Tag: minister

  • `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

    `ಟಾರ್ಗೆಟ್’ ಇಲಿಯಾಸ್ ಕೊಲೆ ಬಗ್ಗೆ ಸಚಿವ ಖಾದರ್ ಹೀಗಂದ್ರು

    ಧಾರವಾಡ: ಯಾವುದೇ ಹತ್ಯೆಯಾದಾಗ ನಾವು ಆ ವ್ಯಕ್ತಿಯ ಹಿನ್ನೆಲೆಗಳನ್ನು ಅರಿಯಬೇಕು. ಇಲಿಯಾಸ್ ಕಾಂಗ್ರೆಸ್ ಕಾರ್ಯಕರ್ತ ಆಗಿದ್ದ. ನಮಗೆ ಎಲ್ಲರೂ ಕೂಡ ಸಹಚರರೇ. ಆದ್ರೆ ಯಾರೇ ತಪ್ಪು ಮಾಡಿದ್ರು ನಾವು ಸಹಿಸೊಲ್ಲ ಅಂತ ಸಚಿವ ಯುಟಿ ಖಾದರ್ ಹೇಳಿದ್ದಾರೆ.

    ಮಂಗಳೂರಿನಲ್ಲಿ ಟಾರ್ಗೆಟ್ ಗ್ರೂಪ್ ರೂವಾರಿ, ಕಾಂಗ್ರೆಸ್ ಕಾರ್ಯಕರ್ತ ಇಲಿಯಾಸ್ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಾರ್ಗೆಟ್ ಗ್ರೂಪ್ ಏನು ಮಾಡ್ತಾ ಇತ್ತು ಅನ್ನೋದರ ಬಗ್ಗೆ ತನಿಖೆಯಾಗಬೇಕಿದೆ. ಯಾರೆಲ್ಲ ಕೊಲೆಯಲ್ಲಿ ಭಾಗಿಯಾಗ್ತಾರೆ? ಅಶಾಂತಿ ಸೃಷ್ಟಿಸ್ತಾರೆ? ಅವೆಲ್ಲ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ. ಅಂತಹ ಸಂಘಟನೆಗಳು ಕೇಂದ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತವೆ. ಹೀಗಾಗಿ ಕೇಂದ್ರ ಸರ್ಕಾರವೇ ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅಂತ ಹೇಳಿದ್ರು. ಇದನ್ನೂ ಓದಿ: ಸಚಿವ ಖಾದರ್ ಜೊತೆ ಕಾಣಿಸಿಕೊಂಡಿದ್ದ ಇಲಿಯಾಸ್ ನ ಬರ್ಬರ ಹತ್ಯೆ

    ಕೆಲ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಕೇಳುವ ಬಿಜೆಪಿಯವರು ತಮ್ಮದೇ ಕೇಂದ್ರ ಸರ್ಕಾರದ ಮೂಲಕ ಬ್ಯಾನ್ ಮಾಡಿಸಲಿ. ರಾಜ್ಯ ಸರ್ಕಾರ ನಮ್ಮ ರಾಜ್ಯದಲ್ಲಿ ಬ್ಯಾನ್ ಮಾಡಿದ್ರೆ ಅವರು ಬೇರೆ ಬೇರೆ ರಾಜ್ಯದಲ್ಲಿ ಕುಳಿತು ಕಾರ್ಯನಿರ್ವಹಿಸಬಹುದು. ಹಾಗಾಗಿ ಅಂತಹ ಸಂಘಟನೆಗಳನ್ನು ಕೇಂದ್ರ ಸರ್ಕಾರವೇ ಗುರುತಿಸಬೇಕು. ಮಂಗಳೂರಿನಲ್ಲಿ ಕೆಲ ಹತ್ಯೆಗಳಾದಾಗ ಅದನ್ನು ಇನ್ನಷ್ಟು ಗೊಂದಲ ಮಾಡಿ ದಂಗೆ ಎಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸರಿಗೆ ತನಿಖೆ ಮಾಡಲು ಬಿಡದಂತೆ ಗಲಾಟೆಗಳನ್ನು ಸೃಷ್ಟಿಸುತ್ತಾ ಇದ್ದಾರೆ ಅಂದ್ರು. ಇದನ್ನೂ ಓದಿ: ಯುಟಿ ಖಾದರ್ ಜೊತೆ ದೀಪಕ್ ಹತ್ಯೆಯ ಆರೋಪಿ ಕುಳಿತಿರುವ ಫೋಟೋ ವೈರಲ್

    ಮಂಗಳೂರಿನಲ್ಲಿ ಕೆಲವರು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ರೂ ಮಂಗಳೂರು ಜನ ಸಹಬಾಳ್ವೆ ಬಿಡಲಿಲ್ಲ. ದೀಪಕ್ ಹತ್ಯೆ ಮಾಡಿದವರು ಸುಪಾರಿ ಕಿಲ್ಲರ್ ಅಂತ ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಕುರಿತು ಪೊಲೀಸರೇ ಹೆಚ್ಚಿನ ತನಿಖೆ ಮಾಡಬೇಕು. ಬಿಜೆಪಿಯವರು ಒಬ್ಬೊಬ್ಬರೂ ಒಂದೊಂದು ಕಡೆ ಬೆಂಕಿ ಹಾಕುತ್ತೀವಿ ಅಂತ ಹೇಳಿಕೊಳ್ತಾ ಹೋಗುತ್ತಿದ್ದಾರೆ. ಒಬ್ಬರು ಮೈಸೂರು, ಇನ್ನೊಬ್ಬರು ಮಂಗಳೂರು, ಮತ್ತೊಬ್ಬರು ಇನ್ನೆಲ್ಲೋ ಬೆಂಕಿ ಹಾಕುತ್ತೇವೆ ಅಂದ್ರೆ ರಾಜ್ಯಾಧ್ಯಕ್ಷರು ಇಡೀ ರಾಜ್ಯಕ್ಕೆ ಬೆಂಕಿ ಹಾಕ್ತೇನೆ ಅಂತ ಹೊರಟಿದ್ದಾರೆ ಅಂದ್ರು.

