Tag: minister

  • ಶಾನುಭಾಗ್ ಹೇಳುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡಲು ಸಾಧ್ಯವಿಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ಶಾನುಭಾಗ್ ಹೇಳುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡಲು ಸಾಧ್ಯವಿಲ್ಲ: ಸಚಿವ ಪ್ರಮೋದ್ ಮಧ್ವರಾಜ್

    ಉಡುಪಿ: ಕನ್ನಡ ರಾಜೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿದ ಸಮಾಜ ಸೇವಕ- ಮಾನವ ಹಕ್ಕುಗಳ ಹೋರಾಟಗಾರ, ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಅವರ ಬಗ್ಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಲಘುವಾಗಿ ಮಾತನಾಡಿದ್ದಾರೆ.

    ಶಾನುಭಾಗ್ ಅವರು ತಮ್ಮ ಸಮಾಜ ಸೇವ ಕಾರ್ಯಗಳು ನಿರಿಕ್ಷೀತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಮಕ್ಕಳೂ ಹಿರಿಯ ನಾಗರೀಕರು ಇಂದಿಗೂ ತಮ್ಮ ಅಸಹಾಯಕತೆಯಿಂದ ನನ್ನ ಬಳಿ ಬರುತ್ತಾರೆ. ಸರ್ಕಾರವು ತನ್ನ ಕಾರ್ಯವನ್ನು ಸರಿಯಾಗಿ ನಡೆಸಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ರಾಜ್ಯಸರ್ಕಾರದ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು.

    ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು, ಶಾನುಭಾಗ್ ಹೇಳುವ ಕೆಲಸಗಳನ್ನೆಲ್ಲ ಮಾಡಲು ಸಾಧ್ಯವಿಲ್ಲ. ಶಾನುಭಾಗ್ ಅವರ ವೇಗಕ್ಕೆ ಕೆಲಸ ಮಾಡುವಷ್ಟು ಸ್ಪೀಡ್ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಇಲ್ಲ ಅಂತ ಹೇಳುವ ಮೂಲಕ ಸರ್ಕಾರದ ಕೆಲಸ ತುಂಬಾ ನಿಧಾನ ಅಂತ ಒಪ್ಪಿಕೊಂಡರು.

    ಅಲ್ಲದೇ ಸರ್ಕಾರ ಕೊಟ್ಟ ಪ್ರಶಸ್ತಿಯನ್ನು ತಿರಸ್ಕರಿಸಿದ್ದು ಅವರ ಗುಣದ ಪ್ರತಿಬಿಂಬ. ಡಾ. ರವೀಂದ್ರನಾಥ್ ಶಾನುಭಾಗ್ ಅವರು ಸ್ವಲ್ಪ ತಾಳ್ಮೆಯನ್ನು ರೂಢಿಸಿಕೊಳ್ಳಬೇಕು ಸಚಿವ ಪ್ರಮೋದ್ ಮಧ್ವರಾಜ್ ಸಲಹೆ ನೀಡಿದರು.

     

  • ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪ- ಪತ್ರಕರ್ತ ವರ್ಮಾ ಬಂಧನ

    ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪ- ಪತ್ರಕರ್ತ ವರ್ಮಾ ಬಂಧನ

    ರಾಯ್ಪುರ್: ಬಿಜೆಪಿ ಸಚಿವರ ಸೆಕ್ಸ್ ಸಿಡಿ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡಿದ ಆರೋಪದ ಮೇಲೆ ಮಾಜಿ ಬಿಬಿಸಿ ಪತ್ರಕರ್ತ ವಿನೋದ್ ವರ್ಮಾ ಅವರನ್ನು ಛತ್ತೀಸ್‍ಗಢ ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ.

    ಛತ್ತೀಸ್‍ಗಢದ ರಾಯ್ಪುರ್ ಜಿಲ್ಲೆಯಲ್ಲಿನ ಪಂಡಾರಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಕಾಶ್ ಬಜಾಜ್ ದೂರು ದಾಖಲಿಸಿದ 12 ಗಂಟೆಗಳೊಳಗೆ ವರ್ಮಾ ಅವರ ಬಂಧನವಾಗಿದೆ. ವರ್ಮಾ ವಿರುದ್ಧ ಐಪಿಸಿ ಸೆಕ್ಷನ್ 384 ಹಾಗೂ 507ರ ಅಡಿ ಸುಲಿಗೆ ಹಾಗೂ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನ ಕ್ರೈ ಬ್ರಾಂಚ್ ಎಸ್‍ಪಿ ಅಜಾತಶತ್ರು ಬಹೂದೂರ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

    ವರ್ಮಾ ಅವರನ್ನು ಇಂದಿರಾಪುರಂ ನಿವಾಸದಿಂದ ಛತ್ತೀಸ್‍ಗಢ ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಪಂಡಾರಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಛತ್ತೀಸ್‍ಗಢದ ಬಿಜೆಪಿ ಸಚಿವರೊಬ್ಬರ ಸೆಕ್ಸ್ ಸಿಡಿ ಹೊಂದಿದ್ದು, ಸುಲಿಗೆ ಮಾಡಲು ಯತ್ನಿಸಿದ ಕಾರಣ ವಿನೋದ್ ವರ್ಮಾ ಅವರ ಬಂಧನವಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವಾರ ವರ್ಮಾ, ಬಿಜೆಪಿ ಸಚಿವರ ಆಪ್ತರೊಬ್ಬರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.

    ಸಿಡಿ ವಶ: ಬಜಾಜ್ ಅವರು ದೂರು ದಾಖಲಿಸಿದ ನಂತರ ಛತ್ತೀಸ್‍ಗಢ ಪೊಲೀಸರು ದೆಹಲಿಯ ಅಂಗಡಿಯೊಂದರ ಮೇಲೆ ದಾಳಿ ಮಾಡಿ ಆರೋಪ ಕೇಳಿಬಂದಿರುವ ಸೆಕ್ಸ್ ಸಿಡಿಯ 1000 ಪ್ರತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನ ವಿಚಾರಣೆ ಬಳಿಕ ಪೊಲೀಸರು ವರ್ಮಾ ಅವರ ಮನೆ ಮೇಲೆ ದಾಳಿ ಮಾಡಿ ಹೆಚ್ಚಿನ ಸಂಖ್ಯೆಯ ಸಿಡಿಗಳು, ವರ್ಮಾ ಅವರ ಲ್ಯಾಪ್‍ಟಾಪ್ ಹಾಗೂ ಪೆನ್‍ಡ್ರೈವ್ ವಶಪಡಿಸಿಕೊಂಡಿದ್ದಾರೆ.

    ವಶಪಡಿಸಿಕೊಳ್ಳಲಾಗಿರುವ ಸಿಡಿಗಳಿಂದ ವ್ಯಕ್ತಿಯ ಪ್ರತಿಷ್ಠೆಗೆ ಧಕ್ಕೆಯಾಗಬಹುದಾದ ಕಾರಣ ಶೀಘ್ರವೇ ಬಂಧನ ಮಾಡಲಾಯ್ತು ಎಂದು ರಾಯ್ಪುರ್ ಐಜಿಪಿ ಪ್ರದೀಪ್ ಗುಪ್ತಾ ವರದಿಗಾರರಿಗೆ ಹೇಳಿದ್ದಾರೆ.

    ಗುರುವಾರ ಮಧ್ಯಾಹ್ನ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್‍ನಲ್ಲಿ ವಿನೋದ್ ವರ್ಮಾ ಅವರನ್ನು ಆರೋಪಿ ಎಂದು ಉಲ್ಲೇಖಿಸಿಲ್ಲ. ಆದ್ರೆ ಸಿಡಿಗಳು ವರ್ಮಾ ಅವರ ಬಳಿ ಇದ್ದವು. ಅವರನ್ನು ರಾಯ್ಪುರಕ್ಕೆ ಕರೆತರಲು ವಶಕ್ಕೆ ಕೋರಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.

    ಸಿಡಿಯ ಮರುಮುದ್ರಣಕ್ಕೆ ಆರ್ಡರ್?:  ಯಾರೋ ಒಬ್ಬರು ಲ್ಯಾಂಡ್‍ಲೈನ್ ನಂಬರ್‍ಗೆ ಕರೆ ಮಾಡಿ ತನ್ನ ಬಾಸ್‍ನ ಸೆಕ್ಸ್ ಸಿಡಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ರು ಎಂದು ಪ್ರಕಾಶ್ ಬಜಾಜ್ ಅವರು ನಮಗೆ ದೂರು ನೀಡಿದ್ರು. ಕಾಲ್ ಟ್ರೇಸ್ ಮಾಡಿದಾಗ ದೆಹಲಿ ಅಂಗಡಿಯ ವಿಳಾಸ ಸಿಕ್ಕಿದ್ದು, ನಂತರ ದಾಳಿ ನಡೆಯಿತು. ವರ್ಮಾ ಅವರು ಸಿಡಿಯ ಮರುಮುದ್ರಣಕ್ಕೆ ಆರ್ಡರ್ ಮಾಡಿದ್ದರು ಎನ್ನಲಾಗಿದೆ. ಕರೆ ಮಾಡಿದ್ದು ವರ್ಮಾ ಅವರೇನಾ ಅಥವಾ ಬೇರೆ ವ್ಯಕ್ತಿಯಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ತನಿಖೆಯಿಂದ ಗೊತ್ತಾಗಲಿದೆ ಅಂತ ಗುಪ್ತಾ ತಿಳಿಸಿದ್ದಾರೆ.

    ವರ್ಮಾ ಬಂಧನವನ್ನ ಇಲ್ಲಿನ ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಛತ್ತೀಸ್‍ಗಢ ಬಿಜೆಪಿ ವಕ್ತಾರರಾದ ಶ್ರೀಚಂದ್ ಸುಂದರಾಣಿ ಪ್ರತಿಕ್ರಿಯಿಸಿ, ಇಂತಹ ವಿವಾದಗಳಿಂದ ಬಿಜೆಪಿಯ ಮೇಲೆ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ತನಿಖೆಗೆ ಪಕ್ಷ ಸಿದ್ಧವಾಗಿದೆ. ಇದೆಲ್ಲಾ ಕಾಂಗ್ರೆಸ್‍ನವರ ಪಿತೂರಿ ಎಂದು ಹೇಳಿದ್ದಾರೆ.

    ಸೆಕ್ಸ್ ಸಿಡಿ ನನ್ನ ಬಳಿ ಇದೆ: ಸಚಿವ ರಾಕೇಶ್ ಮುನಾತ್ ಅವರ ಸೆಕ್ಸ್ ಸಿಡಿ ನನ್ನ ಬಳಿ ಇದೆ. ಛತ್ತೀಸ್‍ಗಢ ಸರ್ಕಾರಕ್ಕೆ ಇದು ಇಷ್ಟವಿಲ್ಲ. ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ವಿನೋದ್ ವರ್ಮಾ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ.

  • ಪ್ರಾಣಿಗಳನ್ನು ಮನೆಯಲ್ಲಿ ಸಾಕಲು 250, 500 ರೂ. ಪಾವತಿಸಬೇಕು!

    ಪ್ರಾಣಿಗಳನ್ನು ಮನೆಯಲ್ಲಿ ಸಾಕಲು 250, 500 ರೂ. ಪಾವತಿಸಬೇಕು!

    ಚಂಡೀಘಡ: ಪಂಜಾಬ್ ನಲ್ಲಿನ್ನು ಸಾಕು ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಳ್ಳೋದಿಕ್ಕೂ ತೆರಿಗೆ ಪಾವತಿಸಬೇಕು. ಹೌದು, ಇನ್ನು ಮುಂದೆ ಸಾಕು ಪ್ರಾಣಿಗಳನ್ನು ಮನೆಯಲ್ಲಿಟ್ಟಿರುವ ಮಾಲೀಕರು ವರ್ಷಕ್ಕೆ 250 ಹಾಗೂ 500 ರೂ. ತೆರಿಗೆ ಪಾವತಿಸಬೇಕು.

    ಸ್ಥಳೀಯಾಡಳಿತ ಸಂಸ್ಥೆಗಳ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಈ ಬಗ್ಗೆ ನೋಟಿಸ್ ಹೊರಡಿಸಿದ್ದಾರೆ.

    ನಾಯಿ, ಬೆಕ್ಕು, ಹಂದಿ, ಕುರಿ, ಜಿಂಕೆ ಇತ್ಯಾದಿ ಸಾಕು ಪ್ರಾಣಿಗಳನ್ನು ಸಾಕುವವರು ಒಂದು ವರ್ಷಕ್ಕೆ 250 ರೂಪಾಯಿ ತೆರಿಗೆಯನ್ನು ಪಾವತಿಸಬೇಕು. ಎಮ್ಮೆ, ಗೂಳಿ, ಹಸು, ಒಂಟೆ, ಆನೆಯಂತಹ ಸಾಕು ಪ್ರಾಣಿಗಳಿಗೆ ಪ್ರತಿಯೊಂದು ಪ್ರಾಣಿಗೂ ಒಂದು ವರ್ಷಕ್ಕೆ 500 ರೂಪಾಯಿಗಳನ್ನು ಪಾವತಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.

    ಎಲ್ಲಾ ಸಾಕು ಪ್ರಾಣಿಗಳಿಗೂ ಗುರುತು ಅಥವಾ ಸಂಖ್ಯೆಯನ್ನು ನೀಡಿ, ಮೈಕ್ರೋಚಿಪ್ ಗಳನ್ನು ಅಳವಡಿಸಲಾಗುವುದು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

    ಇದರ ಜೊತೆಗೆ ಪ್ರಾಣಿಗಳನ್ನು ಸಾಕಬೇಕಾದರೆ ಕಡ್ಡಾಯವಾಗಿ ಅಧಿಕಾರಿಗಳಿಂದ ಲೈಸೆನ್ಸ್ ಪಡೆಯಬೇಕು. ನಂತರ ಪ್ರತಿ ವರ್ಷವು ಲೈಸೆನ್ಸ್ ನವೀಕರಿಸಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

     

  • ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

    ಮತ್ತೊಮ್ಮೆ ತಂದೆಯ ಅಧಿಕಾರ ದುರುಪಯೋಗಪಡಿಸಲು ಮುಂದಾದ ಸಚಿವ ಕೆ.ಜೆ ಜಾರ್ಜ್ ಪುತ್ರ!

    ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪುತ್ರ ರಾಣಾ ಜಾರ್ಜ್, ತಮ್ಮ ತಂದೆಯ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ.

    ರಾಣಾ ಜಾರ್ಜ್ ಕಾಡಿನಲ್ಲಿ ಸುತ್ತಾಡಿಕೊಂಡು ಮಜಾ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದು, ಕಾಡಿನ ರಾಜನಾಗಿ ಮೆರದಾಡುತ್ತಿದ್ದ ವಿಚಾರ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಮತ್ತೆ ಅರಣ್ಯದೊಳಗೆ ತನ್ನ ರೇಂಜ್ ರೋವರ್ ಕಾರಿನಲ್ಲಿ ಸವಾರಿ ಮಾಡೋಕೆ ಅನುಮತಿ ಕೇಳಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಹೈ ಇನ್ ಪ್ಲ್ಯೂಯೆನ್ಸ್ ಮಾಡಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!

    ಸ್ವಂತ ವಾಹನದಲ್ಲಿ ಪರ್ಮನೆಂಟ್ ಆಗಿ ಸಂಚಾರ ಮಾಡಲು ಅನುಮತಿ ನೀಡಬೇಕು ಅಂತ ಅರಣ್ಯ ಇಲಾಖೆಗೆ ಕೋರಿರುವ ಪತತಿದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ಅರಣ್ಯ ಇಲಾಖೆಯ ಬೋರ್ಡ್ ಮೆಂಬರ್ ಆಗಿರುವ ರಾಣಾ, ಈ ಹಿಂದೆ ಸ್ನೇಹಿತರ ಜೊತೆ ಕಾಡಿನೊಳಗೆ ಹೋಗಿ ಎಣ್ಣೆ ಪಾರ್ಟಿ ಮಾಡಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

    ಇದಕ್ಕೂ ಮೊದಲು ಜಾರ್ಜ್ ಗೃಹಸಚಿವರಾಗಿದ್ದಾಗ ರಾಣಾ ತನ್ನ ತಂದೆ ಮಿನಿಸ್ಟರ್ ಅನ್ನೋ ದರ್ಪದಿಂದ ತನ್ನ ತಾಯಿ ಹಾಗೂ ಸ್ನೇಹಿತರೊಂದಿಗೆ ಬಂಡೀಪುರ ಅರಣ್ಯದೊಳಗೆ ಸ್ವಂತ ವಾಹನ ನುಗ್ಗಲು ಯತ್ನಿಸಿದ್ರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇವ್ರ ಮಾತಿಗೆ ಸೊಪ್ಪು ಹಾಕಿರಲಿಲ್ಲ. ಆ ವೇಳೆ ಅಧಿಕಾರಿಗಳ ಬಳಿ ಚಾಲೆಂಜ್ ಮಾಡಿದ್ದ ರಾಣಾ ಜಾರ್ಜ್, ನನ್ನನ್ನೇ ಬಿಡಲ್ಲ ಅಂತೀರಾ, ಮುದೊಂದು ದಿನ ನಿಮ್ಮ ಕಣ್ಣೆದುರೇ ನನ್ನ ವಾಹನದಲ್ಲಿ ಸವಾರಿ ಮಾಡ್ತೀನಿ ನೋಡ್ತಾ ಇರಿ ಅಂತಾ ತೊಡೆ ತಟ್ಟಿ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಯುವಜನತೆಗೆ ಲವ್ ಬಗ್ಗೆ ಸಚಿವ ಆಂಜನೇಯ ಪಾಠ!

    ಯುವಜನತೆಗೆ ಲವ್ ಬಗ್ಗೆ ಸಚಿವ ಆಂಜನೇಯ ಪಾಠ!

    ಧಾರವಾಡ: ಸಿಎಂ ಸಿದ್ದರಾಮಯ್ಯ ಅವರು ಆಗಾಗ ಕನ್ನಡ ವ್ಯಾಕರಣದ ಬಗ್ಗೆ ಪಾಠ ಮಾಡುವುದು ನಿಮಗೆ ಗೊತ್ತೆಯಿದೆ. ಆದರೆ ಈಗ ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಅವರು ಯುವಜನತೆಗೆ ಲವ್ ಬಗ್ಗೆ ಪಾಠ ಮಾಡಿ ಸುದ್ದಿಯಾಗಿದ್ದಾರೆ.

    ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ಲವ್ ಕಡೆ ಗಮನ ಕೊಡದೇ ನೀವೆಲ್ಲರೂ ಚೆನ್ನಾಗಿ ಓದಬೇಕು. ಮೊಬೈಲ್ ಜಾಸ್ತಿ ಉಪಯೋಗಿಸಬೇಡಿ. ಯಾವ ಪೊಲೀಸ್ ಠಾಣೆಯಲ್ಲಿ ಹೋಗಿ ನೋಡಿದರೂ ಹುಡುಗಿ ನಾಪತ್ತೆಯಾಗಿದ್ದಾಳೆ ಎನ್ನುವುದನ್ನೇ ನೋಡುತ್ತೇವೆ. ಆದರೆ ನೀವು ಆ ತರಹ ಮಾಡಬೇಡಿ ಎಂದು ಹೇಳಿದರು.

    ಎಲ್ಲಾ ರೀತಿಯ ಪರಿಶ್ರಮಪಟ್ಟು ಪದವಿ ಓದಿ ಕೆಲಸ ಪಡೆದು ಉನ್ನತ ಸ್ಥಾನಕ್ಕೆ ಏರಿ ನಿಮ್ಮ ಜೀವನಕ್ಕೆ ಭದ್ರತೆಯನ್ನು ಒದಗಿಸಿಕೊಳ್ಳಿ. ನಿಮ್ಮ ತಂದೆ ತಾಯಿ ಹೇಳಿದವರನ್ನು ಮದುವೆಯಾಗಿ ಎಂದು ಬುದ್ಧಿಮಾತನ್ನು ಹೇಳಿದರು.

    ನಾನು ಮದುವೆಯಾಗಿದ್ದ ಹುಡುಗಿಯನ್ನು ನೋಡಿರಲಿಲ್ಲ. ನಮ್ಮ ಅಮ್ಮ ಈ ಹುಡುಗಿಗೆ ತಾಳಿಕಟ್ಟು ಅಂದರು. ಅವಳು ಸ್ನಾತಕೋತ್ತರ ಪದವಿಧರೆ. ಒಳ್ಳೆಯ ಹುಡುಗಿ ನೀನು ತಾಳಿ ಕಟ್ಟು ಅಂದ್ರು ನಾನು ಕಟ್ಟಿದೆ. ಈಗ ನಾವು ಸಂತೋಷದಿಂದ ಇದ್ದೇವೆ. ನಮ್ಮ ತಂದೆ ತಾಯಿ ನೋಡಿದವರನ್ನು ಮದುವೆಯಾಗಿ ನೆಮ್ಮದಿಯಿಂದ ಇದ್ದೇವೆ. ನೀವು ಇದೆ ರೀತಿ ಇರಬೇಕು ಎಂದು ಅವರು ತಿಳಿಸಿದರು.

  • ಟೀ ಪುಡಿ ಮಾರೋರೆಲ್ಲ ಶಾಸಕರಾಗಲ್ಲ-ಮೈಸೂರು ಬಿಜೆಪಿಯಲ್ಲಿ ಫೇಸ್‍ಬುಕ್ ವಾರ್

    ಟೀ ಪುಡಿ ಮಾರೋರೆಲ್ಲ ಶಾಸಕರಾಗಲ್ಲ-ಮೈಸೂರು ಬಿಜೆಪಿಯಲ್ಲಿ ಫೇಸ್‍ಬುಕ್ ವಾರ್

    -ರಾಮದಾಸ್, ವಿ.ಹೆಚ್.ರಾಜೀವ್ ಬೆಂಬಲಿಗರ ಫೇಸ್ ಬುಕ್ ವಾರ್

    ಮೈಸೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷದ ನಾಯಕರುಗಳು ಒಬ್ಬರನೊಬ್ಬರನ್ನು ನಿಂದಿಸುವುದು ಮತ್ತು ಆರೋಪಗಳನ್ನು ಮಾಡುವುದು ಸಹಜವಾಗಿರುತ್ತದೆ. ಆದರೆ ಬಿಜೆಪಿಯ ಇಬ್ಬರು ಮುಖಂಡರ ಬೆಂಬಲಿಗರಲ್ಲಿ ಫೇಸ್‍ಬುಕ್ ವಾರ್ ಆರಂಭಗೊಂಡಿದೆ.

    ಕೆ.ಆರ್. ಕ್ಷೇತ್ರದ ಬಿಜೆಪಿ ಮುಖಂಡರಾದ ರಾಮದಾಸ್ ಹಾಗೂ ವಿ.ಹೆಚ್.ರಾಜೀವ್ ಬೆಂಬಲಿಗರ ಫೇಸ್ ಬುಕ್ ವಾರ್ ಜೋರಾಗಿದೆ. ಕೆ.ಆರ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಾಜೀವ್ ಹಾಗೂ ಇನ್ನೊಬ್ಬ ಟಿಕೆಟ್ ಆಕಾಂಕ್ಷಿಯಾಗಿರುವ ಫಣೀಶ್ ಅವರನ್ನು ಮಾಜಿ ಸಚಿವ ರಾಮದಾಸ್ ಅವರ ಬೆಂಬಲಿಗರಾಗಿರುವ ನಾಗರಾಜ್ ಪೈ ಎಂಬವರು ಫೇಸ್ ಬುಕ್ ಪೇಜ್ ನಲ್ಲಿ ನಿಂದಿಸಿದ್ದಾರೆ.

    ಎಂಎಲ್‍ಎ ಆಗೋಕು ಯೋಗ್ಯತೆ ಬೇಕು. ಟೀ ಪುಡಿ ಮಾರೋರೆಲ್ಲ ಶಾಸಕರು ಆಗೋಕ್ಕೆ ಆಗಲ್ಲ. ಗಣಪತಿ ಹಬ್ಬಕ್ಕೆ ದುಡ್ಡು ಕೊಟ್ಟು ಫೋಟೋ ತೆಗೆಸಿಕೊಳ್ಳೊರು ಅಭ್ಯರ್ಥಿ ಅಂತೆ ಎಂದು ಬಿಜೆಪಿ ಮುಖಂಡರನ್ನು ನಾಗರಾಜ್ ಪೈ ಟೀಕಿಸಿದ್ದಾರೆ. ನಾಗರಾಜ್ ಪೈ ಪೋಸ್ಟ್ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತಿದೆ.

    ಇನ್ನೂ ಈ ಪೋಸ್ಟ್ ಗೆ ಯಾವಾಗ ಟೀಕೆ ಶುರುವಾದವೋ ತಕ್ಷಣ ಎಚ್ಚೆತ್ತು ನಾಗರಾಜ್ ಪೈ ತಮ್ಮ ಪೋಸ್ಟ್ ಅಳಿಸಿ ಹಾಕಿದ್ದಾರೆ. ನಾಗರಾಜ್ ಪೈ ವಿರುದ್ದ ಬಿಜೆಪಿ ಮುಖಂಡ ರಾಜೀವ್ ಕೆಂಡಾಮಂಡಲರಾಗಿದ್ದಾರೆ ಎಂದು ಹೇಳಲಾಗಿದೆ.

  • ನನ್ನ ಸಂಬಂಧಿಗೆ ಆಡಳಿತಾಧಿಕಾರಿ ಹುದ್ದೆ ಬಿಟ್ಕೊಡು – ಡಾಕ್ಟರ್‍ಗೆ ಎಂಎಲ್‍ಎ ರಾಜೇಶ್ ಬೆಂಬಲಿಗನ ಆವಾಜ್

    ನನ್ನ ಸಂಬಂಧಿಗೆ ಆಡಳಿತಾಧಿಕಾರಿ ಹುದ್ದೆ ಬಿಟ್ಕೊಡು – ಡಾಕ್ಟರ್‍ಗೆ ಎಂಎಲ್‍ಎ ರಾಜೇಶ್ ಬೆಂಬಲಿಗನ ಆವಾಜ್

    ದಾವಣಗೆರೆ: ಸರ್ಕಾರಿ ಅಸ್ಪತ್ರೆಯ ಆಡಳಿತಧಿಕಾರಿಗೆ ಶಾಸಕರ ಬೆಂಬಲಿಗ ಅವಾಜ್ ಹಾಕಿರುವ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನಲ್ಲಿ ನಡೆದಿದೆ.

    ಜಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರೋ ಮಟನ್ ಓಬಣ್ಣ ಅವಾಜ್ ಹಾಕಿದ ವ್ಯಕ್ತಿಯಾಗಿದ್ದು, ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಅರ್ಹತೆ ಇಲ್ಲದೆ ಇದ್ದರೂ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಪೋಸ್ಟ್ ತನ್ನ ತಮ್ಮ ಡೆಂಟಿಸ್ಟ್ ಆಗಿರುವ ಪ್ರಸನ್ನನಿಗೆ ಬಿಟ್ಟುಕೊಡುವಂತೆ ಡಾ. ಮುರಳಿಗೆ ಪದೇ ಪದೇ ಟಾರ್ಚರ್ ಕೊಡುತ್ತಿದ್ದ.

    ಅಲ್ಲದೇ ಫೋನ್‍ಕಾಲ್ ಮಾಡಿ ಸಹ ಅವಾಜ್ ಹಾಕಿದ್ದಾನೆ. ಇದರ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇನ್ನು ಮಟನ್ ಓಬಣ್ಣ ಜಗಳೂರಿನ ಕಾಂಗ್ರೆಸ್ ಶಾಸಕ ರಾಜೇಶ್ ಅವರ ಸಂಬಂಧಿಯಾಗಿದ್ದು ತನ್ನ ದರ್ಪವನ್ನು ಅಧಿಕಾರಿಗಳ ಮೇಲೆ ತೋರಿಸುತ್ತಿದ್ದಾನೆ.

    ಮೊದಲು ಕುರಿ, ಮಟನ್ ವ್ಯಾಪಾರ ಮಾಡುತ್ತಿದ್ದ ಒಬಣ್ಣ ನಂತರ ರಿಯಲ್ ಎಸ್ಟೇಟ್ ದಂಧೆಗೆ ಇಳಿದು ಅಷ್ಟೋ ಇಷ್ಟೋ ದುಡ್ಡು ಮಾಡಿಕೊಂಡು ಶಾಸಕ ರಾಜೇಶ್‍ಗೆ ಹತ್ತಿರವಾಗಿದ್ದಾನೆ. ಅಷ್ಟೇ ಅಲ್ಲದೆ ಅಸ್ಪತ್ರೆ ಅಡಳಿತ ಅಧಿಕಾರಿ ಮುರಳಿಗೆ ನಾನು ಎಂಎಲ್‍ಎ ಕೈಯಿಂದ ನಾಳೆ ಲೆಟರ್ ತರುತ್ತೀನಿ. ಸೀಟು ಬಿಟ್ಟುಕೊಡು, ಎಂಎಲ್‍ಎ ನನ್ನ ಅಳಿಯ. ಅವನು ನಾನು ಹೇಳಿದ ಹಾಗೇ ಕೇಳುತ್ತಾನೆ. ಮೊದಲು ನಾನು ಯಾರು, ನನ್ನ ಹೆಸರು, ನನ್ನ ಬ್ಯಾಗ್ರೌಂಡ್ ತಿಳ್ಕೋ ಎಂದು ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಅವಾಜ್ ಹಾಕಿದ್ದಾನೆ.

  • ಹಾಸನದಲ್ಲಿ ಕಾಡಾನೆಗಳ ಹಾವಳಿ: ಆರ್‍ಎಫ್‍ಓ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಪ್ರತಿಭಟನೆ

    ಹಾಸನದಲ್ಲಿ ಕಾಡಾನೆಗಳ ಹಾವಳಿ: ಆರ್‍ಎಫ್‍ಓ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಪ್ರತಿಭಟನೆ

    ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಹಾವಳಿ ತಡೆಯೋಕೆ ಅರಣ್ಯಾಧಿಕಾರಿಗಳಿಗೂ ಆಗುತ್ತಿಲ್ಲ. ಹೀಗಾಗಿ ಆನೆಗಳಿಂದ ತೊಂದರೆಗೊಳಗಾದ ಗ್ರಾಮಸ್ಥರು ಆರ್‍ಎಫ್‍ಓ ಹಾಗೂ ಸಿಬ್ಬಂದಿಗೆ ಅಹೋರಾತ್ರಿ ದಿಗ್ಬಂಧನ ಹಾಕಿ ಪ್ರತಿಭಟಿಸಿದ್ದಾರೆ.

    ಹಾಸನ ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಕಾಟ ಮುಂದುವರೆದಿದೆ. ಆಲೂರು ತಾಲೂಕು ಹೈದೂರು, ಕಾಡ್ಲೂರು ಸುತ್ತಮುತ್ತ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಭತ್ತ, ಬಾಳೆ, ಕಾಫಿ, ಮೆಣಸು ಸೇರಿದಂತೆ ಲಕ್ಷಾಂತರ ಪ್ರಮಾಣದ ಬೆಳೆ ಹಾನಿ ಮಾಡಿವೆ. ಇದರಿಂದ ರೋಸಿ ಹೋಗಿದ್ದ ಹೈದೂರು, ಕಾಡ್ಲೂರು ಗ್ರಾಮಗಳ ಸಂತ್ರಸ್ತರು ಕಳೆದ ರಾತ್ರಿ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಲೂರು ಆರ್‍ಎಫ್‍ಓ ಹೇಮಂತ್ ಹಾಗೂ ಸಿಬ್ಬಂದಿಯನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪ್ರತಿಭಟಿಸಿದ್ದಾರೆ.

    ಸುದ್ದಿ ತಿಳಿಯುತ್ತಿದ್ದಂತೆಯೇ ಡಿಎಫ್‍ಓ ಮಂಜುನಾಥ್, ಸ್ಥಳೀಯ ಶಾಸಕ ಹೆಚ್‍ಕೆ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೈತರು ಬೆಳೆನಷ್ಟ, ಸಾವು ನೋವು ಆದಾಗ ಮಾತ್ರ ಬರುತ್ತೀರಿ ಎಂದು ತಮ್ಮ ಆಕ್ರೋಶ ಹೊರ ಹಾಕಿದರು. ಆದರೆ ಶಾಸಕರು ಹಾಗೂ ಅಧಿಕಾರಿಗಳು ಆನೆ ಹಿಡೀತಿವಿ. ಬೆಳೆ ಪರಿಹಾರ ಕೊಡಿಸ್ತೀವಿ ಅಂತಾ ಜನರನ್ನು ಸಮಾಧಾನ ಮಾಡಿದರು.

  • ಶಾಸಕರ ಸೀರೆ ಬೇಡ: ಕೊಪ್ಪಳದಲ್ಲಿ ಮಹಿಳೆಯರಿಂದ ಸೀರೆ ವಾಪಸ್ ಚಳುವಳಿ

    ಶಾಸಕರ ಸೀರೆ ಬೇಡ: ಕೊಪ್ಪಳದಲ್ಲಿ ಮಹಿಳೆಯರಿಂದ ಸೀರೆ ವಾಪಸ್ ಚಳುವಳಿ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಎರಡು ತಾಲೂಕು ಘೋಷಣೆಯಾಗಿದ್ದು, ಹೋಬಳಿ ಹಂಚಿಕೆ ತಲೆ ನೋವಾಗಿದೆ. ರೈಸ್ ಟೆಕ್ನಾಲಜಿ ಪಾರ್ಕ್ ಹೊಂದಿರುವ ನವಲಿ ಕನಕಗಿರಿ ತಾಲೂಕಿನಲ್ಲೇ ಉಳಿಸಬೇಕು ಎಂಬ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.

    ನವಲಿ ಘೋಷಿತ ಕಾರಟಗಿ ತಾಲೂಕಿಗೆ ಸೇರಿಸಲು ಶಾಸಕ ಶಿವರಾಜ ತಂಗಡಗಿ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಕನಕಗಿರಿ ಮಹಿಳೆಯರು ಇದೀಗ ಸೀರೆ ವಾಪಸ್ ಚಳುವಳಿ ಆರಂಭಿಸಿದ್ದಾರೆ.

