Tag: Mohammed Kaif

  • ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ಮುಂಬೈ: ತಮ್ಮ ಜೀವನದ ಬೆಸ್ಟ್ ಕ್ಯಾಚಿಂಗ್ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಸ್ವಚ್ಛ ಕೈಗಳ ಬಗ್ಗೆ ಉತ್ತಮ ಸಂದೇಶ ನೀಡಿದ್ದಾರೆ.

    ಕೊರೊನಾ ವೈರಸ್ ಹರಡು ಭೀತಿಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಇಡೀ ದೇಶವೇ ಲಾಕ್‍ಡೌನ್ ಆದರೂ ಮಹಾಮಾರಿ ಕೊರೊನಾ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾದಿಂದ ಎಚ್ಚರವಹಿಸಲು ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುತ್ತಲೇ ಇದ್ದಾರೆ. ಅಂತಯೇ ಮೊಹಮ್ಮದ್ ಕೈಫ್ ಕೂಡ ಟ್ವಿಟ್ಟರ್ ನಲ್ಲಿ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್‍ವೊಂದನ್ನು ಮಾಡಿರುವ ಕೈಫ್, ಇಂಗ್ಲೆಂಡ್ ತಂಡದ ವಿರುದ್ಧ ತಾವು ಹಿಡಿದಿರುವ ರನ್ನಿಂಗ್ ಕ್ಯಾಚ್‍ವೊಂದರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್ ಸಿಂಗ್ ಅವರು ಬೌಲಿಂಗ್ ಮಾಡಿದ್ದು, ಬ್ಯಾಟ್ಸ್ ಮ್ಯಾನ್ ಹೊಡೆದ ಬಾಲನ್ನು ಕೈಫ್ ತಮ್ಮ ಬಲಭಾಗಕ್ಕೆ ಓಡಿಹೋಗಿ ನಗೆದು ಕ್ಯಾಚ್ ಹಿಡಿಯುತ್ತಾರೆ. ಇದರ ಜೊತೆಗೆ ಉತ್ತಮ ಕೈಗಳು ಹೇಗೆ ಕ್ಯಾಚ್ ಬಿಡುವುದಿಲ್ಲವೋ ಹಾಗೇ ಸ್ವಚ್ಛ ಕೈಗಳಿಗೆ ವೈರಸ್ ಅಂಟುವುದಿಲ್ಲ ಎಂದು ಬರೆದು ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ.

    ಈ ಹಿಂದೆಯೂ ಕೂಡ ಮೋದಿ ಅವರ ಜನತಾ ಕರ್ಫ್ಯೂಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಕೈಫ್ ಅವರು, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕರ್ಫ್ಯೂ ಹಾಕಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಬರೆದುಕೊಂಡಿದ್ದರು.

    ಜನತಾ ಕಫ್ರ್ಯೂ ಸಲುವಾಗಿ ಟ್ವೀಟ್ ಮಾಡಿದ್ದ ಕೈಫ್ ಮತ್ತು ಯುವರಾಜ್ ಇಬ್ಬರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದರು.

  • ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

    ಐಪಿಎಲ್‍ನಲ್ಲಿ ನಾನು ಕೈಫ್ ಅಹಂಕಾರ ಇಳಿಸಿದ್ದೆ: ಶೇನ್ ವಾರ್ನ್

    ಮುಂಬೈ: ಚೊಚ್ಚಲ ಐಪಿಎಲ್ ಕ್ರಿಕೆಟ್ ನಡೆಯುವ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುತ್ತಿದ್ದಾಗ ನಾನು ಮೊಹಮ್ಮದ್ ಕೈಫ್ ಅವರ ಅಹಂಕಾರವನ್ನು ಇಳಿಸಿದ್ದೆ ಎಂದು ಆಸ್ಟ್ರೇಲಿಯಾ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.

    ಶೇನ್ ವಾರ್ನ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ `ನೋ ಸ್ಪಿನ್’ ಹೆಸರಿನಲ್ಲಿ ಆತ್ಮ ಚರಿತ್ರೆ ಬರೆದಿದ್ದು ಇದರಲ್ಲಿ ಐಪಿಎಲ್ ಪಂದ್ಯಗಳ ವೇಳೆ ನಡೆದ ಘಟನೆಯನ್ನು ಮೆಲುಕು ಹಾಕಿದ್ದಾರೆ.