  • 10 ಕೋಟಿ ರೂ. ಕೊಡು, ಇಲ್ಲಾಂದ್ರೆ ಸಾಯಿಸ್ತೀವಿ – ಸಚಿವ ತನ್ವೀರ್ ಸೇಠ್‍ಗೆ ಭೂಗತ ಬೆದರಿಕೆ

    10 ಕೋಟಿ ರೂ. ಕೊಡು, ಇಲ್ಲಾಂದ್ರೆ ಸಾಯಿಸ್ತೀವಿ – ಸಚಿವ ತನ್ವೀರ್ ಸೇಠ್‍ಗೆ ಭೂಗತ ಬೆದರಿಕೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರದ ಸಚಿವ ತನ್ವೀರ್ ಸೇಠ್ ಅವರಿಗೆ ಭೂಗತ ಪಾತಕಿಯಿಂದ ಬೆದರಿಕೆ ಸಂದೇಶ ಬಂದಿದೆ.

    10 ಕೋಟಿ ರೂಪಾಯಿ ಕೊಡು, ಇಲ್ಲಾಂದ್ರೆ ಗುಂಡಿಟ್ಟು ಸಾಯಿಸ್ತೀವಿ ಅಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್‍ಗೆ ಬೆದರಿಕೆ ಬಂದಿದೆ. ನಾನು ಕಿಶೋರ್ ಪೂಜಾರಿ, ಆರ್‍ಪಿ ಗ್ರೂಪಿನವನು. 10 ಕೋಟಿ ರೂ. ಕೊಡಬೇಕು. ಇಲ್ಲವಾದ್ರೆ ಗುಂಡಿಟ್ಟು ಸಾಯಿಸ್ತೀವಿ ಎಂದು ಬೆದರಿಕೆ ಹಾಕಲಾಗಿದೆ.

     

    ಈ ಬಗ್ಗೆ ಸಚಿವ ಸೇಠ್ ಕೊಟ್ಟಿರುವ ದೂರು ಇದೀಗ ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆ ಆಗಿದೆ. ಇಂಟರ್‍ನ್ಯಾಷನಲ್ ನಂಬರ್‍ನಿಂದ ಬೆದರಿಕೆ ಬಂದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ

    ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ

    ತುಮಕೂರು: ಜನರು ಬೇಕಾದರೆ ಪೊರಕೆ ಏಟು ನೀಡಲಿ, ಅವರು ಯಾವಾಗ ಬೇಕಾದರೂ ಹೊಡೆಯಲಿ ನಾನು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಚನ್ನಪಟ್ಟಣವನ್ನು ನಾನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಬುಧವಾರ ಡಿಕೆ ಶಿವ ಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟೀಕಿಸಿ ಯೋಗೇಶ್ವರ್, ಮಹಿಳೆಯಿಂದ ಪೊರಕೆಯಲ್ಲಿ ಡಿಕೆಶಿಗೆ ಹೊಡೆಸುತ್ತೇನೆ ಎಂದು ಹೇಳಿದ್ದಕ್ಕೆ ಸಚಿವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.

    ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದ ಒಂದು ಹೋಬಳಿಯ ಜನತೆ ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಹಾಗಾಗಿ ಅಲ್ಲಿಯ ಜನರ ನಡುವೆ ಉತ್ತಮ ಬಾಂಧವ್ಯವಿದೆ. ಅದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧವಾಗಿದ್ದು, ಮದುವೆ ಎಂದರೇ ರಾಜಕೀಯ ಮದುವೆ ಅವರ ಹಾಗೇ ಮದುವೆಯಲ್ಲ. ನನ್ನದು ರಾಜಕೀಯ ಬದ್ಧತೆ. ಜನರು ಬೇಕಾದರೆ ಪೊರಕೆ ಏಟು ನೀಡಲಿ ನಾನು ತಿನ್ನುತ್ತೇನೆ, ಅವರು ಯಾವಾಗ ಬೇಕಾದರೂ ಹೊಡೆಯಲಿ ಎಂದು ಹೇಳಿದರು.

    ಡಿಕೆಶಿ ವಿರುದ್ಧ ಸಾಮಾನ್ಯ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸಿ ತರುತ್ತೇನೆ ಎಂಬ ಸಿಪಿ ಯೋಗೇಶ್ವರ್ ಮಾತಿಗೆ ಸಿಡಿಮಿಡಿಕೊಂಡ ಅವರು, ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಮೊದಲು ಗೆಲ್ಲಲಿ. ಬಳಿಕ ನನ್ನ ವಿರುದ್ಧ ಸಾಮಾನ್ಯರನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಮಹಿಳೆಯಿಂದ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ- ಡಿಕೆಶಿ ವಿರುದ್ಧ ಶಾಸಕ ಯೋಗೇಶ್ವರ್ ವಾಗ್ದಾಳಿ

