Tag: MLC Ayanur Manjunath

  • ಕೊರೊನಾ ವೈರಸ್ ಹರಡುವಿಕೆ ಜಿಹಾದಿನ ಇನ್ನೊಂದು ರೂಪ: ಆಯನೂರು ಮಂಜುನಾಥ್

    ಕೊರೊನಾ ವೈರಸ್ ಹರಡುವಿಕೆ ಜಿಹಾದಿನ ಇನ್ನೊಂದು ರೂಪ: ಆಯನೂರು ಮಂಜುನಾಥ್

    – ಸಿಎಎ ಬಗ್ಗೆ ಬಾಯಿ ಬಿಡೋ ನಕಲಿ ಜಾತ್ಯಾತೀತವಾದಿಗಳು ತಬ್ಲಿಘಿಗಳ ಬಗ್ಗೆ ಬಾಯಿಯೇ ಬಿಡುತ್ತಿಲ್ಲ

    ಶಿವಮೊಗ್ಗ: ಕೇಂದ್ರ ಸರ್ಕಾರ ಸಿಎಎ ವರದಿ ಜಾರಿಗೆ ಮುಂದಾದ ವೇಳೆ ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದ, ಆರೋಪ ಮಾಡುತ್ತಿದ್ದ ನಕಲಿ ಜಾತ್ಯಾತೀತವಾದಿಗಳು ಇದೀಗ ರಾಷ್ಟ್ರದ ನೆಮ್ಮದಿ ಹಾಳು ಮಾಡುತ್ತಿರುವ ತಬ್ಲಿಘಿಗಳ ಕೃತ್ಯದ ಬಗ್ಗೆ ಬಾಯಿಯೇ ಬಿಡುತ್ತಿಲ್ಲ ಎಂದು ಎಂಎಲ್‍ಸಿ ಆಯನೂರು ಮಂಜುನಾಥ್ ಕಿಡಿ ಕಾರಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್ ಅವರು, ದೇಶದ ಹಿತದೃಷ್ಟಿಯಿಂದ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ತಬ್ಲಿಘಿಗಳ ಕೃತ್ಯವನ್ನು ಪ್ರತಿಯೊಬ್ಬರು ಖಂಡಿಸಬೇಕಿದೆ. ಕೊರೊನಾ ಕಾಣಿಸಿಕೊಂಡ ಆರಂಭದ ದಿನದಿಂದಲೂ ಗ್ರೀನ್‍ಝೋನ್‍ನಲ್ಲಿದ್ದ ಶಿವಮೊಗ್ಗಕ್ಕೆ ತಬ್ಲಿಘಿಗಳಿಂದಾಗಿ ಅಪಾಯಕಾರಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಬ್ಲಿಘಿ ನಂಟಿನ ಕಾರಣದಿಂದಾಗಿ ಭಯದ ವಾತಾವರಣ ಉಂಟಾಗಿದೆ ಎಂದರು.

    ಒಂದು ಸಣ್ಣ ಸಮುದಾಯದಿಂದ ದೇಶದೆಲ್ಲೆಡೆ ಈ ಭೀತಿ ಎದುರಾಗಿದೆ. ಆ ಸಮುದಾಯದ ನಾಯಕರುಗಳು ಸಹ ಕೊರೊನಾ ಪರೀಕ್ಷೆಗೆ ಒಳಪಡಲು ಹಿಂದೇಟು ಹಾಕುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸಮುದಾಯದ ಜನರಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು ಹೇಳಬೇಕಿದ್ದ ನಾಯಕರುಗಳೇ ಇಂದು ತಲೆ ಮರೆಸಿಕೊಂಡು ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

    ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಜಿಹಾದಿನ ಇನ್ನೊಂದು ರೂಪದ ಚಟುವಟಿಕೆಯಾಗಿದೆ. ನಿಜಾಮುದ್ದೀನ್ ಹಾಗೂ ಅಹಮದಾಬಾದ್‍ನ ಭಯದಿಂದ ದೇಶ ಆತಂಕಕ್ಕೊಳಗಾಗಿದೆ. ಅಲ್ಲದೇ ತಬ್ಲಿಘಿಗಳೆಂದರೆ ಸಂಪೂರ್ಣ ಮುಸಲ್ಮಾನ್ ಸಮುದಾಯವಲ್ಲ. ಇದೊಂದು ಸಣ್ಣ ಸಮೂಹದ ಒಂದು ಗುಂಪು ಈ ರೀತಿ ಚಟುವಟಿಕೆ ನಡೆಸುತ್ತಿದೆ. ಆದರೆ ರಾಷ್ಟ್ರದಲ್ಲಿ ಕೊರೊನಾ ಹಬ್ಬಿಸಲು ಹೊರಟಿದೆಯೇನೋ ಎಂಬ ಸಂಶಯ ಮುಸಲ್ಮಾನ್ ಸಮುದಾಯದ ಕಡೆ ತಿರುವಂತೆ ಮಾಡಿದೆ. ಅಲ್ಲದೇ ಎಲ್ಲಾ ಮುಸಲ್ಮಾನರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

    ಈಗಾಗಿ ತಬ್ಲಿಘಿಗಳನ್ನು ಆ ಸಮುದಾಯದ ನಾಯಕರುಗಳೇ ನಿಯಂತ್ರಿಸಬೇಕು. ಆದರೆ ಇದುವರೆಗೂ ಯಾವುದೇ ಮುಖಂಡರು ಇದರ ವಿರುದ್ದ ಧ್ವನಿ ಎತ್ತಲೇ ಇಲ್ಲ. ನಮ್ಮ ರಾಷ್ಟ್ರ, ರಾಜ್ಯಗಳ ಜನರು ಆರೋಗ್ಯವಂತರಾಗಿ ಇರಬೇಕು ಅಂದರೆ ಇವರನ್ನು ನಿಯಂತ್ರಿಸಲೇಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್-ಪರಿಷತ್‍ನಲ್ಲಿ ಆಯನೂರು ಮಂಜುನಾಥ್ ಲೇವಡಿ

    ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್-ಪರಿಷತ್‍ನಲ್ಲಿ ಆಯನೂರು ಮಂಜುನಾಥ್ ಲೇವಡಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಸ್ ಇದ್ದ ಹಾಗೇ. ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್ ಎಂದು ವಿಧಾನ ಪರಿಷತ್ ನಲ್ಲಿ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.

    ರಾಜ್ಯಪಾಲ ಭಾಷಣದ ಮೇಲೆ ಚರ್ಚೆ ಮಾತನಾಡಿದ ಅವರು, ಮಂಜುನಾಥ್ ಅವರು, ಸಮ್ಮಿಶ್ರ ಸರ್ಕಾರ ಬಸ್ ಇದ್ದ ಹಾಗೇ. ಸಿದ್ದರಾಮಯ್ಯ ಕಂಡೆಕ್ಟರ್, ಕುಮಾರಸ್ವಾಮಿ ಡ್ರೈವರ್. ಸಿದ್ದರಾಮಯ್ಯ ಓಕೆ ಅಂದ ಮೇಲೆ ಸರ್ಕಾರ ರಚನೆ ಆಯ್ತು ಎಂದು ಕುಟುಕಿದರು.

    ಇದೇ ವೇಳೆ ಮಂಜುನಾಥ್ ಅವರ ಮಾತಿಗೆ ತಿರುಗೇಟು ಕೊಟ್ಟ ಧರ್ಮಸೇನಾ, ಬಸ್ ಅಲ್ಲ ನಮ್ಮದು ಟ್ರೇನ್ ಎಂದರು. ಅದಕ್ಕೆ ಮತ್ತೊಮ್ಮೆ ನಗುತ್ತಲೇ ಟಾಂಗ್ ಕೊಟ್ಟ ಮಂಜುನಾಥ್ ಅವರು ಟ್ರೇನ್ ಡಬಲ್ ಎಂಜಿನ್ ಹುಷಾರು. ಒಂದು ಎಂಜಿನ್ ಯಾವಾಗ ಬೇಕಾದರು ನಮ್ಮ ಕಡೆ ಬರಬಹುದು. ಎರಡು ಮೂರು ಬಾರಿ ಮೋದಿ ಭೇಟಿ ಆಗಿದ್ದಾರೆ ಹುಷಾರ್ ಎಂದರು.

    ಬಳಿಕ ಸಾಲಮನ್ನಾ ವಿಚಾರವಾಗಿ ಸಿಎಂ ವಿರುದ್ಧ ಕಿಡಿಕಾರಿದ ಮಂಜುನಾಥ್ ಅವರು, ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರವಾಗಿ ನಾನು ಕಮೀಷನ್ ಪಡೆಯೋದಿಲ್ಲ ಅಂತ ಹೇಳಿದ್ದಾರೆ. ಹಾಗಾದ್ರೆ ಹಿಂದಿನ ಸರ್ಕಾರದಲ್ಲಿ ಕಮೀಷನ್ ಪಡೆದವರು ಯಾರು ಎಂದು ಸಿಎಂ ಹೇಳಬೇಕು. ಪ್ರಾಮಾಣಿಕ ಮುಖ್ಯಮಂತ್ರಿ ಆದರೆ ಯಾರು ಕಮೀಷನ್ ಪಡೆದಿದ್ದಾರೆ ಹೇಳಬೇಕು. ಕುಮಾರಸ್ವಾಮಿ ರಾಜ್ಯದ ಜನರ ಪರವಾಗಿ ಕೆಲಸ ಮಾಡಲು ಆಗಿಲ್ಲ. ಏಕೆಂದರೆ ರಾಹುಲ್ ಗಾಂಧಿಯಿಂದ ಸಿಎಂ ಆಗಿದ್ದೇನೆ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಮಾತ್ರ ಸಿಎಂ ಒಳ್ಳೆ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.

    ಯುವಕರ ಮೇಲೆ ಸರ್ಕಾರಕ್ಕೆ ಹೆಚ್ಚು ಆಸಕ್ತಿ ಇದ್ದರೆ ಶೈಕ್ಷಣಿಕ ಸಾಲಮನ್ನಾ ಮಾಡಿ. ಬಡ ಮಕ್ಕಳು ಓದೋದಕ್ಕೆ ಸಾಲ ಮಾಡಿದ್ದಾರೆ. ಬ್ಯಾಂಕ್ ಗಳಿಂದ ನೋಟಿಸ್ ಬರುತ್ತಿದೆ. ಸರ್ಕಾರಕ್ಕೆ ಯುವಕರಿಗೆ ಅನುಕೂಲ ಮಾಡಬೇಕಾದರೆ ಶೈಕ್ಷಣಿಕ ಸಾಲಮನ್ನಾ ಮಾಡಿ. ಇಲ್ಲವೇ ಬಡ್ಡಿಯನ್ನು ಮನ್ನ ಮಾಡಿ ಎಂದು ಆಗ್ರಹಿಸಿದರು.