    ವಾರ್ನ್ ಪುಸ್ತಕದಲ್ಲಿ ಏನಿದೆ?
    ನನ್ನ ತಂಡದಲ್ಲಿ ಕೈಫ್ ಆಡುತ್ತಿದ್ದರು. ಒಂದು ದಿನ ರಾಜಸ್ಥಾನ ತಂಡ ಹೋಟೆಲ್‍ಗೆ ಹೋದ ಸಂದರ್ಭದಲ್ಲಿ ಆಟಗಾರರೆಲ್ಲರೂ ತಮ್ಮ ರೂಮ್ ಕೀ ತೆಗೆದುಕೊಂಡು ಅವರ ಕೊಠಡಿಗೆ ತೆರಳಿದರು. ಈ ಸಮಯದಲ್ಲಿ ಕೈಫ್ ರಿಸೆಪ್ಷನಿಸ್ಟ್ ಬಳಿ ತೆರಳಿ “ನಾನು ಕೈಫ್” ಎಂದು ಹೇಳಿದರು.

    ಈ ಸಮಯದಲ್ಲಿ ಹೋಟೆಲ್ ಸಿಬ್ಬಂದಿ,”ನಮ್ಮಿಂದ ಏನು ಸಹಾಯ ಬೇಕು” ಎಂದು ಕೇಳಿದ್ದರು. ಇದಕ್ಕೆ ಕೈಫ್,”ನಾನು ಕೈಫ್” ಎಂದು ಮತ್ತೊಮ್ಮೆ ಹೇಳಿದರು. ಕೈಫ್ ಸಿಬ್ಬಂದಿ ಜೊತೆ ಮಾತನಾಡುವುದನ್ನು ಕಂಡು ನಾನು ಅಲ್ಲಿಗೆ ತೆರಳಿ,”ಏನಾದ್ರೂ ಸಮಸ್ಯೆ ಇದ್ಯಾ?” ಎಂದು ಪ್ರಶ್ನಿಸಿದೆ. ಈ ಸಮಯದಲ್ಲೂ ಕೈಫ್,”ನಾನು ಕೈಫ್” ಎಂದು ಉತ್ತರಿಸಿದರು.

    “ನಾನು ಟೀಂ ಇಂಡಿಯಾದ ಹಿರಿಯ ಆಟಗಾರ, ಹೀಗಾಗಿ ನನಗೆ ದೊಡ್ಡ ಕೊಠಡಿ ನೀಡಬೇಕು” ಎನ್ನುವ ಅರ್ಥದಲ್ಲಿ ಕೈಫ್ ಹೇಳುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಯಿತು. ಇದಕ್ಕೆ ನಾನು,”ನನ್ನನ್ನು ಬಿಟ್ಟು ಉಳಿದ ಎಲ್ಲರಿಗೂ ಸಣ್ಣ ರೂಮ್ ನೀಡಲಾಗಿದೆ. ನನ್ನ ಕೊಠಡಿಯಲ್ಲಿ ಆಗಾಗ ಸಭೆ ನಡೆಯಲಿರುವ ಕಾರಣ ದೊಡ್ಡ ರೂಮ್ ನೀಡಲಾಗಿದೆ” ಎಂದಾಗ ಕೈಫ್ ಅಲ್ಲಿಂದ ತೆರಳಿದರು ಎಂದು ವಾರ್ನ್ ಬರೆದುಕೊಂಡಿದ್ದಾರೆ.

    ತಮ್ಮ ಪುಸ್ತಕದಲ್ಲಿ ವಾರ್ನ್,”ಕೆಲ ಭಾರತೀಯ ಹಿರಿಯ ಆಟಗಾರರು ಕಿರಿಯ ಆಟಗಾರಲ್ಲಿ ಬ್ಯಾಗ್ ತರಲು ಹೇಳುತ್ತಾರೆ. ನನಗೆ ಇದು ಸರಿ ಕಾಣುವುದಿಲ್ಲ. ಮೈದಾನದಲ್ಲಿ ಎಲ್ಲರೂ ಸಮಾನರು. ಹಿರಿಯರು, ಕಿರಿಯರು ಎಂಬುದಿಲ್ಲ. ಎಲ್ಲರಿಗೂ ಒಂದೇ ನಿಯಮ ಅನ್ವಯವಾಗಬೇಕು” ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv