Tag: mix

  • ಕೆಎಂಎಫ್ ಹಾಲಿಗೆ ಕಲಬೆರಕೆ ಮಾಡುತ್ತಿದ್ದ ಜಾಲ ಪತ್ತೆ: 9 ಜನರ ಬಂಧನ!

    ಕೆಎಂಎಫ್ ಹಾಲಿಗೆ ಕಲಬೆರಕೆ ಮಾಡುತ್ತಿದ್ದ ಜಾಲ ಪತ್ತೆ: 9 ಜನರ ಬಂಧನ!

    ಚಿಕ್ಕಮಗಳೂರು: ನಿಗಮಕ್ಕೆ ಸರಬರಾಜಾಗುತ್ತಿದ್ದ ಹಾಲಿನಲ್ಲಿ ವಿಷಪೂರಿತ ವಸ್ತುಗಳನ್ನು ಕಲಬೆರಕೆ ಮಾಡುತ್ತಿದ್ದ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಅಧಿಕಾರಿಗಳು ಹಾಗೂ ಪೊಲೀಸರ ತಂಡ ಯಶಸ್ವಿಯಾಗಿದೆ.

    ಹಾಸನ ಹಾಲು ಒಕ್ಕೂಟಕ್ಕೆ ಸರಬರಾಜಾಗುತ್ತಿರುವ ಹಾಲಿಗೆ ವಿಷಕಾರ ಪದಾರ್ಥಗಳನ್ನು ಮಿಶ್ರಣಮಾಡಲಾಗುತ್ತಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬರು ಮಾರ್ಚ್ 20 ರಂದು ಹಾಸನ ಕೆಎಂಎಫ್ ಘಟಕಕ್ಕೆ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿ, ಜಿಲ್ಲೆಯಲ್ಲಿನ ಸುಮಾರು 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಗಳು ಹಾಲಿನ ಕ್ಯಾನ್ ಸಾಗಾಣೆ ಮಾಡುವ ವಾಹನಗಳಲ್ಲೇ ಮಿಕ್ಸಿಂಗ್ ಮಾಡುತ್ತಿದ್ದರು. ಹಾಸನ, ಸಕಲೇಶಪುರ, ಚಿಕ್ಕಮಗಳೂರು ಹಾಗೂ ಬೀರೂರು ಘಟಕಗಳಿಂದ ಜಾಲಕ್ಕೆ ಸಾಥ್ ನೀಡಲಾಗುತಿತ್ತು. ಅಷ್ಟೇ ಅಲ್ಲದೇ ಮಾಚೇನಹಳ್ಳಿಯಲ್ಲೂ ಸಹ ಕಲಬೆರಕೆ ಜಾಲ ನಡೆಯುತಿತ್ತು ಎನ್ನುವ ವಿಚಾರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

    ಈ ದಂಧೆಗೆ ಕೆಎಂಎಫ್ ಅಧಿಕಾರಿಗಳೇ ಬೆಂಬಲ ನೀಡುತ್ತಿದ್ದರಿಂದ ತನಿಖೆ ವಿಳಂಬಗೊಂಡಿತ್ತು. ಖುದ್ದು ಕೆಎಂಎಫ್‍ನ ಅಧಿಕಾರಿ ಸೌಮ್ಯರವರು ಮರು ತನಿಖೆಗೆ ಆದೇಶ ನೀಡಿ, ಚುರುಕುಗೊಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತನಿಖೆ ಮುಂದುವರಿಸಿದ್ದು, ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=KDooRbDdUmA

  • ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

    ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

    -ಮಂಡ್ಯದಲ್ಲಿ ಅಕ್ಕಿಯಲ್ಲಿ ಸಿಕ್ತು ಪ್ಲಾಸ್ಟಿಕ್!

    ಚಿಕ್ಕಬಳ್ಳಾಪುರ: ನೀವು ಬಳಸುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್ ಎಂಬುದನ್ನು ಒಮ್ಮೆ ನೀರಿಗೆ ಹಾಕಿ ಪರೀಕ್ಷೆ ಮಾಡಿ. ಕೆಲವು ದಿನಗಳ ಹಿಂದೆ ಅನ್ನಭಾಗ್ಯದ ಉಪ್ಪು ನೀಲಿ ಬಣ್ಣಕ್ಕೆ ತಿರುಗಿದ ಸುದ್ದಿ ಪ್ರಕಟವಾಗಿತ್ತು. ಇದೀಗ ಸಕ್ಕರೆಯ ಸರದಿ. ಚಿಕ್ಕಬಳ್ಳಾಪುರ ನಗರದ ಹೋಟೆಲ್‍ವೊಂದರಲ್ಲಿ ಸಕ್ಕರೆ ಹಸಿರು ಬಣ್ಣಕ್ಕೆ ತಿರುಗಿ ಜನರಲ್ಲಿ ಆತಂಕ ಉಂಟುಮಾಡಿದೆ.

    ಇಂದು ಬೆಳಗ್ಗೆ ಗ್ರಾಹಕ ಸ್ನೇಕ್ ಪ್ರಥ್ವಿರಾಜ್ ಎಂಬವರು ಮೊಸರಿನ ಜೊತೆ ಸಕ್ಕರೆ ಮಿಶ್ರಣ ಮಾಡಿ ಸೇವಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೆರೆಡು ಬಾರಿ ಇದೇ ರೀತಿ ಮೊಸರು ಹಾಗೂ ನೀರಿಗೆ ಸಕ್ಕರೆ ಮಿಶ್ರಣ ಮಾಡಿ ಪರಿಶೀಲನೆ ನಡೆಸಿದಾಗ ಸಕ್ಕರೆ ಮಿಶ್ರಿತ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದೆ. ಸಕ್ಕರೆಯಲ್ಲಿ ಯಾವೋದೋ ಕೆಮಿಕಲ್ ಸೇರಿರಬೇಕೆಂಬ ಅನುಮಾನ ಮೂಡಿದೆ. ಹೀಗಾಗಿ ಸಂಬಂಧಪಟ್ಟವರು ಸಕ್ಕರೆಯ ಗುಣಮಟ್ಟದ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

    ಪ್ಲಾಸ್ಟಿಕ್ ಅಕ್ಕಿ: ಪಡಿತರದಾರರಿಗೆ ಸೊಸೈಟಿಯಲ್ಲಿ ವಿತರಿಸಿರುವ ಅಕ್ಕಿಯಲ್ಲಿ ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ರಾಗಿಬೊಮ್ಮನಹಳ್ಳಿಯ ನಿವಾಸಿ ಪುಟ್ಟರಾಜು ಅವರು ಮಾರ್ಚ್ 23 ರಂದು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 40 ಕೆಜಿ ಅಕ್ಕಿ ತೆಗೆದುಕೊಂಡಿದ್ದರು.

    ಕೆಲ ದಿನದ ಬಳಿಕ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮಿಲ್ ಮಾಡಿಸಿಕೊಂಡು ಮನೆಗೆ ತಂದಿದ್ದಾರೆ. ಮನೆಯಲ್ಲಿ ರೊಟ್ಟಿ ಮಾಡಲು ಮುಂದಾದಾಗ ಪ್ಲಾಸ್ಟಿಕ್ ವಸ್ತು ಸಿಕ್ಕಿದೆ. ಬಳಿಕ ಮಿಲ್ ಮಾಡಿಸಿದ ಅಕ್ಕಿಯನ್ನು ಪರಿಶೀಲನೆ ನಡೆಸಿದಾಗ ಸುಮಾರು ಒಂದು ಹಿಡಿಯಷ್ಟು ಪ್ಲಾಸ್ಟಿಕ್ ವಸ್ತು ಪತ್ತೆಯಾಗಿದೆ ಎಂದು ಹೇಳಲಾಗಿದೆ.

    https://www.youtube.com/watch?v=2xgKCWaCgJs