    ಕಳೆದ ಕೆಲ ತಿಂಗಳ ಹಿಂದೆ ಶಾಸಕ ಶಿವರಾಜ ತಂಗಡಗಿ ಮಹಿಳಾ ದಿನಾಚರಣೆ ನೆಪದಲ್ಲಿ ಕನಕಗಿರಿ ಕ್ಷೇತ್ರದ ಎಲ್ಲ ಮಹಿಳೆಯರಿಗೂ ಸೀರೆಯನ್ನು ಹಂಚಿದ್ದರು. ಶಾಸಕರ ಈ ನಡೆ ರಾಜಕೀಯ ಗಿಮಿಕ್ ಎಂದೇ ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಇದೀಗ ಶಾಸಕ ಶಿವರಾಜ ತಂಗಡಗಿ ಕಾರಟಗಿ ಭಾಗಕ್ಕೆ ನಿಷ್ಠೆ ತೋರಿಸುತ್ತಿದ್ದು, ಕನಕಗಿರಿ ನಿರ್ಲಕ್ಷ ಮಾಡಿದ್ದಾರೆ. ತಾವು ಕಾರಟಗಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದರಿಂದ ಕನಕಗಿರಿ ವಿಧಾನಸಭೆ ಕ್ಷೇತ್ರವನ್ನೂ ತೆಗೆದು ಕಾರಟಗಿ ಕ್ಷೇತ್ರ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿ ಕನಕಗಿರಿ ತಾಲೂಕು ಹೋರಾಟ ಸಮಿತಿ ಹೋರಾಟ ತೀವ್ರಗೊಳಿಸಿದೆ.

    ಹೋರಾಟದ ಭಾಗವಾಗಿ ಕನಕಗಿರಿ ಮಹಿಳೆಯರು ಶಾಸಕ ಶಿವರಾಜ ತಂಗಡಗಿ ಕೊಟ್ಟಿರುವ ಸೀರೆಗಳನ್ನು ವಾಪಸ್ ಕಳುಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಶಾಸಕರ ವಿರುದ್ಧ ಕಮೆಂಟ್ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

    ಫೇಸ್‍ಬುಕ್‍ನಲ್ಲಿ ಶಾಸಕರ ವಿರುದ್ಧ ಕಮೆಂಟ್ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

    ರಾಯಚೂರು: ಹದಗೆಟ್ಟ ರಸ್ತೆಯ ಬಗ್ಗೆ ಫೇಸ್ ಬುಕ್‍ನಲ್ಲಿ ಬೆಳಕು ಚೆಲ್ಲಿದ್ದಕ್ಕೆ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ಬೆಂಬಲಿಗರು ಹಾಗೂ ಪೊಲೀಸರು ಯುವಕರೊಬ್ಬರಿಗೆ ಥಳಿಸಿರುವ ಘಟನೆ ಸಿಂಧನೂರಿನಲ್ಲಿ ನಡೆದಿದೆ.

    ದುರಂತ ಅಂದರೆ ತಮ್ಮ ಬೆಂಬಲಿಗರ ಕೃತ್ಯವನ್ನು ಶಾಸಕ ಪ್ರತಾಪ್ ಗೌಡ ಸಮರ್ಥಿಸಿಕೊಂಡಿದ್ದಾರೆ. ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಬೆಂಬಲಿಗರು ಆಕ್ರೋಶಗೊಂಡು ಥಳಿಸಿರಬಹುದು ಅಂತ ಪ್ರತಾಪ್ ಗೌಡ ಹೇಳಿದ್ದಾರೆ.

    ಸಿಂಧನೂರು ತಾಲೂಕಿನ ಮಸ್ಕಿ ವಿಧಾನಸಭಾ ಕ್ಷೇತ್ರದ ಕೋಳಬಾಳ ಗ್ರಾಮದ ಹದಗೆಟ್ಟ ರಸ್ತೆ ಕುರಿತು ಸೆಪ್ಟಂಬರ್ 10 ರಂದು ಪಬ್ಲಿಕ್ ಟಿವಿ ಸಹ ವರದಿ ಪ್ರಸಾರ ಮಾಡಿತ್ತು. ಇದೇ ರಸ್ತೆಯ ಕುರಿತು ಹಂಚಿನಾಳ ಗ್ರಾಮದ ಯುವಕ ಶರಣಬಸವ ನಾಯಕ್ ತಮ್ಮ ಫೇಸ್ ಬುಕ್ ಅಕೌಂಟನಲ್ಲಿ ರಸ್ತೆ ಫೋಟೋ ಸಹಿತ ಬರೆದುಕೊಂಡಿದ್ದರು. ಶರಣಬಸವರ ಈ ಪೋಸ್ಟ್ ಗೆ ಬಸವರಾಜ್ ಎಂಬವರು ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಶಾಸಕರ ಬೆಂಬಲಿಕರು ಥಳಿಸಿದ್ದಾರೆ.

    ಸಿಂಧನೂರು ಡಿವೈಎಸ್‍ಪಿ ಶ್ರೀಧರ್ ಮಾಳಗೇರ್ ಹಾಗೂ ಸಿಪಿಐ ನಾಗರಾಜ್ ಕಮ್ಮಾರ್ ಶಾಸಕರ ಬೆಂಬಲಿಗರ ಮೌಖಿಕ ದೂರಿನ ಮೇರೆಗೆ ಶರಣಬಸವನನ್ನು ಸಿಂಧನೂರು ವೃತ್ತ ನೀರಿಕ್ಷಕರ ಕಚೇರಿಗೆ ಕರೆಯಿಸಿ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಶರಣಬಸವ ಶಾಸಕರ ಸಂಬಂಧಿ ಡಿವೈಎಸ್‍ಪಿ ಹಾಗೂ ಸಿಪಿಐ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಶರಣಬಸವ ನಾಯಕ್ ಚಿಕಿತ್ಸೆ ಪಡೆಯುತ್ತಿದ್ದಾರೆ.