Tag: model

  • ಪ್ರಾರ್ಥನೆ ನಂತ್ರ ಸೆಕ್ಸ್ ಮಾಡ್ತೇನೆ ಎಂದ ಮಾಡೆಲ್

    ಪ್ರಾರ್ಥನೆ ನಂತ್ರ ಸೆಕ್ಸ್ ಮಾಡ್ತೇನೆ ಎಂದ ಮಾಡೆಲ್

    ವಾಷಿಂಗ್ಟನ್: ಇತ್ತೀಚೆಗೆ ಟಾಲಿವುಡ್ ನಟಿ ಇಲಿಯಾನಾ “ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡುತ್ತೇನೆ” ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಇದೀಗ ರೂಪದರ್ಶಿಯೊಬ್ಬರು “ಪ್ರಾರ್ಥನೆ ಮುಗಿದ ಬಳಿಕ ನಾನು ಸೆಕ್ಸ್ ಮಾಡಲು ಬಯಸುತ್ತೇನೆ” ಎಂದು ಸಾರ್ವಜನಿಕವಾಗಿಯೇ ಹೇಳಿಕೊಂಡಿದ್ದಾರೆ. ಇದೀಗ ಇವರ ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ.

    ಅಮೆರಿಕನ್ ರೂಪದರ್ಶಿ ಆಶ್ಲೇ ಗ್ರಹಾಂ ಈ ರೀತಿ ಹೇಳಿಕೆ ನೀಡಿದ್ದಾರೆ. ಗ್ರಹಾಂ ಇತ್ತೀಚೆಗೆ ‘ಎ ಲಿಟ್ಲ್ ಲೇಟ್ ವಿತ್ ಲಿಲ್ಲಿ ಸಿಂಗ್’ ಶೋನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಾನು ಪ್ರಾರ್ಥನೆ ಮುಗಿದ ಬಳಿಕ ನನ್ನ ಪತಿಯೊಂದಿಗೆ ಸೆಕ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

    ನನಗೂ, ನನ್ನ ಪತ್ನಿ ಜಸ್ಟಿನ್ ಎವ್ರಿನ್‍ಗೆ ಜೀಸಸ್ ಬಗ್ಗೆ ಹಾಗೂ ನಾವು ಮಾಡುವ ಧ್ಯಾನ-ಪ್ರಾರ್ಥನೆಗಳ ಬಗ್ಗೆ ನಂಬಿಕೆ ಇದೆ. ಹೀಗಾಗಿ ನಾವು ಪ್ರಾರ್ಥನೆ ಮಾಡಲು ಚರ್ಚ್‍ಗೆ ಹೋಗುತ್ತಿರುತ್ತೇವೆ. ಪ್ರಾರ್ಥನೆ ಮುಗಿದ ನಂತರ ಮನೆಗೆ ಬಂದು ಇಬ್ಬರೂ ಸೆಕ್ಸ್ ಮಾಡುತ್ತೇನೆ. ಪ್ರಾರ್ಥನೆ ಮಾಡಿ ಬಂದು ಸೆಕ್ಸ್ ಮಾಡುವುದು ನಮಗೆ ತಪ್ಪೆನಿಸಲಿಲ್ಲ. ಯಾಕೆಂದರೆ ಪ್ರಾರ್ಥನೆ ಮಾನಸಿಕವಾಗಿ ನೆಮ್ಮದಿ ನೀಡುತ್ತದೆ. ಹಾಗೆಯೇ ಸೆಕ್ಸ್ ದೈಹಿಕವಾಗಿ ನೆಮ್ಮದಿ ನೀಡುತ್ತದೆ ಎಂದು ಗ್ರಹಾಂ ಹೇಳಿದ್ದಾರೆ.

    ಗ್ರಹಾಂ ಅವರ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಸದ್ಯಕ್ಕೆ 32 ವರ್ಷದ ಮಾಡೆಲ್ ಗರ್ಭಿಣಿಯಾಗಿದ್ದು, ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಜೊತೆಗೆ ಗರ್ಭಿಣಿಯ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.

  • ಸರ್ಬಿಯಾ ಮಾಡೆಲ್‍ನೊಂದಿಗೆ ಹಾರ್ದಿಕ್ ಪಾಂಡ್ಯ ಮದ್ವೆ!

    ಸರ್ಬಿಯಾ ಮಾಡೆಲ್‍ನೊಂದಿಗೆ ಹಾರ್ದಿಕ್ ಪಾಂಡ್ಯ ಮದ್ವೆ!

    ನವದೆಹಲಿ: ಈಗಾಗಲೇ ಹಲವು ಬಾಲಿವುಡ್ ನಟಿಯರೊಂದಿಗೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಡೇಟಿಂಗ್ ನಡೆಸಿರುವ ಸುದ್ದಿಗಳು ಸಾಕಷ್ಟು ಕೇಳಿ ಬಂದಿದ್ದು, ಆದರೆ ಸದ್ಯ ಹಾರ್ದಿಕ್ ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್ ಮದುವೆಯಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಈ ಹಿಂದೆಯೇ ನತಾಶಾರೊಂದಿಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್ ನಡೆಸುತ್ತಿದ್ದರೆ ಎಂಬ ಸುದ್ದಿ ಕೇಳಿ ಬಂದಿತ್ತು. ಅಲ್ಲದೇ ಹಾರ್ದಿಕ್ ತಮ್ಮ ಪೋಷಕರಿಗೆ ನತಾಶಾರನ್ನು ಭೇಟಿ ಮಾಡಿಸಿ ಪರಿಚಯ ಕೂಡ ಮಾಡಿಸಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಇಬ್ಬರು ಯಾವುದೇ ಸ್ಪಷ್ಟನೆಯನ್ನು ನೀಡಿರಲಿಲ್ಲ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.instagram.com/p/B4W00BRh5ks/?utm_source=ig_embed

    ಅಂದಹಾಗೇ ನತಾಶಾ ಸರ್ಬಿಯಾ ಮೂಲದ ಮಾಡೆಲ್, ಡಾನ್ಸರ್ ಆಗಿದ್ದು, ಬಾಲಿವುಡ್‍ನ ಕೆಲ ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ಮುಂಬೈನಲ್ಲಿಯೆ ನೆಲೆಸಿದ್ದಾರೆ. ಹಿಂದಿಯ ಬಿಗ್ ಬಾಸ್ 8ನೇ ಆವೃತ್ತಿಯಲ್ಲೂ ನತಾಶಾ ಭಾಗಿಯಾಗಿದ್ದರು. ಈ ವೇಳೆ ಹಾರ್ದಿಕ್ ತಮ್ಮ ಅಭಿಮಾನಿಗಳಿಗೆ ನತಾಶಾ ಪರ ಮತ ಹಾಕುವಂತೆ ಮನವಿ ಕೂಡ ಮಾಡಿದ್ದರು. ನತಾಶಾ, ಶಾರುಖ್ ಖಾನ್‍ರ ‘ಝೀರೋ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಹಿಂದಿ ಡಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಬ್ಯುಸಿಯಾಗಿದ್ದಾರೆ.

    https://www.instagram.com/p/B4nECKzgVXy/

    https://www.instagram.com/p/By-NR3sgamZ/

  • ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ ಸಾವು

    ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡ್ತಿದ್ದಾಗ ಎಂಬಿಎ ವಿದ್ಯಾರ್ಥಿನಿ ಸಾವು

    ಬೆಂಗಳೂರು: ಕಾಲೇಜ್ ಫ್ರೆಶರ್ಸ್ ಡೇಗೆ ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಎಂಬಿಎ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.

    21 ವರ್ಷದ ಶಾಲಿನಿ ಸಾವನ್ನಪ್ಪಿರುವ ವಿದ್ಯಾರ್ಥಿನಿ. ಪೀಣ್ಯದ ಏಮ್ಸ್ ಇನ್ಸ್ ಟಿಟ್ಯೂಟ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.

    ಸೋಮವಾರ ಕಾಲೇಜ್ ಫ್ರೆಶರ್ಸ್ ಡೇ ಇತ್ತು. ಈ ಹಿನ್ನೆಲೆಯಲ್ಲಿ ಶಾಲಿನಿ ಸೇರಿದಂತೆ ಕೆಲ ವಿದ್ಯಾರ್ಥಿಗಳು ರ‌್ಯಾಂಪ್‌ ವಾಕ್ ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಶಾಲಿನಿ ಸ್ಟೇಜ್ ಮೇಲೆಯೇ ಕುಸಿದು ಬಿದ್ದಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಿಸದೆ ಶಾಲಿನಿ ಮೃತಪಟ್ಟಿದ್ದಾಳೆ.

    ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಅಂತ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

  • ಮಿಸ್ ವರ್ಲ್ಡ್ ಅಮೆರಿಕ – ಫಿನಾಲೆಯಲ್ಲಿ ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಸಿಕ್ತು ಆಸ್ಪತ್ರೆಯಲ್ಲಿ ಕಿರೀಟ

    ಮಿಸ್ ವರ್ಲ್ಡ್ ಅಮೆರಿಕ – ಫಿನಾಲೆಯಲ್ಲಿ ಕುಸಿದು ಬಿದ್ದ ಭಾರತೀಯ ಮಾಡೆಲ್‍ಗೆ ಸಿಕ್ತು ಆಸ್ಪತ್ರೆಯಲ್ಲಿ ಕಿರೀಟ

    ವಾಷಿಂಗ್ಟನ್: ಮಿಸ್ ವರ್ಲ್ಡ್ ಅಮೆರಿಕ 2019 ಫಿನಾಲೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ಮೂಲದ ಮಾಡೆಲ್‍ಗೆ ಆಯೋಜಕರು ಆಸ್ಪತ್ರೆಗೆ ಹೋಗಿ ಕಿರೀಟ ನೀಡಿದ್ದಾರೆ.

    ಭಾರತೀಯ ಮೂಲದ ಶ್ರೀ ಸೈನಿ ಮಂಗಳವಾರ ಸಂಜೆ ಗೌನ್ ರೌಂಡ್‍ನಲ್ಲಿ ಭಾಗವಹಿಸುವ ಮೊದಲು ಕುಸಿದು ಬಿದ್ದಿದ್ದರು. ಪರಿಣಾಮ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿತ್ತು. ಬಳಿಕ ಸೈನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸೈನಿ ಕುಸಿದು ಬಿದ್ದ ನಂತರ ಅವರ ತಾಯಿ ಏಕ್ತಾ, ಮಗಳ ಇನ್‍ಸ್ಟಾಗ್ರಾಂನಲ್ಲಿ ನಾವು ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಯಿಂದ ಇದ್ದೇವೆ. ವೈದ್ಯರು ಸೈನಿಗೆ ಬೇರೆ ಬೇರೆ ಸ್ಕ್ಯಾನಿಂಗ್‍ಗಳನ್ನು ಮಾಡುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದರು.

    ಸೈನಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಪರ್ಧೆಯಲ್ಲಿ ಆಕೆ ಗೆದ್ದಿದ್ದ ಐದು ಪ್ರಶಸ್ತಿಗಳನ್ನು ಮಿಸ್ ವರ್ಲ್ಡ್ ಅಮೆರಿಕ ಆಯೋಜಕರು ಆಸ್ಪತ್ರೆಗೆ ಭೇಟಿ ನೀಡಿ ಪುರಸ್ಕರಿಸಿದ್ದಾರೆ. ಸೈನಿ ‘ಬ್ಯುಟಿ ವಿತ್ ಎ ಪರ್ಪಸ್ ಅವಾರ್ಡ್’, ‘ಟಾಪ್ ಇನ್‍ಫ್ಲೂಯೆನ್ಸರ್ ಅವಾರ್ಡ್, ‘ಎಂಟರ್ ಪ್ರೆನ್ಯೂರ್ ಚಾಲೆಂಜ್ ಅವಾರ್ಡ್’, ಮೊದಲನೇ ರನ್ನರಪ್ ಟ್ಯಾಲೆಂಟ್ ಅವಾರ್ಡ್, ಹಾಗೂ ‘ಮೊದಲನೇ ರನ್ನರಪ್ ಟಾಪ್ ಮಾಡೆಲ್ ಅವಾರ್ಡ್’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕಿರೀಟ ಪಡೆಯುತ್ತಿರುವ ಫೋಟೋವನ್ನು ಶೈನಿ ಅಪ್ಲೋಡ್ ಮಾಡಿ ಅದಕ್ಕೆ, ನನ್ನ ಸಹಸ್ಪರ್ಧಿಗಳಿಗೆ ಹಾಗೂ ಅಂಬುಲೆನ್ಸ್ ಕರೆಸಿ ನನ್ನ ಜೀವ ಉಳಿಸಿದವರಿಗೆ ಧನ್ಯವಾದಗಳು. ನಾನು ಆಕಸ್ಮಿಕವಾಗಿ ಏಕೆ ಕುಸಿದು ಬಿದ್ದೆ ಎಂದು ಕಂಡುಹಿಡಿಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ಸ್ಪರ್ಧೆಗಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ನನ್ನನ್ನು ಹೇಗೆ ಸಿದ್ಧಪಡಿಸಬೇಕೆಂಬುದು ನನಗೆ ತಿಳಿಯಿತು. ಇನ್‍ಸ್ಟಾದಲ್ಲಿ ಶುಭಹಾರೈಸಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

  • ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ

    ಶೌಚಾಲಯ ಸ್ವಚ್ಛಗೊಳಿಸಿ ನೌಕರರಿಗೆ ಮಾದರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ

    ಕೋಲಾರ: ತನ್ನ ಕಚೇರಿಯ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಡಿ-ಗ್ರೂಪ್ ನೌಕರರಿಗೆ ಸ್ವಚ್ಛತೆಯ ಪಾಠ ಹೇಳಿಕೊಟ್ಟಿದ್ದಾರೆ.

    ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸ್ವತಃ ತಮ್ಮ ಕಚೇರಿಯ ಶೌಚಾಲಯವನ್ನು ಇಂದು ಶುದ್ಧ ಮಾಡುವ ಮೂಲಕ ಸಾವಿರಾರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ಕಚೇರಿಯ ಶೌಚಾಲಯವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಮಾದರಿಯಾಗಿದ್ದಾರೆ.

    ಶಿಕ್ಷಕರು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಶೌಚಾಲಯಗಳನ್ನು ಸ್ವಚ್ಛಗೊಳಿಸಿಕೊಳ್ಳುವುದರಿಂದ ಸ್ವಚ್ಛ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ ಕಲ್ಪನೆ ಪ್ರಧಾನಿ ಮೋದಿ ಅವರಿಂದ ಆರಂಭವಾಗಿದ್ದು, ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

    ಒಂದು ವರ್ಷದ ಹಿಂದೆ ಸರ್ಕಾರಿ ಶಾಲೆಯ ಶೌಚಾಲಯವನ್ನು ಸ್ವಚ್ಛ ಮಾಡುವ ಮೂಲಕ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಮಾದರಿಯಾಗಿದ್ದರು. ಅದರಂತೆ ಕೋಲಾರ ಬಿಇಓ ಶೌಚಾಲಯ ಸ್ವಚ್ಛ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಬಿಇಓ ನಾಗರಾಜ್‍ಗೌಡ ಅವರ ಶೌಚಾಲಯ ಸ್ವಚ್ಛ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಕಲಬುರಗಿ: ಬಿಸಿಲು ನಾಡು ಕಲಬುರಗಿಯ ಬಾಲಕಿ ಮಾಡಲಿಂಗ್ ಮೂಲಕ ದೇಶದ ಗಮನ ಸೆಳೆದಿದ್ದು, ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಹಾಂಕಾಂಗ್‍ನಲ್ಲಿ ಇತ್ತೀಚೆಗೆ ನಡೆದ ಜೂನಿಯರ್ ಇಂಟರ್ ನ್ಯಾಷನಲ್ ಮಾಡೆಲ್ ಸ್ಪರ್ಧೆಯಲ್ಲಿ, ಕಲಬುರಗಿಯ ಅನನ್ಯ ರೈ ಚಿನ್ನದ ಪದಕ ಗಳಿಸಿದ್ದಾಳೆ. ಭಾರತದ ಪರ ಜೂನಿಯರ್ ಮಾಡೆಲಿಂಗ್‍ನಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಿಂದ ಆಯ್ಕೆಯಾದ ಮಾಡೆಲ್ ಅನನ್ಯ ಆಗಿದ್ದಾಳೆ. ದೇಶದಲ್ಲಿ ಮಿಂಚಿದ್ದ ಅನನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭೆಯನ್ನು ಅನಾವರಣಗೊಳಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

    ಅನನ್ಯ ತಮ್ಮ ತಂದೆ-ತಾಯಿಯ ಏಕೈಕ ಪುತ್ರಿ. ಅನನ್ಯಳ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ರೂಪಾಕ್ಷಿ ಅವರು ಕಲಬುರಗಿಯ ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನನ್ಯ ಹೈದರಾಬಾದ್‍ನ ನರ್ಸರಿ ಶಾಲೆಯಲ್ಲಿ ಕ್ಯಾಟ್‍ವಾಕ್ ಮಾಡಿ ಬಹುಮಾನ ಗೆದಿದ್ದಳು. ಬಳಿಕ ಅನನ್ಯ ಮಾಡೆಲ್ ಆಗಬೇಕೆಂಬ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು.

    ಹೈದರಾಬಾದ್‍ನ ಚೈತನ್ಯ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅನನ್ಯ 9ನೇ ತರಗತಿ ಓದುತ್ತಿದ್ದಾಳೆ. ಏಪ್ರಿಲ್ 27ರಿಂದ 29ರವರೆಗೆ ಕೇರಳದ ಕ್ಯಾಲಿಕಟ್‍ನಲ್ಲಿ ಜ್ಯೂನಿಯರ್ ಮಾಡೆಲ್ ಇಂಟರ್ ನ್ಯಾಷನಲ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅನ್ಯನ ಪ್ರದರ್ಶನ ನೀಡಿ ಹಾಂಕಾಂಗ್‍ನಲ್ಲಿ ನಡೆದ ಸ್ಪರ್ಧಕ್ಕೆ ಆಯ್ಕೆ ಆಗಿದ್ದಳು.

    ಅನನ್ಯ ತಾಯಿ ಸುಮಿತ್ರ ರೈ ಅವರು ತಮ್ಮ ಮಗಳ ಡಯಟ್ ಬಗ್ಗೆ ನಿರ್ಧರಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯವನ್ನು ನೋಡಿಕೊಳ್ಳುವ ಸಲುವಾಗಿ ಅನನ್ಯ ಜಂಕ್ ಫುಡ್ ತಿನ್ನುವುದಿಲ್ಲ. ಸದ್ಯ ಅನನ್ಯ ಈಗ ಲೀ ಬ್ರಾಂಡ್ ಜೀನ್ಸ್ ಹಾಗೂ ಅರುಣ್ ಐಸ್‍ಕ್ರೀಂ ಜಾಹೀರಾತಿಗೆ ಆಯ್ಕೆ ಆಗಿದ್ದಾಳೆ.

  • ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

    ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಹತ್ಯೆ ಕೇಸ್ ಭೇದಿಸಿದ ಬೆಂಗ್ಳೂರು ಪೊಲೀಸರು

    ಬೆಂಗಳೂರು: ಕತ್ತಿನ ಮೇಲಿದ್ದ ಟ್ಯಾಟೂನಿಂದ ಮಾಡೆಲ್ ಪೂಜಾ ಹತ್ಯೆ ಪ್ರಕರಣವನ್ನು ಬೆಂಗ್ಳೂರು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

    ಜುಲೈ 31ರಂದು ಬಾಗಲೂರಿನ ಕಾಡಯರಪನಹಳ್ಳಿ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಪತ್ತೆಯಾದಾಗ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಬಳಿಕ ಬಾಗಲೂರು ಪೊಲೀಸರು ಕೊಲೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ಕರೆಗಳನ್ನು ಪರಿಶೀಲಿಸಿದ್ದಾರೆ. ಆಗ ಪೂಜಾ ಬಳಸುತ್ತಿದ್ದ ಫೋನ್ ನಂಬರ್ ಪತ್ತೆಯಾಗಿದೆ.

    ಪೂಜಾಳ ಕತ್ತು ಕುಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಹೀಗಾಗಿ ಆಕೆಯ ದೇಹದ ಗುರುತು ಬೇಗ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಮೊದಲು ಪೊಲೀಸರು ಪೂಜಾಳ ಪತಿ ಸೌದೀಪ್ ದೇಗೆ ಫೋಟೋ ಕಳುಹಿಸಿದ್ದರು. ಆಗ ಸೌದೀಪ್ ತನ್ನ ಪತ್ನಿಯ ದೇಹವನ್ನು ಗುರುತಿಸಿರಲಿಲ್ಲ. ಬಳಿಕ ಸೌದೀಪ್ ತನ್ನ ಪತ್ನಿಯ ದೇಹದ ಮೇಲಿದ್ದ ಟ್ಯಾಟೂ ನೋಡಿ ನನ್ನ ಪತ್ನಿ ಪೂಜಾ ಸಿಂಗ್ ದೇ ಎಂದು ಗುರುತಿಸಿದ್ದರು.

