‍ನಿಂದ ಮನೆಯಲ್ಲಿದ್ದು ಜನರು ಬೋರ್ ಆಗಿದ್ದಾರೆ. ಆದ್ರೆ ಮೂಕ ಪ್ರಾಣಿಗಳು ಮಾತ್ರ ಖುಷಿಯಾಗಿವೆ. ಹಲವೆಡೆ ಆಹಾರ ಸಿಗದೆ ಒದ್ದಾಡುತ್ತಿರುವ ಪ್ರಾಣಿಗಳಿಗೆ ಹಲವರು ಆಹಾರ ನೀಡಿ ಮಾನವಿಯತೆ ಮೆರೆಯುತ್ತಿದ್ದಾರೆ. ಇನ್ನು ಕೆಲವೆಡೆ ನೀವು ಲಾಕ್ ಆಗಿ ಮನೆಲ್ಲೇ ಇರಿ, ನಾವು ಎಂಜಾಯ್ ಮಾಡುತ್ತೇವೆ ಎನ್ನುವ ಹಾಗೆ ಕೋತಿಗಳು ಬೇಸಿಗೆ ಬಿಸಿಯಲ್ಲಿ ಕೂಲ್ ಪೂಲ್ ಪಾರ್ಟಿ ಮಾಡುತ್ತಿವೆ.