Tag: modi birthday

  • ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

    ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

    ಪಣಜಿ: ಭಾರತವು ಲಸಿಕೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುತ್ತಿರುವುದನ್ನು ನೋಡಿ ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

    ಲಸಿಕೆ ಪಡೆದ ನಂತರ ಜ್ವರ ಬಂದರೆ ಅದನ್ನು ಅಡ್ಡ ಪರಿಣಾಮವೆಂದು ಜನರು ಕರೆಯುತ್ತಾರೆ. ನನ್ನ ಜನ್ಮದಿನದಂದು 2.5 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ. ಇದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ ಎನ್ನುವ ಮೂಲಕ ವಿಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಮೋದಿ ಬಗ್ಗೆ ಸ್ವಾಮಿ ವ್ಯಂಗ್ಯ – ಕುದುರೆಗೆ ನೀರು ಕುಡಿಯುವಂತೆ ಮಾಡೋದು ಹೇಗೆ?

    ನನ್ನ 71ನೇ ಜನ್ಮದಿನದಂದು 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ. ಇದು ನನಗೆ ಮರೆಯಲಾಗದ ಹಾಗೂ ಭಾವನಾತ್ಮಕ ದಿನವೆಂದು ನರೇಂದ್ರ ಮೋದಿ ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಸ್ಮರಿಸಿರುವ ಮೋದಿ, ನಿಮ್ಮ ಪ್ರಯತ್ನಗಳಿಂದ ಭಾರತ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಿ ವಿಶ್ವ ದಾಖಲೆ ಮಾಡಿದೆ. ಈ ಸಾಧನೆಯನ್ನು ಬಲಿಷ್ಠ ರಾಷ್ಟ್ರಗಳು ಸಹ ಮಾಡಲಾಗಲಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

    ದೇಶವು ನಿನ್ನೆ ಕೋವಿನ್ ಡ್ಯಾಶ್‍ಬೋರ್ಡ್ ಅನ್ನು ಹೇಗೆ ನೋಡಿತು ಎಂಬುದು ನನಗೆ ಗೊತ್ತು. ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಲಸಿಕೆ, ಪ್ರತಿ ನಿಮಿಷಕ್ಕೆ 26 ಸಾವಿರ ವ್ಯಾಕ್ಸಿನೇಷನ್‍ಗಳು ನಿನ್ನೆ ನಡೆದಿದೆ. ಈ ಪ್ರಯತ್ನಕ್ಕಾಗಿ ದೇಶದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಡಳಿತದಲ್ಲಿರುವ ಜನರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಈ ಕೆಲಸ ದೇಶದ ಮಾನವಶಕ್ತಿಯನ್ನು ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಜನ್ಮದಿನಗಳು ಬಂದು ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರ ಉಳಿದಿದ್ದೇನೆ. ಈ ಬಾರಿಯ ಜನ್ಮದಿನವನ್ನು ಮಾತ್ರ ಎಂದಿಗೂ ಮರೆಯಲಾರೆ ಎಂದು ಭಾವನಾತ್ಮಕವಾಗಿ ಮೋದಿ ತಿಳಿಸಿದ್ದಾರೆ.

     

  • ಮೋದಿ ದೇಶದ ಪಿತಾಮಹ ಎಂದ ಮಹಾರಾಷ್ಟ್ರ ಸಿಎಂ ಪತ್ನಿ

    ಮೋದಿ ದೇಶದ ಪಿತಾಮಹ ಎಂದ ಮಹಾರಾಷ್ಟ್ರ ಸಿಎಂ ಪತ್ನಿ

    ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬಕ್ಕೆ ಶುಭಕೋರಿದ್ದರು. ಆದರೆ ಈ ವೇಳೆ ರಾಷ್ಟ್ರದ ಪಿತಾಮಹ ಮೋದಿ ಎಂದು ಟ್ವೀಟ್ ಮಾಡಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

    ಸಾವಿರಾರು ಜನರು ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಈ ನಡುವೆ ಅಮೃತಾ ಫಡ್ನವಿಸ್ ಕೂಡ ಸೇರಿದ್ದಾರೆ. ಆದರೆ ಅಮೃತ ಅವರು ಟ್ವೀಟ್ ಮಾಡಿ ಶುಭಾಶಯ ಕೋರಿರುವುದು ಈಗ ಚರ್ಚೆಗೆ ಕಾರಣವಾಗಿದೆ. ತಮ್ಮ ಟ್ವೀಟ್‍ನಲ್ಲಿ ಅಮೃತಾ ಅವರು, ಸಮಾಜ ಸುಧಾರಣೆಗಾಗಿ ಕೆಲಸ ಮಾಡುವಂತೆ ನಮನ್ನು ಹುರಿದುಂಬಿಸಿ, ಪ್ರೇರೇಪಿಸಿರುವ ನಮ್ಮ ದೇಶದ ಪಿತಾಮಹ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದು #HappyBirthdayPM ಮತ್ತು #happybirthdaynarendramodi ಎಂಬ ಹ್ಯಾಷ್ ಟ್ಯಾಗ್‍ಗಳ ಜೊತೆ ಪೋಸ್ಟ್ ಮಾಡಿದ್ದರು.