    ದಲಿತರ ಹತ್ಯೆ ಕುರಿತ ಸಿಪಿ ಯೋಗೇಶ್ವರ್ ಆರೋಪಕ್ಕೆ ಕಿಡಿಕಾರಿದ ಸಚಿವರು, ದಲಿತರ ಹತ್ಯೆ ಮಾಡಿದ್ದಾರೆ ಎನ್ನುವುದಕ್ಕೆ ಅವರು ಸಾಕ್ಷ್ಯ ತೋರಿಸಲಿ, ಬೇಕಾದರೆ ಕೇಸ್ ಹಾಕಲಿ. ಏಕವಚನದಲ್ಲಿ ಮಾತನಾಡುವುದು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಅವರು ಸಿನಿಮಾ ನಟರು, ನಮ್ಮ ಯೋಗೀಶಣ್ಣ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ

     

  • ಉಡುಪಿಯಲ್ಲಿ ಶುರುವಾಯ್ತು ಹೆಲಿ ಟೂರಿಸಂ: 1 ಟಿಕೆಟ್ ಬೆಲೆ ಎಷ್ಟು ಗೊತ್ತೆ?

    ಉಡುಪಿಯಲ್ಲಿ ಶುರುವಾಯ್ತು ಹೆಲಿ ಟೂರಿಸಂ: 1 ಟಿಕೆಟ್ ಬೆಲೆ ಎಷ್ಟು ಗೊತ್ತೆ?

    ಉಡುಪಿ: ಧಾರ್ಮಿಕ ಪ್ರವಾಸೋದ್ಯಮದಲ್ಲಿ ಕರ್ನಾಟಕದ ಕರಾವಳಿಗೆ ಅಗ್ರಸ್ಥಾನವಿದೆ. ಪ್ರಮುಖ ಪ್ರವಾಸಿ ತಾಣಗಳು ಕೂಡಾ ಕರಾವಳಿಲ್ಲಿಯೇ ಇದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆದು ಲಾಭಗಳಿಸುವುದರಲ್ಲಿ ಉಡುಪಿ ಜಿಲ್ಲೆ ಹಿನ್ನಡೆ ಅನುಭವಿಸಿರುವ ಕಾರಣ ಕರಾವಳಿಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಉಡುಪಿಯಲ್ಲಿ ಹೆಲಿ ಟೂರಿಸಂ ಆರಂಭವಾಗಿದೆ.

    ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಮಹತ್ವಕಾಂಕ್ಷಿ ದೃಷ್ಟಿಯಿಂದ ಯೋಜನೆಯನ್ನು ಆರಂಭಿಸಿದ್ದು, 2500 ರೂ. ಪಾವತಿಸಿ 6 ಮತ್ತು 8 ನಿಮಿಷದ ಎರಡು ಪ್ಯಾಕೇಜ್ ಮೂಲಕ ಆಕಾಶ ಮಾರ್ಗವಾಗಿ ಉಡುಪಿಯ ಪ್ರಾಕೃತಿಕ ಸೌಂದರ್ಯವನ್ನು ಹೆಲಿಕಾಪ್ಟರ್ ನಲ್ಲಿ ಸವಿಯಬಹುದು.

    ಅದರಲ್ಲೂ ಸಮುದ್ರದ ಮೇಲೆ ಕಾಪ್ಟರ್ ಹಾರುವ ದೃಶ್ಯವಂತೂ ನಿಜಕ್ಕೂ ರೋಮಾಂಚನ ಎನಿಸುತ್ತದೆ. ನದಿ, ಸಮುದ್ರ, ಬೆಟ್ಟಗುಡ್ಡ, ಮಣಿಪಾಲದ ಗಗನಚುಂಬಿ ಕಟ್ಟಡಗಳನ್ನು ಮೇಲಿಂದ ನೋಡೋ ಅವಕಾಶ ಸಿಕ್ಕಿದೆ. ಉಡುಪಿಗೆ ಬರುವ ಜನರಿಗೆ ಸುಮಾರು 10 ದಿನಗಳ ಹೆಲಿಕಾಪ್ಟರ್ ಸೇವೆ ಲಭ್ಯವಿರಲಿದೆ.

    ಸಚಿವ ಪ್ರಮೋದ್ ಮಧ್ವರಾಜ್ ಪ್ರಥಮ ಬಾರಿಗೆ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ನೋಡಿದ ಅನುಭವ ಹಂಚಿಕೊಂಡರು. ಅತ್ಯಂತ ಸುಂದರ ಉಡುಪಿಯನ್ನು ಹೆಲಿಕಾಪ್ಟರ್ ನಲ್ಲಿ ಸುತ್ತವ ಮೂಲಕ ಅವಕಾಶವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಉಡುಪಿಗೆ ಬರುವ ಜನರಿಗೆ ಹೆಲಿಕಾಪ್ಟರ್ ನಲ್ಲಿ ಹಾರುವ ಅವಕಾಶ ಸಿಕ್ಕಿದೆ.

  • ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ರಾಜಕಾರಣಿಗಳು ದೇವರ ಮನೆಗೆ ಹೋಲಿಕೆ ಇಲ್ಲ. ರಾಜಕಾರಣಿಗಳು ಬಚ್ಚಲು ಮನೆ ಇದ್ದಂತೆ ಎಂದು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರ ಹುಟ್ಟಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಟಾಟಾ ಇನ್ಸ್ ಟ್ಯೂಟ್ ಅಡಿಟೋರಿಯಂನಲ್ಲಿ ಮಲ್ಲೇಶ್ವರಂ ಶಾಸಕ ಡಾ.ಅಶ್ವಥ್ ನಾರಾಯಣ ನೇತೃತ್ವದಲ್ಲಿ ಗುಡ್ ಗರ್ವನರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು.

    ದೇವರ ಮನೆ ಒಂದು ದಿನ ಸ್ವಚ್ಛ ಮಾಡಿದರೂ ಪರವಾಗಿಲ್ಲ. ಆದರೆ ಬಚ್ಚಲು ಮನೆ ಕ್ಲೀನ್ ಮಾಡದೇ ಇದ್ರೆ ಏನಾಗುತ್ತೆ ಹೇಳಿ? ಹಾಗೇ ಇಂದಿನ ರಾಜಕಾರಣಿಗಳು ಆಗಿದ್ದಾರೆ. ನಮ್ಮ ಸರ್ಟಿಫಿಕೇಟ್‍ಗಳಿಂದ ಸಂಸ್ಕಾರ ಬಂದಿಲ್ಲ. ತಂದೆ-ತಾಯಿಗಳಿಂದ ನಮಗೆ ಸಂಸ್ಕಾರ ಬಂದಿದೆ ಎಂದು ಹೇಳಿದರು.

    ಒಳ್ಳೆಯ ಆಡಳಿತ ಹೇಗಿರಬೇಕು ಅಂತ ಹೇಳಿಕೊಟ್ಟವರು ವಾಜಪೇಯಿಯವರು. ಆರೋಗ್ಯ ಸರಿಯಿಲ್ಲದಿದ್ದರೂ ದೇಶ ಹೇಗೆ ನಡೆಯುತ್ತಿದೆ ಅಂತ ಕೇಳುತ್ತಿರುತ್ತಾರೆ. ಪ್ರಜಾಪ್ರಭುತ್ವದಲ್ಲಿ ಓಟು ಪಡೆದವರಿಗೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ಓಟ್ ಹಾಕಿದವನಿಗೂ ಇರುತ್ತದೆ ಎಂದರು.

    ಆಡಳಿತ ಅಂದ್ರೆ ಅದು ಮೋದಿಯವರ ಆಡಳಿತದಂತೆ ಇರಬೇಕು. ಇಡೀ ವಿಶ್ವವೇ ತಲೆಬಾಗುವ ಆಡಳಿತ ನೀಡುತ್ತಿರುವುದು ನರೇಂದ್ರ ಮೋದಿಯವರು. ಇವತ್ತು ಮೋದಿ ಬಗ್ಗಿದ್ರೆ ವಿಶ್ವದ ನಾಯಕರು ಬಗ್ಗುತ್ತಾರೆ. ಎದ್ರೆ ವಿಶ್ವದ ನಾಯಕರು ಏಳುತ್ತಾರೆ. ಯೋಗವನ್ನು ವಿಶ್ವಕ್ಕೆ ಹರಡಿಸಿದವರು ನರೇಂದ್ರ ಮೋದಿ. ಇದು ಉತ್ತಮ ಆಡಳಿತಕ್ಕೆ ಉದಾಹರಣೆ ಎಂದರು.

    ಪ್ರಧಾನಿ ಮೋದಿ ಟೀಕೆ ಮಾಡಿದವರಿಗೆ ಹೆಗ್ಡೆ ಟಾಂಗ್ ಕೊಟ್ಟ ಸಚಿವರು, ಪ್ರತಿಯೊಂದಕ್ಕೂ ಇಂದಿನ ಪ್ರಧಾನಿ ಲೆಕ್ಕ ನೀಡುತ್ತಿದ್ದಾರೆ. ಹಿಂದಿನ ಸರ್ಕಾರಗಳು ಯಾವತ್ತಾದ್ರು ಲೆಕ್ಕ ಕೊಟ್ಟಿದ್ದವಾ? ಜನರ ಪ್ರತಿಯೊಂದು ಹಣಕ್ಕೂ ಮೋದಿಯವರು ಲೆಕ್ಕ ಕೊಡುತ್ತಿದ್ದಾರೆ. ಗ್ಯಾಸ್ ಸಬ್ಸಿಡಿ ಹಣದಿಂದ ಹಳ್ಳಿ ಬಡವರಿಗೆ ಗ್ಯಾಸ್ ನೀಡುತ್ತಿದ್ದಾರೆ. ಪ್ರತಿಯೊಂದಕ್ಕೂ ಲೆಕ್ಕ ನೀಡುತ್ತಿರೋರು ಮೋದಿ. ನಮ್ಮದು ಏನಿದ್ರು ಮಾಡು ಇಲ್ಲವೇ ಮಡಿ ಸಿದ್ಧಾಂತ ಎಂದರು.

    ಅಭಿವೃದ್ಧಿ ಮಾಡಬೇಕು ಎಂದು ಹೇಳುತ್ತೇವೆ. ಆದರೆ ಹೇಗೆ ಅಭಿವೃದ್ಧಿ ಮಾಡಬೇಕು ಎನ್ನುವುದು ಗೊತ್ತಿಲ್ಲ. ಸೋಗಲಾಡಿ ವಿಷಯಗಳನ್ನು ಇಟ್ಟುಕೊಂಡು ಇಂದು ಚರ್ಚೆ ಮಾಡಲಾಗುತ್ತಿದೆ. ದುಡ್ಡು-ಜಾತಿ ನೋಡಿ ಇವತ್ತು ಓಟ್ ನೀಡುತ್ತಿದ್ದಾರೆ. ಸರ್ಕಾರ ಕಾಮಗಾರಿಗಳನ್ನು ಕೊಡುವುದೇ ಅಭಿವೃದ್ಧಿ ಅಂದುಕೊಂಡವರು 100ಕ್ಕೆ 99 ಜನ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಅಪ್ಪ-ಅಮ್ಮನ ಗುರುತು ಇಲ್ಲದೇ ಇರೋ ರಕ್ತವನ್ನು ಹೊಂದಿರುವವರು ಜಾತ್ಯತೀತರು: ಅನಂತಕುಮಾರ ಹೆಗ್ಡೆ