    ಬಾಗಲೂರು ಪೊಲೀಸರು ಯಾವುದೇ ಸುಳಿವು ಇಲ್ಲದಿದ್ದರೂ ಕೇವಲ ಟ್ಯಾಟೂ ಮೇಲೆ ಪ್ರಕರಣ ಭೇದಿಸಿದ್ದಾರೆ. ಆರೋಪಿ ನಾಗೇಶ್ ಹತ್ಯೆ ವೇಳೆ ಪೂಜಾಸಿಂಗ್ ಗೆ 15 ರಿಂದ 20 ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಆಗಿದ್ದೇನು?
    ಪೂಜಾ ಸಿಂಗ್ ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್ ಮೆಂಟ್ ಮಾಡುತ್ತಿದ್ದರು. ಜುಲೈ 30ರಂದು ಕೆಲಸಕ್ಕಾಗಿ ಸಿಲಿಕಾನ್ ಸಿಟಿಗೆ ಬಂದಿದ್ದಳು. ಹೀಗೆ ಬಂದವಳು ಕೆಲಸ ಮುಗಿಸಿ ಓಲಾ ಕ್ಯಾಬ್ ಮಾಡಿಕೊಂಡು ತಾನು ಉಳಿದುಕೊಂಡಿದ್ದ ಪರಪ್ಪನ ಆಗ್ರಹಾರ ಹೋಟೆಲಿಗೆ ಹೋಗಿದ್ದಾಳೆ. ಮಾರನೇ ದಿನ ಮುಂಜಾನೆ ನಾಲ್ಕು ಗಂಟೆಗೆ ತೆರಳಬೇಕಿದೆ. ಹಾಗಾಗಿ ಅದೇ ಕ್ಯಾಬ್ ಚಾಲಕನಿಗೆ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೇಳಿದ್ದಾಳೆ. ನಾಗೇಶ್ ಬೆಳಗ್ಗೆ ವಿಮಾನ ನಿಲ್ದಾಣದ ಕಡೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಈಕೆಯ ಬಳಿ ಹಣ ಇರಬಹುದು ಎನ್ನುವ ಆಸೆಗೆ ಬಿದ್ದು ಆಕೆಯನ್ನು ಕೊಲೆ ಮಾಡಿದ್ದಾನೆ.

    ಹಣದ ಆಸೆಗೆ ಬಿದ್ದು ಕೊಲೆ ಮಾಡಿದ ನಾಗೇಶನಿಗೆ ಕೇವಲ 500 ರೂ. ಹಾಗೂ ಎರಡು ಮೊಬೈಲ್ ಸಿಕ್ಕಿದೆ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.

  • ಹಣ ನೀಡದ್ದಕ್ಕೆ ಮಾಡೆಲ್ ಹತ್ಯೆಗೈದ ಬೆಂಗಳೂರು ಕ್ಯಾಬ್ ಚಾಲಕ

    ಹಣ ನೀಡದ್ದಕ್ಕೆ ಮಾಡೆಲ್ ಹತ್ಯೆಗೈದ ಬೆಂಗಳೂರು ಕ್ಯಾಬ್ ಚಾಲಕ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಡೆಲ್ ಬರ್ಬರ ಹತ್ಯೆ ಪ್ರಕರಣವನ್ನು ಬಾಗಲೂರು ಪೊಲೀಸರು ಭೇದಿಸಿದ್ದು ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.

    ಹೆಚ್.ಎಂ.ನಾಗೇಶ್ (22) ಬಂಧನಕ್ಕೊಳಗಾದ ಓಲಾ ಕ್ಯಾಬ್ ಚಾಲಕ. ಜುಲೈ 31ರಂದು ಬಾಗಲೂರಿನ ಕಾಡಯರಪನಹಳ್ಳಿ ಬಳಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಮಹಿಳೆಯ ಕತ್ತು ಕುಯ್ದು, ಚಾಕುವಿನಿಂದ ದೇಹದ ವಿವಿಧ ಭಾಗಗಳಿಗೆ ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು.

    ಈ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಅಪರಿಚಿತ ಮಹಿಳೆಯ ಶವದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಾಗಲೂರು ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ಕಾರ್ಯಚರಣೆ ನಡೆಸಿದ್ದರು. ಆಗ ಮಹಿಳೆಯ ಗುರುತು ಪತ್ತೆಯಾಗಿದೆ.

    ಮೃತ ಮಹಿಳೆ ಪಶ್ಚಿಮ ಬಂಗಾಳ ಮೂಲದ ಪೂಜಾ ಸಿಂಗ್ ಎಂದು ತಿಳಿದು ಬಂದಿದೆ. ಕ್ಯಾಬ್ ಚಾಲಕ ನಾಗೇಶ್, ಪೂಜಾಳನ್ನು ಕೊಲೆ ಮಾಡಿ ಆಕೆ ಬಳಿಯಿದ್ದ ಚಿನ್ನಾಭರಣ ದೋಚಿದ್ದನು. ಜುಲೈ 30ರಂದು ಮಾಡೆಲ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕ್ಯಾಬ್‍ನಲ್ಲಿ ತೆರಳುತ್ತಿದ್ದಳು. ಈ ವೇಳೆ ಹಣ ಮತ್ತು ಚಿನ್ನಾಭರಣ ಆಸೆಗಾಗಿ ನಾಗೇಶ್ ಮಹಿಳೆಯ ಕೊಲೆ ಮಾಡಿದ್ದಾನೆ. ಈ ಬಗ್ಗೆ ಪೂಜಾ ಸಿಂಗ್ ದೇ ಪತಿ ಸೌದಿತ್ ದೇ ಕೊಲ್ಕತ್ತಾ ನಗರದ ನ್ಯೂ ಟೌನ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

    ಸುಳಿವು ಸಿಕ್ಕಿದ್ದು ಹೇಗೆ?
    ಮಾಡೆಲ್ ಕೊಲೆಯ ಸುಳಿವು ಬಾರ್ ಕೋಡ್‍ನಿಂದ ತಿಳಿದು ಬಂತು. ಮಾಡೆಲ್ ಧರಿಸಿದ್ದ ಜಲಸ್ 21 ಕಂಪನಿಯ ಜೀನ್ಸ್ ಪ್ಯಾಂಟ್‍ನ ಬಾರ್ ಕೋಡ್, ಟೈಟಾನ್ ವಾಚ್ ಮತ್ತು ಹಾಕಿಕೊಂಡಿದ್ದ ಉಂಗುರದಿಂದ ಗುರುತು ಪತ್ತೆಯಾಗಿದೆ. ಸಾಮಾನ್ಯವಾಗಿ ಈ ರೀತಿಯಾದ ಉಂಗುರ ಪಶ್ಚಿಮ ಬಂಗಾಳದವರು ಧರಿಸುತ್ತಾರೆ. ಈ ವೇಳೆ ಪೊಲೀಸರು ಪಶ್ಚಿಮ ಬಂಗಾಳಕ್ಕೆ ತೆರಳಿ ಮಾಡೆಲ್ ನಾಪತ್ತೆಯಾದ ವಿಚಾರವನ್ನು ಖಚಿತಪಡಿಸಿದ್ದರು.

    ಕಳೆದ ತಿಂಗಳ 31ರಂದು ರಾತ್ರಿ 10 ಗಂಟೆಗೆ ಪೂಜಾ ಕ್ರೆಸೆಂಟ್ ರಸ್ತೆಯಿಂದ ಆರೋಪಿ ನಾಗೇಶ್‍ನ ಓಲಾ ಕ್ಯಾಬ್ ಹತ್ತಿದ್ದಳು. ಪರಪ್ಪನ ಅಗ್ರಹಾರಕ್ಕೆ ಡ್ರಾಪ್ ಮಾಡಿಸಿಕೊಂಡು, ಬೆಳಗ್ಗೆ ನಾಲ್ಕು ಗಂಟೆಗೆ ನೀನೇ ಪಿಕ್ ಅಪ್ ಮಾಡು ಎಂದು ಪೂಜಾ ಹೇಳಿದ್ದಾಳೆ. ಬೆಳಗ್ಗೆ ಪಿಕ್ ಮಾಡಿಕೊಂಡು ಬರುವಾಗ ನಾಗೇಶ್ ಹಣ ಕೇಳಿದ್ದಾನೆ. ಹಣ ಇಲ್ಲ ಎಂದು ಹೇಳಿದಾಗ ಈಕೆಯ ಬಳಿ ಸಾಕಷ್ಟು ಹಣ ಇರಬಹುದು ಎಂದು ಜಾಕ್ ರಾಡ್‍ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ.

  • 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ – ಸರಿಯಾದ ಸಂಗಾತಿ ಸಿಗದ್ದಕ್ಕೆ ನಾಯಿ ಜೊತೆ ಮದ್ವೆ

    200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ – ಸರಿಯಾದ ಸಂಗಾತಿ ಸಿಗದ್ದಕ್ಕೆ ನಾಯಿ ಜೊತೆ ಮದ್ವೆ

    ಲಂಡನ್: ಮಾಡೆಲ್ ಒಬ್ಬಳು 200ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿ ಕೊನೆಗೆ ಸರಿಯಾದ ಸಂಗಾತಿ ಸಿಗಲಿಲ್ಲ ಎಂದು ನಾಯಿಯನ್ನು ಮದುವೆಯಾದ ಘಟನೆ ಲಂಡನ್‍ನಲ್ಲಿ ನಡೆದಿದೆ.

    49 ವರ್ಷದ ಸ್ವಿಮ್‍ಸೂಟ್ ಮಾಡೆಲ್ ಎಲಿಜಬೆತ್ ಹುಡ್ 6 ವರ್ಷದ ಸಾಕು ನಾಯಿಯನ್ನು ಮದುವೆಯಾಗಿದ್ದಾಳೆ. ವಿಶೇಷವೆನೆಂದರೆ ಎಲಿಜಬೆತ್ ಮದುವೆ ಟಿವಿಯಲ್ಲಿ ಪ್ರಸಾರವಾಗಿದ್ದು, ವಿಶ್ವಾದ್ಯಂತ ಹಲವು ಮಂದಿ ಇದನ್ನು ವೀಕ್ಷಿಸಿದ್ದಾರೆ.

    ಎಲಿಜಬೆತ್ ಕಳೆದ ವರ್ಷ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟ್ ಮಾಡಿದ್ದಾಳೆ. ಆದರೆ ಆಕೆಗೆ ಇಷ್ಟವಾಗುವಂತಹ ಸಂಗಾತಿ ಸಿಗಲಿಲ್ಲ. ಹೀಗಾಗಿ ಆಕೆ ತಾನು ಸಾಕಿದ ನಾಯಿಯನ್ನೇ ತನ್ನ ಜೀವನ ಸಂಗಾತಿಯಾಗಿ ಮಾಡಿಕೊಂಡಿದ್ದಾಳೆ. ಎಲಿಜಬೆತ್‍ಗೆ ಈಗಾಗಲೇ 25 ವರ್ಷದ ಮಗ ಇದ್ದಾನೆ. ನನ್ನ ತಾಯಿಗೆ ಯಾವುದೇ ಪುರುಷನ ಅಗತ್ಯ ಇಲ್ಲ. ಈಗ ಅವರು ತಮ್ಮ ಇಡೀ ಜೀವನವನ್ನು ನಾಯಿಯ ಜೊತೆ ಕಳೆಯುತ್ತಾರೆ ಎಂದು ಮಗ ಪ್ರತಿಕ್ರಿಯಿಸಿದ್ದಾನೆ.

    ಹಲವು ಡೇಟಿಂಗ್ ವೆಬ್‍ಸೈಟ್ ಮೂಲಕ ಎಲಿಜಬೆತ್ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದಾಳೆ. ಆದರೆ ಯಾರು ಇಷ್ಟ ಆಗದಿದ್ದಾಗ ತಾನು ಸಾಕಿದ್ದ ನಾಯಿ ಲೋಗನ್‍ನನ್ನು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಎಲಿಜಬೆತ್‍ಗೆ ಯಾವುದೇ ಷರತ್ತು ಹಾಕದ ಪ್ರೇಮಿ ಬೇಕಾಗಿತ್ತು. ಹಾಗಾಗಿ ಆಕೆ 6 ವರ್ಷದ ನಾಯಿಯ ಜೊತೆ ಮದುವೆಯಾಗಿದ್ದಾಳೆ. ಮದುವೆ ದಿನದಂದು ಲೋಗನ್ ರಿಸ್ಟ್ ಬ್ಯಾಂಡ್ ಧರಿಸಿತ್ತು ಹಾಗೂ ಎಲಿಜಬೆತ್ ವೆಡ್ಡಿಂಗ್ ರಿಂಗ್ ಧರಿಸಿದ್ದಳು.

    ತನ್ನ ಮದುವೆಗೆ ಎಲಿಜಬೆತ್ ಕೇವಲ 20 ಮಂದಿಯನ್ನು ಆಹ್ವಾನಿಸಿದ್ದು, ಮದುವೆ ನಂತರ ಎಲಿಜಬೆತ್ ತನ್ನ ನಾಯಿಯೊಂದಿಗೆ ಹನಿಮೂನ್ ಕೂಡ ಹೋಗಿದ್ದಾಳೆ. ಎಲಿಜಬೆತ್ ತನ್ನ ನಾಯಿಗಾಗಿ ಡಾಗ್ ಫ್ರೆಂಡ್ಲಿ ಹೋಟೆಲಿನಲ್ಲಿ ರೂಂ ಬುಕ್ ಕೂಡ ಮಾಡಿದ್ದಳು. ಎಲಿಜಬೆತ್‍ಗೆ ಈಗಾಗಲೇ ಇಬ್ಬರ ಜೊತೆ ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥ ಮಾಡಿಕೊಂಡ ನಂತರ ಯಾವುದೋ ಕಾರಣಕ್ಕೆ ಸಂಬಂಧ ಮುರಿದು ಬಿದ್ದಿತ್ತು. ಇದರಿಂದ ನಿರಾಸೆಯಾಗಿದ್ದ ಎಲಿಜಬೆತ್ ನಾಯಿಯನ್ನು ಮದುವೆಯಾಗಿದ್ದಾಳೆ.

    ನನಗೆ ಡೇಟಿಂಗ್ ಹಾಗೂ ಪುರುಷರ ಸಹವಾಸ ಸಾಕಾಗಿ ಹೋಗಿದೆ. ನಾನು ಕಳೆದ 8 ವರ್ಷದಿಂದ ಆರು ವೆಬ್‍ಸೈಟ್ ಮೂಲಕ 200ಕ್ಕೂ ಹೆಚ್ಚು ಯುವಕರ ಜೊತೆ ಡೇಟಿಂಗ್ ಮಾಡಿದ್ದೇನೆ. ಆದರೆ ಅವರ ಜೊತೆಗಿನ ನನ್ನ ಅನುಭವ ಚೆನ್ನಾಗಿ ಇರಲಿಲ್ಲ. ಹಾಗಾಗಿ ನಾನು ಲೋಗನ್‍ನನ್ನು ಮದುವೆಯಾದೆ. ನಾನು ಹಾಗೂ ಲೋಗನ್ ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾನು ಹುಚ್ಚಿ ಆಗಿದ್ದೇನೆ ಎಂದು ಜನರು ಹೇಳುತ್ತಾರೆ. ಆದರೆ ಜನರ ಮಾತು ಕೇಳಿಸಿಕೊಂಡು ನಾನು, ಲೋಗನ್ ದೂರವಾಗುವುದಿಲ್ಲ ಎಂದು ಎಲಿಜಬೆತ್ ತಿಳಿಸಿದ್ದಾಳೆ.