    ಮೋದಿ ಅವರನ್ನು ನಮ್ಮ ದೇಶದ ಪಿತಾಮಹ ಎಂದು ಕರೆದು ಈಗ ಅಮೃತಾ ಅವರು ಪೀಕಲಾಟಕ್ಕೆ ಬಿದ್ದಿದ್ದಾರೆ. ಹೌದು. ಯಾಕೆಂದರೆ ಅಮೃತಾ ಅವರ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಒಂದು ರಾಜ್ಯದ ಸಿಎಂ ಪತ್ನಿಯಾಗಿದ್ದರೂ ದೇಶದ ಪಿತಾಮಹ ಯಾರೆಂದು ತಿಳಿದಿಲ್ಲ ಎಂದು ಕಾಲೆಳೆದಿದ್ದಾರೆ.

    ಮಹಾತ್ಮ ಗಾಂಧೀಜಿ ಮಾತ್ರ ನಮ್ಮ ದೇಶದ ಪಿತಾಮಹ ಎಂದು ಕೆಲವರು ಮಾತಿನ ಚಾಟಿ ಬೀಸಿದ್ದಾರೆ. ಅಲ್ಲದೆ ಕಮೆಂಟ್ ಮೇಲೆ ಕಮೆಂಟ್ ಮಾಡುತ್ತಾ ಅಮೃತಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಪ್ರಧಾನಿ ಮೋದಿ ಯಾವಾಗ ನಮ್ಮ ದೇಶದ ಪಿತಾಮಹರಾದರು? ನಮ್ಮ ದೇಶ ಎಲ್ಲಿ ಸುಧಾರಣೆಯಾಗಿದೆ? ಈಗ ದೇಶದಲ್ಲಿ ಮೊದಲಿಗಿಂತಲೂ ನಿರುದ್ಯೋಗ ಹೆಚ್ಚಾಗಿದೆ, ಆರ್ಥಿಕ ಕುಸಿದಿದೆ. ಸಮಾಜ ಸುಧಾರಣೆ ಎಂದರೆ ಇದೇನಾ ಎಂದು ಪ್ರಶ್ನಿಸಿ ನೆಟ್ಟಿಗರು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  • ಕೊಟ್ಟ ಮಾತು ತಪ್ಪಿದ ಸಂಸದ ಶ್ರೀರಾಮುಲು- ಮೋದಿ ಆದೇಶಕ್ಕೆ ಬೆಲೆಯೇ ಇಲ್ಲ

    ಕೊಟ್ಟ ಮಾತು ತಪ್ಪಿದ ಸಂಸದ ಶ್ರೀರಾಮುಲು- ಮೋದಿ ಆದೇಶಕ್ಕೆ ಬೆಲೆಯೇ ಇಲ್ಲ

    ಬಳ್ಳಾರಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಬಿಜೆಪಿ ನಾಯಕರು ಸಾರ್ವಜನಿಕ ಶೌಚಾಲಯ ಕ್ಲೀನ್ ಮಾಡೋಕೆ ಮುಂದಾಗಿರುವುದು ಕ್ರಾಂತಿಕಾರಕ ನಿರ್ಧಾರವೆಂದು ಮಾಧ್ಯಮಗಳ ಮುಂದೆ ಹೊಗಳಿದ್ದ ಬಳ್ಳಾರಿ ಸಂಸದ ಶ್ರೀರಾಮುಲು ಇಂದು ಶೌಚಾಲಯ ಕ್ಲೀನ್ ಮಾಡದೇ ನಾಪತ್ತೆಯಾಗಿದ್ದಾರೆ.

    ಮೋದಿ ಹುಟ್ಟುಹಬ್ಬದ ಅಂಗವಾಗಿ ತಾವೂ ಸಹ ಬಳ್ಳಾರಿಯ ಒಂದು ಶೌಚಾಲಯ ಕ್ಲೀನ್ ಮಾಡಲು ರೆಡಿ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಮಾಧ್ಯಮಗಳ ಮುಂದೆ ಹೇಳಿದ್ದರು. ಆದರೆ ಕೊಟ್ಟ ಮಾತನ್ನು ಒಂದೇ ದಿನದಲ್ಲಿ ಮರೆತಿರುವ ಅವರು ಇಂದು ಟಾಯ್ಲೆಟ್ ಕ್ಲೀನ್ ಮಾಡೋ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಹೀಗಾಗಿ ಶ್ರೀರಾಮುಲು ನೇತೃತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರು ಕೊನೆಗೆ ಬಳ್ಳಾರಿಯ ಮಾಜಿ ಶಾಸಕ ಸೋಮಶೇಖರ ರೆಡ್ಡಿ ನೇತೃತ್ವದಲ್ಲಿ ನಗರದ ಬಾಪೂಜಿ ನಗರದ ಸಾರ್ವಜನಿಕ ಶೌಚಾಲಯವನ್ನು ಕ್ಲೀನ್ ಮಾಡಿದ್ರು.

    ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಸೋಮಶೇಖರ ರೆಡ್ಡಿ, ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಅವರ ಆಶಯದಂತೆ ಸೇವಾ ದಿವಾಸ್ ಎಂದು ಆಚರಣೆ ಮಾಡುತ್ತಿದ್ದವೆ. ಆಗಸ್ಟ್ 02 ರ ಗಾಂಧಿ ಜಯಂತಿ 15 ದಿನಗಳ ಮುಂಚೆಯೇ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿರುವುದು ಮತ್ತು ಶೌಚಾಲಯ ಕ್ಲೀನ್ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.