Tag: MLA MP Kumaraswamy

  • ಬಿಎಸ್‍ವೈ ಸಿಎಂ ಆಗಲಿ ಎಂದು ಹೊತ್ತಿದ್ದ ಹರಕೆ ತೀರಿಸಿದ ಎಂ.ಪಿ.ಕುಮಾರಸ್ವಾಮಿ

    ಬಿಎಸ್‍ವೈ ಸಿಎಂ ಆಗಲಿ ಎಂದು ಹೊತ್ತಿದ್ದ ಹರಕೆ ತೀರಿಸಿದ ಎಂ.ಪಿ.ಕುಮಾರಸ್ವಾಮಿ

    ಚಿಕ್ಕಮಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಶಿಶಿಲಗುಡ್ಡದ ಬಳಿಯ ಬೈರಾಪುರ ಗ್ರಾಮದಲ್ಲಿರುವ ಚೌಡೇಶ್ವರಿಗೆ ಹೊತ್ತಿದ್ದರು. ಇಂದು ಆ ಹರಕೆಯನ್ನು ತೀರಿಸಿದ್ದಾರೆ.

    ಕಳೆದ ವರ್ಷ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದ ವೇಳೆ ಬೈರಾಪುರದ ಚೌಡೇಶ್ವರಿ ಶಾಸಕ ಕುಮಾರಸ್ವಾಮಿ ಹರಕೆ ಹೊತ್ತಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಕುರಿ-ಕೋಳಿ ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದರು. ಕುಮಾರಸ್ವಾಮಿಯವರ ಹರಕೆಯಿಂದಲೋ ಅಥವಾ ಬಿಜೆಪಿಯವರ ಸರ್ವಪ್ರಯತ್ನದಿಂದಲೋ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಹರಕೆ ತೀರಿಸಿದ್ದಾರೆ.

    ಹರಕೆಗೆ ವರ್ಷ ತುಂಬುತ್ತಿರುವುದರಿಂದ ಶಾಸಕ ಕುಮಾರಸ್ವಾಮಿ ಶಕ್ತಿ ದೇವತೆ ಬೈರಾಪುರದ ಚೌಡೇಶ್ವರಿಗೆ ಹರಕೆ ತೀರಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ಕಾರ್ಯಕರ್ತರೊಂದಿಗೆ ಬೈರಾಪುರದ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಹರಕೆ ರೂಪದಲ್ಲಿ ಚೌಡೇಶ್ವರಿ ದೇವಿಗೆ ನಾಲ್ಕು ಕುರಿ ಹಾಗೂ ಎಂಟು ಕೋಳಿಯನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

    ಮೂಡಿಗೆರೆ ಶಾಸಕ ಕುಮಾರಸ್ವಾಮಿ ಯಡಿಯೂರಪ್ಪನವರ ಆಪ್ತ. ಹಲವು ವಿಚಾರದಲ್ಲಿ ಅವರು ಮುಖ್ಯಮಂತ್ರಿಯನ್ನು ತಮ್ಮ ನಾಯಕರೆಂದು ಪರಿಗಣಿಸಿ ಅವರು ಹೇಳಿದಂತೆ ನಡೆದಿದ್ದಾರೆ. ಅವರು ಹಾಕಿದ್ದ ಗೆರೆ ದಾಟಿಲ್ಲ. ಕೆಲ ಬಾರಿ ಅವರು ಯಡಿಯೂರಪ್ಪನವರ ಮಾನಸ ಪುತ್ರ ಎಂದು ಹೇಳಿದ್ದರು.

  • ಕ್ಷೇತ್ರಕ್ಕೆ ಬಂದು ಗ್ರಾಮ ವಾಸ್ತವ್ಯ ಹೂಡಿ: ಸಿಎಂಗೆ ಮೂಡಿಗೆರೆ ಶಾಸಕ ಮನವಿ

    ಕ್ಷೇತ್ರಕ್ಕೆ ಬಂದು ಗ್ರಾಮ ವಾಸ್ತವ್ಯ ಹೂಡಿ: ಸಿಎಂಗೆ ಮೂಡಿಗೆರೆ ಶಾಸಕ ಮನವಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಹಾಮಳೆಯಿಂದ ಉಂಟಾಗಿರುವ ಅತಿವೃಷ್ಟಿ ಪರಿಶೀಲನೆ ನಡೆಸಲು ಕ್ಷೇತ್ರಕ್ಕೆ ಬಂದು ಗ್ರಾಮವಾಸ್ತವ್ಯ ನಡೆಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

    ಈ ಕುರಿತು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ವೀಡಿಯೋ ಪೋಸ್ಟ್ ಮಾಡಿರುವ ಶಾಸಕರು, ಕೊಡಗು ಪ್ರವಾಹ ಸಂತ್ರಸ್ತರಿಗೆ ನೆರವು ನೀಡಲು ಸಿಎಂ ಆಗಿ ನೀವು ಶಕ್ತಿ ಮೀರಿ ಕೆಲಸ ಮಾಡಿದ್ದೀರಿ. ನಿಮಗೇ ಧನ್ಯವಾದ. ಆದರೆ ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಗೆ ಅಪಾರ ನಷ್ಟವಾಗಿದೆ. ಅಲ್ಲದೇ ರೈತರು ಬೆಳೆದಿರುವ ಬೆಳೆ ನಾಶವಾಗಿದ್ದು, ಹಲವು ಸೇತುವೆಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಅದ್ದರಿಂದ ನೀವು ಇಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ.

    ಇದೇ ವೇಳೆ ಈ ಹಿಂದೆ ಮೂಡಿಗೆರೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಕಾರ್ಯಕ್ರಮ ನಿಗದಿಯಾಗಿದ್ದನ್ನು ನೆನಪಿಸಿರುವ ಅವರು, ಹಲವು ಕಾರಣಗಳಿಂದ ಅಂದು ಕಾರ್ಯಕ್ರಮ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಗ್ರಾಮವಾಸ್ತವ್ಯ ಮಾಡಲು ಅವಕಾಶವಿದೆ. ಅದ್ದರಿಂದ ಶೀಘ್ರವೇ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ಮನವಿ ಮಾಡಿದ್ದಾರೆ. ಇದನ್ನು ಓದಿ: ಭೂಕುಸಿತದಿಂದ ಕಂಗೆಟ್ಟ ಚಿಕ್ಕಮಗ್ಳೂರಿನ ಜನ- ಭವಿಷ್ಯದ ಆತಂಕದಲ್ಲಿ ಮಲೆನಾಡಿನ ಮಂದಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.facebook.com/mp.kumaraswamy/videos/317705765642706/