    ಕಾಮಗಾರಿಗಳನ್ನು ಇಟ್ಟುಕೊಂಡು ಚರ್ಚೆ ಮಾಡುವವರು ವಿಚಾರವಾದಿಗಳು. ಜಾತಿ, ದುಡ್ಡಿನ ಹೆಸರು ಹೇಳಿಕೊಂಡು ಗೆದ್ದು ಬಂದವರು ನಿಮ್ಮನ್ನ ಅಭಿವೃದ್ಧಿ ಮಾಡ್ತಾರೆ ಎನ್ನುವುದು ನಿಮ್ಮ ಮೂರ್ಖತನ. ಜಾತಿ, ಧರ್ಮ, ಹಣ ಬಿಟ್ಟು ಆಡಳಿತ ನಡೆಸುವವನು ನಿಜವಾಗಿ ಉತ್ತಮ ಆಡಳಿತ ನೀಡುತ್ತಾನೆ. ಈ ಕೆಲಸವನ್ನ ನರೇಂದ್ರ ಮೋದಿ ಮಾಡ್ತಿದ್ದಾರೆ. ಇಡೀ ವಿಶ್ವ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಗೌರವ ನೀಡುತ್ತಿದೆ ಎಂದು ಹೇಳಿದರು.

    ನನಗೆ ಪ್ರಧಾನಿಯವರು ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ನೀಡಿದ್ದಾರೆ. ಈ ಹೊಣೆ ನೀಡುವ ವೇಳೆ ನನಗೆ ಈ ಇಲಾಖೆ ಬಗ್ಗೆ ಗೊತ್ತಿರಲಿಲ್ಲ. ಆದರೆ ಜವಾಬ್ದಾರಿ ಸಿಕ್ಕಿದ ಮೇಲೆ ತಿಳಿದುಕೊಳ್ಳುತ್ತಾ ಹೋದಾಗ ನನಗೆ ನೀಡಿರುವ ಕೌಶಲ್ಯಾಭಿವೃದ್ಧಿ ಇಲಾಖೆ ನೀರಿಲ್ಲದ ಬಾವಿ ಇದ್ದ ಹಾಗೆ ಎನ್ನುವುದು ಅರಿವಿಗೆ ಬಂತು. ನಮ್ಮ ಯುವಕರು ಸರ್ಟಿಫಿಕೇಟ್ ಮಾತ್ರ ಸಂಪಾದಿಸುತ್ತಾರೆ. ಆದರೆ ಅದಕ್ಕೆ ತಕ್ಕ ಯೋಗ್ಯತೆಗಳು ಅವರಲ್ಲಿ ಇಲ್ಲ. ಶ್ರಮ ಇಲ್ಲದೇ ಇಂದಿನ ಯುವಕರು ದೊಡ್ಡ ಕನಸು ಕಾಣುತ್ತಿದ್ದಾರೆ. ಬದುಕಿನಲ್ಲಿ ಯಶಸ್ವಿಯಾದವರ ಬದುಕಿನ ಹಿಂದೆ ಪರಿಶ್ರಮ ಇರುತ್ತದೆ. ಬೆವರನ್ನು ಚೆಲ್ಲದೇ ಸಾಧನೆ ಸಾಧ್ಯವಿಲ್ಲ. ಬದುಕು ಲಾಟರಿ ಟಿಕೆಟ್ ಅಲ್ಲ. ಪರಿಶ್ರಮ ಇಲ್ಲದೆ ಬದುಕು ಕಟ್ಟಲು ಸಾಧ್ಯವಿಲ್ಲ. ಈ ಸ್ವಭಾವ ಯುವ ಜನತೆಯಲ್ಲಿ ಇಲ್ಲ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ದೇಶದ ಬದಲಾವಣೆ ಪ್ರಾರಂಭವಾಗಿದೆ. 120 ಕೋಟಿ ಜನರ ಬದಲಾವಣೆ ದಿಢೀರ್ ಅಂತ ಸಾಧ್ಯವಿಲ್ಲ. ದಿನಕ್ಕೆ 18 ಗಂಟೆ ಕೆಲಸ ಮಾಡುವ ಪ್ರಧಾನಿಗಳು ಸಿಕ್ಕಿರೋದು ನಮ್ಮ ಪುಣ್ಯ ಎಂದು ಹೇಳಿ ಮೋದಿ ಕಾರ್ಯವನ್ನು ಹೊಗಳಿದರು.

    ಪ್ರತಿಕ್ರಿಯೆ ನೀಡಲ್ಲ: ಅನಂತ್ ಕುಮಾರ್ ಹೆಗ್ಡೆ ನಾಲಾಯಕ್ ಮಂತ್ರಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ಕೇಳಲು ಮುಂದಾದಾಗ, ನಾನು ಯಾವುದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಭಾಷಣ ಮುಗಿದ ಕೂಡಲೇ ಅವರು ತೆರಳಿದರು.

  • ಆರ್ ಟಿಒ ನಿಯಮ ಉಲ್ಲಂಘಿಸಿದ ಸಚಿವ ತನ್ವೀರ್ ಸೇಠ್!

    ಆರ್ ಟಿಒ ನಿಯಮ ಉಲ್ಲಂಘಿಸಿದ ಸಚಿವ ತನ್ವೀರ್ ಸೇಠ್!

    ರಾಯಚೂರು: ಸರ್ಕಾರಿ ನಿಯಮಗಳನ್ನ ಜಾರಿಯಲ್ಲಿಡಬೇಕಾದ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳೇ ನಿಯಮಗಳನ್ನ ಉಲ್ಲಂಘನೆ ಮಾಡಿದ್ರೆ ಸಾರ್ವಜನಿಕರು ಹೇಗೆ ತಾನೆ ಪಾಲನೆ ಮಾಡುತ್ತಾರೆ? ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಆರ್ ಟಿ ಒ ನಿಯಮಗಳನ್ನ ಉಲ್ಲಂಘಿಸಿದ್ದಾರೆ.

    ಸಚಿವ ತನ್ವೀರ್ ಸೇಠ್ ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ಫ್ಯಾನ್ಸಿ ಸಂಖ್ಯೆಯನ್ನು ಬರೆಸಿದ್ದಾರೆ. ಅವರ ಸರ್ಕಾರಿ ಕಾರಿನ ಸಂಖ್ಯೆ ಕೆ.ಎ52 ಜಿಎ0009 ಇದ್ದು, ಸೊನ್ನೆಗಳನ್ನ ಚಿಕ್ಕದಾಗಿ ಬರೆದು 9 ಸಂಖ್ಯೆಯನ್ನ ದೊಡ್ಡದಾಗಿ ಬರೆಸಿದ್ದಾರೆ.

    ಆರ್ ಟಿ ಒ ನಿಯಮದ ಪ್ರಕಾರ ಎಲ್ಲಾ ಅಂಕಿಗಳು ಸಮಾನ ಗಾತ್ರದಲ್ಲಿ ಒಂದೇ ಆಕಾರದಲ್ಲಿ ಇರಬೇಕು. ಕನ್ನಡದಲ್ಲಿ ಬರೆದ ಸಂಖ್ಯೆಗಳು ಸರಿಯಾಗಿದ್ದು, ಇಂಗ್ಲೀಷ್ ನಲ್ಲಿ ಬರೆದ ಸಂಖ್ಯೆಗಳಲ್ಲಿ ವ್ಯತ್ಯಾಸ ಮಾಡಿದ್ದಾರೆ. ಸಾರ್ವಜನಿಕರು ಈ ರೀತಿ ನಂಬರ್ ಪ್ಲೇಟ್ ಬರೆಸಿದರೆ ಆರ್ ಟಿ ಒ ಹಾಗೂ ಸಂಚಾರಿ ಪೊಲೀಸರು ಡಿಫೆಕ್ಟೀವ್ ನೇಮ್ ಪ್ಲೇಟ್ ಅಂತ 100 ರೂಪಾಯಿ ದಂಡ ಹಾಕ್ತಾರೆ. ಆದ್ರೆ ಇದೀಗ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಏನ್ ಮಾಡ್ತಾರೋ ನೋಡಬೇಕಿದೆ.

  • ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆಯಾ: ಹೆಗಡೆಗೆ ಪ್ರಮೋದ್ ಮಧ್ವರಾಜ್ ತಿರುಗೇಟು

    ಉಡುಪಿ: ಮುಂದಿದೆ ಮಾರಿಹಬ್ಬ ಎನ್ನುವ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಸ್ಟೇಟಸ್ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿರುಗೇಟು ಕೊಟ್ಟಿದ್ದಾರೆ.

    ಮಾರಿಹಬ್ಬ ಎನ್ನುವ ಮೂಲಕ ಬಲಿ ಪಡೆಯುವ ಸೂಚನೆಯಾ ಎಂದು ಪ್ರಶ್ನಿಸಿದ್ದಾರೆ. ಮುಂದಿನ ಚುನಾವಣೆ ಗೆಲುವಿಗಾಗಿ ಗಲಭೆ ಹಬ್ಬಿಸುವ ಯತ್ನ ನಡೆಯುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಎಲ್ಲರೂ ಹಿಂಸಾಚಾರ ನಡೆಸಲು ಮುಂದಾಗಿದ್ದಾರೆ. ಅಮಿತ್ ಶಾ ಅವರು ಪ್ರತಾಪ್ ಸಿಂಹನಿಗೆ ಗಲಾಟೆ ಮಾಡಲು ಹೇಳಿದ್ದರು. ಆ ವೀಡಿಯೋ ವೈರಲ್ ಆಗಿತ್ತು. ಶಾ ಸೂಚನೆಯಂತೆ ರಾಜ್ಯದಲ್ಲಿ ನಡೆಯುತ್ತಿದೆ, ಕೇಂದ್ರ ಸಚಿವನಾಗಿ ಹೆಗಡೆ ಈ ರೀತಿಯ ಹೇಳಿಕೆ ಸರಿಯಲ್ಲ ಇಂತವರ ಬಗ್ಗೆ ಜನತೆಯೇ ಸರಿಯಾದ ನಿರ್ಧಾರ ತಳೆಯುತ್ತಾರೆ ಎಂದರು. ಇದನ್ನೂ ಓದಿ: ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ಜಾಫರ್ ಷರೀಫ್ ಕಾಂಗ್ರೆಸ್ ಮನೆಯ ಹಿರಿಯ ಅಜ್ಜ. ಕಾಂಗ್ರೆಸ್ ಮುತ್ಸದ್ಧಿ ಜಾಫರ್ ಷರೀಫ್ ಅಸಮಾಧಾನ ಇರಬಹುದು. ಎಲ್ಲಾ ಮನೆಯಲ್ಲೂ ಅಜ್ಜಂದಿರು ಸ್ವಲ್ಪ ಚರಿಪಿರಿ ಮಾಡ್ತಾರೆ. ಪಕ್ಷದ ಹಿರಿಯ ನಾಯಕರು ಅಸಮಾಧಾನ ಶಮನ ಮಾಡುತ್ತಾರೆ ಅಂದರು.

    2018ರ ರಾಜ್ಯ ಚುನಾವಣೆಗೆ ಪ್ರಧಾನಿ ಮೋದಿ-ಅಮಿತ್ ಷಾ ಕರ್ನಾಟಕ ಕ್ಕೆ ಪ್ರಚಾರಕ್ಕೆ ಬರಲಿ. ಆದ್ರೆ ರಾಜ್ಯದಲ್ಲಿ ಗಲಭೆ ಎಬ್ಬಿಸುವುದು ಬೇಡ ಎಂದು ಮಾಧ್ಯಮಗಳ ಮೂಲಕ ಟಾಂಗ್ ಕೊಟ್ಟರು. ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರಿರುವಲ್ಲಿ ಯಾತ್ರೆ ಹೋಗ್ತಾರೆ. ವಿಪಕ್ಷದ ಶಾಸಕರು ಇರುವಲ್ಲಿ ಜನಾಶೀರ್ವಾದ ಕೇಳಲು ಅಧ್ಯಕ್ಷ ಜಿ. ಪರಮೇಶ್ವರ್ ಹೋಗುತ್ತಾರೆ ಎಂದು ಸ್ಪಷ್ಟನೆ ನೀಡಿದರು.

  • ಸಚಿವರ ಕಾಲು ಒತ್ತಿ ಮಸಾಜ್ ಮಾಡಿದ ಬಿಜೆಪಿ ಕಾರ್ಯಕರ್ತರು- ವಿಡಿಯೋ ವೈರಲ್

    ಸಚಿವರ ಕಾಲು ಒತ್ತಿ ಮಸಾಜ್ ಮಾಡಿದ ಬಿಜೆಪಿ ಕಾರ್ಯಕರ್ತರು- ವಿಡಿಯೋ ವೈರಲ್

    ಲಕ್ನೋ: ಅಲಹಾಬಾದ್‍ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಓಡಾಡಿ ಸುಸ್ತಾಗಿದ್ದ ಸಂಪುಟ ಸಚಿವರಿಗೆ ಬಿಜೆಪಿ ಕಾರ್ಯಕರ್ತರು ಕಾಲಿನ ಮಸಾಜ್ ಮಾಡಿದ್ದು, ಇದರ ವಿಡಯೋ ಇದೀಗ ವೈರಲ್ ಆಗಿದೆ.

    ಉತ್ತರಪ್ರದೇಶದ ಬಿಜೆಪಿ ಸಚಿವ ನಂದ ಗೋಪಾಲ್ ಗುಪ್ತಾ ಅವರಿಗೆ ಪಕ್ಷದ ಕಾರ್ಯಕರ್ತರು ಕಾಲು ಒತ್ತಿ ಮಸಾಜ್ ಮಾಡಿದ್ದಾರೆ. ಇದರ ವಿಡಿಯೋವನ್ನ ಸುದ್ಧಿ ಸಂಸ್ಥೆ ಪೋಸ್ಟ್ ಮಾಡಿದ್ದು ಸಾಕಷ್ಟು ಬಾರಿ ರೀಟ್ವೀಟ್ ಆಗಿದೆ.

    ಗುಪ್ತಾ ಅವರು ತಾವಾಗೇ ಕಾರ್ಯಕರ್ತರಿಗೆ ಕಾಲು ಒತ್ತುವಂತೆ ಕೇಳಿದರೋ ಅಥವಾ ಕಾರ್ಯಕರ್ತರೇ ಸ್ವಯಂಪ್ರೇರಿತರಾಗಿ ಸೇವೆ ಮಾಡಿದರೋ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದವರು ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

    ಇನ್ನೂ ಕೆಲವರು ಗುಪ್ತಾ ಅವರನ್ನ ಸಮರ್ಥಿಸಿಕೊಂಡಿದ್ದಾರೆ. ಅವರು ಲೋ ಬ್ಲಡ್ ಶುಗರ್‍ನಿಂದ ಬಳಲಿದ್ದಿರಬಹುದು. ಹೀಗಾಗಿ ಕಾರ್ಯಕರ್ತರು ಕೂಡಲೇ ಅದಕ್ಕೆ ಸ್ಪಂದಿಸಿರಬಹುದು ಎಂದು ಹೇಳಿದ್ದಾರೆ.

    https://twitter.com/TheLegendChap/status/930478739120709632?ref_src=twsrc%5Etfw&ref_url=https%3A%2F%2Ftimesofindia.indiatimes.com%2Findia%2Ftired-up-minister-gets-foot-massage-from-bjp-workers-video-goes-viral%2Farticleshow%2F61653386.cms

    https://twitter.com/MahadevBhardwaj/status/930460983813951491?ref_src=twsrc%5Etfw&ref_url=https%3A%2F%2Ftimesofindia.indiatimes.com%2Findia%2Ftired-up-minister-gets-foot-massage-from-bjp-workers-video-goes-viral%2Farticleshow%2F61653386.cms

  • ಜೆಡಿಎಸ್ ಬಂಡಾಯ ಶಾಸಕರು ಗೆಲ್ತಾರೋ? ಇಲ್ವೋ?: ವೈರಲ್ ಆಯ್ತು ರಾಮನಗರದ ಬೆಟ್ಟಿಂಗ್ ವಿಡಿಯೋ

    ಜೆಡಿಎಸ್ ಬಂಡಾಯ ಶಾಸಕರು ಗೆಲ್ತಾರೋ? ಇಲ್ವೋ?: ವೈರಲ್ ಆಯ್ತು ರಾಮನಗರದ ಬೆಟ್ಟಿಂಗ್ ವಿಡಿಯೋ

    ರಾಮನಗರ: ಈಗಿನಿಂದಲೇ ರಾಮನಗರ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಮನಗರ ಜಿಲ್ಲೆ ಮಾಗಡಿಯ ಖಾಸಗಿ ಡಾಬಾವೊಂದರಲ್ಲಿ ಬಂಡಾಯ ಶಾಸಕರ ಬಗ್ಗೆ ಬೆಟ್ಟಿಂಗ್ ನಡೆದಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಾಗಡಿ ಶಾಸಕ ಬಂಡಾಯ ಶಾಸಕ ಎಚ್.ಸಿ ಬಾಲಕೃಷ್ಣ ಬೆಂಬಲಿಗ ಶ್ರೀನಿವಾಸ್ ಮತ್ತು ಜೆಡಿಎಸ್ ಬೆಂಬಲಿಗ ಬೋರೇಗೌಡ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ.

    ಶ್ರೀನಿವಾಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 4 ಜೆಡಿಎಸ್ ಬಂಡಾಯ ಶಾಸಕರು ಗೆಲ್ಲುತ್ತಾರೆ ಎಂದು ಬೆಟ್ಟಿಂಗ್ ಕಟ್ಟಿದರೆ, ಬೋರೇಗೌಡ ಯಾವುದೇ ಕಾರಣಕ್ಕೂ ಬಂಡಾಯ ಶಾಸಕರು ಗೆಲ್ಲುವುದಿಲ್ಲ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ.

    ಇಬ್ಬರು ಸೇರಿ ತಲಾ 40 ಸಾವಿರ ಬೆಟ್ಟಿಂಗ್ ಕಟ್ಟಿಕೊಂಡಿದ್ದಾರೆ. ಅಲ್ಲದೇ ಮಾತುಕತೆ ನಡೆದು ಮಧ್ಯವರ್ತಿ ಒಬ್ಬರು ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವ ದೃಶ್ಯ ಸೆರೆಯಾಗಿದೆ. ಚುನಾವಣೆಗೆ ಇನ್ನೂ ಸಮಯವಿದ್ದರೂ ಈಗಲೇ ಬೆಟ್ಟಿಂಗ್ ಶುರುವಾಗಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

  • ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣ-ಸಚಿವ ಅನಂತ್ ಕುಮಾರ್ ಹೆಗಡೆ ಹೀಗಂದ್ರು

    ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಮುದ್ರಣ-ಸಚಿವ ಅನಂತ್ ಕುಮಾರ್ ಹೆಗಡೆ ಹೀಗಂದ್ರು

    ದಾವಣಗೆರೆ: ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಬೆಳಗಾಗಿ ಜಿಲ್ಲಾಡಳಿತ ವಿಶೇಷ ಅತಿಥಿಯಾಗಿ ಹೆಸರು ಮುದ್ರಿಸಿದ್ದಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

    ಜಿಲ್ಲೆಯ ಚನ್ನಗಿರಿಯಲ್ಲಿ ತುಮ್ಕೋಸ್ ಅಧ್ಯಕ್ಷರ ಅಭಿನಂದನಾ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಮನವಿ ಮಾಡಿದ್ದೆ. ಆದರೂ ಹಾಕಿದ್ದಾರೆ. ಕಾರ್ಯಕ್ರಮಕ್ಕೆ ಹೋಗುತ್ತೇನೋ, ಇಲ್ಲವೋ ಕಾದು ನೋಡಿ ಅಂತ ಹೇಳಿದ್ದಾರೆ.

    ಇದನ್ನೂ ಓದಿ:  ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ  

    ಸಂಸದ ಸುರೇಶ ಅಂಗಡಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮನವಿಯನ್ನು ಪರಿಗಣಿಸದೆ ಟಿಪ್ಪು ಜಯಂತಿಗೆ ವಿಶೇಷ ಆಮಂತ್ರಿತರು ಎಂದು ಬೆಳಗಾವಿ ಜಿಲ್ಲಾಡಳಿತ ಆಮಂತ್ರಣ ನೀಡಿದೆ. ಅಲ್ಲದೆ, ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಮುದ್ರಿಸಿದೆ ಎಂದು ಸಚಿವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹೆಗಡೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ.

    ಇದನ್ನೂ ಓದಿ: ಆಹ್ವಾನಪತ್ರಿಕೆಯಲ್ಲಿ ಹೆಸರು ಹಾಕ್ಸೋದು ಪ್ರೋಟೋಕಾಲ್, ಬರೋದು ಬಿಡೋದು ಸಚಿವರಿಗೆ ಬಿಟ್ಟಿದ್ದು- ಸಿಎಂ

    ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಟಿಪ್ಪು ಜಯಂತಿ ಆಮಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಅಂದ್ರೂ ಹಾಕಿದ್ದಾರೆ. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟಿಪ್ಪುವಿನ ಜನ್ಮ ಜಾಲಾಡುತ್ತೇನೆ ಅಂತ ಸಚಿವರು ಹೇಳಿದ್ದರು.