  • 4 ಲಕ್ಷ ಇನ್‍ಸ್ಟಾ ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟ ಮಾಡೆಲ್

    4 ಲಕ್ಷ ಇನ್‍ಸ್ಟಾ ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟ ಮಾಡೆಲ್

    ವಾಷಿಂಗ್ಟನ್: ತನ್ನನ್ನು ತಾನು ಇನ್‍ಸ್ಟಾಗ್ರಾಂ ಮಾಡೆಲ್ ಎಂದು ತಿಳಿದಿರುವ ಯುವತಿಯೊಬ್ಬಳು ಅಭಿಮಾನಿಗಳಿಗಾಗಿ ಪ್ರಿಯಕರನಿಗೆ ಕೈಕೊಟ್ಟಿದ್ದಾಳೆ.

    22 ವರ್ಷದ ಯುವತಿ ಇನ್‍ಸ್ಟಾಗ್ರಾಂನಲ್ಲಿ 4,50,000 ಫಾಲೋವರ್ಸ್​​​ಗಳನ್ನು ಹೊಂದಿದ್ದಾಳೆ. ಅಲ್ಲದೆ ಯುವತಿ ತನ್ನ ಪ್ರಿಯಕರನ ಜೊತೆ ರಜೆ ದಿನಗಳನ್ನು ಕಳೆಯಲು ಮೆಕ್ಸಿಕೋಗೆ ಹೋಗಿದ್ದಳು. ಈ ವೇಳೆ ಪ್ರಿಯಕರ ತನ್ನ ಜೊತೆಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲು ಹೇಳಿದ್ದಾನೆ. ಆದರೆ ಯುವತಿ ಫೋಟೋ ಅಪ್ಲೋಡ್ ಮಾಡಿದ್ದರೆ ಫಾಲೋವರ್ಸ್ ಹಾಗೂ ಬುಸಿನೆಸ್ ಪ್ರಾಯೋಜಕರು ಕಡಿಮೆ ಆಗುತ್ತಾರೆ ಎಂಬ ಭಯದಿಂದ ತನ್ನ ಪ್ರಿಯಕರನ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾಳೆ.

    ಯುವತಿ IGAZmodel ಎಂಬ ಹೆಸರಿನಲ್ಲಿ ಇನ್‍ಸ್ಟಾಗ್ರಾಂ ಖಾತೆ ತೆರೆದಿದ್ದಾಳೆ. ಯುವತಿ ತನ್ನ ರೇಡಿಟ್ ಅಕೌಂಟ್‍ನಲ್ಲಿ, ನಾನು ಯಶಸ್ವಿ ಇನ್‍ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದೇನೆ. ನನ್ನ ಪ್ರಿಯಕರನ ಜೊತೆಗಿರುವ ಫೋಟೋವನ್ನು ಹಂಚಿಕೊಂಡರೆ ನನ್ನ ಹಾಗೂ ನನ್ನ ಫಾಲೋವರ್ಸ್ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ನನಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಬಹುದು ಎಂದು ಬರೆದುಕೊಂಡಿದ್ದಾಳೆ.

    ನಾವು ಎಷ್ಟು ಬೇಕಾದರೂ ಪ್ರೈವೇಟ್ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಬಹುದು, ನಾವು ಲಾಂಗ್ ವಾಕ್‍ಗೆ ಹೋಗಬಹುದು, ಸೆಕ್ಸ್ ಮಾಡಬಹುದು, ಸ್ವಿಮ್ಮಿಂಗ್ ಪೂಲ್‍ನಲ್ಲಿ ಮಲಗುವುದರಿಂದ ನನಗೆ ಯಾವುದೇ ತೊಂದರೆ ಇಲ್ಲ. ಆದರೆ ನನಗೆ ನನ್ನ ಇನ್‍ಸ್ಟಾಗ್ರಾಂ ಖಾತೆ ಪ್ರತ್ಯೇಕವಾಗಿರಬೇಕು ಎಂದು ಅದರಲ್ಲಿ ಉಲ್ಲೇಖಿಸಿದ್ದಾಳೆ.

    ಯುವತಿ ತನ್ನ ಹೆಸರನ್ನು ಹೇಳಿಕೊಂಡಿಲ್ಲ. ಅಲ್ಲದೆ ತನ್ನ ಪ್ರಿಯಕರ ಹೆಸರನ್ನು ಹಾಗೂ ವಯಸ್ಸನ್ನು ಕೂಡ ಹೇಳಲಿಲ್ಲ. ಈ ಬಗ್ಗೆ ಮಾತನಾಡಿದ ಯುವತಿ, ನಾನು ವಸ್ತುಗಳನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಮಾರಾಟ ಮಾಡುತ್ತೇನೆ. ನಾನು ನನ್ನ ಪ್ರಿಯಕರನ ಜೊತೆಯಿರುವ ಫೋಟೋ ಹಾಕಿದರೆ, ನನ್ನ ಬಿಸಿನೆಸ್ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾಳೆ. ಇತ್ತ ಪ್ರಿಯಕರ ನಾನು ತುಂಬಾ ದುಃಖದಲ್ಲಿದ್ದೇನೆ. ಆಕೆಯ ಜೊತೆ ರಜೆಗೆ ಹೋದಾಗ ನಾನು ಸಾಕಷ್ಟು ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾನೆ.